Homeಮುಖಪುಟಎರಡು ಹಂತದ ತೆರಿಗೆ ರಚನೆಗೆ ಜಿಎಸ್‌ಟಿ ಮಂಡಳಿ ಅನುಮೋದನೆ: ಸೆ. 22ರಿಂದ ಜಾರಿ; ಪ್ರತಿಪಕ್ಷಗಳಿಂದ ಮಿಶ್ರ...

ಎರಡು ಹಂತದ ತೆರಿಗೆ ರಚನೆಗೆ ಜಿಎಸ್‌ಟಿ ಮಂಡಳಿ ಅನುಮೋದನೆ: ಸೆ. 22ರಿಂದ ಜಾರಿ; ಪ್ರತಿಪಕ್ಷಗಳಿಂದ ಮಿಶ್ರ ಪ್ರತಿಕ್ರಿಯೆ

- Advertisement -
- Advertisement -

ಮಹತ್ವದ ಬದಲಾವಣೆ ಎಂಬಂತೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ಬುಧವಾರ (ಸೆ.3) ಶೇಕಡ 5 ಮತ್ತು ಶೇಕಡ 18 ದರಗಳೊಂದಿಗೆ ಸರಳೀಕೃತ ಎರಡು ಹಂತದ ತೆರಿಗೆ ರಚನೆಯನ್ನು ಅನುಮೋದಿಸಿದೆ. ಬದಲಾದ ತೆರಿಗೆ ವ್ಯವಸ್ಥೆ ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ.

10 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಜಿಎಸ್‌ಟಿ ಮಂಡಳಿಯ 56ನೇ ಮ್ಯಾರಥಾನ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. “ನಾವು ಸ್ಲ್ಯಾಬ್‌ಗಳನ್ನು ಕಡಿಮೆ ಮಾಡಿದ್ದೇವೆ. ಕೇವಲ ಎರಡು ಸ್ಲ್ಯಾಬ್‌ಗಳು ಮಾತ್ರ ಇರುತ್ತವೆ ಮತ್ತು ಪರಿಹಾರ ಸೆಸ್‌ನ ಸಮಸ್ಯೆಗಳನ್ನು ಕೂಡ ನಾವು ಬಗೆಹರಿಸುತ್ತಿದ್ದೇವೆ” ಎಂದು 56ನೇ ಜಿಎಸ್‌ಟಿ ಮಂಡಳಿ ಸಭೆಯ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

“ಈ ಸುಧಾರಣೆಗಳನ್ನು ಸಾಮಾನ್ಯ ಜನರ ಮೇಲೆ ಕೇಂದ್ರೀಕರಿಸಿ ಕೈಗೊಳ್ಳಲಾಗಿದೆ. ಸಾಮಾನ್ಯ ಜನರ ದಿನನಿತ್ಯದ ಬಳಕೆಯ ವಸ್ತುಗಳ ಮೇಲಿನ ಪ್ರತಿಯೊಂದು ತೆರಿಗೆಯನ್ನು ತೀವ್ರ ಪರಿಶೀಲನೆಗೆ ಒಳಪಡಿಸಲಾಗಿದೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ದರಗಳು ತೀವ್ರವಾಗಿ ಇಳಿದಿವೆ. ಕಾರ್ಮಿಕ-ತೀವ್ರ ಕೈಗಾರಿಕೆಗಳಿಗೆ ಉತ್ತಮ ಬೆಂಬಲ ನೀಡಲಾಗಿದೆ. ರೈತರು, ಕೃಷಿ ವಲಯ ಹಾಗೂ ಆರೋಗ್ಯ ವಲಯವು ಪ್ರಯೋಜನ ಪಡೆಯಲಿದೆ. ಆರ್ಥಿಕತೆಯ ಪ್ರಮುಖ ಚಾಲಕರಿಗೆ ಪ್ರಾಮುಖ್ಯತೆ ನೀಡಲಾಗಿದೆ” ಎಂದು ಸೀತಾರಾಮನ್ ಹೇಳಿದ್ದಾರೆ.

