Homeನೂರರ ನೋಟಆದರೂ ಸಹ ನನ್ನ ಬಾಯಿಂದ ‘ಮುಗಿಸಿಬಿಡಿ’ ಎಂಬ ಮಾತು ಬರಬಾರದಾಗಿತ್ತು ಎಂದು ಆತ್ಮ ಹೇಳುತ್ತದೆ: ದೊರೆಸ್ವಾಮಿ

ಆದರೂ ಸಹ ನನ್ನ ಬಾಯಿಂದ ‘ಮುಗಿಸಿಬಿಡಿ’ ಎಂಬ ಮಾತು ಬರಬಾರದಾಗಿತ್ತು ಎಂದು ಆತ್ಮ ಹೇಳುತ್ತದೆ: ದೊರೆಸ್ವಾಮಿ

ದೇವನೂರು ಮಹದೇವ ಮತ್ತು ಸಚಿವ ಸುರೇಶ್‌ಕುಮಾರ್ ಮಧ್ಯೆ ನಡೆದ ಈ ಪತ್ರ ವ್ಯವಹಾರ ಬಹಳ ಆತ್ಮೀಯತೆಯಿಂದ ಕೂಡಿದೆ. ರಾಗದ್ವೇಷರಹಿತವಾದ ಈ ಬಗೆಯ ಪತ್ರ ವ್ಯವಹಾರ ಸಮಾಜದಲ್ಲಿ, ದ್ವೇಷ ಬೆಳೆಸುವ ಈ ದಿನಗಳಲ್ಲಿ ಸಾಮರಸ್ಯ ತರಲು ಸಹಕಾರಿಯಾಗುವುದೆಂದು ನಾನು ಭಾವಿಸುತ್ತೇನೆ.

- Advertisement -
- Advertisement -

ನನ್ನ ವಿಷಯದಲ್ಲಿ ದೇವನೂರು ಮಹದೇವ ಮತ್ತು ಸಚಿವ ಸುರೇಶ್‌ಕುಮಾರ್ ಮಧ್ಯೆ ನಡೆದ ಪತ್ರ ವ್ಯವಹಾರವನ್ನು ಇಲ್ಲಿ ಮುದ್ರಿಸಲಾಗಿದೆ.

ಉಭಯತ್ರರೂ ನನ್ನ ಸ್ನೇಹಿತರು ಹಾಗೂ ಹಿತೈಷಿಗಳು. ದೇವನೂರು ಮಹದೇವ ಅವರು ತಮ್ಮ ಪತ್ರದಲ್ಲಿ ಅಸಲಿಯನ್ನು ನಕಲಿ ಮಾಡುವುದು ಸರಿಯೇ ಎಂದು ಪ್ರಶ್ನೆ ಮಾಡಿದ್ದಾರೆ. ನನ್ನ ಮೇಲೆ ಸಲ್ಲದ ಆರೋಪ ಹೊರೆಸಿ ನನ್ನನ್ನು ನಕಲಿ ಹೋರಾಟಗಾರ ಪಾಕ್ ಏಜೆಂಟ್ ಎಂದೆಲ್ಲ ಆಧಾರ ರಹಿತ ಆಪಾದನೆ ಮಾಡಿ ತೇಜೋವಧೆ ಮಾಡಿರುವ ಬಸವ ಗೌಡ ಯತ್ನಾಳ್ ನಾನು ನಕಲಿ ಪತ್ರಕರ್ತ, 38 ದಿನಗಳ ಪೌರವಾಣಿ ಸಂಪಾದಕ, ಅರುಳು ಮರುಳು ಎಂದೆಲ್ಲ ಅಪ್ಪಟ್ಟ ಸುಳ್ಳು ಆರೋಪಗಳನ್ನು ಮಾಡಿ ನನ್ನ ಚಾರಿತ್ರ್ಯ ವಧೆ ಮಾಡಿರುವ ಬಾಬುಕೃಷ್ಣಮೂರ್ತಿ ಮುಂತಾದ ಮಹನೀಯರೆಲ್ಲರನ್ನೂ ಕುರಿತು ದೇವನೂರು ಮಹದೇವ ನೊಂದು ನುಡಿದಿದ್ದಾರೆ.

