Homeಕರ್ನಾಟಕಕರ್ನಾಟಕದ ಒಕ್ಕೂಟ ರಾಜಕೀಯ ವ್ಯವಸ್ಥೆಯ ಚರಿತ್ರೆ: ಟಿ.ಆರ್ ಚಂದ್ರಶೇಖರ

ಕರ್ನಾಟಕದ ಒಕ್ಕೂಟ ರಾಜಕೀಯ ವ್ಯವಸ್ಥೆಯ ಚರಿತ್ರೆ: ಟಿ.ಆರ್ ಚಂದ್ರಶೇಖರ

ಭಾರತದಲ್ಲಿ ಯಾವತ್ತೂ ಪ್ರಾಂತೀಯತೆ ಎನ್ನುವುದು ರಾಷ್ಟ್ರೀಯತೆಗೆ ಎದುರಾಗಿ ನಿಂತಿಲ್ಲ.ಆದರೆ ಒಕ್ಕೂಟ ಮೌಲ್ಯವನ್ನು, ಸಾಂಸ್ಕೃತಿಕ ಬಹುತ್ವವನ್ನು ಕಳೆದುಕೊಂಡರೆ ನಾವು ಅನೇಕ ಗಂಡಾಂತರಗಳನ್ನು ಎದುರಿಸಬೇಕಾಗುತ್ತದೆ.

