Homeಅಂಕಣಗಳುಕರ್ತಾರ್‍ಪುರ್ ಕಾರಿಡಾರ್: ಭಾರತ-ಪಾಕ್ ನಡುವೆ ಸಿಖ್ ಧಾರ್ಮಿಕ ಸೇತು

ಕರ್ತಾರ್‍ಪುರ್ ಕಾರಿಡಾರ್: ಭಾರತ-ಪಾಕ್ ನಡುವೆ ಸಿಖ್ ಧಾರ್ಮಿಕ ಸೇತು

- Advertisement -
- Advertisement -

ಲೇಖಕರು: ಆರ್ತಿ ಗಾರ್ಗಿ |

28ನೇ ನವೆಂಬರ್, ಬುಧವಾರ. ‘ಜೋ ಬೋಲೆ ಸೊ ನಿಹಾಲ್, ಸತ್ ಸ್ರೀ ಅಕಾಲ್’ ಎಂಬ ಘೋಷಣೆಗಳೊಂದಿಗೆ ನೂರಾರು ಸಿಖ್ ಯಾತ್ರಿಕರು ಕರ್ತಾರಪುರದ ಪುಣ್ಯಕ್ಷೇತ್ರದೆಡೆಗೆ ಒಟ್ಟಿಗೆ ಹೆಜ್ಜೆ ಹಾಕುತ್ತಿದ್ದರು. ದೇಶವಿಭಜನೆಯ ನಂತರ ಮೊಟ್ಟಮೊದಲ ಬಾರಿ ಭಾರತದ ಸಿಖ್ಖರು (ಭಾರತದಲ್ಲಿರುವ) ಡೇರಾ ನಾನಕ್ ಸಾಹಿಬ್‍ದಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದ, ಪಾಕಿಸ್ತಾನದ ಕರ್ತಾರಪುರ ಸಾಹಿಬ್ ಗುರುದ್ವಾರದೆಡೆಗೆ ಹೋಗುತ್ತಿದ್ದರು. ಫತೆಹ್‍ಗಢ್ ಚೂರಿಯಾ ಗ್ರಾಮದ 65 ವರ್ಷದ ಸಿಖ್ ವ್ಯಕ್ತಿ, ಭಾರತ-ಪಾಕಿಸ್ತಾನದ ಗಡಿಯನ್ನು ದಾಟಿದ ಮೊದಲ ಕೆಲವರಲ್ಲಿ ಒಬ್ಬರು, “ಕೊನೆಗೂ ಈ ಕರ್ತಾರಪುರ್ ಕಾರಿಡಾರ್‍ನ ಕನಸು ನನಸಾಯಿತು” ಎಂದು ಉತ್ಸಾಹದಿಂದ ಹೇಳಿದರು.
ಇಂತಹ ಅನೇಕ ಸಿಖ್ಖರಿಗೆ ಕರ್ತಾರಪುರ ಕ್ಷೇತ್ರ ಕಣ್ಣಳತೆಯಲ್ಲಿದ್ದರೂ ಕಳೆದ 70 ವರ್ಷಗಳಿಂದ ಒಂದು ದೂರದ ಕನಸಾಗಿಯೇ ಉಳಿದಿತ್ತು. ಬುಧವಾರದಂದು, ಇವರೆಲ್ಲರ ನಿರೀಕ್ಷೆ ಸುಖಾಂತ್ಯ ಕಂಡಿತು.
ಕರ್ತಾರಪುರ್ ಸಾಹಿಬ್, ಏನಿದರ ಕತೆ?
