Homeಅಂಕಣಗಳುಮುಖಕ್ಕೆ ಬೀಳ್ತಿರೊ ಎಂಜಲು ಒರೆಸಿಕೊಳ್ಳಲು ಲೇವಣ್ಣ ಎರಡು ಶಾಮಿಯಾನ ತರಿಸಿಕೊಂಡ ಬ್ರೇಕಿಂಗ್ ನ್ಯೂಸ್!

ಮುಖಕ್ಕೆ ಬೀಳ್ತಿರೊ ಎಂಜಲು ಒರೆಸಿಕೊಳ್ಳಲು ಲೇವಣ್ಣ ಎರಡು ಶಾಮಿಯಾನ ತರಿಸಿಕೊಂಡ ಬ್ರೇಕಿಂಗ್ ನ್ಯೂಸ್!

- Advertisement -
- Advertisement -

ಕೇಳುಗರಿಗೆಲ್ಲ ನಮಸ್ಕಾರ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ..
ಮುಖ್ಯಮಂತ್ರಿ ‘ಸುಮಾರ್ ಸ್ವಾಮಿ’ಯ ಬೆನ್ನಿಗೆ ಬಿದ್ದ ಬೇತಾಳದಂತೆ ಹೋದಲ್ಲಿ ಬಂದಲ್ಲೆಲ್ಲ ರಂಕಲು ಎಬ್ಬಿಸಿಕೊಂಡು ತಿರುಗೋ ಹೆಚ್.ಡಿ. ಲೇವಣ್ಣನ ಹಿಲ್ಲೇರಿಯಸ್ ಅಡ್ವೆಂಚರ್‍ಗಳಿಗೆ ಹೊಸದೊಂದು ಸಾಹಸ ಸೇರ್ಪಡೆಯಾಗಿದೆ. ತನ್ನ ಮನೆಯ ಬೆಡ್ರೂಂ ಮಂಚದ ಮೇಲೆ ಹೋಮಕುಂಡ ಕಟ್ಟಿಸಿಕೊಂಡು ಅದ್ರೊಳಗೇ ಮಲಗಿದ್ದ ಲೇವಣ್ಣನಿಗೆ ಕನಸಿನಲ್ಲಿ ಸನಿಮಾತ್ಮನು ಬಂದು ತನ್ನ ಕಾಗೆ ಕೊಕ್ಕಿನಿಂದ ಲೇವಣ್ಣನ ಕಣ್ಣಿಗೆ ಕುಕ್ಕಿಸಿ ಎಬ್ಬಿಸಿದ್ದಾನೆ. ಪ್ರವಾಹ ಬಂದು ಜನ ಸಾಯ್ತಾವರೆ, ನೀನಿಲ್ಲಿ ಕುಂಡದೊಳಗೆ ಕಾಲೆತ್ತಿಕೊಂಡು ಬಿದ್ಕಂಡಿದೀಯ ಎದ್ದೇಳೋ ಲೋಪರ್ ಎಂದು ಬೈದನಂತೆ. ತಕ್ಷಣ ಕುಂಡದೊಳಗಿನಿಂದ ಕಣ್ಣುಜ್ಜಿಕೊಂಡು ಎದ್ದ ಲೇವಣ್ಣ ಕಾರಲ್ಲಿ ಒಂದೆರಡು ಬಂಡಲ್ ಬಿಸ್ಕತ್ ಪ್ಯಾಕೆಟ್ ಎತ್ಕೊಂಡು ಪ್ರವಾಹ ಸಂತ್ರಸ್ತರ ಗಂಜಿಕೇಂದ್ರಗಳಿಗೆ ಓಡೋಗಿದೆ. ಅಲ್ಲಿ ಮೊದಲೇ ನೊಂದು ಬೆಂದು ಹೈರಾಣಾಗಿದ್ದ ಸಂತ್ರಸ್ತ ಜನರಿಗೆ ನಾಯಿಗೆ ಎಸೆಯುವಂತೆ ಬಿಸ್ಕತ್ ಎಸೆದು ಬಂದಿದೆ. ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ಜನ ಕ್ಯಾಕರಿಸಿ ತುಪಾತುಪಾ ಉಗಿಯತೊಡಗಿದ್ದಾರೆ. ದೊಡ್ಡಗೌಡರ ಮಗ ಅನ್ನೋ ಕ್ವಾಲಿಫಿಕೇಷನ್ ಬಿಟ್ರೆ ಗ್ರಾಮಪಂಚಾಯ್ತಿ ಪೀವನ್ ಆಗಲೂ ಲಾಯಕ್ಕಿಲ್ಲದ ಭಯಂಕರ ವದನ ಹೊಂದಿರೋ ಲೇವಣ್ಣ, ಮುಖಕ್ಕೆ ಬೀಳ್ತಿರೋ ಎಂಜಲು ಒರೆಸಿಕೊಳ್ಳಲು ಮನೇಲಿರೋ ಟವೆಲ್ಲು, ಬೆಡ್‍ಶೀಟುಗಳು ಸಾಲದಾಗಿ ಹೊಸ ಎರಡು ಶಾಮಿಯಾನ ತರಿಸಿಕೊಂಡಿದ್ದಾರೆಂದು ಲೇವಣ್ಣನ ಅಧಿಕೃತ ಪುತ್ರ ಹೇಳಿಕೆ ಕೊಟ್ಟಿದ್ದಾರೆ. ಇದರ ನಡುವೆ ಲೇವಣ್ಣನೇನಾದ್ರೂ ಸಂತ್ರಸ್ತ ಶಿಬಿರಗಳಿಗೆ ಅಪ್ಪಿತಪ್ಪಿ ಮತ್ತೆ ಭೇಟಿ ಕೊಟ್ಟರೆ ಅಲ್ಲಿರೋ ಜನರು ಲೇವಣ್ಣನ ಕಾಲುಹಿಡಿದು ದರದರನೆ ಎಳೆದೊಯ್ದು ರಾಜಾಸೀಟ್ ಮೇಲಿಂದ ಕೆಳಕ್ಕೆಸೆಯಲು ಪ್ಲಾನ್ ಮಾಡಿದ್ದಾರೆಂದು ಗುಪ್ತಚರ ಮೂಲಗಳು ಸ್ಪಷ್ಟಪಡಿಸಿವೆ.

