Homeಅಂಕಣಗಳುಕೊರೋನೋತ್ತರ ಕಾಲ ಎಷ್ಟು ಭಿನ್ನವಾಗಿರಲಿದೆ?

ಕೊರೋನೋತ್ತರ ಕಾಲ ಎಷ್ಟು ಭಿನ್ನವಾಗಿರಲಿದೆ?

- Advertisement -
- Advertisement -

ಈಗ ಬದುಕಿರುವ ಯಾರ ನೆನಪಿನಲ್ಲೂ ಉಳಿದುಕೊಂಡಿರದ ರೀತಿಯ ವಿದ್ಯಮಾನದಲ್ಲಿ ನಾವೆಲ್ಲರೂ ಭಾಗಿಯಾಗಿದ್ದೇವೆ. ಇಡೀ ದುನಿಯಾ ತನ್ನ ಮಾಮೂಲಿನ ಅಭ್ಯಾಸಗಳನ್ನೆಲ್ಲಾ ಬದಿಗಿಟ್ಟಿದೆ. ಕಣ್ಣಿಗೆ ಕಾಣದ, ಆದರೆ ಇದೆಯೆಂದು ಲಕ್ಷಾಂತರ (ಇಂದಿಗೆ 2 ಲಕ್ಷ 18 ಸಾವಿರ) ಸಾವುಗಳ ಮೂಲಕ ಎಲ್ಲರಿಗೂ ಖಚಿತವಾಗಿಸಿರುವ ವೈರಸ್ ಒಂದು ಇಂತಹ ಬೆಳವಣಿಗೆಗೆ ಕಾರಣವಾಗಿದೆ. ಇದು ಎಲ್ಲೆಡೆ ಆವರಿಸುತ್ತಿದ್ದಂತೆ ಜನರು ಫಿಲಾಸಫಿಕಲ್ ಮಾತುಗಳನ್ನಾಡಲು ಆರಂಭಿಸಿದ್ದರು. ಪ್ರತಿನಿತ್ಯ ಸಾವಿರಾರು ಕಿ.ಮೀ.ಗಳನ್ನು ಪ್ರಯಾಣಿಸುತ್ತಿದ್ದವರು, ಗಿಜಿಗಿಜಿಗುಡುತ್ತಿದ್ದ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದವರು, ವೈಭವೋಪೇತವಾದ ಕಾರ್ಯಕ್ರಮಗಳಲ್ಲಿ ಸಾವಿರಾರು ಜನರನ್ನು ಸೇರಿಸಿ ಔತಣಕೂಟಗಳನ್ನು ಆಯೋಜಿಸುತ್ತಿದ್ದವರು, ಲಕ್ಷ ಲಕ್ಷ ಜನರನ್ನು ಸೇರಿಸಿ ರಾಜಕೀಯ ಕಾರ್ಯಕ್ರಮಗಳನ್ನು ಮಾಡುತ್ತಿದ್ದವರು ಅಥವಾ ಪ್ರತಿಭಟನೆಗಳನ್ನು ಸಂಘಟಿಸುತ್ತಿದ್ದವರು ಎಲ್ಲರೂ ಕೆಲವೇ ಜನರನ್ನು ನೋಡಿಕೊಂಡು ಕಾಲ ಹಾಕಬೇಕು ಮತ್ತು ಕೆಲವು ಕಿ.ಮೀ.ಗಳಾಚೆ ಪ್ರಯಾಣವನ್ನು ಮಾಡಬಾರದು. ಅಂದರೆ ಮನುಷ್ಯರು ಸಾಧಿಸಿದ ವೇಗ, ಬೆಳವಣಿಗೆ, ಗಳಿಸಿದ ಸಂಪತ್ತು ಎಲ್ಲವೂ ನಿರರ್ಥಕವೆನಿಸುವಂತಾಯಿತು.

ಖಂಡಾಂತರಗಳನ್ನು ದಾಟಿ ಹಬ್ಬಿದ ಸೋಂಕು ಮನುಷ್ಯರನ್ನು ಜನಾಂಗ, ಪ್ರದೇಶ, ಜಾತಿ, ಧರ್ಮ, ಲಿಂಗ ಯಾವುದನ್ನೂ ಪ್ರತ್ಯೇಕ ಮಾಡಿ ನೋಡಲಿಲ್ಲ. ಪರಸ್ಪರ ಎದುರಾಳಿಗಳಾಗಿ ನಿಂತಿರುವ ಚೀನಾ ಮತ್ತು ಅಮೆರಿಕಾಗಳೆರಡನ್ನೂ ದೊಡ್ಡ ಮಟ್ಟದಲ್ಲಿ ಬಾಧಿಸಿತು. ಮೊದಮೊದಲು ವಿಮಾನಗಳಲ್ಲಿ ಓಡಾಡಿದವರಿಗೆ ಮತ್ತು ಅವರ ಬಂಧುಬಾಂಧವರಿಗೆ ಹೆಚ್ಚು ಹತ್ತಿಕೊಂಡಿತಾದರೂ, ಅದೀಗ ಧಾರಾವಿಯಂತಹ ಸ್ಲಂಗಳನ್ನು ಆವರಿಸುತ್ತಿದೆ. ಶ್ರೀಮಂತರು ತಂದ ರೋಗವೆಂದು ಹಂಗಿಸಬಹುದಾದರೂ, ಕಿಷ್ಕಿಂಧೆಗಳಲ್ಲಿ ಬದುಕಬೇಕಾದ ಅನಿವಾರ್ಯತೆಯಿರುವವರನ್ನೇ ಹೆಚ್ಚು ಬಲಿ ತೆಗೆದುಕೊಳ್ಳಬಹುದೇ ಎಂಬ ಆತಂಕ ಕಾಡುತ್ತಿದೆ.

