Homeಕರ್ನಾಟಕತಳಮಟ್ಟದ ವರದಿ ಎಂದರೆ ಕೊನೆ ನಿಮಿಷದಲ್ಲಿ ವಿಮಾನಗಳಲ್ಲಿ ಓಡಾಡಿ ಮಾಡುವ ಕಂಫರ್ಟ್ ಝೋನ್‌ನ ಕೆಲಸವಲ್ಲ -...

ತಳಮಟ್ಟದ ವರದಿ ಎಂದರೆ ಕೊನೆ ನಿಮಿಷದಲ್ಲಿ ವಿಮಾನಗಳಲ್ಲಿ ಓಡಾಡಿ ಮಾಡುವ ಕಂಫರ್ಟ್ ಝೋನ್‌ನ ಕೆಲಸವಲ್ಲ – ಪತ್ರಕರ್ತೆ ಪ್ರಿಯಾ ತವಸ್ಸೆರಿ

- Advertisement -
- Advertisement -

ತಳಮಟ್ಟದ ವರದಿ ಎಂಬುದು ಕೊನೆ ನಿಮಿಷದಲ್ಲಿ ವಿಮಾನಗಳಲ್ಲಿ ಓಡಾಡಿ ಕಾರ್‌ಗಳಲ್ಲಿ ತಿರುಗಾಡಿ ಮಾಡುವ ಕಂಫರ್ಟ್ ಝೋನ್‌ನ ಕೆಲಸವಲ್ಲ, ಚುನಾವಣಾ ವರದಿಗಳಂತಲ್ಲ ಎಂದು ಚಂಬಲ್ ಮೀಡಿಯಾದ ನಿರ್ದೇಶಕಿ ಪ್ರಿಯಾ ತವಸ್ಸೆರಿ ಶನಿವಾರ ಹೇಳಿದ್ದಾರೆ. ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ನಡೆದ ಈದಿನ.ಕಾಮ್ ಎರಡನೇ ವರ್ಷದ ಓದುಗರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮದು ಮುಖ್ಯವಾಹಿನಿ ಮಾಧ್ಯಮಗಳಂತಹ ಸಂಸ್ಥೆಳಗಲ್ಲ, ಬದಲಾಗಿ ನಮ್ಮಂತಹ ಸಂಸ್ಥೆಗಳು ಇದನ್ನು ಸಾಮಾಜಿಕ ಮೌಲ್ಯಗಳ, ಜಾತಿ, ಜೆಂಡರ್‌ನಂತಹ ಪ್ರಶ್ನೆಗಳನ್ನೆತ್ತಲು ಇದನ್ನು ಮಾಡುತ್ತಿವೆ ಎಂದು ಹೇಳಿದರು.

ಪ್ರಿಯಾ ತವಸ್ಸೆರಿ ಅವರ ಚಂಬಲ್ ಮೀಡಿಯಾವು, ದಲಿತ, ಮುಸ್ಲಿಮ್ ಮತ್ತು ಅಂಚಿಗೊತ್ತಲ್ಪಟ್ಟ ಸಮುದಾಯಗಳ ಮಹಿಳೆಯರು ಸೇರಿ ಕಳೆದ 23 ವರ್ಷಗಳಿಂದ ನಡೆಸುತ್ತಿರುವ ಪತ್ರಿಕೆಯಾಗಿದೆ. ಈದಿನ.ಕಾಮ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಮ್ಮ ಸಂಸ್ಥೆ ಬಹುತ್ವದಿಂದ ಕೂಡಿದ ಮಾಧ್ಯಮ ಸಂಸ್ಥೆಯ ಭಾಗ. ಗ್ರಾಮೀಣ ಅಂಚಿಗೊತ್ತಲ್ಪಟ್ಟ ಮಹಿಳೆಯರು ತಳಮಟ್ಟದಲ್ಲಿ ಕೆಲಸ ಮಾಡುತ್ತಾ ನಡೆಸಯತ್ತಿರುವ ಏಕೈಕ ಮಾಧ್ಯಮ ಸಂಸ್ಥೆಯ ಭಾಗವಾಗಿರುವುದು ನಮಗೆ ಹೆಮ್ಮೆ” ಎಂದು ಹೇಳಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ

“ಚಂಬಲ್ ಮೀಡಿಯಾದ, ಖಬರ್ ಲೆಹರಿಯಾಗಿಂತ ಮುಂಚೆ ನಾನು ರಾಷ್ಟ್ರೀಯ ಮಾಧ್ಯಮವೊಂದರ ಭಾಗವಾಗಿದ್ದೆ. ಯಾವ ಚಾನಲ್ ಎಂಬುದನ್ನು ನೀವೇ ಊಹಿಸಿ. ಅದು ಜನಪರವಾಗಿ ಆರಂಭವಾಗಿ ಕಾರ್ಪೊರೇಟ್‌ಗಳ ಪಾಲಾದ ಮಾಧ್ಯಮ ಸಂಸ್ಥೆಯಾಗಿದೆ. ಈ ಚಾನಲ್‌ ಅನ್ನು ಕಾರ್ಪೊರೇಟ್‌ಗಳು ಆವರಿಸಿದಾಗ ಮೊಟ್ಟಮೊದಲು ಮುಚ್ಚಿದ್ದು ತಳಮಟ್ಟದ ವರದಿ ಮಾಡುತ್ತಿದ್ದ ನಮ್ಮ ಕಾರ್ಯಕ್ರಮವಾಗಿದೆ.” ಎಂದು ಬೇಸರ ವ್ಯಕ್ತಪಡಿಸಿದರು.

ಮಾಧ್ಯಮ ಸಂಸ್ಥೆಗಳಾದ ಖಬರ್ ಲೆಹರಿಯಾ, ಈದಿನ, ವೈರ್ ರೀತಿಯ ಹಲವು ಮಾಧ್ಯಮಗಳು ಉಳಿದುಕೊಂಡು ಕೆಲಸ ಮಾಡಬೇಕಾದ ಸವಾಲನ್ನು ಎದುರಿಸಿ ತಮ್ಮ ಕರ್ತವ್ಯ ನಿಭಾಯಿಸುತ್ತಿವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

“ತಳಮಟ್ಟದ ವರದಿ ಎಂಬುದು ಕೊನೆ ನಿಮಿಷದಲ್ಲಿ ವಿಮಾನಗಳಲ್ಲಿ ಓಡಾಡಿ ಕಾರ್‌ಗಳಲ್ಲಿ ತಿರುಗಾಡಿ ಮಾಡುವ ಕಂಫರ್ಟ್ ಝೋನ್‌ನ ಕೆಲಸವಲ್ಲ. ಚುನಾವಣಾ ವರದಿಗಳಲ್ಲ. ನಮ್ಮದು ಮುಖ್ಯವಾಹಿನಿ ಮಾಧ್ಯಮಗಳಂತಹ ಸಂಸ್ಥೆಳಗಲ್ಲ, ಬದಲಾಗಿ ನಮ್ಮಂತಹ ಸಂಸ್ಥೆಗಳು ಇದನ್ನು ಸಾಮಾಜಿಕ ಮೌಲ್ಯಗಳ, ಜಾತಿ, ಜೆಂಡರ್‌ನಂತಹ ಪ್ರಶ್ನೆಗಳನ್ನೆತ್ತಲು ಇದನ್ನು ಮಾಡುತ್ತಿವೆ. ಈ ವಿಷಯಗಳು ಸಂಕೀರ್ಣವಾಗಿದ್ದು, ಇದು ಮೇಲ್ಮಟ್ಟದ ವಿಷಯಗಳಲ್ಲ. ಇವೆಲ್ಲ ಎಷ್ಟು ಆಳವಾಗಿ ಬೇರುಬಿಟ್ಟಿವೆ ಎಂದರೆ ಇದನ್ನು ನಿಭಾಯಿಸುವ ಮಾರ್ಗಗಳನ್ನು ಹುಡುಕಬೇಕಾಗುತ್ತದೆ. ಚಂಬಲ್ ಅಕಾಡೆಮಿಯಂತಹ ಸಂಸ್ಥೆಗಳು ಇದರಲ್ಲಿ ಭಾಗವಾದಾಗ, ವಿದ್ಯಾರ್ಥಿಗಳು ಎಷ್ಟೋ ಬಾರಿ ಹೊಸ ಕಣ್ಣೋಟ ಪಡೆಯುತ್ತಾರೆ” ಎಂದು ಹೇಳಿದರು.

“ಒಬ್ಬ ವಿದ್ಯಾರ್ಥಿನಿ ರಾಜ್ಯ ಮಟ್ಟದ ಕಬ್ಬಡಿ ಆಡುವಾಗ ಜೆಂಡರ್ ಜಾತಿ ತಾರತಮ್ಯ ಅನುಭವಿಸಿದ ಕಥೆಯನ್ನು ಬೇರೆ ದೃಷ್ಟಿಯಿಂದ ನೋಡುವುದನ್ನು ಚಂಬಲ್ ಅಕಾಡೆಮಿ ಕಲಿಸುತ್ತದೆ. ನಮ್ಮ ಹಿರಿಯ ಪತ್ರಕರ್ತರಾದ ಶಿವದೇವಿ ಅವರು ದಲಿತ ಸಮುದಾಯದಿಂದ ಬಂದವರು. ಅವರು ನಮ್ಮ ಕಣ್ಣೋಟವನ್ನು ಬದಲಿಸುತ್ತಾರೆ. ಕೆಲವೇ ಬದ್ಧತೆಯುಳ್ಳ ಪತ್ರಕರ್ತರು ಮಾತ್ರ ಗ್ರಾಮೀಣ ವಿಷಯಗಳನ್ನು ಹೇಳುತ್ತಿದ್ದಾರೆ” ಎಂದು ಹೇಳಿದರು.

