Homeಅಂತರಾಷ್ಟ್ರೀಯಹ್ಯಾಪಿ ಬಾಟಮ್ ಕ್ವಾರ್ಟರ್ ಎಂದರೇನು ಗೊತ್ತೆ?

ಹ್ಯಾಪಿ ಬಾಟಮ್ ಕ್ವಾರ್ಟರ್ ಎಂದರೇನು ಗೊತ್ತೆ?

ಅಷ್ಟೇನೂ ಬುದ್ಧಿವಂತನಲ್ಲ ಎಂದು ಎಲ್ಲರಿಗೂ ಗೊತ್ತಿದ್ದರೂ ಭಾರತದ ರಾಜಕಾರಣಿಯ ಮಗನಿಗೆ ಕೇಂಬ್ರಿಡ್ಜ್ ನಲ್ಲಿ ಪ್ರವೇಶ ದೊರೆತದ್ದು ಹೇಗೆ?

- Advertisement -
- Advertisement -

| ಜಿ.ಆರ್ ವಿದ್ಯಾರಣ್ಯ |

ಇದೆಂತಹ ಕ್ವಾರ್ಟರ್ ಅಥವಾ ಎಣ್ಣೆಯ ಹೊಸ ಹೆಸರೇ ಎಂದು ಯೋಚಿಸಬೇಡಿ. ಇದು ಜಗದ್ವಿಖ್ಯಾತ ವಿದ್ಯಾಸಂಸ್ಥೆಗಳ ಜಾಣತನದ ಬಗ್ಗೆ ಒಂದು ಉದಾಹರಣೆ.

ನಮಗೆಲ್ಲರಿಗೂ ನಮ್ಮ ಮಕ್ಕಳು ಒಳ್ಳೆಯ ಶಾಲಾ-ಕಾಲೇಜುಗಳಲ್ಲಿ ಓದಿ ತುಂಬಾ ವಿದ್ಯಾವಂತರಾಗಲಿ, ನಮ್ಮ ಕುಟುಂಬಕ್ಕೆ, ನಾಡಿಗೆ ಒಳ್ಳೆಯ ಹೆಸರು ತರಬೇಕು ಎಂಬ ಆಸೆಯಂತೂ ಇರುತ್ತದೆ. ಸಾಮಾನ್ಯವಾಗಿ ನಗರ ಪ್ರದೇಶದ ಮಧ್ಯಮ ವರ್ಗದ ಪೋಷಕರ ನಿರ್ಧಾರ ಆ ಶಾಲೆಯ ವರ್ಣರಂಜಿತ ಜಾಹಿರಾತು, ಕಟ್ಟಡ ವಿನ್ಯಾಸ, ಕಲಿಕಾ (ಭಾಷಾ) ಮಾಧ್ಯಮ, ಪ್ರವೇಶ ಎಷ್ಟು ಸುಲಭ/ಕಷ್ಟ, ಪ್ರವೇಶಕ್ಕಾಗಿ ಕಾಯುತ್ತಿರುವವರ ಪಟ್ಟಿ ಎಷ್ಟು ಉದ್ದ, ಪ್ರವೇಶ ಮತ್ತು ಬೋಧನಾ ಶುಲ್ಕ ಎಷ್ಟು ದುಬಾರಿ, ನೆರೆ-ಹೊರೆಯವರ ಅಭಿಪ್ರಾಯ, ಮನೆಯಿಂದ ಶಾಲೆ/ಕಲೇಜು ಎಷ್ಟು ಹತ್ತಿರ/ದೂರ ಅಥವಾ ಸಾರಿಗೆ ಸೌಲಭ್ಯವಿದೆಯೇ, ಮುಂತಾದ ವಿಷಯಗಳ ಮೇಲೆ ಅವಲಂಬಿಸಿರುತ್ತವೆ.