ಇದು ನಮ್ಮ ಇಂದಿನ ಬದುಕುವ ರೀತಿ, ಉಳ್ಳವರು ಅಭ್ಯಾಸ ಮಾಡಿಸಿದ ಬದುಕಿನ ನೀತಿಗಳ ಕಾರಣಕ್ಕೇ ಆವರಿಸುತ್ತಿದೆ ಎಂದು ಹೇಳಲು ಕಾರಣಗಳಿದ್ದವು. ಪಟ್ಟಣಗಳು, ಬೃಹತ್ ನಗರಗಳು, ಶ್ರೀಮಂತ ದೇಶಗಳನ್ನೇ ಇದುವರೆಗೆ ಹೆಚ್ಚು ಬಾಧಿಸಿವೆ. ಹಳ್ಳಿಗಳು, ಗುಡ್ಡಗಾಡುಗಳು ಈಗಲೂ ಅಷ್ಟು ತೊಂದರೆಗೊಳಗಾಗಿಲ್ಲ. ಹೀಗಾಗಿ ಮನುಷ್ಯರ ಲೋಭ, ಮೋಹ, ತೀರದ ದಾಹಗಳ ಕುರಿತಾಗಿ ಇವು ಪ್ರಶ್ನೆಗಳನ್ನೆತ್ತಬಹುದು; ವಿಶ್ವಮಾನವ ಪ್ರಜ್ಞೆಯೊಂದಿಗೆ ಸ್ಥಳೀಯವಾಗಿಯೇ ಬದುಕುವ ಉತ್ತರಗಳನ್ನೂ ಈಯಬಹುದು ಎಂದು ಭಾವಿಸುವ ರೀತಿಯಲ್ಲಿ ವಿಶ್ವವ್ಯಾಪಕವಾದ ಕೊರೊನಾ ಸೋಂಕು ಮೆದುಳಿಗೆ ಕೈ ಹಾಕಿತ್ತು.

ಆದರೆ, ನೋಡನೋಡುತ್ತಿದ್ದಂತೆ ಕೊರೋನಾ ಪೂರ್ವದಲ್ಲಿ ನಮ್ಮೊಳಗಿದ್ದ ಎಲ್ಲಾ ಹುಳುಕು-ಕೆಡುಕುಗಳು ಭುಗಿಲೆದ್ದವು. ಚೀನಾ ವಿರೋಧಕ್ಕೆ ಬಳಸಿಕೊಂಡಿದ್ದು, ಮುಸ್ಲಿಂ ದೂಷಣೆ ಮಾಡಿದ್ದು, ಬಡವರ ಬದುಕನ್ನು ನಿಕೃಷ್ಟವಾಗಿಸಿದ್ದು, ಮನೆಯಲ್ಲಿ ದುಡಿವ ಹೆಣ್ಣುಮಕ್ಕಳ ಬದುಕನ್ನು ಮತ್ತಷ್ಟು ಕಟುವಾಗಿಸಿದ್ದು, ಹಿಂದುಳಿದ ಪ್ರದೇಶಗಳು, ರಾಜ್ಯಗಳು ನಿರ್ಲಕ್ಷ್ಯಕ್ಕೊಳಗಾಗಿದ್ದು, ಹಳ್ಳಿಯಿಂದ ರೈಲು ಹತ್ತಿ ನಗರಮುಖಿಗಳಾಗಿದ್ದ ಶೋಷಿತ ಸಮುದಾಯಗಳು ಕಾಲ್ನಡಿಗೆಯಲ್ಲಿ ದಾರಿ ಸವೆಸಬೇಕಾಗಿದ್ದು ಎಲ್ಲವೂ ಕೊರೋನಾ ಪೂರ್ವದ ಸಮಾಜದ ನೀತಿಗನುಗುಣವಾಗಿಯೇ ಇದೆ. ಸೂಪರ್ ಪವರ್‍ಗಳು ಮತ್ತು ಸೂಪರ್ ಪವರ್‍ಗಳಾಗಬಯಸುವವರು ತಮ್ಮ ತಮ್ಮ ದಾಳಗಳನ್ನು ಉರುಳಿಸಿಯೇ ಬಿಟ್ಟರು; ತನ್ನ ಜನರನ್ನು ಸರ್ವಾಧಿಕಾರದ ಬಿಗಿಮುಷ್ಟಿಯಲ್ಲಿಟ್ಟಿರುವ ಚೀನಾ ಈಗಲೂ ಪ್ರಪಂಚದೆಲ್ಲೆಡೆ ತನ್ನ ಪಾರಮ್ಯ ಮೆರೆಯಲು ಪ್ರಯತ್ನಿಸುತ್ತಿದ್ದಂತಿದೆ; ಕಾಲ್ನಡಿಗೆಯಲ್ಲಿ ನೂರಾರು ಕಿ.ಮೀ. ನಡೆಯುತ್ತಿರುವವರ ಅಣ್ಣ ತಮ್ಮಂದಿರೇ ಮೋದಿಯೇ ವಿಶ್ವಗುರು ಎಂದು ಅಬ್ಬರಿಸುತ್ತಿದ್ದಾರೆ.