ಜಗತ್ತಿನಾದ್ಯಂತ ಇರುವ ಸಿಖ್ಖರಿಗೆ ಕರ್ತಾರಪುರ್ ಸಾಹಿಬ್ ಗುರುದ್ವಾರ ಭಾರಿ ಪ್ರಾಮುಖ್ಯತೆ ಹೊಂದಿದ ಕ್ಷೇತ್ರವಾಗಿದೆ. ಧರ್ಮಗುರು ಗುರುನಾನಕ್ ಅವರು ತಮ್ಮ ಮೂರು ದಶಕಗಳ ಸುದೀರ್ಘ ತೀರ್ಥಯಾತ್ರೆಯ ನಂತರ ಇದೇ ಜಾಗದಲ್ಲಿ ನೆಲೆಸುವ ನಿರ್ಣಯ ತೆಗೆದುಕೊಂಡಿದ್ದರು. ಇಲ್ಲಿಯೇ ಗುರು ನಾನಕ್ ಅವರು ಕೃಷಿ ಮಾಡುತ್ತ, ಶಾಂತಿಯ ಸಂದೇಶವನ್ನು ಹರಡುತ್ತ ತಮ್ಮ ಕೊನೆಯ ದಿನಗಳನ್ನು ಕಳೆದಿದ್ದು ಎಂದು ನಂಬಲಾಗುತ್ತದೆ. ಇಲ್ಲಿ ಅವರು ತಮ್ಮ ಸಾವಿಗಿಂತ ಮುಂಚೆ 17 ವರ್ಷಗಳನ್ನು ಕಳೆದು, ತಮ್ಮ ಶಿಷ್ಯನಾದ ಭಾಯಿ ಲೆಹ್ನಾ (ಗುರು ಅಂಗದ್) ಅವರನ್ನು ಮುಂದಿನ ಗುರುವಾಗಿ ನೇಮಿಸಿದರು. 1947 ರಲ್ಲಿ ದೇಶವಿಭಜನೆಯಾಗಿ, ಕರ್ತಾರಪುರ ಸಾಹಿಬ್ ಗುರುದ್ವಾರ ಪಾಕಿಸ್ತಾನಕ್ಕೆ ಸೇರಿತು. ಸದ್ಯಕ್ಕೆ ಅಟ್ಟಾರಿ-ವಾಘಾ ಗಡಿಯ ಪಕ್ಕದ ನರೋವಾಲ್ ನಗರದಲ್ಲಿ ಸ್ಥಿತವಾಗಿದೆ.
ಒಬ್ಬರೇ ನಾನಕರಿಗೆ ಒಂದು ಸಮಾಧಿ, ಒಂದು ಗೋರಿ
ಕರ್ತಾರಪುರ ಸಾಹಿಬ್‍ನ ಮುಖ್ಯ ಸಮುಚ್ಚಯ ಗುರು ನಾನಕ್ ಅವರ ಒಂದು ಸಮಾಧಿ ಹಾಗೂ ಒಂದು ಗೋರಿಯನ್ನು ಹೊಂದಿದೆ. ಅದರ ಹಿಂದಿನ ಜನಪದ ಕಥೆ ಇಂತಿದೆ.
ಗುರು ನಾನಕ್ ಅವರ ಸಾವಿನ ನಂತರ ಅವರ ಅಂತ್ಯಕ್ರಿಯೆಯ ವಿಷಯವಾಗಿ, ಅವರ ಹಿಂದೂ ಮತ್ತು ಮುಸ್ಲಿಮ್ ಭಕ್ತರ ನಡುವೆ ವಾಗ್ವಾದ ಶುರುವಾಯಿತು. ಹಿಂದೂ ಭಕ್ತರು ಅವರನ್ನು ದಹನ ಮಾಡಬೇಕು ಎಂದು ಪಟ್ಟುಹಿಡಿದರೆ, ಮುಸ್ಲಿಮರು ಹೂಳಬೇಕೆಂದರು. ವಾದ ವಿವಾದದಲ್ಲಿ ಮಧ್ಯರಾತ್ರಿಯಾದಾಗ, ಮಾರನೇ ದಿನ ಇದನ್ನು ಬಗೆಹರಿಸುವ ಎಂದು ಎರಡೂ ಗುಂಪುಗಳು ನಿರ್ಣಯಿಸಿ ಮಲಗಿದವು. ಆದರೆ, ಬೆಳಗ್ಗೆ ಎದ್ದಾಗ ಅವರಿಗೆ ಕಂಡಿದ್ದು, ಗುರು ನಾನಕ್ ಅವರ ದೇಹವಿಟ್ಟಿದ್ದ ಜಾಗದಲ್ಲಿ ಒಂದು ಹೂವಿನ ದೊಡ್ಡ ರಾಶಿ. ಆಗಲೂ ಒಮ್ಮತಕ್ಕೆ ಬರಲಾಗದ್ದರಿಂದ, ಆ ಹೂವಿನ ರಾಶಿಯನ್ನು ಎರಡೂ ಗುಂಪುಗಳಿಗೆ ವಿಂಗಡಿಸಲಾಯಿತು. ಮುಸ್ಲಿಮ್ ಭಕ್ತಾದಿಗಳು ಅವರಿಗನುಗುಣವಾಗಿ ಅಂತ್ಯಕ್ರಿಯೆ ಮಾಡಿದರೆ, ಹಿಂದೂಗಳು ತಮಗನುಗುಣವಾಗಿ ಮಾಡಿದರು. ಹಾಗಾಗಿ, ಕರ್ತಾರಪುರ್ ಸಾಹಿಬ್‍ನಲ್ಲಿ ಒಂದು ಸಮಾಧಿ ಮತ್ತೊಂದು ಗೋರಿ ಎರಡೂ ಇವೆ.
