HomeUncategorizedಸಾಮಾಜಿಕ ನೈತಿಕ ಮೌಲ್ಯಗಳ ದೃಷ್ಟಿಯಿಂದ ಪವಿತ್ರ ರಂಜಾನ್ ಮಾಸ

ಸಾಮಾಜಿಕ ನೈತಿಕ ಮೌಲ್ಯಗಳ ದೃಷ್ಟಿಯಿಂದ ಪವಿತ್ರ ರಂಜಾನ್ ಮಾಸ

- Advertisement -
- Advertisement -

ರಂಜಾನ್ ತಿಂಗಳು ಮುಸ್ಲಿಮರ ಅತ್ಯಂತ ಪವಿತ್ರ ಮಾಸವಾಗಿ ವಿಶೇಷವಾಗಿ ಗುರುತಿಸಿಕೊಳ್ಳುತ್ತದೆ. ಇದಕ್ಕೆ ಕಾರಣ, ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಖುರಾನ್ ಜಾರಿಯಾಗಿದ್ದು ಇದೆ ರಂಜಾನ್ ತಿಂಗಳಿನಲ್ಲಿ. ಇಸ್ಲಾಮಿನ ಪ್ರಮುಖ ಆಧಾರ ಸ್ತಂಭಗಳು ಎನ್ನುವ ಪಂಚ ತತ್ವಗಳಲ್ಲಿ, ಎರಡು ಮೂಲತತ್ವಗಳಾದ ರೋಜ (ತಿಂಗಳ ಉಪವಾಸ) ಮತ್ತು ಝಖಾತ್( ಧಾರ್ಮಿಕ ತೆರಿಗೆ) ಈ ತಿಂಗಳನಲ್ಲಿ ಆಚರಿಸಲ್ಪಡುತ್ತದೆ.

ಉಪವಾಸ, ಪ್ರಾರ್ಥನೆ, ಇಫ್ತಾರ್ ಕೂಟಗಳು, ದಾನ ಧರ್ಮಗಳು, ಧಾರ್ಮಿಕ ಆಚರಣೆಗಳು ಈ ತಿಂಗಳ ವಿಶೇಷ, ಧಾರ್ಮಿಕ ಸಂಗತಿಗಳ ಜೊತೆ ಜೊತೆಗೆ ರಂಜಾನ್ ಸಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಕೂಡ ಬಿತ್ತರಿಸುತ್ತದೆ ಎಂಬ ಅಂಶವನ್ನು ಕೂಡ ಸೂಕ್ಷ್ಮವಾಗಿ ಅವಲೋಕಿಸಬೇಕಾಗಿದೆ.

ಧಾರ್ಮಿಕವಾಗಿ ರಂಜಾನ್ ಉಪವಾಸಗಳಿಗೆ ಪ್ರಸಿದ್ಧವಾದದ್ದು, ಸೂರ್ಯ ಉದಯಿಸುವ ಮುಂಚೆ ಅನ್ನಾಹಾರಗಳನ್ನು ಸೇವಿಸಿ, ಸೂರ್ಯೋದಯದ ನಂತರ ಸೂರ್ಯಸ್ತಮಾನ ಆಗುವವರೆಗೆ ಯಾವುದೇ ಆಹಾರಗಳನ್ನು ಸ್ವೀಕರಿಸದೆ, ದೇವರ ಪ್ರಾರ್ಥನೆ ಮಾಡುವ ಒಂದು ವ್ರತ ಎಂಬುದಾಗಿ ಪರಿಗಣಿಸಲಾಗಿದೆ. ಅನ್ನ, ಆಹಾರ, ನೀರನ್ನು ತ್ಯಜಿಸುವುದು ಅಷ್ಟೇ ರಂಜಾನಿನ ಉಪವಾಸದ ಅರ್ಥವಲ್ಲ, ಇದರ ಆಂತರ್ಯವನ್ನ ತಿಳಿಯುವ ಅವಶ್ಯಕತೆ ಇದೆ.