********

ಆಡಳಿತ ನಡೆಸಿ ಅನುಭವವಿರದ ಎಲ್ ಬೋರ್ಡ್ ಎನ್.ಡಿ.ಎ ಸರ್ಕಾರ, ಎಲ್ಲಿ ಕೈ ಇಟ್ಟರೂ ಅಲ್ಲೊಂದು ಕೊಳಕುಮಂಡಲದ ಹಾವಿನ ಕೈಲಿ ಗಚ್ಚನೆ ಕಡಿಸಿಕೊಂಡು ಕಿಟಾರ್ ಎಂದು ಕಿರುಚಿಕೊಳ್ಳುತ್ತಿರುವ ಸುದ್ದಿಗಳು ಲಭ್ಯವಾಗಿವೆ. ಕೇಂದ್ರ ಅಂಕಿಅಂಶ ಆಯೋಗ ನಡೆಸಿದ ಅವಲೋಕನದಲ್ಲಿ ಕೇಂದ್ರದ ‘ಹಾಫ್ ಮೆಂಟ್ಲು ಓಲ್ಡ್ ಮ್ಯಾನ್’ ಸರ್ಕಾರದ ಕಾಲದ ಜಿ.ಡಿ.ಪಿಯು ಹಿಂದಿನ ಯುಪಿಎ ಸರ್ಕಾರದ ಕಾಲದ ಜಿಡಿಪಿಯ ಕಾಲಧೂಳಿಗೂ ಸಮವಿಲ್ಲದಂತೆ ಯಕ್ಕುಟ್ಟಿ ಹೋಗಿರುವುದು ಬಯಲಾಗಿದೆ. ಇದನ್ನೇ ಸರ್ಕಾರದ ವೆಬ್‍ಸೈಟಿನಲ್ಲಿ ಪ್ರಕಟಿಸಿದಾಗ ತಲೆಯಿರುವ ಮಾಧ್ಯಮಗಳು ಪೊರಕೆ ಎತ್ತಿಕೊಂಡು ‘ಗಟರ್ ಗ್ಯಾಸ್ ಮೆಂಟ್ಲುಮ್ಯಾನ್’ ಮುಖಕ್ಕೆ ಹೆಟ್ಟಿ ‘ಏನಲೇ ಇದು ಭಾಡಕೋ’ ಎಂದು ಮಕ್ಕುಗಿದಿವೆ. ಇದರಿಂದ ನೊಂದ ಮೆಂಟ್ಲುತಾತ.. ಆ ರಿಪೋರ್ಟನ್ನೇ ವೆಬ್‍ಸೈಟಿಂದ ಕಿತ್ತು ಬಚ್ಚಿಡಲು ಹೇಳಿ, ಮತ್ತೊಮ್ಮೆ ಸಿಕ್ಕಿ ಬಿದ್ದಿದೆ. ಚಡ್ಡಿ ಹರಿದೋಗಿ ಏನೇನೋ ಕಾಣ್ತಿದೆ ನೋಡ್ಕಳಯ್ಯ ಅಂದ್ರೆ ‘ ನಾನಿರದೇ ಹಿಂಗೆ, ನೋಡಕ್ಕಾಗದಿದ್ರೆ ನೀವೇ ಕಣ್ ಮುಚ್ಕಳಿ ಅಂದ್ನಂತೆ’ ಅನ್ನೋ ಗಾದೆಯನ್ನ ಈ ಓಲ್ಡ್ ಬಫೆಲೋನ ನೋಡಿಯೇ ಬರೆದಿರಬಹುದೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

