Homeಕರ್ನಾಟಕತಳಮಟ್ಟದ ವರದಿ ಎಂದರೆ ಕೊನೆ ನಿಮಿಷದಲ್ಲಿ ವಿಮಾನಗಳಲ್ಲಿ ಓಡಾಡಿ ಮಾಡುವ ಕಂಫರ್ಟ್ ಝೋನ್‌ನ ಕೆಲಸವಲ್ಲ -...

ತಳಮಟ್ಟದ ವರದಿ ಎಂದರೆ ಕೊನೆ ನಿಮಿಷದಲ್ಲಿ ವಿಮಾನಗಳಲ್ಲಿ ಓಡಾಡಿ ಮಾಡುವ ಕಂಫರ್ಟ್ ಝೋನ್‌ನ ಕೆಲಸವಲ್ಲ – ಪತ್ರಕರ್ತೆ ಪ್ರಿಯಾ ತವಸ್ಸೆರಿ

- Advertisement -
- Advertisement -

ತಳಮಟ್ಟದ ವರದಿ ಎಂಬುದು ಕೊನೆ ನಿಮಿಷದಲ್ಲಿ ವಿಮಾನಗಳಲ್ಲಿ ಓಡಾಡಿ ಕಾರ್‌ಗಳಲ್ಲಿ ತಿರುಗಾಡಿ ಮಾಡುವ ಕಂಫರ್ಟ್ ಝೋನ್‌ನ ಕೆಲಸವಲ್ಲ, ಚುನಾವಣಾ ವರದಿಗಳಂತಲ್ಲ ಎಂದು ಚಂಬಲ್ ಮೀಡಿಯಾದ ನಿರ್ದೇಶಕಿ ಪ್ರಿಯಾ ತವಸ್ಸೆರಿ ಶನಿವಾರ ಹೇಳಿದ್ದಾರೆ. ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ನಡೆದ ಈದಿನ.ಕಾಮ್ ಎರಡನೇ ವರ್ಷದ ಓದುಗರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮದು ಮುಖ್ಯವಾಹಿನಿ ಮಾಧ್ಯಮಗಳಂತಹ ಸಂಸ್ಥೆಳಗಲ್ಲ, ಬದಲಾಗಿ ನಮ್ಮಂತಹ ಸಂಸ್ಥೆಗಳು ಇದನ್ನು ಸಾಮಾಜಿಕ ಮೌಲ್ಯಗಳ, ಜಾತಿ, ಜೆಂಡರ್‌ನಂತಹ ಪ್ರಶ್ನೆಗಳನ್ನೆತ್ತಲು ಇದನ್ನು ಮಾಡುತ್ತಿವೆ ಎಂದು ಹೇಳಿದರು.

ಪ್ರಿಯಾ ತವಸ್ಸೆರಿ ಅವರ ಚಂಬಲ್ ಮೀಡಿಯಾವು, ದಲಿತ, ಮುಸ್ಲಿಮ್ ಮತ್ತು ಅಂಚಿಗೊತ್ತಲ್ಪಟ್ಟ ಸಮುದಾಯಗಳ ಮಹಿಳೆಯರು ಸೇರಿ ಕಳೆದ 23 ವರ್ಷಗಳಿಂದ ನಡೆಸುತ್ತಿರುವ ಪತ್ರಿಕೆಯಾಗಿದೆ. ಈದಿನ.ಕಾಮ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಮ್ಮ ಸಂಸ್ಥೆ ಬಹುತ್ವದಿಂದ ಕೂಡಿದ ಮಾಧ್ಯಮ ಸಂಸ್ಥೆಯ ಭಾಗ. ಗ್ರಾಮೀಣ ಅಂಚಿಗೊತ್ತಲ್ಪಟ್ಟ ಮಹಿಳೆಯರು ತಳಮಟ್ಟದಲ್ಲಿ ಕೆಲಸ ಮಾಡುತ್ತಾ ನಡೆಸಯತ್ತಿರುವ ಏಕೈಕ ಮಾಧ್ಯಮ ಸಂಸ್ಥೆಯ ಭಾಗವಾಗಿರುವುದು ನಮಗೆ ಹೆಮ್ಮೆ” ಎಂದು ಹೇಳಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ

“ಚಂಬಲ್ ಮೀಡಿಯಾದ, ಖಬರ್ ಲೆಹರಿಯಾಗಿಂತ ಮುಂಚೆ ನಾನು ರಾಷ್ಟ್ರೀಯ ಮಾಧ್ಯಮವೊಂದರ ಭಾಗವಾಗಿದ್ದೆ. ಯಾವ ಚಾನಲ್ ಎಂಬುದನ್ನು ನೀವೇ ಊಹಿಸಿ. ಅದು ಜನಪರವಾಗಿ ಆರಂಭವಾಗಿ ಕಾರ್ಪೊರೇಟ್‌ಗಳ ಪಾಲಾದ ಮಾಧ್ಯಮ ಸಂಸ್ಥೆಯಾಗಿದೆ. ಈ ಚಾನಲ್‌ ಅನ್ನು ಕಾರ್ಪೊರೇಟ್‌ಗಳು ಆವರಿಸಿದಾಗ ಮೊಟ್ಟಮೊದಲು ಮುಚ್ಚಿದ್ದು ತಳಮಟ್ಟದ ವರದಿ ಮಾಡುತ್ತಿದ್ದ ನಮ್ಮ ಕಾರ್ಯಕ್ರಮವಾಗಿದೆ.” ಎಂದು ಬೇಸರ ವ್ಯಕ್ತಪಡಿಸಿದರು.