ಬದಲಾದ ಜಿಎಸ್‌ಟಿ ದರಗಳು

ಹಾಲು ಮತ್ತು ಡೈರಿ ಉತ್ಪನ್ನಗಳು: ಯುಹೆಚ್‌ಟಿ ಹಾಲು- ಶೂನ್ಯ ತೆರಿಗೆ ಅಥವಾ ತೆರಿಗೆ ಮುಕ್ತ ಹಿಂದಿದ ದರ ಶೇ. 5. ಮಂದಗೊಳಿಸಿದ ಹಾಲು, ಬೆಣ್ಣೆ, ತುಪ್ಪ, ಪನೀರ್, ಚೀಸ್ – ಶೇ. 5 ಅಥವಾ ಶೂನ್ಯ ಹಿಂದಿನ ದರ ಶೇ. 12

ಪ್ರಧಾನ ಆಹಾರಗಳು: ಮಾಲ್ಟ್, ಪಿಷ್ಟಗಳು, ಪಾಸ್ತಾ, ಕಾರ್ನ್‌ಫ್ಲೇಕ್‌, ಬಿಸ್ಕತ್ತು, ಚಾಕೊಲೇಟ್‌, ಕೋಕೋ ಉತ್ಪನ್ನಗಳು- ಶೇ. 5 ಹಿಂದಿನ ದರ ಶೇ. 12 ರಿಂದ 18

ಡ್ರೈ ಫ್ರೂಟ್ಸ್ ಅಂಡ್ ನಟ್ಸ್ : ಬಾದಾಮಿ, ಪಿಸ್ತಾ, ಹ್ಯಾಝೆಲ್‌ನಟ್ಸ್, ಗೋಡಂಬಿ, ಖರ್ಜೂರ- ಶೇ.5 ಹಿಂದಿನ ದರ ಶೇ. 12

ಸಕ್ಕರೆ ಮತ್ತು ಮಿಠಾಯಿ: ಸಂಸ್ಕರಿಸಿದ ಸಕ್ಕರೆ, ಸಕ್ಕರೆ ಪಾಕಗಳು, ಟಾಫಿಗಳು, ಕ್ಯಾಂಡಿ-ಶೇ. 5 ಹಿಂದಿನ ದರ ಹೆಚ್ಚು ಇತ್ತು.

ಇತರ ಪ್ಯಾಕ್ ಮಾಡಿದ ಆಹಾರಗಳು: ಸಸ್ಯಜನ್ಯ ಎಣ್ಣೆಗಳು, ಪ್ರಾಣಿಗಳ ಕೊಬ್ಬು, ಖಾದ್ಯ ಸ್ಪ್ರೆಡ್‌ಗಳು, ಸಾಸೇಜ್‌ಗಳು, ಸಿದ್ದ ಮಾಂಸ, ಮೀನು ಉತ್ಪನ್ನಗಳು, ಮಾಲ್ಟ್ ಸಾರ ಆಧಾರಿತ ಆಹಾರಗಳು- ಶೇ. 5

ನಮ್ಕೀನ್‌ಗಳು ಮತ್ತು ಇತರ ಸಮಾನ ಸಿದ್ದ ಆಹಾರಗಳು : ನಮ್ಕೀನ್ ಭುಜಿಯಾ, ಮಿಕ್ಚರ್, ಚಬೆನಾ (ಶೇಂಗಾ ಅಥವಾ ಹುರಿದ ಕಡಲೆ ಹೊರತುಪಡಿಸಿ ಮುನ್ಸೂಚನೆಯಂತೆ ಪ್ಯಾಕ್ ಮಾಡಲ್ಪಟ್ಟ ಹಾಗೂ ಲೇಬಲ್ ಹಾಕಲ್ಪಟ್ಟ ಆಹಾರ ಪದಾರ್ಥಗಳು)- ಶೇ. 5 ಹಿಂದಿನ ತೆರಿಗೆ ಶೇ. 18

