Homeಕರ್ನಾಟಕ‘ಹಿಂದೂ’ ಪದ ವಿವಾದ: ಬಹಿರಂಗ ಚರ್ಚೆಗೆ ಸತೀಶ್‌ ಜಾರಕಿಹೊಳಿ ಪಂಥಾಹ್ವಾನ- ಏನಂದರು ಜನ?

‘ಹಿಂದೂ’ ಪದ ವಿವಾದ: ಬಹಿರಂಗ ಚರ್ಚೆಗೆ ಸತೀಶ್‌ ಜಾರಕಿಹೊಳಿ ಪಂಥಾಹ್ವಾನ- ಏನಂದರು ಜನ?

- Advertisement -
- Advertisement -

“ನಾನು ಅರೆಬರೆ ಓದಿದವನಲ್ಲ, 30 ವರ್ಷಗಳಿಂದ ಓದುತ್ತಲೇ ಇದ್ದೇನೆ. ಹಿಂದೂ ಪದದ ಬಗ್ಗೆ ನೀಡಿದ್ದ ಹೇಳಿಕೆ ಕುರಿತು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ, ಹೇಳಿಕೆ ತಪ್ಪೆಂದು ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿರುವುದು ಮತ್ತೊಂದು ಸುತ್ತಿನ ಚರ್ಚೆಗೆ ಕಾರಣವಾಗಿದೆ.

ಹಿಂದೂ ಪದದ ಹಿನ್ನೆಲೆಯ ಕುರಿತು ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿದಂತೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ನನ್ನ ಹೇಳಿಕೆಯು ತಪ್ಪು ಎಂದಾದರೆ ಕ್ಷಮೆ ಯಾಚಿಸುವುದಷ್ಟೇ ಅಲ್ಲ, ರಾಜೀನಾಮೆಯನ್ನೂ ಕೊಡುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಹಿಂದೂ ಎಂಬುದು ಪರ್ಷಿಯನ್ ಭಾಷೆಯಿಂದ ಬಂದ ಶಬ್ದ. ಹಿಂದೂ ಪದದ ಬಗ್ಗೆ ಶಬ್ದಕೋಶದಲ್ಲಿ, ವಿಕಿಪಿಡಿಯಾದಲ್ಲಿ ಇರುವ ವಿವರಣೆಯನ್ನು ನಾನು ಹೇಳಿದ್ದೇನೆ. ಹಿಂದೂ ಪದದ ಬಗ್ಗೆ ಚರ್ಚೆಯಾಗಬೇಕು ಎಂದು ನಾನು ಹೇಳಿದ್ದೇನೆ. ಆದರೆ, ನಾನು ಏನು ಹೇಳಿದ್ದೇನೆಯೋ ಅದರ ಬಗ್ಗೆ ಅಥವಾ ಹಿಂದೂ ಪದದ ನಿಜವಾದ ಅರ್ಥದ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಬೇರೆ ಯಾವುದೋ ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಪದದ ಕುರಿತು ಬಹಿರಂಗ ಚರ್ಚೆಗೂ ನಾನು ಸಿದ್ಧ” ಎಂದು ಅವರು ತಿಳಿಸಿದ್ದಾರೆ.

ಸತೀಶ್ ಜಾರಕಿಹೊಳಿಯವರ ಹೇಳಿಕೆಗೆ ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಬಹಿರಂಗ ಚರ್ಚೆಗೆ ಆಹ್ವಾನಿಸಿರುವುದನ್ನು ಹೊಗಳಿದ್ದಾರೆ.

ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್‌ಮಟ್ಟು ಅವರು ಈ ಕುರಿತು ಪೋಸ್ಟ್ ಮಾಡಿದ್ದು, “ತಮ್ಮ ಹೇಳಿಕೆ ತಪ್ಪೆಂದು ಸಾಬೀತು ಪಡಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸತೀಶ್ ಜಾರಕಿಹೊಳಿ ಅವರು ತಮ್ಮ ರಾಜಕೀಯ ಜೀವನವನ್ನು ಪಣಕ್ಕಿಟ್ಟು ಸವಾಲು ಹಾಕಿದ್ದಾರೆ. ಹಿಂದೂ ಧರ್ಮ ರಕ್ಷಕರೆಂದು ಎದೆ ಬಡಿದುಕೊಳ್ಳುವವರು ಈಗ ಜಾರಕಿಹೊಳಿ ಅವರ ಸವಾಲನ್ನು ಸ್ವೀಕರಿಸುವ ಎದೆಗಾರಿಕೆ ತೋರಿಸಬೇಕು” ಎಂದು ಒತ್ತಾಯಿಸಿದ್ದಾರೆ.

“ಜಾರಕಿಹೊಳಿ ಅವರು ಹಿಂದೂ ಧರ್ಮವೇ ಅಶ್ಲೀಲ, ಇಲ್ಲವೇ ಹಿಂದೂಗಳೆಲ್ಲರೂ ಕಳ್ಳರು, ಗುಲಾಮರು ಎಂದು ಹೇಳಿಲ್ಲ. ತಾನು ಹಿಂದೂ ಅಲ್ಲ, ಹಿಂದೂ ಆಗಿ ಹುಟ್ಟಿದ್ದೇನೆ ಹಿಂದೂ ಆಗಿ ಸಾಯಲಾರೆ ಎಂದೂ ಹೇಳಿಲ್ಲ. ಜಾರಕಿಹೊಳಿ ಅವರು ಹಿಂದೂ ದೇವರು ಮತ್ತು ಧರ್ಮವನ್ನು ಪ್ರಚಾರದ ಪೋಸ್ಟರ್ ಮಾಡಿ ಚುನಾವಣೆಗಳಲ್ಲಿ ಮತವನ್ನೂ ಕೇಳಿಲ್ಲ. ಅವರು ಗೋಮಾಂಸ ರಫ್ತಿನ ಉದ್ಯಮವನ್ನೂ ನಡೆಸುತ್ತಿಲ್ಲ. ಮಂದಿರ ಕಟ್ಟುತ್ತೇವೆ ಎಂದು ಹೇಳಿ ಇಟ್ಟಿಗೆ ಮಾರಿ ಹಣ ತಿಂದೂ ಹಾಕಿಲ್ಲ. ಹಿಂದೂ ಮಹಿಳೆಯರನ್ನು ರೇಪ್ ಮಾಡಿದ ಹಿಂದೂ ಸ್ವಾಮಿಗಳನ್ನು ಸಮರ್ಥಿಸಿಕೊಂಡಿಲ್ಲ, ಅಸ್ಪಶ್ಯತೆಯನ್ನು ಆಚರಿಸಿಲ್ಲ, ಜಾತಿ ಆಧಾರದಲ್ಲಿ ತಾರತಮ್ಯವನ್ನೂ ಮಾಡಿಲ್ಲ. (ಇದನ್ನೆಲ್ಲ ಅವರು ಮಾಡಿದ್ದಾರೆಂದು ಯಾರಾದರೂ ಸಾಬೀತುಪಡಿಸಿದರೆ ನಾನೂ ಬರವಣಿಗೆಯನ್ನು ನಿಲ್ಲಿಸಿಬಿಡುತ್ತೇನೆ)” ಎಂದು ಬರೆದುಕೊಂಡಿದ್ದಾರೆ.

“ಅವರು ಬಹಳ ಸರಳವಾಗಿ ಹಿಂದೂ ಎಂಬ ಶಬ್ದಕ್ಕೆ ಪರ್ಷಿಯನ್ ಭಾಷೆಯಲ್ಲಿ ಇಂತಹದ್ದೊಂದು ಅರ್ಥ ಇದೆ ಎಂದು ಹೇಳಿದ್ದಾರೆ. ಅದು ಸುಳ್ಳು ಎಂದಾದರೆ ಅದನ್ನು ಸಾಬೀತುಪಡಿಸಿ ಜಾರಕಿಹೊಳಿ ಅವರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಬೇಕು. ಅದನ್ನು ಬಿಟ್ಟು ಕೈಕಾಲು ಬಡಿದುಕೊಂಡು ಕಿರುಚಾಡುವುದಲ್ಲ” ಎಂದು ಟೀಕಿಸಿದ್ದಾರೆ.

