Homeಮುಖಪುಟ'ದೊರೆ ಸದಾ ಜೊತೆಗಿದ್ದಾರೆ ಎಂದೇ ಭಾವಿಸಿದ್ದೇನೆ' : ಭಗವಾನ್

‘ದೊರೆ ಸದಾ ಜೊತೆಗಿದ್ದಾರೆ ಎಂದೇ ಭಾವಿಸಿದ್ದೇನೆ’ : ಭಗವಾನ್

ಇಂದು ದೊರೆ ಅವರ ಜನ್ಮದಿನ. ತಮ್ಮ ಯಶಸ್ವೀ ಸಿನಿಮಾ ಪಯಣದುದ್ದಕ್ಕೂ ಜೊತೆಯಾಗಿದ್ದ ಆತ್ಮೀಯ ಸ್ನೇಹಿತನನ್ನು ಭಗವಾನ್ ಅವರು ಇಲ್ಲಿ ಸ್ಮರಿಸಿಕೊಂಡಿದ್ದಾರೆ.

- Advertisement -
- Advertisement -

ದೊರೆ – ಭಗವಾನ್, ಕನ್ನಡ ಚಿತ್ರರಂಗದ ಪ್ರಭಾವಿ ನಿರ್ದೇಶಕದ್ವಯರು. ಸದಭಿರುಚಿಯ ಮತ್ತು ಕಾದಂಬರಿ ಆಧರಿಸಿದ ಚಿತ್ರಗಳ ಟ್ರೆಂಡ್ ಭದ್ರಗೊಳಿಸಿದ ಖ್ಯಾತಿ ಇವರದು. ಇಂದು ದೊರೆ ಅವರ ಜನ್ಮದಿನ. ತಮ್ಮ ಯಶಸ್ವೀ ಸಿನಿಮಾ ಪಯಣದುದ್ದಕ್ಕೂ ಜೊತೆಯಾಗಿದ್ದ ಆತ್ಮೀಯ ಸ್ನೇಹಿತನನ್ನು ಭಗವಾನ್ ಅವರು ಇಲ್ಲಿ ಸ್ಮರಿಸಿಕೊಂಡಿದ್ದಾರೆ.

***

ನಿರೂಪಣೆ: ಶಶಿಧರ ಚಿತ್ರದುರ್ಗ

ದೊರೆ ರಾಜ್ ನನಗೆ ಪರಿಚಯವಾಗಿದ್ದು 1956ರಲ್ಲಿ. ಅವರು ಪರಿಚಯದ ನಂತರ ನನ್ನ ಸಿನಿಮಾ ಬದುಕಿಗೆ ಹೊಸ ದಿಕ್ಕು ಸಿಕ್ಕಿತು. ಅಲ್ಲಿಂದ ಮುಂದೆ ಸುಮಾರು ಐದು ದಶಕಗಳ ಕಾಲ ನಾವಿಬ್ಬರು ಆತ್ಮೀಯ ಸ್ನೇಹಿತರಾಗಿದ್ದೆವು. ಸಾಕಷ್ಟು ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದರೂ ಎಂದೂ ಇಬ್ಬರ ಮಧ್ಯೆ ಒಡಕು ಬಂದಿಲ್ಲ. ಮೂಲತಃ ಛಾಯಾಗ್ರಾಹಕರಾದ ಅವರಿಗೆ ಕ್ಯಾಮರಾ ಬಗ್ಗೆ ಉತ್ತಮ ಸೆನ್ಸ್ ಇತ್ತು. ಮಿತಭಾಷಿಯಾದ ಅವರಿಗೆ ಓದು ಪ್ರಮುಖ ಹವ್ಯಾಸ. ನಮ್ಮಿಬ್ಬರ ಮಧ್ಯೆ ಸೂಕ್ತ ಹೊಂದಾಣಿಕೆ ಇದ್ದುದರಿಂದಲೇ ನಮ್ಮಿಂದ ಉತ್ತಮ ಮತ್ತು ಯಶಸ್ವೀ ಚಿತ್ರಗಳನ್ನು ನೀಡಲು ಸಾಧ್ಯವಾಯ್ತು ಎಂದು ನಾನು ಭಾವಿಸುತ್ತೇನೆ. 2000ದಲ್ಲಿ ಅವರು ಅಗಲಿದರೂ ನನ್ನ ಭಾಗಕ್ಕೆ ಅವರು ಹೋಗಿಲ್ಲ. ಸದಾ ಜೊತೆಯಲ್ಲೇ ಇದ್ದಾರೆ.