- Advertisement -
- Advertisement -

ನ್ಯಾಯಪಥ (ವಾರಪತ್ರಿಕೆ. ಸಂ. 3 ಸಂ. 11. ನವೆಂಬರ್ 18, 2020)ದಲ್ಲಿ ಪ್ರೊ. ಶಿವರಾಮಯ್ಯ ಅವರು ‘ಪಂಪನ ವಿಕ್ರಮಾರ್ಜುನ ವಿಜಯವೂ, ಕನ್ನಡ ರಾಷ್ಟ್ರೀಯತೆಯೂ’ ಎಂಬ ಲೇಖನದಲ್ಲಿ ಪಂಪ ಮಹಾಕವಿಯ ಮಹಾಭಾರತವನ್ನು ನಿದರ್ಶನವಾಗಿಟ್ಟುಕೊಂಡು ಕನ್ನಡ ರಾಷ್ಟ್ರೀಯತೆಯ ವಿವಿಧ ಆಯಾಮಗಳನ್ನು (ಜಾತಿವಿರೋಧಿ ಸಂಗತಿಗಳನ್ನು ಸೇರಿಸಿಕೊಂಡು) ಕುರಿತಂತೆ ಚರ್ಚಿಸಿದ್ದಾರೆ. ಕವಿರಾಜಮಾರ್ಗಕಾರನಲ್ಲಿನ ಕನ್ನಡ ರಾಷ್ಟ್ರೀಯತೆಯ ಎಳೆಗಳನ್ನು ಗುರುತಿಸಲು ಅವರು ಪ್ರಯತ್ನಿಸಿದ್ದಾರೆ. ಕನ್ನಡ ರಾಷ್ಟ್ರೀಯತೆಗೆ, ಒಕ್ಕೂಟ ರಾಜಕೀಯ ಪ್ರಣಾಳಿಕೆಗೆ ಮತ್ತು ನಾಡಿನ ಬಹುತ್ವ ಸಂಸ್ಕೃತಿಗೆ ಕರ್ನಾಟಕದಲ್ಲಿ ಸಾವಿರಾರು ವರ್ಷಗಳ ಚರಿತ್ರೆಯಿದೆ. ಕನ್ನಡ ಮನಸ್ಸು ಯಾವತ್ತೂ ವಿಶ್ವಾತ್ಮಕತೆ ಮತ್ತು ಸ್ಥಳೀಯತೆಗಳನ್ನು ಒಟ್ಟಿಗೆ ನಡೆಸಿಕೊಂಡು ಬಂದಿರುವುದಕ್ಕೆ ಇತಿಹಾಸದ ಸಾಕ್ಷಿಯಿದೆ. ಸಾಹಿತ್ಯದ ಮತ್ತು ಕನ್ನಡದ ಎಲ್ಲ ವಿದ್ವಾಂಸರಂತೆ ಪ್ರೊ. ಶಿವರಾಮಯ್ಯ ಅವರೂ ಸಹ ಕವಿರಾಜಮಾರ್ಗಕಾರನ ಪ್ರಸಿದ್ಧ ಕಂದ ಪದ್ಯದಲ್ಲಿನ ಭೌಗೋಳಿಕ ನೆಲೆಗಳನ್ನು ಕುರಿತಂತೆ (ಕಾವೇರಿಯಿಂದ ಆ ಗೋದಾವರಿವರೆಗಿರ್ಪ) ಮಾತನಾಡಿದ್ದಾರೆಯೇ ವಿನಾ ಆ ಪದ್ಯದ ಕೊನೆಯ ಸಾಲು ‘ವಸುಧಾ ವಲಯ ವಿಲೀನ ವಿಷದ ವಿಷಯ ವಿಶೇಷಂ’ ಎಂಬುದರ ಇಂಗಿತಾರ್ಥವನ್ನು ಕುರಿತಂತೆ ಹಚ್ಚು ಚರ್ಚೆಗಳಾಗಿಲ್ಲ. ಈ ಸಾಲಿನಲ್ಲಿ ಕವಿರಾಜಮಾರ್ಗಕಾರನು ಪ್ರಧಾನವಾಗಿ ಒಂದು ನೆಲೆಯಲ್ಲಿ ಬಹುತ್ವವನ್ನು ಮತ್ತೊಂದು ನೆಲೆಯಲ್ಲಿ ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಿದ್ದಾನೆ. ವಸುಧೆಯಲ್ಲಿ ವಿಲೀನ ಎಂದರೆ ಅಲ್ಲಿ ಅನೇಕ ಭಾಷೆಗಳು, ಅನೇಕ ಧರ್ಮಗಳು, ಅನೇಕ ಸಂಸ್ಕೃತಿಗಳು, ಅನೇಕ ಪ್ರದೇಶ-ವಿಶಿಷ್ಟತೆಗಳು ಇರುತ್ತವೆ ಎಂದು ಅರ್ಥ (ಬಹುತ್ವ). ವಸುಧೆಯಲ್ಲಿ ವಿಲೀನವಾಗಿದ್ದರೂ ಅದು ವಿಶಿಷ್ಟವಾದುದು ಎಂಬುದು ಒಕ್ಕೂಟ ತತ್ವವನ್ನು ಹೇಳುತ್ತಿದೆ. ಇದನ್ನು ಯಾವ ಸಂಕೋಚವೂ ಇಲ್ಲದೆ ನಾವು ‘ಕನ್ನಡ ರಾಷ್ಟ್ರೀಯತೆ ಪ್ರಣಾಳಿಕೆ’ ಎಂದು ಕರೆಯಬಹುದು. ಈ ಸಾಲಿನಲ್ಲಿ ಮಾರ್ಗಕಾರ ಏನನ್ನು ಹೇಳುತ್ತಿದ್ದಾನೆ?