“ಮಾಧ್ಯಮಗಳೊಳಗೆ ಗ್ರಾಮೀಣ ವಿಷಯಗಳ ಪ್ರಾತಿನಿಧ್ಯದಲ್ಲಿ ಬಹಳ ಅಸಮಾನತೆಯಿದೆ. ಅಂಚಿಗೊತ್ತಲ್ಪಟ್ಟ ಸಮುದಾಯಗಳ ಈ ಕಥೆಗಳು ಹೊರಬರುವವರೆಗೆ ಈ ಅಸಮಾನತೆಗಳು ಬೆಳೆಯುತ್ತಲೇ ಹೋಗುತ್ತವೆ. ಕಳೆದ 23 ವರ್ಷಗಳಲ್ಲಿ ದಲಿತ, ಮುಸ್ಲಿಮ್, ಆದಿವಾಸಿ ಮಹಿಳೆಯರನ್ನು ಪತ್ರಕರ್ತರಾಗಿ ಸಬಲರನ್ನಾಗಿಸುವ ಕೆಲಸ, ಅವರು ಸರ್ಕಾರಗಳನ್ನು ಉತ್ತರದಾಯಿಗಳನ್ನಾಗಿ ಹಿಡಿಯುವ ಸಾಮರ್ಥ್ಯಗಳಿಸಿಕೊಳ್ಳುವ ಕೆಲಸ ಮಾಡಿದ್ದೇವೆ.

ಇಂತಹ ಸ್ತ್ರೀವಾದಿ ತಳಮಟ್ಟದ ಮಾಧ್ಯಮವನ್ನು ಉಳಿಸಿಕೊಳ್ಳವುದು ಸುಲಭವಲ್ಲ. 23 ವರ್ಷ ಉಳಿದಿದ್ದೇವೆ ಎಂದರೆ ನಾವು ಸಮಯಕ್ಕೆ ತಕ್ಕಂತೆ ಬದಲಾಗಿದ್ದೇವೆ ಪ್ರಯೋಗಳನ್ನು ಮಾಡಿದ್ದೇವೆ ಎಂದರ್ಥ. ನಾವು ಡಿಜಿಟಲೀಕರಣ ಆದೆವು, ಸಂಶೋಧನಾ ವಿಭಾಗ ಆರಂಭಿಸಿದೆವು. ಸಾಕ್ಷರತಾ ಕಾರ್ಯಕ್ರಮವಾಗಿ ಆರಂಭವಾಗಿ, ಪ್ರಪಂಚ ಮಟ್ಟದಲ್ಲಿ ಗುರುತಿಸಲ್ಪಡುವ ಮಾಧ್ಯಮವಾಗಿ ಬೆಳೆದಿರುವುದು, ವೈವಿಧ್ಯಮಯವಾದ ದನಿಗಳನ್ನು ಮುನ್ನೆಲೆಗೆ ತಂದಿರುವುದು, ನಾಲ್ಕು ರಾಜ್ಯಗಳಲ್ಲಿ ತಳಮಟ್ಟದ ಸುದ್ದಿಗಳನ್ನು ಹೊರತಂದಿರುವುದು, ಸಿನೆಮಾಗಳನ್ನು ಮಾಡಿರುವುದು ನಮ್ಮ ವಿಶೇಷ” ಎಂದು ಪ್ರಿಯಾ ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೇರೆ ಮಾಧ್ಯಮಗಳಿಗೆ ಹೋಲಿಸಿದರೆ ಡಿಜಿಟಲ್ ಮಾಧ್ಯಮ ಸತ್ಯ ತಿಳಿಸುತ್ತದೆ – ಸಿಎಂ ಸಿದ್ದರಾಮಯ್ಯ

ಬೇರೆ ಮಾಧ್ಯಮಗಳಿಗೆ ಹೋಲಿಸಿದರೆ ಡಿಜಿಟಲ್ ಮಾಧ್ಯಮ ಸತ್ಯ ತಿಳಿಸುತ್ತದೆ – ಸಿಎಂ ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...