ನೀರು: ನೈಸರ್ಗಿಕ/ಕೃತಕ ಖನಿಜಯುಕ್ತ ನೀರು, ಎರೆಟೆಡ್ ವಾಟರ್ (ಸಕ್ಕರೆ ಅಥವಾ ಸುವಾಸನೆ ಸೇರಿಸದೆ)- ಶೇ. 5 ಹಿಂದಿನ ದರ ಶೇ. 18

ರಸಗೊಬ್ಬರಗಳು: ಶೇ. 5 ಹಿಂದಿನ ದರ ಶೇ. 12 ಅಥವಾ ಶೇ. 18

ಬೀಜಗಳು ಮತ್ತು ಬೆಳೆ ಪೋಷಕಾಂಶಗಳು: ಶೇ. 5 ಹಿಂದಿನ ದರ ಶೇ.12)

ಜೀವರಕ್ಷಕ ಔಷಧಗಳು, ಆರೋಗ್ಯ ಉತ್ಪನ್ನಗಳು, ವೈದ್ಯಕೀಯ ಸಾಧನಗಳು: ಶೇ. 12/18 ರಿಂದ ಶೇ. 5 ಅಥವಾ ಶೂನ್ಯ

ವಿದ್ಯುತ್ ಉಪಕರಣಗಳು (ಪ್ರವೇಶ ಮಟ್ಟದ, ಸಾಮೂಹಿಕ ಬಳಕೆ): ಶೇ. 28 ರಿಂದ ಶೇ. 18ವರೆಗೆ

ಪಾದರಕ್ಷೆಗಳು ಮತ್ತು ಜವಳಿ (ಸಾಮೂಹಿಕ ಮಾರುಕಟ್ಟೆ): ಶೇ. 12 ರಿಂದ ಶೇ. 5ವರೆಗೆ

ಅಧಿಕ ತೆರಿಗೆ ದರದಲ್ಲೇ ಉಳಿದಿರುವ ವಸ್ತುಗಳು : ಪಾನ್ ಮಸಾಲಾ, ಗುಟ್ಕಾ, ಸಿಗರೇಟ್, ಚೂಯಿಂಗ್ ಟೊಬ್ಯಾಕೋ, ಜರ್ದಾ, ಅನ್‌ ಮ್ಯಾನ್ಯುಫ್ಯಾಕ್ಚರ್ಡ್ ಟೊಬ್ಯಾಕೋ, ಬೀಡಿ

ಸಕ್ಕರೆ ಅಥವಾ ಸಿಹಿಕಾರಕಗಳು/ಸುವಾಸನೆಯೊಂದಿಗೆ ಸೇರಿಸಿದ ಸರಕುಗಳು (ಎರೆಟೆಡ್ ವಾಟರ್): ಶೇ. 28ರಿಂದ  ಶೇ. 40ವರೆಗೆ.

ಸಿನ್ ಅಂಡ್ ಲಕ್ಸುರಿ ಗೂಡ್ಸ್ (ಸಿಗರೇಟ್‌ಗಳು, ಪ್ರೀಮಿಯಂ ಮದ್ಯ, ಉನ್ನತ ದರ್ಜೆಯ ಕಾರುಗಳು) ಶೇ. 40

