Homeಕರ್ನಾಟಕಹಂಪಿ ವಿವಿಯ ಫೇಕ್ ಡಿಗ್ರಿ ರಾದ್ಧಾಂತ: ಜರ್ನಲಿಸ್ಟ್ ಹಕೀಂ ಸಾಹೇಬ್ರೆ ಏನಿದೆಲ್ಲ!?

ಹಂಪಿ ವಿವಿಯ ಫೇಕ್ ಡಿಗ್ರಿ ರಾದ್ಧಾಂತ: ಜರ್ನಲಿಸ್ಟ್ ಹಕೀಂ ಸಾಹೇಬ್ರೆ ಏನಿದೆಲ್ಲ!?

- Advertisement -
- Advertisement -

ಜೂನ್ 30ರಂದು ಅಬ್ದುಲ್ ಹಕೀಂ ಎಂಬ ಪತ್ರಕರ್ತರೊಬ್ಬರ ವಿರುದ್ಧ ಹೊಸಪೇಟೆ ತಾಲೂಕಿನ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಹಂಪಿ ಕನ್ನಡ ವಿವಿಯ ಕುಲಪತಿ ನೀಡಿದ ದೂರಿನ ಮೇರೆಗೆ ಐಪಿಸಿಯ ಕಾಯ್ದೆಯ 9 ಕಲಂಗಳಡಿ ಪ್ರಕರಣ ದಾಖಲಾಗಿದೆ. ಇಲ್ಲಿ ಹಕೀಂ ಅವರ ಮೇಲೆ ಇರುವ ಆಪಾದನೆ ಎಂದರೆ ಉತ್ತರಪ್ರದೇಶದ ಝಾನ್ಸಿ ಬುಂದೇಲಖಂಡ ವಿವಿಯ ಖೊಟ್ಟಿ ಪದವಿ ದಾಖಲೆ ಪತ್ರಗಳನ್ನು ಹಂಪಿ ವಿವಿಗೆ ಸಲ್ಲಿಸಿ ‘ಅಭಿವೃದ್ಧಿ ಅಧ್ಯಯನ’ದಲ್ಲಿ ಪಿಎಚ್‍ಡಿ ಪಡೆದುಕೊಂಡಿದ್ದಾರೆ ಅನ್ನೋದು. ಈ ಆರೋಪದ ಮೇಲೆ ವಿವಿ ಅವರ ಪದವಿ ಮತ್ತು ಡಾಕ್ಟರೇಟ್‍ಗಳನ್ನು ರದ್ದು ಮಾಡಿದೆ.

ಹಕೀಂ ವಾದವೇನು?

ತನ್ನ ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಅಬ್ದುಲ್ ಹಕೀಂ ವಿವಿಯ ಅಧಿಕಾರಿಗಳ ವಿರುದ್ಧ ಕಾನೂನು ಸಮರಕ್ಕೆ ಸಿದ್ದ ಎಂದು ಸಾರಿದ್ದಾರೆ. ತಾವು ಕುವೆಂಪು ವಿವಿಯಿಂದ ಎಂಎ ಪದವಿ ಪಡೆದಿರುವೆ ಎಂದು ‘ದಾಖಲೆಗಳನ್ನು’ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದ್ದಾರೆ. ಆದರೆ ಈಗ ಎದ್ದಿರುವ ಪ್ರಶ್ನೆ ಎಂದರೆ, ಇಲ್ಲಿ ಅವರು ಕುವೆಂಪು ವಿವಿಯನ್ನೂ ಯಾಮಾರಿಸಿ ಎಂ.ಎ ಪದವಿ ಪಡೆದಿದ್ದಾರಾ ಎಂಬುದು. ಏಕೆಂದರೆ ಹಂಪಿ ವಿವಿ ದೂರು ಕೊಟ್ಟಿರೋದು ಅವರ ಎಂಎ ಪ್ರಮಾಣಪತ್ರದ ಬಗ್ಗೆಯಲ್ಲ, ಪದವಿ ಪ್ರಮಾಣಪತ್ರದ ಬಗ್ಗೆ. ಅದು ಯಾವ ಯುನಿವರ್ಸಿಟಿಯ ಯಾವ ಕಾಲೇಜಿನ ಪದವಿ ಪ್ರಮಾಣ ಪತ್ರ ಎಂಬುದರ ಬಗ್ಗೆ ಈ ಪ್ರಕರಣದಲ್ಲಿ ಸ್ಪಷ್ಟವೇ ಆಗಿಲ್ಲ. ಅದನ್ನು ಹಕೀಂ ಸಾಹೇಬರೂ ಸ್ಪಷ್ಟಗೊಳಿಸಿಲ್ಲ.