ರಂಜಾನ್ ಅನ್ನಾ, ಅಹಾರ, ನೀರು ಮುಂತಾದ ತನ್ನ ಎಲ್ಲಾ ಕಾಮನೆಗಳ ಮೇಲೆ, ಬಯಕೆಗಳ ಮೇಲೆ ನಿಯಂತ್ರಣವನ್ನು ಹೇರಿಕೊಂಡು ಸಮಾಜದಲ್ಲಿ ನಾಗರಿಕನಾಗಿ, ಅರೋಪಗಳಿಂದ ಮುಕ್ತನಾಗಿ, ಅಪರಾದಗಳಿಂದ ದೂರವಿದ್ದು ಇತರರಿಗೆ ಮಾದರಿಯಾಗುವಂತ ಜೀವನ ತನ್ನದಾಗಿಸಿಕೊಳ್ಳುವ ಹಲವಾರು ಸಾಮಾಜಿಕ, ನೈತಿಕ ಮೌಲ್ಯಗಳನ್ನು ಕಲಿಸಿಕೊಡುವ ತರಬೇತಿಯಾಗಿದೆ. ಈ ತರಬೇತಿಯಂತೆ ಉಳಿದ 11 ತಿಂಗಳುಗಳು ಜೀವನವನ್ನು ಸಾಗಿಸಿ ಪಾವಿತ್ರತೆಯನ್ನು ಕಾಪಾಡಿಕೊಳ್ಳುವುದು ಇದರ ಸಂದೇಶವಾಗಿದೆ.

ಮಹಮ್ಮದ್ ಪೈಗಂಬರವರ(ಸ.ಅ.ಸ) ಸಂದೇಶಗಳು ಕೂಡ ಇದೇ ಆಗಿದೆ. ಅವರೇ ಹೇಳುವ ಹಾಗೆ ಕೇವಲ ಅನ್ನಾಹಾರಗಳನ್ನು ತ್ಯಜಿಸಿ ಮಾಡುವ ಉಪವಾಸ ಯಾವುದೇ ಪ್ರತಿಫಲ ನೀಡದು. ಉಪವಾಸ ಅನ್ನಾಹಾರಗಳ ತ್ಯಜಿಸುವುದರ ಜೊತೆಗೆ ಬಾಯಿ, ಕಿವಿ, ಕಣ್ಣು, ಕೈಕಾಲು ಹೀಗೆ ತನ್ನ ಇಂದ್ರಿಯಗಳ ಮೇಲೆ ಸ್ವ ನಿಯಂತ್ರಣವನ್ನು ಸಾಧಿಸಿ, ಪ್ರೀತಿ ಕರುಣೆ ಸೌಹಾರ್ದತೆ ಭಾತೃತ್ವಗಳನ್ನ ಅಳವಡಿಸಿಕೊಂಡು, ಕೆಡಕುಗಳಿಂದ, ಕ್ರೌರ್ಯಗಳಿಂದ ದೂರವಿದ್ದು ಆಂತರಿಕವಾಗಿ ಸ್ವಚ್ಛ ಮಾಡಿಕೊಂಡು ದೇವರ ವಿಶೇಷ ಕೃಪೆಗೆ ಪಾತ್ರರಾಗಿ ಜೀವಮಾನ ಪೂರ್ತಿ ಇದರಂತೆ ಬದುಕು ಎಂಬ ಸಂದೇಶ ನೀಡಿದ್ದಾರೆ.

