Homeಕರ್ನಾಟಕಕರ್ನಾಟಕದ ಒಕ್ಕೂಟ ರಾಜಕೀಯ ವ್ಯವಸ್ಥೆಯ ಚರಿತ್ರೆ: ಟಿ.ಆರ್ ಚಂದ್ರಶೇಖರ

ಕರ್ನಾಟಕದ ಒಕ್ಕೂಟ ರಾಜಕೀಯ ವ್ಯವಸ್ಥೆಯ ಚರಿತ್ರೆ: ಟಿ.ಆರ್ ಚಂದ್ರಶೇಖರ

ಭಾರತದಲ್ಲಿ ಯಾವತ್ತೂ ಪ್ರಾಂತೀಯತೆ ಎನ್ನುವುದು ರಾಷ್ಟ್ರೀಯತೆಗೆ ಎದುರಾಗಿ ನಿಂತಿಲ್ಲ.ಆದರೆ ಒಕ್ಕೂಟ ಮೌಲ್ಯವನ್ನು, ಸಾಂಸ್ಕೃತಿಕ ಬಹುತ್ವವನ್ನು ಕಳೆದುಕೊಂಡರೆ ನಾವು ಅನೇಕ ಗಂಡಾಂತರಗಳನ್ನು ಎದುರಿಸಬೇಕಾಗುತ್ತದೆ.