ಆಮದು ಮಾಡಿಕೊಂಡ ಶಸ್ತ್ರಸಜ್ಜಿತ ಐಷಾರಾಮಿ ಸೆಡಾನ್‌ಗಳು

ಗಮನಾರ್ಹ ಬದಲಾವಣೆಗಳು

ಜಿಎಸ್‌ಟಿ ವಿನಾಯಿತಿ: ಅಲ್ಟ್ರಾ-ಹೈ ಟೆಂಪರೇಚರ್ (ಯುಹೆಚ್‌ಟಿ) ಹಾಲು, ಪೂರ್ವ-ಪ್ಯಾಕೇಜ್ ಮಾಡಿದ ಮತ್ತು ಲೇಬಲ್ ಮಾಡಿದ ಚೆನ್ನಾ/ಪನೀರ್, ಎಲ್ಲಾ ಭಾರತೀಯ ಬ್ರೆಡ್‌ಗಳು (ಚಪಾತಿ, ರೊಟ್ಟಿ, ಪರಾಠ, ಪರೋಟ್ಟಾ, ಇತ್ಯಾದಿ), ಎಲ್ಲಾ ವೈಯಕ್ತಿಕ ಜೀವ ವಿಮಾ ಪಾಲಿಸಿಗಳಿಗೆ (ಟರ್ಮ್ ಲೈಫ್, ಯುಲಿಪ್, ದತ್ತಿ) ಮತ್ತು ಮರುವಿಮೆ.

ಪಾನ್ ಮಸಾಲಾ, ತಂಬಾಕು ಉತ್ಪನ್ನಗಳ ಮೌಲ್ಯಮಾಪನ ವಿಧಾನವನ್ನು ವಹಿವಾಟು ಮೌಲ್ಯದಿಂದ ಚಿಲ್ಲರೆ ಮಾರಾಟ ಬೆಲೆಗೆ (ಆರ್‌ಎಸ್‌ಪಿ) ಬದಲಾಯಿಸಲಾಗಿದೆ.

ಪ್ರತಿಪಕ್ಷಗಳಿಂದ ಮಿಶ್ರ ಪ್ರತಿಕ್ರಿಯೆ

ಜಿಎಸ್‌ಟಿ ದರಗಳ ಬದಲಾವಣೆಯ ಮಹತ್ವದ ನಿರ್ಧಾರದ ಕುರಿತು ಪ್ರತಿಪಕ್ಷಗಳು ಮಿಶ್ರ ಪ್ರತಿಕ್ರಿಯೆ ನೀಡಿವೆ.

ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ನ ವಕ್ತಾರ ಜೈರಾಮ್ ರಮೇಶ್ ಪ್ರತಿಕ್ರಿಯಿಸಿ, “ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬಹಳ ಹಿಂದಿನಿಂದಲೂ ಜಿಎಸ್‌ಟಿ 2.0ಗಾಗಿ ಬೇಡಿಕೆ ಮುಂದಿಡುತ್ತಲೇ ಬಂದಿತ್ತು. ಏಕೆಂದರೆ, ಇದು ಜಿಎಸ್‌ಟಿ ದರವನ್ನು ಕಡಿಮೆ ಮಾಡುತ್ತದೆ, ಸಾಮೂಹಿಕ ಬಳಕೆಯ ವಸ್ತುಗಳ ಮೇಲಿನ ದರಗಳನ್ನು ಕಡಿತಗೊಳಿಸುತ್ತದೆ, ತಪ್ಪು ವರ್ಗೀಕರಣ ಮತ್ತು ವಿವಾದಗಳನ್ನು ಕಡಿಮೆ ಮಾಡುತ್ತದೆ, ತಲೆಕೆಳಗಾದ ಸುಂಕ ರಚನೆಯನ್ನು ತೆಗೆದುಹಾಕುತ್ತದೆ (ಇನ್‌ಪುಟ್‌ಗಳಿಗೆ ಹೋಲಿಸಿದರೆ ಉತ್ಪಾದನೆಯ ಮೇಲೆ ಕಡಿಮೆ ತೆರಿಗೆ), ಎಂಎಸ್‌ಎಂಇಳ ಮೇಲಿನ ಅನುಸರಣೆ ಹೊರೆಯನ್ನು ಸರಾಗಗೊಳಿಸುತ್ತದೆ ಮತ್ತು ಜಿಎಸ್‌ಟಿ ವ್ಯಾಪ್ತಿಯನ್ನು ವಿಸ್ತರಿಸುತ್ತದೆ” ಎಂದಿದ್ದಾರೆ.

