HomeUncategorizedಸಾಮಾಜಿಕ ನೈತಿಕ ಮೌಲ್ಯಗಳ ದೃಷ್ಟಿಯಿಂದ ಪವಿತ್ರ ರಂಜಾನ್ ಮಾಸ

ಸಾಮಾಜಿಕ ನೈತಿಕ ಮೌಲ್ಯಗಳ ದೃಷ್ಟಿಯಿಂದ ಪವಿತ್ರ ರಂಜಾನ್ ಮಾಸ

- Advertisement -
- Advertisement -

ರಂಜಾನ್ ತಿಂಗಳು ಮುಸ್ಲಿಮರ ಅತ್ಯಂತ ಪವಿತ್ರ ಮಾಸವಾಗಿ ವಿಶೇಷವಾಗಿ ಗುರುತಿಸಿಕೊಳ್ಳುತ್ತದೆ. ಇದಕ್ಕೆ ಕಾರಣ, ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಖುರಾನ್ ಜಾರಿಯಾಗಿದ್ದು ಇದೆ ರಂಜಾನ್ ತಿಂಗಳಿನಲ್ಲಿ. ಇಸ್ಲಾಮಿನ ಪ್ರಮುಖ ಆಧಾರ ಸ್ತಂಭಗಳು ಎನ್ನುವ ಪಂಚ ತತ್ವಗಳಲ್ಲಿ, ಎರಡು ಮೂಲತತ್ವಗಳಾದ ರೋಜ (ತಿಂಗಳ ಉಪವಾಸ) ಮತ್ತು ಝಖಾತ್( ಧಾರ್ಮಿಕ ತೆರಿಗೆ) ಈ ತಿಂಗಳನಲ್ಲಿ ಆಚರಿಸಲ್ಪಡುತ್ತದೆ.

ಉಪವಾಸ, ಪ್ರಾರ್ಥನೆ, ಇಫ್ತಾರ್ ಕೂಟಗಳು, ದಾನ ಧರ್ಮಗಳು, ಧಾರ್ಮಿಕ ಆಚರಣೆಗಳು ಈ ತಿಂಗಳ ವಿಶೇಷ, ಧಾರ್ಮಿಕ ಸಂಗತಿಗಳ ಜೊತೆ ಜೊತೆಗೆ ರಂಜಾನ್ ಸಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಕೂಡ ಬಿತ್ತರಿಸುತ್ತದೆ ಎಂಬ ಅಂಶವನ್ನು ಕೂಡ ಸೂಕ್ಷ್ಮವಾಗಿ ಅವಲೋಕಿಸಬೇಕಾಗಿದೆ.

ಧಾರ್ಮಿಕವಾಗಿ ರಂಜಾನ್ ಉಪವಾಸಗಳಿಗೆ ಪ್ರಸಿದ್ಧವಾದದ್ದು, ಸೂರ್ಯ ಉದಯಿಸುವ ಮುಂಚೆ ಅನ್ನಾಹಾರಗಳನ್ನು ಸೇವಿಸಿ, ಸೂರ್ಯೋದಯದ ನಂತರ ಸೂರ್ಯಸ್ತಮಾನ ಆಗುವವರೆಗೆ ಯಾವುದೇ ಆಹಾರಗಳನ್ನು ಸ್ವೀಕರಿಸದೆ, ದೇವರ ಪ್ರಾರ್ಥನೆ ಮಾಡುವ ಒಂದು ವ್ರತ ಎಂಬುದಾಗಿ ಪರಿಗಣಿಸಲಾಗಿದೆ. ಅನ್ನ, ಆಹಾರ, ನೀರನ್ನು ತ್ಯಜಿಸುವುದು ಅಷ್ಟೇ ರಂಜಾನಿನ ಉಪವಾಸದ ಅರ್ಥವಲ್ಲ, ಇದರ ಆಂತರ್ಯವನ್ನ ತಿಳಿಯುವ ಅವಶ್ಯಕತೆ ಇದೆ.