“ನಕಲಿ ಹಿಂದೂಗಳೇ ಕೇಳಿ, ಹಿಂದೂ ಧರ್ಮ ಉಳಿದುಕೊಂಡಿದ್ದು ಆಚಾರ್ಯರು, ಸ್ವಾಮಿಗಳಿಂದಲೂ ಅಲ್ಲ, ವೇದ, ಉಪನಿಷತ್, ಪುರಾಣಗಳಿಂದಲೂ ಅಲ್ಲ, ಅದು ಉಳಿದದ್ದು ಬೆಳೆದದ್ದು ಕಾಲಕಾಲಕ್ಕೆ ಬುದ್ದ, ಬಸವ, ನಾರಾಯಣ ಗುರು, ಪುಲೆ, ಅಂಬೇಡ್ಕರ್, ಪೆರಿಯಾರ್, ಗಾಂಧಿ, ಲೋಹಿಯಾರಂತಹವರು ಕೇಳಿದ ಪ್ರಶ್ನೆಗಳಿಂದ ಮತ್ತು ಹುಟ್ಟು ಹಾಕಿದ ಚರ್ಚೆಗಳಿಂದ. ಇವರಲ್ಲಿ ಕೆಲವರು ಹಿಂದೂ ಧರ್ಮವನ್ನೇ ವಿರೋಧಿಸಿದ್ದಾರೆ ನಿಜ, ಆ ವಿರೋಧದಿಂದಾಗಿ ಹಿಂದೂ ಧರ್ಮ ಅನಿವಾರ್ಯವಾಗಿ ಸುಧಾರಣೆಗೊಳಗಾಗಬೇಕಾಯಿತು” ಎಂದು ವಿವರಿಸಿದ್ದಾರೆ.

“ನಾರಾಯಣ ಗುರುಗಳು ಕೇರಳದಲ್ಲಿ ಧಾರ್ಮಿಕ ಸುಧಾರಣೆಗಳಿಗೆ ಕೈಹಾಕದಿದ್ದರೆ ಅಲ್ಲಿನ ಅರ್ಧ ಜನಸಂಖ್ಯೆ ಕ್ರಿಶ್ಚಿಯನರದಾಗುತ್ತಿತ್ತು. ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಸುಳ್ಳು ಎಂದು ಸಾಬೀತು ಪಡಿಸಿ ಈ ಚರ್ಚೆಯನ್ನು ಬೇಗ ಮುಗಿಸಿಬಿಡಿ. ಈ ಚರ್ಚೆಯನ್ನು ಬೇಗ ಮುಗಿಸಿದರೆ ಹಿಂದೂಗಳ ಅಳಿವು ಉಳಿವಿನ ಬಹಳ ಮಹತ್ವದ ಪ್ರಶ್ನೆ ಬಗ್ಗೆ ಚರ್ಚೆ ನಡೆಸಲು ಅನುಕೂಲವಾಗುತ್ತದೆ. ಅದು ರಾಜ್ಯದ ಶೇಕಡಾ 80ರಷ್ಟು ಹಿಂದುಳಿದ ಜಾತಿಯ ಹಿಂದುಗಳಿಗೆ ಶೇಕಡಾ 50ರಷ್ಟು ಮೀಸಲಾತಿ ನೀಡಿ, ಶೇಕಡಾ ನಾಲ್ಕರಷ್ಟು ಮೇಲ್ಜಾತಿ ಹಿಂದೂಗಳಿಗೆ ಶೇಕಡಾ ಹತ್ತರಷ್ಟು ಮೀಸಲಾತಿ ಹೇಗೆ ನೀಡಲು ಸಾಧ್ಯ ಎನ್ನುವ ವಿಷಯದ ಮೇಲಿನ ಚರ್ಚೆ” ಎಂದು ಎಚ್ಚರಿಸಿದ್ದಾರೆ.

