Homeಕರ್ನಾಟಕತಳಮಟ್ಟದ ವರದಿ ಎಂದರೆ ಕೊನೆ ನಿಮಿಷದಲ್ಲಿ ವಿಮಾನಗಳಲ್ಲಿ ಓಡಾಡಿ ಮಾಡುವ ಕಂಫರ್ಟ್ ಝೋನ್‌ನ ಕೆಲಸವಲ್ಲ -...

ತಳಮಟ್ಟದ ವರದಿ ಎಂದರೆ ಕೊನೆ ನಿಮಿಷದಲ್ಲಿ ವಿಮಾನಗಳಲ್ಲಿ ಓಡಾಡಿ ಮಾಡುವ ಕಂಫರ್ಟ್ ಝೋನ್‌ನ ಕೆಲಸವಲ್ಲ – ಪತ್ರಕರ್ತೆ ಪ್ರಿಯಾ ತವಸ್ಸೆರಿ

- Advertisement -
- Advertisement -

ತಳಮಟ್ಟದ ವರದಿ ಎಂಬುದು ಕೊನೆ ನಿಮಿಷದಲ್ಲಿ ವಿಮಾನಗಳಲ್ಲಿ ಓಡಾಡಿ ಕಾರ್‌ಗಳಲ್ಲಿ ತಿರುಗಾಡಿ ಮಾಡುವ ಕಂಫರ್ಟ್ ಝೋನ್‌ನ ಕೆಲಸವಲ್ಲ, ಚುನಾವಣಾ ವರದಿಗಳಂತಲ್ಲ ಎಂದು ಚಂಬಲ್ ಮೀಡಿಯಾದ ನಿರ್ದೇಶಕಿ ಪ್ರಿಯಾ ತವಸ್ಸೆರಿ ಶನಿವಾರ ಹೇಳಿದ್ದಾರೆ. ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ನಡೆದ ಈದಿನ.ಕಾಮ್ ಎರಡನೇ ವರ್ಷದ ಓದುಗರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮದು ಮುಖ್ಯವಾಹಿನಿ ಮಾಧ್ಯಮಗಳಂತಹ ಸಂಸ್ಥೆಳಗಲ್ಲ, ಬದಲಾಗಿ ನಮ್ಮಂತಹ ಸಂಸ್ಥೆಗಳು ಇದನ್ನು ಸಾಮಾಜಿಕ ಮೌಲ್ಯಗಳ, ಜಾತಿ, ಜೆಂಡರ್‌ನಂತಹ ಪ್ರಶ್ನೆಗಳನ್ನೆತ್ತಲು ಇದನ್ನು ಮಾಡುತ್ತಿವೆ ಎಂದು ಹೇಳಿದರು.

ಪ್ರಿಯಾ ತವಸ್ಸೆರಿ ಅವರ ಚಂಬಲ್ ಮೀಡಿಯಾವು, ದಲಿತ, ಮುಸ್ಲಿಮ್ ಮತ್ತು ಅಂಚಿಗೊತ್ತಲ್ಪಟ್ಟ ಸಮುದಾಯಗಳ ಮಹಿಳೆಯರು ಸೇರಿ ಕಳೆದ 23 ವರ್ಷಗಳಿಂದ ನಡೆಸುತ್ತಿರುವ ಪತ್ರಿಕೆಯಾಗಿದೆ. ಈದಿನ.ಕಾಮ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಮ್ಮ ಸಂಸ್ಥೆ ಬಹುತ್ವದಿಂದ ಕೂಡಿದ ಮಾಧ್ಯಮ ಸಂಸ್ಥೆಯ ಭಾಗ. ಗ್ರಾಮೀಣ ಅಂಚಿಗೊತ್ತಲ್ಪಟ್ಟ ಮಹಿಳೆಯರು ತಳಮಟ್ಟದಲ್ಲಿ ಕೆಲಸ ಮಾಡುತ್ತಾ ನಡೆಸಯತ್ತಿರುವ ಏಕೈಕ ಮಾಧ್ಯಮ ಸಂಸ್ಥೆಯ ಭಾಗವಾಗಿರುವುದು ನಮಗೆ ಹೆಮ್ಮೆ” ಎಂದು ಹೇಳಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ

“ಚಂಬಲ್ ಮೀಡಿಯಾದ, ಖಬರ್ ಲೆಹರಿಯಾಗಿಂತ ಮುಂಚೆ ನಾನು ರಾಷ್ಟ್ರೀಯ ಮಾಧ್ಯಮವೊಂದರ ಭಾಗವಾಗಿದ್ದೆ. ಯಾವ ಚಾನಲ್ ಎಂಬುದನ್ನು ನೀವೇ ಊಹಿಸಿ. ಅದು ಜನಪರವಾಗಿ ಆರಂಭವಾಗಿ ಕಾರ್ಪೊರೇಟ್‌ಗಳ ಪಾಲಾದ ಮಾಧ್ಯಮ ಸಂಸ್ಥೆಯಾಗಿದೆ. ಈ ಚಾನಲ್‌ ಅನ್ನು ಕಾರ್ಪೊರೇಟ್‌ಗಳು ಆವರಿಸಿದಾಗ ಮೊಟ್ಟಮೊದಲು ಮುಚ್ಚಿದ್ದು ತಳಮಟ್ಟದ ವರದಿ ಮಾಡುತ್ತಿದ್ದ ನಮ್ಮ ಕಾರ್ಯಕ್ರಮವಾಗಿದೆ.” ಎಂದು ಬೇಸರ ವ್ಯಕ್ತಪಡಿಸಿದರು.

ಮಾಧ್ಯಮ ಸಂಸ್ಥೆಗಳಾದ ಖಬರ್ ಲೆಹರಿಯಾ, ಈದಿನ, ವೈರ್ ರೀತಿಯ ಹಲವು ಮಾಧ್ಯಮಗಳು ಉಳಿದುಕೊಂಡು ಕೆಲಸ ಮಾಡಬೇಕಾದ ಸವಾಲನ್ನು ಎದುರಿಸಿ ತಮ್ಮ ಕರ್ತವ್ಯ ನಿಭಾಯಿಸುತ್ತಿವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

“ತಳಮಟ್ಟದ ವರದಿ ಎಂಬುದು ಕೊನೆ ನಿಮಿಷದಲ್ಲಿ ವಿಮಾನಗಳಲ್ಲಿ ಓಡಾಡಿ ಕಾರ್‌ಗಳಲ್ಲಿ ತಿರುಗಾಡಿ ಮಾಡುವ ಕಂಫರ್ಟ್ ಝೋನ್‌ನ ಕೆಲಸವಲ್ಲ. ಚುನಾವಣಾ ವರದಿಗಳಲ್ಲ. ನಮ್ಮದು ಮುಖ್ಯವಾಹಿನಿ ಮಾಧ್ಯಮಗಳಂತಹ ಸಂಸ್ಥೆಳಗಲ್ಲ, ಬದಲಾಗಿ ನಮ್ಮಂತಹ ಸಂಸ್ಥೆಗಳು ಇದನ್ನು ಸಾಮಾಜಿಕ ಮೌಲ್ಯಗಳ, ಜಾತಿ, ಜೆಂಡರ್‌ನಂತಹ ಪ್ರಶ್ನೆಗಳನ್ನೆತ್ತಲು ಇದನ್ನು ಮಾಡುತ್ತಿವೆ. ಈ ವಿಷಯಗಳು ಸಂಕೀರ್ಣವಾಗಿದ್ದು, ಇದು ಮೇಲ್ಮಟ್ಟದ ವಿಷಯಗಳಲ್ಲ. ಇವೆಲ್ಲ ಎಷ್ಟು ಆಳವಾಗಿ ಬೇರುಬಿಟ್ಟಿವೆ ಎಂದರೆ ಇದನ್ನು ನಿಭಾಯಿಸುವ ಮಾರ್ಗಗಳನ್ನು ಹುಡುಕಬೇಕಾಗುತ್ತದೆ. ಚಂಬಲ್ ಅಕಾಡೆಮಿಯಂತಹ ಸಂಸ್ಥೆಗಳು ಇದರಲ್ಲಿ ಭಾಗವಾದಾಗ, ವಿದ್ಯಾರ್ಥಿಗಳು ಎಷ್ಟೋ ಬಾರಿ ಹೊಸ ಕಣ್ಣೋಟ ಪಡೆಯುತ್ತಾರೆ” ಎಂದು ಹೇಳಿದರು.

“ಒಬ್ಬ ವಿದ್ಯಾರ್ಥಿನಿ ರಾಜ್ಯ ಮಟ್ಟದ ಕಬ್ಬಡಿ ಆಡುವಾಗ ಜೆಂಡರ್ ಜಾತಿ ತಾರತಮ್ಯ ಅನುಭವಿಸಿದ ಕಥೆಯನ್ನು ಬೇರೆ ದೃಷ್ಟಿಯಿಂದ ನೋಡುವುದನ್ನು ಚಂಬಲ್ ಅಕಾಡೆಮಿ ಕಲಿಸುತ್ತದೆ. ನಮ್ಮ ಹಿರಿಯ ಪತ್ರಕರ್ತರಾದ ಶಿವದೇವಿ ಅವರು ದಲಿತ ಸಮುದಾಯದಿಂದ ಬಂದವರು. ಅವರು ನಮ್ಮ ಕಣ್ಣೋಟವನ್ನು ಬದಲಿಸುತ್ತಾರೆ. ಕೆಲವೇ ಬದ್ಧತೆಯುಳ್ಳ ಪತ್ರಕರ್ತರು ಮಾತ್ರ ಗ್ರಾಮೀಣ ವಿಷಯಗಳನ್ನು ಹೇಳುತ್ತಿದ್ದಾರೆ” ಎಂದು ಹೇಳಿದರು.

