HomeUncategorizedಸಾಮಾಜಿಕ ನೈತಿಕ ಮೌಲ್ಯಗಳ ದೃಷ್ಟಿಯಿಂದ ಪವಿತ್ರ ರಂಜಾನ್ ಮಾಸ

ಸಾಮಾಜಿಕ ನೈತಿಕ ಮೌಲ್ಯಗಳ ದೃಷ್ಟಿಯಿಂದ ಪವಿತ್ರ ರಂಜಾನ್ ಮಾಸ

- Advertisement -
- Advertisement -

ರಂಜಾನ್ ತಿಂಗಳು ಮುಸ್ಲಿಮರ ಅತ್ಯಂತ ಪವಿತ್ರ ಮಾಸವಾಗಿ ವಿಶೇಷವಾಗಿ ಗುರುತಿಸಿಕೊಳ್ಳುತ್ತದೆ. ಇದಕ್ಕೆ ಕಾರಣ, ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಖುರಾನ್ ಜಾರಿಯಾಗಿದ್ದು ಇದೆ ರಂಜಾನ್ ತಿಂಗಳಿನಲ್ಲಿ. ಇಸ್ಲಾಮಿನ ಪ್ರಮುಖ ಆಧಾರ ಸ್ತಂಭಗಳು ಎನ್ನುವ ಪಂಚ ತತ್ವಗಳಲ್ಲಿ, ಎರಡು ಮೂಲತತ್ವಗಳಾದ ರೋಜ (ತಿಂಗಳ ಉಪವಾಸ) ಮತ್ತು ಝಖಾತ್( ಧಾರ್ಮಿಕ ತೆರಿಗೆ) ಈ ತಿಂಗಳನಲ್ಲಿ ಆಚರಿಸಲ್ಪಡುತ್ತದೆ.

ಉಪವಾಸ, ಪ್ರಾರ್ಥನೆ, ಇಫ್ತಾರ್ ಕೂಟಗಳು, ದಾನ ಧರ್ಮಗಳು, ಧಾರ್ಮಿಕ ಆಚರಣೆಗಳು ಈ ತಿಂಗಳ ವಿಶೇಷ, ಧಾರ್ಮಿಕ ಸಂಗತಿಗಳ ಜೊತೆ ಜೊತೆಗೆ ರಂಜಾನ್ ಸಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಕೂಡ ಬಿತ್ತರಿಸುತ್ತದೆ ಎಂಬ ಅಂಶವನ್ನು ಕೂಡ ಸೂಕ್ಷ್ಮವಾಗಿ ಅವಲೋಕಿಸಬೇಕಾಗಿದೆ.

ಧಾರ್ಮಿಕವಾಗಿ ರಂಜಾನ್ ಉಪವಾಸಗಳಿಗೆ ಪ್ರಸಿದ್ಧವಾದದ್ದು, ಸೂರ್ಯ ಉದಯಿಸುವ ಮುಂಚೆ ಅನ್ನಾಹಾರಗಳನ್ನು ಸೇವಿಸಿ, ಸೂರ್ಯೋದಯದ ನಂತರ ಸೂರ್ಯಸ್ತಮಾನ ಆಗುವವರೆಗೆ ಯಾವುದೇ ಆಹಾರಗಳನ್ನು ಸ್ವೀಕರಿಸದೆ, ದೇವರ ಪ್ರಾರ್ಥನೆ ಮಾಡುವ ಒಂದು ವ್ರತ ಎಂಬುದಾಗಿ ಪರಿಗಣಿಸಲಾಗಿದೆ. ಅನ್ನ, ಆಹಾರ, ನೀರನ್ನು ತ್ಯಜಿಸುವುದು ಅಷ್ಟೇ ರಂಜಾನಿನ ಉಪವಾಸದ ಅರ್ಥವಲ್ಲ, ಇದರ ಆಂತರ್ಯವನ್ನ ತಿಳಿಯುವ ಅವಶ್ಯಕತೆ ಇದೆ.

