Homeಮುಖಪುಟಸಲಾಂ ಇರುವೆ!

ಸಲಾಂ ಇರುವೆ!

- Advertisement -
- Advertisement -

ಒಮ್ಮೆ ಒಂದು ದಿನ ಬೆಳಂಬೆಳಗ್ಗೆ ನನಗೆ ಸಹಜವಾಗಿ ಎಚ್ಚರವಾದಾಗ, ಏನೊ ಒಂದು ಅದ್ಭುತ ನನ್ನ ಗಮನಕ್ಕೆ ಬಂತು. ಹಿಂದಿನ ರಾತ್ರಿ ನಾನು ಮಲಗುವ ಮುಂಚೆ ಐದು ಲೀಟರ್ ನೀರಿನ ಬಾಟಲಿಯ ಮುಚ್ಚಳವನ್ನು ಮುಚ್ಚದೆ ಹಾಗೆ ಇರಿಸಿದ್ದರಿಂದ ಅದರೊಳಗಡೆ ಹಲವು ಡಜನ್ ಇರುವೆಗಳು ಬಿದ್ದುಬಿಟ್ಟಿದ್ದವು. ಪಾಪ! ಪ್ರತಿಯೊಂದೂ ಇರುವೆಗಳು ಸಾವುನೋವಿನಿಂದ ನರಳುತ್ತಾ ತಮ್ಮ ಉಳಿವಿಗಾಗಿ ಹೋರಾಡುತ್ತಾ ಬಾಟಲಿಯೊಳಗಡೆ ಇದ್ದ ನೀರಿನಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡು ಸಹಾಯಕ್ಕಾಗಿ ಕೈಚಾಚಿದ್ದವು.

ಮೊದಲು ನನಗೆ ಈ ಇರುವೆಗಳು ಒಂದೊಂದಾಗಿ ನೀರಿನಲ್ಲಿ ಮುಳುಗುತ್ತಾ ಇದ್ದಾವೇನೋ, ಕೆಲವು ಇರುವೆಗಳಂತೂ ಮುಳುಗಿ ಸತ್ತ ಇತರ ಇರುವೆಗಳ ಮೇಲೇರಿ ತಮ್ಮ ಜೀವ ಉಳಿಸಿಕೊಳ್ಳುತ್ತಿದ್ದವೇನೋ ಅಂದುಕೊಂಡೆ.

ಈ ರೀತಿ ಅಂದುಕೊಂಡಿದ್ದು ನಂತರ ನನಗೆ ಅಸಹ್ಯ ತರಿಸಿತು ಮತ್ತು ನಾನು ಇವುಗಳ ತಂಟೆಗೆ ಹೋಗದೆ ಹಾಗೆ ಇದ್ದುಬಿಟ್ಟೆ. ಸುಮಾರು ಎರಡು ಗಂಟೆ ಕಳೆದ ನಂತರ ನನಗೆ ಯಾಕೋ ಏನೋ ಕುತೂಹಲ ಉಂಟಾಯಿತು. ಮತ್ತೆ ನಾನು ಇರುವೆಗಳು ಬಿದ್ದಿದ್ದ ಈ ನೀರಿನ ಬಾಟಲಿಯೊಳಗೆ ಇಣುಕಿ ನೋಡಿದೆ. ಆಗ ನಾನು ಬೆಕ್ಕಸಬೆರಗುಗೊಂಡೆ; ಎಲ್ಲಾ ಇರುವೆಗಳು ಜೀವಂತವಾಗಿದ್ದು ಇದಕ್ಕೆ ಕಾರಣವಾಗಿತ್ತು! ಇಷ್ಟು ಸಮಯದಲ್ಲಿ ಅವುಗಳು ಒಂದಕ್ಕೊಂದು ಭಾರ ಹೊರುತ್ತಾ ನೈಜ ‘ದ್ವೀಪ ಪ್ರದೇಶ’ದಲ್ಲಿ ಪಿರಮಿಡ್ ಅನ್ನು ಕಟ್ಟಿಕೊಂಡಿದ್ದವು. ಅದರಲ್ಲಿ ಕೆಲವು ಇತರ ಇರುವೆಗಳ ಬೆಂಬಲ ಪಡೆದುಕೊಂಡು ಪಾಳೆ ಪ್ರಕಾರ ಕೆಳಗಡೆ ನೀರಿನಲ್ಲಿ ತೇಲುತ್ತಿದ್ದವು.

ನನ್ನ ಉಸಿರು ಬಿಗಿಹಿಡಿದು ಇದನ್ನೆಲ್ಲಾ ನೋಡುತ್ತಾ ಕುಳಿತೆ. ಈ ಇರುವೆಗಳು ಪಿರಮಿಡ್ ಕಟ್ಟಿದಾಗ ಕೆಳಭಾಗದಲ್ಲಿದ್ದಂತಹವು ನಿಜವಾಗಿಯೂ ನೀರಿನಲ್ಲಿ ಮುಳುಗಿದ್ದವು, ಆದರೆ ಕೆಳಗಡೆ ಮುಳುಗಿದ್ದಂತಹ ಇರುವೆಗಳು ಹಾಗೆ ಮುಳುಗಿಕೊಂಡೇ ಇರಲಿಲ್ಲ. ಸ್ವಲ್ಪ ಸಮಯದ ನಂತರ ಮೇಲಿದ್ದ ಇರುವೆಗಳು ತಾವೇ ಸ್ವತಃ ಕೆಳಗಿಳಿಯುತ್ತಿದ್ದವು. ಕಳೆಗೆ ನೀರಿನಲ್ಲಿ ಮುಳುಗಿದ್ದ ಇರುವೆಗಳು ಆತುರಪಡದೆ, ಇತರ ಇರುವೆಗಳನ್ನು ತಳ್ಳದೆ ಮೇಲಕ್ಕೆ ಹೋದವು!

ಯಾವೊಂದು ಇರುವೆಗಳು ಕೂಡ ತಾವು ಮಾತ್ರ ಬದುಕಿ ಉಳಿಯಬೇಕೆಂಬ ಕಡೆ ಪ್ರಯತ್ನ ಹಾಕಲಿಲ್ಲ. ಇದಕ್ಕೆ ಬದಲಾಗಿ, ಪ್ರತಿಯೊಂದು ಇರುವೆಗಳು ಈ ಪಿರಮಿಡ್ಡಿನಲ್ಲಿ ಅತ್ಯಂತ ಕಷ್ಟಕರವಾದ ಸ್ಥಳವಾದ ಕೆಳಭಾಗಕ್ಕೆ ಹೋಗಲು ಪ್ರಯತ್ನಿಸಿದವು. ಒಂದಕ್ಕೊಂದು ಸಹಕರಿಸುತ್ತ ಈ ಪಿರಮಿಡ್ ವ್ಯವಸ್ಥೆಯಲ್ಲಿ ಪಾಲ್ಗೊಂಡಿದ್ದು ನನ್ನ ಹೃದಯಕ್ಕೆ ತಟ್ಟಿತು.

ನಾನು ಇದನ್ನೆಲ್ಲಾ ನೋಡುತ್ತಾ ಬೇರೆ ಏನೋ ಮಾಡಲು ಹೋಗಲಿಲ್ಲ. ಬಾಟಲಿಯ ತುದಿ ಭಾಗದಿಂದ ಬಹಳ ಸುಲಭವಾಗಿ ಒಂದು ಚಮಚವನ್ನು ಒಳ ತೂರಿಸಬಹುದೆಂದು ನನಗೆ ಹೊಳೆಯಿತು ಮತ್ತು ಬಹಳ ಎಚ್ಚರಿಕೆಯಿಂದ ಬಾಟಲಿಯೊಳಗೆ ಚಮಚವನ್ನು ತೂರಿಸಿದೆ. ತಮ್ಮ ಪ್ರಾಣಭಿಕ್ಷೆಗಾಗಿ ಕಾಯುತ್ತಿದ್ದ ಇರುವೆಗಳು ಒಂದಿನಿತು ಬೆದರದೆ ಒಂದೊಂದಾಗಿ ಬಾಟಲಿಯಿಂದ ಹೊರಬರಲು ಪ್ರಾರಂಭಿಸಿದವು.

ಇದೆಲ್ಲವೂ ಸರಾಗವಾಗಿಯೇ ನಡೆಯುತ್ತಿತ್ತು. ಇವುಗಳಲ್ಲಿ ಒಂದು ಇರುವೆ ಬಳಲಿ ಬೆಂಡಾಗಿ, ಮೇಲಕ್ಕೆ ಬರಲಾಗದೆ ಮತ್ತೆ ನೀರಿಗೆ ಬಿತ್ತು ಮತ್ತು ನನ್ನ ಜೀವಮಾನದುದ್ದಕ್ಕೂ ನೆನಪಿಡುವ ಪ್ರಸಂಗವೊಂದು ಅಲ್ಲಿ ನಡೆಯಿತು.

ಬಹುತೇಕ ಹೊರಗೆ ಬಂದು ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದ ಕೊನೆಯ ಇರುವೆ ಇದ್ದಕ್ಕಿದ್ದಂತೆ ಮತ್ತೆ ಪ್ರಾಣಾಪಾಯವಿರುವ ಬಾಟಲಿಯ ನೀರಿನೊಳಕ್ಕೆ ನುಗ್ಗಿತು. ಅದು ಕೆಳಗೆ ಬಂದು, “ತಾಳ್ಮೆಯಿಂದ ಇರು ಸಹೋದರಿ, ನಾನು ನಿನ್ನನ್ನು ಇಲ್ಲಿ ಸಾಯಲು ಬಿಡುವುದಿಲ್ಲ!” ಎಂದು ಹೇಳುವಂತೆ ಭಾಸವಾಯಿತು.

ಅವಳು ನೀರಿನಲ್ಲಿ ಪ್ರೀತಿಯನ್ನು ಬೆರಸಿದಳು. ಮುಳುಗುತ್ತಿದ್ದವಳಿಗೆ ಬಿಗಿಯಾಗಿ ಅಂಟಿಕೊಂಡಳು. ಆದರೆ ಅವಳು ಅವಳನ್ನು ತಾನೇ ಸ್ವತಃ ಹೊರತೆಗೆಯಲು ಸಾಧ್ಯವಾಗಲಿಲ್ಲ. ಇದನ್ನೆಲ್ಲಾ ನೋಡುತ್ತಾ ಇದ್ದ ನಾನು ಮತ್ತೆ ಏನೋ ಮಾಡಲು ಹೋಗಲಿಲ್ಲ, ನಾನು ಚಮಚವನ್ನು ಅವುಗಳ ಹತ್ತಿರಕ್ಕೆ ಹಿಡಿದೆ. ನಂತರ ಈ ಗೆಳತಿಯರಿಬ್ಬರೂ ಜೀವಂತವಾಗಿ ಒಟ್ಟಿಗೆ ಹೊರಬಂದರು.

ಜೀವಕ್ಕೆ ಜೀವ ನೀಡುವ ಸ್ನೇಹ ಮತ್ತು ತ್ಯಾಗದ ಕುರಿತು ಇರುವ ಯಾವುದೇ ಚಲನಚಿತ್ರ ಅಥವಾ ಪುಸ್ತಕಕ್ಕಿಂತ ಹೆಚ್ಚಾಗಿ ಈ ಘಟನೆ ನನ್ನನ್ನು ಮನಕಲಿಕಿತು. ನನ್ನಲ್ಲಿ ಭಾವನೆಗಳ ಬಿರುಗಾಳಿಯೇ ಬೀಸಿತು: ಈ ಇರುವೆಗಳನ್ನು ಅಸೂಕ್ಷ್ಮ ಜೀವಿಗಳೆಂದು ನಾನು ಅಂದುಕೊಂಡಿದ್ದಕ್ಕೆ ನನಗೆ ನಾನು ಖಂಡಿಸಿಕೊಳ್ಳುತ್ತೇನೆ. ನಂತರ ಆ ಒಂದು ಇರುವೆಯ ಪ್ರತಿರೋಧಕ್ಕೆ ಬೆಕ್ಕಸಬೆರಗು ವ್ಯಕ್ತಪಡಿಸುತ್ತೇನೆ; ಅವಳ ಶಿಸ್ತು ಮತ್ತು ಕೆಚ್ಚೆದೆಯ ತ್ಯಾಗಕ್ಕೆ ಒಂದು ಮೆಚ್ಚುಗೆ ಇರಲಿ… ಮತ್ತು ಕೊನೆಯಲ್ಲಿ ನನಗೆ ನಾಚಿಕೆಯಾಗಬೇಕು.

ಇದನ್ನೆಲ್ಲಾ ನೋಡುವಾಗ ಮನುಷ್ಯ ಕುಲಕ್ಕೆ ನಾಚಿಕೆಯಾಗಬೇಕು. ನಮಗೆ ನಮ್ಮಗಳ ಜೀವವೇ ಮುಖ್ಯ. ನಾವು ಒಬ್ಬರಿಗೊಬ್ಬರು ಸ್ಪಂದಿಸುತ್ತಾ ಲಾಭದ ಪ್ರಯೋಜನಗಳನ್ನು ಪಡೆದುಕೊಳ್ಳುವುದಿಲ್ಲ. ಸಮಾಜದಲ್ಲಿ ಸಂಕಷ್ಟಕ್ಕೊಳಪಟ್ಟವರನ್ನು ಮೇಲಕ್ಕೆತ್ತಲು ಪ್ರಯತ್ನ ಪಡುವುದು ಅಪರೂಪ. ಪರಸ್ಪರರಿಗೆ ಸಹಾಯವಾಗುವಂತಹ ಸೇತುವೆಗಳನ್ನು ನಿರ್ಮಿಸುವ ಬದಲು ನಾವು ಗೋಡೆಗಳನ್ನು ಕಟ್ಟುತ್ತಿದ್ದೇವೆ.

ಇರುವೆಗಳು ತುಂಬಾ ಸಣ್ಣ ಜೀವಿಗಳು. ಅವುಗಳೇ ಪರಸ್ಪರ ಸಹಾಯ, ನಿಸ್ವಾರ್ಥ ಗುಣಗಳಿಗೆ ಸಮರ್ಥವಾಗಿದ್ದರೆ, ನಾವು ಮನುಷ್ಯರು ಇತರರ ದುಃಖಕ್ಕೆ ಕಿವುಡರಾಗಿರುವುದು ಏಕೆ?

ಆ ದಿನ ನನಗೆ ಒಂದು ವಿಷಯ ಅರ್ಥವಾಯಿತು: ನಮ್ಮಗಳ ಶಕ್ತಿ ನಾವುಗಳು ಒಗ್ಗೂಡುವುದರಲ್ಲಿದೆ ಮತ್ತು ಯಾರಾದರೂ ಇನ್ನೂ ಸರಿಯಾಗಿ ಬದುಕುವುದು ಹೇಗೆ ಎಂದು ತಿಳಿದಿಲ್ಲದಿದ್ದರೆ, ಅವರು ಇರುವೆಗಳಿಂದ ಪಾಠ ಕಲಿಯಲಿ.

ಇಂಗ್ಲೀಷ್ ಮೂಲ: ಲಲಿತ

ಕನ್ನಡಕ್ಕೆ: ಪೃಥ್ವಿ ಕಣಸೋಗಿ

ಆಹಾರ ಭದ್ರತೆಯ ಖಾತ್ರಿಗಾಗಿ ಕೃಷಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...