ಮಹಾದೇವು ಮುಂದುವರೆದು ಕೊಳೆತ ಹಣ್ಣುಗಳ ಜೊತೆ ತಾಜಾ ಹಣ್ಣುಗಳು ಬೆರೆತುಹೊದಾಗ, ಅವೂ ಕೆಡಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ. ಮಹದೇವರ ಈ ಮಾತು ಸುರೇಶ್‌ಕುಮಾರ್ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸುರೇಶ್‌ಕುಮಾರ್ ಅವರು ದೇವನೂರು ಮಹದೇವ ಅವರಿಗೆ ಈ ಪ್ರಶ್ನೆಗೆ ಉತ್ತರ ಕೊಡುವುದರಲ್ಲಿ ಮುಗ್ಗರಿಸಿ, ನನ್ನವರನ್ನು ಡಿಫೆಂಡ್ ಮಾಡಿಕೊಳ್ಳುವುದು ನನ್ನ ಧರ್ಮ ಎಂದು ಉತ್ತರಿಸಿದ್ದಾರೆ. ಅವರು ಯಾರನ್ನು ಡಿಫೆಂಡ್ ಮಾಡಿಕೊಂಡರು ಎಂಬುದನ್ನೂ ತಿಳಿಸಿದ್ದಾರೆ.


ಇದನ್ನೂ ಓದಿ: ದೊರೆಸ್ವಾಮಿಯವರ ವಿಚಾರವಾಗಿ ಎಸ್.ಸುರೇಶ್ ಕುಮಾರ್ ಅವರಿಗೆ ದೇವನೂರು ಮಹಾದೇವರವರು ಬರೆದ ಬಹಿರಂಗ ಪತ್ರ

ಇದನ್ನೂ ಓದಿ: ದೊರೆಸ್ವಾಮಿ ವಿಚಾರವಾಗಿ ದೇವನೂರು ಪತ್ರಕ್ಕೆ ಸುರೇಶ್‌ ಕುಮಾರ್‌ ಪ್ರತಿಕ್ರಿಯೆ..


ಬ್ರಿಟಿಷರ ವಿರುದ್ಧ ಅಷ್ಟೊಂದು ತೀವ್ರತೆಯಿಂದ ಹೋರಾಡಿದ ವೀರಸಾವರ್ಕರ್ ಕರಿನೀರುಶಿಕ್ಷೆ ಅನುಭವಿಸುವಾಗ ಏಕೆ ಶತ್ರು ಬ್ರಿಟಿಷರಿಗೆ ಶರಣಾಗತರಾದರು? ಬ್ರಿಟಿಷರು ಹಾಕಿದ ಎಲ್ಲ ಷರತ್ತುಗಳಿಗೆ ಅಂದರೆ ನಾನು ಬಿಡುಗಡೆಯಾದರೆ ನನ್ನ ಜಿಲ್ಲೆಬಿಟ್ಟು ಹೊರಗೆ ಓಡಾಡುವುದಿಲ್ಲ. ಪತ್ರಿಕೆಗಳಿಗೆ ಲೇಖನ ಬರೆಯುವುದಿಲ್ಲ. ನಿಮ್ಮ ಆಜ್ಞಾಪಾಲಕನಾಗಿರುತ್ತೇನೆ ಎಂದೆಲ್ಲ ಬರೆದುಕೊಡಲು ಅವರ ಮನಸ್ಸು ಹೇಗೆ ಒಪ್ಪಿಕೊಂಡಿತು? ಧರ್ಮ ಗ್ಲಾನಿ ಅವರಲ್ಲಿ ಹೇಗೆ ಉಂಟಾಯಿತು? ಎಂದು ವೀರ ಸಾವರ್ಕರ್ ನಡವಳಿಕೆಯನ್ನು ಒಪ್ಪಿಕೊಳ್ಳುವ ಮೊದಲು ಚಿಂತಿಸಬೇಡವೇ ಸುರೇಶ್‌ಕುಮಾರ್ ಅವರೇ?