ಶಾಲೆಗೆ ಬೇಕಾದ ಎಲ್ಲಾ ಸರಕಾರಿ ಪರವಾನಗಿ/ಮಾನ್ಯತೆ ದೊರೆತಿದೆಯೋ ಇಲ್ಲವೋ ಎಂಬ ಮಾಹಿತಿ, ಸುಲಭವಾಗಿ ತಿಳಿಯದಿದ್ದಲ್ಲಿ, ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವ ಪ್ರಯತ್ನ ಪೋಷಕರು ಮಾಡುವುದು ವಿರಳ. ತಿಳಿಯದ ಯಾವುದೋ ಕಾರಣಕ್ಕಾಗಿ ಶಾಲೆ ಮಧ್ಯದಲ್ಲೇ ಮುಚ್ಚಲ್ಪಡುತ್ತದೋ ಎನೋ ಎಂಬ ಬಗ್ಗೆ ಅವರು ಆತಂಕಕ್ಕೆ ಮೊದಲೇ ಈಡಾಗುವುದಿಲ್ಲ. ಸಾಮಾನ್ಯ ಮಟ್ಟದ  ಶಾಲೆ/ಕಾಲೇಜಿನಲ್ಲಿ ಕಲಿತು ನಾವೆಲ್ಲರೂ ವಿದ್ಯಾವಂತರಾಗಿ ಸರಿಯಾದ ಜೀವನ ನಡೆಸುತ್ತಿದ್ದರೂ ಸಹ, ನಾವು ಕಲಿತ ಸಂಸ್ಥೆಯಲ್ಲೇ ನಮ್ಮ ಮಕ್ಕಳೂ ಕಲಿಯಲಿ ಎಂದು ಯೋಚಿಸುವವರು ಸಹ ತೀರಾ ಅಪರೂಪ. ತಾವು ಕಲಿತ ಶಾಲೆಗಿಂತ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಮಕ್ಕಳು ಕಲಿಯಲಿ ಎಂಬುದು ಪೋಷಕರ ಆಶಯ.

ಓರ್ವ ವಿದ್ಯಾ ಸಂಸ್ಥೆಯ ಖ್ಯಾತಿ, ಅದರ ಮೇಲೆ ಗೌರವ ನಿಜವಾಗಿ ಹೆಚ್ಚುವುದು ಆ ಸಂಸ್ಥೆಯು ನಡೆಸುತ್ತಿರುವ ಶಾಲಾ-ಕಾಲೇಜುಗಳಲ್ಲಿ ಓದು ಮುಗಿಸಿದ ಎಷ್ಟು ವಿದ್ಯಾರ್ಥಿಗಳು ಮುಂದೆ, ಬೇರೆ ಬೇರೆ ಕ್ಷೇತ್ರದಲ್ಲಿ, ಮಹತ್ತರ ಸಾಧನೆ ಮಾಡಿದ್ದಾರೆ ಅಥವಾ ಖ್ಯಾತಿವಂತ ವ್ಯಕ್ತಿಗಳಾಗಿದ್ದಾರೆ ಎಂಬುದನ್ನು ಅವಲಂಬಿಸಿರುತ್ತದೆ. ಅದರಲ್ಲಿ ಓದಿದ ಎಲ್ಲಾ ವಿದ್ಯಾರ್ಥಿಗಳು ಮುಂದೆ ಪ್ರಸಿದ್ಧಿವಂತರಾಗದೇ ಇರಬಹುದು ಅದರೆ ಅವರಲ್ಲಿ ಹತ್ತಾರು ಜನರಾದರೂ ಖ್ಯಾತಿವಂತರಾದಲ್ಲಿ, ಮಿಕ್ಕವರು, ಕೇವಲ ಆ ಸಂಸ್ಥೆಯಲ್ಲಿ ಓದಿದ ಮಾತ್ರಕ್ಕೆ, ಜಾಣರೆಂದು ಪರಿಗಣಿಸಲ್ಪಡುವ ಸಾಧ್ಯತೆಯಂತೂ ಇರುತ್ತದೆ, ಹೂವಿನ ಜೊತೆಗೆ ನಾರೂ ಸ್ವರ್ಗಕ್ಕೆ ಹೋದಂತೆ.