ರಂಜಾನ್ ಅನ್ನಾ, ಅಹಾರ, ನೀರು ಮುಂತಾದ ತನ್ನ ಎಲ್ಲಾ ಕಾಮನೆಗಳ ಮೇಲೆ, ಬಯಕೆಗಳ ಮೇಲೆ ನಿಯಂತ್ರಣವನ್ನು ಹೇರಿಕೊಂಡು ಸಮಾಜದಲ್ಲಿ ನಾಗರಿಕನಾಗಿ, ಅರೋಪಗಳಿಂದ ಮುಕ್ತನಾಗಿ, ಅಪರಾದಗಳಿಂದ ದೂರವಿದ್ದು ಇತರರಿಗೆ ಮಾದರಿಯಾಗುವಂತ ಜೀವನ ತನ್ನದಾಗಿಸಿಕೊಳ್ಳುವ ಹಲವಾರು ಸಾಮಾಜಿಕ, ನೈತಿಕ ಮೌಲ್ಯಗಳನ್ನು ಕಲಿಸಿಕೊಡುವ ತರಬೇತಿಯಾಗಿದೆ. ಈ ತರಬೇತಿಯಂತೆ ಉಳಿದ 11 ತಿಂಗಳುಗಳು ಜೀವನವನ್ನು ಸಾಗಿಸಿ ಪಾವಿತ್ರತೆಯನ್ನು ಕಾಪಾಡಿಕೊಳ್ಳುವುದು ಇದರ ಸಂದೇಶವಾಗಿದೆ.

ಮಹಮ್ಮದ್ ಪೈಗಂಬರವರ(ಸ.ಅ.ಸ) ಸಂದೇಶಗಳು ಕೂಡ ಇದೇ ಆಗಿದೆ. ಅವರೇ ಹೇಳುವ ಹಾಗೆ ಕೇವಲ ಅನ್ನಾಹಾರಗಳನ್ನು ತ್ಯಜಿಸಿ ಮಾಡುವ ಉಪವಾಸ ಯಾವುದೇ ಪ್ರತಿಫಲ ನೀಡದು. ಉಪವಾಸ ಅನ್ನಾಹಾರಗಳ ತ್ಯಜಿಸುವುದರ ಜೊತೆಗೆ ಬಾಯಿ, ಕಿವಿ, ಕಣ್ಣು, ಕೈಕಾಲು ಹೀಗೆ ತನ್ನ ಇಂದ್ರಿಯಗಳ ಮೇಲೆ ಸ್ವ ನಿಯಂತ್ರಣವನ್ನು ಸಾಧಿಸಿ, ಪ್ರೀತಿ ಕರುಣೆ ಸೌಹಾರ್ದತೆ ಭಾತೃತ್ವಗಳನ್ನ ಅಳವಡಿಸಿಕೊಂಡು, ಕೆಡಕುಗಳಿಂದ, ಕ್ರೌರ್ಯಗಳಿಂದ ದೂರವಿದ್ದು ಆಂತರಿಕವಾಗಿ ಸ್ವಚ್ಛ ಮಾಡಿಕೊಂಡು ದೇವರ ವಿಶೇಷ ಕೃಪೆಗೆ ಪಾತ್ರರಾಗಿ ಜೀವಮಾನ ಪೂರ್ತಿ ಇದರಂತೆ ಬದುಕು ಎಂಬ ಸಂದೇಶ ನೀಡಿದ್ದಾರೆ.