ನನ್ನನ್ನು ಶಾಸನ ಸಭೆಯಲ್ಲಿ ಮೇಲ್ಮನೆ ಸದಸ್ಯ ಬಿಜೆಪಿ ಎಂಎಲ್‌ಸಿ ರವಿಕುಮಾರ್ ನನಗೆ ಅಂತರಾಷ್ಟ್ರೀಯ ವ್ಯಕ್ತಿಗಳ ಸಂಬಂಧ ಇದೆ ಎಂದು ವಿಧಾನ ಪರಿಷತ್ತಿನಲ್ಲಿ ಹೇಳಿದ್ದಾರೆ. ಮಂತ್ರಿ ಈಶ್ವರಪ್ಪನವರು ನಾನು ಯಾರದ್ದೋ ಜೊತೆಗಿರುವ ಫೋಟೊ ತೋರಿಸಿ ಪಾಕಿಸ್ತಾನದ ನಂಟು ನನಗಿದೆ ಎಂದು ವಿಧಾನಸಭೆಯಲ್ಲಿ ಹೇಳಿದ್ದಾರೆ. ನಾನು ಅತಿಥಿಯಾಗಿ ಹೋಗಿರುವ ನೂರಾರು ಸಮಾರಂಭಗಳಲ್ಲಿ ಸಮಾರಂಭ ಮುಗಿದ ಮೇಲೆ ಜನ ನನ್ನ ಜೊತೆ ಫೋಟೊ ತೆಗೆಸಿಕೊಳ್ಳಲು ಮುಗಿಬೀಳುತ್ತಾರೆ. ಹೀಗೆ ಫೋಟೊ ತೆಗೆಸಿಕೊಂಡವರು ಸಾವಿರಾರು ಜನ, ಅದರಲ್ಲಿ ಇದೂ ಒಂದಿರಬಹುದು. ಅಷ್ಟಕ್ಕೇ ನನ್ನನ್ನು ನಕ್ಸಲಿಯ, Anti National, ಪಾಕಿಸ್ತಾನಿ ಏಜೆಂಟ್ ಎಂದು ಕರೆಯವರು ಮೊದಲು ನನ್ನ ಅರಾಷ್ಟ್ರಿಕತೆಗೆ, ಪಾಕಿಸ್ತಾನ್ ಏಜೆಂಟ್ ಎಂಬುದಕ್ಕೆ ಬೇರೆ ಪುರಾವೆಗಳನ್ನು ನೀಡುವ ಒಂದು ಫೋಟೊ ತೋರಿಸಿ. ಇಂತಹ ಗುರುತರ ಆಪಾದನೆ ಮಾಡುವುದು ಮಂತ್ರಿವರ್ಯರಿಗೆ, ಶಾಸಕರಿಗೆ ಗೌರವ ತರುವುದಿಲ್ಲ.

ಅನಂತಕುಮಾರ್ ರಾಷ್ಟ್ರವಿರೊಧಿ ವ್ಯಕ್ತಿ ಎಂದು ಹೇಳಿ ನನಗೆ ಧಿಕ್ಕಾರ ಹೇಳಿದ್ದು, ಮಂತ್ರಿಗಳಾದ ಸೋಮಣ್ಣ, ಈಶ್ವರಪ್ಪ ಮುಂತಾದವರು ನನ್ನ ಮೇಲೆ ಆರೊಪಗಳನ್ನು ಮಾಡಿದ್ದು ನಿಮಗೆ ಸಮ್ಮತ ಮತ್ತು ಅವರನ್ನೆಲ್ಲ ಬೆಂಬಲಿಸುವುದು ನಿಮ್ಮ ಧರ್ಮ ಎಂದು ನಿಮ್ಮ ಹೃದಯ ಒಪ್ಪುತ್ತದೆಯೇ?