ರಂಜಾನ್ ಅನ್ನಾ, ಅಹಾರ, ನೀರು ಮುಂತಾದ ತನ್ನ ಎಲ್ಲಾ ಕಾಮನೆಗಳ ಮೇಲೆ, ಬಯಕೆಗಳ ಮೇಲೆ ನಿಯಂತ್ರಣವನ್ನು ಹೇರಿಕೊಂಡು ಸಮಾಜದಲ್ಲಿ ನಾಗರಿಕನಾಗಿ, ಅರೋಪಗಳಿಂದ ಮುಕ್ತನಾಗಿ, ಅಪರಾದಗಳಿಂದ ದೂರವಿದ್ದು ಇತರರಿಗೆ ಮಾದರಿಯಾಗುವಂತ ಜೀವನ ತನ್ನದಾಗಿಸಿಕೊಳ್ಳುವ ಹಲವಾರು ಸಾಮಾಜಿಕ, ನೈತಿಕ ಮೌಲ್ಯಗಳನ್ನು ಕಲಿಸಿಕೊಡುವ ತರಬೇತಿಯಾಗಿದೆ. ಈ ತರಬೇತಿಯಂತೆ ಉಳಿದ 11 ತಿಂಗಳುಗಳು ಜೀವನವನ್ನು ಸಾಗಿಸಿ ಪಾವಿತ್ರತೆಯನ್ನು ಕಾಪಾಡಿಕೊಳ್ಳುವುದು ಇದರ ಸಂದೇಶವಾಗಿದೆ.

ಮಹಮ್ಮದ್ ಪೈಗಂಬರವರ(ಸ.ಅ.ಸ) ಸಂದೇಶಗಳು ಕೂಡ ಇದೇ ಆಗಿದೆ. ಅವರೇ ಹೇಳುವ ಹಾಗೆ ಕೇವಲ ಅನ್ನಾಹಾರಗಳನ್ನು ತ್ಯಜಿಸಿ ಮಾಡುವ ಉಪವಾಸ ಯಾವುದೇ ಪ್ರತಿಫಲ ನೀಡದು. ಉಪವಾಸ ಅನ್ನಾಹಾರಗಳ ತ್ಯಜಿಸುವುದರ ಜೊತೆಗೆ ಬಾಯಿ, ಕಿವಿ, ಕಣ್ಣು, ಕೈಕಾಲು ಹೀಗೆ ತನ್ನ ಇಂದ್ರಿಯಗಳ ಮೇಲೆ ಸ್ವ ನಿಯಂತ್ರಣವನ್ನು ಸಾಧಿಸಿ, ಪ್ರೀತಿ ಕರುಣೆ ಸೌಹಾರ್ದತೆ ಭಾತೃತ್ವಗಳನ್ನ ಅಳವಡಿಸಿಕೊಂಡು, ಕೆಡಕುಗಳಿಂದ, ಕ್ರೌರ್ಯಗಳಿಂದ ದೂರವಿದ್ದು ಆಂತರಿಕವಾಗಿ ಸ್ವಚ್ಛ ಮಾಡಿಕೊಂಡು ದೇವರ ವಿಶೇಷ ಕೃಪೆಗೆ ಪಾತ್ರರಾಗಿ ಜೀವಮಾನ ಪೂರ್ತಿ ಇದರಂತೆ ಬದುಕು ಎಂಬ ಸಂದೇಶ ನೀಡಿದ್ದಾರೆ.