ಯಾವುದೇ ಒಂದು ಖ್ಯಾತಿವಂತ ವಿದ್ಯಾಸಂಸ್ಥೆಯು ಕನಸಿನ ಕೂಸಾಗಿ ಪ್ರಾರಂಭವಾಗಿರದೆ ಇದ್ದಾಗ, ಹೆಚ್ಚಿನ ಶಾಲೆ/ಕಾಲೇಜುಗಳೂ ಸಹ ಸಾಧಾರಣ ಮಕ್ಕಳಂತೆಯೇ, ಸಣ್ಣದಾಗಿ ಹುಟ್ಟಿ-ಬೆಳೆದು ದೊಡ್ಡದಾಗುತ್ತವೆ. ಆದ್ದರಿಂದ ಅದರ ಖ್ಯಾತಿ ಮಂದಗತಿಯಲ್ಲಿಯೇ ಬೆಳೆಯಬೇಕಾಗುತ್ತದೆ. ಶಾಲೆ/ಕಾಲೇಜು ಬೆಳೆದಂತೆ ಅದರಲ್ಲಿ ಓದುವ ಮಕ್ಕಳ ಸಂಖ್ಯೆಯೂ ಬೆಳೆಯುತ್ತದೆ, ಮುಂದೆ ಈ ಮಕ್ಕಳು ಶೈಕ್ಷಣಿಕ/ಕ್ರೀಡೆ/ಇತರ ಕ್ಷೇತ್ರದಲ್ಲಿ ಮಾಡುವ ಒಳ್ಳೆಯ ಸಾಧನೆಗಳಿಂದ ಅವರೂ ಖ್ಯಾತಿ ಪಡೆದು, ತಮ್ಮ ಕುಟುಂಬಕ್ಕೂ, ವಿದ್ಯಾಸಂಸ್ಥೆಗೂ ಗೌರವ ತರುತ್ತಾರೆ. ಸಂಸ್ಥೆಯಲ್ಲಿ ಓದು ಮುಗಿಸಿದ ನಂತರ ಅವರು ಅದರ ಮಾಜಿ ವಿದ್ಯಾರ್ಥಿ (ಅಲುಮ್ನೈ) ಆಗಿ ಮುಂದೆಯೂ ಸಂಸ್ಥೆಗೆ ಒಳ್ಳೆಯ ಹೆಸರು ತರಬಹುದು, ಆದರೆ ಸಂಸ್ಥೆಗೆ ಇದರ ಸುನಿಶ್ಚತತೆ ಇರುವುದಿಲ್ಲ. ಖ್ಯಾತಿ ಸುನಿಶ್ಚತತೆ ಮಾಡಿಕೊಳ್ಳಲು ಸಾಧ್ಯವೇ ಎಂಬುದು ಈ ಲೇಖನದ ಗುರಿಯಾದರೂ ಸಹ ಇಂದಿನ ಶಿಕ್ಷಣ ವ್ಯವಸ್ಥೆಯ ವಿಡಂಬನೆ ಈ ಲೇಖನ ಎಂದು ನಿಮಗೆ ಅನಿಸಬಹುದು.

ಹಾರ್ವರ್ಡ್, ಯೇಲ್, ಕೇಂಬ್ರಿಡ್ಜ್  ಮುಂತಾದ ವಿಶ್ವವಿಖ್ಯಾತ ವಿದ್ಯಾಸಂಸ್ಥೆಗಳು ತಮ್ಮ ಖ್ಯಾತಿ ನಿರಂತವಾಗಿರಲು ಏನೆಲ್ಲಾ ಮಾಡುತ್ತವೆ, ನೋಡೋಣ. ಇದನ್ನು “ಹ್ಯಾಪಿ ಬಾಟಮ್ ಕ್ವಾರ್ಟರ್” (ಎಚ್.ಬಿ.ಕ್ಯೂ.) ಎಂದುಕರೆಯುತ್ತಾರೆ. ಹಾರ್ವರ್ಡ್ ಇದನ್ನು ಪ್ರಾರಂಬಿಸಿತಾದರೂ ಶೀಘ್ರದಲ್ಲೇ ಇದು ಪ್ರಿನ್ಸ್ಟನ್, ಸ್ಟ್ಯಾನ್ಫರ್ಡ್, ಯೇಲ್, ಮುಂತಾದ ಸಂಸ್ಥೆಗಳಿಗೂ ಪಸರಿಸಿತು. ನಮ್ಮ ದೇಶದ ಐಐಟಿ ಅಥವಾ ಅಮೇರಿಕದ ಕ್ಯಾಲೊಫೋರ್ನಿಯದಲ್ಲಿರುವ ಕ್ಯಾಲ್ಟೆಕ್ವಿದ್ಯಾ ಸಂಸ್ಥೆಯ ಪ್ರವೇಶ ನೀತಿಗೆ ತದ್ವಿರುದ್ಧವಾಗಿ, ಮೇಧಾವಿ ಮಕ್ಕಳನ್ನು ತಮ್ಮಲ್ಲಿಗೆ ಸೇರಿಸಿಕೊಳ್ಳುವ ಬದಲಾಗಿ, ಮುಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿವಂತರಾಗುವ ಹೆಚ್ಚು ಸಾಧ್ಯತೆಯುಳ್ಳ ಮಕ್ಕಳಿಗೆ ಮುಖನೋಡಿ ಮಣೆ ಹಾಕುತ್ತಾರೆ. ಆದರೂ ಸಹ ಯಾವುದೇ ಕಾರಣಕ್ಕೂ ತನ್ನ ಖ್ಯಾತಿಗೆ ಚ್ಯುತಿ ಬರದಂತೆಯೂ ಬೇಕಾದ ಜಾಗೃತೆಯನ್ನೂ ವಹಿಸುತ್ತಾರೆ.

ಈ ನೀತಿಯನ್ವಯ ಸಂಸ್ಥೆಯ 25% ಸೀಟುಗಳನ್ನು ಕಾಯ್ದಿರಿಸಿ, ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಮಕ್ಕಳು, ಅಂದರೆ ದೇಶದ ಅಧ್ಯಕ್ಷರು, ಪ್ರಧಾನಮಂತ್ರಿಗಳು, ರಾಜಕಾರಣಿಗಳು, ಆಗರ್ಭ ಶ್ರೀಮಂತರು, ದೊಡ್ಡ ಉದ್ಯೋಗಪತಿಗಳು, ಸಿನಿಮಾನಟ-ನಟಿಯರು, ಕ್ರೀಡಾಪಟುಗಳು, ನೋಬೆಲ್ ಮುಂತಾದ ಪುರಸ್ಕಾರ ವಿಜೇತರು, ಯಾವುದೇ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿದವರು, ಮುಂತಾದವರ ಮಕ್ಕಳಿಗೆ ಪ್ರವೇಶ ನೀಡುತ್ತಾರೆ. ಇಂತಹ ಮಕ್ಕಳ ವಿದ್ಯಾಭ್ಯಾಸದ ಖರ್ಚು ಅವರ ಪೋಷಕರಿಗೇನೂ ಭಾರವಲ್ಲ, ಬದಲಾಗಿ ಕೇಳಿದಷ್ಟು ಡೊನೇಷನ್ ಕೊಡಲೂ ಸಿಧ್ಧರಿರುತ್ತಾರಷ್ಟೇ ಅಲ್ಲ, ಅದರ ಬಗ್ಗೆ ಯಾವಾಗಲೂ ತುಟಿಪಿಟಕ್ ಎನ್ನುವುದಿಲ್ಲ. ಇಂತಹವರ ಮಕ್ಕಳು ಮುಂದೆ ಖ್ಯಾತಿವಂತರಾಗುವ ಸಾಧ್ಯತೆ ಅತಿ ಹೆಚ್ಚಾಗಿರುತ್ತದೆ ಮತ್ತು ಅವರು ನಮ್ಮ ಸಂಸ್ಥೆಯ ಮಾಜಿ ವಿದ್ಯಾರ್ಥಿ ಎಂದು ವಿದ್ಯಾಸಂಸ್ಥೆಯೂ ಹೆಮ್ಮೆಯಿಂದ ಹೇಳಿಕೊಳ್ಳಲು ಮುಂದಾಗಿರುತಾರೆ. ನೋಬೆಲ್  ಮುಂತಾದ ಪುರಸ್ಕಾರ ವಿಜೇತರ ಮತ್ತು ವಿವಿಧ ಕ್ಷೇತ್ರದ ಪರಿಣಿತರ ಮಕ್ಕಳು ತಮ್ಮ ಆಯ್ದ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೆ ಸಿದ್ಧರಾಗಿಯೇ ಇರುತ್ತಾರೆ ಹಾಗೂ ಹಣದ ದಾಹ ಇರುವವರು ಹೇಗೇ ಆದರೂ ಹಣಗಳಿಸಿಯೇ ತೀರುತ್ತಾರೆ.

ಉದ್ಯೋಗಪತಿಗಳ ಮಕ್ಕಳು ಮುಂದೆ ಅಷ್ಟೇ ಪ್ರಖ್ಯಾತರಾಗುತ್ತರೆ ಎನ್ನುವುದು ಕಷ್ಟ ಅಥವಾ ಹೊಸ ಉದ್ಯೋಗ ಪ್ರಾರಂಭಿಸಬಲ್ಲವರು ಅಷ್ಟೇ ಸಫಲರಾಗುತ್ತಾರೆ ಎನ್ನುವುದೂ ಸಹ ಅನಿಶ್ಚಿತ. ಮುಂದಿನ ಫೇಸ್ಪುಕ್ ನಂತಹ ಅತ್ಯಂತ ಸಫಲವಾದ ಸ್ಟಾರ್ಟ್ ಅಪ್ ಧೀರ ಹಾರ್ವರ್ಡಿನಿಂದಲೇ ಬರುತ್ತಾನೆ ಎಂಬುದು ಕೇವಲ ಊಹಾಪೋಹ. ಇದು ಅವರ ನೀತಿಯಲ್ಲಿನ ಒಂದು ಅಪಾಯ (ರಿಸ್ಕ್). ಬಹುರಾಷ್ಟ್ರೀಯ ಕಂಪನಿಯ ಮುಖ್ಯಾಧಿಕಾರಿಗಳು ಸಹ ಅಪಾಯಕರ. ಅದನ್ನು ವಿದ್ಯಾಸಂಸ್ಥೆ ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ಈಗಿರುವ ಕ್ರೀಡಾಪಟುಗಳು ಮತ್ತು ಸಿನಿಮಾ ನಟ-ನಟಿಯರು ಆಗಲೇ ಹೇರಳ ಹಣ ಸಂಪಾದನೆ ಮಾಡುತ್ತಿರುತ್ತಾರೆ ಮತ್ತು ಅವರಿಗೆ ಪತಿಷ್ಟಿತ ಕಾಲೇಜಿನ ಪದವಿ ಪಡೆಯಲೇಬೇಕು ಎಂಬ ಹುಮ್ಮಸ್ಸು ಅಥವಾ ಸಮಯ ಇರುವುದಿಲ್ಲ ಆದರೆ ತಮ್ಮ ಮಕ್ಕಳನ್ನು ಹಣ ತೆತ್ತು ಒಳ್ಳೆಯ ಕಡೆ ಸೇರಿಸಲು ಸಿದ್ಧರಿರುತ್ತಾರೆ.

ಒಳ್ಳೆಯ ಭವಿಷ್ಯವುಳ್ಳ ಕ್ರೀಡಾಪಟುಗಳನ್ನು ಹುಡುಕುವುದು ಅಂತಹ ಕಷ್ಟಕರವೇನಲ್ಲ, ಅವರಿಗೆ ಕರೆದು ಪ್ರವೇಶ ನೀಡುತ್ತಾರೆ. ಪ್ರಗತಿ ಹೊಂದಿದ ವಿದೇಶದ ರಾಜಕಾರಣಿಗಳ ಮಕ್ಕಳು ಮುಂದೆ ಅಧಿಕಾರಕ್ಕೇರುವ ಸಾಧ್ಯತೆ ಅಷ್ಟೇನೂ ಇಲ್ಲದಿದ್ದರೂ ಭಾರತದಂತಹ ಪ್ರಗತಿಶೀಲ ರಾಜ್ಯಗಳಲ್ಲಿ ಸಾಧ್ಯತೆ ಹೆಚ್ಚಿರುತ್ತದೆ.

ಇಂದಿನ ಜಗತ್ತಿನಲ್ಲಿ ವಂಶಪಾರಂಪರೆಯ ವಾದ ಹೇರಳವಾಗಿದೆ, ಎಲ್ಲಾ ದೇಶದಲ್ಲೂ ಅಡೆತಡೆಯಿಲ್ಲದೆ ನಡೆಯುತ್ತದೆ. ಅಷ್ಟೇನೂ ಬುದ್ಧಿವಂತನಲ್ಲ ಎಂದು ಎಲ್ಲರಿಗೂ ಗೊತ್ತಿದ್ದರೂ ಭಾರತದ ರಾಜಕಾರಣಿಯ ಮಗನಿಗೆ ಕೇಂಬ್ರಿಜ್ನಲ್ಲಿ ಪ್ರವೇಶ ದೊರೆತದ್ದು ಹೇಗೆ ಅಥವಾ ಭಾರತದ ಅತಿ ದೊಡ್ಡ ಉದ್ಯೋಗಪತಿಯ ಎರಡನೆಯ ಮಗ ಅಮೇರಿಕದ ಹಾಲಿ ಅಧ್ಯಕ್ಷ ಹಾಗೂ ಗೂಗಲ್ ಸಂಸ್ಥೆಯ ಹಾಲಿ ಮುಖ್ಯಸ್ಥ ಓದಿದ ವ್ಹಾರ್ಟನ್ ವಿದ್ಯಾಸಂಸ್ಥೆಗೆ ಪ್ರವೇಶ ಗಳಿಸಿದ್ದು ಹೇಗೆ, ಅವರ ಹಾಜರಾತಿ ಸಮರ್ಪಕವಾಗಿತ್ತೇ ಅಥವಾ ಅವರು ಒಳ್ಳೆಯ ಅಂಕ ಪಡೆದು ಉತ್ತೀರ್ಣರಾದರೇ ಎಂದು ಯಾರೂ ತಲೆ ಕೆಡೆಸಿಕೊಳ್ಳುವುದಿಲ್ಲ. ಇಂತಹವರಿಗೆ ಪ್ರವೇಶ ನೀಡುವುದು ಸಂಸ್ಥೆಗೆ ಬಹಳ ಸುಲಭವೂ, ಲಾಭದಾಯಕವೂ ಆಗಿರುತ್ತದೆ. ಭಾರತದಲ್ಲೂ ಡೊನೇಷನ್ ಸೀಟುಗಳು ಸಾರಾಸಗಟಾಗಿ ಮಾರಾಟವಾಗುತ್ತದೆ ಅಥವಾ ಪ್ರಭಾವಶಾಲೀ ವ್ಯಕ್ತಿಗಳಿಗೆ ಕೊಡಲಾಗುತ್ತದೆ. ಅದರಲ್ಲಿ ಸಂಸ್ಥೆಗೆ ಬರುವ ಹಣ ಅಥವಾ ಆಗುವ ಲಾಭವೇ ಮುಖ್ಯವಾಗಿರುತ್ತದೆ ವಿನಃ ಅಂತಹ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಅವರ ಮುಂದಿನ ಭವಿಷ್ಯ ಅಥವಾ ಸಂಸ್ಥೆಯ ಪ್ರಖ್ಯಾತಿ ಅಷ್ಟು ಮಹತ್ವದ್ದಾಗಿರುವುದಿಲ್ಲ.