ವೀರಸಾವರ್ಕರರಿಗೂ, ಭಗತ್‌ಸಿಂಗ್‌ಗೂ ಬ್ರಿಟಿಷರ ಬಗೆಗೆ ಒಂದೇ ಬಗೆಯ ಭಾವನೆ ಇತ್ತು. ಬ್ರಿಟಿಷರನ್ನು ಭಾರತದಿಂದ ಓಡಿಸಲು ಅವರದೇ ಕಾರ್ಯಕ್ರಮವಿತ್ತು, ಭಗತ್‌ಸಿಂಗ್‌ಗೆ ಮರಣದಂಡನೆ ವಿಧಿಸಿ ಸೆರೆಮನೆಯಲ್ಲಿಟ್ಟಿದ್ದರು. ಆಗ ಅವರ ತಂದೆ ಬ್ರಿಟಿಷರಿಗೆ ಪತ್ರ ಬರೆದು ‘ನನ್ನ ಮಗ ತಿಳಿಯದೆ ಈ ಹತ್ಯೆ ಮಾಡಿದ್ದಾನೆ ದಯವಿಟ್ಟು ಅವನಿಗೆ ಪ್ರಾಣಭಿಕ್ಷೆ ನೀಡಿ’ ಎಂದು ಪತ್ರ ಬರೆದಿರುವ ವಿಚಾರ ಭಗತ್‌ಸಿಂಗ್‌ಗೆ ಗೊತ್ತಾಯಿತು. ನನ್ನ ತಂದೆ ಪುತ್ರ ಮೋಹದಿಂದ ನನ್ನ ಪ್ರಾಣ ಉಳಿಸಲು ನಮ್ಮ ಶತ್ರುಗಳಾದ ಬ್ರಿಟಿಷರಲ್ಲಿ ನನ್ನ ಪ್ರಾಣಭಿಕ್ಷೆ ಕೋರಿದ್ದಾರೆ ಇವರೆಂತಹ ತಂದೆ! ನನ್ನನ್ನು ಬ್ರಿಟಿಷರು ಪ್ರಾಣಭಿಕ್ಷೆ ನೀಡಿ ಬಿಡುಗಡೆ ಮಾಡಿದರೂ ನಾನೂ ಬ್ರಿಟಿಷ್ ಅಧಿಕಾರಿಗಳನ್ನು ಕೊಲ್ಲುವ ಕಾರ್ಯವನ್ನು ಮುಂದುವರೆಸುತ್ತೇನೆ ಎಂದು ಘರ್ಜಿಸಿದರು.

ತನ್ನ ಉಸಿರುವವರೆಗೆ ದೇಶಭಕ್ತಿಯನ್ನು ಬೆಳಗಿದ ಭಗತ್‌ಸಿಂಗ್ ಎಲ್ಲಿ? ಹೋರಾಟದ ಮಧ್ಯೆಯೇ ಶತ್ರುವಿಗೆ ಶರಣಾಗತನಾಗಿ, ಸ್ವಾತಂತ್ರ್ಯ ಹೋರಾಟಕ್ಕೆ ಕಪ್ಪು ಮಸಿ ಬಳಿದ ವೀರಸಾವರ್ಕರ್ ಎಲ್ಲಿ? ತನ್ನವರನ್ನು ಬೆಂಬಲಿಸುವ ಆತುರದಲ್ಲಿ ಹೋರಾಟದ ಚರಿತ್ರೆಯನ್ನೇ ಮರೆತರು ಸಚಿವ ಸುರೇಶ್‌ಕುಮಾರ್!

ಇನ್ನು ಎರಡನೆಯ ವಿಷಯವೆಂದರೆ ನಾನು ಮೋದಿಯವರನ್ನು ಮುಗಿಸಿಬಿಡಿ ಎಂದು ಹೇಳಿದೆನೆಂಬುದು. ಈ ಮಾತನ್ನು ನಾನು ಆಡಿರುವುದು ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆ ಸಮಯದಲ್ಲಿ. ಮಹದೇವು ಈ ವಿಚಾರದಲ್ಲಿ ವಿವರಿಸಿ ಸಮಜಾಯಿಸಿ ನೀಡಿದ್ದಾರೆ. ಇದು ಚುನಾವಣೆ ಸಂದರ್ಭದಲ್ಲಿ ಹೇಳಿದ ಮಾತು. ಚುನಾವಣೆಯಲ್ಲಿ ಹೇಗಾದರೂ ಮಾಡಿ ವಿರೋಧ ಪಕ್ಷಗಳಾದ ಕಾಂಗ್ರೆಸ್, ಜಾತ್ಯಾತೀತ ಜನತಾದಳಗಳನ್ನು ಸೋಲಿಸಬೇಕೆಂದು ಮೋದಿ ಪಣ ತೊಟ್ಟಿದ್ದ ಸಂದರ್ಭ ಅದು. ಆದರೆ ಆ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಬೇಕಾದಷ್ಟು ಸ್ಥಾನಗಳು ಮೋದಿಯ ಬಿಜೆಪಿಗೆ ಲಭಿಸಲೇ ಇಲ್ಲ.

ಆದರೂ ಸಹ ನನ್ನ ಬಾಯಿಂದ ‘ಮುಗಿಸಿಬಿಡಿ’ ಎಂಬ ಮಾತು ಬರಬಾರದಾಗಿತ್ತು ಎಂದು ಆತ್ಮ ಹೇಳುತ್ತದೆ.

ದೇವನೂರು ಮಹದೇವ ಮತ್ತು ಸಚಿವ ಸುರೇಶ್‌ಕುಮಾರ್ ಮಧ್ಯೆ ನಡೆದ ಈ ಪತ್ರ ವ್ಯವಹಾರ ಬಹಳ ಆತ್ಮೀಯತೆಯಿಂದ ಕೂಡಿದೆ. ರಾಗದ್ವೇಷರಹಿತವಾದ ಈ ಬಗೆಯ ಪತ್ರ ವ್ಯವಹಾರ ಸಮಾಜದಲ್ಲಿ, ದ್ವೇಷ ಬೆಳೆಸುವ ಈ ದಿನಗಳಲ್ಲಿ ಸಾಮರಸ್ಯ ತರಲು ಸಹಕಾರಿಯಾಗುವುದೆಂದು ನಾನು ಭಾವಿಸುತ್ತೇನೆ.


ಇದನ್ನೂ ಓದಿ: ಊಟ, ಉದ್ಯೋಗ, ಸ್ವಾವಲಂಬನೆ ಎಲ್ಲರ ಹಕ್ಕಾಗಲಿ: 103ನೇ ಜನ್ಮದಿನದಂದು HS ದೊರೆಸ್ವಾಮಿಯವರ ಆಶಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ನಿವೃತ್ತ ಇಸ್ರೋ ಉದ್ಯೋಗಿ ಬಂಧನ

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ, 72 ವರ್ಷದ ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ವೈಟ್‌ಫೀಲ್ಡ್ ವಿಭಾಗದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ವರದಿಯಾಗಿದೆ.  ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಳಿಗ್ಗೆ...

ಮಧ್ಯಪ್ರದೇಶದಲ್ಲಿ ಶಾಸಕ ರಾಜಾ ಸಿಂಗ್‌ನಿಂದ ದ್ವೇಷ ಭಾಷಣ; ಪ್ರಚೋದನಕಾರಿ ‘ಶಿರಚ್ಛೇದನ’ ಹೇಳಿಕೆಗೆ ವಿರೋಧ

ತಮ್ಮ ಪ್ರಚೋದನಕಾರಿ ಹೇಳಿಕೆಗಳಿಂದಲೇ ಕುಖ್ಯಾತರಾಗಿರುವ ಹೈದರಾಬಾದ್‌ನ ಗೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಸಾರ್ವಜನಿಕ ರ‍್ಯಾಲಿಯಲ್ಲಿ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. "ಪ್ರತಿಯೊಬ್ಬ ಬಜರಂಗಿಗಳು...

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪ; ‘ಬಡ್ತಿ ವಿಳಂಬವಾಗಿದೆ..’; ಎಂದ ದಲಿತ ಪ್ರಾಧ್ಯಾಪಕ

ಪಂಜಾಬ್ ವಿಶ್ವವಿದ್ಯಾಲಯದ ದಲಿತ ಸಹಾಯಕ ಪ್ರಾಧ್ಯಾಪಕ ಹರ್‌ಪ್ರೀತ್ ಸಿಂಗ್ ಅವರು ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಇದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ತನ್ನ ಜಾತಿಯ ಕಾರಣದಿಂದಾಗಿ ಉದ್ದೇಶಪೂರ್ವಕವಾಗಿ ಬಡ್ತಿ ವಿಳಂಬ ಮಾಡಲಾಗಿದೆ...

