Homeಕರ್ನಾಟಕಕರ್ನಾಟಕದ ಒಕ್ಕೂಟ ರಾಜಕೀಯ ವ್ಯವಸ್ಥೆಯ ಚರಿತ್ರೆ: ಟಿ.ಆರ್ ಚಂದ್ರಶೇಖರ

ಕರ್ನಾಟಕದ ಒಕ್ಕೂಟ ರಾಜಕೀಯ ವ್ಯವಸ್ಥೆಯ ಚರಿತ್ರೆ: ಟಿ.ಆರ್ ಚಂದ್ರಶೇಖರ

ಭಾರತದಲ್ಲಿ ಯಾವತ್ತೂ ಪ್ರಾಂತೀಯತೆ ಎನ್ನುವುದು ರಾಷ್ಟ್ರೀಯತೆಗೆ ಎದುರಾಗಿ ನಿಂತಿಲ್ಲ.ಆದರೆ ಒಕ್ಕೂಟ ಮೌಲ್ಯವನ್ನು, ಸಾಂಸ್ಕೃತಿಕ ಬಹುತ್ವವನ್ನು ಕಳೆದುಕೊಂಡರೆ ನಾವು ಅನೇಕ ಗಂಡಾಂತರಗಳನ್ನು ಎದುರಿಸಬೇಕಾಗುತ್ತದೆ.