ದೊರೆ ಮೂಲತಃ ಮೈಸೂರಿನವರು. ಅವರ ತಂದೆ ಬಾಬು ನಾಯ್ಡು ದೊಡ್ಡ ಚಿತ್ರಕಲಾವಿದ. ನಗರದ ಮಂಡಿ ಮೊಹಲ್ಲಾದಲ್ಲಿ ಅವರ ಮನೆ. ಗುಬ್ಬಿ ಕಂಪನಿ ಸೇರಿದಂತೆ ಹಲವು ಪ್ರಮುಖ ನಾಟಕ ಕಂಪನಿಗಳಿಗೆ ಅವರು ನಾಟಕದ ಪರದೆಗಳನ್ನು ಬರೆಯುತ್ತಿದ್ದರು. ಅಪ್ಪನ ಚಿತ್ರಕಲೆ ಪುತ್ರ ದೊರೆಗೂ ಬಂದಿತ್ತು. ಓದಿನ ಜೊತೆ ಚಿತ್ರಕಲೆಯಲ್ಲೂ ಅವರು ಪಳಗಿದ್ದರು. ಆರ್ಥಿಕ ಅನುಕೂಲತೆಗಳು ಇಲ್ಲದ್ದರಿಂದ ದೊರೆ ಇಂಟರ್‍ಮೀಡಿಯಟ್‍ಗೆ ಓದು ನಿಲ್ಲಿಸಿದರು. ಆಗ ಅದೇಕೆ ಅವರಿಗೆ ಹಾಗನ್ನಿಸಿತೋ, ಮೈಸೂರಿನಲ್ಲಿದ್ದ ನವಜ್ಯೋತಿ ಶೂಟಿಂಗ್ ಸ್ಟುಡಿಯೋದಲ್ಲಿ ಕೆಲಸ ಕೇಳಲೆಂದು ಹೋದರು. ಅದೃಷ್ಟಕ್ಕೆ ಅಲ್ಲಿ ಛಾಯಾಗ್ರಾಹಕ ಜಾನಕಿರಾಮ್ ತಮ್ಮ ಸಹಾಯಕನಾಗಿ ಕೆಲಸ ಮಾಡುವಂತೆ ದೊರೆ ಅವರಿಗೆ ಅವಕಾಶ ಕಲ್ಪಿಸಿದರು.

ಒಮ್ಮೆ ಪ್ರೇಮ್‍ನಜೀರ್ ಹೀರೋ ಆಗಿ ನಟಿಸುತ್ತಿದ್ದ ಮಲಯಾಳಂ ಚಿತ್ರಕ್ಕೆ ಜಾನಕಿರಾಮ್ ಅವರು ಛಾಯಾಗ್ರಾಹಕರಾಗಿ ಕೆಲಸ ಮಾಡಬೇಕಿತ್ತು. ಆಗ ಜಾನಕಿರಾಮ್ ಬೇರೆ ಚಿತ್ರದಲ್ಲಿ ಬ್ಯುಸಿಯಾಗಿದ್ದರು. ಆ ವೇಳೆಗಾಗಲೇ ಕ್ಯಾಮರಾ ಕಲೆಗಳನ್ನು ಅರಗಿಸಿಕೊಂಡಿದ್ದ ದೊರೆ ಅವರನ್ನು ಮಲಯಾಳಂ ಸಿನಿಮಾಗೆ ಕೆಲಸ ಮಾಡಲು ಕಳುಹಿಸಿಕೊಟ್ಟರು. ಅಲ್ಲಿಂದ ಮುಂದೆ ದೊರೆ ಸ್ವತಂತ್ರ್ಯ ಛಾಯಾಗ್ರಾಹಕನಾಗಿ ಗುರುತಿಸಿಕೊಂಡರು. ಮೈಸೂರಿನಲ್ಲಿ ನವಜ್ಯೋತಿ ಸ್ಟುಡಿಯೋದಲ್ಲಿ ಶೂಟಿಂಗ್ ಚಟುವಟಿಕೆಗಳು ಕಡಿಮೆಯಾಗುತ್ತಿದ್ದಂತೆ ದೊರೆ ಮದರಾಸಿಗೆ ತೆರಳಿದರು. ಕನ್ನಡದವರು ಎನ್ನುವ ಅಭಿಮಾನದಿಂದ ಜಿ.ವಿ.ಅಯ್ಯರ್ ತಮ್ಮ ‘ಸೋದರಿ’ ಚಿತ್ರದ ಛಾಯಾಗ್ರಹಣದ ಹೊಣೆಯನ್ನು ದೊರೆ ಹೆಗಲಿಗೆ ಹೊರಿಸಿದರು. ಈ ಚಿತ್ರದೊಂದಿಗೆ ದೊರೆಗೆ ರಾಜಕುಮಾರ್ ಅವರು ಆತ್ಮೀಯರಾದರು.

