Homeಕರ್ನಾಟಕತಳಮಟ್ಟದ ವರದಿ ಎಂದರೆ ಕೊನೆ ನಿಮಿಷದಲ್ಲಿ ವಿಮಾನಗಳಲ್ಲಿ ಓಡಾಡಿ ಮಾಡುವ ಕಂಫರ್ಟ್ ಝೋನ್‌ನ ಕೆಲಸವಲ್ಲ -...

ತಳಮಟ್ಟದ ವರದಿ ಎಂದರೆ ಕೊನೆ ನಿಮಿಷದಲ್ಲಿ ವಿಮಾನಗಳಲ್ಲಿ ಓಡಾಡಿ ಮಾಡುವ ಕಂಫರ್ಟ್ ಝೋನ್‌ನ ಕೆಲಸವಲ್ಲ – ಪತ್ರಕರ್ತೆ ಪ್ರಿಯಾ ತವಸ್ಸೆರಿ

- Advertisement -
- Advertisement -

ತಳಮಟ್ಟದ ವರದಿ ಎಂಬುದು ಕೊನೆ ನಿಮಿಷದಲ್ಲಿ ವಿಮಾನಗಳಲ್ಲಿ ಓಡಾಡಿ ಕಾರ್‌ಗಳಲ್ಲಿ ತಿರುಗಾಡಿ ಮಾಡುವ ಕಂಫರ್ಟ್ ಝೋನ್‌ನ ಕೆಲಸವಲ್ಲ, ಚುನಾವಣಾ ವರದಿಗಳಂತಲ್ಲ ಎಂದು ಚಂಬಲ್ ಮೀಡಿಯಾದ ನಿರ್ದೇಶಕಿ ಪ್ರಿಯಾ ತವಸ್ಸೆರಿ ಶನಿವಾರ ಹೇಳಿದ್ದಾರೆ. ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ನಡೆದ ಈದಿನ.ಕಾಮ್ ಎರಡನೇ ವರ್ಷದ ಓದುಗರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮದು ಮುಖ್ಯವಾಹಿನಿ ಮಾಧ್ಯಮಗಳಂತಹ ಸಂಸ್ಥೆಳಗಲ್ಲ, ಬದಲಾಗಿ ನಮ್ಮಂತಹ ಸಂಸ್ಥೆಗಳು ಇದನ್ನು ಸಾಮಾಜಿಕ ಮೌಲ್ಯಗಳ, ಜಾತಿ, ಜೆಂಡರ್‌ನಂತಹ ಪ್ರಶ್ನೆಗಳನ್ನೆತ್ತಲು ಇದನ್ನು ಮಾಡುತ್ತಿವೆ ಎಂದು ಹೇಳಿದರು.

ಪ್ರಿಯಾ ತವಸ್ಸೆರಿ ಅವರ ಚಂಬಲ್ ಮೀಡಿಯಾವು, ದಲಿತ, ಮುಸ್ಲಿಮ್ ಮತ್ತು ಅಂಚಿಗೊತ್ತಲ್ಪಟ್ಟ ಸಮುದಾಯಗಳ ಮಹಿಳೆಯರು ಸೇರಿ ಕಳೆದ 23 ವರ್ಷಗಳಿಂದ ನಡೆಸುತ್ತಿರುವ ಪತ್ರಿಕೆಯಾಗಿದೆ. ಈದಿನ.ಕಾಮ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಮ್ಮ ಸಂಸ್ಥೆ ಬಹುತ್ವದಿಂದ ಕೂಡಿದ ಮಾಧ್ಯಮ ಸಂಸ್ಥೆಯ ಭಾಗ. ಗ್ರಾಮೀಣ ಅಂಚಿಗೊತ್ತಲ್ಪಟ್ಟ ಮಹಿಳೆಯರು ತಳಮಟ್ಟದಲ್ಲಿ ಕೆಲಸ ಮಾಡುತ್ತಾ ನಡೆಸಯತ್ತಿರುವ ಏಕೈಕ ಮಾಧ್ಯಮ ಸಂಸ್ಥೆಯ ಭಾಗವಾಗಿರುವುದು ನಮಗೆ ಹೆಮ್ಮೆ” ಎಂದು ಹೇಳಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ

“ಚಂಬಲ್ ಮೀಡಿಯಾದ, ಖಬರ್ ಲೆಹರಿಯಾಗಿಂತ ಮುಂಚೆ ನಾನು ರಾಷ್ಟ್ರೀಯ ಮಾಧ್ಯಮವೊಂದರ ಭಾಗವಾಗಿದ್ದೆ. ಯಾವ ಚಾನಲ್ ಎಂಬುದನ್ನು ನೀವೇ ಊಹಿಸಿ. ಅದು ಜನಪರವಾಗಿ ಆರಂಭವಾಗಿ ಕಾರ್ಪೊರೇಟ್‌ಗಳ ಪಾಲಾದ ಮಾಧ್ಯಮ ಸಂಸ್ಥೆಯಾಗಿದೆ. ಈ ಚಾನಲ್‌ ಅನ್ನು ಕಾರ್ಪೊರೇಟ್‌ಗಳು ಆವರಿಸಿದಾಗ ಮೊಟ್ಟಮೊದಲು ಮುಚ್ಚಿದ್ದು ತಳಮಟ್ಟದ ವರದಿ ಮಾಡುತ್ತಿದ್ದ ನಮ್ಮ ಕಾರ್ಯಕ್ರಮವಾಗಿದೆ.” ಎಂದು ಬೇಸರ ವ್ಯಕ್ತಪಡಿಸಿದರು.

ಮಾಧ್ಯಮ ಸಂಸ್ಥೆಗಳಾದ ಖಬರ್ ಲೆಹರಿಯಾ, ಈದಿನ, ವೈರ್ ರೀತಿಯ ಹಲವು ಮಾಧ್ಯಮಗಳು ಉಳಿದುಕೊಂಡು ಕೆಲಸ ಮಾಡಬೇಕಾದ ಸವಾಲನ್ನು ಎದುರಿಸಿ ತಮ್ಮ ಕರ್ತವ್ಯ ನಿಭಾಯಿಸುತ್ತಿವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

“ತಳಮಟ್ಟದ ವರದಿ ಎಂಬುದು ಕೊನೆ ನಿಮಿಷದಲ್ಲಿ ವಿಮಾನಗಳಲ್ಲಿ ಓಡಾಡಿ ಕಾರ್‌ಗಳಲ್ಲಿ ತಿರುಗಾಡಿ ಮಾಡುವ ಕಂಫರ್ಟ್ ಝೋನ್‌ನ ಕೆಲಸವಲ್ಲ. ಚುನಾವಣಾ ವರದಿಗಳಲ್ಲ. ನಮ್ಮದು ಮುಖ್ಯವಾಹಿನಿ ಮಾಧ್ಯಮಗಳಂತಹ ಸಂಸ್ಥೆಳಗಲ್ಲ, ಬದಲಾಗಿ ನಮ್ಮಂತಹ ಸಂಸ್ಥೆಗಳು ಇದನ್ನು ಸಾಮಾಜಿಕ ಮೌಲ್ಯಗಳ, ಜಾತಿ, ಜೆಂಡರ್‌ನಂತಹ ಪ್ರಶ್ನೆಗಳನ್ನೆತ್ತಲು ಇದನ್ನು ಮಾಡುತ್ತಿವೆ. ಈ ವಿಷಯಗಳು ಸಂಕೀರ್ಣವಾಗಿದ್ದು, ಇದು ಮೇಲ್ಮಟ್ಟದ ವಿಷಯಗಳಲ್ಲ. ಇವೆಲ್ಲ ಎಷ್ಟು ಆಳವಾಗಿ ಬೇರುಬಿಟ್ಟಿವೆ ಎಂದರೆ ಇದನ್ನು ನಿಭಾಯಿಸುವ ಮಾರ್ಗಗಳನ್ನು ಹುಡುಕಬೇಕಾಗುತ್ತದೆ. ಚಂಬಲ್ ಅಕಾಡೆಮಿಯಂತಹ ಸಂಸ್ಥೆಗಳು ಇದರಲ್ಲಿ ಭಾಗವಾದಾಗ, ವಿದ್ಯಾರ್ಥಿಗಳು ಎಷ್ಟೋ ಬಾರಿ ಹೊಸ ಕಣ್ಣೋಟ ಪಡೆಯುತ್ತಾರೆ” ಎಂದು ಹೇಳಿದರು.

“ಒಬ್ಬ ವಿದ್ಯಾರ್ಥಿನಿ ರಾಜ್ಯ ಮಟ್ಟದ ಕಬ್ಬಡಿ ಆಡುವಾಗ ಜೆಂಡರ್ ಜಾತಿ ತಾರತಮ್ಯ ಅನುಭವಿಸಿದ ಕಥೆಯನ್ನು ಬೇರೆ ದೃಷ್ಟಿಯಿಂದ ನೋಡುವುದನ್ನು ಚಂಬಲ್ ಅಕಾಡೆಮಿ ಕಲಿಸುತ್ತದೆ. ನಮ್ಮ ಹಿರಿಯ ಪತ್ರಕರ್ತರಾದ ಶಿವದೇವಿ ಅವರು ದಲಿತ ಸಮುದಾಯದಿಂದ ಬಂದವರು. ಅವರು ನಮ್ಮ ಕಣ್ಣೋಟವನ್ನು ಬದಲಿಸುತ್ತಾರೆ. ಕೆಲವೇ ಬದ್ಧತೆಯುಳ್ಳ ಪತ್ರಕರ್ತರು ಮಾತ್ರ ಗ್ರಾಮೀಣ ವಿಷಯಗಳನ್ನು ಹೇಳುತ್ತಿದ್ದಾರೆ” ಎಂದು ಹೇಳಿದರು.