ಮಾಧ್ಯಮ ಸಂಸ್ಥೆಗಳಾದ ಖಬರ್ ಲೆಹರಿಯಾ, ಈದಿನ, ವೈರ್ ರೀತಿಯ ಹಲವು ಮಾಧ್ಯಮಗಳು ಉಳಿದುಕೊಂಡು ಕೆಲಸ ಮಾಡಬೇಕಾದ ಸವಾಲನ್ನು ಎದುರಿಸಿ ತಮ್ಮ ಕರ್ತವ್ಯ ನಿಭಾಯಿಸುತ್ತಿವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

“ತಳಮಟ್ಟದ ವರದಿ ಎಂಬುದು ಕೊನೆ ನಿಮಿಷದಲ್ಲಿ ವಿಮಾನಗಳಲ್ಲಿ ಓಡಾಡಿ ಕಾರ್‌ಗಳಲ್ಲಿ ತಿರುಗಾಡಿ ಮಾಡುವ ಕಂಫರ್ಟ್ ಝೋನ್‌ನ ಕೆಲಸವಲ್ಲ. ಚುನಾವಣಾ ವರದಿಗಳಲ್ಲ. ನಮ್ಮದು ಮುಖ್ಯವಾಹಿನಿ ಮಾಧ್ಯಮಗಳಂತಹ ಸಂಸ್ಥೆಳಗಲ್ಲ, ಬದಲಾಗಿ ನಮ್ಮಂತಹ ಸಂಸ್ಥೆಗಳು ಇದನ್ನು ಸಾಮಾಜಿಕ ಮೌಲ್ಯಗಳ, ಜಾತಿ, ಜೆಂಡರ್‌ನಂತಹ ಪ್ರಶ್ನೆಗಳನ್ನೆತ್ತಲು ಇದನ್ನು ಮಾಡುತ್ತಿವೆ. ಈ ವಿಷಯಗಳು ಸಂಕೀರ್ಣವಾಗಿದ್ದು, ಇದು ಮೇಲ್ಮಟ್ಟದ ವಿಷಯಗಳಲ್ಲ. ಇವೆಲ್ಲ ಎಷ್ಟು ಆಳವಾಗಿ ಬೇರುಬಿಟ್ಟಿವೆ ಎಂದರೆ ಇದನ್ನು ನಿಭಾಯಿಸುವ ಮಾರ್ಗಗಳನ್ನು ಹುಡುಕಬೇಕಾಗುತ್ತದೆ. ಚಂಬಲ್ ಅಕಾಡೆಮಿಯಂತಹ ಸಂಸ್ಥೆಗಳು ಇದರಲ್ಲಿ ಭಾಗವಾದಾಗ, ವಿದ್ಯಾರ್ಥಿಗಳು ಎಷ್ಟೋ ಬಾರಿ ಹೊಸ ಕಣ್ಣೋಟ ಪಡೆಯುತ್ತಾರೆ” ಎಂದು ಹೇಳಿದರು.

“ಒಬ್ಬ ವಿದ್ಯಾರ್ಥಿನಿ ರಾಜ್ಯ ಮಟ್ಟದ ಕಬ್ಬಡಿ ಆಡುವಾಗ ಜೆಂಡರ್ ಜಾತಿ ತಾರತಮ್ಯ ಅನುಭವಿಸಿದ ಕಥೆಯನ್ನು ಬೇರೆ ದೃಷ್ಟಿಯಿಂದ ನೋಡುವುದನ್ನು ಚಂಬಲ್ ಅಕಾಡೆಮಿ ಕಲಿಸುತ್ತದೆ. ನಮ್ಮ ಹಿರಿಯ ಪತ್ರಕರ್ತರಾದ ಶಿವದೇವಿ ಅವರು ದಲಿತ ಸಮುದಾಯದಿಂದ ಬಂದವರು. ಅವರು ನಮ್ಮ ಕಣ್ಣೋಟವನ್ನು ಬದಲಿಸುತ್ತಾರೆ. ಕೆಲವೇ ಬದ್ಧತೆಯುಳ್ಳ ಪತ್ರಕರ್ತರು ಮಾತ್ರ ಗ್ರಾಮೀಣ ವಿಷಯಗಳನ್ನು ಹೇಳುತ್ತಿದ್ದಾರೆ” ಎಂದು ಹೇಳಿದರು.