- Advertisement -
- Advertisement -

ನ್ಯಾಯಪಥ (ವಾರಪತ್ರಿಕೆ. ಸಂ. 3 ಸಂ. 11. ನವೆಂಬರ್ 18, 2020)ದಲ್ಲಿ ಪ್ರೊ. ಶಿವರಾಮಯ್ಯ ಅವರು ‘ಪಂಪನ ವಿಕ್ರಮಾರ್ಜುನ ವಿಜಯವೂ, ಕನ್ನಡ ರಾಷ್ಟ್ರೀಯತೆಯೂ’ ಎಂಬ ಲೇಖನದಲ್ಲಿ ಪಂಪ ಮಹಾಕವಿಯ ಮಹಾಭಾರತವನ್ನು ನಿದರ್ಶನವಾಗಿಟ್ಟುಕೊಂಡು ಕನ್ನಡ ರಾಷ್ಟ್ರೀಯತೆಯ ವಿವಿಧ ಆಯಾಮಗಳನ್ನು (ಜಾತಿವಿರೋಧಿ ಸಂಗತಿಗಳನ್ನು ಸೇರಿಸಿಕೊಂಡು) ಕುರಿತಂತೆ ಚರ್ಚಿಸಿದ್ದಾರೆ. ಕವಿರಾಜಮಾರ್ಗಕಾರನಲ್ಲಿನ ಕನ್ನಡ ರಾಷ್ಟ್ರೀಯತೆಯ ಎಳೆಗಳನ್ನು ಗುರುತಿಸಲು ಅವರು ಪ್ರಯತ್ನಿಸಿದ್ದಾರೆ. ಕನ್ನಡ ರಾಷ್ಟ್ರೀಯತೆಗೆ, ಒಕ್ಕೂಟ ರಾಜಕೀಯ ಪ್ರಣಾಳಿಕೆಗೆ ಮತ್ತು ನಾಡಿನ ಬಹುತ್ವ ಸಂಸ್ಕೃತಿಗೆ ಕರ್ನಾಟಕದಲ್ಲಿ ಸಾವಿರಾರು ವರ್ಷಗಳ ಚರಿತ್ರೆಯಿದೆ. ಕನ್ನಡ ಮನಸ್ಸು ಯಾವತ್ತೂ ವಿಶ್ವಾತ್ಮಕತೆ ಮತ್ತು ಸ್ಥಳೀಯತೆಗಳನ್ನು ಒಟ್ಟಿಗೆ ನಡೆಸಿಕೊಂಡು ಬಂದಿರುವುದಕ್ಕೆ ಇತಿಹಾಸದ ಸಾಕ್ಷಿಯಿದೆ. ಸಾಹಿತ್ಯದ ಮತ್ತು ಕನ್ನಡದ ಎಲ್ಲ ವಿದ್ವಾಂಸರಂತೆ ಪ್ರೊ. ಶಿವರಾಮಯ್ಯ ಅವರೂ ಸಹ ಕವಿರಾಜಮಾರ್ಗಕಾರನ ಪ್ರಸಿದ್ಧ ಕಂದ ಪದ್ಯದಲ್ಲಿನ ಭೌಗೋಳಿಕ ನೆಲೆಗಳನ್ನು ಕುರಿತಂತೆ (ಕಾವೇರಿಯಿಂದ ಆ ಗೋದಾವರಿವರೆಗಿರ್ಪ) ಮಾತನಾಡಿದ್ದಾರೆಯೇ ವಿನಾ ಆ ಪದ್ಯದ ಕೊನೆಯ ಸಾಲು ‘ವಸುಧಾ ವಲಯ ವಿಲೀನ ವಿಷದ ವಿಷಯ ವಿಶೇಷಂ’ ಎಂಬುದರ ಇಂಗಿತಾರ್ಥವನ್ನು ಕುರಿತಂತೆ ಹಚ್ಚು ಚರ್ಚೆಗಳಾಗಿಲ್ಲ. ಈ ಸಾಲಿನಲ್ಲಿ ಕವಿರಾಜಮಾರ್ಗಕಾರನು ಪ್ರಧಾನವಾಗಿ ಒಂದು ನೆಲೆಯಲ್ಲಿ ಬಹುತ್ವವನ್ನು ಮತ್ತೊಂದು ನೆಲೆಯಲ್ಲಿ ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಿದ್ದಾನೆ. ವಸುಧೆಯಲ್ಲಿ ವಿಲೀನ ಎಂದರೆ ಅಲ್ಲಿ ಅನೇಕ ಭಾಷೆಗಳು, ಅನೇಕ ಧರ್ಮಗಳು, ಅನೇಕ ಸಂಸ್ಕೃತಿಗಳು, ಅನೇಕ ಪ್ರದೇಶ-ವಿಶಿಷ್ಟತೆಗಳು ಇರುತ್ತವೆ ಎಂದು ಅರ್ಥ (ಬಹುತ್ವ). ವಸುಧೆಯಲ್ಲಿ ವಿಲೀನವಾಗಿದ್ದರೂ ಅದು ವಿಶಿಷ್ಟವಾದುದು ಎಂಬುದು ಒಕ್ಕೂಟ ತತ್ವವನ್ನು ಹೇಳುತ್ತಿದೆ. ಇದನ್ನು ಯಾವ ಸಂಕೋಚವೂ ಇಲ್ಲದೆ ನಾವು ‘ಕನ್ನಡ ರಾಷ್ಟ್ರೀಯತೆ ಪ್ರಣಾಳಿಕೆ’ ಎಂದು ಕರೆಯಬಹುದು. ಈ ಸಾಲಿನಲ್ಲಿ ಮಾರ್ಗಕಾರ ಏನನ್ನು ಹೇಳುತ್ತಿದ್ದಾನೆ?