ದೊರೆ ಛಾಯಾಗ್ರಹಣ ಮಾಡುತ್ತಿದ್ದ ಚಿತ್ರಗಳಿಗೆ ನಾನು ಸಹ ನಿರ್ದೇಶಕನಾಗಿರುತ್ತಿದ್ದೆ. ಸಾಮಾನ್ಯವಾಗಿ ಚಿತ್ರದ ಛಾಯಾಗ್ರಾಹಕ ಮತ್ತು ಸಹನಿರ್ದೇಶಕನ ಮಧ್ಯೆ ಒಳ್ಳೆಯ ಒಡನಾಟ ಇರುತ್ತದೆ. ಅದರಲ್ಲೂ ನಮ್ಮಿಬ್ಬರ ಅಭಿರುಚಿ, ಹವ್ಯಾಸಗಳಲ್ಲೂ ಸಾಮ್ಯತೆಯಿತ್ತು. ಇಬ್ಬರೂ ಸಾಹಿತ್ಯಾಸಕ್ತರೇ. ಇದು ನಮ್ಮಿಬ್ಬರ ಬಾಂಧವ್ಯ ಹೆಚ್ಚಿಸಿತು. ‘ಸಂಧ್ಯಾರಾಗ’, ‘ರಾಜದುರ್ಗದ ರಹಸ್ಯ’ ಚಿತ್ರಗಳಿಗೆ ನಾನು ಸಹನಿರ್ದೇಶಕನಾದರೆ, ಅವರು ಛಾಯಾಗ್ರಾಹಕ. ಮುಂದೆ ಇಬ್ಬರೂ ಸೇರಿ ಏನಾದರೂ ಮಾಡಬೇಕು ಎಂದು ನಿರ್ಧರಿಸಿದೆವು.

ಶೂಟಿಂಗ್ ಇಲ್ಲದಿದ್ದಾಗ ಮದರಾಸಿನಲ್ಲಿ ನಾವಿಬ್ಬರೂ ಸಿನಿಮಾಗಳನ್ನು ವೀಕ್ಷಿಸಲು ಹೋಗುತ್ತಿದ್ದೆವು. ರಾಜಕುಮಾರ್ ಮತ್ತು ವರದಪ್ಪ ಇಬ್ಬರೂ ನಮಗೆ ಜೊತೆಯಾಗುತ್ತಿದ್ದರು. ಒಮ್ಮೆ ಶಾನ್ ಕಾನರಿ ನಟಿಸಿದ್ದ ‘ಡಾ.ನೋ’ ಬಾಂಡ್ ಸಿನಿಮಾ ನೋಡಿದೆವು. ಸಿನಿಮಾ ವೀಕ್ಷಣೆ ನಂತರ ವುಡ್‍ಲ್ಯಾಂಡ್ ಹೋಟೆಲ್‍ನಲ್ಲಿ ಮಸಾಲೆ ದೋಸೆ ತಿನ್ನುತ್ತಿದ್ದಾಗ, “ನಾವೇಕೆ ಕನ್ನಡದಲ್ಲಿ ರಾಜಕುಮಾರ್ ಅವರಿಗೆ ಬಾಂಡ್ ಸಿನಿಮಾ ಮಾಡಬಾರದು?” ಎಂದು ಪ್ರಸ್ತಾಪಿಸಿದೆವು. ರಾಜಕುಮಾರ್ ಜೋರಾಗಿ ನಗುತ್ತಾ, “ಇಂಗ್ಲಿಷ್ ಸಿನಿಮಾ ನೋಡಿ ಕನ್ನಡ ಸಿನಿಮಾ ಮಾಡೋಕೆ ಆಗುತ್ತದೆಯೇ? ಎಲ್ಲಾದರೂ ಸಾಧ್ಯವೇ?” ಎಂದರು. “ನೀವು ಹೂ ಅನ್ನಿ. ನಾವು ಮಾಡುತ್ತೀವಿ” ಎಂದು ಆತ್ಮವಿಶ್ವಾಸದಿಂದ ಹೇಳುತ್ತಿದ್ದಂತೆ ರಾಜ್ ಓಕೆ ಎಂದರು. ಆಗ ರೂಪುಗೊಂಡಿದ್ದೇ ‘ಜೇಡರ ಬಲೆ’ ಸಿನಿಮಾ.