  • ಕಣ್ಣುಗಳು – ಕೆಟ್ಟ ವಸ್ತುಗಳನ್ನು ನೋಡದಂತೆ, ಕೆಟ್ಟ ದೃಷ್ಟಿಯನ್ನು ಬೀರದಂತೆ, ಪರರ ವಸ್ತುಗಳನ್ನು, ಪರರ ಸಂಪತ್ತನ್ನು ಕಬಳಿಸುವ ದೃಷ್ಟಿಯಿಂದ ನೋಡದಂತೆ ಕಣ್ಣುಗಳಿಗೂ ಉಪವಾಸ ಮಾಡಬೇಕು. ಕಣ್ಣುಗಳನ್ನ ಪವಿತ್ರ ಗೊಳಿಸಿಕೊಳ್ಳಬೇಕು.
  • ಕಿವಿಗಳು – ಕಿವಿಗಳು ಕೆಟ್ಟ ಮಾತುಗಳನ್ನು ಕೇಳಿಸಿಕೊಳ್ಳದಂತೆ, ಇತರ ಚಾಡಿ ಮಾತುಗಳಿಗೆ ಕಿವಿಗೊಡದಂತೆ, ಇತರರ ನಿಂದನೆಗಳಿಗೆ ಕಿವಿಗೊಡದಂತೆ ಕಿವಿಗಳನ್ನು ರಕ್ಷಿಸಿಕೊಳ್ಳಬೇಕು.
  • ಬಾಯಿ – ಸುಳ್ಳು ಹೇಳದಂತೆ, ಇತರರಿಗೆ ಕೆಟ್ಟ ಮಾತನಾಡದಂತೆ. ಸುಳ್ಳುಸುದ್ದಿ ಹಬ್ಬಿಸದಂತೆ. ಇತರರಿಗೆ ನಿಂದಿಸದಂತೆ, ತನ್ನ ಆಶ್ರಯದಲ್ಲಿ ಇರುವವರ ಮೇಲೆ ಕೋಪ ಮಾಡಿಕೊಂಡು ಏರು ಧ್ವನಿಯಲ್ಲಿ ಮಾತನಾಡಿದಂತೆ, ಮಧ್ಯಪಾನ ಮಾಡದಂತೆ, ನಿಷೇಧಿತ ಅಹಾರಗಳನ್ನು ಸೇವಿಸದಂತೆ , ದುರ್ಮಾರ್ಗದಿಂದ ಸಂಪಾದಿಸಿದ ಹಣದಿಂದ ಆಹಾರ ಪದಾರ್ಥಗಳನ್ನು ಖರೀದಿಸಿ ತಿನ್ನದಂತೆ, ಬಾಯಿಯನ್ನು ಶುಚಿಯಾಗಿರಿಸಿಕೊಳ್ಳಬೇಕು.
  • ಕೈಗಳು – ಇತರರ ವಸ್ತುಗಳನ್ನು ಕದಿಯದಂತೆ, ಇತರರ ವಸ್ತುಗಳನ್ನು ಮುಟ್ಟದಂತೆ, ದುರ್ಬಲರು, ಅಮಾಯಕರು ಮತ್ತು ನಿರ್ಗತಿಕರ ಮೇಲೆ ಕೈ ಮಾಡದಂತೆ, ತನ್ನ ಆಶ್ರಯದಲ್ಲಿದ್ದವರ ಮೇಲೆ ಕೈ ಮಾಡದಂತೆ, ಕೆಟ್ಟ ವಸ್ತುಗಳನ್ನು ಮುಟ್ಟದಂತೆ, ನಿರ್ಬಂಧಿತ ವಸ್ತುಗಳನ್ನು ಮುಟ್ಟದಂತೆ ಕೈಗಳನ್ನು ಪವಿತ್ರಗೊಳಿಸಿಕೊಳ್ಳಬೇಕು
  • ಕಾಲುಗಳು – ಕೆಟ್ಟ ಸ್ಥಳಗಳಿಗೆ ಹೋಗದಂತೆ, ನಿಷೇಧಿತ ಪ್ರದೇಶಗಳಿಗೆ ಹೋಗದಂತೆ (ಜೂಜು ಅಡ್ಡೆಗಳು, ಮದ್ಯದಂಗಡಿಗಳು ಮುಂತಾದವು) ಶುಚಿತ್ವ ಇರದ ಸ್ಥಳಗಳಿಗೆ ಹೋಗದಂತೆ ನಿರ್ಬಂಧಿಸಿಕೊಳ್ಳುವುದು.