ಇದನ್ನೂ ಓದಿ: ಪಂಪನ ವಿಕ್ರಮಾರ್ಜುನ ವಿಜಯವೂ, ಕನ್ನಡ ರಾಷ್ಟ್ರೀಯತೆಯೂ: ಪ್ರೊ.ಶಿವರಾಮಯ್ಯ

ಕನ್ನಡ ಜನಪದವು ‘ವಸುಧೆ’ಯಲ್ಲಿ ಲೀನವಾಗಿದೆ. ಅದು ಲೀನವಾಗಿದ್ದರೂ ತನ್ನ ‘ವಿಶಿಷ್ಟತೆ’ಯನ್ನು ಕಾಪಿಟ್ಟುಕೊಂಡು ಬಂದಿರುವುದನ್ನು ಇದು ಹೇಳುತ್ತಿದೆ. ಕನ್ನಡ ಸಂಸ್ಕೃತಿಯು ವಸುಧೆಯಲ್ಲಿನ ಎಲ್ಲ ಅಂಶಗಳನ್ನು ಒಳಗು ಮಾಡಿಕೊಂಡಿದೆ. ಅದೇ ಸಮಯದಲ್ಲಿ ತನ್ನತನವನ್ನು ಅದು ಬಿಟ್ಟುಕೊಟ್ಟಿಲ್ಲ. ಅದು ತನ್ನ ವಿಶಿಷ್ಟತೆಯನ್ನು ಉಳಿಸಿಕೊಂಡು ವಿಶ್ವಾತ್ಮಕವಾಗಿದೆ. ‘ವಸುಧಾ ವಲಯ ವಿಲೀನ’ ಎಂಬುದು ವಿಶ್ವಾತ್ಮಕತೆಯನ್ನು (ಕೇಂದ್ರ-ಏಕಾತ್ಮಕತೆ) ‘ವಿಶದ ವಿಷಯ ವಿಶೇಷಂ’ ಎಂಬುದು ಸ್ಥಳೀಯತೆಯನ್ನು (ಉಪರಾಷ್ಟ್ರೀಯತೆ) ಪ್ರತಿನಿಧಿಸುತ್ತಿದೆ. ಅನೇಕ ಕನ್ನಡ ವಿದ್ವಾಂಸರು ಗುರುತಿಸಿರುವಂತೆ ಕವಿರಾಜಮಾರ್ಗ ಕೃತಿಯು ಒಂದು ರಾಜಕೀಯ ಪಠ್ಯ. ಕನ್ನಡದ ಸ್ವಾಯತ್ತತೆಯನ್ನು ಇಲ್ಲಿ ಮಾರ್ಗಕಾರ ಗುರುತಿಸುತ್ತಿದ್ದಾನೆ.