ಇದನ್ನೂ ಓದಿ: ಪಂಪನ ವಿಕ್ರಮಾರ್ಜುನ ವಿಜಯವೂ, ಕನ್ನಡ ರಾಷ್ಟ್ರೀಯತೆಯೂ: ಪ್ರೊ.ಶಿವರಾಮಯ್ಯ

ಕನ್ನಡ ಜನಪದವು ‘ವಸುಧೆ’ಯಲ್ಲಿ ಲೀನವಾಗಿದೆ. ಅದು ಲೀನವಾಗಿದ್ದರೂ ತನ್ನ ‘ವಿಶಿಷ್ಟತೆ’ಯನ್ನು ಕಾಪಿಟ್ಟುಕೊಂಡು ಬಂದಿರುವುದನ್ನು ಇದು ಹೇಳುತ್ತಿದೆ. ಕನ್ನಡ ಸಂಸ್ಕೃತಿಯು ವಸುಧೆಯಲ್ಲಿನ ಎಲ್ಲ ಅಂಶಗಳನ್ನು ಒಳಗು ಮಾಡಿಕೊಂಡಿದೆ. ಅದೇ ಸಮಯದಲ್ಲಿ ತನ್ನತನವನ್ನು ಅದು ಬಿಟ್ಟುಕೊಟ್ಟಿಲ್ಲ. ಅದು ತನ್ನ ವಿಶಿಷ್ಟತೆಯನ್ನು ಉಳಿಸಿಕೊಂಡು ವಿಶ್ವಾತ್ಮಕವಾಗಿದೆ. ‘ವಸುಧಾ ವಲಯ ವಿಲೀನ’ ಎಂಬುದು ವಿಶ್ವಾತ್ಮಕತೆಯನ್ನು (ಕೇಂದ್ರ-ಏಕಾತ್ಮಕತೆ) ‘ವಿಶದ ವಿಷಯ ವಿಶೇಷಂ’ ಎಂಬುದು ಸ್ಥಳೀಯತೆಯನ್ನು (ಉಪರಾಷ್ಟ್ರೀಯತೆ) ಪ್ರತಿನಿಧಿಸುತ್ತಿದೆ. ಅನೇಕ ಕನ್ನಡ ವಿದ್ವಾಂಸರು ಗುರುತಿಸಿರುವಂತೆ ಕವಿರಾಜಮಾರ್ಗ ಕೃತಿಯು ಒಂದು ರಾಜಕೀಯ ಪಠ್ಯ. ಕನ್ನಡದ ಸ್ವಾಯತ್ತತೆಯನ್ನು ಇಲ್ಲಿ ಮಾರ್ಗಕಾರ ಗುರುತಿಸುತ್ತಿದ್ದಾನೆ.