  • ಮಾನಸಿಕವಾಗಿ – ಮಾನಸಿಕವಾಗಿ ತನ್ನ ಎಲ್ಲಾ ಕಾಮನೆಗಳ ಮೇಲೆ, ತನ್ನ ಬಯಕೆಗಳ ಮೇಲೆ, ತನ್ನ ಕೆಟ್ಟ ಆಲೋಚನೆಗಳ ಮೇಲೆ ನಿಯಂತ್ರಣವನ್ನು ಸಾಧಿಸುವುದು ಮತ್ತು ಇತರರಿಗೆ ಕೆಡುಕು ಮಾಡುವ ಆಲೋಚನೆಗಳಿಂದ, ಸಮಾಜಿಕ ಕೆಡಕುಗಳಾದ ಕೊಲೆ, ದರೋಡೆ, ಕಳ್ಳತನ, ಮೋಸ, ವಂಚನೆ ಮುಂತಾದವುಗಳಿಂದ ದೂರವಿರುವಂತೆ ತನಗೆ ತಾನು ಸ್ವನಿಯಂತ್ರಿಸಿಕೊಳ್ಳುವುದರ ಜೊತೆಗೆ
    ತಂದೆ, ತಾಯಿ, ಗುರು, ಹಿರಿಯರ ಬಗ್ಗೆ ಗೌರವ, ಚಿಕ್ಕವರ ಮೇಲೆ ಪ್ರೀತಿ, ದಯೆ, ಕರುಣೆ, ಸೌಹಾರ್ದತೆಯನ್ನು ಪಾಲಿಸಬೇಕು.
    ಉಪವಾಸ ಮನೆಯಲ್ಲಿ ಇದ್ದು ಅಥವಾ ಪೂರ್ಣ ದಿನ ಮಲಗಿ ಆಚರಿಸುವಂತದಲ್ಲ. ಉಪವಾಸವಿದ್ದು ತನ್ನ ದೈನಂದಿನ ಕೆಲಸ ಕಾರ್ಯಗಳಲ್ಲಿ ಭಾಗವಹಿಸಿ ದುಡಿಮೆ ಮಾಡುವುದರ ಜೊತೆಗೆ ಉಪವಾಸ ಆಚರಿಸಬೇಕು. ಇದರ ಮೂಲಕ ಹಸಿದವರ,ಬಡವ, ಶ್ರಮಿಕರ ಮತ್ತು ಕಾರ್ಮಿಕರ ನೋವುಗಳು ಅರಿವಾಗುತ್ತದೆ ಇದರಿಂದ ಅವರ ಬಗ್ಗೆ ಸಹಾನುಭೂತಿ ಬೆಳೆಯುತ್ತದೆ.
  • ಇಫ್ತಾರ್ – ಇಫ್ತಾರ್ ಆಚರಣೆಯ ಮೂಲಕ ಉಪವಾಸ ಕೊನೆಯಾಗುತ್ತದೆ. ಇಫ್ತಾರ್ ಕೂಟಗಳಲ್ಲಿ ಬಡವ ಶ್ರೀಮಂತ ನಿರ್ಗತಿಕ ಎಂಬ ಭೇದಭಾವ ಇಲ್ಲದೆ ಎಲ್ಲರೂ ಒಟ್ಟಾಗಿ, ಇರುವ ಆಹಾರಗಳನ್ನು ಹಂಚಿ ತಿಂದು ಎಲ್ಲರೂ ಒಂದೇ ಎಂಬ ಭಾವನೆ ಬೆಳೆಸಿಕೊಂಡು ಬದುಕುವುದನ್ನು ಕಲಿಸುತ್ತದೆ. ಜೀವನದಲ್ಲಿ ಬಡವ ಶ್ರೀಮಂತ ಎಂಬ ಭೇದ ಭಾವ ಮಾಡದೆ ಸಾಮಾಜಿಕ ಸಮಾನತೆಯಿಂದ ಬದುಕುವುದನ್ನು ಕಲಿಸುತ್ತದೆ.

ಈ ಮೇಲಿನಂತೆ ಅನ್ನ, ಆಹಾರ, ಕೈ- ಕಾಲು, ಬಾಯಿ, ಇಂದ್ರಿಯಗಳ ನಿಗ್ರಹ, ಎಲ್ಲಾ ರೀತಿಯ ಕಾಮನೆಗಳ ಮೇಲೆ ನಿಯಂತ್ರಣವನ್ನು ಸಾಧಿಸುವುದನ್ನ, ಸಮಾನತೆಯಿಂದ ಜೀವಿಸುವುದನ್ನ ಕಲಿಯುವುದು ರಂಜಾನ್ ಉಪವಾಸದ ತಿರುಳಾಗಿದೆ.

ಉಪವಾಸದಿಂದ ವಿನಾಯಿತಿ ವೃದ್ಧರು, ಚಿಕ್ಕ ಮಕ್ಕಳು, ಗರ್ಭಿಣಿ ಸ್ತ್ರೀಯರು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಉಪವಾಸ ಆಚರಣೆಯಿಂದ ವಿನಾಯಿತಿ ನೀಡಲಾಗಿದೆ.

  • ಝಕಾತ್ – ಇಸ್ಲಾಂ ಧರ್ಮದ ಮತ್ತೊಂದು ಪ್ರಮುಖ ಮೂಲ ತತ್ವವಾದ ಝಕಾತ್(ಧಾರ್ಮಿಕ ತೆರಿಗೆ) ಇದೇ ತಿಂಗಳಲ್ಲಿ ಪಾವತಿ ಆಗಬೇಕು . ಜಕಾತ್ ಎಂದರೆ ಸ್ಥಿತಿವಂತರು(85 ಗ್ರಾಂ ಗಿಂತಲೂ ಹೆಚ್ಚು ಚಿನ್ನ ಅಥವಾ ಅದಕ್ಕೆ ಸಮಾನವಾದ ಮೊತ್ತದ ಹಣ ಹೊಂದಿರುವವರು) ತಮ್ಮ ಆದಾಯದ ಶೇಕಡಾ 2.5 ಭಾಗವನ್ನು ತೆಗೆದು ಬಡವರಿಗೆ, ನಿರ್ಗತಿಕರಿಗೆ ಹಂಚುವುದು. ಬಟ್ಟೆಯ ರೂಪದಲ್ಲಿ, ಆಹಾರ ಧಾನ್ಯಗಳ ರೂಪದಲ್ಲಿ, ಹಣದ ರೂಪದಲ್ಲಿ ನೀಡಬಹುದು. ಇದರ ಷರತೇನೆಂದರೆ ಝಕಾತ್ ಅನ್ನು ತನ್ನ ವಾರಸುದಾರರಿಗೆ ನೀಡುವ ಹಾಗಿಲ್ಲ. ಮೊದಲು ತನ್ನ ಅಕ್ಕಪಕ್ಕದಲ್ಲಿರುವ ಬಡವರನ್ನ, ನಿರ್ಗತಿಕರನ್ನು ಗುರುತಿಸಿ ನೀಡಬೇಕು. ತನ್ನ ಅಕ್ಕಪಕ್ಕದಲ್ಲಿ ನಿರ್ಗತಿಕರು ಇಲ್ಲದಿದ್ದರೆ ತನ್ನ ಊರಿನಲ್ಲಿ ರಕ್ತಸಂಬಂಧದಲ್ಲಿ ಇರುವ ಬಡವರು, ನಿರ್ಗತಿಕರನ್ನು ಹುಡುಕಿ ನೀಡಬೇಕು, ಊರಿನಲ್ಲಿ ಇಂತಹ ರಕ್ತಸಂಬಂಧಿಗಳಲ್ಲಿ ಇಲ್ಲವಾದಲ್ಲಿ, ಊರಿನಲ್ಲಿರುವ ಬಡವರು, ನಿರ್ಗತಿಕರಿಗೆ ಹಂಚಬೇಕು ಇದು ಕಡ್ಡಾಯವಾಗಿ ಪಾಲಿಸಬೇಕು ಇಲ್ಲವಾದಲ್ಲಿ ರಂಜಾನ್ ತಿಂಗಳಿನಲ್ಲಿ ಆತ ಮಾಡಿದ ಉಪವಾಸ, ಪ್ರಾರ್ಥನೆಗಳು ಸ್ವೀಕೃತವಲ್ಲ.

ಇದು ಧಾರ್ಮಿಕ ಷರತ್ತಾಗಿದರೂ, ಇರುವವರು ಇಲ್ಲದವರೊಂದಿಗೆ ಹಂಚಿಕೊಳ್ಳುವ ಸಾಮರಸ್ಯ ಮತ್ತು ಸಹಾಯಮಾಡುವ ಗುಣವನ್ನು ವೃದ್ಧಿಸುತ್ತದೆ. ಉಳ್ಳವರು ಇಲ್ಲದೆ ಇರುವವರಿಗೆ ಆರ್ಥಿಕ ಸಹಾಯ ಮಾಡುವ ಗುಣವನ್ನು ಬೆಳೆಸುವ ಒಂದು ಪ್ರಯತ್ನದ ಭಾಗವಾಗಿದೆ. ಉಳ್ಳವರು ಇಲ್ಲದವರೊಂದಿಗೆ ಬಡವ ಶ್ರೀಮಂತ ಎಂಬ ಭೇದಭಾವ ಇಲ್ಲದೆ ಸಾಮರಸ್ಯದಿಂದ ಬದುಕುವ ಕಲೆಯನ್ನು ತಿಳಿಸುತ್ತದೆ, ಉಳ್ಳವರು ನಿರ್ಗತಿಕರನ್ನು, ಬಡವರನ್ನ ಅವರ ಮೇಲೆ ದರ್ಪ ತೋರದಂತೆ ಇಸ್ಲಾಂ ಧರ್ಮ ನಿಯಂತ್ರಿಸುತ್ತದೆ. ಇದು ಕೇವಲ ರಂಜಾನ್ ತಿಂಗಳಿನಲ್ಲಿ ಸೀಮಿತವಾಗಿರದೆ ಉಳಿದ ಅವಧಿಯಲ್ಲಿಯೂ ಬಡವರಿಗೆ ನಿರ್ಗತಿಕರಿಗೆ ಸಹಾಯ ಮಾಡಲು ತರಬೇತಿ ಗೊಳಿಸುತ್ತದೆ .

