Homeಅಂಕಣಗಳುಮುಖಕ್ಕೆ ಬೀಳ್ತಿರೊ ಎಂಜಲು ಒರೆಸಿಕೊಳ್ಳಲು ಲೇವಣ್ಣ ಎರಡು ಶಾಮಿಯಾನ ತರಿಸಿಕೊಂಡ ಬ್ರೇಕಿಂಗ್ ನ್ಯೂಸ್!

ಮುಖಕ್ಕೆ ಬೀಳ್ತಿರೊ ಎಂಜಲು ಒರೆಸಿಕೊಳ್ಳಲು ಲೇವಣ್ಣ ಎರಡು ಶಾಮಿಯಾನ ತರಿಸಿಕೊಂಡ ಬ್ರೇಕಿಂಗ್ ನ್ಯೂಸ್!

- Advertisement -
- Advertisement -

ಕೇಳುಗರಿಗೆಲ್ಲ ನಮಸ್ಕಾರ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ..
ಮುಖ್ಯಮಂತ್ರಿ ‘ಸುಮಾರ್ ಸ್ವಾಮಿ’ಯ ಬೆನ್ನಿಗೆ ಬಿದ್ದ ಬೇತಾಳದಂತೆ ಹೋದಲ್ಲಿ ಬಂದಲ್ಲೆಲ್ಲ ರಂಕಲು ಎಬ್ಬಿಸಿಕೊಂಡು ತಿರುಗೋ ಹೆಚ್.ಡಿ. ಲೇವಣ್ಣನ ಹಿಲ್ಲೇರಿಯಸ್ ಅಡ್ವೆಂಚರ್‍ಗಳಿಗೆ ಹೊಸದೊಂದು ಸಾಹಸ ಸೇರ್ಪಡೆಯಾಗಿದೆ. ತನ್ನ ಮನೆಯ ಬೆಡ್ರೂಂ ಮಂಚದ ಮೇಲೆ ಹೋಮಕುಂಡ ಕಟ್ಟಿಸಿಕೊಂಡು ಅದ್ರೊಳಗೇ ಮಲಗಿದ್ದ ಲೇವಣ್ಣನಿಗೆ ಕನಸಿನಲ್ಲಿ ಸನಿಮಾತ್ಮನು ಬಂದು ತನ್ನ ಕಾಗೆ ಕೊಕ್ಕಿನಿಂದ ಲೇವಣ್ಣನ ಕಣ್ಣಿಗೆ ಕುಕ್ಕಿಸಿ ಎಬ್ಬಿಸಿದ್ದಾನೆ. ಪ್ರವಾಹ ಬಂದು ಜನ ಸಾಯ್ತಾವರೆ, ನೀನಿಲ್ಲಿ ಕುಂಡದೊಳಗೆ ಕಾಲೆತ್ತಿಕೊಂಡು ಬಿದ್ಕಂಡಿದೀಯ ಎದ್ದೇಳೋ ಲೋಪರ್ ಎಂದು ಬೈದನಂತೆ. ತಕ್ಷಣ ಕುಂಡದೊಳಗಿನಿಂದ ಕಣ್ಣುಜ್ಜಿಕೊಂಡು ಎದ್ದ ಲೇವಣ್ಣ ಕಾರಲ್ಲಿ ಒಂದೆರಡು ಬಂಡಲ್ ಬಿಸ್ಕತ್ ಪ್ಯಾಕೆಟ್ ಎತ್ಕೊಂಡು ಪ್ರವಾಹ ಸಂತ್ರಸ್ತರ ಗಂಜಿಕೇಂದ್ರಗಳಿಗೆ ಓಡೋಗಿದೆ. ಅಲ್ಲಿ ಮೊದಲೇ ನೊಂದು ಬೆಂದು ಹೈರಾಣಾಗಿದ್ದ ಸಂತ್ರಸ್ತ ಜನರಿಗೆ ನಾಯಿಗೆ ಎಸೆಯುವಂತೆ ಬಿಸ್ಕತ್ ಎಸೆದು ಬಂದಿದೆ. ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ಜನ ಕ್ಯಾಕರಿಸಿ ತುಪಾತುಪಾ ಉಗಿಯತೊಡಗಿದ್ದಾರೆ. ದೊಡ್ಡಗೌಡರ ಮಗ ಅನ್ನೋ ಕ್ವಾಲಿಫಿಕೇಷನ್ ಬಿಟ್ರೆ ಗ್ರಾಮಪಂಚಾಯ್ತಿ ಪೀವನ್ ಆಗಲೂ ಲಾಯಕ್ಕಿಲ್ಲದ ಭಯಂಕರ ವದನ ಹೊಂದಿರೋ ಲೇವಣ್ಣ, ಮುಖಕ್ಕೆ ಬೀಳ್ತಿರೋ ಎಂಜಲು ಒರೆಸಿಕೊಳ್ಳಲು ಮನೇಲಿರೋ ಟವೆಲ್ಲು, ಬೆಡ್‍ಶೀಟುಗಳು ಸಾಲದಾಗಿ ಹೊಸ ಎರಡು ಶಾಮಿಯಾನ ತರಿಸಿಕೊಂಡಿದ್ದಾರೆಂದು ಲೇವಣ್ಣನ ಅಧಿಕೃತ ಪುತ್ರ ಹೇಳಿಕೆ ಕೊಟ್ಟಿದ್ದಾರೆ. ಇದರ ನಡುವೆ ಲೇವಣ್ಣನೇನಾದ್ರೂ ಸಂತ್ರಸ್ತ ಶಿಬಿರಗಳಿಗೆ ಅಪ್ಪಿತಪ್ಪಿ ಮತ್ತೆ ಭೇಟಿ ಕೊಟ್ಟರೆ ಅಲ್ಲಿರೋ ಜನರು ಲೇವಣ್ಣನ ಕಾಲುಹಿಡಿದು ದರದರನೆ ಎಳೆದೊಯ್ದು ರಾಜಾಸೀಟ್ ಮೇಲಿಂದ ಕೆಳಕ್ಕೆಸೆಯಲು ಪ್ಲಾನ್ ಮಾಡಿದ್ದಾರೆಂದು ಗುಪ್ತಚರ ಮೂಲಗಳು ಸ್ಪಷ್ಟಪಡಿಸಿವೆ.