ಸುಳ್ಳು-ಅಪಪ್ರಚಾರಗಳು, ಸರ್ಕಾರದ ಸಾಂಕೇತಿಕ ಹೊಂದಾಣಿಕೆಗಳು, ದುಷ್ಟವಾಹಿನಿ ಮಾಧ್ಯಮಗಳ ಹಸೀ ಅವಾಂತರಗಳೆಲ್ಲವೂ ಇನ್ನಷ್ಟು ಬಲಪಡೆದುಕೊಂಡಿವೆ.

ಇದರ ಮಧ್ಯೆಯೇ ಅದೆಷ್ಟೋ ಜನರು ನೊಂದವರಿಗೆ ಸಹಾಯ ಮಾಡಲೂ ಮುಂದಾಗುತ್ತಿದ್ದಾರೆ. ಈ ಹೊತ್ತು ಯಾವ ರೀತಿ ಆಂದೋಲನ ಕಟ್ಟಬಹುದು ಗೊತ್ತಾಗದೇ ಎಲ್ಲಾ ಹೋರಾಟಗಾರರು ಸಾಂಕೇತಿಕ ಕಾರ್ಯಕ್ರಮಗಳನ್ನು ಆನ್‍ಲೈನ್‍ನಲ್ಲಿ ಮಾಡಿಕೊಂಡು ಬಹಳ ಬ್ಯುಸಿಯಾಗಿದ್ದಂತಿದೆ.

ಇವೆಲ್ಲದರ ಮಧ್ಯೆ ಹೊಸತನ, ಹೊಸ ನೀತಿ, ಹೊಸ ಮೌಲ್ಯಗಳು ಚಿಗುರಬಹುದೇ? ಕೊರೋನೋತ್ತರ ಜಗತ್ತಿನಲ್ಲಿ ಏನೇ ಪರಿಮಾಣಾತ್ಮಕ ಬದಲಾವಣೆ ಬಂದರೂ ಹಳೆಯ ಜೀವ ವಿರೋಧಿ ಮೌಲ್ಯಗಳು ಕೊಳೆತು ನಾಶವಾಗಬಲ್ಲುದೇ? ಇಲ್ಲಿಯವರೆಗಿನ ಬೆಳವಣಿಗೆಗಳು ಅಂತಹ ಭರವಸೆಯನ್ನೇನೂ ಮೂಡಿಸುತ್ತಿಲ್ಲ. ಹೊಸದೇ ಆದ ಶಕ್ತಿಯೊಂದು ಇದರ ಮಧ್ಯೆಯೇ ಉದ್ಭವಿಸಿ, ತಲ್ಲಣ ತರದ ಹೊರತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Demonetisation ಆದಾಗ, ಕೆಲಸ ಕಳೆದುಕೊಂಡ ಹೆಚ್ಚಿನ ಮಂದಿ ಇಂದು ನಡೆದು ತಮ್ಮೂರತ್ತ ತೆರಳುತ್ತಿದ್ದಾರೆ.ಇದಕ್ಕೆ ಎಡೆಮಾಡಿದ ಮೋದಿ ವಿ.ಗುರು!
    ಹಿಂದೆ ಆಳ್ವಿಕೆ ಮಾಡಿದವರು ಹೇಗೆ ಮಂದಿಯನ್ನು ಕಂಗೆಡಿಸಿರಬಹುದು‌.
    ಇದಕ್ಕೆಲ್ಲಾ ಮೀಡಿಯಾಗಳನ್ನು ಗುರಿಮಾಡಬೇಕಾ!!!

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...