  • ಕಣ್ಣುಗಳು – ಕೆಟ್ಟ ವಸ್ತುಗಳನ್ನು ನೋಡದಂತೆ, ಕೆಟ್ಟ ದೃಷ್ಟಿಯನ್ನು ಬೀರದಂತೆ, ಪರರ ವಸ್ತುಗಳನ್ನು, ಪರರ ಸಂಪತ್ತನ್ನು ಕಬಳಿಸುವ ದೃಷ್ಟಿಯಿಂದ ನೋಡದಂತೆ ಕಣ್ಣುಗಳಿಗೂ ಉಪವಾಸ ಮಾಡಬೇಕು. ಕಣ್ಣುಗಳನ್ನ ಪವಿತ್ರ ಗೊಳಿಸಿಕೊಳ್ಳಬೇಕು.
  • ಕಿವಿಗಳು – ಕಿವಿಗಳು ಕೆಟ್ಟ ಮಾತುಗಳನ್ನು ಕೇಳಿಸಿಕೊಳ್ಳದಂತೆ, ಇತರ ಚಾಡಿ ಮಾತುಗಳಿಗೆ ಕಿವಿಗೊಡದಂತೆ, ಇತರರ ನಿಂದನೆಗಳಿಗೆ ಕಿವಿಗೊಡದಂತೆ ಕಿವಿಗಳನ್ನು ರಕ್ಷಿಸಿಕೊಳ್ಳಬೇಕು.
  • ಬಾಯಿ – ಸುಳ್ಳು ಹೇಳದಂತೆ, ಇತರರಿಗೆ ಕೆಟ್ಟ ಮಾತನಾಡದಂತೆ. ಸುಳ್ಳುಸುದ್ದಿ ಹಬ್ಬಿಸದಂತೆ. ಇತರರಿಗೆ ನಿಂದಿಸದಂತೆ, ತನ್ನ ಆಶ್ರಯದಲ್ಲಿ ಇರುವವರ ಮೇಲೆ ಕೋಪ ಮಾಡಿಕೊಂಡು ಏರು ಧ್ವನಿಯಲ್ಲಿ ಮಾತನಾಡಿದಂತೆ, ಮಧ್ಯಪಾನ ಮಾಡದಂತೆ, ನಿಷೇಧಿತ ಅಹಾರಗಳನ್ನು ಸೇವಿಸದಂತೆ , ದುರ್ಮಾರ್ಗದಿಂದ ಸಂಪಾದಿಸಿದ ಹಣದಿಂದ ಆಹಾರ ಪದಾರ್ಥಗಳನ್ನು ಖರೀದಿಸಿ ತಿನ್ನದಂತೆ, ಬಾಯಿಯನ್ನು ಶುಚಿಯಾಗಿರಿಸಿಕೊಳ್ಳಬೇಕು.
  • ಕೈಗಳು – ಇತರರ ವಸ್ತುಗಳನ್ನು ಕದಿಯದಂತೆ, ಇತರರ ವಸ್ತುಗಳನ್ನು ಮುಟ್ಟದಂತೆ, ದುರ್ಬಲರು, ಅಮಾಯಕರು ಮತ್ತು ನಿರ್ಗತಿಕರ ಮೇಲೆ ಕೈ ಮಾಡದಂತೆ, ತನ್ನ ಆಶ್ರಯದಲ್ಲಿದ್ದವರ ಮೇಲೆ ಕೈ ಮಾಡದಂತೆ, ಕೆಟ್ಟ ವಸ್ತುಗಳನ್ನು ಮುಟ್ಟದಂತೆ, ನಿರ್ಬಂಧಿತ ವಸ್ತುಗಳನ್ನು ಮುಟ್ಟದಂತೆ ಕೈಗಳನ್ನು ಪವಿತ್ರಗೊಳಿಸಿಕೊಳ್ಳಬೇಕು
  • ಕಾಲುಗಳು – ಕೆಟ್ಟ ಸ್ಥಳಗಳಿಗೆ ಹೋಗದಂತೆ, ನಿಷೇಧಿತ ಪ್ರದೇಶಗಳಿಗೆ ಹೋಗದಂತೆ (ಜೂಜು ಅಡ್ಡೆಗಳು, ಮದ್ಯದಂಗಡಿಗಳು ಮುಂತಾದವು) ಶುಚಿತ್ವ ಇರದ ಸ್ಥಳಗಳಿಗೆ ಹೋಗದಂತೆ ನಿರ್ಬಂಧಿಸಿಕೊಳ್ಳುವುದು.