ನಟ ಚೇತನ್‌ ಅಹಿಂಸಾ ಪ್ರತಿಕ್ರಿಯಿಸಿ, “ಶಾಸಕ ಸತೀಶ್ ಜಾರಕಿಹೊಳಿ ಅವರ ಹೇಳಿಕೆಯು ಆರ್ಟಿಕಲ್ 19 – ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅನುಗುಣವಾಗಿದೆ. ಪರ್ಷಿಯನ್ ಪದವಾದ ‘ಹಿಂದೂ’ವಿನ ಪರ್ಯಾಯ ವ್ಯಾಖ್ಯಾನಗಳ ಕುರಿತು ಹೆಚ್ಚಿನ ಸಂಶೋಧನೆ ಮತ್ತು ಚರ್ಚೆಗಳ ಅಗತ್ಯವಿದೆ. ಭವಿಷ್ಯದಲ್ಲಿ, ಜಾರಕಿಹೊಳಿಅವರು ರಾಜಕೀಯ ಲಾಭಕ್ಕಾಗಿ ‘ಹಿಂದೂ’ ಕಾಂಗ್ರೆಸ್‌ ಜೊತೆ ನಿಲ್ಲುವುದರ ಬದಲಾಗಿ ಸಮಾನತಾವಾದಿಗಳಾದ ನಮ್ಮೊಂದಿಗೆ ಮತ್ತು ಸತ್ಯದೊಂದಿಗೆ ನಿಲ್ಲುತ್ತಾರೆ ಎಂದು ಭಾವಿಸುತ್ತೇವೆ” ಎಂದು ಪೋಸ್ಟ್ ಮಾಡಿದ್ದಾರೆ.

ಹಿರಿಯ ಪತ್ರಕರ್ತರಾದ ರಾಜರಾಮ್ ತಲ್ಲೂರು ಅವರು ಬರೆಯುತ್ತಾ, “ನಿನ್ನೆಯ ತನಕ ಎಲ್ಲವೂ ಸಮೃದ್ಧ-ಸುಂದರ-ಸುಲಲಿತವಾಗಿತ್ತು. ಆದರೆ, ಸತೀಶ್ ಜಾರಕಿಹೊಳಿ ಅವರ ಒಂದು ಭಾಷಣ, ಏಕಾಏಕಿ ದೇಶದ ಅತ್ಯಂತ ಮಹತ್ವದ ಸಮಸ್ಯೆಯೊಂದನ್ನು ಎತ್ತಿದೆ. ಈವತ್ತಿನ ಪತ್ರಿಕೆಗಳನ್ನು ಗಮನಿಸಿ. ಬಹುತೇಕ ಕನ್ನಡ ಪತ್ರಿಕೆಗಳಲ್ಲಿ ಒಂದರಿಂದ ಒಂದೂವರೆ ಪುಟ ಈ ಸಮಸ್ಯೆಗೆ ಮೀಸಲಾಗಿದೆ. ಇದು ಈ ದೇಶದ ರಾಜಕಾರಣದ ಗುಣಮಟ್ಟ, ನಮ್ಮ #ಡಿಯರ್_ಮೀಡಿಯಾ ದ ಗುಣಮಟ್ಟಗಳ ಬಗ್ಗೆ ಹಲವು ಒಳನೋಟಗಳನ್ನು ಕೊಡುತ್ತದೆ” ಎಂದು ವಿಷಾದಿಸಿದ್ದಾರೆ.