  • ಕಣ್ಣುಗಳು – ಕೆಟ್ಟ ವಸ್ತುಗಳನ್ನು ನೋಡದಂತೆ, ಕೆಟ್ಟ ದೃಷ್ಟಿಯನ್ನು ಬೀರದಂತೆ, ಪರರ ವಸ್ತುಗಳನ್ನು, ಪರರ ಸಂಪತ್ತನ್ನು ಕಬಳಿಸುವ ದೃಷ್ಟಿಯಿಂದ ನೋಡದಂತೆ ಕಣ್ಣುಗಳಿಗೂ ಉಪವಾಸ ಮಾಡಬೇಕು. ಕಣ್ಣುಗಳನ್ನ ಪವಿತ್ರ ಗೊಳಿಸಿಕೊಳ್ಳಬೇಕು.
  • ಕಿವಿಗಳು – ಕಿವಿಗಳು ಕೆಟ್ಟ ಮಾತುಗಳನ್ನು ಕೇಳಿಸಿಕೊಳ್ಳದಂತೆ, ಇತರ ಚಾಡಿ ಮಾತುಗಳಿಗೆ ಕಿವಿಗೊಡದಂತೆ, ಇತರರ ನಿಂದನೆಗಳಿಗೆ ಕಿವಿಗೊಡದಂತೆ ಕಿವಿಗಳನ್ನು ರಕ್ಷಿಸಿಕೊಳ್ಳಬೇಕು.
  • ಬಾಯಿ – ಸುಳ್ಳು ಹೇಳದಂತೆ, ಇತರರಿಗೆ ಕೆಟ್ಟ ಮಾತನಾಡದಂತೆ. ಸುಳ್ಳುಸುದ್ದಿ ಹಬ್ಬಿಸದಂತೆ. ಇತರರಿಗೆ ನಿಂದಿಸದಂತೆ, ತನ್ನ ಆಶ್ರಯದಲ್ಲಿ ಇರುವವರ ಮೇಲೆ ಕೋಪ ಮಾಡಿಕೊಂಡು ಏರು ಧ್ವನಿಯಲ್ಲಿ ಮಾತನಾಡಿದಂತೆ, ಮಧ್ಯಪಾನ ಮಾಡದಂತೆ, ನಿಷೇಧಿತ ಅಹಾರಗಳನ್ನು ಸೇವಿಸದಂತೆ , ದುರ್ಮಾರ್ಗದಿಂದ ಸಂಪಾದಿಸಿದ ಹಣದಿಂದ ಆಹಾರ ಪದಾರ್ಥಗಳನ್ನು ಖರೀದಿಸಿ ತಿನ್ನದಂತೆ, ಬಾಯಿಯನ್ನು ಶುಚಿಯಾಗಿರಿಸಿಕೊಳ್ಳಬೇಕು.
  • ಕೈಗಳು – ಇತರರ ವಸ್ತುಗಳನ್ನು ಕದಿಯದಂತೆ, ಇತರರ ವಸ್ತುಗಳನ್ನು ಮುಟ್ಟದಂತೆ, ದುರ್ಬಲರು, ಅಮಾಯಕರು ಮತ್ತು ನಿರ್ಗತಿಕರ ಮೇಲೆ ಕೈ ಮಾಡದಂತೆ, ತನ್ನ ಆಶ್ರಯದಲ್ಲಿದ್ದವರ ಮೇಲೆ ಕೈ ಮಾಡದಂತೆ, ಕೆಟ್ಟ ವಸ್ತುಗಳನ್ನು ಮುಟ್ಟದಂತೆ, ನಿರ್ಬಂಧಿತ ವಸ್ತುಗಳನ್ನು ಮುಟ್ಟದಂತೆ ಕೈಗಳನ್ನು ಪವಿತ್ರಗೊಳಿಸಿಕೊಳ್ಳಬೇಕು
  • ಕಾಲುಗಳು – ಕೆಟ್ಟ ಸ್ಥಳಗಳಿಗೆ ಹೋಗದಂತೆ, ನಿಷೇಧಿತ ಪ್ರದೇಶಗಳಿಗೆ ಹೋಗದಂತೆ (ಜೂಜು ಅಡ್ಡೆಗಳು, ಮದ್ಯದಂಗಡಿಗಳು ಮುಂತಾದವು) ಶುಚಿತ್ವ ಇರದ ಸ್ಥಳಗಳಿಗೆ ಹೋಗದಂತೆ ನಿರ್ಬಂಧಿಸಿಕೊಳ್ಳುವುದು.