ಮುಂದುವರಿದು, “ಸಾಂವಿಧಾನಿಕ ಸಂಸ್ಥೆಯಾದ ಜಿಎಸ್‌ಟಿ ಮಂಡಳಿಯ ಸಭೆಯ ನಂತರ ಕೇಂದ್ರ ಹಣಕಾಸು ಸಚಿವರು ನಿನ್ನೆ ಸಂಜೆ ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಆದಾಗ್ಯೂ, ಜಿಎಸ್‌ಟಿ ಮಂಡಳಿಯ ಸಭೆಗೂ ಮೊದಲೇ, ಪ್ರಧಾನ ಮಂತ್ರಿಗಳು ಆಗಸ್ಟ್ 15, 2025ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಅದರ ನಿರ್ಧಾರಗಳ ಸಾರವನ್ನು ಘೋಷಿಸಿದ್ದರು. ಹಾಗಾದರೆ, ಜಿಎಸ್‌ಟಿ ಮಂಡಳಿಗೆ ಬೆಲೆ ಇಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

ಖಾಸಗಿ ಉಪಭೋಗದಲ್ಲಿ ಚುರುಕು ಕಾಣಿಸದಿರುವುದು, ಖಾಸಗಿ ಹೂಡಿಕೆಯಲ್ಲಿ ನಿಧಾನಗತಿಯಿರುವುದು ಮತ್ತು ವ್ಯಾಪಕವಾಗಿ ನಡೆಯುತ್ತಿರುವ ವರ್ಗೀಕರಣದ ತರ್ಕಾತ್ಮಕ ವಾದಗಳಿಂದ ನಲುಗಿರುವ ಸ್ಥಿತಿಯಲ್ಲಿ, ಕೇಂದ್ರ ಹಣಕಾಸು ಸಚಿವರು ಕೊನೆಗೂ ಜಿಎಸ್‌ಟಿ 1.0 (ಮೊದಲ ಹಂತದ ಜಿಎಸ್‌ಟಿ)ಮಾರ್ಗದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ವಾಸ್ತವವಾಗಿ, ಜಿಎಸ್‌ಟಿ 1.0 ರ ವಿನ್ಯಾಸವೇ ದೋಷಪೂರಿತವಾಗಿತ್ತು ಮತ್ತು ಜುಲೈ 2017 ರಲ್ಲಿಯೇ ಕಾಂಗ್ರೆಸ್ ಅದನ್ನು ಎತ್ತಿ ತೋರಿಸಿತ್ತು. ಪ್ರಧಾನಿ ತಮ್ಮ ವಿಶಿಷ್ಟವಾದ ಬದಲಾವಣೆಯಾಗಿ ಜಿಎಸ್‌ಟಿ ಪರಿಚಯಿಸಲು ನಿರ್ಧರಿಸಿದಾಗ, ಅದು ಉತ್ತಮ ಮತ್ತು ಸರಳ ತೆರಿಗೆಯಾಗಬೇಕಿತ್ತು. ಆದರೆ, ಅದು ಬೆಳವಣಿಗೆಯನ್ನು ನಿಗ್ರಹಿಸುವ ತೆರಿಗೆಯಾಗಿ ಪರಿಣಮಿಸಿತು” ಎಂದಿದ್ದಾರೆ.