ಇದನ್ನೂ ಓದಿರಿ: ಹಿಂದೂ ಪದ ಉಲ್ಲೇಖ ವಿವಾದ: ಸ್ಪಷ್ಟನೆ ನೀಡಿದ ಸತೀಶ್ ಜಾರಕಿಹೊಳಿ

“ಕಳೆದ ಚುನಾವಣೆಗಳಲ್ಲಿ ಸಿದ್ಧರಾಮಯ್ಯನವರ ಮೀನೂಟ/ಬಾಡೂಟ, ಅವರ ಕಾರಿನ ಮೇಲೆ ಕುಳಿತ ಕಾಗೆ ಇವೆಲ್ಲ ಅದನ್ನು ಕಲಿಸಿಕೊಟ್ಟಿವೆ. ಚುನಾವಣೆಗಳಿಗೆ ಮೊದಲು ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಇಂತಹದೊಂದು “ಪ್ಯಾಟರ್ನ್”ನಿಂದ ಕಲಿಯಲು ಸಾಧ್ಯವಾಗಿಲ್ಲ, ಅಥವಾ ಕನಿಷ್ಟ ಪ್ಯಾಟರ್ನ್‌ಅನ್ನು ಗುರುತಿಸಿ ಅರ್ಥ ಮಾಡಿಕೊಳ್ಳಲು ಸಾಧ್ಯ ಆಗಿಲ್ಲ ಎಂದರೆ, ಅದಕ್ಕೆ ಅರ್ಥ ಆಗದವರೇ ಹೊಣೆ. ಕಾಂಗ್ರೆಸ್ಸಿನೊಳಗೆ ಬೇರೆ ನಾಯಕರಿಗಿಂತ ಸಿದ್ಧರಾಮಯ್ಯ, ಬಿ.ಕೆ.ಹರಿಪ್ರಸಾದ್, ಸತೀಶ್ ಜಾರಕಿಹೊಳಿಯಂತಹ ನಾಯಕರೇ ಯಾಕೆ ಹೆಚ್ಚಾಗಿ ಈ ರೀತಿಯ ದಾಳಿಗೆ ಗುರಿಯಾಗುತ್ತಿದ್ದಾರೆ ಎಂಬ ಪ್ಯಾಟರ್ನನ್ನಾದರೂ ಅರ್ಥ ಮಾಡಿಕೊಳ್ಳದಿದ್ದರೆ, ಈ ಯುದ್ಧ ರೈಫಲ್ ಹೊಂದಿರುವವರ ವಿರುದ್ಧ ಕಲ್ಲು ದೊಣ್ಣೆಗಳೊಂದಿಗೆ, ಯಾವುದೇ ವ್ಯೂಹವಿಲ್ಲದೆ ಹೋರಾಡುವ ಅಸಮ ಯುದ್ಧವೇ ಸೈ” ಎಂದಿದ್ದಾರೆ.