  • ಮಾನಸಿಕವಾಗಿ – ಮಾನಸಿಕವಾಗಿ ತನ್ನ ಎಲ್ಲಾ ಕಾಮನೆಗಳ ಮೇಲೆ, ತನ್ನ ಬಯಕೆಗಳ ಮೇಲೆ, ತನ್ನ ಕೆಟ್ಟ ಆಲೋಚನೆಗಳ ಮೇಲೆ ನಿಯಂತ್ರಣವನ್ನು ಸಾಧಿಸುವುದು ಮತ್ತು ಇತರರಿಗೆ ಕೆಡುಕು ಮಾಡುವ ಆಲೋಚನೆಗಳಿಂದ, ಸಮಾಜಿಕ ಕೆಡಕುಗಳಾದ ಕೊಲೆ, ದರೋಡೆ, ಕಳ್ಳತನ, ಮೋಸ, ವಂಚನೆ ಮುಂತಾದವುಗಳಿಂದ ದೂರವಿರುವಂತೆ ತನಗೆ ತಾನು ಸ್ವನಿಯಂತ್ರಿಸಿಕೊಳ್ಳುವುದರ ಜೊತೆಗೆ
    ತಂದೆ, ತಾಯಿ, ಗುರು, ಹಿರಿಯರ ಬಗ್ಗೆ ಗೌರವ, ಚಿಕ್ಕವರ ಮೇಲೆ ಪ್ರೀತಿ, ದಯೆ, ಕರುಣೆ, ಸೌಹಾರ್ದತೆಯನ್ನು ಪಾಲಿಸಬೇಕು.
    ಉಪವಾಸ ಮನೆಯಲ್ಲಿ ಇದ್ದು ಅಥವಾ ಪೂರ್ಣ ದಿನ ಮಲಗಿ ಆಚರಿಸುವಂತದಲ್ಲ. ಉಪವಾಸವಿದ್ದು ತನ್ನ ದೈನಂದಿನ ಕೆಲಸ ಕಾರ್ಯಗಳಲ್ಲಿ ಭಾಗವಹಿಸಿ ದುಡಿಮೆ ಮಾಡುವುದರ ಜೊತೆಗೆ ಉಪವಾಸ ಆಚರಿಸಬೇಕು. ಇದರ ಮೂಲಕ ಹಸಿದವರ,ಬಡವ, ಶ್ರಮಿಕರ ಮತ್ತು ಕಾರ್ಮಿಕರ ನೋವುಗಳು ಅರಿವಾಗುತ್ತದೆ ಇದರಿಂದ ಅವರ ಬಗ್ಗೆ ಸಹಾನುಭೂತಿ ಬೆಳೆಯುತ್ತದೆ.
  • ಇಫ್ತಾರ್ – ಇಫ್ತಾರ್ ಆಚರಣೆಯ ಮೂಲಕ ಉಪವಾಸ ಕೊನೆಯಾಗುತ್ತದೆ. ಇಫ್ತಾರ್ ಕೂಟಗಳಲ್ಲಿ ಬಡವ ಶ್ರೀಮಂತ ನಿರ್ಗತಿಕ ಎಂಬ ಭೇದಭಾವ ಇಲ್ಲದೆ ಎಲ್ಲರೂ ಒಟ್ಟಾಗಿ, ಇರುವ ಆಹಾರಗಳನ್ನು ಹಂಚಿ ತಿಂದು ಎಲ್ಲರೂ ಒಂದೇ ಎಂಬ ಭಾವನೆ ಬೆಳೆಸಿಕೊಂಡು ಬದುಕುವುದನ್ನು ಕಲಿಸುತ್ತದೆ. ಜೀವನದಲ್ಲಿ ಬಡವ ಶ್ರೀಮಂತ ಎಂಬ ಭೇದ ಭಾವ ಮಾಡದೆ ಸಾಮಾಜಿಕ ಸಮಾನತೆಯಿಂದ ಬದುಕುವುದನ್ನು ಕಲಿಸುತ್ತದೆ.

