Homeಅಂಕಣಗಳುಮುಖಕ್ಕೆ ಬೀಳ್ತಿರೊ ಎಂಜಲು ಒರೆಸಿಕೊಳ್ಳಲು ಲೇವಣ್ಣ ಎರಡು ಶಾಮಿಯಾನ ತರಿಸಿಕೊಂಡ ಬ್ರೇಕಿಂಗ್ ನ್ಯೂಸ್!

ಮುಖಕ್ಕೆ ಬೀಳ್ತಿರೊ ಎಂಜಲು ಒರೆಸಿಕೊಳ್ಳಲು ಲೇವಣ್ಣ ಎರಡು ಶಾಮಿಯಾನ ತರಿಸಿಕೊಂಡ ಬ್ರೇಕಿಂಗ್ ನ್ಯೂಸ್!

- Advertisement -
- Advertisement -

ಕೇಳುಗರಿಗೆಲ್ಲ ನಮಸ್ಕಾರ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ..
ಮುಖ್ಯಮಂತ್ರಿ ‘ಸುಮಾರ್ ಸ್ವಾಮಿ’ಯ ಬೆನ್ನಿಗೆ ಬಿದ್ದ ಬೇತಾಳದಂತೆ ಹೋದಲ್ಲಿ ಬಂದಲ್ಲೆಲ್ಲ ರಂಕಲು ಎಬ್ಬಿಸಿಕೊಂಡು ತಿರುಗೋ ಹೆಚ್.ಡಿ. ಲೇವಣ್ಣನ ಹಿಲ್ಲೇರಿಯಸ್ ಅಡ್ವೆಂಚರ್‍ಗಳಿಗೆ ಹೊಸದೊಂದು ಸಾಹಸ ಸೇರ್ಪಡೆಯಾಗಿದೆ. ತನ್ನ ಮನೆಯ ಬೆಡ್ರೂಂ ಮಂಚದ ಮೇಲೆ ಹೋಮಕುಂಡ ಕಟ್ಟಿಸಿಕೊಂಡು ಅದ್ರೊಳಗೇ ಮಲಗಿದ್ದ ಲೇವಣ್ಣನಿಗೆ ಕನಸಿನಲ್ಲಿ ಸನಿಮಾತ್ಮನು ಬಂದು ತನ್ನ ಕಾಗೆ ಕೊಕ್ಕಿನಿಂದ ಲೇವಣ್ಣನ ಕಣ್ಣಿಗೆ ಕುಕ್ಕಿಸಿ ಎಬ್ಬಿಸಿದ್ದಾನೆ. ಪ್ರವಾಹ ಬಂದು ಜನ ಸಾಯ್ತಾವರೆ, ನೀನಿಲ್ಲಿ ಕುಂಡದೊಳಗೆ ಕಾಲೆತ್ತಿಕೊಂಡು ಬಿದ್ಕಂಡಿದೀಯ ಎದ್ದೇಳೋ ಲೋಪರ್ ಎಂದು ಬೈದನಂತೆ. ತಕ್ಷಣ ಕುಂಡದೊಳಗಿನಿಂದ ಕಣ್ಣುಜ್ಜಿಕೊಂಡು ಎದ್ದ ಲೇವಣ್ಣ ಕಾರಲ್ಲಿ ಒಂದೆರಡು ಬಂಡಲ್ ಬಿಸ್ಕತ್ ಪ್ಯಾಕೆಟ್ ಎತ್ಕೊಂಡು ಪ್ರವಾಹ ಸಂತ್ರಸ್ತರ ಗಂಜಿಕೇಂದ್ರಗಳಿಗೆ ಓಡೋಗಿದೆ. ಅಲ್ಲಿ ಮೊದಲೇ ನೊಂದು ಬೆಂದು ಹೈರಾಣಾಗಿದ್ದ ಸಂತ್ರಸ್ತ ಜನರಿಗೆ ನಾಯಿಗೆ ಎಸೆಯುವಂತೆ ಬಿಸ್ಕತ್ ಎಸೆದು ಬಂದಿದೆ. ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ಜನ ಕ್ಯಾಕರಿಸಿ ತುಪಾತುಪಾ ಉಗಿಯತೊಡಗಿದ್ದಾರೆ. ದೊಡ್ಡಗೌಡರ ಮಗ ಅನ್ನೋ ಕ್ವಾಲಿಫಿಕೇಷನ್ ಬಿಟ್ರೆ ಗ್ರಾಮಪಂಚಾಯ್ತಿ ಪೀವನ್ ಆಗಲೂ ಲಾಯಕ್ಕಿಲ್ಲದ ಭಯಂಕರ ವದನ ಹೊಂದಿರೋ ಲೇವಣ್ಣ, ಮುಖಕ್ಕೆ ಬೀಳ್ತಿರೋ ಎಂಜಲು ಒರೆಸಿಕೊಳ್ಳಲು ಮನೇಲಿರೋ ಟವೆಲ್ಲು, ಬೆಡ್‍ಶೀಟುಗಳು ಸಾಲದಾಗಿ ಹೊಸ ಎರಡು ಶಾಮಿಯಾನ ತರಿಸಿಕೊಂಡಿದ್ದಾರೆಂದು ಲೇವಣ್ಣನ ಅಧಿಕೃತ ಪುತ್ರ ಹೇಳಿಕೆ ಕೊಟ್ಟಿದ್ದಾರೆ. ಇದರ ನಡುವೆ ಲೇವಣ್ಣನೇನಾದ್ರೂ ಸಂತ್ರಸ್ತ ಶಿಬಿರಗಳಿಗೆ ಅಪ್ಪಿತಪ್ಪಿ ಮತ್ತೆ ಭೇಟಿ ಕೊಟ್ಟರೆ ಅಲ್ಲಿರೋ ಜನರು ಲೇವಣ್ಣನ ಕಾಲುಹಿಡಿದು ದರದರನೆ ಎಳೆದೊಯ್ದು ರಾಜಾಸೀಟ್ ಮೇಲಿಂದ ಕೆಳಕ್ಕೆಸೆಯಲು ಪ್ಲಾನ್ ಮಾಡಿದ್ದಾರೆಂದು ಗುಪ್ತಚರ ಮೂಲಗಳು ಸ್ಪಷ್ಟಪಡಿಸಿವೆ.