ವ್ಯಂಗ್ಯಚಿತ್ರಕಾರ ಪಂಜು ಗಂಗೊಳ್ಳಿ ಪ್ರತಿಕ್ರಿಯಿಸಿ, “ಹಿಂದೂ ಧರ್ಮ, ಹಿಂದೂ ಶಬ್ದಕ್ಕೆ ಈವರೆಗೂ ಯಾರಿಂದಲೂ ಸರಿಯಾದ ವ್ಯಾಖ್ಯಾನ ಮಾಡಲಾಗಿಲ್ಲ. ಇಷ್ಟು ವರ್ಷಗಳಿಂದ ಸಾಧ್ಯವಾಗಿಲ್ಲ ಅಂದರೆ ಮುಂದೆಯೂ ಸಾಧ್ಯವಾಗಲಿಕ್ಕಿಲ್ಲ. ಅಂತಹದರಲ್ಲಿ, ಇಡೀ ಸಮಾಜವೇ ಧರ್ಮದ ನಶೆಯಲ್ಲಿ ತೂರಾಡುವ ಈ ಹೊತ್ತಲ್ಲಿ ರಾಜಕಾರಣಿಯೊಬ್ಬ ಇವುಗಳಿಗೆ ಅಶ್ಲೀಲ ಅರ್ಥ ಇದೆ, ಮತ್ತೊಂದು ಮಗದೊಂದು ಅರ್ಥ ಇದೆ ಅಂತ ಸಾರ್ವಜನಿಕವಾಗಿ ಹೇಳುವುದು ರಾಜಕೀಯ ಆತ್ಮಹತ್ಯೆಯೇ ಸರಿ. ಮತ್ತು, ತಾನು ಹೇಳಿದ್ದಕ್ಕೆ ಬದ್ದ, ಧಮ್ಮಿದ್ದರೆ ತಾಕತ್ತಿದ್ದರೆ ಚರ್ಚೆಗೆ ಬನ್ನಿ ಅಂತ ಪಾಂಡಿತ್ಯದ ಸವಾಲು ಹಾಕಿದರೆ ಆ ಸವಾಲು ಸ್ವೀಕರಿಸಲು ಅವರೇನು ಧಾರ್ಮಿಕ ಪಂಡಿತರೇ? ಧರ್ಮವಂತರೇ? ಧರ್ಮಬೀರುಗಳೇ? ಅವರು ಜನರಿಗೆ ಧರ್ಮದ ನಶೆ ಏರಿಸಿ ರಾಜಕೀಯ ಲಾಭ ಮಾಡುವ ಝಾಂಬಿಗಳು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂದುವರಿದು, “ತಮ್ಮ ರಾಜಕೀಯ ವಿರೋಧಿಗಳು ಧರ್ಮದ ಬಗ್ಗೆ ಋಣಾತ್ಮಕವಾಗಿ ಮಾತಾಡಿದಷ್ಟೂ ಅವರಿಗೆ ಸಂತೋಷ. ಕಳೆದ ಕೆಲವು ದಶಕಗಳಿಂದ ಎಂತಹ ಸೋಷಿಯಲ್ ಎಂಜಿನಿಯರಿಂಗ್ ನಡೆದಿದೆಯೆಂದರೆ, ಶತಮಾನಗಳಿಂದ ಧಾರ್ಮಿಕ ಶೋಷಣೆಗೆ ಸಿಕ್ಕಿ ನರಳಿದ ಜನ ಸಮುದಾಯಗಳೂ ಇಂದು ಅದೇ ಧರ್ಮಕ್ಕಾಗಿ ಕೊಲೆ ಮಾಡಲೂ ತಯಾರಾಗಿದ್ದಾರೆ, ಕೊಲೆಯಾಗಲೂ ಸಿದ್ದರಾಗಿದ್ದಾರೆ. ಇಷ್ಟು ವರ್ಷಗಳಿಂದ ರಾಜಕಾರಣದಲ್ಲಿರುವವರಿಗೆ ಇದು ಅರ್ಥ ಆಗಿಲ್ಲವೆಂದರೆ ಅವರದ್ದು ಅದೆಂತಹ ಪಾಂಡಿತ್ಯ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹಿರಿಯ ಪತ್ರಕರ್ತರಾದ ಸತನ್‌ಕುಮಾರ್ ಬೆಳಗಲಿ ಪ್ರತಿಕ್ರಿಯಿಸಿ, “ಸತೀಶ ಜಾರಕಿಹೊಳಿ ಅವರು ಏನೋ ದೊಡ್ಡ ಅಪರಾಧ ಮಾಡಿದಂತೆ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಕೋಮುವಾದಿ ಶಕ್ತಿಗಳು ಯತ್ನಿಸುತ್ತಿವೆ. ಸತೀಶ ಹೇಳಿಕೆ ಬಗ್ಗೆ ಚರ್ಚೆಯಾಗಲಿ. ಸಂವಾದದ ಮೂಲಕ ಸತೀಶರನ್ನು