Homeನೂರರ ನೋಟಆದರೂ ಸಹ ನನ್ನ ಬಾಯಿಂದ ‘ಮುಗಿಸಿಬಿಡಿ’ ಎಂಬ ಮಾತು ಬರಬಾರದಾಗಿತ್ತು ಎಂದು ಆತ್ಮ ಹೇಳುತ್ತದೆ: ದೊರೆಸ್ವಾಮಿ

ಆದರೂ ಸಹ ನನ್ನ ಬಾಯಿಂದ ‘ಮುಗಿಸಿಬಿಡಿ’ ಎಂಬ ಮಾತು ಬರಬಾರದಾಗಿತ್ತು ಎಂದು ಆತ್ಮ ಹೇಳುತ್ತದೆ: ದೊರೆಸ್ವಾಮಿ

ದೇವನೂರು ಮಹದೇವ ಮತ್ತು ಸಚಿವ ಸುರೇಶ್‌ಕುಮಾರ್ ಮಧ್ಯೆ ನಡೆದ ಈ ಪತ್ರ ವ್ಯವಹಾರ ಬಹಳ ಆತ್ಮೀಯತೆಯಿಂದ ಕೂಡಿದೆ. ರಾಗದ್ವೇಷರಹಿತವಾದ ಈ ಬಗೆಯ ಪತ್ರ ವ್ಯವಹಾರ ಸಮಾಜದಲ್ಲಿ, ದ್ವೇಷ ಬೆಳೆಸುವ ಈ ದಿನಗಳಲ್ಲಿ ಸಾಮರಸ್ಯ ತರಲು ಸಹಕಾರಿಯಾಗುವುದೆಂದು ನಾನು ಭಾವಿಸುತ್ತೇನೆ.

- Advertisement -
- Advertisement -

ನನ್ನ ವಿಷಯದಲ್ಲಿ ದೇವನೂರು ಮಹದೇವ ಮತ್ತು ಸಚಿವ ಸುರೇಶ್‌ಕುಮಾರ್ ಮಧ್ಯೆ ನಡೆದ ಪತ್ರ ವ್ಯವಹಾರವನ್ನು ಇಲ್ಲಿ ಮುದ್ರಿಸಲಾಗಿದೆ.

ಉಭಯತ್ರರೂ ನನ್ನ ಸ್ನೇಹಿತರು ಹಾಗೂ ಹಿತೈಷಿಗಳು. ದೇವನೂರು ಮಹದೇವ ಅವರು ತಮ್ಮ ಪತ್ರದಲ್ಲಿ ಅಸಲಿಯನ್ನು ನಕಲಿ ಮಾಡುವುದು ಸರಿಯೇ ಎಂದು ಪ್ರಶ್ನೆ ಮಾಡಿದ್ದಾರೆ. ನನ್ನ ಮೇಲೆ ಸಲ್ಲದ ಆರೋಪ ಹೊರೆಸಿ ನನ್ನನ್ನು ನಕಲಿ ಹೋರಾಟಗಾರ ಪಾಕ್ ಏಜೆಂಟ್ ಎಂದೆಲ್ಲ ಆಧಾರ ರಹಿತ ಆಪಾದನೆ ಮಾಡಿ ತೇಜೋವಧೆ ಮಾಡಿರುವ ಬಸವ ಗೌಡ ಯತ್ನಾಳ್ ನಾನು ನಕಲಿ ಪತ್ರಕರ್ತ, 38 ದಿನಗಳ ಪೌರವಾಣಿ ಸಂಪಾದಕ, ಅರುಳು ಮರುಳು ಎಂದೆಲ್ಲ ಅಪ್ಪಟ್ಟ ಸುಳ್ಳು ಆರೋಪಗಳನ್ನು ಮಾಡಿ ನನ್ನ ಚಾರಿತ್ರ್ಯ ವಧೆ ಮಾಡಿರುವ ಬಾಬುಕೃಷ್ಣಮೂರ್ತಿ ಮುಂತಾದ ಮಹನೀಯರೆಲ್ಲರನ್ನೂ ಕುರಿತು ದೇವನೂರು ಮಹದೇವ ನೊಂದು ನುಡಿದಿದ್ದಾರೆ.

ಮಹಾದೇವು ಮುಂದುವರೆದು ಕೊಳೆತ ಹಣ್ಣುಗಳ ಜೊತೆ ತಾಜಾ ಹಣ್ಣುಗಳು ಬೆರೆತುಹೊದಾಗ, ಅವೂ ಕೆಡಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ. ಮಹದೇವರ ಈ ಮಾತು ಸುರೇಶ್‌ಕುಮಾರ್ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸುರೇಶ್‌ಕುಮಾರ್ ಅವರು ದೇವನೂರು ಮಹದೇವ ಅವರಿಗೆ ಈ ಪ್ರಶ್ನೆಗೆ ಉತ್ತರ ಕೊಡುವುದರಲ್ಲಿ ಮುಗ್ಗರಿಸಿ, ನನ್ನವರನ್ನು ಡಿಫೆಂಡ್ ಮಾಡಿಕೊಳ್ಳುವುದು ನನ್ನ ಧರ್ಮ ಎಂದು ಉತ್ತರಿಸಿದ್ದಾರೆ. ಅವರು ಯಾರನ್ನು ಡಿಫೆಂಡ್ ಮಾಡಿಕೊಂಡರು ಎಂಬುದನ್ನೂ ತಿಳಿಸಿದ್ದಾರೆ.


ಇದನ್ನೂ ಓದಿ: ದೊರೆಸ್ವಾಮಿಯವರ ವಿಚಾರವಾಗಿ ಎಸ್.ಸುರೇಶ್ ಕುಮಾರ್ ಅವರಿಗೆ ದೇವನೂರು ಮಹಾದೇವರವರು ಬರೆದ ಬಹಿರಂಗ ಪತ್ರ

ಇದನ್ನೂ ಓದಿ: ದೊರೆಸ್ವಾಮಿ ವಿಚಾರವಾಗಿ ದೇವನೂರು ಪತ್ರಕ್ಕೆ ಸುರೇಶ್‌ ಕುಮಾರ್‌ ಪ್ರತಿಕ್ರಿಯೆ..


ಬ್ರಿಟಿಷರ ವಿರುದ್ಧ ಅಷ್ಟೊಂದು ತೀವ್ರತೆಯಿಂದ ಹೋರಾಡಿದ ವೀರಸಾವರ್ಕರ್ ಕರಿನೀರುಶಿಕ್ಷೆ ಅನುಭವಿಸುವಾಗ ಏಕೆ ಶತ್ರು ಬ್ರಿಟಿಷರಿಗೆ ಶರಣಾಗತರಾದರು? ಬ್ರಿಟಿಷರು ಹಾಕಿದ ಎಲ್ಲ ಷರತ್ತುಗಳಿಗೆ ಅಂದರೆ ನಾನು ಬಿಡುಗಡೆಯಾದರೆ ನನ್ನ ಜಿಲ್ಲೆಬಿಟ್ಟು ಹೊರಗೆ ಓಡಾಡುವುದಿಲ್ಲ. ಪತ್ರಿಕೆಗಳಿಗೆ ಲೇಖನ ಬರೆಯುವುದಿಲ್ಲ. ನಿಮ್ಮ ಆಜ್ಞಾಪಾಲಕನಾಗಿರುತ್ತೇನೆ ಎಂದೆಲ್ಲ ಬರೆದುಕೊಡಲು ಅವರ ಮನಸ್ಸು ಹೇಗೆ ಒಪ್ಪಿಕೊಂಡಿತು? ಧರ್ಮ ಗ್ಲಾನಿ ಅವರಲ್ಲಿ ಹೇಗೆ ಉಂಟಾಯಿತು? ಎಂದು ವೀರ ಸಾವರ್ಕರ್ ನಡವಳಿಕೆಯನ್ನು ಒಪ್ಪಿಕೊಳ್ಳುವ ಮೊದಲು ಚಿಂತಿಸಬೇಡವೇ ಸುರೇಶ್‌ಕುಮಾರ್ ಅವರೇ?