ನಮ್ಮ ನಾಡು (ಭಾರತ) ಚರಿತ್ರೆಯಲ್ಲಿ ಯಾವತ್ತೂ ಏಕಚಕ್ರಾಧಿಪತ್ಯವಾಗಿರಲಿಲ್ಲ. ಉದಾ: ರಾಷ್ಟ್ರಕೂಟ ಚಕ್ರವರ್ತಿ ಎರಡನೆಯ ಪುಲಿಕೇಶಿ ದಕ್ಷಿಣಾಪಥೇಶ್ವರ ಎಂಬ ಬಿರುದನ್ನು ಪಡೆದಿದ್ದರೆ ಅವನ ಸಮಕಾಲೀನನಾದ ಹರ್ಷವರ್ಧನನು ಉತ್ತರಾಪಥೇಶ್ವರ ಎನಿಸಿಕೊಂಡಿದ್ದನು. ಆದರೆ ಪುಲಿಕೇಶಿಯ ರಾಜ್ಯಾಡಳಿತದಲ್ಲಿ ಹತ್ತಾರು ಸಾಮಂತ ಅರಸರಿದ್ದರು. ಒಂದು ರೀತಿಯಲ್ಲಿ ಅದೊಂದು ಒಕ್ಕೂಟವಾಗಿತ್ತು. ಅದೇ ರೀತಿಯಲ್ಲಿ ಹರ್ಷವರ್ಧನನ ಸಾಮ್ರಾಜ್ಯದಲ್ಲಿಯೂ ಹತ್ತಾರು ಸಾಮಂತ ಅರಸರಿದ್ದರು. ಅದೊಂದು ಒಕ್ಕೂಟವಾಗಿತ್ತು. ಇವೆರಡೂ ಸೇರಿ ಮಹಾ ಒಕ್ಕೂಟವಾಗಿತ್ತು. ಹೀಗೆ ಚರಿತ್ರೆಯುದ್ದಕ್ಕೂ ಭಾರತದ ರಾಜಕೀಯವು ಹೀಗೆ ಒಕ್ಕೂಟ ವ್ಯವಸ್ಥೆಯಾಗಿತ್ತೇ ವಿನಾ ಏಕಚಕ್ರಾಧಿಪತ್ಯವಾಗಿರಲಿಲ್ಲ. ಇಂತಹ ಒಕ್ಕೂಟ ತತ್ವಕ್ಕೆ ನಮ್ಮ ಸಂವಿಧಾನವೂ ಮನ್ನಣೆ ನೀಡಿದೆ. ಭಾಷಾವಾರು ಪ್ರಾಂತ್ಯಗಳ ರಚನೆಯು ಇದಕ್ಕೆ ಒಂದು ನಿದರ್ಶನವಾಗಿದೆ. ಸ್ವಾತಂತ್ರೋತ್ತರ ಭಾರತದಲ್ಲಿ ಅನೇಕ ಇತಿಮಿತಿಗಳ ನಡುವೆ ಒಕ್ಕೂಟ ತತ್ವವನ್ನು ಪಾಲಿಸಿಕೊಂಡು ಬರಲಾಗಿದೆ. ಇದೀಗ ಇದಕ್ಕೆ ‘ಅಖಂಡವಾದಿ’ಗಳಿಂದ ಅಪಾಯ ಬಂದಿದೆ. ಇಂದು ಭಾರತ ರಾಜಕಾರಣವು ಅಖಂಡತೆಯ ವ್ಯಸನದಲ್ಲಿ ಮುಳುಗಿಹೋಗಿದೆ. ಒಂದು ದೇಶ-ಒಂದು ಧರ್ಮ, ಒಂದು ದೇಶ-ಒಂದು ಭಾಷೆ, ಒಂದು ದೇಶ-ಒಂದು ಮಾರುಕಟ್ಟೆ, ಒಂದು ದೇಶ-ಒಂದು ಬ್ಯಾಂಕು, ಒಂದು ದೇಶ-ಒಂದು ತೆರಿಗೆ, ಒಂದು ದೇಶ-ಒಂದು ಶಿಕ್ಷಣ, ಒಂದು ದೇಶ-ಒಂದು ಮಹಾಭಾರತ-ರಾಮಾಯಣ ಇತ್ಯಾದಿ ಘೋಷಣೆಗಳು ಶಾಸನವಾಗುವ ಪ್ರಕ್ರಿಯೆಯಲ್ಲಿವೆ. ಈ ಬೆಳವಣಿಗೆಯು ರಾಜಕೀಯವಾಗಿ ಒಕ್ಕೂಟ ವ್ಯವಸ್ಥೆಗೆ, ಭಾಷೆಯ ನೆಲೆಯಲ್ಲಿ ಭಾಷಾವಾರು ಪ್ರಾಂತ ಪ್ರಣಾಳಿಕೆಗೆ, ಸಾಂಸ್ಕೃತಿಕವಾಗಿ ಬಹುತ್ವಕ್ಕೆ, ಕೃಷಿ ವೈವಿಧ್ಯತೆಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ನಮ್ಮ ದೇಶವು ಚರಿತ್ರೆಯಲ್ಲಿ ಯಾವತ್ತೂ ಒಂದು ಆಗಿರಲಿಲ್ಲ. ಇದರರ್ಥ ಭಾರತ ಎಂಬುದಿರಲಿಲ್ಲ ಎಂಬುದಲ್ಲ. ಕವಿರಾಜಮಾರ್ಗಕಾರ ಹೇಳುವಂತೆ ಕನ್ನಡ ಜನಪದÀವು ಹೇಗೆ ಭಾವಿಸಿದ ಸಂಗತಿಯಾಗಿತ್ತೋ ಅದೇ ರೀತಿಯಲ್ಲಿ ಭಾರತವೂ ಒಂದು ಭಾವಿಸಿದ ರಾಷ್ಟ್ರವಾಗಿತ್ತು. ಸ್ವಾತಂತ್ರೋತ್ತರ ಭಾರತದಲ್ಲಿ ಒಕ್ಕೂಟ ತತ್ವವು, ಭಾಷಾ ಬಹುತ್ವವು, ಸಾಂಸ್ಕೃತಿಕ ಬಹುವಚನವು ಯಾವ ರೀತಿಯಲ್ಲಿಯೂ, ಯಾವತ್ತೂ ಭಾರತದ ಏಕತೆಗೆ ಕುತ್ತು ಉಂಟುಮಾಡಿಲ್ಲ.