ನಮ್ಮ ನಾಡು (ಭಾರತ) ಚರಿತ್ರೆಯಲ್ಲಿ ಯಾವತ್ತೂ ಏಕಚಕ್ರಾಧಿಪತ್ಯವಾಗಿರಲಿಲ್ಲ. ಉದಾ: ರಾಷ್ಟ್ರಕೂಟ ಚಕ್ರವರ್ತಿ ಎರಡನೆಯ ಪುಲಿಕೇಶಿ ದಕ್ಷಿಣಾಪಥೇಶ್ವರ ಎಂಬ ಬಿರುದನ್ನು ಪಡೆದಿದ್ದರೆ ಅವನ ಸಮಕಾಲೀನನಾದ ಹರ್ಷವರ್ಧನನು ಉತ್ತರಾಪಥೇಶ್ವರ ಎನಿಸಿಕೊಂಡಿದ್ದನು. ಆದರೆ ಪುಲಿಕೇಶಿಯ ರಾಜ್ಯಾಡಳಿತದಲ್ಲಿ ಹತ್ತಾರು ಸಾಮಂತ ಅರಸರಿದ್ದರು. ಒಂದು ರೀತಿಯಲ್ಲಿ ಅದೊಂದು ಒಕ್ಕೂಟವಾಗಿತ್ತು. ಅದೇ ರೀತಿಯಲ್ಲಿ ಹರ್ಷವರ್ಧನನ ಸಾಮ್ರಾಜ್ಯದಲ್ಲಿಯೂ ಹತ್ತಾರು ಸಾಮಂತ ಅರಸರಿದ್ದರು. ಅದೊಂದು ಒಕ್ಕೂಟವಾಗಿತ್ತು. ಇವೆರಡೂ ಸೇರಿ ಮಹಾ ಒಕ್ಕೂಟವಾಗಿತ್ತು. ಹೀಗೆ ಚರಿತ್ರೆಯುದ್ದಕ್ಕೂ ಭಾರತದ ರಾಜಕೀಯವು ಹೀಗೆ ಒಕ್ಕೂಟ ವ್ಯವಸ್ಥೆಯಾಗಿತ್ತೇ ವಿನಾ ಏಕಚಕ್ರಾಧಿಪತ್ಯವಾಗಿರಲಿಲ್ಲ. ಇಂತಹ ಒಕ್ಕೂಟ ತತ್ವಕ್ಕೆ ನಮ್ಮ ಸಂವಿಧಾನವೂ ಮನ್ನಣೆ ನೀಡಿದೆ. ಭಾಷಾವಾರು ಪ್ರಾಂತ್ಯಗಳ ರಚನೆಯು ಇದಕ್ಕೆ ಒಂದು ನಿದರ್ಶನವಾಗಿದೆ. ಸ್ವಾತಂತ್ರೋತ್ತರ ಭಾರತದಲ್ಲಿ ಅನೇಕ ಇತಿಮಿತಿಗಳ ನಡುವೆ ಒಕ್ಕೂಟ ತತ್ವವನ್ನು ಪಾಲಿಸಿಕೊಂಡು ಬರಲಾಗಿದೆ. ಇದೀಗ ಇದಕ್ಕೆ ‘ಅಖಂಡವಾದಿ’ಗಳಿಂದ ಅಪಾಯ ಬಂದಿದೆ. ಇಂದು ಭಾರತ ರಾಜಕಾರಣವು ಅಖಂಡತೆಯ ವ್ಯಸನದಲ್ಲಿ ಮುಳುಗಿಹೋಗಿದೆ. ಒಂದು ದೇಶ-ಒಂದು ಧರ್ಮ, ಒಂದು ದೇಶ-ಒಂದು ಭಾಷೆ, ಒಂದು ದೇಶ-ಒಂದು ಮಾರುಕಟ್ಟೆ, ಒಂದು ದೇಶ-ಒಂದು ಬ್ಯಾಂಕು, ಒಂದು ದೇಶ-ಒಂದು ತೆರಿಗೆ, ಒಂದು ದೇಶ-ಒಂದು ಶಿಕ್ಷಣ, ಒಂದು ದೇಶ-ಒಂದು ಮಹಾಭಾರತ-ರಾಮಾಯಣ ಇತ್ಯಾದಿ ಘೋಷಣೆಗಳು ಶಾಸನವಾಗುವ ಪ್ರಕ್ರಿಯೆಯಲ್ಲಿವೆ. ಈ ಬೆಳವಣಿಗೆಯು ರಾಜಕೀಯವಾಗಿ ಒಕ್ಕೂಟ ವ್ಯವಸ್ಥೆಗೆ, ಭಾಷೆಯ ನೆಲೆಯಲ್ಲಿ ಭಾಷಾವಾರು ಪ್ರಾಂತ ಪ್ರಣಾಳಿಕೆಗೆ, ಸಾಂಸ್ಕೃತಿಕವಾಗಿ ಬಹುತ್ವಕ್ಕೆ, ಕೃಷಿ ವೈವಿಧ್ಯತೆಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ನಮ್ಮ ದೇಶವು ಚರಿತ್ರೆಯಲ್ಲಿ ಯಾವತ್ತೂ ಒಂದು ಆಗಿರಲಿಲ್ಲ. ಇದರರ್ಥ ಭಾರತ ಎಂಬುದಿರಲಿಲ್ಲ ಎಂಬುದಲ್ಲ. ಕವಿರಾಜಮಾರ್ಗಕಾರ ಹೇಳುವಂತೆ ಕನ್ನಡ ಜನಪದÀವು ಹೇಗೆ ಭಾವಿಸಿದ ಸಂಗತಿಯಾಗಿತ್ತೋ ಅದೇ ರೀತಿಯಲ್ಲಿ ಭಾರತವೂ ಒಂದು ಭಾವಿಸಿದ ರಾಷ್ಟ್ರವಾಗಿತ್ತು. ಸ್ವಾತಂತ್ರೋತ್ತರ ಭಾರತದಲ್ಲಿ ಒಕ್ಕೂಟ ತತ್ವವು, ಭಾಷಾ ಬಹುತ್ವವು, ಸಾಂಸ್ಕೃತಿಕ ಬಹುವಚನವು ಯಾವ ರೀತಿಯಲ್ಲಿಯೂ, ಯಾವತ್ತೂ ಭಾರತದ ಏಕತೆಗೆ ಕುತ್ತು ಉಂಟುಮಾಡಿಲ್ಲ.