ನಿನ್ನೆ ಸಂಜೆ ಹಣಕಾಸು ಸಚಿವರು ಮಾಡಿದ ಘೋಷಣೆಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿವೆ. ಏಕೆಂದರೆ ಪ್ರಧಾನಮಂತ್ರಿ ಈಗಾಗಲೇ ದೀಪಾವಳಿಗೆ ಮೊದಲ ಗಡುವನ್ನು ನಿಗದಿಪಡಿಸಿದ್ದರು. ಇನ್ನು ನಿಜವಾದ ‘ಜಿಎಸ್‌ಟಿ 2.0’ ವ್ಯವಸ್ಥೆಯ ನಿರೀಕ್ಷೆ ಇನ್ನೂ ಮುಂದುವರೆದಿದೆ. ಈ ಹೊಸ ಮಾರ್ಪಡಿಸಿದ ವ್ಯವಸ್ಥೆಯನ್ನು ‘ಜಿಎಸ್‌ಟಿ 1.5 ಎಂದು ಕರೆಯಬಹುದು. ಇದೂ ಕೂಡ ಖಾಸಗಿ ಹೂಡಿಕೆಯನ್ನು—ವಿಶೇಷವಾಗಿ ತಯಾರಿಕಾ ಕ್ಷೇತ್ರದಲ್ಲಿ ಬದಲಾವಣೆ ತರಬಲ್ಲದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅದೇ ರೀತಿ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲಿನ ಭಾರವನ್ನು ಕಡಿಮೆ ಮಾಡುತ್ತದೆಯೇ? ಎಂಬುದಕ್ಕೆ ಕಾಲವೇ ಉತ್ತರಿಬೇಕಿದೆ. ಇದಲ್ಲದೆ, ತಮ್ಮ ಆದಾಯವನ್ನು ಸಂಪೂರ್ಣವಾಗಿ ರಕ್ಷಿಸಲು ಇನ್ನೂ ಐದು ವರ್ಷಗಳವರೆಗೆ ಪರಿಹಾರವನ್ನು ವಿಸ್ತರಿಸುವಂತೆ ರಾಜ್ಯಗಳು ಬೇಡಿಕೆ ಇಟ್ಟಿವೆ. ಆ ಬೇಡಿಕೆಯನ್ನು ಈಡೇರಿಸುವುದು ನಿಜವಾದ ಒಕ್ಕೂಟ ವ್ಯವಸ್ಥೆಯಾಗಿದೆ. ಇದೀಗ ಜಿಎಸ್‌ಟಿ ದರ ಬದಲಾವಣೆಯೊಂದಿಗೆ ರಾಜ್ಯಗಳ ಬೇಡಿಕೆ ಇನ್ನೂ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಹಣಕಾಸು ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರು, ಜಿಎಸ್‌ಟಿ ದರ ಬದಲಾವಣೆಯಿಂದ ಒಟ್ಟು 47,700 ಕೋಟಿ ರೂಪಾಯಿ ಆದಾಯ ನಷ್ಟ ಉಂಟಾಗುವ ನಿರೀಕ್ಷೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಈ ನಿರ್ಧಾರದ ಬಗ್ಗೆ ಮಾತನಾಡಿ, “ಜಿಎಸ್‌ಟಿ ದರ ಬದಲಾವಣೆಯ ಕುರಿತು ಎಲ್ಲಾ ರಾಜ್ಯಗಳು ಒಮ್ಮತದ ಆಧಾರದ ಮೇಲೆ ಒಪ್ಪಿಗೆ ನೀಡಿವೆ. ಇದು ಸಂಪೂರ್ಣ ಒಮ್ಮತದ ನಿರ್ಧಾರ” ಎಂದಿದ್ದಾರೆ.

ಮಣಿಪುರಕ್ಕೆ ಪ್ರಧಾನಿ ಭೇಟಿ: 29 ತಿಂಗಳ ನಂತರದ ಮೊದಲ ಹೆಜ್ಜೆ, ‘ವಿಳಂಬದ ನಡೆ’ ಎಂದ ಕಾಂಗ್ರೆಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭೆಯ 37 ಸ್ಥಾನಗಳಿಗೆ ಚುನಾವಣೆ; 26 ಅಭ್ಯರ್ಥಿಗಳು ಅವಿರೋಧ ಆಯ್ಕೆ

ಹತ್ತು ರಾಜ್ಯಗಳ 37 ಸ್ಥಾನಗಳನ್ನು ಒಳಗೊಂಡ ದ್ವೈವಾರ್ಷಿಕ ರಾಜ್ಯಸಭಾ ಚುನಾವಣೆಗೆ ಸೋಮವಾರ (ಮಾ.16) ಮತದಾನ ನಡೆಯುತ್ತಿದೆ. ಬಿಹಾರ, ಒಡಿಶಾ ಮತ್ತು ಹರಿಯಾಣದಲ್ಲಿ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇದ್ದು, 26 ಅಭ್ಯರ್ಥಿಗಳು ಈಗಾಗಲೇ...