********

ಭೂಮಿಯ ಮೇಲೆ ಎಲ್ಲೂ ಕಾಣಸಿಗದ ಅತ್ಯಂತ ಶ್ರೇಷ್ಟ ಮುಠ್ಠಾಳರ ಕೊಂಪೆಯಾಗಿರೋ ಮೋತಿಜೀ ಭಕ್ತರು ಕೇರಳ ಪ್ರವಾಹದ ಸಂದರ್ಭದಲ್ಲು ತಮ್ಮ ಸೈಕೋಬುದ್ದಿಗಳನ್ನು ಬಿಡದಿರುವುದು ಆಶ್ಚರ್ಯವೇನಲ್ಲ. ಸುಪ್ರೀಂಕೋರ್ಟ್ ಶಬರಿಮಲೆ ದೇವರ ದರ್ಶನಕ್ಕೆ ಹೆಂಗಸರನ್ನು ಬಿಟ್ಟಿದ್ದೇ ಕಾರಣವೆಂದು ಈ ಅನ್ಯಗ್ರಹ ಮೂದೇವಿಗಳು ತಲೆಚಚ್ಚಿಕೊಂಡು ಅಳುತ್ತಿವೆ. ಆ ಲೆಕ್ಕದಲ್ಲಿ ನೋಡಿದರೆ ಸುಪ್ರೀಂ ತೀರ್ಪಿಗೆ ಸಿಟ್ಟಿಗೆದ್ದ ಅಯ್ಯಪ್ಪಸ್ವಾಮಿ ಕೋರ್ಟನ್ನೇ ಪ್ರವಾಹದೊಳಗೆ ಮುಳುಗಿಸುವ ಬದಲು ತನ್ನ ಟೆಂಪಲ್ಲನ್ನೇ ಯಾಕೆ ಪಂಪಾನದಿಯೊಳಗೆ ಕಂಠಮಟ್ಟ ಮುಳುಗಿಸಿಕೊಂಡನೆಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಉತ್ತರಾಖಂಡದಲ್ಲಿ ನೆರೆ ಬಂದು ಇಡೀ ಕಣಿವೆ ದೇಗುಲದ ಊರನ್ನು ಕೊಚ್ಚಿಕೊಂಡು ಹೋದಾಗ ಆ ದೇವರೇನು ಶಾಪ ಕೊಟ್ಟಿತ್ತು? ಗುಜರಾತಲ್ಲಿ ಭೂಕಂಪ ಸಂಭವಿಸಿದಾಗ ಆ ರಾಜ್ಯವೇನು ಪಾಪ ಮಾಡಿತ್ತು? ಅನ್ನತಕ್ಕಂಥ ಪ್ರಶ್ನೆಗಳು ಜನರಿಂದ ಬರುತ್ತಿದ್ದಂತೆ.. ಸೆಗಣಿ ಬ್ರೈನ್ ಸೈಕೋಭಕ್ತರು ಕಣ್ಣಿಗೆ ಬಿದ್ದ ಇಲಿಬಿಲಗಳನ್ನು ಹೊಕ್ಕಿದ್ದು, ಅಲ್ಲಿ ವಾಸವಿದ್ದ ಮೂಗಿಲಿಗಳೊಡನೆ ವೀರಾವೇಶದಿಂದ ಹೋರಾಡಿ ಅವನ್ನು ಹೊರಗಾಕಿ ಬಿಲದಲ್ಲೇ ಠಿಕಾಣಿ ಹೂಡಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.