  • ಮಾನಸಿಕವಾಗಿ – ಮಾನಸಿಕವಾಗಿ ತನ್ನ ಎಲ್ಲಾ ಕಾಮನೆಗಳ ಮೇಲೆ, ತನ್ನ ಬಯಕೆಗಳ ಮೇಲೆ, ತನ್ನ ಕೆಟ್ಟ ಆಲೋಚನೆಗಳ ಮೇಲೆ ನಿಯಂತ್ರಣವನ್ನು ಸಾಧಿಸುವುದು ಮತ್ತು ಇತರರಿಗೆ ಕೆಡುಕು ಮಾಡುವ ಆಲೋಚನೆಗಳಿಂದ, ಸಮಾಜಿಕ ಕೆಡಕುಗಳಾದ ಕೊಲೆ, ದರೋಡೆ, ಕಳ್ಳತನ, ಮೋಸ, ವಂಚನೆ ಮುಂತಾದವುಗಳಿಂದ ದೂರವಿರುವಂತೆ ತನಗೆ ತಾನು ಸ್ವನಿಯಂತ್ರಿಸಿಕೊಳ್ಳುವುದರ ಜೊತೆಗೆ
    ತಂದೆ, ತಾಯಿ, ಗುರು, ಹಿರಿಯರ ಬಗ್ಗೆ ಗೌರವ, ಚಿಕ್ಕವರ ಮೇಲೆ ಪ್ರೀತಿ, ದಯೆ, ಕರುಣೆ, ಸೌಹಾರ್ದತೆಯನ್ನು ಪಾಲಿಸಬೇಕು.
    ಉಪವಾಸ ಮನೆಯಲ್ಲಿ ಇದ್ದು ಅಥವಾ ಪೂರ್ಣ ದಿನ ಮಲಗಿ ಆಚರಿಸುವಂತದಲ್ಲ. ಉಪವಾಸವಿದ್ದು ತನ್ನ ದೈನಂದಿನ ಕೆಲಸ ಕಾರ್ಯಗಳಲ್ಲಿ ಭಾಗವಹಿಸಿ ದುಡಿಮೆ ಮಾಡುವುದರ ಜೊತೆಗೆ ಉಪವಾಸ ಆಚರಿಸಬೇಕು. ಇದರ ಮೂಲಕ ಹಸಿದವರ,ಬಡವ, ಶ್ರಮಿಕರ ಮತ್ತು ಕಾರ್ಮಿಕರ ನೋವುಗಳು ಅರಿವಾಗುತ್ತದೆ ಇದರಿಂದ ಅವರ ಬಗ್ಗೆ ಸಹಾನುಭೂತಿ ಬೆಳೆಯುತ್ತದೆ.
  • ಇಫ್ತಾರ್ – ಇಫ್ತಾರ್ ಆಚರಣೆಯ ಮೂಲಕ ಉಪವಾಸ ಕೊನೆಯಾಗುತ್ತದೆ. ಇಫ್ತಾರ್ ಕೂಟಗಳಲ್ಲಿ ಬಡವ ಶ್ರೀಮಂತ ನಿರ್ಗತಿಕ ಎಂಬ ಭೇದಭಾವ ಇಲ್ಲದೆ ಎಲ್ಲರೂ ಒಟ್ಟಾಗಿ, ಇರುವ ಆಹಾರಗಳನ್ನು ಹಂಚಿ ತಿಂದು ಎಲ್ಲರೂ ಒಂದೇ ಎಂಬ ಭಾವನೆ ಬೆಳೆಸಿಕೊಂಡು ಬದುಕುವುದನ್ನು ಕಲಿಸುತ್ತದೆ. ಜೀವನದಲ್ಲಿ ಬಡವ ಶ್ರೀಮಂತ ಎಂಬ ಭೇದ ಭಾವ ಮಾಡದೆ ಸಾಮಾಜಿಕ ಸಮಾನತೆಯಿಂದ ಬದುಕುವುದನ್ನು ಕಲಿಸುತ್ತದೆ.