ಈ “ಹ್ಯಾಪಿ ಬಾಟಮ್ ಕ್ವಾರ್ಟರ್” ನ ಮಧ್ಯದ ಪದ ಗಮನೀಯವಾದದ್ದು. ಈ “ಬಾಟಮ್” ಇರುವುದಕ್ಕೆ ಮುಖ್ಯ ಕಾರಣ ವಿದ್ಯಾಸಂಸ್ಥೆ ತನ್ನ “ಟಾಪ್” 75% ಸೀಟುಗಳನ್ನು ನಿಜವಾದ ಮೇಧಾವಿ ವಿದ್ಯಾರ್ಥಿಗಳಿಗೆ ನೀಡುತ್ತದೆ. ಮೇಧಾವಿ ವಿದ್ಯಾರ್ಥಿಗಳು ಸಂಸ್ಥೆಯಿಂದ ಉತ್ತೀರ್ಣರಾಗಿ ಹೊರ ಹೋಗುವಾಗ ಕೆಳಗಿನ 25% ಸೀಟಿನ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಜೊತೆಗೆ ಖಂಡಿತ ಪೈಪೋಟಿ ಮಾಡುವುದಿಲ್ಲ. ಈ ವಿದ್ಯಾಸಂಸ್ಥೆಗಳು ತಮ್ಮ ಕೆಲವು ಸೀಟುಗಳನ್ನು ಮುಂದೆ ಪ್ರಭಾವಶಾಲಿ ವ್ಯಕ್ತಿಯಾಗಬಲ್ಲವನ ಮೇಲೆ ಜೂಜಾಡಿ ಸ್ವಲ್ಪ ಮಟ್ಟದ “ರಿಸ್ಕ್” ತೆಗೆದುಕೊಳ್ಳುತ್ತವೆ, ಆದರೆ ಅಪಾಯಕ್ಕೆ ತಕ್ಕ ಹಣವಂತೂ ಸಂಸ್ಥೆಯ ಖಾತೆಗೆ ಆಗಲೇ ಜಮಾ ಆಗಿರುತ್ತದೆ. ಮುಂದೆ ಅಂತಹಾ ಅಪಾಯಕಾರಿ ವಿದ್ಯಾರ್ಥಿ 20-30-40 ವರ್ಷದ ನಂತರ, ಯಾವುದೇ ದೇಶದ ಪ್ರಧಾನಿ, ಶ್ರೀಮಂತ ವ್ಯಕ್ತಿ ಆದರೂ ಅಥವಾ ಆಗದಿದ್ದರೂ ಸಹ ಆ ವಿದ್ಯಾಸಂಸ್ಥೆಯ ಹೆಸರು ಕೆಡುವುದಿಲ್ಲ ಅಥವಾ ಅವನು ವಿದ್ಯಾಸಂಸ್ಥೆಯಲ್ಲಿದ್ದಾಗ ಎಂತಹ ವಿದ್ಯಾರ್ಥಿಯಾಗಿದ್ದ ಎಂದು ಯಾರೂ ನೆನಪಿನಲ್ಲಿಡುವುದಿಲ್ಲ.

ಒಟ್ಟಿನಲ್ಲಿ ಇದು ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ದೂರದೃಷ್ಟಿ ಮತ್ತು ಜಾಣತನವಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...