ಜನಸಾಮಾನ್ಯರ ಪ್ರಶ್ನೆಗಳಿಷ್ಟೇ

ಹಕೀಂ ಪ್ರಕಾರ, ಅವರು ಬೆಂಗಳೂರು ವಿವಿಯ ಕಾನೂನು ಪದವಿ ಮತ್ತು ಕುವೆಂಪು ವಿವಿಯ ರಾಜ್ಯಶಾಸ್ತ್ರ ಎಂಎ ಪದವಿ ಆಧಾರದ ಮೇಲೆ ಹಂಪಿ ವಿವಿಗೆ ಪಿಎಚ್ಡಿ ಅಧ್ಯಯನಕ್ಕೆ ಅರ್ಜಿ ಸಲ್ಲಿಸಿದ್ದರಂತೆ. ಆದರೆ ಅವರನ್ನು ಕಂಡರಾಗದ ಹಂಪಿ ವಿವಿಯ ಸೋಮನಾಥ್ ಎಂಬ ಅಧಿಕಾರಿ, ಹಕೀಂ ಅವರ ‘ಒರಿಜಿನಲ್’ ಪ್ರಮಾಣ ಪತ್ರಗಳನ್ನು ತೆಗೆದು ಹಾಕಿ, ಅಲ್ಲಿ ಬುಂದೇಲಖಂಡ ವಿವಿಯ ಫೇಕ್ ಡಿಗ್ರಿ ಸರ್ಟಿಫಿಕೇಟುಗಳನ್ನು ತುರುಕಿದ್ದಾರಂತೆ. ಓಕೆ, ಅವರು ಕೊಟ್ಟ ಡಿಗ್ರಿ ಸರ್ಟಿಫಿಕೇಟುಗಳನ್ನು ಬದಲಿಸಿ, ಫೇಕ್ ಡಿಗ್ರಿಗಳನ್ನು ಲಗತ್ತಿಸಿರುವ ಸಾಧ್ಯತೆಯನ್ನೂ ಒಪ್ಪಿಕೊಳ್ಳೋಣ. ಆದ್ರೆ, ಹಕೀಂ ಸ್ವತಃ ತಮ್ಮ ಕೈರಬಹದಲ್ಲಿ ಬರೆದ ಪಿ.ಎಚ್‍ಡಿ ಅರ್ಜಿಯಲ್ಲಿ ಪದವಿಯನ್ನು ಬಂದೇಲ್‍ಖಂಡ್ ವಿವಿಯಿಂದಲೇ ಪಡೆದಿರುವುದಾಗಿ ಬರೆದುಕೊಟ್ಟಿದ್ದಾರೆ! ಇದರ ಬಗ್ಗೆ ಅವರ ಯಾವ ಸ್ಪಷ್ಟಣೆಯನ್ನೂ ಕೊಟ್ಟಿಲ್ಲ.
ಹಕೀಂರನ್ನು ಅನುಮಾನದಿಂದ ನೋಡುವಂತೆ ಮಾಡುತ್ತಿರೋ ಸಂಗತಿ ಅಂದ್ರೆ, ಆ ಪಿ.ಎಚ್ಡಿ ಪಡೆಯುವಾಗ ಅವರು ಅದೇ ವಿವಿಯ ಸಿಂಡಿಕೇಟ್ ಸದಸ್ಯರಾಗಿದ್ದರು. ಸಹಜವಾಗಿಯೇ ಅಧಿಕಾರ ದುರ್ಬಳಕೆ ಮಾಡಿಕೊಂಡು ಇಂಥಾ ಯಡವಟ್ಟು ಮಾಡಿಕೊಂಡರಾ ಅನ್ನಿಸದಿರದು.

ಇನ್ನೊಂದು ವಿಚಿತ್ರ ಎಂದರೆ ಹಂಪಿ ವಿವಿ ನೀಡಿದ ದೂರಿನ ಆಧಾರದಲ್ಲಿ ತನಿಖೆ ನಡೆದಾಗ, ಬುಂದೇಲಖಂಡ ವಿವಿಯ ಅಧಿಕಾರಿಗಳು ಈ ಹೆಸರಿನ ಕರ್ನಾಟಕದ ಯಾವ ವ್ಯಕ್ತಿಯೂ ನಮ್ಮ ವಿಶ್ವವಿದ್ಯಾಲಯದಿಂದ ಪದವಿ ಪಡೆದಿಲ್ಲ ಎಂದು ಅಧಿಕೃತ ದಾಖಲೆ ನೀಡಿದ್ದಾರೆ. ನಿಜ, ಅಲ್ಲಿ ಹಕೀಂ ಓದಿಯೇ ಇಲ್ಲ. ಕುಚೋದ್ಯವೆಂದರೆ ಹಕೀಂ ಕೂಡಾ ಅದನ್ನೇ ಹೇಳುತ್ತಿದ್ದಾರೆ…

ಹಂಪಿ ವಿವಿಯ ದೂರು ಏನು?

ಜೂನ್ 28ರಂದು ಹಂಪಿ ವಿವಿ ಕುಲಸಚಿವ ಕಮಲಾಪುರದ ಠಾಣೆಯಲ್ಲಿ ದೂರು ದಾಖಲಿಸಿ, ಹಂಪಿ ವಿವಿಯಲ್ಲಿ ಪಿಎಚ್‍ಡಿ ಪಡೆಯಲು ಅಬ್ದುಲ್ ಹಕೀಂ ಅವರು ಖೊಟ್ಟಿ ಪದವಿ ದಾಖಲೆಗಳನ್ನು ಸಲ್ಲಿಸುವ ಮೂಲಕ ವಂಚನೆ ಮಾಡಿದ್ದಾರೆ ಎಂದು ಆಪಾದಿಸುತ್ತಾರೆ.

ಹಕೀಂ ಅವರು ಉತ್ತರಪ್ರದೇಶದ ಝಾನ್ಸಿಯ ಬುಂದೇಲಖಂಡ್ ವಿವಿಯ ಪದವಿಯ ಖೊಟ್ಟಿ ದಾಖಲೆಗಳನ್ನು ಸಲ್ಲಿಸಿ 2012-13ರಲ್ಲಿ ಎಂಎ ಪತ್ರಿಕೋದ್ಯಮ (ದೂರಶಿಕ್ಷಣ) ಪದವಿಯನ್ನು ಮತ್ತು 2014-15ರಲ್ಲಿ ಅಭಿವೃದ್ಧಿ ಅಧ್ಯಯನದಲ್ಲಿ ಪಿಎಚ್‍ಡಿ ಪದವಿ ಪಡೆದಿರುವುದು ದೂರಿನಲ್ಲಿ ದಾಖಲಾಗಿದೆ. ಹಕೀಂ ಅವರ ಇತಿಹಾಸವನ್ನು ನೋಡಿದರೆ ಇದರಲ್ಲೇನೂ ಆಶ್ಚರ್ಯ ಎನಿಸದು. ಅವರು ಹಂಪಿ ವಿವಿಯ ಕೆಲವು ಅಧಿಕಾರಿಗಳನ್ನು ಬೆದರಿಸಿಯೂ ತಮ್ಮ ಕೆಲಸ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಹಿಂದೆಯೂ ಕೇಳಿಬಂದಿದ್ದವು.
ನನಗೆ ನೌಕರಿ ಮಾಡಲು ಈ ಪದವಿ, ಪಿಎಚ್‍ಡಿ ಅಗತ್ಯವಿಲ್ಲ, ನನ್ನ ಗೌರವಕ್ಕೆ ಧಕ್ಕೆ ತರುವ ಈ ಕೆಲಸವನ್ನು ನಾನು ಸಹಿಸಲಾರೆ ಎಂದು ಅವರು ಅಬ್ಬರಿಸಿದ್ದಾರೆ. ಈ ಹಿಂದೆಯೇ ಅವರ ಈ ಪಿಎಚ್‍ಡಿ ವಿರುದ್ಧ ದಾಖಲೆ ಸಹಿತ ಪತ್ರಕರ್ತರೊಬ್ಬರು ವರದಿ ಮಾಡಿದ್ದರೂ ಆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಮಹಾಶಯರು ಅದನ್ನು ಪ್ರಕಟಿಸಲಿಲ್ಲ ಮಾತ್ರವಲ್ಲ. ಇಂಥದ್ದೇನಲ್ಲ ಬರೆಯಕೂಡದು ಎಂದು ವಾರ್ನಿಂಗ್ ಕೂಡ ಕೊಟ್ಟಿದ್ದರು ಎಂದು ಆ ಪತ್ರಕರ್ತರು ಫೇಸ್‍ಬುಕ್ ಖಾತೆಯಲ್ಲಿ ಬಹಿರಂಗವಾಗೇ ಬರೆದುಕೊಂಡಿದ್ದಾರೆ. ಹೀಗೆ ವಾರ್ನಿಂಗ್ ಕೊಟ್ಟ ಕಾರ್ಯ ನಿರ್ವಾಹಕ ಸಂಪಾದಕರಿಗೆ ಹಕೀಂ ಜೊತೆಗಿದ್ದ ಗಳಸ್ಯ ಕಂಠಸ್ಯ ಗೆಳೆತನವೇ ವರದಿಯನ್ನು ತಡೆಹಿಡಿಯುವಂತೆ ಮಾಡಿದ್ದಿರಲೂಬಹುದು.