ಭಾರತ-ಪಾಕಿಸ್ತಾನದ ಗಡಿಯಿಂದ ಬರೀ 1 ಕಿಲೋಮೀಟರ್ ದೂರದಲ್ಲಿರುವ ಪಂಜಾಬಿನ ಡೇರಾ ಬಾಬಾ ನಾನಕ್‍ದಿಂದ ಯಾತ್ರೆ ಪ್ರಾರಂಭವಾಗುತ್ತದೆ. 4-5 ಕಿಲೋಮೋಟರ್ ದೂರದಿಂದ, ಗಡಿಯಲ್ಲಿ ನಿಂತು ಕರ್ತಾರಪುರ್ ಸಾಹಿಬ್ ಸಮುಚ್ಚಯವನ್ನು ಬರಿಗಣ್ಣಿನಿಂದ ನೋಡಬಹದು. ದೇಶವಿಭಜನೆಯ ನಂತರ ಯಾತ್ರಿಗಳು ಬೈನಾಕ್ಯುಲರ್ ಬಳಸಿ ದರ್ಶನ ಪಡೆಯುತ್ತಿದ್ದರು.
ತಮ್ಮ ಅತ್ಯಂತ ಪವಿತ್ರ ಕ್ಷೇತ್ರವು ಗಡಿಯ ಕಾರಣದಿಂದಾಗಿ ಬೇರ್ಪಟ್ಟಿರುವುದು ಸಿಖ್ ಯಾತ್ರಿಗಳಿಗೆ ಒಂದು ನೋವಿನ ವಿಷಯವಾಗಿತ್ತು. ಆದರೆ, ಈ ಸಮಸ್ಯೆಯನ್ನು ಬಗೆಹರಿಸಲು ಎರಡೂ ದೇಶಗಳಿಗೆ ಇಷ್ಟು ದೀರ್ಘ ಸಮಯ ಏಕೆ ಹಿಡಿಯಿತು?
ಇಂದಿರಾ ಗಾಂಧಿಯಿಂದ ಅಟಲ್ ಬಿಹಾರಿ ವಾಜಪೇಯಿವರೆಗೆ
ಒಂದು ತಿಂಗಳ ಹಿಂದೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಔಪಚಾರಿಕವಾಗಿ ಘೋಷಿಸಿದ ಈ ಕರ್ತಾರಪುರ್ ಕಾರಿಡಾರ್ ಅನ್ನು ಈ ಹಿಂದೆ ಪ್ರಸ್ತಾಪಿಸಿದ್ದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಉಭಯದೇಶಗಳ ನಡುವಿನ ಐತಿಹಾಸಿಕ ಬಸ್ ಡಿಪ್ಲೊಮಸಿಯ ಸಂದರ್ಭದಲ್ಲಿ ಇದನ್ನು ಹೇಳಿದ್ದರು. ಪಾಕಿಸ್ತಾನವೂ ವಿಸಾ ಅಥವಾ ಪಾಸ್‍ಪೋರ್ಟ್ ಇಲ್ಲದೇ ಯಾತ್ರಿಗಳಿಗೆ ಈ ಕ್ಷೇತ್ರಕ್ಕೆ ಭೇಟಿ ನೀಡಲು ಒಂದು ಸೇತುವೆಯನ್ನು ನಿರ್ಮಿಸಲು ಒಪ್ಪಿಕೊಂಡಿತ್ತು. ಆದರೆ, ಎರಡೂ ದೇಶಗಳ ನಡುವಿನ ಶಾಂತಿ ಹೆಚ್ಚುಕಾಲ ಉಳಿಯಲಿಲ್ಲ. ಗಡಿಪ್ರದೇಶದಲ್ಲಾದ ಚಟುವಟಿಕೆಗಳಿಂದ ಕಾರ್ಗಿಲ್ ಯುದ್ಧವೇ ಆಯಿತು. ಈ ಬೆಳವಣಿಗೆ ಕಾರಿಡಾರ್‍ನ ಮಾತುಕತೆಗಳನ್ನು ಕೊನೆಗಾಣಿಸಿತು. ವಾಜಪೇಯಿ ಅವರ ಶಾಂತಿ ಉಪಕ್ರಮದ ಅಂಗವಾಗಿ ಮಾಡಿದ ಲಾಹೋರ್ ಪ್ರಯಾಣದಲ್ಲಿ ಕರ್ತಾರಪುರ್ ಕಾರಿಡಾರಿನ ಮೊದಲ ಪ್ರಸ್ತಾಪ ಸಿಗುತ್ತಾದರೂ, 1869 ರಲ್ಲೇ ಈ ವಿಷಯ ಭಾರತೀಯ ಸರಕಾರದ ಗಮನ ಸೆಳೆದಿತ್ತು.
1969 ಗುರು ನಾನಕ್ ಅವರ 500 ನೇ ಜನ್ಮಶತಾಬ್ದಿಯ ವರ್ಷವಾಗಿತ್ತು. ಅದರ ಸಂಭ್ರಮಾಚರಣೆಯ ಸಮಯದಲ್ಲಿ, ಅಂದಿನ ಪ್ರಧಾನಿಯವರು ಪಂಜಾಬ್ ಸರಕಾರಕ್ಕೆ ಆಶ್ವಾಸನೆಯೊಂದನ್ನು ನೀಡಿದ್ದರು. ಕರ್ತಾರಪುರ್ ಸಾಹಿಬ್‍ಗೆ ಪ್ರವೇಶ ಸಿಗುವಂತೆ ಪಾಕಿಸ್ತಾನದೊಂದಿಗೆ ಭೂವಿನಿಮಯ ಮಾಡಿಕೊಳ್ಳುವುದಾಗಿ ನುಡಿದಿದ್ದರು. ಕರ್ತಾರಪುರ್ ಸಾಹಿಬ್‍ಗಾಗಿ ಅದರ ಪಕ್ಕದ ಭಾರತೀಯ ಭೂಭಾಗದೊಂದಿಗೆ ವಿನಿಮಯ ಮಾಡಿಕೊಳ್ಳಲು ಪಾಕಿಸ್ತಾನದೊಂದಿಗೆ ಮಾತುಕತೆ ಮಾಡುವುದಾಗಿ ಇಂದಿರಾ ಗಾಂಧಿ ಹೇಳಿದ್ದರು. ಭಾರತದಲ್ಲಿಯ ನಂಕಾನಾ ಸಾಹಿಬ್‍ಗೆ ಪಾಕಿಸ್ತಾನದ ಯಾತ್ರಿಗಳಿಗೆ ಉಚಿತ ವೀಸಾ ನೀಡುವುದಾಗಿಯೂ ಅವರು ಹೇಳಿದ್ದರು. ಆದರೆ, ಈ ಆಶ್ವಾಸನೆಯ ತದನಂತರ ನಡೆದ ಭಾರತ-ಪಾಕಿಸ್ತಾನ್ ಯುದ್ಧ, ಬಾಂಗ್ಲಾದೇಶದ ಸೃಷ್ಟಿ, ಇವೆಲ್ಲ ಕಾರಣದಿಂದ ಕಾರಿಡಾರ್ ವಿಷಯ ಸ್ಮøತಿಪಟಲದಿಂದ ಅಳಿಸಿಹೋಯಿತು.
ಕರ್ತಾರಪುರ್ ಸಾಹಿಬ್ ಕ್ಷೇತ್ರಕ್ಕೆ ಪ್ರವೇಶವನ್ನು ಗಂಭೀರವಾಗಿ ಪರಿಗಣಿಸಿದ ಎರಡೂ ಸಂದರ್ಭಗಳಲ್ಲಿ, ಗಡಿಪ್ರದೇಶದಲ್ಲಿ ಹಿಂಸಾಚರಣೆ ಪ್ರಾರಂಭವಾಗಿ ಉಭಯದೇಶಗಳ ಸಂಬಂಧ ಹದಗೆಟ್ಟವು.
ಬುಧವಾರ, 28 ನವೆಂಬರ್‍ದಂದು ಶಾಂತಿಯ ಸಂದೇಶವನ್ನು ನೀಡುತ್ತ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದು “ನೀವು ಒಂದು ಹೆಜ್ಜೆಯಿಟ್ಟಲ್ಲಿ, ನಾವು ಎರಡು ಹೆಜ್ಜೆಯನ್ನಿಡುತ್ತೇವೆ”. ಅದಕ್ಕಿಂತ ಮುಂಚೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೂ ಈ ಹೆಜ್ಜೆಗೆ ತಮ್ಮ ಬೆಂಬಲ ನೀಡಿದ್ದರು. ಈ ಕರ್ತಾರಪುರ್ ಕಾರಿಡಾರ್ ಭಾರತ ಮತ್ತು ಪಾಕಿಸ್ತಾನ್ ನಡುವೆಯ ‘ಬರ್ಲಿನ್ ಗೋಡೆ’ ಯಾಗಿ ಪರಿವರ್ತನೆಯಾಗುವ ಸಾಧ್ಯತೆಯನ್ನೂ ಪ್ರಸ್ತಾಪಿಸಿದ್ದರು. ‘ಬರ್ಲಿನ್ ಗೋಡೆ ಧ್ವಂಸವಾಗುವುದು ಎಂದು ಯಾರು ನಂಬಿದ್ದರು? ಗುರು ನಾನಕ್ ಅವರ ಆಶೀರ್ವಾದದೊಂದಿಗೆ, ಈ ಕರ್ತಾರಪುರ್ ಕಾರಿಡಾರ್ ಗಡಿಗಳಾಚೆಯ ಜನರನ್ನು ಬೆಸೆಯುವ ಮಾಧ್ಯಮವಾಗಬಲ್ಲದು”. ಎಂದು ಮೋದಿ ಹೇಳಿದ್ದರು.
ಕೇಂದ್ರೀಯ ಸಚಿವೆ ಹರಸಿಮ್ರತ್ ಕೌರ್ ಅವರು ಕರ್ತಾರಪುರ್ ಕಾರಿಡಾರ್ ಉದ್ಘಾಟನೆಯ ಸಮಯದಲ್ಲಿ ಪ್ರಧಾನಮಂತ್ರಿಯ ಸಂದೇಶವನ್ನು ಒತ್ತಿಹೇಳುವಾಗಲೇ, ವಿದೇಶಾಂಗ ಸಚಿವೆ ಉಭಯ ದೇಶಗಳ ಮಧ್ಯೆ ಮಾತುಕತೆಗೆ ಇದೊಂದೇ ಕಾರಣವಾಗಲಾರದು ಎಂದರು. ಇನ್ನೂ ಕೆಲವರು, ಈ ಕಾರಿಡಾರ್‍ನಿಂದಾಗಿ ಖಾಲಿಸ್ತಾನಿ ಅಪಾಯ ಹಿಂದಿರುಗಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.
ಈಗ ಹಳಿತಪ್ಪಿದ ಭಾರತ-ಪಾಕಿಸ್ತಾನದ ಮಾತುಕತೆಗಳನ್ನು ಮತ್ತೆ ಸರಿದಾರಿಗೆ ತರುವಲ್ಲಿ ಈ ಕಾರಿಡಾರ್ ಅದೃಷ್ಟಸೂಚಕವಾಗಿ ಪರಿಣಮಿಸಬಲ್ಲದೋ ಇಲ್ಲವೋ ಎನ್ನುವುದನ್ನು ಎರಡೂ ದೇಶದ ಸರಕಾರಗಳು ನಿರ್ಣಯಿಸಬೇಕಿದೆ. ಆದರೆ, ಒಂದಂತೂ ಸ್ಪಷ್ಟ, ಇಬ್ಭಾಗವಾಗಿರುವ ಎರಡೂ ದೇಶಗಳನ್ನು ಬೆಸೆಯುವುದರಲ್ಲಿ ಧರ್ಮ ಒಂದು ಸಾಧ್ಯತೆಯನ್ನು ಹುಟ್ಟುಹಾಕಬಹುದು ಎನ್ನುವುದನ್ನು ಈ ಕರ್ತಾರಪುರ್ ಕಾರಿಡಾರ್ ತೋರಿಸಿಕೊಟ್ಟಿದೆ.

ಕೃಪೆ: ಎಚ್‍ಡಬ್ಲ್ಯು ನ್ಯೂಸ್
ಕನ್ನಡಕ್ಕೆ: ರಾಜಶೇಖರ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...