- Advertisement -
- Advertisement -

ನ್ಯಾಯಪಥ (ವಾರಪತ್ರಿಕೆ. ಸಂ. 3 ಸಂ. 11. ನವೆಂಬರ್ 18, 2020)ದಲ್ಲಿ ಪ್ರೊ. ಶಿವರಾಮಯ್ಯ ಅವರು ‘ಪಂಪನ ವಿಕ್ರಮಾರ್ಜುನ ವಿಜಯವೂ, ಕನ್ನಡ ರಾಷ್ಟ್ರೀಯತೆಯೂ’ ಎಂಬ ಲೇಖನದಲ್ಲಿ ಪಂಪ ಮಹಾಕವಿಯ ಮಹಾಭಾರತವನ್ನು ನಿದರ್ಶನವಾಗಿಟ್ಟುಕೊಂಡು ಕನ್ನಡ ರಾಷ್ಟ್ರೀಯತೆಯ ವಿವಿಧ ಆಯಾಮಗಳನ್ನು (ಜಾತಿವಿರೋಧಿ ಸಂಗತಿಗಳನ್ನು ಸೇರಿಸಿಕೊಂಡು) ಕುರಿತಂತೆ ಚರ್ಚಿಸಿದ್ದಾರೆ. ಕವಿರಾಜಮಾರ್ಗಕಾರನಲ್ಲಿನ ಕನ್ನಡ ರಾಷ್ಟ್ರೀಯತೆಯ ಎಳೆಗಳನ್ನು ಗುರುತಿಸಲು ಅವರು ಪ್ರಯತ್ನಿಸಿದ್ದಾರೆ. ಕನ್ನಡ ರಾಷ್ಟ್ರೀಯತೆಗೆ, ಒಕ್ಕೂಟ ರಾಜಕೀಯ ಪ್ರಣಾಳಿಕೆಗೆ ಮತ್ತು ನಾಡಿನ ಬಹುತ್ವ ಸಂಸ್ಕೃತಿಗೆ ಕರ್ನಾಟಕದಲ್ಲಿ ಸಾವಿರಾರು ವರ್ಷಗಳ ಚರಿತ್ರೆಯಿದೆ. ಕನ್ನಡ ಮನಸ್ಸು ಯಾವತ್ತೂ ವಿಶ್ವಾತ್ಮಕತೆ ಮತ್ತು ಸ್ಥಳೀಯತೆಗಳನ್ನು ಒಟ್ಟಿಗೆ ನಡೆಸಿಕೊಂಡು ಬಂದಿರುವುದಕ್ಕೆ ಇತಿಹಾಸದ ಸಾಕ್ಷಿಯಿದೆ. ಸಾಹಿತ್ಯದ ಮತ್ತು ಕನ್ನಡದ ಎಲ್ಲ ವಿದ್ವಾಂಸರಂತೆ ಪ್ರೊ. ಶಿವರಾಮಯ್ಯ ಅವರೂ ಸಹ ಕವಿರಾಜಮಾರ್ಗಕಾರನ ಪ್ರಸಿದ್ಧ ಕಂದ ಪದ್ಯದಲ್ಲಿನ ಭೌಗೋಳಿಕ ನೆಲೆಗಳನ್ನು ಕುರಿತಂತೆ (ಕಾವೇರಿಯಿಂದ ಆ ಗೋದಾವರಿವರೆಗಿರ್ಪ) ಮಾತನಾಡಿದ್ದಾರೆಯೇ ವಿನಾ ಆ ಪದ್ಯದ ಕೊನೆಯ ಸಾಲು ‘ವಸುಧಾ ವಲಯ ವಿಲೀನ ವಿಷದ ವಿಷಯ ವಿಶೇಷಂ’ ಎಂಬುದರ ಇಂಗಿತಾರ್ಥವನ್ನು ಕುರಿತಂತೆ ಹಚ್ಚು ಚರ್ಚೆಗಳಾಗಿಲ್ಲ. ಈ ಸಾಲಿನಲ್ಲಿ ಕವಿರಾಜಮಾರ್ಗಕಾರನು ಪ್ರಧಾನವಾಗಿ ಒಂದು ನೆಲೆಯಲ್ಲಿ ಬಹುತ್ವವನ್ನು ಮತ್ತೊಂದು ನೆಲೆಯಲ್ಲಿ ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಿದ್ದಾನೆ. ವಸುಧೆಯಲ್ಲಿ ವಿಲೀನ ಎಂದರೆ ಅಲ್ಲಿ ಅನೇಕ ಭಾಷೆಗಳು, ಅನೇಕ ಧರ್ಮಗಳು, ಅನೇಕ ಸಂಸ್ಕೃತಿಗಳು, ಅನೇಕ ಪ್ರದೇಶ-ವಿಶಿಷ್ಟತೆಗಳು ಇರುತ್ತವೆ ಎಂದು ಅರ್ಥ (ಬಹುತ್ವ). ವಸುಧೆಯಲ್ಲಿ ವಿಲೀನವಾಗಿದ್ದರೂ ಅದು ವಿಶಿಷ್ಟವಾದುದು ಎಂಬುದು ಒಕ್ಕೂಟ ತತ್ವವನ್ನು ಹೇಳುತ್ತಿದೆ. ಇದನ್ನು ಯಾವ ಸಂಕೋಚವೂ ಇಲ್ಲದೆ ನಾವು ‘ಕನ್ನಡ ರಾಷ್ಟ್ರೀಯತೆ ಪ್ರಣಾಳಿಕೆ’ ಎಂದು ಕರೆಯಬಹುದು. ಈ ಸಾಲಿನಲ್ಲಿ ಮಾರ್ಗಕಾರ ಏನನ್ನು ಹೇಳುತ್ತಿದ್ದಾನೆ?