ಹುಬ್ಬಳ್ಳಿಯ ‘ಪ್ರಪಂಚ’ 2 ‘ಹೊಡಿ ಒಂಭತ್’ ಟಿವಿವರೆಗೆ!

ಈಗ ‘ಹಕೀಕತ್ತಿನ’ ಕ್ಲೈಮಾಕ್ಸಿನಲ್ಲಿ ಕೆಲವು ರೋಚಕ ಆದರೆ ಪುಟ್ಟಾಪೂರಾ ಸತ್ಯಗಳನ್ನು ನಿಮ್ಮ ಮುಂದೆ ಇಡಲೇಬೇಕು. ಪಾಟೀಲ ಪುಟ್ಟಪ್ಪನವರ ‘ಪ್ರಪಂಚ’ ವಾರಪತ್ರಿಕೆಯಲ್ಲಿ ಹಕೀಂ ಒಂದರ್ಥದಲ್ಲಿ ಸೆಕೆಂಡ್ ಸಂಪಾದಕರೇ ಆಗಿದ್ದ ಕಾಲವೂ ಇತ್ತು. ಬೆಂಗಳೂರಲ್ಲಿ ಕೂತು ಅವರು ಹುಬ್ಬಳ್ಳಿಯ ‘ಪ್ರಪಂಚ’ಕ್ಕೆ ಪಿಚ್ಚರ್ ವರದಿ ಕೊಡ್ತಾ ಇದ್ದರು. ಮುಂದೆ ಪಾಪು ಅವರ ಟೈಟಲ್ ಪಡೆದು ಅದನ್ನು ಸಿನಿಮಾ ಪತ್ರಿಕೆ ಮಾಡಿದರು, ನಂತರ ಕ್ರೀಡಾ ಪತ್ರಿಕೆ ಮಾಡಿದರು, ಫೈನಲಿ ಅದನ್ನು ಸ್ಪರ್ಧಾ ಪತ್ರಿಕೆಯನ್ನೂ ಮಾಡಿಬಿಟ್ಟರು. ಅದನ್ನು ಎಷ್ಟು ಜನ ಓದಿದರೋ ಗೊತ್ತಿಲ್ಲ, ಆದರೆ ಹಕೀಂ ಮಾತ್ರ ‘ಭವ್ಯ’ ಪತ್ರಕರ್ತರಾದರು.

ಹಂಪಿ ವಿವಿಯ ಪಿಎಚ್‍ಡಿ ಪದವಿ ಪಡೆದು ಅವರು ‘ಹೊಡಿ ಒಂಭತ್’ ಚಾನೆಲ್ ಸೇರಿದರು. ಅಲ್ಲಿ ಅವರ ಪೋಸ್ಟ್ ಏನೆಂಬುದು ನಿಗೂಢವಾಗಿದೆಯಾದರು ಹೊಡಿ ಒಂಭತ್ ಗ್ಯಾಂಗಿಗೆ ಇಂತಹ ಸಕಲಕಲಾವಲ್ಲಭರ ಅಗತ್ಯವಂತೂ ಇದ್ದೇ ಇದೆ ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...