‘ಪ್ರಾಂತೀಯತೆ’ಯನ್ನು ರಾಷ್ಟ್ರೀಯತೆಗೆ ಪ್ರತಿಯಾದುದು ಎಂದು ಭಾವಿಸಬೇಕಾಗಿಲ್ಲ, ಭಾರತದಲ್ಲಿ ಯಾವತ್ತೂ ಪ್ರಾಂತೀಯತೆ ಎನ್ನುವುದು ರಾಷ್ಟ್ರೀಯತೆಗೆ ಎದುರಾಗಿ ನಿಂತಿಲ್ಲ. ರಾಷ್ಟ್ರಕವಿ ಕುವೆಂಪು ಅವರು ಕನ್ನಡ ಮಾತೆಯನ್ನು ‘ಭಾರತ ಜನನಿಯ ತನುಜಾತೆ’ ಎಂದು ಕರೆದಿದ್ದಾರೆ. ಭಾರತದ ಎಲ್ಲ ಪ್ರಾಂತ್ಯಗಳಲ್ಲಿಯೂ ಇದೇ ಭಾವನೆಯು ನೆಲೆಯೂರಿದೆ. ಆದರೆ ಈ ಒಕ್ಕೂಟ ಮೌಲ್ಯವನ್ನು, ಸಾಂಸ್ಕೃತಿಕ ಬಹುತ್ವವನ್ನು ಕಳೆದುಕೊಂಡರೆ ನಾವು ಅನೇಕ ಗಂಡಾಂತರಗಳನ್ನು ಎದುರಿಸಬೇಕಾಗುತ್ತದೆ. ಎಲ್ಲಿಯವರೆಗೆ ನಮ್ಮ ನಾಡನಲ್ಲಿ ಬಹುಭಾಷೆ, ಬಹುಸಾಹಿತ್ಯ, ಬಹುಧರ್ಮ, ಬಹುಳಾಕಾರಿ ಮಾರುಕಟ್ಟೆ, ಪ್ರದೇಶ-ವಿಶಿಷ್ಟ ಕೃಷಿ, ಸ್ಥಳೀಯ ಬ್ಯಾಂಕಿಂಗ್ ವ್ಯವಸ್ಥೆ ಮುಂತಾದ ಬಹುವಚನ ಸಂಸ್ಕೃತಿಯನ್ನು ಪಾಲಿಸುತ್ತಾ ನಡೆಯುತ್ತೇವೆಯೋ ಅಲ್ಲಿಯವರೆಗೆ ನಮ್ಮ ಏಕತೆಗೆ, ಸಮಗ್ರತೆಗೆ ಅಪಾಯವಿರುವುದಿಲ್ಲ. ಅಭಿವೃದ್ಧಿಯ ನೆಲೆಯಲ್ಲಿಯೂ ಒಕ್ಕೂಟವು ಅಗತ್ಯವಾದ ಒಂದು ಪ್ರಣಾಳಿಕೆಯಾಗಿದೆ. ಒಕ್ಕೂಟ ತತ್ವವು ಕೇವಲ ರಾಜಕೀಯ ಸಂಗತಿಯಷ್ಟೇ ಅಲ್ಲ. ಅದಕ್ಕೆ ಭಾಷೆಯ, ಸಂಸ್ಕೃತಿಯ, ಸಾಮಾಜಿಕ ಆಯಾಮವಿದ್ದಂತೆ ಆರ್ಥಿಕ ಮುಖವೂ ಇದೆ.