ಇದನ್ನೂ ಓದಿ: ಪಂಪನ ವಿಕ್ರಮಾರ್ಜುನ ವಿಜಯವೂ, ಕನ್ನಡ ರಾಷ್ಟ್ರೀಯತೆಯೂ: ಪ್ರೊ.ಶಿವರಾಮಯ್ಯ

ಕನ್ನಡ ಜನಪದವು ‘ವಸುಧೆ’ಯಲ್ಲಿ ಲೀನವಾಗಿದೆ. ಅದು ಲೀನವಾಗಿದ್ದರೂ ತನ್ನ ‘ವಿಶಿಷ್ಟತೆ’ಯನ್ನು ಕಾಪಿಟ್ಟುಕೊಂಡು ಬಂದಿರುವುದನ್ನು ಇದು ಹೇಳುತ್ತಿದೆ. ಕನ್ನಡ ಸಂಸ್ಕೃತಿಯು ವಸುಧೆಯಲ್ಲಿನ ಎಲ್ಲ ಅಂಶಗಳನ್ನು ಒಳಗು ಮಾಡಿಕೊಂಡಿದೆ. ಅದೇ ಸಮಯದಲ್ಲಿ ತನ್ನತನವನ್ನು ಅದು ಬಿಟ್ಟುಕೊಟ್ಟಿಲ್ಲ. ಅದು ತನ್ನ ವಿಶಿಷ್ಟತೆಯನ್ನು ಉಳಿಸಿಕೊಂಡು ವಿಶ್ವಾತ್ಮಕವಾಗಿದೆ. ‘ವಸುಧಾ ವಲಯ ವಿಲೀನ’ ಎಂಬುದು ವಿಶ್ವಾತ್ಮಕತೆಯನ್ನು (ಕೇಂದ್ರ-ಏಕಾತ್ಮಕತೆ) ‘ವಿಶದ ವಿಷಯ ವಿಶೇಷಂ’ ಎಂಬುದು ಸ್ಥಳೀಯತೆಯನ್ನು (ಉಪರಾಷ್ಟ್ರೀಯತೆ) ಪ್ರತಿನಿಧಿಸುತ್ತಿದೆ. ಅನೇಕ ಕನ್ನಡ ವಿದ್ವಾಂಸರು ಗುರುತಿಸಿರುವಂತೆ ಕವಿರಾಜಮಾರ್ಗ ಕೃತಿಯು ಒಂದು ರಾಜಕೀಯ ಪಠ್ಯ. ಕನ್ನಡದ ಸ್ವಾಯತ್ತತೆಯನ್ನು ಇಲ್ಲಿ ಮಾರ್ಗಕಾರ ಗುರುತಿಸುತ್ತಿದ್ದಾನೆ.