ಒಡಿಶಾ | ಆಸ್ಪತ್ರೆಯಲ್ಲಿ ಬೆಂಕಿ ಅವಘಡ : 10 ಮಂದಿ ಸಾವು

ಒಡಿಶಾದ ಕಟಕ್‌ನಲ್ಲಿರುವ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಟ್ರಾಮಾ ಕೇರ್ ಐಸಿಯುನಲ್ಲಿ ಸೋಮವಾರ (ಮಾರ್ಚ್ 16) ಬೆಂಕಿ ಅವಘಡ ಸಂಭವಿಸಿದ್ದು, ಕನಿಷ್ಠ 10 ರೋಗಿಗಳು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು...

ಆಸ್ಕರ್‌ 2026 : ಮೈಕೆಲ್ ಬಿ. ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ, ಒನ್ ಬ್ಯಾಟಲ್ ಆಫ್ಟರ್ ಅನದರ್‌ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ

ಪ್ರತಿಷ್ಠಿತ 98ನೇ ಅಕಾಡೆಮಿ ಪ್ರಶಸ್ತಿ (ಆಸ್ಕರ್ 2026) ಸಮಾರಂಭ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಮಾರ್ಚ್ 15ರಂದು (ಭಾರತೀಯ ಕಾಲಮಾನ ಮಾರ್ಚ್ 16) ನಡೆಯಿತು. ಖ್ಯಾತ ಹಾಸ್ಯನಟ ಕೋನನ್ ಒಬ್ರೇನ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು....

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ; ಬಂಗಾಳದಲ್ಲಿ ಮಾತ್ರ ಎರಡು ಹಂತದ ಮತದಾನ

ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗದ (ಇಸಿಐ) ಮುಖ್ಯಸ್ಥರಾದ ಜ್ಞಾನೇಶ್ ಕುಮಾರ್ ಪ್ರಕಟಿಸಿದರು. ದೆಹಲಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ...

ಫ್ಲಿಪ್‌ಕಾರ್ಟ್‌ನಿಂದ 1 ರೂ.ಗೆ ಹಾಲು ಮಾರಾಟ; ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಬಮುಲ್‌ ಆಗ್ರಹ

ಫ್ಲಿಪ್‌ಕಾರ್ಟ್‌ ಸಂಸ್ಥೆಯು ಆನ್‌ಲೈನ್‌ ಮೂಲಕ 1 ರೂ.ಗೆ ಲೀಟರ್‌ ಹಾಲನ್ನು ಮಾರಾಟ ಮಾಡಿರುವುದು ಭಾರಿ ಜನಾಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ, ಬೆಂಗಳೂರು ನಗರ, ಗ್ರಾಮೀಣ ಮತ್ತು ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ...

“ಮಕ್ಕಳ ಹಂತಕನನ್ನು ಹುಡುಕಿ ಹತ್ಯೆ ಮಾಡುತ್ತೇವೆ” : ನೆತನ್ಯಾಹು ಸುರಕ್ಷಿತವಾಗಿದ್ದಾರೆ ಎಂಬ ಇಸ್ರೇಲ್ ಸ್ಪಷ್ಟನೆ ಬೆನ್ನಲ್ಲೆ ಐಆರ್‌ಜಿಸಿ ಹೇಳಿಕೆ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹುಡುಕಿ ಹತ್ಯೆ ಮಾಡುತ್ತೇವೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಹೇಳಿರುವುದಾಗಿ ವರದಿಯಾಗಿದೆ. ನೆತನ್ಯಾಹು ಅವರ ಹತ್ಯೆಯ ವದಂತಿಗಳನ್ನು ಇಸ್ರೇಲ್ ನಿರಾಕರಿಸಿದ ಬೆನ್ನಲ್ಲೇ, ಐಆರ್‌ಜಿಸಿ ಈ...