********

ಆಡಳಿತ ನಡೆಸಿ ಅನುಭವವಿರದ ಎಲ್ ಬೋರ್ಡ್ ಎನ್.ಡಿ.ಎ ಸರ್ಕಾರ, ಎಲ್ಲಿ ಕೈ ಇಟ್ಟರೂ ಅಲ್ಲೊಂದು ಕೊಳಕುಮಂಡಲದ ಹಾವಿನ ಕೈಲಿ ಗಚ್ಚನೆ ಕಡಿಸಿಕೊಂಡು ಕಿಟಾರ್ ಎಂದು ಕಿರುಚಿಕೊಳ್ಳುತ್ತಿರುವ ಸುದ್ದಿಗಳು ಲಭ್ಯವಾಗಿವೆ. ಕೇಂದ್ರ ಅಂಕಿಅಂಶ ಆಯೋಗ ನಡೆಸಿದ ಅವಲೋಕನದಲ್ಲಿ ಕೇಂದ್ರದ ‘ಹಾಫ್ ಮೆಂಟ್ಲು ಓಲ್ಡ್ ಮ್ಯಾನ್’ ಸರ್ಕಾರದ ಕಾಲದ ಜಿ.ಡಿ.ಪಿಯು ಹಿಂದಿನ ಯುಪಿಎ ಸರ್ಕಾರದ ಕಾಲದ ಜಿಡಿಪಿಯ ಕಾಲಧೂಳಿಗೂ ಸಮವಿಲ್ಲದಂತೆ ಯಕ್ಕುಟ್ಟಿ ಹೋಗಿರುವುದು ಬಯಲಾಗಿದೆ. ಇದನ್ನೇ ಸರ್ಕಾರದ ವೆಬ್‍ಸೈಟಿನಲ್ಲಿ ಪ್ರಕಟಿಸಿದಾಗ ತಲೆಯಿರುವ ಮಾಧ್ಯಮಗಳು ಪೊರಕೆ ಎತ್ತಿಕೊಂಡು ‘ಗಟರ್ ಗ್ಯಾಸ್ ಮೆಂಟ್ಲುಮ್ಯಾನ್’ ಮುಖಕ್ಕೆ ಹೆಟ್ಟಿ ‘ಏನಲೇ ಇದು ಭಾಡಕೋ’ ಎಂದು ಮಕ್ಕುಗಿದಿವೆ. ಇದರಿಂದ ನೊಂದ ಮೆಂಟ್ಲುತಾತ.. ಆ ರಿಪೋರ್ಟನ್ನೇ ವೆಬ್‍ಸೈಟಿಂದ ಕಿತ್ತು ಬಚ್ಚಿಡಲು ಹೇಳಿ, ಮತ್ತೊಮ್ಮೆ ಸಿಕ್ಕಿ ಬಿದ್ದಿದೆ. ಚಡ್ಡಿ ಹರಿದೋಗಿ ಏನೇನೋ ಕಾಣ್ತಿದೆ ನೋಡ್ಕಳಯ್ಯ ಅಂದ್ರೆ ‘ ನಾನಿರದೇ ಹಿಂಗೆ, ನೋಡಕ್ಕಾಗದಿದ್ರೆ ನೀವೇ ಕಣ್ ಮುಚ್ಕಳಿ ಅಂದ್ನಂತೆ’ ಅನ್ನೋ ಗಾದೆಯನ್ನ ಈ ಓಲ್ಡ್ ಬಫೆಲೋನ ನೋಡಿಯೇ ಬರೆದಿರಬಹುದೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