ನಮ್ಮ ನಾಡು (ಭಾರತ) ಚರಿತ್ರೆಯಲ್ಲಿ ಯಾವತ್ತೂ ಏಕಚಕ್ರಾಧಿಪತ್ಯವಾಗಿರಲಿಲ್ಲ. ಉದಾ: ರಾಷ್ಟ್ರಕೂಟ ಚಕ್ರವರ್ತಿ ಎರಡನೆಯ ಪುಲಿಕೇಶಿ ದಕ್ಷಿಣಾಪಥೇಶ್ವರ ಎಂಬ ಬಿರುದನ್ನು ಪಡೆದಿದ್ದರೆ ಅವನ ಸಮಕಾಲೀನನಾದ ಹರ್ಷವರ್ಧನನು ಉತ್ತರಾಪಥೇಶ್ವರ ಎನಿಸಿಕೊಂಡಿದ್ದನು. ಆದರೆ ಪುಲಿಕೇಶಿಯ ರಾಜ್ಯಾಡಳಿತದಲ್ಲಿ ಹತ್ತಾರು ಸಾಮಂತ ಅರಸರಿದ್ದರು. ಒಂದು ರೀತಿಯಲ್ಲಿ ಅದೊಂದು ಒಕ್ಕೂಟವಾಗಿತ್ತು. ಅದೇ ರೀತಿಯಲ್ಲಿ ಹರ್ಷವರ್ಧನನ ಸಾಮ್ರಾಜ್ಯದಲ್ಲಿಯೂ ಹತ್ತಾರು ಸಾಮಂತ ಅರಸರಿದ್ದರು. ಅದೊಂದು ಒಕ್ಕೂಟವಾಗಿತ್ತು. ಇವೆರಡೂ ಸೇರಿ ಮಹಾ ಒಕ್ಕೂಟವಾಗಿತ್ತು. ಹೀಗೆ ಚರಿತ್ರೆಯುದ್ದಕ್ಕೂ ಭಾರತದ ರಾಜಕೀಯವು ಹೀಗೆ ಒಕ್ಕೂಟ ವ್ಯವಸ್ಥೆಯಾಗಿತ್ತೇ ವಿನಾ ಏಕಚಕ್ರಾಧಿಪತ್ಯವಾಗಿರಲಿಲ್ಲ. ಇಂತಹ ಒಕ್ಕೂಟ ತತ್ವಕ್ಕೆ ನಮ್ಮ ಸಂವಿಧಾನವೂ ಮನ್ನಣೆ ನೀಡಿದೆ. ಭಾಷಾವಾರು ಪ್ರಾಂತ್ಯಗಳ ರಚನೆಯು ಇದಕ್ಕೆ ಒಂದು ನಿದರ್ಶನವಾಗಿದೆ. ಸ್ವಾತಂತ್ರೋತ್ತರ ಭಾರತದಲ್ಲಿ ಅನೇಕ ಇತಿಮಿತಿಗಳ ನಡುವೆ ಒಕ್ಕೂಟ ತತ್ವವನ್ನು ಪಾಲಿಸಿಕೊಂಡು ಬರಲಾಗಿದೆ. ಇದೀಗ ಇದಕ್ಕೆ ‘ಅಖಂಡವಾದಿ’ಗಳಿಂದ ಅಪಾಯ ಬಂದಿದೆ. ಇಂದು ಭಾರತ ರಾಜಕಾರಣವು ಅಖಂಡತೆಯ ವ್ಯಸನದಲ್ಲಿ ಮುಳುಗಿಹೋಗಿದೆ. ಒಂದು ದೇಶ-ಒಂದು ಧರ್ಮ, ಒಂದು ದೇಶ-ಒಂದು ಭಾಷೆ, ಒಂದು ದೇಶ-ಒಂದು ಮಾರುಕಟ್ಟೆ, ಒಂದು ದೇಶ-ಒಂದು ಬ್ಯಾಂಕು, ಒಂದು ದೇಶ-ಒಂದು ತೆರಿಗೆ, ಒಂದು ದೇಶ-ಒಂದು ಶಿಕ್ಷಣ, ಒಂದು ದೇಶ-ಒಂದು ಮಹಾಭಾರತ-ರಾಮಾಯಣ ಇತ್ಯಾದಿ ಘೋಷಣೆಗಳು ಶಾಸನವಾಗುವ ಪ್ರಕ್ರಿಯೆಯಲ್ಲಿವೆ. ಈ ಬೆಳವಣಿಗೆಯು ರಾಜಕೀಯವಾಗಿ ಒಕ್ಕೂಟ ವ್ಯವಸ್ಥೆಗೆ, ಭಾಷೆಯ ನೆಲೆಯಲ್ಲಿ ಭಾಷಾವಾರು ಪ್ರಾಂತ ಪ್ರಣಾಳಿಕೆಗೆ, ಸಾಂಸ್ಕೃತಿಕವಾಗಿ ಬಹುತ್ವಕ್ಕೆ, ಕೃಷಿ ವೈವಿಧ್ಯತೆಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ನಮ್ಮ ದೇಶವು ಚರಿತ್ರೆಯಲ್ಲಿ ಯಾವತ್ತೂ ಒಂದು ಆಗಿರಲಿಲ್ಲ. ಇದರರ್ಥ ಭಾರತ ಎಂಬುದಿರಲಿಲ್ಲ ಎಂಬುದಲ್ಲ. ಕವಿರಾಜಮಾರ್ಗಕಾರ ಹೇಳುವಂತೆ ಕನ್ನಡ ಜನಪದÀವು ಹೇಗೆ ಭಾವಿಸಿದ ಸಂಗತಿಯಾಗಿತ್ತೋ ಅದೇ ರೀತಿಯಲ್ಲಿ ಭಾರತವೂ ಒಂದು ಭಾವಿಸಿದ ರಾಷ್ಟ್ರವಾಗಿತ್ತು. ಸ್ವಾತಂತ್ರೋತ್ತರ ಭಾರತದಲ್ಲಿ ಒಕ್ಕೂಟ ತತ್ವವು, ಭಾಷಾ ಬಹುತ್ವವು, ಸಾಂಸ್ಕೃತಿಕ ಬಹುವಚನವು ಯಾವ ರೀತಿಯಲ್ಲಿಯೂ, ಯಾವತ್ತೂ ಭಾರತದ ಏಕತೆಗೆ ಕುತ್ತು ಉಂಟುಮಾಡಿಲ್ಲ.

