Homeಮುಖಪುಟರಂಗಕಲೆಯನ್ನು ಕಲಿಯಲು ಆಸಕ್ತರಿರುವ ಪುಟಾಣಿಗಳಿಗೆ ಸಮ್ಮತ ರಂಗಸಂಸ್ಥೆಯಿಂದ ವಾರಾಂತ್ಯ ತರಗತಿಗಳು

ರಂಗಕಲೆಯನ್ನು ಕಲಿಯಲು ಆಸಕ್ತರಿರುವ ಪುಟಾಣಿಗಳಿಗೆ ಸಮ್ಮತ ರಂಗಸಂಸ್ಥೆಯಿಂದ ವಾರಾಂತ್ಯ ತರಗತಿಗಳು

- Advertisement -
- Advertisement -

ರಂಗಭೂಮಿ ಕಲಿಕೆ ವಿವಿಧ ಪಾತ್ರಗಳ ಮೂಲಕ ತಮ್ಮನ್ನು ತಾವು ಕಂಡುಕೊಳ್ಳಲು ಉತ್ತಮವಾದಂತಹ ಕಲೆಯಾಗಿದೆ. ಇದು ಬಾಲ್ಯದಿಂದಲೇ ಮಕ್ಕಳಿಗೆ ರಂಗಭೂಮಿಯನ್ನು ಕಲಿಸುವುದರಿಂದ ಅವರಿಗೆ ಮುಂದೆ ಜೀವನದಲ್ಲಿ ಸಮಾಜದಲ್ಲಿ ಧೈರ್ಯವಾಗಿ ಬದುಕುವುದನ್ನು ಕಲಿಸುತ್ತದೆ. ಹಾಗಾಗಿ ಮಕ್ಕಳ ರಂಗಭೂಮಿಯ ಅವಶ್ಯಕತೆ ಇಂದೆಂದಿಗಿಂತಲೂ ಹೆಚ್ಚಿದೆ. ಕಲುಷಿತ ಗೊಂಡ ಮನಸ್ಸುಗಳನ್ನು ಪ್ರೀತಿ, ವಿಶ್ವಾಸ, ನಂಬಿಕೆಯ ಮೂಲಕ ಸರಿಪಡಿಸುವ ಚಿಕಿತ್ಸಕ ಗುಣವನ್ನು ರಂಗಭೂಮಿ ಹೊಂದಿದೆ. ಸಾಕಷ್ಟು ಜನ ರಂಗಕರ್ಮಿಗಳು ಮಕ್ಕಳ ರಂಗಭೂಮಿಯನ್ನು ವಿಶೇಷವಾಗಿ ಕೆಲಸ ಮಾಡುತ್ತಿದ್ದಾರೆ ತುಮಕೂರಿನಲ್ಲೂ ಇಂತಹ ಪ್ರಯೋಗವೊಂದು ನಡೆಯುತ್ತಿದೆ.
ಈ ಸೆಲೆಬ್ರೆಟಿ ಯುಗದಲ್ಲಿ ತಮ್ಮ ಮಕ್ಕಳು ಕಲೆಯ ಮೂಲಕ ಸಮಾಜದಲ್ಲಿ ಹೆಚ್ಚು ಗುರ್ತಿಸಿಕೊಳ್ಳಬೇಕೆಂಬ ಆಸೆ ಪೋಷಕರಲ್ಲಿ ಹೆಚ್ಚುತ್ತಿದೆ. ಇದಕ್ಕೆ ಪ್ರೇರಕವಾಗಿ ರಿಯಾಲಿಟಿ ಶೋಗಳು ಪೋಷಕರನ್ನು ಪ್ರೇರೇಪಿಸುತ್ತಿವೆ. ಅದಕ್ಕಾಗಿ ಸಾಕಷ್ಟು ಜನ ನಾಯಿಕೊಡೆಗಳಂತೆ ಹೆಚ್ಚುತ್ತಿರುವ ಹವ್ಯಾಸಿ ರಂಗಶಿಬಿರಗಳು, ಅಭಿನಯ ಶಿಬಿರಗಳಿಗೆ ಸಾಕಷ್ಟು ವ್ಯಯ ಮಾಡುತ್ತಿದ್ದಾರೆ. ಇದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂತಹ ಸಂಧರ್ಭದಲ್ಲಿ ವಿಶೇಷವಾಗಿ ಮಕ್ಕಳ ಜೊತೆ ಕೆಲಸಮಾಡುವ ಮತ್ತು ರಂಗಭೂಮಿಯನ್ನು ಒಂದು ಕೋರ್ಸ್ ಆಗಿ ಕಲಿತು ಅಧ್ಯಯನ ಮಾಡಿದ ಮತ್ತು ಸಾಕಷ್ಟು ಶಿಬಿರಗಳನ್ನು ಮಾಡಿ ನೈಜರಂಗಭೂಮಿಯ ಪಾಠಗಳನ್ನು ಕಲಿಸುವ ಶಿಬಿರಗಳು ಕಡಿಮೆಯಾಗಿವೆ. ಇದೇ ವೇಳೆ ಕೆಲವು ಕಡೆ ಮಾತ್ರ ನಿಜವಾಗಲೂ ರಂಗಭೂಮಿ ಮತ್ತು ನಟನೆಯನ್ನು ಕಲಿಸುವಂತಹ ಪ್ರಯತ್ನಗಳು ನಡೆಯುತ್ತಿವೆ. ಅಂತಹದ್ದೆ ಪ್ರಯತ್ನವನ್ನು ತುಮಕೂರಿನ ಸಮ್ಮತ ರಂಗ ಸಂಸ್ಥೆ ಪ್ರಯತ್ನಪಡುತ್ತಿದೆ. ತುಮಕೂರಿನಲ್ಲಿ ಸಾಕಷ್ಟು ರಂಗಭೂಮಿಯ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಆದರೆ ಮಕ್ಕಳ ರಂಗಭೂಮಿಯ ಬಗ್ಗೆ ಬೇಸಿಗೆ ಶಿಬಿರವಲ್ಲದೇ ಈ ರೀತಿ ಅದಿಕ್ಕೆ ವಿಶೇಷ ಶಾಲೆಯ ರೀತಿಯ ಪ್ರಯತ್ನ ನಡೆದಿಲ್ಲ . ಸಮ್ಮತ ಸಂಸ್ಥೆ ಈಗ ಮಕ್ಕಳಿಗಾಗಿ ವಾರಾಂತ್ಯ ರಂಗ ಶಾಲೆಯನ್ನು ತೆರೆದಿದ್ದಾರೆ.
ಶಾಲಾ ರಜೆಯ ಸಂಧರ್ಭದಲ್ಲಿ ಶಿಬಿರಗಳನ್ನು ನಡೆಸುತ್ತಾ, ರಂಗ ಚಟುವಟಿಕೆಗಳನ್ನು ನಡೆಸುತ್ತಾ ಬಂದಿರುವ ರಂಗಭೂಮಿ ಹಿನ್ನಲೆಯ ಚೇತನ್ ಮತ್ತು ಸುನೀಲ ಯುವದಂಪತಿಗಳು ತಮ್ಮ ಕ್ರಿಯಾಶೀಲ ಯುವತಂಡದೊಂದಿಗೆ ವಾರಂತ್ಯದ ರಜೆಯ ಸಮಯದಲ್ಲಿ ರಂಗಭೂಮಿಯ ಬಗ್ಗೆ ಮಕ್ಕಳಿಗೆ ಕಲಿಸುವ ಒಂದು ವಿಶೇಷ ಪ್ರಯತ್ನವನ್ನು ಪ್ರಾರಂಭಿಸಿದೆ. ನಟನೆ, ನಿರ್ಧೇಶನ, ಮೇಕಪ್ ಮುಂತಾದ ವಿಭಾಗಗಳನ್ನು ಮಕ್ಕಳಿಗೆ ಪರಿಚಯಿಸಲಿದೆ. ಮಗುವಿನ ಕಲ್ಪನಾಶಕ್ತಿ, ದೇಹಭಾಷೆ, ವಾಚಿಕದ ಮೇಲೆ ನಿರಂತರವಾಗಿ ಅಭ್ಯಾಸ ಮಾಡಿಸಲಿದ್ದಾರೆ. ಮಕ್ಕಳಿಗೆ ಆಸಕ್ತಿಯಿಂದ ಕಲಿಯಲು ರಂಗಾಟಗಳ ಮುಖೇನ ಕಲಿಸಲಿದ್ದಾರೆ. ಮಕ್ಕಳ ಸಿನೆಮಾ ತೋರಿಸುವುದು, ಜನಪದ ಕಲೆಗಳ ಕಲಿಕೆಯ ಮೂಲಕ ಸ್ಥಳೀಯ ಕಲೆಗಳ ಪರಿಚಯ ಈ ರೀತಿಯ ಯೋಜನೆಗಳನ್ನು ಸಂಸ್ಥೆಯ ನಿರ್ದೇಶಕರಾದ ಚೇತನ್ ಮತ್ತು ಸುನೀಲ ಅವರು ರೂಪಿಸಿದ್ದಾರೆ. ಈ ತರಗತಿಗಳು ಪ್ರತಿ ಭಾನುವಾರ ನಡೆಯಲಿವೆ. ಕೇವಲ 25 ರಿಂದ 30 ಮಕ್ಕಳಿಗೆ ಮಾತ್ರ ಅವಕಾಶವಿದೆ. ಬೆಳಿಗ್ಗೆ 9 ರಿಂದ 12ರವೆರೆಗೆ ತರಗತಿಗಳು ನಡೆಯಲಿವೆ.
ಈ ಸಮ್ಮತ ರಂಗಸಂಸ್ಥೆಯ ಆ ವಾರಂತ್ಯಾ ಶಾಲೆಯ ಹೊಸ ಪ್ರಯತ್ನಕ್ಕೆ ಹರಿಕಥಾ ವಿದ್ವಾನ್ ಹಾಗೂ ಕಲಾವಿದರಾದ ಲಕ್ಷ್ಮಣ್‍ದಾಸ್, ಕ.ಸಾ.ಪ ಜಿಲ್ಲಾಧ್ಯಕ್ಷರಾದ ಬಾ.ಹಾ.ರಮಾಕುಮಾರಿ, ರಂಗಸಂಘಟಕರಾದ ಉಗಮಶ್ರೀನಿವಾಸ್, ರಂಗಕರ್ಮಿಗಳಾದ ಎಚ್.ಎಂ.ರಂಗಯ್ಯ, ಸಿಧ್ದಾರ್ಥ ಕಾಲೇಜಿನ ಪ್ರಾಂಶುಪಾ¯ರಾದ ಕೆ.ಸಿ.ಕುಮಾರ್ ಬೆಂಬಲನೀಡಿ ಉದ್ಘಾಟಿಸಿದ್ದಾರೆ. ರಂಗಕರ್ಮಿಗಳಾದ ನಟರಾಜ್ ಹೊನ್ನವಳ್ಳಿ, ಮಂಜು ಬಡಿಗೇರ್, ನೀನಾಸಂ ಚಂದ್ರು, ರವಿಶಂಕರ್, ಶೋಧನ್ ಬಸ್ರೂರು, ಸಂಧ್ಯಾ ಅಲ್ಲದೇ ಹಲವು ಮಕ್ಕಳ ರಂಗಭೂಮಿಯ ಪರಿಣಿತರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಹೆಚ್ಚಿನಮಾಹಿತಿಗಾಗಿ 9901848170, 8105515256 ಸಂಖ್ಯೆಗೆ ಕರೆಮಾಡಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...