“ಮಾಧ್ಯಮಗಳೊಳಗೆ ಗ್ರಾಮೀಣ ವಿಷಯಗಳ ಪ್ರಾತಿನಿಧ್ಯದಲ್ಲಿ ಬಹಳ ಅಸಮಾನತೆಯಿದೆ. ಅಂಚಿಗೊತ್ತಲ್ಪಟ್ಟ ಸಮುದಾಯಗಳ ಈ ಕಥೆಗಳು ಹೊರಬರುವವರೆಗೆ ಈ ಅಸಮಾನತೆಗಳು ಬೆಳೆಯುತ್ತಲೇ ಹೋಗುತ್ತವೆ. ಕಳೆದ 23 ವರ್ಷಗಳಲ್ಲಿ ದಲಿತ, ಮುಸ್ಲಿಮ್, ಆದಿವಾಸಿ ಮಹಿಳೆಯರನ್ನು ಪತ್ರಕರ್ತರಾಗಿ ಸಬಲರನ್ನಾಗಿಸುವ ಕೆಲಸ, ಅವರು ಸರ್ಕಾರಗಳನ್ನು ಉತ್ತರದಾಯಿಗಳನ್ನಾಗಿ ಹಿಡಿಯುವ ಸಾಮರ್ಥ್ಯಗಳಿಸಿಕೊಳ್ಳುವ ಕೆಲಸ ಮಾಡಿದ್ದೇವೆ.

ಇಂತಹ ಸ್ತ್ರೀವಾದಿ ತಳಮಟ್ಟದ ಮಾಧ್ಯಮವನ್ನು ಉಳಿಸಿಕೊಳ್ಳವುದು ಸುಲಭವಲ್ಲ. 23 ವರ್ಷ ಉಳಿದಿದ್ದೇವೆ ಎಂದರೆ ನಾವು ಸಮಯಕ್ಕೆ ತಕ್ಕಂತೆ ಬದಲಾಗಿದ್ದೇವೆ ಪ್ರಯೋಗಳನ್ನು ಮಾಡಿದ್ದೇವೆ ಎಂದರ್ಥ. ನಾವು ಡಿಜಿಟಲೀಕರಣ ಆದೆವು, ಸಂಶೋಧನಾ ವಿಭಾಗ ಆರಂಭಿಸಿದೆವು. ಸಾಕ್ಷರತಾ ಕಾರ್ಯಕ್ರಮವಾಗಿ ಆರಂಭವಾಗಿ, ಪ್ರಪಂಚ ಮಟ್ಟದಲ್ಲಿ ಗುರುತಿಸಲ್ಪಡುವ ಮಾಧ್ಯಮವಾಗಿ ಬೆಳೆದಿರುವುದು, ವೈವಿಧ್ಯಮಯವಾದ ದನಿಗಳನ್ನು ಮುನ್ನೆಲೆಗೆ ತಂದಿರುವುದು, ನಾಲ್ಕು ರಾಜ್ಯಗಳಲ್ಲಿ ತಳಮಟ್ಟದ ಸುದ್ದಿಗಳನ್ನು ಹೊರತಂದಿರುವುದು, ಸಿನೆಮಾಗಳನ್ನು ಮಾಡಿರುವುದು ನಮ್ಮ ವಿಶೇಷ” ಎಂದು ಪ್ರಿಯಾ ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೇರೆ ಮಾಧ್ಯಮಗಳಿಗೆ ಹೋಲಿಸಿದರೆ ಡಿಜಿಟಲ್ ಮಾಧ್ಯಮ ಸತ್ಯ ತಿಳಿಸುತ್ತದೆ – ಸಿಎಂ ಸಿದ್ದರಾಮಯ್ಯ

ಬೇರೆ ಮಾಧ್ಯಮಗಳಿಗೆ ಹೋಲಿಸಿದರೆ ಡಿಜಿಟಲ್ ಮಾಧ್ಯಮ ಸತ್ಯ ತಿಳಿಸುತ್ತದೆ – ಸಿಎಂ ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...