“ಮಾಧ್ಯಮಗಳೊಳಗೆ ಗ್ರಾಮೀಣ ವಿಷಯಗಳ ಪ್ರಾತಿನಿಧ್ಯದಲ್ಲಿ ಬಹಳ ಅಸಮಾನತೆಯಿದೆ. ಅಂಚಿಗೊತ್ತಲ್ಪಟ್ಟ ಸಮುದಾಯಗಳ ಈ ಕಥೆಗಳು ಹೊರಬರುವವರೆಗೆ ಈ ಅಸಮಾನತೆಗಳು ಬೆಳೆಯುತ್ತಲೇ ಹೋಗುತ್ತವೆ. ಕಳೆದ 23 ವರ್ಷಗಳಲ್ಲಿ ದಲಿತ, ಮುಸ್ಲಿಮ್, ಆದಿವಾಸಿ ಮಹಿಳೆಯರನ್ನು ಪತ್ರಕರ್ತರಾಗಿ ಸಬಲರನ್ನಾಗಿಸುವ ಕೆಲಸ, ಅವರು ಸರ್ಕಾರಗಳನ್ನು ಉತ್ತರದಾಯಿಗಳನ್ನಾಗಿ ಹಿಡಿಯುವ ಸಾಮರ್ಥ್ಯಗಳಿಸಿಕೊಳ್ಳುವ ಕೆಲಸ ಮಾಡಿದ್ದೇವೆ.

ಇಂತಹ ಸ್ತ್ರೀವಾದಿ ತಳಮಟ್ಟದ ಮಾಧ್ಯಮವನ್ನು ಉಳಿಸಿಕೊಳ್ಳವುದು ಸುಲಭವಲ್ಲ. 23 ವರ್ಷ ಉಳಿದಿದ್ದೇವೆ ಎಂದರೆ ನಾವು ಸಮಯಕ್ಕೆ ತಕ್ಕಂತೆ ಬದಲಾಗಿದ್ದೇವೆ ಪ್ರಯೋಗಳನ್ನು ಮಾಡಿದ್ದೇವೆ ಎಂದರ್ಥ. ನಾವು ಡಿಜಿಟಲೀಕರಣ ಆದೆವು, ಸಂಶೋಧನಾ ವಿಭಾಗ ಆರಂಭಿಸಿದೆವು. ಸಾಕ್ಷರತಾ ಕಾರ್ಯಕ್ರಮವಾಗಿ ಆರಂಭವಾಗಿ, ಪ್ರಪಂಚ ಮಟ್ಟದಲ್ಲಿ ಗುರುತಿಸಲ್ಪಡುವ ಮಾಧ್ಯಮವಾಗಿ ಬೆಳೆದಿರುವುದು, ವೈವಿಧ್ಯಮಯವಾದ ದನಿಗಳನ್ನು ಮುನ್ನೆಲೆಗೆ ತಂದಿರುವುದು, ನಾಲ್ಕು ರಾಜ್ಯಗಳಲ್ಲಿ ತಳಮಟ್ಟದ ಸುದ್ದಿಗಳನ್ನು ಹೊರತಂದಿರುವುದು, ಸಿನೆಮಾಗಳನ್ನು ಮಾಡಿರುವುದು ನಮ್ಮ ವಿಶೇಷ” ಎಂದು ಪ್ರಿಯಾ ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೇರೆ ಮಾಧ್ಯಮಗಳಿಗೆ ಹೋಲಿಸಿದರೆ ಡಿಜಿಟಲ್ ಮಾಧ್ಯಮ ಸತ್ಯ ತಿಳಿಸುತ್ತದೆ – ಸಿಎಂ ಸಿದ್ದರಾಮಯ್ಯ

ಬೇರೆ ಮಾಧ್ಯಮಗಳಿಗೆ ಹೋಲಿಸಿದರೆ ಡಿಜಿಟಲ್ ಮಾಧ್ಯಮ ಸತ್ಯ ತಿಳಿಸುತ್ತದೆ – ಸಿಎಂ ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಬಿ-ಜಿ ರಾಮ್ ಜಿ ಮಸೂದೆ ‘ರಾಜ್ಯ ವಿರೋಧಿ’ ಮತ್ತು ‘ಗ್ರಾಮ ವಿರೋಧಿ’: ರಾಹುಲ್ ಗಾಂಧಿ

ಎರಡು ದಶಕಗಳ ಕಾಲದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ)ಯನ್ನು ಒಂದೇ ದಿನದಲ್ಲಿ ಮೋದಿ ಸರ್ಕಾರ ರದ್ದುಗೊಳಿಸಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ...

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ರಾಜಧಾನಿ ಢಾಕಾದಲ್ಲಿ ಭುಗಿಲೆದ್ದ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಬೆಳಗಿನ ಜಾವ ಹಿಂಸಾಚಾರ ಭುಗಿಲೆದ್ದಿದೆ. ಹತ್ಯೆ ಯತ್ನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಹಾದಿ, ಸಿಂಗಾಪುರದ ಆಸ್ಪತ್ರೆಯಲ್ಲಿ...

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರದಿಂದ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...