ಫೋಟೋ ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ,”ಬಾಡದ ಹೂವು’ ಚಿತ್ರೀಕರಣ ಸಂದರ್ಭದಲ್ಲಿ…

ಮುಂದೆ ನಾನು ಮತ್ತು ದೊರೆ ಇಬ್ಬರೂ ಸಾಲು, ಸಾಲು ಚಿತ್ರಗಳನ್ನು ಮಾಡಿದೆವು. ರಾಜಕುಮಾರ್ ಅವರಿಗೇ ಹದಿನಾರು ಸಿನಿಮಾಗಳನ್ನು ಮಾಡಿದೆವು. ದೊರೆ ಅವರ ಬಗ್ಗೆ ರಾಜ್ ಅವರಿಗಂತೂ ವಿಶೇಷ ಅಭಿಮಾನ. ನಮ್ಮ ನಿರ್ದೇಶನದ ಚಿತ್ರವೆಂದರೆ ಅವರು ನಿರಾಳವಾಗಿರುತ್ತಿದ್ದರು. ನಮ್ಮಿಬ್ಬರ ನಿರ್ದೇಶನ, ನಿರ್ಮಾಣದಲ್ಲಿ ನಲವತ್ತು ಸಿನಿಮಾಗಳು ತಯಾರಾಗಿವೆ. ಯಾವುದೇ ಹಂತದಲ್ಲೂ ನಮ್ಮಿಬ್ಬರ ಮಧ್ಯೆ ಮನಸ್ತಾಪ ತಲೆದೋರಿಲ್ಲ. ಪ್ರತಿಯೊಂದು ವಿಚಾರದಲ್ಲಿಯೂ ಪರಸ್ಪರ ಸಲಹೆ, ಸೂಚನೆಗಳೊಂದಿಗೆ ಮುಂದುವರಿಯುತ್ತಿದ್ದೆವು. ಇದರಿಂದಾಗಿ ಒಳ್ಳೆಯ ಸಿನಿಮಾಗಳನ್ನು ಮಾಡಲು ಸಾಧ್ಯವಾಯ್ತು. ಅವರು ಈಗಲೂ ನನ್ನೊಂದಿಗಿದ್ದಾರೆ ಎಂದೇ ನಾನು ಭಾವಿಸಿದ್ದೇನೆ.

ದೊರೆ ಲವ್‍ಸ್ಟೋರಿ

ಎಚ್.ಎಲ್.ಎನ್.ಸಿಂಹ ನಿರ್ದೇಶನದ ’ಅಬ್ಬಾ ಆ ಹುಡುಗಿ’ (1959) ಸಿನಿಮಾ ತಯಾರಾಗುತ್ತಿದ್ದ ಸಂದರ್ಭ. ಮದ್ರಾಸ್‍ನ ವಾಹಿನಿ ಸ್ಟುಡಿಯೋದಲ್ಲಿ ಶೂಟಿಂಗ್ ನಡೆಯುತ್ತಿತ್ತು. ನಿರ್ದೇಶಕ ಸಿಂಹ ಅವರಿಗೆ ನಾನು ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದೆ. ದೊರೆರಾಜ್ ಚಿತ್ರದ ಕ್ಯಾಮರಾಮನ್. ಈ ಚಿತ್ರದೊಂದಿಗೆ ರಾಜಾಶಂಕರ್ ಮತ್ತು ಲೀಲಾಂಜಲಿ, ನಾಯಕ – ನಾಯಕಿಯಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಆಗಿನ್ನೂ ಛಾಯಾಗ್ರಾಹಣ ಮಾಡುತ್ತಿದ್ದ ದೊರೆ ತಮ್ಮದೇ ಆದ ವಿಶಿಷ್ಟ ಕ್ಯಾಮರಾ ತಂತ್ರಗಳಿಗೆ ಹೆಸರಾಗಿದ್ದರು. ಸ್ಪೆಷಲ್ ಲೈಟಿಂಗ್‍ನಲ್ಲಿ ಅವರು ಸೆರೆಹಿಡಿಯುತ್ತಿದ್ದ ಕ್ಲೋಸ್‍ಅಪ್ ಶಾಟ್‍ಗಳು ಗಮನ ಸೆಳೆಯುತ್ತಿದ್ದವು.

