Homeಮುಖಪುಟಹಿಂದೂ ಪದ ಉಲ್ಲೇಖ ವಿವಾದ: ಸ್ಪಷ್ಟನೆ ನೀಡಿದ ಸತೀಶ್ ಜಾರಕಿಹೊಳಿ

ಹಿಂದೂ ಪದ ಉಲ್ಲೇಖ ವಿವಾದ: ಸ್ಪಷ್ಟನೆ ನೀಡಿದ ಸತೀಶ್ ಜಾರಕಿಹೊಳಿ

- Advertisement -
- Advertisement -

ಮಾನವ ಬಂಧುತ್ವ ವೇದಿಕೆ ವತಿಯಿಂದ ಬೆಳಗಾವಿ ಜಿಲ್ಲೆ ನಿಪ್ಪಾಣಿಯಲ್ಲಿ ಭಾನುವಾರ ನಡೆದ ” ಮನೆ ಮನೆಗೂ ಬುದ್ಧ, ಬಸವ, ಅಂಬೇಡ್ಕರ್” ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ ಕಾರ್ಯದರ್ಶಿಗಳಾದ ಸತೀಶ್ ಜಾರಕಿಹೊಳಿಯವರು ಹಿಂದೂ ಎಂಬ ಶಬ್ದದ ಉಗಮ ಮತ್ತು ಪರ್ಶಿಯನ್ ಭಾಷೆಯಲ್ಲಿ ಅದಕ್ಕಿರುವ ಅರ್ಥದ ಬಗ್ಗೆ ಮಾತನಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಹಿಂದುತ್ವ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರೆ ಸ್ವತಃ ಕಾಂಗ್ರೆಸ್ ಖಂಡನಾ ಹೇಳಿಕೆ ನೀಡಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಸತೀಶ್ ಜಾರಕಿಹೊಳಿಯವರು “ಒಂದು ಶಬ್ದದ ಬಗ್ಗೆ ಎಲ್ಲ ಮಾಧ್ಯಮಗಳಲ್ಲಿ ಚರ್ಚೆ, ಟೀಕೆ, ಟಿಪ್ಪಣಿಗಳಾಗುತ್ತಿವೆ. ಹಿಂದೂ ಶಬ್ದ ಪರ್ಶಿಯನ್ ಭಾಷೆ ಅಥವಾ ಆ ಭಾಗದಿಂದ ಬಂದಿದೆ ಎಂದು ನಾನು ಹೇಳಿದ್ದು ನಿಜ. ಇದರ ಬಗ್ಗೆ ಚರ್ಚೆಯಾಗಬೇಕೆಂದು ಹೇಳಿದ್ದೇನೆ. ಹಿಂದೂ ಶಬ್ದದ ಬಗ್ಗೆ ಕೆಲವು ನಿಂದನೆ ಮಾಡಿರುವ ಹಲವು ದಾಖಲೆಗಳು ಸಿಗುತ್ತವೆ ಎಂದು ಉಲ್ಲೇಖಿಸಿ ಹೇಳಿದ್ದೇನೆ. ಅವು ಸತೀಶ್ ಜಾರಕಿಹೊಳಿಯವರ ಮಾತುಗಳಲ್ಲ” ಎಂದಿದ್ದಾರೆ.

ಈ ರೀತಿಯ ಸಾವಿರಾರು ಭಾಷಣಗಳುಈ ದೇಶದಲ್ಲಿ ನಡೆದಿವೆ. ಆದರೂ ಕೂಡ ಮಾಧ್ಯಮಗಳು ಬಹಳ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿವೆ. ಹಿಂದೂ, ಪಾರ್ಷಿ, ಜೈನ್, ಇಸ್ಲಾಂ, ಕ್ರಿಶ್ಚಿಯನ್, ಬೌದ್ಧ ಯಾವುದೇ ಧರ್ಮವಿರಲಿ ಅದನ್ನು ಮೀರಿ ಬೆಳೆಯುವ ಕೆಲಸ ನಾವು ಮಾಡುತ್ತಿದ್ದೇವೆ. ಜಾತಿ-ಧರ್ಮ ಮೀರಿ ಕೆಲಸ ಮಾಡಬೇಕು ಎಂಬುದು ನಮ್ಮ ಆಶಯ. ಹಾಗಾಗಿ ನಾನು ಹೇಳಿದುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ.