ಮಹಾರಾಷ್ಟ್ರ| ಇಫ್ತಾರ್ ಕೂಟಕ್ಕೆ ಸೇರಿದ್ದ ಮುಸ್ಲಿಮರ ಮೇಲೆ ಹಿಂದುತ್ವವಾದಿ ಗುಂಪಿನಿಂದ ದಾಳಿ

ರಂಜಾನ್‌ ಮಾಸದ ಉಪವಾಸ ಮುರಿಯಲು ನೆರೆದಿದ್ದ ಜನರ ಮೇಲೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ದಾಳಿ ನಡೆಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇಫ್ತಾರ್ ಕೂಟಕ್ಕೆ ಸಿದ್ಧತೆ ನಡೆಸುತ್ತಿದ್ದಾಗ, ಸುಮಾರು 100 ಕ್ಕೂ ಹೆಚ್ಚು...

ಆಸ್ಕರ್‌ ಅಂತಿಮ ಪಟ್ಟಿಗೆ ಆಯ್ಕೆಯಾದ ‘ದಿ ವಾಯ್ಸ್ ಆಫ್ ಹಿಂದ್ ರಜಬ್’

ಗಾಝಾದ ಆರು ವರ್ಷದ ಬಾಲಕಿ ಹಿಂದ್ ರಜಬ್‌ ಮತ್ತು ಆಕೆಯ ಸಂಬಂಧಿಕರನ್ನು ಇಸ್ರೇಲಿ ಸೈನಿಕರು ಭೀಕರವಾಗಿ ಹತ್ಯೆ ಮಾಡಿದ ಕಥೆಯನ್ನು ಹೇಳುವ 'ದಿ ವಾಯ್ಸ್ ಆಫ್ ಹಿಂದ್ ರಜಬ್' ಚಲನಚಿತ್ರವು 2026ರ ಆಸ್ಕರ್...

ಉತ್ತರ ಪ್ರದೇಶ| ದಲಿತ ಕುಟುಂಬದ ಮದುವೆ ಮನೆಯಲ್ಲಿ ಸವರ್ಣಿಯರಿಂದ ಹಲ್ಲೆ; ಬಂದೂಕಿನಿಂದ ಬೆದರಿಕೆ

ಮಾರ್ಚ್ 10 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಟಿಕುನಿಯಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಜಾತಿ ಆಧಾರಿತ ಹಿಂಸಾಚಾರದ ತೀವ್ರ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. 24 ಗಂಟೆಗಳ ಒಳಗೆ ಎಫ್‌ಐಆರ್...

’70 ಲಕ್ಷ ಬಂಗಾಳಿ ಮುಸ್ಲಿಮರನ್ನು ಹೊರದಬ್ಬಲು ಸಾಧ್ಯವಿಲ್ಲ..ಅವರೇ ದೇಶ ಬಿಡುವಂತಹ ಪರಿಸ್ಥಿತಿ ಸೃಷ್ಟಿಸುತ್ತೇವೆ’: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಸುಮಾರು 70 ಲಕ್ಷ 'ಬಂಗಾಳಿ ಮುಸ್ಲಿಮರ'ನ್ನು ಭಾರತದಿಂದ ಹೊರಹಾಕುವುದು 'ಮಾನವೀಯವಾಗಿ ಸಾಧ್ಯವಿಲ್ಲ'. ಹಾಗಾಗಿ, ಅವರಾಗಿಯೇ ದೇಶ ತೊರೆಯುವಂತಹ ಪರಿಸ್ಥಿತಿಯನ್ನು ನಾವು ಸೃಷ್ಟಿಸುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಈ...