Homeನೂರರ ನೋಟಆದರೂ ಸಹ ನನ್ನ ಬಾಯಿಂದ ‘ಮುಗಿಸಿಬಿಡಿ’ ಎಂಬ ಮಾತು ಬರಬಾರದಾಗಿತ್ತು ಎಂದು ಆತ್ಮ ಹೇಳುತ್ತದೆ: ದೊರೆಸ್ವಾಮಿ

ಆದರೂ ಸಹ ನನ್ನ ಬಾಯಿಂದ ‘ಮುಗಿಸಿಬಿಡಿ’ ಎಂಬ ಮಾತು ಬರಬಾರದಾಗಿತ್ತು ಎಂದು ಆತ್ಮ ಹೇಳುತ್ತದೆ: ದೊರೆಸ್ವಾಮಿ

ದೇವನೂರು ಮಹದೇವ ಮತ್ತು ಸಚಿವ ಸುರೇಶ್‌ಕುಮಾರ್ ಮಧ್ಯೆ ನಡೆದ ಈ ಪತ್ರ ವ್ಯವಹಾರ ಬಹಳ ಆತ್ಮೀಯತೆಯಿಂದ ಕೂಡಿದೆ. ರಾಗದ್ವೇಷರಹಿತವಾದ ಈ ಬಗೆಯ ಪತ್ರ ವ್ಯವಹಾರ ಸಮಾಜದಲ್ಲಿ, ದ್ವೇಷ ಬೆಳೆಸುವ ಈ ದಿನಗಳಲ್ಲಿ ಸಾಮರಸ್ಯ ತರಲು ಸಹಕಾರಿಯಾಗುವುದೆಂದು ನಾನು ಭಾವಿಸುತ್ತೇನೆ.

- Advertisement -
- Advertisement -

ನನ್ನ ವಿಷಯದಲ್ಲಿ ದೇವನೂರು ಮಹದೇವ ಮತ್ತು ಸಚಿವ ಸುರೇಶ್‌ಕುಮಾರ್ ಮಧ್ಯೆ ನಡೆದ ಪತ್ರ ವ್ಯವಹಾರವನ್ನು ಇಲ್ಲಿ ಮುದ್ರಿಸಲಾಗಿದೆ.

ಉಭಯತ್ರರೂ ನನ್ನ ಸ್ನೇಹಿತರು ಹಾಗೂ ಹಿತೈಷಿಗಳು. ದೇವನೂರು ಮಹದೇವ ಅವರು ತಮ್ಮ ಪತ್ರದಲ್ಲಿ ಅಸಲಿಯನ್ನು ನಕಲಿ ಮಾಡುವುದು ಸರಿಯೇ ಎಂದು ಪ್ರಶ್ನೆ ಮಾಡಿದ್ದಾರೆ. ನನ್ನ ಮೇಲೆ ಸಲ್ಲದ ಆರೋಪ ಹೊರೆಸಿ ನನ್ನನ್ನು ನಕಲಿ ಹೋರಾಟಗಾರ ಪಾಕ್ ಏಜೆಂಟ್ ಎಂದೆಲ್ಲ ಆಧಾರ ರಹಿತ ಆಪಾದನೆ ಮಾಡಿ ತೇಜೋವಧೆ ಮಾಡಿರುವ ಬಸವ ಗೌಡ ಯತ್ನಾಳ್ ನಾನು ನಕಲಿ ಪತ್ರಕರ್ತ, 38 ದಿನಗಳ ಪೌರವಾಣಿ ಸಂಪಾದಕ, ಅರುಳು ಮರುಳು ಎಂದೆಲ್ಲ ಅಪ್ಪಟ್ಟ ಸುಳ್ಳು ಆರೋಪಗಳನ್ನು ಮಾಡಿ ನನ್ನ ಚಾರಿತ್ರ್ಯ ವಧೆ ಮಾಡಿರುವ ಬಾಬುಕೃಷ್ಣಮೂರ್ತಿ ಮುಂತಾದ ಮಹನೀಯರೆಲ್ಲರನ್ನೂ ಕುರಿತು ದೇವನೂರು ಮಹದೇವ ನೊಂದು ನುಡಿದಿದ್ದಾರೆ.

ಮಹಾದೇವು ಮುಂದುವರೆದು ಕೊಳೆತ ಹಣ್ಣುಗಳ ಜೊತೆ ತಾಜಾ ಹಣ್ಣುಗಳು ಬೆರೆತುಹೊದಾಗ, ಅವೂ ಕೆಡಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ. ಮಹದೇವರ ಈ ಮಾತು ಸುರೇಶ್‌ಕುಮಾರ್ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸುರೇಶ್‌ಕುಮಾರ್ ಅವರು ದೇವನೂರು ಮಹದೇವ ಅವರಿಗೆ ಈ ಪ್ರಶ್ನೆಗೆ ಉತ್ತರ ಕೊಡುವುದರಲ್ಲಿ ಮುಗ್ಗರಿಸಿ, ನನ್ನವರನ್ನು ಡಿಫೆಂಡ್ ಮಾಡಿಕೊಳ್ಳುವುದು ನನ್ನ ಧರ್ಮ ಎಂದು ಉತ್ತರಿಸಿದ್ದಾರೆ. ಅವರು ಯಾರನ್ನು ಡಿಫೆಂಡ್ ಮಾಡಿಕೊಂಡರು ಎಂಬುದನ್ನೂ ತಿಳಿಸಿದ್ದಾರೆ.


ಇದನ್ನೂ ಓದಿ: ದೊರೆಸ್ವಾಮಿಯವರ ವಿಚಾರವಾಗಿ ಎಸ್.ಸುರೇಶ್ ಕುಮಾರ್ ಅವರಿಗೆ ದೇವನೂರು ಮಹಾದೇವರವರು ಬರೆದ ಬಹಿರಂಗ ಪತ್ರ

ಇದನ್ನೂ ಓದಿ: ದೊರೆಸ್ವಾಮಿ ವಿಚಾರವಾಗಿ ದೇವನೂರು ಪತ್ರಕ್ಕೆ ಸುರೇಶ್‌ ಕುಮಾರ್‌ ಪ್ರತಿಕ್ರಿಯೆ..


ಬ್ರಿಟಿಷರ ವಿರುದ್ಧ ಅಷ್ಟೊಂದು ತೀವ್ರತೆಯಿಂದ ಹೋರಾಡಿದ ವೀರಸಾವರ್ಕರ್ ಕರಿನೀರುಶಿಕ್ಷೆ ಅನುಭವಿಸುವಾಗ ಏಕೆ ಶತ್ರು ಬ್ರಿಟಿಷರಿಗೆ ಶರಣಾಗತರಾದರು? ಬ್ರಿಟಿಷರು ಹಾಕಿದ ಎಲ್ಲ ಷರತ್ತುಗಳಿಗೆ ಅಂದರೆ ನಾನು ಬಿಡುಗಡೆಯಾದರೆ ನನ್ನ ಜಿಲ್ಲೆಬಿಟ್ಟು ಹೊರಗೆ ಓಡಾಡುವುದಿಲ್ಲ. ಪತ್ರಿಕೆಗಳಿಗೆ ಲೇಖನ ಬರೆಯುವುದಿಲ್ಲ. ನಿಮ್ಮ ಆಜ್ಞಾಪಾಲಕನಾಗಿರುತ್ತೇನೆ ಎಂದೆಲ್ಲ ಬರೆದುಕೊಡಲು ಅವರ ಮನಸ್ಸು ಹೇಗೆ ಒಪ್ಪಿಕೊಂಡಿತು? ಧರ್ಮ ಗ್ಲಾನಿ ಅವರಲ್ಲಿ ಹೇಗೆ ಉಂಟಾಯಿತು? ಎಂದು ವೀರ ಸಾವರ್ಕರ್ ನಡವಳಿಕೆಯನ್ನು ಒಪ್ಪಿಕೊಳ್ಳುವ ಮೊದಲು ಚಿಂತಿಸಬೇಡವೇ ಸುರೇಶ್‌ಕುಮಾರ್ ಅವರೇ?

ನನ್ನನ್ನು ಶಾಸನ ಸಭೆಯಲ್ಲಿ ಮೇಲ್ಮನೆ ಸದಸ್ಯ ಬಿಜೆಪಿ ಎಂಎಲ್‌ಸಿ ರವಿಕುಮಾರ್ ನನಗೆ ಅಂತರಾಷ್ಟ್ರೀಯ ವ್ಯಕ್ತಿಗಳ ಸಂಬಂಧ ಇದೆ ಎಂದು ವಿಧಾನ ಪರಿಷತ್ತಿನಲ್ಲಿ ಹೇಳಿದ್ದಾರೆ. ಮಂತ್ರಿ ಈಶ್ವರಪ್ಪನವರು ನಾನು ಯಾರದ್ದೋ ಜೊತೆಗಿರುವ ಫೋಟೊ ತೋರಿಸಿ ಪಾಕಿಸ್ತಾನದ ನಂಟು ನನಗಿದೆ ಎಂದು ವಿಧಾನಸಭೆಯಲ್ಲಿ ಹೇಳಿದ್ದಾರೆ. ನಾನು ಅತಿಥಿಯಾಗಿ ಹೋಗಿರುವ ನೂರಾರು ಸಮಾರಂಭಗಳಲ್ಲಿ ಸಮಾರಂಭ ಮುಗಿದ ಮೇಲೆ ಜನ ನನ್ನ ಜೊತೆ ಫೋಟೊ ತೆಗೆಸಿಕೊಳ್ಳಲು ಮುಗಿಬೀಳುತ್ತಾರೆ. ಹೀಗೆ ಫೋಟೊ ತೆಗೆಸಿಕೊಂಡವರು ಸಾವಿರಾರು ಜನ, ಅದರಲ್ಲಿ ಇದೂ ಒಂದಿರಬಹುದು. ಅಷ್ಟಕ್ಕೇ ನನ್ನನ್ನು ನಕ್ಸಲಿಯ, Anti National, ಪಾಕಿಸ್ತಾನಿ ಏಜೆಂಟ್ ಎಂದು ಕರೆಯವರು ಮೊದಲು ನನ್ನ ಅರಾಷ್ಟ್ರಿಕತೆಗೆ, ಪಾಕಿಸ್ತಾನ್ ಏಜೆಂಟ್ ಎಂಬುದಕ್ಕೆ ಬೇರೆ ಪುರಾವೆಗಳನ್ನು ನೀಡುವ ಒಂದು ಫೋಟೊ ತೋರಿಸಿ. ಇಂತಹ ಗುರುತರ ಆಪಾದನೆ ಮಾಡುವುದು ಮಂತ್ರಿವರ್ಯರಿಗೆ, ಶಾಸಕರಿಗೆ ಗೌರವ ತರುವುದಿಲ್ಲ.

ಅನಂತಕುಮಾರ್ ರಾಷ್ಟ್ರವಿರೊಧಿ ವ್ಯಕ್ತಿ ಎಂದು ಹೇಳಿ ನನಗೆ ಧಿಕ್ಕಾರ ಹೇಳಿದ್ದು, ಮಂತ್ರಿಗಳಾದ ಸೋಮಣ್ಣ, ಈಶ್ವರಪ್ಪ ಮುಂತಾದವರು ನನ್ನ ಮೇಲೆ ಆರೊಪಗಳನ್ನು ಮಾಡಿದ್ದು ನಿಮಗೆ ಸಮ್ಮತ ಮತ್ತು ಅವರನ್ನೆಲ್ಲ ಬೆಂಬಲಿಸುವುದು ನಿಮ್ಮ ಧರ್ಮ ಎಂದು ನಿಮ್ಮ ಹೃದಯ ಒಪ್ಪುತ್ತದೆಯೇ?

ವೀರಸಾವರ್ಕರರಿಗೂ, ಭಗತ್‌ಸಿಂಗ್‌ಗೂ ಬ್ರಿಟಿಷರ ಬಗೆಗೆ ಒಂದೇ ಬಗೆಯ ಭಾವನೆ ಇತ್ತು. ಬ್ರಿಟಿಷರನ್ನು ಭಾರತದಿಂದ ಓಡಿಸಲು ಅವರದೇ ಕಾರ್ಯಕ್ರಮವಿತ್ತು, ಭಗತ್‌ಸಿಂಗ್‌ಗೆ ಮರಣದಂಡನೆ ವಿಧಿಸಿ ಸೆರೆಮನೆಯಲ್ಲಿಟ್ಟಿದ್ದರು. ಆಗ ಅವರ ತಂದೆ ಬ್ರಿಟಿಷರಿಗೆ ಪತ್ರ ಬರೆದು ‘ನನ್ನ ಮಗ ತಿಳಿಯದೆ ಈ ಹತ್ಯೆ ಮಾಡಿದ್ದಾನೆ ದಯವಿಟ್ಟು ಅವನಿಗೆ ಪ್ರಾಣಭಿಕ್ಷೆ ನೀಡಿ’ ಎಂದು ಪತ್ರ ಬರೆದಿರುವ ವಿಚಾರ ಭಗತ್‌ಸಿಂಗ್‌ಗೆ ಗೊತ್ತಾಯಿತು. ನನ್ನ ತಂದೆ ಪುತ್ರ ಮೋಹದಿಂದ ನನ್ನ ಪ್ರಾಣ ಉಳಿಸಲು ನಮ್ಮ ಶತ್ರುಗಳಾದ ಬ್ರಿಟಿಷರಲ್ಲಿ ನನ್ನ ಪ್ರಾಣಭಿಕ್ಷೆ ಕೋರಿದ್ದಾರೆ ಇವರೆಂತಹ ತಂದೆ! ನನ್ನನ್ನು ಬ್ರಿಟಿಷರು ಪ್ರಾಣಭಿಕ್ಷೆ ನೀಡಿ ಬಿಡುಗಡೆ ಮಾಡಿದರೂ ನಾನೂ ಬ್ರಿಟಿಷ್ ಅಧಿಕಾರಿಗಳನ್ನು ಕೊಲ್ಲುವ ಕಾರ್ಯವನ್ನು ಮುಂದುವರೆಸುತ್ತೇನೆ ಎಂದು ಘರ್ಜಿಸಿದರು.

ತನ್ನ ಉಸಿರುವವರೆಗೆ ದೇಶಭಕ್ತಿಯನ್ನು ಬೆಳಗಿದ ಭಗತ್‌ಸಿಂಗ್ ಎಲ್ಲಿ? ಹೋರಾಟದ ಮಧ್ಯೆಯೇ ಶತ್ರುವಿಗೆ ಶರಣಾಗತನಾಗಿ, ಸ್ವಾತಂತ್ರ್ಯ ಹೋರಾಟಕ್ಕೆ ಕಪ್ಪು ಮಸಿ ಬಳಿದ ವೀರಸಾವರ್ಕರ್ ಎಲ್ಲಿ? ತನ್ನವರನ್ನು ಬೆಂಬಲಿಸುವ ಆತುರದಲ್ಲಿ ಹೋರಾಟದ ಚರಿತ್ರೆಯನ್ನೇ ಮರೆತರು ಸಚಿವ ಸುರೇಶ್‌ಕುಮಾರ್!

ಇನ್ನು ಎರಡನೆಯ ವಿಷಯವೆಂದರೆ ನಾನು ಮೋದಿಯವರನ್ನು ಮುಗಿಸಿಬಿಡಿ ಎಂದು ಹೇಳಿದೆನೆಂಬುದು. ಈ ಮಾತನ್ನು ನಾನು ಆಡಿರುವುದು ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆ ಸಮಯದಲ್ಲಿ. ಮಹದೇವು ಈ ವಿಚಾರದಲ್ಲಿ ವಿವರಿಸಿ ಸಮಜಾಯಿಸಿ ನೀಡಿದ್ದಾರೆ. ಇದು ಚುನಾವಣೆ ಸಂದರ್ಭದಲ್ಲಿ ಹೇಳಿದ ಮಾತು. ಚುನಾವಣೆಯಲ್ಲಿ ಹೇಗಾದರೂ ಮಾಡಿ ವಿರೋಧ ಪಕ್ಷಗಳಾದ ಕಾಂಗ್ರೆಸ್, ಜಾತ್ಯಾತೀತ ಜನತಾದಳಗಳನ್ನು ಸೋಲಿಸಬೇಕೆಂದು ಮೋದಿ ಪಣ ತೊಟ್ಟಿದ್ದ ಸಂದರ್ಭ ಅದು. ಆದರೆ ಆ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಬೇಕಾದಷ್ಟು ಸ್ಥಾನಗಳು ಮೋದಿಯ ಬಿಜೆಪಿಗೆ ಲಭಿಸಲೇ ಇಲ್ಲ.

ಆದರೂ ಸಹ ನನ್ನ ಬಾಯಿಂದ ‘ಮುಗಿಸಿಬಿಡಿ’ ಎಂಬ ಮಾತು ಬರಬಾರದಾಗಿತ್ತು ಎಂದು ಆತ್ಮ ಹೇಳುತ್ತದೆ.

ದೇವನೂರು ಮಹದೇವ ಮತ್ತು ಸಚಿವ ಸುರೇಶ್‌ಕುಮಾರ್ ಮಧ್ಯೆ ನಡೆದ ಈ ಪತ್ರ ವ್ಯವಹಾರ ಬಹಳ ಆತ್ಮೀಯತೆಯಿಂದ ಕೂಡಿದೆ. ರಾಗದ್ವೇಷರಹಿತವಾದ ಈ ಬಗೆಯ ಪತ್ರ ವ್ಯವಹಾರ ಸಮಾಜದಲ್ಲಿ, ದ್ವೇಷ ಬೆಳೆಸುವ ಈ ದಿನಗಳಲ್ಲಿ ಸಾಮರಸ್ಯ ತರಲು ಸಹಕಾರಿಯಾಗುವುದೆಂದು ನಾನು ಭಾವಿಸುತ್ತೇನೆ.


ಇದನ್ನೂ ಓದಿ: ಊಟ, ಉದ್ಯೋಗ, ಸ್ವಾವಲಂಬನೆ ಎಲ್ಲರ ಹಕ್ಕಾಗಲಿ: 103ನೇ ಜನ್ಮದಿನದಂದು HS ದೊರೆಸ್ವಾಮಿಯವರ ಆಶಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ರೈತರ ವಿಚಾರದಲ್ಲಿ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಆದರೆ.., ಸಂಯುಕ್ತ ಹೋರಾಟ ಸಮಿತಿಯ ಎಚ್ಚರಿಕೆಯ ಮಾತು

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಬಲವಂತವಾಗಿ ಯಾವುದೇ ರೈತರ ಭೂಮಿ ಕಿತ್ತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿರುವುದು ಕೇವಲ ಮಾತಿನ ಜಾಣ್ಮೆಯಷ್ಟೇ. ಬಿಡದಿ ಭಾಗದ ಮೂರು ಗ್ರಾಮಗಳಿಗೆ ಹೊರಡಿಸಲಾಗಿರುವ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಸಂಪೂರ್ಣವಾಗಿ...

“8.5 ಕೆಜಿ ತೂಕ ಇಳಿಸಿಕೊಂಡ ಸೋನಮ್ ವಾಂಗ್‌ಚುಕ್ ಜೀವಕ್ಕೆ ಅಪಾಯ: ಬಲವಂತ ಆಹಾರ ನೀಡುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್”

ದೇಶದ ಶೈಕ್ಷಣಿಕ ವ್ಯವಸ್ಥೆಯ ಭವಿಷ್ಯವನ್ನು ಗಾಳಿಗೆ ತೂರಿರುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಾಲು ಸಾಲು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಖ್ಯಾತ ಹವಾಮಾನ ಮತ್ತು...

ಇನ್‌ಸ್ಟಾಮಾರ್ಟ್‌ನಲ್ಲಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್: ಬೆಂಗಳೂರಿನಲ್ಲಿ ಹೊಸ ಸೇವೆ ಆರಂಭ!

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಗ್ರಾಹಕರು ಇನ್ನು ಮುಂದೆ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ 'ಇನ್‌ಸ್ಟಾಮಾರ್ಟ್' (Instamart) ಆ್ಯಪ್ ಮೂಲಕವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್...

ಬಿಡದಿ ರೈತರ ಹೋರಾಟಕ್ಕೆ ಜಯ: ಬಲವಂತವಾಗಿ ಒಬ್ಬೇ ಒಬ್ಬ ರೈತರ ಜಮೀನನ್ನೂ ಪಡೆಯಲ್ಲ ಸಿಎಂ ಡಿ.ಕೆ.ಶಿವಕುಮಾರ್

"ಬಿಡದಿ ಸ್ಮಾರ್ಟ್ ಸಿಟಿ/ಟೌನ್ ಶಿಪ್ ಯೋಜನೆಯ ಹೆಸರಿನಲ್ಲಿ ಬಲವಂತವಾಗಿ ಒಬ್ಬೇ ಒಬ್ಬ ರೈತರ ಅಥವಾ ರೈತ ಮಹಿಳೆಯರ ಜಮೀನನ್ನು ನಮ್ಮ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ," ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಡದಿ ಟೌನ್‌ಶಿಪ್...

ಪಶ್ಚಿಮ ಬಂಗಾಳ: TMC ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿಗೆ ವಿಪಕ್ಷ ಸ್ಥಾನ ನೀಡಿದ್ದಕ್ಕೆ ನ್ಯಾಯಾಧೀಶರ ತೀವ್ರ ಆಕ್ಷೇಪ

ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣದ ಮುಖ್ಯಸ್ಥ ರಿತಬ್ರತ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವಲ್ಲಿ ಸ್ಪೀಕರ್ ರತೀಂದ್ರ ಬೋಸ್ ತೋರಿರುವ "ತರಾತುರಿ"ಯನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ...

ಎರಡು ವರ್ಷಗಳಲ್ಲಿ 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ; ಇವರಲ್ಲಿ 193 ಮಂದಿ ವಿದೇಶಿಯರೆಂದು ಘೋಷಿತರು: ಅಸ್ಸಾಂ ಸರ್ಕಾರ

ಗುವಾಹಟಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗಡೀಪಾರು, ಗಡಿಯಿಂದ ಆಚೆಗೆ ತಳ್ಳುವಿಕೆ (ಪುಶ್‌ಬ್ಯಾಕ್) ಅಥವಾ ಉಚ್ಚಾಟನೆ ಪ್ರಕ್ರಿಯೆಯ ಮೂಲಕ ಒಟ್ಟು 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಅಸ್ಸಾಂ ಸರ್ಕಾರ ರಾಜ್ಯ ವಿಧಾನಸಭೆಗೆ...

17 ದಿನ, 9 ಕೆಜಿ ತೂಕ ಇಳಿಕೆ, ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿತಿ ಗಂಭೀರ: ಉಪವಾಸ ಕೈಬಿಡುವಂತೆ ಅಖಿಲೇಶ್-ಕೇಜ್ರಿವಾಲ್ ಮನವಿ

ದೇಶದ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಖ್ಯಾತ ಪರಿಸರ ಕಾರ್ಯಕರ್ತ ಸೋನಮ್...

ಎನ್‌ಸಿಪಿಯ ಎರಡೂ ಬಣಗಳಲ್ಲೂ ಬಿರುಸಿನ ಬೆಳವಣಿಗೆ : ಬಿಜೆಪಿ ತೆಕ್ಕೆಗೆ ಮತ್ತೊಂದು ಪಕ್ಷ?

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಎರಡೂ ಬಣಗಳ ಮುಖ್ಯ ನಾಯಕರು ಮಂಗಳವಾರ (ಜು.14) ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಸಭೆಯು ಶರದ್ ಪವಾರ್ ಅವರ...

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...