ಮಹಾರಾಷ್ಟ್ರ: ತಾಯಿ, ಸಹೋದರನ ಕಣ್ಣಿಗೆ ಮೆಣಸಿನ ಪುಡಿ ಎರೆಚಿ ಮದುವೆ ಸಿದ್ಧತೆಯಲ್ಲಿದ್ದ 21 ವರ್ಷದ ಯುವತಿಯ ಅಪಹರಣ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸಿಲ್‌ನ ಭಿಗ್ವಾನ್‌ನಲ್ಲಿ 21 ವರ್ಷದ ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರನ ಮುಂದೆಯೇ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.ಮದುವೆ ಸಿದ್ಧತೆಯಲ್ಲಿದ್ದ ಯುವತಿ...

KERALA SIR | ಬಿಜೆಪಿ ಮುಖಂಡನ ದೂರು: ಪೌರತ್ವ ಸಾಬೀತುಪಡಿಸುವಂತೆ ಮುಸ್ಲಿಂ ವ್ಯಕ್ತಿಗೆ ನೋಟಿಸ್!

ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡಾ ಎಂಬಾತನ ದೂರಿನ ಮೇರೆಗೆ ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾರತೀಯ ಪೌರತ್ವ ಸಾಬೀತುಪಡಿಸುವಂತೆ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ನೋಟಿಸ್ ಜಾರಿ ಮಾಡಿದ್ದು, ಆ...

ಚೀನಾ ನಿರ್ಮಿತ ರೋಬೋ ಡಾಗ್ ತಾವೇ ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದ್ದ ಗ್ಯಾಲ್ಗೋಟಿಯಾ ವಿವಿ AI ಸಮ್ಮಿಟ್ ಎಕ್ಸ್‌ಪೋದಿಂದ ತೆರವು

ನವದೆಹಲಿ: ಚೀನಾ ನಿರ್ಮಿತ ರೋಬೋ ಡಾಗ್ ತಮ್ಮದೇ ಎಂದು ಪ್ರದರ್ಶಿಸಿದ್ದಕ್ಕಾಗಿ ಟೀಕೆಗೆ ಗುರಿಯಾದ ನಂತರ ಮತ್ತು ಕೇಂದ್ರ ಸರ್ಕಾರವು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾದ ನಂತರ ನೋಯ್ಡಾ ಮೂಲದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ಬುಧವಾರ...

ಉತ್ತರ ಪ್ರದೇಶ| ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಟಿಟಿಇಯಿಂದ ಸೇನಾ ಆಕಾಂಕ್ಷಿಯ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಟಿಕೆಟ್ ಪರೀಕ್ಷಕನೊಬ್ಬ (ಟಿಟಿಇ) ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿದ್ದ ಯುವತಿ ಆರೋಪಿಸಿದ್ದಾರೆ. ಇಂದಾರಾ ಮತ್ತು ಡಿಯೋರಿಯಾ ರೈಲು ನಿಲ್ದಾಣಗಳ ನಡುವೆ...

ನಾನು ಭಾರತಕ್ಕೆ ಯಾವಾಗ ಹಿಂತಿರುಗುತ್ತೇನೆಂದು ಹೇಳಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಮಲ್ಯ

ವಂಚನೆ ಮತ್ತು ಹಣ ವರ್ಗಾವಣೆಯ ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ, ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಯುಕೆ ತೊರೆಯುವುದನ್ನು ನನಗೆ ಕಾನೂನುಬದ್ಧವಾಗಿ ನಿಷೇಧಿಸಲಾಗಿರುವುದರಿಂದ ಯಾವಾಗ ಭಾರತಕ್ಕೆ ಹಿಂತಿರುಗುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ" ಎಂದು...

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿ ಆಗದಂತೆ ತಡೆದಿದ್ದು ರಾಹುಲ್ ಗಾಂಧಿ : ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿಯಾಗದಂತೆ ರಾಹುಲ್ ಗಾಂಧಿ ತಡೆದಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ (ಫೆ.17) ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "2014 ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ...

ಮಮತಾ ಬ್ಯಾನರ್ಜಿ ವಿರುದ್ಧ ಇಡಿ ಅರ್ಜಿ: ಮಾರ್ಚ್ 18ಕ್ಕೆ ವಿಚಾರಣೆ ಮುಂದೂಡಿಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಇತರರ ವಿರುದ್ಧದ ಐ-ಪ್ಯಾಕ್ ಕಚೇರಿ ಶೋಧಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಜಾರಿ ನಿರ್ದೇಶನಾಲಯದ (ಇಡಿ) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ...