Homeಮುಖಪುಟಸಲಾಂ ಇರುವೆ!

ಸಲಾಂ ಇರುವೆ!

- Advertisement -
- Advertisement -

ಒಮ್ಮೆ ಒಂದು ದಿನ ಬೆಳಂಬೆಳಗ್ಗೆ ನನಗೆ ಸಹಜವಾಗಿ ಎಚ್ಚರವಾದಾಗ, ಏನೊ ಒಂದು ಅದ್ಭುತ ನನ್ನ ಗಮನಕ್ಕೆ ಬಂತು. ಹಿಂದಿನ ರಾತ್ರಿ ನಾನು ಮಲಗುವ ಮುಂಚೆ ಐದು ಲೀಟರ್ ನೀರಿನ ಬಾಟಲಿಯ ಮುಚ್ಚಳವನ್ನು ಮುಚ್ಚದೆ ಹಾಗೆ ಇರಿಸಿದ್ದರಿಂದ ಅದರೊಳಗಡೆ ಹಲವು ಡಜನ್ ಇರುವೆಗಳು ಬಿದ್ದುಬಿಟ್ಟಿದ್ದವು. ಪಾಪ! ಪ್ರತಿಯೊಂದೂ ಇರುವೆಗಳು ಸಾವುನೋವಿನಿಂದ ನರಳುತ್ತಾ ತಮ್ಮ ಉಳಿವಿಗಾಗಿ ಹೋರಾಡುತ್ತಾ ಬಾಟಲಿಯೊಳಗಡೆ ಇದ್ದ ನೀರಿನಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡು ಸಹಾಯಕ್ಕಾಗಿ ಕೈಚಾಚಿದ್ದವು.

ಮೊದಲು ನನಗೆ ಈ ಇರುವೆಗಳು ಒಂದೊಂದಾಗಿ ನೀರಿನಲ್ಲಿ ಮುಳುಗುತ್ತಾ ಇದ್ದಾವೇನೋ, ಕೆಲವು ಇರುವೆಗಳಂತೂ ಮುಳುಗಿ ಸತ್ತ ಇತರ ಇರುವೆಗಳ ಮೇಲೇರಿ ತಮ್ಮ ಜೀವ ಉಳಿಸಿಕೊಳ್ಳುತ್ತಿದ್ದವೇನೋ ಅಂದುಕೊಂಡೆ.

ಈ ರೀತಿ ಅಂದುಕೊಂಡಿದ್ದು ನಂತರ ನನಗೆ ಅಸಹ್ಯ ತರಿಸಿತು ಮತ್ತು ನಾನು ಇವುಗಳ ತಂಟೆಗೆ ಹೋಗದೆ ಹಾಗೆ ಇದ್ದುಬಿಟ್ಟೆ. ಸುಮಾರು ಎರಡು ಗಂಟೆ ಕಳೆದ ನಂತರ ನನಗೆ ಯಾಕೋ ಏನೋ ಕುತೂಹಲ ಉಂಟಾಯಿತು. ಮತ್ತೆ ನಾನು ಇರುವೆಗಳು ಬಿದ್ದಿದ್ದ ಈ ನೀರಿನ ಬಾಟಲಿಯೊಳಗೆ ಇಣುಕಿ ನೋಡಿದೆ. ಆಗ ನಾನು ಬೆಕ್ಕಸಬೆರಗುಗೊಂಡೆ; ಎಲ್ಲಾ ಇರುವೆಗಳು ಜೀವಂತವಾಗಿದ್ದು ಇದಕ್ಕೆ ಕಾರಣವಾಗಿತ್ತು! ಇಷ್ಟು ಸಮಯದಲ್ಲಿ ಅವುಗಳು ಒಂದಕ್ಕೊಂದು ಭಾರ ಹೊರುತ್ತಾ ನೈಜ ‘ದ್ವೀಪ ಪ್ರದೇಶ’ದಲ್ಲಿ ಪಿರಮಿಡ್ ಅನ್ನು ಕಟ್ಟಿಕೊಂಡಿದ್ದವು. ಅದರಲ್ಲಿ ಕೆಲವು ಇತರ ಇರುವೆಗಳ ಬೆಂಬಲ ಪಡೆದುಕೊಂಡು ಪಾಳೆ ಪ್ರಕಾರ ಕೆಳಗಡೆ ನೀರಿನಲ್ಲಿ ತೇಲುತ್ತಿದ್ದವು.

ನನ್ನ ಉಸಿರು ಬಿಗಿಹಿಡಿದು ಇದನ್ನೆಲ್ಲಾ ನೋಡುತ್ತಾ ಕುಳಿತೆ. ಈ ಇರುವೆಗಳು ಪಿರಮಿಡ್ ಕಟ್ಟಿದಾಗ ಕೆಳಭಾಗದಲ್ಲಿದ್ದಂತಹವು ನಿಜವಾಗಿಯೂ ನೀರಿನಲ್ಲಿ ಮುಳುಗಿದ್ದವು, ಆದರೆ ಕೆಳಗಡೆ ಮುಳುಗಿದ್ದಂತಹ ಇರುವೆಗಳು ಹಾಗೆ ಮುಳುಗಿಕೊಂಡೇ ಇರಲಿಲ್ಲ. ಸ್ವಲ್ಪ ಸಮಯದ ನಂತರ ಮೇಲಿದ್ದ ಇರುವೆಗಳು ತಾವೇ ಸ್ವತಃ ಕೆಳಗಿಳಿಯುತ್ತಿದ್ದವು. ಕಳೆಗೆ ನೀರಿನಲ್ಲಿ ಮುಳುಗಿದ್ದ ಇರುವೆಗಳು ಆತುರಪಡದೆ, ಇತರ ಇರುವೆಗಳನ್ನು ತಳ್ಳದೆ ಮೇಲಕ್ಕೆ ಹೋದವು!

ಯಾವೊಂದು ಇರುವೆಗಳು ಕೂಡ ತಾವು ಮಾತ್ರ ಬದುಕಿ ಉಳಿಯಬೇಕೆಂಬ ಕಡೆ ಪ್ರಯತ್ನ ಹಾಕಲಿಲ್ಲ. ಇದಕ್ಕೆ ಬದಲಾಗಿ, ಪ್ರತಿಯೊಂದು ಇರುವೆಗಳು ಈ ಪಿರಮಿಡ್ಡಿನಲ್ಲಿ ಅತ್ಯಂತ ಕಷ್ಟಕರವಾದ ಸ್ಥಳವಾದ ಕೆಳಭಾಗಕ್ಕೆ ಹೋಗಲು ಪ್ರಯತ್ನಿಸಿದವು. ಒಂದಕ್ಕೊಂದು ಸಹಕರಿಸುತ್ತ ಈ ಪಿರಮಿಡ್ ವ್ಯವಸ್ಥೆಯಲ್ಲಿ ಪಾಲ್ಗೊಂಡಿದ್ದು ನನ್ನ ಹೃದಯಕ್ಕೆ ತಟ್ಟಿತು.

ನಾನು ಇದನ್ನೆಲ್ಲಾ ನೋಡುತ್ತಾ ಬೇರೆ ಏನೋ ಮಾಡಲು ಹೋಗಲಿಲ್ಲ. ಬಾಟಲಿಯ ತುದಿ ಭಾಗದಿಂದ ಬಹಳ ಸುಲಭವಾಗಿ ಒಂದು ಚಮಚವನ್ನು ಒಳ ತೂರಿಸಬಹುದೆಂದು ನನಗೆ ಹೊಳೆಯಿತು ಮತ್ತು ಬಹಳ ಎಚ್ಚರಿಕೆಯಿಂದ ಬಾಟಲಿಯೊಳಗೆ ಚಮಚವನ್ನು ತೂರಿಸಿದೆ. ತಮ್ಮ ಪ್ರಾಣಭಿಕ್ಷೆಗಾಗಿ ಕಾಯುತ್ತಿದ್ದ ಇರುವೆಗಳು ಒಂದಿನಿತು ಬೆದರದೆ ಒಂದೊಂದಾಗಿ ಬಾಟಲಿಯಿಂದ ಹೊರಬರಲು ಪ್ರಾರಂಭಿಸಿದವು.

ಇದೆಲ್ಲವೂ ಸರಾಗವಾಗಿಯೇ ನಡೆಯುತ್ತಿತ್ತು. ಇವುಗಳಲ್ಲಿ ಒಂದು ಇರುವೆ ಬಳಲಿ ಬೆಂಡಾಗಿ, ಮೇಲಕ್ಕೆ ಬರಲಾಗದೆ ಮತ್ತೆ ನೀರಿಗೆ ಬಿತ್ತು ಮತ್ತು ನನ್ನ ಜೀವಮಾನದುದ್ದಕ್ಕೂ ನೆನಪಿಡುವ ಪ್ರಸಂಗವೊಂದು ಅಲ್ಲಿ ನಡೆಯಿತು.

ಬಹುತೇಕ ಹೊರಗೆ ಬಂದು ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದ ಕೊನೆಯ ಇರುವೆ ಇದ್ದಕ್ಕಿದ್ದಂತೆ ಮತ್ತೆ ಪ್ರಾಣಾಪಾಯವಿರುವ ಬಾಟಲಿಯ ನೀರಿನೊಳಕ್ಕೆ ನುಗ್ಗಿತು. ಅದು ಕೆಳಗೆ ಬಂದು, “ತಾಳ್ಮೆಯಿಂದ ಇರು ಸಹೋದರಿ, ನಾನು ನಿನ್ನನ್ನು ಇಲ್ಲಿ ಸಾಯಲು ಬಿಡುವುದಿಲ್ಲ!” ಎಂದು ಹೇಳುವಂತೆ ಭಾಸವಾಯಿತು.

ಅವಳು ನೀರಿನಲ್ಲಿ ಪ್ರೀತಿಯನ್ನು ಬೆರಸಿದಳು. ಮುಳುಗುತ್ತಿದ್ದವಳಿಗೆ ಬಿಗಿಯಾಗಿ ಅಂಟಿಕೊಂಡಳು. ಆದರೆ ಅವಳು ಅವಳನ್ನು ತಾನೇ ಸ್ವತಃ ಹೊರತೆಗೆಯಲು ಸಾಧ್ಯವಾಗಲಿಲ್ಲ. ಇದನ್ನೆಲ್ಲಾ ನೋಡುತ್ತಾ ಇದ್ದ ನಾನು ಮತ್ತೆ ಏನೋ ಮಾಡಲು ಹೋಗಲಿಲ್ಲ, ನಾನು ಚಮಚವನ್ನು ಅವುಗಳ ಹತ್ತಿರಕ್ಕೆ ಹಿಡಿದೆ. ನಂತರ ಈ ಗೆಳತಿಯರಿಬ್ಬರೂ ಜೀವಂತವಾಗಿ ಒಟ್ಟಿಗೆ ಹೊರಬಂದರು.