ಈ ಮೇಲಿನಂತೆ ಅನ್ನ, ಆಹಾರ, ಕೈ- ಕಾಲು, ಬಾಯಿ, ಇಂದ್ರಿಯಗಳ ನಿಗ್ರಹ, ಎಲ್ಲಾ ರೀತಿಯ ಕಾಮನೆಗಳ ಮೇಲೆ ನಿಯಂತ್ರಣವನ್ನು ಸಾಧಿಸುವುದನ್ನ, ಸಮಾನತೆಯಿಂದ ಜೀವಿಸುವುದನ್ನ ಕಲಿಯುವುದು ರಂಜಾನ್ ಉಪವಾಸದ ತಿರುಳಾಗಿದೆ.

ಉಪವಾಸದಿಂದ ವಿನಾಯಿತಿ ವೃದ್ಧರು, ಚಿಕ್ಕ ಮಕ್ಕಳು, ಗರ್ಭಿಣಿ ಸ್ತ್ರೀಯರು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಉಪವಾಸ ಆಚರಣೆಯಿಂದ ವಿನಾಯಿತಿ ನೀಡಲಾಗಿದೆ.

  • ಝಕಾತ್ – ಇಸ್ಲಾಂ ಧರ್ಮದ ಮತ್ತೊಂದು ಪ್ರಮುಖ ಮೂಲ ತತ್ವವಾದ ಝಕಾತ್(ಧಾರ್ಮಿಕ ತೆರಿಗೆ) ಇದೇ ತಿಂಗಳಲ್ಲಿ ಪಾವತಿ ಆಗಬೇಕು . ಜಕಾತ್ ಎಂದರೆ ಸ್ಥಿತಿವಂತರು(85 ಗ್ರಾಂ ಗಿಂತಲೂ ಹೆಚ್ಚು ಚಿನ್ನ ಅಥವಾ ಅದಕ್ಕೆ ಸಮಾನವಾದ ಮೊತ್ತದ ಹಣ ಹೊಂದಿರುವವರು) ತಮ್ಮ ಆದಾಯದ ಶೇಕಡಾ 2.5 ಭಾಗವನ್ನು ತೆಗೆದು ಬಡವರಿಗೆ, ನಿರ್ಗತಿಕರಿಗೆ ಹಂಚುವುದು. ಬಟ್ಟೆಯ ರೂಪದಲ್ಲಿ, ಆಹಾರ ಧಾನ್ಯಗಳ ರೂಪದಲ್ಲಿ, ಹಣದ ರೂಪದಲ್ಲಿ ನೀಡಬಹುದು. ಇದರ ಷರತೇನೆಂದರೆ ಝಕಾತ್ ಅನ್ನು ತನ್ನ ವಾರಸುದಾರರಿಗೆ ನೀಡುವ ಹಾಗಿಲ್ಲ. ಮೊದಲು ತನ್ನ ಅಕ್ಕಪಕ್ಕದಲ್ಲಿರುವ ಬಡವರನ್ನ, ನಿರ್ಗತಿಕರನ್ನು ಗುರುತಿಸಿ ನೀಡಬೇಕು. ತನ್ನ ಅಕ್ಕಪಕ್ಕದಲ್ಲಿ ನಿರ್ಗತಿಕರು ಇಲ್ಲದಿದ್ದರೆ ತನ್ನ ಊರಿನಲ್ಲಿ ರಕ್ತಸಂಬಂಧದಲ್ಲಿ ಇರುವ ಬಡವರು, ನಿರ್ಗತಿಕರನ್ನು ಹುಡುಕಿ ನೀಡಬೇಕು, ಊರಿನಲ್ಲಿ ಇಂತಹ ರಕ್ತಸಂಬಂಧಿಗಳಲ್ಲಿ ಇಲ್ಲವಾದಲ್ಲಿ, ಊರಿನಲ್ಲಿರುವ ಬಡವರು, ನಿರ್ಗತಿಕರಿಗೆ ಹಂಚಬೇಕು ಇದು ಕಡ್ಡಾಯವಾಗಿ ಪಾಲಿಸಬೇಕು ಇಲ್ಲವಾದಲ್ಲಿ ರಂಜಾನ್ ತಿಂಗಳಿನಲ್ಲಿ ಆತ ಮಾಡಿದ ಉಪವಾಸ, ಪ್ರಾರ್ಥನೆಗಳು ಸ್ವೀಕೃತವಲ್ಲ.

ಇದು ಧಾರ್ಮಿಕ ಷರತ್ತಾಗಿದರೂ, ಇರುವವರು ಇಲ್ಲದವರೊಂದಿಗೆ ಹಂಚಿಕೊಳ್ಳುವ ಸಾಮರಸ್ಯ ಮತ್ತು ಸಹಾಯಮಾಡುವ ಗುಣವನ್ನು ವೃದ್ಧಿಸುತ್ತದೆ. ಉಳ್ಳವರು ಇಲ್ಲದೆ ಇರುವವರಿಗೆ ಆರ್ಥಿಕ ಸಹಾಯ ಮಾಡುವ ಗುಣವನ್ನು ಬೆಳೆಸುವ ಒಂದು ಪ್ರಯತ್ನದ ಭಾಗವಾಗಿದೆ. ಉಳ್ಳವರು ಇಲ್ಲದವರೊಂದಿಗೆ ಬಡವ ಶ್ರೀಮಂತ ಎಂಬ ಭೇದಭಾವ ಇಲ್ಲದೆ ಸಾಮರಸ್ಯದಿಂದ ಬದುಕುವ ಕಲೆಯನ್ನು ತಿಳಿಸುತ್ತದೆ, ಉಳ್ಳವರು ನಿರ್ಗತಿಕರನ್ನು, ಬಡವರನ್ನ ಅವರ ಮೇಲೆ ದರ್ಪ ತೋರದಂತೆ ಇಸ್ಲಾಂ ಧರ್ಮ ನಿಯಂತ್ರಿಸುತ್ತದೆ. ಇದು ಕೇವಲ ರಂಜಾನ್ ತಿಂಗಳಿನಲ್ಲಿ ಸೀಮಿತವಾಗಿರದೆ ಉಳಿದ ಅವಧಿಯಲ್ಲಿಯೂ ಬಡವರಿಗೆ ನಿರ್ಗತಿಕರಿಗೆ ಸಹಾಯ ಮಾಡಲು ತರಬೇತಿ ಗೊಳಿಸುತ್ತದೆ .