********

ಆಡಳಿತ ನಡೆಸಿ ಅನುಭವವಿರದ ಎಲ್ ಬೋರ್ಡ್ ಎನ್.ಡಿ.ಎ ಸರ್ಕಾರ, ಎಲ್ಲಿ ಕೈ ಇಟ್ಟರೂ ಅಲ್ಲೊಂದು ಕೊಳಕುಮಂಡಲದ ಹಾವಿನ ಕೈಲಿ ಗಚ್ಚನೆ ಕಡಿಸಿಕೊಂಡು ಕಿಟಾರ್ ಎಂದು ಕಿರುಚಿಕೊಳ್ಳುತ್ತಿರುವ ಸುದ್ದಿಗಳು ಲಭ್ಯವಾಗಿವೆ. ಕೇಂದ್ರ ಅಂಕಿಅಂಶ ಆಯೋಗ ನಡೆಸಿದ ಅವಲೋಕನದಲ್ಲಿ ಕೇಂದ್ರದ ‘ಹಾಫ್ ಮೆಂಟ್ಲು ಓಲ್ಡ್ ಮ್ಯಾನ್’ ಸರ್ಕಾರದ ಕಾಲದ ಜಿ.ಡಿ.ಪಿಯು ಹಿಂದಿನ ಯುಪಿಎ ಸರ್ಕಾರದ ಕಾಲದ ಜಿಡಿಪಿಯ ಕಾಲಧೂಳಿಗೂ ಸಮವಿಲ್ಲದಂತೆ ಯಕ್ಕುಟ್ಟಿ ಹೋಗಿರುವುದು ಬಯಲಾಗಿದೆ. ಇದನ್ನೇ ಸರ್ಕಾರದ ವೆಬ್‍ಸೈಟಿನಲ್ಲಿ ಪ್ರಕಟಿಸಿದಾಗ ತಲೆಯಿರುವ ಮಾಧ್ಯಮಗಳು ಪೊರಕೆ ಎತ್ತಿಕೊಂಡು ‘ಗಟರ್ ಗ್ಯಾಸ್ ಮೆಂಟ್ಲುಮ್ಯಾನ್’ ಮುಖಕ್ಕೆ ಹೆಟ್ಟಿ ‘ಏನಲೇ ಇದು ಭಾಡಕೋ’ ಎಂದು ಮಕ್ಕುಗಿದಿವೆ. ಇದರಿಂದ ನೊಂದ ಮೆಂಟ್ಲುತಾತ.. ಆ ರಿಪೋರ್ಟನ್ನೇ ವೆಬ್‍ಸೈಟಿಂದ ಕಿತ್ತು ಬಚ್ಚಿಡಲು ಹೇಳಿ, ಮತ್ತೊಮ್ಮೆ ಸಿಕ್ಕಿ ಬಿದ್ದಿದೆ. ಚಡ್ಡಿ ಹರಿದೋಗಿ ಏನೇನೋ ಕಾಣ್ತಿದೆ ನೋಡ್ಕಳಯ್ಯ ಅಂದ್ರೆ ‘ ನಾನಿರದೇ ಹಿಂಗೆ, ನೋಡಕ್ಕಾಗದಿದ್ರೆ ನೀವೇ ಕಣ್ ಮುಚ್ಕಳಿ ಅಂದ್ನಂತೆ’ ಅನ್ನೋ ಗಾದೆಯನ್ನ ಈ ಓಲ್ಡ್ ಬಫೆಲೋನ ನೋಡಿಯೇ ಬರೆದಿರಬಹುದೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

********

ಭೂಮಿಯ ಮೇಲೆ ಎಲ್ಲೂ ಕಾಣಸಿಗದ ಅತ್ಯಂತ ಶ್ರೇಷ್ಟ ಮುಠ್ಠಾಳರ ಕೊಂಪೆಯಾಗಿರೋ ಮೋತಿಜೀ ಭಕ್ತರು ಕೇರಳ ಪ್ರವಾಹದ ಸಂದರ್ಭದಲ್ಲು ತಮ್ಮ ಸೈಕೋಬುದ್ದಿಗಳನ್ನು ಬಿಡದಿರುವುದು ಆಶ್ಚರ್ಯವೇನಲ್ಲ. ಸುಪ್ರೀಂಕೋರ್ಟ್ ಶಬರಿಮಲೆ ದೇವರ ದರ್ಶನಕ್ಕೆ ಹೆಂಗಸರನ್ನು ಬಿಟ್ಟಿದ್ದೇ ಕಾರಣವೆಂದು ಈ ಅನ್ಯಗ್ರಹ ಮೂದೇವಿಗಳು ತಲೆಚಚ್ಚಿಕೊಂಡು ಅಳುತ್ತಿವೆ. ಆ ಲೆಕ್ಕದಲ್ಲಿ ನೋಡಿದರೆ ಸುಪ್ರೀಂ ತೀರ್ಪಿಗೆ ಸಿಟ್ಟಿಗೆದ್ದ ಅಯ್ಯಪ್ಪಸ್ವಾಮಿ ಕೋರ್ಟನ್ನೇ ಪ್ರವಾಹದೊಳಗೆ ಮುಳುಗಿಸುವ ಬದಲು ತನ್ನ ಟೆಂಪಲ್ಲನ್ನೇ ಯಾಕೆ ಪಂಪಾನದಿಯೊಳಗೆ ಕಂಠಮಟ್ಟ ಮುಳುಗಿಸಿಕೊಂಡನೆಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಉತ್ತರಾಖಂಡದಲ್ಲಿ ನೆರೆ ಬಂದು ಇಡೀ ಕಣಿವೆ ದೇಗುಲದ ಊರನ್ನು ಕೊಚ್ಚಿಕೊಂಡು ಹೋದಾಗ ಆ ದೇವರೇನು ಶಾಪ ಕೊಟ್ಟಿತ್ತು? ಗುಜರಾತಲ್ಲಿ ಭೂಕಂಪ ಸಂಭವಿಸಿದಾಗ ಆ ರಾಜ್ಯವೇನು ಪಾಪ ಮಾಡಿತ್ತು? ಅನ್ನತಕ್ಕಂಥ ಪ್ರಶ್ನೆಗಳು ಜನರಿಂದ ಬರುತ್ತಿದ್ದಂತೆ.. ಸೆಗಣಿ ಬ್ರೈನ್ ಸೈಕೋಭಕ್ತರು ಕಣ್ಣಿಗೆ ಬಿದ್ದ ಇಲಿಬಿಲಗಳನ್ನು ಹೊಕ್ಕಿದ್ದು, ಅಲ್ಲಿ ವಾಸವಿದ್ದ ಮೂಗಿಲಿಗಳೊಡನೆ ವೀರಾವೇಶದಿಂದ ಹೋರಾಡಿ ಅವನ್ನು ಹೊರಗಾಕಿ ಬಿಲದಲ್ಲೇ ಠಿಕಾಣಿ ಹೂಡಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.