ಜೀವಕ್ಕೆ ಜೀವ ನೀಡುವ ಸ್ನೇಹ ಮತ್ತು ತ್ಯಾಗದ ಕುರಿತು ಇರುವ ಯಾವುದೇ ಚಲನಚಿತ್ರ ಅಥವಾ ಪುಸ್ತಕಕ್ಕಿಂತ ಹೆಚ್ಚಾಗಿ ಈ ಘಟನೆ ನನ್ನನ್ನು ಮನಕಲಿಕಿತು. ನನ್ನಲ್ಲಿ ಭಾವನೆಗಳ ಬಿರುಗಾಳಿಯೇ ಬೀಸಿತು: ಈ ಇರುವೆಗಳನ್ನು ಅಸೂಕ್ಷ್ಮ ಜೀವಿಗಳೆಂದು ನಾನು ಅಂದುಕೊಂಡಿದ್ದಕ್ಕೆ ನನಗೆ ನಾನು ಖಂಡಿಸಿಕೊಳ್ಳುತ್ತೇನೆ. ನಂತರ ಆ ಒಂದು ಇರುವೆಯ ಪ್ರತಿರೋಧಕ್ಕೆ ಬೆಕ್ಕಸಬೆರಗು ವ್ಯಕ್ತಪಡಿಸುತ್ತೇನೆ; ಅವಳ ಶಿಸ್ತು ಮತ್ತು ಕೆಚ್ಚೆದೆಯ ತ್ಯಾಗಕ್ಕೆ ಒಂದು ಮೆಚ್ಚುಗೆ ಇರಲಿ… ಮತ್ತು ಕೊನೆಯಲ್ಲಿ ನನಗೆ ನಾಚಿಕೆಯಾಗಬೇಕು.

ಇದನ್ನೆಲ್ಲಾ ನೋಡುವಾಗ ಮನುಷ್ಯ ಕುಲಕ್ಕೆ ನಾಚಿಕೆಯಾಗಬೇಕು. ನಮಗೆ ನಮ್ಮಗಳ ಜೀವವೇ ಮುಖ್ಯ. ನಾವು ಒಬ್ಬರಿಗೊಬ್ಬರು ಸ್ಪಂದಿಸುತ್ತಾ ಲಾಭದ ಪ್ರಯೋಜನಗಳನ್ನು ಪಡೆದುಕೊಳ್ಳುವುದಿಲ್ಲ. ಸಮಾಜದಲ್ಲಿ ಸಂಕಷ್ಟಕ್ಕೊಳಪಟ್ಟವರನ್ನು ಮೇಲಕ್ಕೆತ್ತಲು ಪ್ರಯತ್ನ ಪಡುವುದು ಅಪರೂಪ. ಪರಸ್ಪರರಿಗೆ ಸಹಾಯವಾಗುವಂತಹ ಸೇತುವೆಗಳನ್ನು ನಿರ್ಮಿಸುವ ಬದಲು ನಾವು ಗೋಡೆಗಳನ್ನು ಕಟ್ಟುತ್ತಿದ್ದೇವೆ.

ಇರುವೆಗಳು ತುಂಬಾ ಸಣ್ಣ ಜೀವಿಗಳು. ಅವುಗಳೇ ಪರಸ್ಪರ ಸಹಾಯ, ನಿಸ್ವಾರ್ಥ ಗುಣಗಳಿಗೆ ಸಮರ್ಥವಾಗಿದ್ದರೆ, ನಾವು ಮನುಷ್ಯರು ಇತರರ ದುಃಖಕ್ಕೆ ಕಿವುಡರಾಗಿರುವುದು ಏಕೆ?

ಆ ದಿನ ನನಗೆ ಒಂದು ವಿಷಯ ಅರ್ಥವಾಯಿತು: ನಮ್ಮಗಳ ಶಕ್ತಿ ನಾವುಗಳು ಒಗ್ಗೂಡುವುದರಲ್ಲಿದೆ ಮತ್ತು ಯಾರಾದರೂ ಇನ್ನೂ ಸರಿಯಾಗಿ ಬದುಕುವುದು ಹೇಗೆ ಎಂದು ತಿಳಿದಿಲ್ಲದಿದ್ದರೆ, ಅವರು ಇರುವೆಗಳಿಂದ ಪಾಠ ಕಲಿಯಲಿ.

ಇಂಗ್ಲೀಷ್ ಮೂಲ: ಲಲಿತ

ಕನ್ನಡಕ್ಕೆ: ಪೃಥ್ವಿ ಕಣಸೋಗಿ

ಆಹಾರ ಭದ್ರತೆಯ ಖಾತ್ರಿಗಾಗಿ ಕೃಷಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...