  • ಖುರಾನ್ – ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಖುರಾನ್ ರಂಜಾನ್ ತಿಂಗಳಿನಲ್ಲಿ ಅವತೀರ್ಣವಾಗಿದೆ ಎಂಬ ನಂಬಿಕೆ ಇದೆ. ಇದರಿಂದ ರಂಜಾನ್ ತಿಂಗಳ ಮೊದಲ ಉಪವಾಸದಿಂದ ಹಿಡಿದು ಕೊನೆಯ ಉಪವಾಸದವರಿಗೆ ಪ್ರತಿದಿನ ಖುರಾನ್ ಪಠಣ ಮಾಡಲಾಗುತ್ತದೆ. ಕುರಾನ್ ನಲ್ಲಿರುವ ತತ್ವಗಳನ್ನು ಕಲಿತು, ಅರಿತು, ಪಾಲಿಸುವ ಹಾಗೆ ಇದು ಮಾರ್ಗದರ್ಶನ ಮಾಡುತ್ತದೆ.

ಹೀಗೆ ರಂಜಾನ್ ಮುಸಲ್ಮಾನರಿಗೆ ಧಾರ್ಮಿಕವಾಗಿ ಅಲ್ಲದೆ ಸಾಮಾಜಿಕ ಮತ್ತು ನೈತಿಕ ತತ್ವಗಳ ಪಾಲಕರನ್ನಾಗಿ ಮಾಡುವ ತರಬೇತಿಗೊಳಿಸಿ, ಇನ್ನುಳಿದ ತಮ್ಮ ಮುಂದಿನ ದಿನಗಳಲ್ಲಿ ಇದೇ ರೀತಿ ಬದುಕುವ ಪಾಠ ಕಲಿಸುತ್ತದೆ. ಉಪಾಸಕರು ಈ ಮೌಲ್ಯಗಳನ್ನು ಅರಿತು ರೂಢಿಸಿಕೊಂಡು ಆದರ್ಶ ಜೀವನ ಕ್ರಮವನ್ನು ತಮ್ಮ ದಾಗಿಸಿಕೊಳ್ಳುವತ್ತ ಗಮನ ಹರಿಸಬೇಕು, ಆದ್ದರಿಂದ ರಂಜಾನ್ ವಿಶೇಷವಾದ ಸ್ಥಾನವನ್ನು ಪಡೆದಿದೆ.

(ಲೇಖಕರು ಪ್ರಾಧ್ಯಾಪಕರು, ಅಭಿಪ್ರಾಯಗಳು ಅವರ ವೈಯಕ್ತಿಕವಾದವುಗಳು)


ಇದನ್ನೂ ಓದಿ: ಹಿಂದೂ ಯುವಕನಿಗೆ ರಕ್ತದಾನ ಮಾಡಲು ರಂಜಾನ್ ವ್ರತ ಮುರಿದ ಮುಸ್ಲಿಂ ಮಹಿಳೆ.


ಪ್ರತಿದಿನದ ವಿಶೇಷ ಕಾರ್ಯಕ್ರಮ “ಸದ್ದು…ಈ ಸುದ್ದಿಗಳೇನಾಗಿದೆ” ನೋಡಲು ಇಲ್ಲಿ ಕ್ಲಿಕ್ ಮಾಡಿ.


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...