ನನ್ನನ್ನು ಶಾಸನ ಸಭೆಯಲ್ಲಿ ಮೇಲ್ಮನೆ ಸದಸ್ಯ ಬಿಜೆಪಿ ಎಂಎಲ್‌ಸಿ ರವಿಕುಮಾರ್ ನನಗೆ ಅಂತರಾಷ್ಟ್ರೀಯ ವ್ಯಕ್ತಿಗಳ ಸಂಬಂಧ ಇದೆ ಎಂದು ವಿಧಾನ ಪರಿಷತ್ತಿನಲ್ಲಿ ಹೇಳಿದ್ದಾರೆ. ಮಂತ್ರಿ ಈಶ್ವರಪ್ಪನವರು ನಾನು ಯಾರದ್ದೋ ಜೊತೆಗಿರುವ ಫೋಟೊ ತೋರಿಸಿ ಪಾಕಿಸ್ತಾನದ ನಂಟು ನನಗಿದೆ ಎಂದು ವಿಧಾನಸಭೆಯಲ್ಲಿ ಹೇಳಿದ್ದಾರೆ. ನಾನು ಅತಿಥಿಯಾಗಿ ಹೋಗಿರುವ ನೂರಾರು ಸಮಾರಂಭಗಳಲ್ಲಿ ಸಮಾರಂಭ ಮುಗಿದ ಮೇಲೆ ಜನ ನನ್ನ ಜೊತೆ ಫೋಟೊ ತೆಗೆಸಿಕೊಳ್ಳಲು ಮುಗಿಬೀಳುತ್ತಾರೆ. ಹೀಗೆ ಫೋಟೊ ತೆಗೆಸಿಕೊಂಡವರು ಸಾವಿರಾರು ಜನ, ಅದರಲ್ಲಿ ಇದೂ ಒಂದಿರಬಹುದು. ಅಷ್ಟಕ್ಕೇ ನನ್ನನ್ನು ನಕ್ಸಲಿಯ, Anti National, ಪಾಕಿಸ್ತಾನಿ ಏಜೆಂಟ್ ಎಂದು ಕರೆಯವರು ಮೊದಲು ನನ್ನ ಅರಾಷ್ಟ್ರಿಕತೆಗೆ, ಪಾಕಿಸ್ತಾನ್ ಏಜೆಂಟ್ ಎಂಬುದಕ್ಕೆ ಬೇರೆ ಪುರಾವೆಗಳನ್ನು ನೀಡುವ ಒಂದು ಫೋಟೊ ತೋರಿಸಿ. ಇಂತಹ ಗುರುತರ ಆಪಾದನೆ ಮಾಡುವುದು ಮಂತ್ರಿವರ್ಯರಿಗೆ, ಶಾಸಕರಿಗೆ ಗೌರವ ತರುವುದಿಲ್ಲ.

ಅನಂತಕುಮಾರ್ ರಾಷ್ಟ್ರವಿರೊಧಿ ವ್ಯಕ್ತಿ ಎಂದು ಹೇಳಿ ನನಗೆ ಧಿಕ್ಕಾರ ಹೇಳಿದ್ದು, ಮಂತ್ರಿಗಳಾದ ಸೋಮಣ್ಣ, ಈಶ್ವರಪ್ಪ ಮುಂತಾದವರು ನನ್ನ ಮೇಲೆ ಆರೊಪಗಳನ್ನು ಮಾಡಿದ್ದು ನಿಮಗೆ ಸಮ್ಮತ ಮತ್ತು ಅವರನ್ನೆಲ್ಲ ಬೆಂಬಲಿಸುವುದು ನಿಮ್ಮ ಧರ್ಮ ಎಂದು ನಿಮ್ಮ ಹೃದಯ ಒಪ್ಪುತ್ತದೆಯೇ?

ವೀರಸಾವರ್ಕರರಿಗೂ, ಭಗತ್‌ಸಿಂಗ್‌ಗೂ ಬ್ರಿಟಿಷರ ಬಗೆಗೆ ಒಂದೇ ಬಗೆಯ ಭಾವನೆ ಇತ್ತು. ಬ್ರಿಟಿಷರನ್ನು ಭಾರತದಿಂದ ಓಡಿಸಲು ಅವರದೇ ಕಾರ್ಯಕ್ರಮವಿತ್ತು, ಭಗತ್‌ಸಿಂಗ್‌ಗೆ ಮರಣದಂಡನೆ ವಿಧಿಸಿ ಸೆರೆಮನೆಯಲ್ಲಿಟ್ಟಿದ್ದರು. ಆಗ ಅವರ ತಂದೆ ಬ್ರಿಟಿಷರಿಗೆ ಪತ್ರ ಬರೆದು ‘ನನ್ನ ಮಗ ತಿಳಿಯದೆ ಈ ಹತ್ಯೆ ಮಾಡಿದ್ದಾನೆ ದಯವಿಟ್ಟು ಅವನಿಗೆ ಪ್ರಾಣಭಿಕ್ಷೆ ನೀಡಿ’ ಎಂದು ಪತ್ರ ಬರೆದಿರುವ ವಿಚಾರ ಭಗತ್‌ಸಿಂಗ್‌ಗೆ ಗೊತ್ತಾಯಿತು. ನನ್ನ ತಂದೆ ಪುತ್ರ ಮೋಹದಿಂದ ನನ್ನ ಪ್ರಾಣ ಉಳಿಸಲು ನಮ್ಮ ಶತ್ರುಗಳಾದ ಬ್ರಿಟಿಷರಲ್ಲಿ ನನ್ನ ಪ್ರಾಣಭಿಕ್ಷೆ ಕೋರಿದ್ದಾರೆ ಇವರೆಂತಹ ತಂದೆ! ನನ್ನನ್ನು ಬ್ರಿಟಿಷರು ಪ್ರಾಣಭಿಕ್ಷೆ ನೀಡಿ ಬಿಡುಗಡೆ ಮಾಡಿದರೂ ನಾನೂ ಬ್ರಿಟಿಷ್ ಅಧಿಕಾರಿಗಳನ್ನು ಕೊಲ್ಲುವ ಕಾರ್ಯವನ್ನು ಮುಂದುವರೆಸುತ್ತೇನೆ ಎಂದು ಘರ್ಜಿಸಿದರು.

ತನ್ನ ಉಸಿರುವವರೆಗೆ ದೇಶಭಕ್ತಿಯನ್ನು ಬೆಳಗಿದ ಭಗತ್‌ಸಿಂಗ್ ಎಲ್ಲಿ? ಹೋರಾಟದ ಮಧ್ಯೆಯೇ ಶತ್ರುವಿಗೆ ಶರಣಾಗತನಾಗಿ, ಸ್ವಾತಂತ್ರ್ಯ ಹೋರಾಟಕ್ಕೆ ಕಪ್ಪು ಮಸಿ ಬಳಿದ ವೀರಸಾವರ್ಕರ್ ಎಲ್ಲಿ? ತನ್ನವರನ್ನು ಬೆಂಬಲಿಸುವ ಆತುರದಲ್ಲಿ ಹೋರಾಟದ ಚರಿತ್ರೆಯನ್ನೇ ಮರೆತರು ಸಚಿವ ಸುರೇಶ್‌ಕುಮಾರ್!

ಇನ್ನು ಎರಡನೆಯ ವಿಷಯವೆಂದರೆ ನಾನು ಮೋದಿಯವರನ್ನು ಮುಗಿಸಿಬಿಡಿ ಎಂದು ಹೇಳಿದೆನೆಂಬುದು. ಈ ಮಾತನ್ನು ನಾನು ಆಡಿರುವುದು ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆ ಸಮಯದಲ್ಲಿ. ಮಹದೇವು ಈ ವಿಚಾರದಲ್ಲಿ ವಿವರಿಸಿ ಸಮಜಾಯಿಸಿ ನೀಡಿದ್ದಾರೆ. ಇದು ಚುನಾವಣೆ ಸಂದರ್ಭದಲ್ಲಿ ಹೇಳಿದ ಮಾತು. ಚುನಾವಣೆಯಲ್ಲಿ ಹೇಗಾದರೂ ಮಾಡಿ ವಿರೋಧ ಪಕ್ಷಗಳಾದ ಕಾಂಗ್ರೆಸ್, ಜಾತ್ಯಾತೀತ ಜನತಾದಳಗಳನ್ನು ಸೋಲಿಸಬೇಕೆಂದು ಮೋದಿ ಪಣ ತೊಟ್ಟಿದ್ದ ಸಂದರ್ಭ ಅದು. ಆದರೆ ಆ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಬೇಕಾದಷ್ಟು ಸ್ಥಾನಗಳು ಮೋದಿಯ ಬಿಜೆಪಿಗೆ ಲಭಿಸಲೇ ಇಲ್ಲ.

ಆದರೂ ಸಹ ನನ್ನ ಬಾಯಿಂದ ‘ಮುಗಿಸಿಬಿಡಿ’ ಎಂಬ ಮಾತು ಬರಬಾರದಾಗಿತ್ತು ಎಂದು ಆತ್ಮ ಹೇಳುತ್ತದೆ.

ದೇವನೂರು ಮಹದೇವ ಮತ್ತು ಸಚಿವ ಸುರೇಶ್‌ಕುಮಾರ್ ಮಧ್ಯೆ ನಡೆದ ಈ ಪತ್ರ ವ್ಯವಹಾರ ಬಹಳ ಆತ್ಮೀಯತೆಯಿಂದ ಕೂಡಿದೆ. ರಾಗದ್ವೇಷರಹಿತವಾದ ಈ ಬಗೆಯ ಪತ್ರ ವ್ಯವಹಾರ ಸಮಾಜದಲ್ಲಿ, ದ್ವೇಷ ಬೆಳೆಸುವ ಈ ದಿನಗಳಲ್ಲಿ ಸಾಮರಸ್ಯ ತರಲು ಸಹಕಾರಿಯಾಗುವುದೆಂದು ನಾನು ಭಾವಿಸುತ್ತೇನೆ.


ಇದನ್ನೂ ಓದಿ: ಊಟ, ಉದ್ಯೋಗ, ಸ್ವಾವಲಂಬನೆ ಎಲ್ಲರ ಹಕ್ಕಾಗಲಿ: 103ನೇ ಜನ್ಮದಿನದಂದು HS ದೊರೆಸ್ವಾಮಿಯವರ ಆಶಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ (82 ವರ್ಷ) ಅವರು ಬುಧವಾರ (ಜನವರಿ 7, 2026) ತಡರಾತ್ರಿ ಪುಣೆಯಲ್ಲಿರುವ ತಮ್ಮ ಮನೆಯಲ್ಲಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದರು. ಈ ಕುರಿತು ಗಾಡ್ಗೀಳ್ ಅವರ...

ಅಪರಾಧದ ಸ್ವರೂಪ ಏನೇ ಇರಲಿ, ತ್ವರಿತ ವಿಚಾರಣೆಯ ಹಕ್ಕು ಅನ್ವಯಿಸುತ್ತದೆ: ಸುಪ್ರೀಂ ಕೋರ್ಟ್

ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ತ್ವರಿತ ವಿಚಾರಣೆಯ ಹಕ್ಕು ಅಪರಾಧದ ಗಂಭೀರತೆ ಅಥವಾ ಸ್ವರೂಪವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪುನರುಚ್ಚರಿಸಿದೆ. 2002 ರ ಹಣ ವರ್ಗಾವಣೆ ತಡೆ ಕಾಯ್ದೆಯ...

ಬಾಂಗ್ಲಾದೇಶ: ಗುಂಪು ದಾಳಿಯಿಂದ ತಪ್ಪಿಸಿಕೊಳ್ಳಲು ಕಾಲುವೆಗೆ ಹಾರಿದ ಹಿಂದೂ ವ್ಯಕ್ತಿ ಸಾವು

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಸುದ್ದಿಗಳು ನಿರಂತರವಾಗಿ ವರದಿಯಾಗುತ್ತಿರುವ ನಡುವೆಯೇ, ನೌಗಾಂವ್ ಜಿಲ್ಲೆಯ ಮೊಹದೇವ್‌ಪುರ ಉಪಜಿಲ್ಲಾದಲ್ಲಿ ದರೋಡೆ ಆರೋಪ ಹೊರಿಸಿದ ಗುಂಪಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ 25 ವರ್ಷದ ಹಿಂದೂ ವ್ಯಕ್ತಿ ಕಾಲುವೆಗೆ ಹಾರಿ...

ಹೋರಾಟಗಾರ್ತಿ ಕಾಮ್ರೇಡ್ ಪದ್ಮಕ್ಕ ಶ್ರದ್ಧಾಂಜಲಿ ಸಭೆ

ಬೆಂಗಳೂರಿನ ಆಶೀರ್ವಾದ್ ಸೆಂಟರ್ ನಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಪದ್ಮಾರವರ ಕುಟುಂಬ, ಸಹ ಹೋರಾಟಗಾರು, ಚಿಂತಕರು, ಸಾಹಿತಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಪದ್ಮಾರವರ ಜೊತೆಗಿನ ಒಡನಾಟವನ್ನು ನೆನೆಯಲಾಯಿತು. ಡಿಸೆಂಬರ್ 25 ರಂದು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ...

‘ನಾಯಿಗಳ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ’: ರಸ್ತೆಗಳು, ನಾಯಿಗಳಿಂದ ಮುಕ್ತವಾಗಿರಬೇಕು: ಸುಪ್ರೀಂ ಕೋರ್ಟ್

ನವದೆಹಲಿ: ನಾಯಿ ಕಚ್ಚುವ ಮನಸ್ಥಿತಿಯಲ್ಲಿರುವಾಗ ಅದರ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲವಾದ್ದರಿಂದ, ರಸ್ತೆಗಳು ಅಥವಾ ಬೀದಿಗಳು ನಾಯಿಗಳಿಂದ ಮುಕ್ತವಾಗುವಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.  ಬೀದಿ ನಾಯಿಗಳಿಗೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣವನ್ನು...

‘ಮಜಾ ನಾ ಕರಾಯಾ ತೋ..ಪೈಸೆ ವಾಪಸ್’: ಭಾರತಕ್ಕೆ ನೇರ ಬೆದರಿಕೆ ಹಾಕಿದ ಪಾಕಿಸ್ತಾನ ಸೇನಾಧಿಕಾರಿ ಅಹ್ಮದ್ ಷರೀಫ್ ಚೌಧರಿ

ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ನ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ, ಕಾಬೂಲ್ ಜೊತೆಗಿನ ಇಸ್ಲಾಮಾಬಾದ್‌ನ ನಡೆಯುತ್ತಿರುವ ಸಂಘರ್ಷದೊಂದಿಗೆ ಭಾರತವನ್ನು ಜೋಡಿಸುವ ಮೂಲಕ ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿದ್ದಾರೆ.  ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ...

‘ಸೋಮನಾಥನನ್ನು ಹೆಚ್ಚು ದ್ವೇಷಿಸುತ್ತಿದ್ದ ನೆಹರು, ಮೊಘಲ್ ಆಕ್ರಮಣಕಾರರನ್ನು ವೈಭವೀಕರಿಸುತ್ತಿದ್ದರು’: ಬಿಜೆಪಿ ಆರೋಪ

ನವದೆಹಲಿ: ಸೋಮನಾಥ ದೇವಾಲಯವನ್ನು ಹಿಂದೆ ಘಜ್ನಿ ಮಹಮ್ಮದ್ ಮತ್ತು ಅಲಾವುದ್ದೀನ್ ಖಿಲ್ಜಿ ಲೂಟಿ ಮಾಡಿದ್ದರು ಆದರೆ ಸ್ವತಂತ್ರ ಭಾರತದಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಭಗವಾನ್ ಸೋಮನಾಥನನ್ನು ಹೆಚ್ಚು ದ್ವೇಷಿಸುತ್ತಿದ್ದರು ಎಂದು...

ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿರುವುದಾಗಿ ಆರೋಪ: ಆಕೆ ತನ್ನನ್ನು ತಾನು ವಿವಸ್ತ್ರಗೊಳಿಸಿಕೊಂಡಿದ್ದಾಳೆ ಎಂದ ಪೊಲೀಸ್ ಕಮಿಷನರ್

ಹುಬ್ಬಳ್ಳಿ: ಪೊಲೀಸ್ ವ್ಯಾನ್ ಒಳಗೆ ಪೂರ್ಣ ಬಟ್ಟೆಯಿಲ್ಲದೆ ಮಹಿಳೆಯೊಬ್ಬರ ವಿಡಿಯೋ ವೈರಲ್ ಆದ ನಂತರ, ಬಿಜೆಪಿ ನಾಯಕರು ಪೊಲೀಸರು ಅವಳನ್ನು ಬಂಧಿಸುವಾಗ ಆಕೆಯ ಬಟ್ಟೆಗಳನ್ನು ಬಿಚ್ಚಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜನವರಿ 5...

ಬಿಜೆಪಿಯೊಂದಿಗೆ ಕೈಜೋಡಿಸಿದ ಗೌಡರೊಂದಿಗಿನ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿದ ಕೇರಳ ಜೆಡಿಎಸ್; ಹೊಸ ಪಕ್ಷದೊಂದಿಗೆ ವಿಲೀನ

ಜನತಾ ದಳ (ಜಾತ್ಯತೀತ) ದ ಕೇರಳ ಘಟಕವು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದ ರಾಷ್ಟ್ರೀಯ ನಾಯಕತ್ವದೊಂದಿಗೆ ಸಂಬಂಧವನ್ನು ಕಡಿದುಕೊಂಡು ಹೊಸ ರಾಜಕೀಯ ಪಕ್ಷದೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದೆ. ಈ ನಿರ್ಧಾರದ ಕುರಿತು ಶೀಘ್ರದಲ್ಲೇ ಅಧಿಕೃತ...

‘ಚೀನಾ, ರಷ್ಯಾ, ಕ್ಯೂಬಾ, ಇರಾನ್‌ಗಳನ್ನು ಹೊರಗಿಡಿ’: ವೆನೆಜುವೆಲಾಗೆ ಟ್ರಂಪ್ ತಂಡದ ಹೊಸ ತೈಲ ಎಚ್ಚರಿಕೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವೆನೆಜುವೆಲಾದ ಮಧ್ಯಂತರ ಅಧ್ಯಕ್ಷ ಡೆಲ್ಸಿ ರೊಡ್ರಿಗಸ್ ನೇತೃತ್ವದ ಹೊಸ ಆಡಳಿತಕ್ಕೆ ಚೀನಾ, ರಷ್ಯಾ, ಇರಾನ್ ಮತ್ತು ಕ್ಯೂಬಾ ಜೊತೆಗಿನ ಆರ್ಥಿಕ ಸಂಬಂಧಗಳನ್ನು "ಕಿತ್ತುಹಾಕಬೇಕು" ಮತ್ತು "ಕಡಿತಗೊಳಿಸಬೇಕು" ಎಂದು...