********

ಭೂಮಿಯ ಮೇಲೆ ಎಲ್ಲೂ ಕಾಣಸಿಗದ ಅತ್ಯಂತ ಶ್ರೇಷ್ಟ ಮುಠ್ಠಾಳರ ಕೊಂಪೆಯಾಗಿರೋ ಮೋತಿಜೀ ಭಕ್ತರು ಕೇರಳ ಪ್ರವಾಹದ ಸಂದರ್ಭದಲ್ಲು ತಮ್ಮ ಸೈಕೋಬುದ್ದಿಗಳನ್ನು ಬಿಡದಿರುವುದು ಆಶ್ಚರ್ಯವೇನಲ್ಲ. ಸುಪ್ರೀಂಕೋರ್ಟ್ ಶಬರಿಮಲೆ ದೇವರ ದರ್ಶನಕ್ಕೆ ಹೆಂಗಸರನ್ನು ಬಿಟ್ಟಿದ್ದೇ ಕಾರಣವೆಂದು ಈ ಅನ್ಯಗ್ರಹ ಮೂದೇವಿಗಳು ತಲೆಚಚ್ಚಿಕೊಂಡು ಅಳುತ್ತಿವೆ. ಆ ಲೆಕ್ಕದಲ್ಲಿ ನೋಡಿದರೆ ಸುಪ್ರೀಂ ತೀರ್ಪಿಗೆ ಸಿಟ್ಟಿಗೆದ್ದ ಅಯ್ಯಪ್ಪಸ್ವಾಮಿ ಕೋರ್ಟನ್ನೇ ಪ್ರವಾಹದೊಳಗೆ ಮುಳುಗಿಸುವ ಬದಲು ತನ್ನ ಟೆಂಪಲ್ಲನ್ನೇ ಯಾಕೆ ಪಂಪಾನದಿಯೊಳಗೆ ಕಂಠಮಟ್ಟ ಮುಳುಗಿಸಿಕೊಂಡನೆಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಉತ್ತರಾಖಂಡದಲ್ಲಿ ನೆರೆ ಬಂದು ಇಡೀ ಕಣಿವೆ ದೇಗುಲದ ಊರನ್ನು ಕೊಚ್ಚಿಕೊಂಡು ಹೋದಾಗ ಆ ದೇವರೇನು ಶಾಪ ಕೊಟ್ಟಿತ್ತು? ಗುಜರಾತಲ್ಲಿ ಭೂಕಂಪ ಸಂಭವಿಸಿದಾಗ ಆ ರಾಜ್ಯವೇನು ಪಾಪ ಮಾಡಿತ್ತು? ಅನ್ನತಕ್ಕಂಥ ಪ್ರಶ್ನೆಗಳು ಜನರಿಂದ ಬರುತ್ತಿದ್ದಂತೆ.. ಸೆಗಣಿ ಬ್ರೈನ್ ಸೈಕೋಭಕ್ತರು ಕಣ್ಣಿಗೆ ಬಿದ್ದ ಇಲಿಬಿಲಗಳನ್ನು ಹೊಕ್ಕಿದ್ದು, ಅಲ್ಲಿ ವಾಸವಿದ್ದ ಮೂಗಿಲಿಗಳೊಡನೆ ವೀರಾವೇಶದಿಂದ ಹೋರಾಡಿ ಅವನ್ನು ಹೊರಗಾಕಿ ಬಿಲದಲ್ಲೇ ಠಿಕಾಣಿ ಹೂಡಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.

*********

ಪಾಕಿಸ್ತಾನದ ಹೊಸ ಪ್ರಧಾನಮಂತ್ರಿ ಇಮ್ರಾನ್ ಖಾನ್ ಪದವಿ ಸ್ವೀಕಾರ ಪ್ರೋಗ್ರಾಂಗೆ ಹೋಗಿಬಂದ ಮಾಜಿ ಕ್ರಿಕೆಟರ್ ಸಿಕ್ಸರ್ ಸಿದ್ದುವಿನ ಮೇಲೆ ಬ್ರಿಟಿಷರ ಬೂಟನ್ನು ನಾಲಿಗೆಯಿಂದ ಸ್ವಚ್ಛಗೊಳಿಸುತ್ತಿದ್ದ ದ್ವೇಷಭಕ್ತರು ಮುಗಿಬಿದ್ದಿದ್ದಾರೆ. ಶತ್ರು ದೇಶಕ್ಕೆ ಯಾಕೆ ಹೋದ್ರಿ, ಅಲ್ಲಿನ ಆರ್ಮಿ ಚೀಫನ್ನ ಯಾಕ್ ತಬ್ಕೊಂಡ್ರಿ, ಲೊಟ್ಟೆ ಲೊಸಕು ಅಂತ ಕೂಗಾಡುತ್ತಿದ್ದಾರೆ. ಆಲ್ ಇಂಡಿಯ ನಿರುದ್ಯೋಗಿಗಳ ಸಂಘದ ‘ಭಜ ಮಂಗದಳ’ದ ಕಮಂಗಿಗಳು ಸಿದ್ದು ತಲೆ ತೆಗೆದವರಿಗೆ 5 ಲಕ್ಷ ದುಡ್ಡನ್ನ ಪೇಟಿಎಂಲಿ ಕಳಿಸ್ತೀವಿ ಅಂತ ಬೊಗಳಾಡುತ್ತಿದ್ದಾರೆ. ಎಲ್ಲವನ್ನು ಕೇಳಿಸಿಕೊಂಡ ಸಿಕ್ಸರ್ ಸಿದ್ದು ಇದೀಗ ಅರಚಾಡುತ್ತಿರೋ ‘ಬ್ರಿಟಿಶ್ ಬೂಟ್ ಪಾಲಿಶ್’ ಗ್ಯಾಂಗಿಗೆ ಒಂದೊಂದೇ ಪ್ರಶ್ನೆಗಳನ್ನು ಹಳೇಕೆರಗಳಿಗೆ ಸಿಕ್ಕಿಸಿ ಎಸೆಯತೊಡಗಿದ್ದಾರೆ. ವಾಜಪೇಯಿ ಕಾಲದಲ್ಲಿ ಕಾರ್ಗಿಲ್ ಯುದ್ಧಕ್ಕೆ ಕಾರಣನಾಗಿ ನಮ್ಮ ಸಾವಿರಾರು ಸೈನಿಕರನ್ನು ಕೊಂದ ಪರ್ವೆಜ್ ಮುಶರಫ್‍ನನ್ನು ಅ’ತಾತ’ಶತ್ರು ವಾಜಪೇಯಿ ಇಂಡಿಯಾಗೆ ಆಹ್ವಾನಿಸಿ ತಬ್ಬಿಕೊಂಡಿದ್ರಲ್ಲ.. ಅವಾಗ ಈ ‘ಬ್ರಿಟಿಶ್ ಬೂಟ್ ಪಾಲಿಶ್ ಗ್ಯಾಂಗ್’ ಯಾವ ಹೋಟೆಲಿನಲ್ಲಿ ಎಂಜಲೆತ್ತುತ್ತಿತ್ತು? “ಕರೆಯದೇ ಬರುವನ ಕರೆದು ಹಳೆಯ ರೀಬೋಕ್ ಬೂಟಲ್ಲಿ ಹೊಡೆಯೆಂದ ಸರ್ವಜ್ಞ” ಎಂಬ ಗಾದೆಯಂತೆ ಕರೆಯದಿದ್ರೂ ನವಾಜ್ ಶರೀಫ್ ಮಗಳ ಮದ್ವೆಗೆ ಪಾಕಿಸ್ತಾನಕ್ಕೆ ಓಡೋಗಿ “ಮಮ್ಮಿಗೆ ಸೀರೆ ಇಲ್ಲ, ಇರೋ ಸೀರೆಗಳೆಲ್ಲ ಹರಿದು ಹೋಗಿವೆ, ನನಗೆ ಕೊಡಿಸೋ ತಾಕತ್ತಿಲ್ಲ, ಒಂದೆರಡು ಸೀರೆ ಕೊಡ್ರಿ” ಅಂತ ನವಾಜ್ ಶರೀಫನಿಂದ ಸೀರೆ ತಗೊಂಡು ಬಂದ ‘ಗಟರ್ ಗ್ಯಾಸ್ ಮೋರಿ’ಯ ತಲೆಗೆಷ್ಟು ಬಹುಮಾನ ಕಟ್ತೀರಿ? ಪಠಾಣ್ ಕೋಟ್ ಆರ್ಮಿಬೇಸಿಗೆ ಬಾಂಬೆಸೆದು ಹೋದ ಪಾಕ್ ಉಗ್ರರನ್ನು ಸದೆ ಬಡೆಯೋದು ಬಿಟ್ಟು ಪಾಕ್ ಗುಪ್ತಚರ ದಳದ ಐಎಸ್‍ಐ ಅಧಿಕಾರಿಗಳನ್ನ ಪಠಾಣ್ ಕೋಟಿನಲ್ಲಿ ರತ್ನಗಂಬಳಿ ಹಾಸಿ ಕರೆದುಕೊಂಡ ಅರುಳುಮರುಳು ಪಕೋಡತಾತನ್ನ ಯಾವ ಸಮುದ್ರದ ಒಳಗೆ ಎಸೀತೀರಿ? ಅಂತ ಸೈಕೋ ದ್ವೇಷಭಕ್ತರನ್ನು ಕಂಡಕಂಡಲ್ಲಿ ಒದೆಯುತ್ತಿರೋ ಸಿಕ್ಸರ್ ಸಿದ್ದು ಧೈರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಭೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ ಅಂತ ಹೇಳುತ್ತ, ವಾರ್ತಾಪ್ರಸಾರಕ್ಕೆ ಮಂಗಳ ಹಾಡುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...