ಚಿತ್ರೀಕರಣ ಆರಂಭವಾಗಿ ಕೆಲವು ದಿನಗಳಾಗಿತ್ತಷ್ಟೆ. ಛಾಯಾಗ್ರಾಹಕ ದೊರೆ, ನೂತನ ನಟಿ ಲೀಲಾಂಜಲಿ ಅವರಲ್ಲಿ ಅನುರಕ್ತರಾಗಿದ್ದರು! ಆಗ ಅವರು ನಟಿಯ ಕ್ಲೋಸ್‍ಅಪ್ ಶಾಟ್‍ಗಳನ್ನು ತೆಗೆದದ್ದೇ ತೆಗೆದದ್ದು!  ನಟಿ ಲೀಲಾಂಜಲಿ ಅವರ ಮನೆ ಮದರಾಸಿನ ಪಟೇಲ್ ಸ್ಟ್ರೀಟ್‍ನಲ್ಲಿತ್ತು. ಸಂಜೆ ಶೂಟಿಂಗ್ ಮುಗಿಯುತ್ತಲೇ ದೊರೆ, ಪಟೇಲ್ ಸ್ಟ್ರೀಟ್‍ನತ್ತ ಹೆಜ್ಜೆ ಹಾಕುತ್ತಿದ್ದರು! ಒಂದಷ್ಟು ದಿನ ಈ ಒನ್‍ವೇ ಪ್ರೀತಿ ಹೀಗೇ ಮುಂದುವರೆಯಿತು. ಅದೊಂದು ದಿನ ದೊರೆ ಧೈರ್ಯ ಮಾಡಿ ಲೀಲಾಂಜಲಿ ಅವರಿಗೆ ತಮ್ಮ ಪ್ರೀತಿ ನಿವೇದಿಸಿಕೊಂಡರು. ಮೈಸೂರಿನ ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದವರು ಲೀಲಾಂಜಲಿ. ಅವರಿಗೆ ಕೂಡ ಸಿನಿಮಾದಲ್ಲಿ ಮುಂದುವರೆಯುವುದು ಇಷ್ಟವಿರಲಿಲ್ಲ. ಅಲ್ಲದೆ ದೊರೆಗೆ ಆಗ ಒಳ್ಳೆಯ ಹೆಸರಿತ್ತು. ಒಳ್ಳೆಯ ಘಳಿಗೆಯೊಂದರಲ್ಲಿ ದೊರೆ ಪ್ರೀತಿಯನ್ನು ಲೀಲಾಂಜಲಿ ಒಪ್ಪಿಕೊಂಡರು. ಹಾಗೆ, ಚಿತ್ರೀಕರಣ ಪೂರ್ಣಗೊಳ್ಳುವ ವೇಳೆಗೆ ದೊರೆ ಲವ್‍ಸ್ಟೋರಿಯೂ ಸುಖಾಂತ್ಯಗೊಂಡಿತು.

ಮುಂದೆ ಇವರಿಬ್ಬರಿಗೂ ಮದುವೆ ಮಾಡಿಸಬೇಕಾದ ಜವಾಬ್ದಾರಿ ನಮ್ಮ ಹೆಗಲೇರಿತು. ದೊರೆಗೆ ಮದುವೆ ಮಾಡಿಕೊಳ್ಳುವ ಧೈರ್ಯವೇನೋ ಇತ್ತು. ಆದರೆ ಹಣಕಾಸಿನ ಅನುಕೂಲತೆ ಇರಲಿಲ್ಲ. ಆಗ ನಮಗೆಲ್ಲಾ ಮಾರ್ಗದರ್ಶಕರಾಗಿದ್ದ ನಿರ್ದೇಶಕ ಜಿ.ವಿ.ಅಯ್ಯರ್ ನೆರವಿಗೆ ಧಾವಿಸಿದರು. ಅವರ ನೇತೃತ್ವದಲ್ಲಿ ತಿರುಪತಿಯಲ್ಲಿ ಮದುವೆ ಮಾಡಿಸುವುದೆಂದು ತೀರ್ಮಾನವಾಯ್ತು. ತಿರುಪತಿಯ ಛತ್ರದಲ್ಲಿ ಪುರೋಹಿತರ ಸಮಕ್ಷಮದೊಂದಿಗೆ ದೊರೆ – ಲೀಲಾಂಜಲಿ ವಿವಾಹ ನೆರವೇರಿತು. ’ಅಬ್ಬಾ ಆ ಹುಡುಗಿ’, ನಟಿ ಲೀಲಾಂಜಲಿ ಅವರ ಮೊದಲ ಮತ್ತು ಕಡೆಯ ಚಿತ್ರವಾಯ್ತು. ಮುಂದೆ ದೊರೆ-ಲೀಲಾಂಜಲಿ ಆದರ್ಶ ದಂಪತಿಯಾಗಿ ಬಾಳ್ವೆ ನಡೆಸಿದರು.


ಇದನ್ನೂ ಓದಿ: ಕನ್ನಡಿಗರು ಎಂದೂ ಮರೆಯದ ಡಾ.ರಾಜ್‌ ಅವರ ಟಾಪ್‌-5 ಚಿತ್ರಗಳು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...