ಈ ಮೇಲಿನಂತೆ ಅನ್ನ, ಆಹಾರ, ಕೈ- ಕಾಲು, ಬಾಯಿ, ಇಂದ್ರಿಯಗಳ ನಿಗ್ರಹ, ಎಲ್ಲಾ ರೀತಿಯ ಕಾಮನೆಗಳ ಮೇಲೆ ನಿಯಂತ್ರಣವನ್ನು ಸಾಧಿಸುವುದನ್ನ, ಸಮಾನತೆಯಿಂದ ಜೀವಿಸುವುದನ್ನ ಕಲಿಯುವುದು ರಂಜಾನ್ ಉಪವಾಸದ ತಿರುಳಾಗಿದೆ.

ಉಪವಾಸದಿಂದ ವಿನಾಯಿತಿ ವೃದ್ಧರು, ಚಿಕ್ಕ ಮಕ್ಕಳು, ಗರ್ಭಿಣಿ ಸ್ತ್ರೀಯರು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಉಪವಾಸ ಆಚರಣೆಯಿಂದ ವಿನಾಯಿತಿ ನೀಡಲಾಗಿದೆ.

  • ಝಕಾತ್ – ಇಸ್ಲಾಂ ಧರ್ಮದ ಮತ್ತೊಂದು ಪ್ರಮುಖ ಮೂಲ ತತ್ವವಾದ ಝಕಾತ್(ಧಾರ್ಮಿಕ ತೆರಿಗೆ) ಇದೇ ತಿಂಗಳಲ್ಲಿ ಪಾವತಿ ಆಗಬೇಕು . ಜಕಾತ್ ಎಂದರೆ ಸ್ಥಿತಿವಂತರು(85 ಗ್ರಾಂ ಗಿಂತಲೂ ಹೆಚ್ಚು ಚಿನ್ನ ಅಥವಾ ಅದಕ್ಕೆ ಸಮಾನವಾದ ಮೊತ್ತದ ಹಣ ಹೊಂದಿರುವವರು) ತಮ್ಮ ಆದಾಯದ ಶೇಕಡಾ 2.5 ಭಾಗವನ್ನು ತೆಗೆದು ಬಡವರಿಗೆ, ನಿರ್ಗತಿಕರಿಗೆ ಹಂಚುವುದು. ಬಟ್ಟೆಯ ರೂಪದಲ್ಲಿ, ಆಹಾರ ಧಾನ್ಯಗಳ ರೂಪದಲ್ಲಿ, ಹಣದ ರೂಪದಲ್ಲಿ ನೀಡಬಹುದು. ಇದರ ಷರತೇನೆಂದರೆ ಝಕಾತ್ ಅನ್ನು ತನ್ನ ವಾರಸುದಾರರಿಗೆ ನೀಡುವ ಹಾಗಿಲ್ಲ. ಮೊದಲು ತನ್ನ ಅಕ್ಕಪಕ್ಕದಲ್ಲಿರುವ ಬಡವರನ್ನ, ನಿರ್ಗತಿಕರನ್ನು ಗುರುತಿಸಿ ನೀಡಬೇಕು. ತನ್ನ ಅಕ್ಕಪಕ್ಕದಲ್ಲಿ ನಿರ್ಗತಿಕರು ಇಲ್ಲದಿದ್ದರೆ ತನ್ನ ಊರಿನಲ್ಲಿ ರಕ್ತಸಂಬಂಧದಲ್ಲಿ ಇರುವ ಬಡವರು, ನಿರ್ಗತಿಕರನ್ನು ಹುಡುಕಿ ನೀಡಬೇಕು, ಊರಿನಲ್ಲಿ ಇಂತಹ ರಕ್ತಸಂಬಂಧಿಗಳಲ್ಲಿ ಇಲ್ಲವಾದಲ್ಲಿ, ಊರಿನಲ್ಲಿರುವ ಬಡವರು, ನಿರ್ಗತಿಕರಿಗೆ ಹಂಚಬೇಕು ಇದು ಕಡ್ಡಾಯವಾಗಿ ಪಾಲಿಸಬೇಕು ಇಲ್ಲವಾದಲ್ಲಿ ರಂಜಾನ್ ತಿಂಗಳಿನಲ್ಲಿ ಆತ ಮಾಡಿದ ಉಪವಾಸ, ಪ್ರಾರ್ಥನೆಗಳು ಸ್ವೀಕೃತವಲ್ಲ.

ಇದು ಧಾರ್ಮಿಕ ಷರತ್ತಾಗಿದರೂ, ಇರುವವರು ಇಲ್ಲದವರೊಂದಿಗೆ ಹಂಚಿಕೊಳ್ಳುವ ಸಾಮರಸ್ಯ ಮತ್ತು ಸಹಾಯಮಾಡುವ ಗುಣವನ್ನು ವೃದ್ಧಿಸುತ್ತದೆ. ಉಳ್ಳವರು ಇಲ್ಲದೆ ಇರುವವರಿಗೆ ಆರ್ಥಿಕ ಸಹಾಯ ಮಾಡುವ ಗುಣವನ್ನು ಬೆಳೆಸುವ ಒಂದು ಪ್ರಯತ್ನದ ಭಾಗವಾಗಿದೆ. ಉಳ್ಳವರು ಇಲ್ಲದವರೊಂದಿಗೆ ಬಡವ ಶ್ರೀಮಂತ ಎಂಬ ಭೇದಭಾವ ಇಲ್ಲದೆ ಸಾಮರಸ್ಯದಿಂದ ಬದುಕುವ ಕಲೆಯನ್ನು ತಿಳಿಸುತ್ತದೆ, ಉಳ್ಳವರು ನಿರ್ಗತಿಕರನ್ನು, ಬಡವರನ್ನ ಅವರ ಮೇಲೆ ದರ್ಪ ತೋರದಂತೆ ಇಸ್ಲಾಂ ಧರ್ಮ ನಿಯಂತ್ರಿಸುತ್ತದೆ. ಇದು ಕೇವಲ ರಂಜಾನ್ ತಿಂಗಳಿನಲ್ಲಿ ಸೀಮಿತವಾಗಿರದೆ ಉಳಿದ ಅವಧಿಯಲ್ಲಿಯೂ ಬಡವರಿಗೆ ನಿರ್ಗತಿಕರಿಗೆ ಸಹಾಯ ಮಾಡಲು ತರಬೇತಿ ಗೊಳಿಸುತ್ತದೆ .