‘ಪ್ರಾಂತೀಯತೆ’ಯನ್ನು ರಾಷ್ಟ್ರೀಯತೆಗೆ ಪ್ರತಿಯಾದುದು ಎಂದು ಭಾವಿಸಬೇಕಾಗಿಲ್ಲ, ಭಾರತದಲ್ಲಿ ಯಾವತ್ತೂ ಪ್ರಾಂತೀಯತೆ ಎನ್ನುವುದು ರಾಷ್ಟ್ರೀಯತೆಗೆ ಎದುರಾಗಿ ನಿಂತಿಲ್ಲ. ರಾಷ್ಟ್ರಕವಿ ಕುವೆಂಪು ಅವರು ಕನ್ನಡ ಮಾತೆಯನ್ನು ‘ಭಾರತ ಜನನಿಯ ತನುಜಾತೆ’ ಎಂದು ಕರೆದಿದ್ದಾರೆ. ಭಾರತದ ಎಲ್ಲ ಪ್ರಾಂತ್ಯಗಳಲ್ಲಿಯೂ ಇದೇ ಭಾವನೆಯು ನೆಲೆಯೂರಿದೆ. ಆದರೆ ಈ ಒಕ್ಕೂಟ ಮೌಲ್ಯವನ್ನು, ಸಾಂಸ್ಕೃತಿಕ ಬಹುತ್ವವನ್ನು ಕಳೆದುಕೊಂಡರೆ ನಾವು ಅನೇಕ ಗಂಡಾಂತರಗಳನ್ನು ಎದುರಿಸಬೇಕಾಗುತ್ತದೆ. ಎಲ್ಲಿಯವರೆಗೆ ನಮ್ಮ ನಾಡನಲ್ಲಿ ಬಹುಭಾಷೆ, ಬಹುಸಾಹಿತ್ಯ, ಬಹುಧರ್ಮ, ಬಹುಳಾಕಾರಿ ಮಾರುಕಟ್ಟೆ, ಪ್ರದೇಶ-ವಿಶಿಷ್ಟ ಕೃಷಿ, ಸ್ಥಳೀಯ ಬ್ಯಾಂಕಿಂಗ್ ವ್ಯವಸ್ಥೆ ಮುಂತಾದ ಬಹುವಚನ ಸಂಸ್ಕೃತಿಯನ್ನು ಪಾಲಿಸುತ್ತಾ ನಡೆಯುತ್ತೇವೆಯೋ ಅಲ್ಲಿಯವರೆಗೆ ನಮ್ಮ ಏಕತೆಗೆ, ಸಮಗ್ರತೆಗೆ ಅಪಾಯವಿರುವುದಿಲ್ಲ. ಅಭಿವೃದ್ಧಿಯ ನೆಲೆಯಲ್ಲಿಯೂ ಒಕ್ಕೂಟವು ಅಗತ್ಯವಾದ ಒಂದು ಪ್ರಣಾಳಿಕೆಯಾಗಿದೆ. ಒಕ್ಕೂಟ ತತ್ವವು ಕೇವಲ ರಾಜಕೀಯ ಸಂಗತಿಯಷ್ಟೇ ಅಲ್ಲ. ಅದಕ್ಕೆ ಭಾಷೆಯ, ಸಂಸ್ಕೃತಿಯ, ಸಾಮಾಜಿಕ ಆಯಾಮವಿದ್ದಂತೆ ಆರ್ಥಿಕ ಮುಖವೂ ಇದೆ.