*********

ಪಾಕಿಸ್ತಾನದ ಹೊಸ ಪ್ರಧಾನಮಂತ್ರಿ ಇಮ್ರಾನ್ ಖಾನ್ ಪದವಿ ಸ್ವೀಕಾರ ಪ್ರೋಗ್ರಾಂಗೆ ಹೋಗಿಬಂದ ಮಾಜಿ ಕ್ರಿಕೆಟರ್ ಸಿಕ್ಸರ್ ಸಿದ್ದುವಿನ ಮೇಲೆ ಬ್ರಿಟಿಷರ ಬೂಟನ್ನು ನಾಲಿಗೆಯಿಂದ ಸ್ವಚ್ಛಗೊಳಿಸುತ್ತಿದ್ದ ದ್ವೇಷಭಕ್ತರು ಮುಗಿಬಿದ್ದಿದ್ದಾರೆ. ಶತ್ರು ದೇಶಕ್ಕೆ ಯಾಕೆ ಹೋದ್ರಿ, ಅಲ್ಲಿನ ಆರ್ಮಿ ಚೀಫನ್ನ ಯಾಕ್ ತಬ್ಕೊಂಡ್ರಿ, ಲೊಟ್ಟೆ ಲೊಸಕು ಅಂತ ಕೂಗಾಡುತ್ತಿದ್ದಾರೆ. ಆಲ್ ಇಂಡಿಯ ನಿರುದ್ಯೋಗಿಗಳ ಸಂಘದ ‘ಭಜ ಮಂಗದಳ’ದ ಕಮಂಗಿಗಳು ಸಿದ್ದು ತಲೆ ತೆಗೆದವರಿಗೆ 5 ಲಕ್ಷ ದುಡ್ಡನ್ನ ಪೇಟಿಎಂಲಿ ಕಳಿಸ್ತೀವಿ ಅಂತ ಬೊಗಳಾಡುತ್ತಿದ್ದಾರೆ. ಎಲ್ಲವನ್ನು ಕೇಳಿಸಿಕೊಂಡ ಸಿಕ್ಸರ್ ಸಿದ್ದು ಇದೀಗ ಅರಚಾಡುತ್ತಿರೋ ‘ಬ್ರಿಟಿಶ್ ಬೂಟ್ ಪಾಲಿಶ್’ ಗ್ಯಾಂಗಿಗೆ ಒಂದೊಂದೇ ಪ್ರಶ್ನೆಗಳನ್ನು ಹಳೇಕೆರಗಳಿಗೆ ಸಿಕ್ಕಿಸಿ ಎಸೆಯತೊಡಗಿದ್ದಾರೆ. ವಾಜಪೇಯಿ ಕಾಲದಲ್ಲಿ ಕಾರ್ಗಿಲ್ ಯುದ್ಧಕ್ಕೆ ಕಾರಣನಾಗಿ ನಮ್ಮ ಸಾವಿರಾರು ಸೈನಿಕರನ್ನು ಕೊಂದ ಪರ್ವೆಜ್ ಮುಶರಫ್‍ನನ್ನು ಅ’ತಾತ’ಶತ್ರು ವಾಜಪೇಯಿ ಇಂಡಿಯಾಗೆ ಆಹ್ವಾನಿಸಿ ತಬ್ಬಿಕೊಂಡಿದ್ರಲ್ಲ.. ಅವಾಗ ಈ ‘ಬ್ರಿಟಿಶ್ ಬೂಟ್ ಪಾಲಿಶ್ ಗ್ಯಾಂಗ್’ ಯಾವ ಹೋಟೆಲಿನಲ್ಲಿ ಎಂಜಲೆತ್ತುತ್ತಿತ್ತು? “ಕರೆಯದೇ ಬರುವನ ಕರೆದು ಹಳೆಯ ರೀಬೋಕ್ ಬೂಟಲ್ಲಿ ಹೊಡೆಯೆಂದ ಸರ್ವಜ್ಞ” ಎಂಬ ಗಾದೆಯಂತೆ ಕರೆಯದಿದ್ರೂ ನವಾಜ್ ಶರೀಫ್ ಮಗಳ ಮದ್ವೆಗೆ ಪಾಕಿಸ್ತಾನಕ್ಕೆ ಓಡೋಗಿ “ಮಮ್ಮಿಗೆ ಸೀರೆ ಇಲ್ಲ, ಇರೋ ಸೀರೆಗಳೆಲ್ಲ ಹರಿದು ಹೋಗಿವೆ, ನನಗೆ ಕೊಡಿಸೋ ತಾಕತ್ತಿಲ್ಲ, ಒಂದೆರಡು ಸೀರೆ ಕೊಡ್ರಿ” ಅಂತ ನವಾಜ್ ಶರೀಫನಿಂದ ಸೀರೆ ತಗೊಂಡು ಬಂದ ‘ಗಟರ್ ಗ್ಯಾಸ್ ಮೋರಿ’ಯ ತಲೆಗೆಷ್ಟು ಬಹುಮಾನ ಕಟ್ತೀರಿ? ಪಠಾಣ್ ಕೋಟ್ ಆರ್ಮಿಬೇಸಿಗೆ ಬಾಂಬೆಸೆದು ಹೋದ ಪಾಕ್ ಉಗ್ರರನ್ನು ಸದೆ ಬಡೆಯೋದು ಬಿಟ್ಟು ಪಾಕ್ ಗುಪ್ತಚರ ದಳದ ಐಎಸ್‍ಐ ಅಧಿಕಾರಿಗಳನ್ನ ಪಠಾಣ್ ಕೋಟಿನಲ್ಲಿ ರತ್ನಗಂಬಳಿ ಹಾಸಿ ಕರೆದುಕೊಂಡ ಅರುಳುಮರುಳು ಪಕೋಡತಾತನ್ನ ಯಾವ ಸಮುದ್ರದ ಒಳಗೆ ಎಸೀತೀರಿ? ಅಂತ ಸೈಕೋ ದ್ವೇಷಭಕ್ತರನ್ನು ಕಂಡಕಂಡಲ್ಲಿ ಒದೆಯುತ್ತಿರೋ ಸಿಕ್ಸರ್ ಸಿದ್ದು ಧೈರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಭೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ ಅಂತ ಹೇಳುತ್ತ, ವಾರ್ತಾಪ್ರಸಾರಕ್ಕೆ ಮಂಗಳ ಹಾಡುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...