“ಮಾಧ್ಯಮಗಳೊಳಗೆ ಗ್ರಾಮೀಣ ವಿಷಯಗಳ ಪ್ರಾತಿನಿಧ್ಯದಲ್ಲಿ ಬಹಳ ಅಸಮಾನತೆಯಿದೆ. ಅಂಚಿಗೊತ್ತಲ್ಪಟ್ಟ ಸಮುದಾಯಗಳ ಈ ಕಥೆಗಳು ಹೊರಬರುವವರೆಗೆ ಈ ಅಸಮಾನತೆಗಳು ಬೆಳೆಯುತ್ತಲೇ ಹೋಗುತ್ತವೆ. ಕಳೆದ 23 ವರ್ಷಗಳಲ್ಲಿ ದಲಿತ, ಮುಸ್ಲಿಮ್, ಆದಿವಾಸಿ ಮಹಿಳೆಯರನ್ನು ಪತ್ರಕರ್ತರಾಗಿ ಸಬಲರನ್ನಾಗಿಸುವ ಕೆಲಸ, ಅವರು ಸರ್ಕಾರಗಳನ್ನು ಉತ್ತರದಾಯಿಗಳನ್ನಾಗಿ ಹಿಡಿಯುವ ಸಾಮರ್ಥ್ಯಗಳಿಸಿಕೊಳ್ಳುವ ಕೆಲಸ ಮಾಡಿದ್ದೇವೆ.

ಇಂತಹ ಸ್ತ್ರೀವಾದಿ ತಳಮಟ್ಟದ ಮಾಧ್ಯಮವನ್ನು ಉಳಿಸಿಕೊಳ್ಳವುದು ಸುಲಭವಲ್ಲ. 23 ವರ್ಷ ಉಳಿದಿದ್ದೇವೆ ಎಂದರೆ ನಾವು ಸಮಯಕ್ಕೆ ತಕ್ಕಂತೆ ಬದಲಾಗಿದ್ದೇವೆ ಪ್ರಯೋಗಳನ್ನು ಮಾಡಿದ್ದೇವೆ ಎಂದರ್ಥ. ನಾವು ಡಿಜಿಟಲೀಕರಣ ಆದೆವು, ಸಂಶೋಧನಾ ವಿಭಾಗ ಆರಂಭಿಸಿದೆವು. ಸಾಕ್ಷರತಾ ಕಾರ್ಯಕ್ರಮವಾಗಿ ಆರಂಭವಾಗಿ, ಪ್ರಪಂಚ ಮಟ್ಟದಲ್ಲಿ ಗುರುತಿಸಲ್ಪಡುವ ಮಾಧ್ಯಮವಾಗಿ ಬೆಳೆದಿರುವುದು, ವೈವಿಧ್ಯಮಯವಾದ ದನಿಗಳನ್ನು ಮುನ್ನೆಲೆಗೆ ತಂದಿರುವುದು, ನಾಲ್ಕು ರಾಜ್ಯಗಳಲ್ಲಿ ತಳಮಟ್ಟದ ಸುದ್ದಿಗಳನ್ನು ಹೊರತಂದಿರುವುದು, ಸಿನೆಮಾಗಳನ್ನು ಮಾಡಿರುವುದು ನಮ್ಮ ವಿಶೇಷ” ಎಂದು ಪ್ರಿಯಾ ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೇರೆ ಮಾಧ್ಯಮಗಳಿಗೆ ಹೋಲಿಸಿದರೆ ಡಿಜಿಟಲ್ ಮಾಧ್ಯಮ ಸತ್ಯ ತಿಳಿಸುತ್ತದೆ – ಸಿಎಂ ಸಿದ್ದರಾಮಯ್ಯ

ಬೇರೆ ಮಾಧ್ಯಮಗಳಿಗೆ ಹೋಲಿಸಿದರೆ ಡಿಜಿಟಲ್ ಮಾಧ್ಯಮ ಸತ್ಯ ತಿಳಿಸುತ್ತದೆ – ಸಿಎಂ ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...