ಎದುರಿಸಲಿ. ಚುನಾವಣೆ ಮುಂದಿರುವಾಗ ಸತೀಶ ಈ ಮಾತು ಆಡಿರುವದು ಅವರ ಸೈದ್ಧಾಂತಿಕ ಬದ್ಧತೆಗೆ ಸಾಕ್ಷಿ. ವಾಸ್ತವವಾಗಿ ಸತೀಶ ಹೇಳಿದ್ದು ಧರ್ಮದ ಬಗ್ಗೆ ಅಲ್ಲ. ಹಿಂದು ಪದದ ಬಗ್ಗೆ. ರಾಮಾಯಣ, ಮಹಾಭಾರತ, ಭಗವದ್ಗೀತೆ ಗಳಲ್ಲೂ ‘ ಹಿಂದೂ’ ಎಂಬ ಪದವಿಲ್ಲ.ಅದು ಪರ್ಷಿಯನ್ ಸೃಷ್ಟಿ ಎಂಬ ಸತೀಶ ಅಭಿಪ್ರಾಯದಲ್ಲಿ ಹುರುಳಿಲ್ಲದಿಲ್ಲ. ಅದೇನೇ ಇರಲಿ ಶಂ.ಬಾ.ಜೋಶಿಯವರು, ಗೌರೀಶ ಕಾಯ್ಕಿಣಿಯವರು ಸೇರಿದಂತೆ ಬೌದ್ಧಿಕ ವಲಯದಲ್ಲಿ ಆಗಾಗ ಇಂಥ ಚರ್ಚೆಗಳು ನಡೆದಿವೆ. ಈಗಲೂ ನಡೆಯಲಿ. ಅಪಪ್ರಚಾರ ಬೇಡ. ಸಂವಾದ ಈ ನೆಲಕ್ಕೆ ಹೊಸದಲ್ಲ. ಗಾಂಧೀಜಿ, ಅಂಬೇಡ್ಕರ್, ಮತ್ತು ಗಾಂಧೀಜಿ  ಗೋರಾ ನಡುವಿನ ವೈಚಾರಿಕ ಸಂವಾದ ಎಲ್ಲರಿಗೂ ತಿಳಿದಿದೆ. ಬಸವಣ್ಣನವರ ಅನುಭವ ಮಂಟಪವೂ ಕೂಡ ಸಂವಾದದ ಕೇಂದ್ರವಾಗಿತ್ತು. ವಚನಕಾರ್ತಿಯರು ಬಸವಣ್ಣನವರನ್ನೇ ತರಾಟೆಗೆ ತೆಗೆದುಕೊಂಡ ನಾಡಿದು” ಎಂದು ತಿಳಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ರಾಜಕಾರಣಿಗಳಿಗೆ ಓಟು ಹತ್ತಿರ ಬಂತೆಂದರೆ ಹಬ್ಬ ಹಾಗಾಗಿ ತಮ್ಮ ಎದುರಾಳಿಗಳು ಎಲ್ಲಿ ತಪ್ಪಿಗೆ ಸಿಕ್ಕಿ ಬೀಳುತ್ತಾರೆ ಎಂಬುದನ್ನೇ ಕಾಯ್ದಿರುತ್ತಾರೆ ಅದನ್ನೇ ಚಿಕ್ಕ ವಿಷಯವನ್ನು ಅಗಾಧ ಮಾಡಿಕೊಂಡು ಬರುವ ಚುನಾವಣೆಯಲ್ಲಿ ಲಾಭವಾಗುತ್ತೋ ಅಥವಾ ಬಹುಮತ ಬರುತ್ತೋ ಏನೋ ಅಂತ ಕಾಯುತ್ತಿರುತ್ತಾರೆ ತಾವುಗಳು ಸಾಧ್ಯ ಆದರೆ ಸನ್ಮಾನ್ಯರಾದ ಅಟಲ್ ಬಿಹಾರಿ ವಾಜಪೇಯಿ ಡಾಕ್ಟರ್ ಮನಮೋಹನ್ ಸಿಂಗ್ ಶ್ರೀಮತಿ ಇಂದಿರಾಗಾಂಧಿ ಇಂತಹ ಮೇಧಾವಿಗಳು ಮಾಡಿದಂತ ಅಮೋಘ ಕೆಲಸ ಕಾರ್ಯಗಳಂತೆ ಮಾಡಿ ಸೈಲೆಂಟಾಗಿ ಮತಗಳನ್ನ ಕೇಳದೆಯೇ ಜನತೆ ನೇರವಾಗಿ ತಮಗೆ ಮತ ಕೊಡುವಂತೆ ತಾವು ರಾಜಕಾರಣ ಅಥವಾ ಸಮಾಜ ಸೇವೆ ಮಾಡಿದರೆ ಮಾತ್ರ ಒಳ್ಳೆಯ ವ್ಯಕ್ತಿತ್ವ ಮತ್ತು ಘನತೆಗಳು ಬರುವುದು ಕಿರಿಚ್ ಆಟಗಳು ಅಗತ್ಯವೇ ಇರುವುದಿಲ್ಲ ಅಂತ ನನ್ನ ಅನಿಸಿಕೆ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...