ಈ ಪರ್ಶಿಯನ್ ಶಬ್ದ ಬಂದಿರುವುದರ ನೂರಾರು ದಾಖಲೆಗಳಿವೆ. ವಿಶೇಷವಾಗಿ ನಮ್ಮ ಆರ್ಯ ಸಮಾಜದ ಸಂಸ್ಥಾಪಕರಾದ ದಯಾನಂದ ಸರಸ್ವತಿಯವರು ರಚಿಸಿ ಸತ್ಯಾರ್ಥ ಪ್ರಕಾಶದಲ್ಲಿ, ಡಾ.ಜಿ.ಎಸ್ ಪಾಟೀಲ್ ರವರು ಬರೆದ ಬಸವ ಭಾರತ ಪುಸ್ತಕಗಳಲ್ಲಿ, ಬಾಲಗಂಗಾಧರ ತಿಲಕ್ ರವರು ಪತ್ರಿಕೆಯಲ್ಲಿ, ವಿಕಿಪೀಡಿಯಾದಲ್ಲಿ ಇದರ ಉಲ್ಲೇಖವಿದೆ. ಅದನ್ನು ತಾವು ದಯವಿಟ್ಟು ತೆರೆದು ನೋಡಬೇಕು ಎಂದು ಜಾರಕಿಹೊಳಿ ಹೇಳಿದ್ದಾರೆ.
ಹಿಂದೂ ಧರ್ಮದ ವಿಚಾರ ಮಾಧ್ಯಮಗಳು ಇಷ್ಟು ವೈಭವೀಕರಿಸುವುದು ಸರಿಯಲ್ಲ. ಇದೇ ಸಮಯವನ್ನು ಬೇರೆ ವಿಚಾರಗಳಿಗೆ ಕೊಟ್ಟಿದ್ದರೆ ಒಳ್ಳೆಯದಾಗಿತ್ತು. ನೈಜವಾದ ಸುದ್ದಿಗಳನ್ನು ತೋರಿಸಬೇಕೆಂದು ಮನವಿ ಎಂದಿದ್ದಾರೆ.

ಹಿಂದೂ ಧರ್ಮದ ಬಗ್ಗೆ ಅಟಲ್ ಬಿಹಾರಿ ವಾಜಪೇಯಿಯವರ ಭಾಷಣವನ್ನು ಕೇಳಿ. ಅವರು ಅದೊಂದು ಜೀವನ ಕ್ರಮ ಎಂದಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ಅದನ್ನೇ ಹೇಳಿದೆ. ನನಗೆ ಯಾವುದೇ ಧರ್ಮವನ್ನು ಅವಮಾನ ಮಾಡುವ ಉದ್ದೇಶವಿಲ್ಲ. ನಾನು ಯಾವುದೇ ಧರ್ಮ-ಜಾತಿಗಳನ್ನು ನಂಬುವುದಿಲ್ಲ. ನಾನು ಮಾತನಾಡಿರುವುದನ್ನು ಮತ್ತೆ ಕೇಳಿ. ಒಂದು ವೇಳೆ ನನ್ನ ತಪ್ಪಿಲ್ಲದಿದ್ದರೂ ನಿಮ್ಮ ಚರ್ಚೆಯನ್ನು ಮುಂದುವರೆಸಿದರೆ ಮಾನಹಾನಿ ಪ್ರಕರಣ ದಾಖಲಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. Mukyavagi aryaru yendaru mulla pareshan desha dena bandedavaru ah aryaru mukyavagi bramaru hemba varneyaru agiruthare aryaru aryarvart henda bnthu gudagalenalle vasevara dravedara melle yudda madi havarondege sakranavada thali ageruthare edakagi he pershen bahse yalle hindhu emba shabda ke artha huleka vagi eruvudu edu Sathya nestavagide edana charitra kararu charitre yenu samrgrahvagi poorva kall dalle misphotomia Da angavada eran erka persheya. Mulla desha Da valasega charitre yanu veslesesabekagi venanthi

  2. When Central Congress leader Sarjwala slapped on the face ,this fellow alerted himself and giving damage control statement on the fear of the ticket in next election.Since from beginning it his attitutede, as if he is great social reformer. Bu thousands an lakhs of people like this have come and gone. People know to whom he want’ssatisfy.HinduDharma standing since so many thousands of years by it’s merit and it will continue forever. These perverts cannot do any thing. After all what they can do.Theycan go to burial ground and cook the food there and eat in the unhealthy atmosphere instead of eating it on their healthy dining tables.

  3. ಸತೀಶ ಜಾರಕಿಹೊಳಿ ಅವರ ವಿಚಾರಗಳನ್ನು ನಾನು ಸಮರ್ಥಿಸಿಕೊಳ್ಲುತ್ತೇನೆ. ಹಿಂದೂ ಎಂಬುದು ಒಂದು ಧರ್ಮವಲ್ಲ. ಒಂದು ವೇಳೆ ಅದು ಧರ್ಮ ಎಂದಾದರೆ ಧರ್ಮ ಎಂಬುದರ ವ್ಯಾಖ್ಯಾನಕ್ಕೆ ಒಳಪಡಬೇಕು. ಒಂದು ಸಮೂಹದಲ್ಲಿ ಒಂದೇ ರೀತಿಯ ಆಚರಣೆ, ಪ್ರಾರ್ಥನೆ, ನಂಬಿಕೆ, ಹಬ್ಬಗಳು, ದೇವರು, …ಹೀಗೆ ಎಲ್ಲದರಲ್ಲೂ ಏಕರೂಪತೆ ಇದ್ದು, ಅದು ಜನಸಮೂಹವನ್ನು ನಿರ್ದಿಷ್ಟ ನಂಬಿಕೆಯಡಿ ಮುನ್ನಡೆಸಿತ್ತದೆ. ಹಿಂದೂ ಧರ್ಮ ಎಂದಲ್ಲಿ. ಇಲ್ಲಿ ಬೇರೆ ಬೇರೆ ದೇವರಿದ್ದಾರೆ. ಹಬ್ಬಗಳ ಆಚರಣೆಯಲ್ಲೂ ವೈವಿಧ್ಯತೆ ಇದೆ. ನಂಬಿಕೆಗಳು ಬೇರೆ. ಆದ್ದರಿಂದ, ಹಿಂದೂ ಎಂಬುದು ಧರ್ಮದ ಪರಿಭಾಷೆಯಲ್ಲಿ ಒಪ್ಪಲಾಗದು. ಈ ರೀತಿಯಾಗಿ ವೈಜ್ಞಾನಿಕ ವಾಗಿ ಸಂಘರ್ಷಕ್ಕೆ ಇಳಿದರೆ ಮುಖಭಂಗವಾಗುತ್ತದೆ ಎಂದು ಪುರೋಹಿತಶಾಹಿಗೆ ಹಾಗೂ ಬಾಲಬಡುಕರಿಗೆ ಹೊತ್ತು. ಅದರೆ, ಜನರ ಮನಸ್ಸನ್ನು ಒಡೆದು ಆಳಲು ಅವರಿಗೆ ಹಿಂದೂ ಎಂಬ ಹಿತವಾದ ಪದದ ಅಸ್ತ್ರ ಮತ್ತೊಂದರಲ್ಲಿ ಇಲ್ಲ. ಬಸವಣ್ಣ, ಕುವೆಂಪು, ವಿವೇಕಾನಂದ. ಪೆರಿಯಾರ್. ಫುಲೆ ಹೀಗೆ ವಿಚಾರ ಮಾಡುವರ ಪಟ್ಟಿ ಯೇ ಇದೆ. ರಾಜಕಾರಣಿಯಾಗಿ ಸತೀಶ್ ಜಾಕಿಹೊಳಿ ಅವರು ಹೇಳುತ್ತಿದ್ದಾರೆ. ಆದರೆ, ಘಟಾನುಘಟಿ ಸಾಹಿತಿ ಚಿಂತಕರು ಯಾಕೆ ಮೌನವಾಗಿದ್ದಾರೆ.

LEAVE A REPLY

Please enter your comment!
Please enter your name here

- Advertisment -

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...