‘ಪ್ರಾಂತೀಯತೆ’ಯನ್ನು ರಾಷ್ಟ್ರೀಯತೆಗೆ ಪ್ರತಿಯಾದುದು ಎಂದು ಭಾವಿಸಬೇಕಾಗಿಲ್ಲ, ಭಾರತದಲ್ಲಿ ಯಾವತ್ತೂ ಪ್ರಾಂತೀಯತೆ ಎನ್ನುವುದು ರಾಷ್ಟ್ರೀಯತೆಗೆ ಎದುರಾಗಿ ನಿಂತಿಲ್ಲ. ರಾಷ್ಟ್ರಕವಿ ಕುವೆಂಪು ಅವರು ಕನ್ನಡ ಮಾತೆಯನ್ನು ‘ಭಾರತ ಜನನಿಯ ತನುಜಾತೆ’ ಎಂದು ಕರೆದಿದ್ದಾರೆ. ಭಾರತದ ಎಲ್ಲ ಪ್ರಾಂತ್ಯಗಳಲ್ಲಿಯೂ ಇದೇ ಭಾವನೆಯು ನೆಲೆಯೂರಿದೆ. ಆದರೆ ಈ ಒಕ್ಕೂಟ ಮೌಲ್ಯವನ್ನು, ಸಾಂಸ್ಕೃತಿಕ ಬಹುತ್ವವನ್ನು ಕಳೆದುಕೊಂಡರೆ ನಾವು ಅನೇಕ ಗಂಡಾಂತರಗಳನ್ನು ಎದುರಿಸಬೇಕಾಗುತ್ತದೆ. ಎಲ್ಲಿಯವರೆಗೆ ನಮ್ಮ ನಾಡನಲ್ಲಿ ಬಹುಭಾಷೆ, ಬಹುಸಾಹಿತ್ಯ, ಬಹುಧರ್ಮ, ಬಹುಳಾಕಾರಿ ಮಾರುಕಟ್ಟೆ, ಪ್ರದೇಶ-ವಿಶಿಷ್ಟ ಕೃಷಿ, ಸ್ಥಳೀಯ ಬ್ಯಾಂಕಿಂಗ್ ವ್ಯವಸ್ಥೆ ಮುಂತಾದ ಬಹುವಚನ ಸಂಸ್ಕೃತಿಯನ್ನು ಪಾಲಿಸುತ್ತಾ ನಡೆಯುತ್ತೇವೆಯೋ ಅಲ್ಲಿಯವರೆಗೆ ನಮ್ಮ ಏಕತೆಗೆ, ಸಮಗ್ರತೆಗೆ ಅಪಾಯವಿರುವುದಿಲ್ಲ. ಅಭಿವೃದ್ಧಿಯ ನೆಲೆಯಲ್ಲಿಯೂ ಒಕ್ಕೂಟವು ಅಗತ್ಯವಾದ ಒಂದು ಪ್ರಣಾಳಿಕೆಯಾಗಿದೆ. ಒಕ್ಕೂಟ ತತ್ವವು ಕೇವಲ ರಾಜಕೀಯ ಸಂಗತಿಯಷ್ಟೇ ಅಲ್ಲ. ಅದಕ್ಕೆ ಭಾಷೆಯ, ಸಂಸ್ಕೃತಿಯ, ಸಾಮಾಜಿಕ ಆಯಾಮವಿದ್ದಂತೆ ಆರ್ಥಿಕ ಮುಖವೂ ಇದೆ.

ಈ ಹಿನ್ನೆಲೆಯಲ್ಲಿ ಇಂದು ಕನ್ನಡ ರಾಷ್ಟ್ರೀಯತೆಗೆ, ಕನ್ನಡ ಭಾಷೆಗೆ, ಕನ್ನಡ ಮನಸ್ಸಿಗೆ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಕೇಂದ್ರದ ಒಕ್ಕೂಟ ಸರ್ಕಾರವು ಕುತ್ತನ್ನುಂಟುಮಾಡುತ್ತಿದೆ. ‘ಕೇಂದ್ರ ಸರ್ಕಾರ’ (ಯೂನಿಯನ್ ಗೌರ್ವನಮೆಂಟ್) ಎಂಬ ನುಡಿಯೇ ಅಸಂಬದ್ಧವಾದುದು. ನಮ್ಮ ಸಂವಿಧಾನದಲ್ಲಿ ಬಳಕೆಯಾಗಿರುವ ನುಡಿ ಒಕ್ಕೂಟ ಸರ್ಕಾರ (ಇಂಡಿಯಾ ದಟ್ ಈಸ್ ಭಾರತ್, ಶಲ್ ಬಿ ಎ ಯೂನಿಯನ್ ಆಫ್ ಸ್ಟೇಟ್ಸ್). ನಮ್ಮಲ್ಲಿರುವುದು ಸಂವಿಧಾನಾತ್ಮಕ ಒಕ್ಕೂಟ ಸರ್ಕಾರವೇ ವಿನಾ ಕೇಂದ್ರ ಸರ್ಕಾರವಲ್ಲ. ಒಕ್ಕೂಟತನವು ಭಾರತದ ಭದ್ರತೆಯ ತತ್ವ. ಪ್ರೊ. ಶಿವರಾಮಯ್ಯ ಅವರು ಸರಿಯಾಗಿ ಗುರುತಿಸಿರುವಂತೆ ಪಂಪ ಭಾರತವೆನ್ನುವುದು ಕನ್ನಡದ ಭಾರತವೇ ವಿನಾ ಭಾರತದ ‘ಭಾರತವಲ್ಲ. ಅಂದರೆ ನಮ್ಮ ದೇಶದಲ್ಲಿ ಪ್ರತಿಭಾಷೆಗೂ ಒಂದೊಂದು ಅಥವಾ ಅನೇಕ ಮಹಾಭಾರತ-ರಾಮಾಯಣಗಳಿವೆ. ಕನ್ನಡದಲ್ಲಿಯೇ ಇದನ್ನು ಕಾಣಬಹುದು.

ಡಾ. ಟಿ. ಆರ್. ಚಂದ್ರಶೇಖರ

ಕನ್ನಡ ರಾಷ್ಟ್ರೀಯತೆಯ ಚಳವಳಿಯ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯವಾಗಿದೆ. ಇದೇ ಸಂಪುಟದಲ್ಲಿನ ಟಿ. ಎ. ನಾರಾಯಣಗೌಡ ಅವರು ಕನ್ನಡ ರಾಷ್ಟ್ರೀಯತೆಯ ಸಂಘಟನೆಯ-ಹೋರಾಟದ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಕನ್ನಡ ರಾಷ್ಟ್ರೀಯತೆಯು ಕನ್ನಡಿಗರ ಬದುಕಿನ, ಉದ್ಯೋಗದ, ಒಕ್ಕಲುತನದ, ವ್ಯಾಪಾರ-ವ್ಯವಹಾರ-ವಹಿವಾಟಿನ, ಉದ್ದಿಮೆರಂಗದ ಪ್ರಶ್ನೆಯಾಗಿದೆ.


ಇದನ್ನೂ ಓದಿ: ಎ ಪ್ರಾಮಿಸ್ಡ್ ಲ್ಯಾಂಡ್: ಒಬಾಮಾ ಪುಸ್ತಕದಲ್ಲಿ ನಿಜಕ್ಕೂ ಏನಿದೆ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...