ಈ ಹಿನ್ನೆಲೆಯಲ್ಲಿ ಇಂದು ಕನ್ನಡ ರಾಷ್ಟ್ರೀಯತೆಗೆ, ಕನ್ನಡ ಭಾಷೆಗೆ, ಕನ್ನಡ ಮನಸ್ಸಿಗೆ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಕೇಂದ್ರದ ಒಕ್ಕೂಟ ಸರ್ಕಾರವು ಕುತ್ತನ್ನುಂಟುಮಾಡುತ್ತಿದೆ. ‘ಕೇಂದ್ರ ಸರ್ಕಾರ’ (ಯೂನಿಯನ್ ಗೌರ್ವನಮೆಂಟ್) ಎಂಬ ನುಡಿಯೇ ಅಸಂಬದ್ಧವಾದುದು. ನಮ್ಮ ಸಂವಿಧಾನದಲ್ಲಿ ಬಳಕೆಯಾಗಿರುವ ನುಡಿ ಒಕ್ಕೂಟ ಸರ್ಕಾರ (ಇಂಡಿಯಾ ದಟ್ ಈಸ್ ಭಾರತ್, ಶಲ್ ಬಿ ಎ ಯೂನಿಯನ್ ಆಫ್ ಸ್ಟೇಟ್ಸ್). ನಮ್ಮಲ್ಲಿರುವುದು ಸಂವಿಧಾನಾತ್ಮಕ ಒಕ್ಕೂಟ ಸರ್ಕಾರವೇ ವಿನಾ ಕೇಂದ್ರ ಸರ್ಕಾರವಲ್ಲ. ಒಕ್ಕೂಟತನವು ಭಾರತದ ಭದ್ರತೆಯ ತತ್ವ. ಪ್ರೊ. ಶಿವರಾಮಯ್ಯ ಅವರು ಸರಿಯಾಗಿ ಗುರುತಿಸಿರುವಂತೆ ಪಂಪ ಭಾರತವೆನ್ನುವುದು ಕನ್ನಡದ ಭಾರತವೇ ವಿನಾ ಭಾರತದ ‘ಭಾರತವಲ್ಲ. ಅಂದರೆ ನಮ್ಮ ದೇಶದಲ್ಲಿ ಪ್ರತಿಭಾಷೆಗೂ ಒಂದೊಂದು ಅಥವಾ ಅನೇಕ ಮಹಾಭಾರತ-ರಾಮಾಯಣಗಳಿವೆ. ಕನ್ನಡದಲ್ಲಿಯೇ ಇದನ್ನು ಕಾಣಬಹುದು.

ಡಾ. ಟಿ. ಆರ್. ಚಂದ್ರಶೇಖರ

ಕನ್ನಡ ರಾಷ್ಟ್ರೀಯತೆಯ ಚಳವಳಿಯ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯವಾಗಿದೆ. ಇದೇ ಸಂಪುಟದಲ್ಲಿನ ಟಿ. ಎ. ನಾರಾಯಣಗೌಡ ಅವರು ಕನ್ನಡ ರಾಷ್ಟ್ರೀಯತೆಯ ಸಂಘಟನೆಯ-ಹೋರಾಟದ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಕನ್ನಡ ರಾಷ್ಟ್ರೀಯತೆಯು ಕನ್ನಡಿಗರ ಬದುಕಿನ, ಉದ್ಯೋಗದ, ಒಕ್ಕಲುತನದ, ವ್ಯಾಪಾರ-ವ್ಯವಹಾರ-ವಹಿವಾಟಿನ, ಉದ್ದಿಮೆರಂಗದ ಪ್ರಶ್ನೆಯಾಗಿದೆ.


ಇದನ್ನೂ ಓದಿ: ಎ ಪ್ರಾಮಿಸ್ಡ್ ಲ್ಯಾಂಡ್: ಒಬಾಮಾ ಪುಸ್ತಕದಲ್ಲಿ ನಿಜಕ್ಕೂ ಏನಿದೆ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....