*********

ಪಾಕಿಸ್ತಾನದ ಹೊಸ ಪ್ರಧಾನಮಂತ್ರಿ ಇಮ್ರಾನ್ ಖಾನ್ ಪದವಿ ಸ್ವೀಕಾರ ಪ್ರೋಗ್ರಾಂಗೆ ಹೋಗಿಬಂದ ಮಾಜಿ ಕ್ರಿಕೆಟರ್ ಸಿಕ್ಸರ್ ಸಿದ್ದುವಿನ ಮೇಲೆ ಬ್ರಿಟಿಷರ ಬೂಟನ್ನು ನಾಲಿಗೆಯಿಂದ ಸ್ವಚ್ಛಗೊಳಿಸುತ್ತಿದ್ದ ದ್ವೇಷಭಕ್ತರು ಮುಗಿಬಿದ್ದಿದ್ದಾರೆ. ಶತ್ರು ದೇಶಕ್ಕೆ ಯಾಕೆ ಹೋದ್ರಿ, ಅಲ್ಲಿನ ಆರ್ಮಿ ಚೀಫನ್ನ ಯಾಕ್ ತಬ್ಕೊಂಡ್ರಿ, ಲೊಟ್ಟೆ ಲೊಸಕು ಅಂತ ಕೂಗಾಡುತ್ತಿದ್ದಾರೆ. ಆಲ್ ಇಂಡಿಯ ನಿರುದ್ಯೋಗಿಗಳ ಸಂಘದ ‘ಭಜ ಮಂಗದಳ’ದ ಕಮಂಗಿಗಳು ಸಿದ್ದು ತಲೆ ತೆಗೆದವರಿಗೆ 5 ಲಕ್ಷ ದುಡ್ಡನ್ನ ಪೇಟಿಎಂಲಿ ಕಳಿಸ್ತೀವಿ ಅಂತ ಬೊಗಳಾಡುತ್ತಿದ್ದಾರೆ. ಎಲ್ಲವನ್ನು ಕೇಳಿಸಿಕೊಂಡ ಸಿಕ್ಸರ್ ಸಿದ್ದು ಇದೀಗ ಅರಚಾಡುತ್ತಿರೋ ‘ಬ್ರಿಟಿಶ್ ಬೂಟ್ ಪಾಲಿಶ್’ ಗ್ಯಾಂಗಿಗೆ ಒಂದೊಂದೇ ಪ್ರಶ್ನೆಗಳನ್ನು ಹಳೇಕೆರಗಳಿಗೆ ಸಿಕ್ಕಿಸಿ ಎಸೆಯತೊಡಗಿದ್ದಾರೆ. ವಾಜಪೇಯಿ ಕಾಲದಲ್ಲಿ ಕಾರ್ಗಿಲ್ ಯುದ್ಧಕ್ಕೆ ಕಾರಣನಾಗಿ ನಮ್ಮ ಸಾವಿರಾರು ಸೈನಿಕರನ್ನು ಕೊಂದ ಪರ್ವೆಜ್ ಮುಶರಫ್‍ನನ್ನು ಅ’ತಾತ’ಶತ್ರು ವಾಜಪೇಯಿ ಇಂಡಿಯಾಗೆ ಆಹ್ವಾನಿಸಿ ತಬ್ಬಿಕೊಂಡಿದ್ರಲ್ಲ.. ಅವಾಗ ಈ ‘ಬ್ರಿಟಿಶ್ ಬೂಟ್ ಪಾಲಿಶ್ ಗ್ಯಾಂಗ್’ ಯಾವ ಹೋಟೆಲಿನಲ್ಲಿ ಎಂಜಲೆತ್ತುತ್ತಿತ್ತು? “ಕರೆಯದೇ ಬರುವನ ಕರೆದು ಹಳೆಯ ರೀಬೋಕ್ ಬೂಟಲ್ಲಿ ಹೊಡೆಯೆಂದ ಸರ್ವಜ್ಞ” ಎಂಬ ಗಾದೆಯಂತೆ ಕರೆಯದಿದ್ರೂ ನವಾಜ್ ಶರೀಫ್ ಮಗಳ ಮದ್ವೆಗೆ ಪಾಕಿಸ್ತಾನಕ್ಕೆ ಓಡೋಗಿ “ಮಮ್ಮಿಗೆ ಸೀರೆ ಇಲ್ಲ, ಇರೋ ಸೀರೆಗಳೆಲ್ಲ ಹರಿದು ಹೋಗಿವೆ, ನನಗೆ ಕೊಡಿಸೋ ತಾಕತ್ತಿಲ್ಲ, ಒಂದೆರಡು ಸೀರೆ ಕೊಡ್ರಿ” ಅಂತ ನವಾಜ್ ಶರೀಫನಿಂದ ಸೀರೆ ತಗೊಂಡು ಬಂದ ‘ಗಟರ್ ಗ್ಯಾಸ್ ಮೋರಿ’ಯ ತಲೆಗೆಷ್ಟು ಬಹುಮಾನ ಕಟ್ತೀರಿ? ಪಠಾಣ್ ಕೋಟ್ ಆರ್ಮಿಬೇಸಿಗೆ ಬಾಂಬೆಸೆದು ಹೋದ ಪಾಕ್ ಉಗ್ರರನ್ನು ಸದೆ ಬಡೆಯೋದು ಬಿಟ್ಟು ಪಾಕ್ ಗುಪ್ತಚರ ದಳದ ಐಎಸ್‍ಐ ಅಧಿಕಾರಿಗಳನ್ನ ಪಠಾಣ್ ಕೋಟಿನಲ್ಲಿ ರತ್ನಗಂಬಳಿ ಹಾಸಿ ಕರೆದುಕೊಂಡ ಅರುಳುಮರುಳು ಪಕೋಡತಾತನ್ನ ಯಾವ ಸಮುದ್ರದ ಒಳಗೆ ಎಸೀತೀರಿ? ಅಂತ ಸೈಕೋ ದ್ವೇಷಭಕ್ತರನ್ನು ಕಂಡಕಂಡಲ್ಲಿ ಒದೆಯುತ್ತಿರೋ ಸಿಕ್ಸರ್ ಸಿದ್ದು ಧೈರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಭೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ ಅಂತ ಹೇಳುತ್ತ, ವಾರ್ತಾಪ್ರಸಾರಕ್ಕೆ ಮಂಗಳ ಹಾಡುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...