ಈ ಹಿನ್ನೆಲೆಯಲ್ಲಿ ಇಂದು ಕನ್ನಡ ರಾಷ್ಟ್ರೀಯತೆಗೆ, ಕನ್ನಡ ಭಾಷೆಗೆ, ಕನ್ನಡ ಮನಸ್ಸಿಗೆ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಕೇಂದ್ರದ ಒಕ್ಕೂಟ ಸರ್ಕಾರವು ಕುತ್ತನ್ನುಂಟುಮಾಡುತ್ತಿದೆ. ‘ಕೇಂದ್ರ ಸರ್ಕಾರ’ (ಯೂನಿಯನ್ ಗೌರ್ವನಮೆಂಟ್) ಎಂಬ ನುಡಿಯೇ ಅಸಂಬದ್ಧವಾದುದು. ನಮ್ಮ ಸಂವಿಧಾನದಲ್ಲಿ ಬಳಕೆಯಾಗಿರುವ ನುಡಿ ಒಕ್ಕೂಟ ಸರ್ಕಾರ (ಇಂಡಿಯಾ ದಟ್ ಈಸ್ ಭಾರತ್, ಶಲ್ ಬಿ ಎ ಯೂನಿಯನ್ ಆಫ್ ಸ್ಟೇಟ್ಸ್). ನಮ್ಮಲ್ಲಿರುವುದು ಸಂವಿಧಾನಾತ್ಮಕ ಒಕ್ಕೂಟ ಸರ್ಕಾರವೇ ವಿನಾ ಕೇಂದ್ರ ಸರ್ಕಾರವಲ್ಲ. ಒಕ್ಕೂಟತನವು ಭಾರತದ ಭದ್ರತೆಯ ತತ್ವ. ಪ್ರೊ. ಶಿವರಾಮಯ್ಯ ಅವರು ಸರಿಯಾಗಿ ಗುರುತಿಸಿರುವಂತೆ ಪಂಪ ಭಾರತವೆನ್ನುವುದು ಕನ್ನಡದ ಭಾರತವೇ ವಿನಾ ಭಾರತದ ‘ಭಾರತವಲ್ಲ. ಅಂದರೆ ನಮ್ಮ ದೇಶದಲ್ಲಿ ಪ್ರತಿಭಾಷೆಗೂ ಒಂದೊಂದು ಅಥವಾ ಅನೇಕ ಮಹಾಭಾರತ-ರಾಮಾಯಣಗಳಿವೆ. ಕನ್ನಡದಲ್ಲಿಯೇ ಇದನ್ನು ಕಾಣಬಹುದು.

ಡಾ. ಟಿ. ಆರ್. ಚಂದ್ರಶೇಖರ

ಕನ್ನಡ ರಾಷ್ಟ್ರೀಯತೆಯ ಚಳವಳಿಯ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯವಾಗಿದೆ. ಇದೇ ಸಂಪುಟದಲ್ಲಿನ ಟಿ. ಎ. ನಾರಾಯಣಗೌಡ ಅವರು ಕನ್ನಡ ರಾಷ್ಟ್ರೀಯತೆಯ ಸಂಘಟನೆಯ-ಹೋರಾಟದ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಕನ್ನಡ ರಾಷ್ಟ್ರೀಯತೆಯು ಕನ್ನಡಿಗರ ಬದುಕಿನ, ಉದ್ಯೋಗದ, ಒಕ್ಕಲುತನದ, ವ್ಯಾಪಾರ-ವ್ಯವಹಾರ-ವಹಿವಾಟಿನ, ಉದ್ದಿಮೆರಂಗದ ಪ್ರಶ್ನೆಯಾಗಿದೆ.


ಇದನ್ನೂ ಓದಿ: ಎ ಪ್ರಾಮಿಸ್ಡ್ ಲ್ಯಾಂಡ್: ಒಬಾಮಾ ಪುಸ್ತಕದಲ್ಲಿ ನಿಜಕ್ಕೂ ಏನಿದೆ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....