  • ಖುರಾನ್ – ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಖುರಾನ್ ರಂಜಾನ್ ತಿಂಗಳಿನಲ್ಲಿ ಅವತೀರ್ಣವಾಗಿದೆ ಎಂಬ ನಂಬಿಕೆ ಇದೆ. ಇದರಿಂದ ರಂಜಾನ್ ತಿಂಗಳ ಮೊದಲ ಉಪವಾಸದಿಂದ ಹಿಡಿದು ಕೊನೆಯ ಉಪವಾಸದವರಿಗೆ ಪ್ರತಿದಿನ ಖುರಾನ್ ಪಠಣ ಮಾಡಲಾಗುತ್ತದೆ. ಕುರಾನ್ ನಲ್ಲಿರುವ ತತ್ವಗಳನ್ನು ಕಲಿತು, ಅರಿತು, ಪಾಲಿಸುವ ಹಾಗೆ ಇದು ಮಾರ್ಗದರ್ಶನ ಮಾಡುತ್ತದೆ.

ಹೀಗೆ ರಂಜಾನ್ ಮುಸಲ್ಮಾನರಿಗೆ ಧಾರ್ಮಿಕವಾಗಿ ಅಲ್ಲದೆ ಸಾಮಾಜಿಕ ಮತ್ತು ನೈತಿಕ ತತ್ವಗಳ ಪಾಲಕರನ್ನಾಗಿ ಮಾಡುವ ತರಬೇತಿಗೊಳಿಸಿ, ಇನ್ನುಳಿದ ತಮ್ಮ ಮುಂದಿನ ದಿನಗಳಲ್ಲಿ ಇದೇ ರೀತಿ ಬದುಕುವ ಪಾಠ ಕಲಿಸುತ್ತದೆ. ಉಪಾಸಕರು ಈ ಮೌಲ್ಯಗಳನ್ನು ಅರಿತು ರೂಢಿಸಿಕೊಂಡು ಆದರ್ಶ ಜೀವನ ಕ್ರಮವನ್ನು ತಮ್ಮ ದಾಗಿಸಿಕೊಳ್ಳುವತ್ತ ಗಮನ ಹರಿಸಬೇಕು, ಆದ್ದರಿಂದ ರಂಜಾನ್ ವಿಶೇಷವಾದ ಸ್ಥಾನವನ್ನು ಪಡೆದಿದೆ.

(ಲೇಖಕರು ಪ್ರಾಧ್ಯಾಪಕರು, ಅಭಿಪ್ರಾಯಗಳು ಅವರ ವೈಯಕ್ತಿಕವಾದವುಗಳು)


ಇದನ್ನೂ ಓದಿ: ಹಿಂದೂ ಯುವಕನಿಗೆ ರಕ್ತದಾನ ಮಾಡಲು ರಂಜಾನ್ ವ್ರತ ಮುರಿದ ಮುಸ್ಲಿಂ ಮಹಿಳೆ.


ಪ್ರತಿದಿನದ ವಿಶೇಷ ಕಾರ್ಯಕ್ರಮ “ಸದ್ದು…ಈ ಸುದ್ದಿಗಳೇನಾಗಿದೆ” ನೋಡಲು ಇಲ್ಲಿ ಕ್ಲಿಕ್ ಮಾಡಿ.


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...