  • ಖುರಾನ್ – ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಖುರಾನ್ ರಂಜಾನ್ ತಿಂಗಳಿನಲ್ಲಿ ಅವತೀರ್ಣವಾಗಿದೆ ಎಂಬ ನಂಬಿಕೆ ಇದೆ. ಇದರಿಂದ ರಂಜಾನ್ ತಿಂಗಳ ಮೊದಲ ಉಪವಾಸದಿಂದ ಹಿಡಿದು ಕೊನೆಯ ಉಪವಾಸದವರಿಗೆ ಪ್ರತಿದಿನ ಖುರಾನ್ ಪಠಣ ಮಾಡಲಾಗುತ್ತದೆ. ಕುರಾನ್ ನಲ್ಲಿರುವ ತತ್ವಗಳನ್ನು ಕಲಿತು, ಅರಿತು, ಪಾಲಿಸುವ ಹಾಗೆ ಇದು ಮಾರ್ಗದರ್ಶನ ಮಾಡುತ್ತದೆ.

ಹೀಗೆ ರಂಜಾನ್ ಮುಸಲ್ಮಾನರಿಗೆ ಧಾರ್ಮಿಕವಾಗಿ ಅಲ್ಲದೆ ಸಾಮಾಜಿಕ ಮತ್ತು ನೈತಿಕ ತತ್ವಗಳ ಪಾಲಕರನ್ನಾಗಿ ಮಾಡುವ ತರಬೇತಿಗೊಳಿಸಿ, ಇನ್ನುಳಿದ ತಮ್ಮ ಮುಂದಿನ ದಿನಗಳಲ್ಲಿ ಇದೇ ರೀತಿ ಬದುಕುವ ಪಾಠ ಕಲಿಸುತ್ತದೆ. ಉಪಾಸಕರು ಈ ಮೌಲ್ಯಗಳನ್ನು ಅರಿತು ರೂಢಿಸಿಕೊಂಡು ಆದರ್ಶ ಜೀವನ ಕ್ರಮವನ್ನು ತಮ್ಮ ದಾಗಿಸಿಕೊಳ್ಳುವತ್ತ ಗಮನ ಹರಿಸಬೇಕು, ಆದ್ದರಿಂದ ರಂಜಾನ್ ವಿಶೇಷವಾದ ಸ್ಥಾನವನ್ನು ಪಡೆದಿದೆ.

(ಲೇಖಕರು ಪ್ರಾಧ್ಯಾಪಕರು, ಅಭಿಪ್ರಾಯಗಳು ಅವರ ವೈಯಕ್ತಿಕವಾದವುಗಳು)


ಇದನ್ನೂ ಓದಿ: ಹಿಂದೂ ಯುವಕನಿಗೆ ರಕ್ತದಾನ ಮಾಡಲು ರಂಜಾನ್ ವ್ರತ ಮುರಿದ ಮುಸ್ಲಿಂ ಮಹಿಳೆ.


ಪ್ರತಿದಿನದ ವಿಶೇಷ ಕಾರ್ಯಕ್ರಮ “ಸದ್ದು…ಈ ಸುದ್ದಿಗಳೇನಾಗಿದೆ” ನೋಡಲು ಇಲ್ಲಿ ಕ್ಲಿಕ್ ಮಾಡಿ.


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....