Homeಅಂಕಣಗಳುಕೊರೋನೋತ್ತರ ಕಾಲ ಎಷ್ಟು ಭಿನ್ನವಾಗಿರಲಿದೆ?

ಕೊರೋನೋತ್ತರ ಕಾಲ ಎಷ್ಟು ಭಿನ್ನವಾಗಿರಲಿದೆ?

- Advertisement -
- Advertisement -

ಈಗ ಬದುಕಿರುವ ಯಾರ ನೆನಪಿನಲ್ಲೂ ಉಳಿದುಕೊಂಡಿರದ ರೀತಿಯ ವಿದ್ಯಮಾನದಲ್ಲಿ ನಾವೆಲ್ಲರೂ ಭಾಗಿಯಾಗಿದ್ದೇವೆ. ಇಡೀ ದುನಿಯಾ ತನ್ನ ಮಾಮೂಲಿನ ಅಭ್ಯಾಸಗಳನ್ನೆಲ್ಲಾ ಬದಿಗಿಟ್ಟಿದೆ. ಕಣ್ಣಿಗೆ ಕಾಣದ, ಆದರೆ ಇದೆಯೆಂದು ಲಕ್ಷಾಂತರ (ಇಂದಿಗೆ 2 ಲಕ್ಷ 18 ಸಾವಿರ) ಸಾವುಗಳ ಮೂಲಕ ಎಲ್ಲರಿಗೂ ಖಚಿತವಾಗಿಸಿರುವ ವೈರಸ್ ಒಂದು ಇಂತಹ ಬೆಳವಣಿಗೆಗೆ ಕಾರಣವಾಗಿದೆ. ಇದು ಎಲ್ಲೆಡೆ ಆವರಿಸುತ್ತಿದ್ದಂತೆ ಜನರು ಫಿಲಾಸಫಿಕಲ್ ಮಾತುಗಳನ್ನಾಡಲು ಆರಂಭಿಸಿದ್ದರು. ಪ್ರತಿನಿತ್ಯ ಸಾವಿರಾರು ಕಿ.ಮೀ.ಗಳನ್ನು ಪ್ರಯಾಣಿಸುತ್ತಿದ್ದವರು, ಗಿಜಿಗಿಜಿಗುಡುತ್ತಿದ್ದ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದವರು, ವೈಭವೋಪೇತವಾದ ಕಾರ್ಯಕ್ರಮಗಳಲ್ಲಿ ಸಾವಿರಾರು ಜನರನ್ನು ಸೇರಿಸಿ ಔತಣಕೂಟಗಳನ್ನು ಆಯೋಜಿಸುತ್ತಿದ್ದವರು, ಲಕ್ಷ ಲಕ್ಷ ಜನರನ್ನು ಸೇರಿಸಿ ರಾಜಕೀಯ ಕಾರ್ಯಕ್ರಮಗಳನ್ನು ಮಾಡುತ್ತಿದ್ದವರು ಅಥವಾ ಪ್ರತಿಭಟನೆಗಳನ್ನು ಸಂಘಟಿಸುತ್ತಿದ್ದವರು ಎಲ್ಲರೂ ಕೆಲವೇ ಜನರನ್ನು ನೋಡಿಕೊಂಡು ಕಾಲ ಹಾಕಬೇಕು ಮತ್ತು ಕೆಲವು ಕಿ.ಮೀ.ಗಳಾಚೆ ಪ್ರಯಾಣವನ್ನು ಮಾಡಬಾರದು. ಅಂದರೆ ಮನುಷ್ಯರು ಸಾಧಿಸಿದ ವೇಗ, ಬೆಳವಣಿಗೆ, ಗಳಿಸಿದ ಸಂಪತ್ತು ಎಲ್ಲವೂ ನಿರರ್ಥಕವೆನಿಸುವಂತಾಯಿತು.

ಖಂಡಾಂತರಗಳನ್ನು ದಾಟಿ ಹಬ್ಬಿದ ಸೋಂಕು ಮನುಷ್ಯರನ್ನು ಜನಾಂಗ, ಪ್ರದೇಶ, ಜಾತಿ, ಧರ್ಮ, ಲಿಂಗ ಯಾವುದನ್ನೂ ಪ್ರತ್ಯೇಕ ಮಾಡಿ ನೋಡಲಿಲ್ಲ. ಪರಸ್ಪರ ಎದುರಾಳಿಗಳಾಗಿ ನಿಂತಿರುವ ಚೀನಾ ಮತ್ತು ಅಮೆರಿಕಾಗಳೆರಡನ್ನೂ ದೊಡ್ಡ ಮಟ್ಟದಲ್ಲಿ ಬಾಧಿಸಿತು. ಮೊದಮೊದಲು ವಿಮಾನಗಳಲ್ಲಿ ಓಡಾಡಿದವರಿಗೆ ಮತ್ತು ಅವರ ಬಂಧುಬಾಂಧವರಿಗೆ ಹೆಚ್ಚು ಹತ್ತಿಕೊಂಡಿತಾದರೂ, ಅದೀಗ ಧಾರಾವಿಯಂತಹ ಸ್ಲಂಗಳನ್ನು ಆವರಿಸುತ್ತಿದೆ. ಶ್ರೀಮಂತರು ತಂದ ರೋಗವೆಂದು ಹಂಗಿಸಬಹುದಾದರೂ, ಕಿಷ್ಕಿಂಧೆಗಳಲ್ಲಿ ಬದುಕಬೇಕಾದ ಅನಿವಾರ್ಯತೆಯಿರುವವರನ್ನೇ ಹೆಚ್ಚು ಬಲಿ ತೆಗೆದುಕೊಳ್ಳಬಹುದೇ ಎಂಬ ಆತಂಕ ಕಾಡುತ್ತಿದೆ.

ಇದು ನಮ್ಮ ಇಂದಿನ ಬದುಕುವ ರೀತಿ, ಉಳ್ಳವರು ಅಭ್ಯಾಸ ಮಾಡಿಸಿದ ಬದುಕಿನ ನೀತಿಗಳ ಕಾರಣಕ್ಕೇ ಆವರಿಸುತ್ತಿದೆ ಎಂದು ಹೇಳಲು ಕಾರಣಗಳಿದ್ದವು. ಪಟ್ಟಣಗಳು, ಬೃಹತ್ ನಗರಗಳು, ಶ್ರೀಮಂತ ದೇಶಗಳನ್ನೇ ಇದುವರೆಗೆ ಹೆಚ್ಚು ಬಾಧಿಸಿವೆ. ಹಳ್ಳಿಗಳು, ಗುಡ್ಡಗಾಡುಗಳು ಈಗಲೂ ಅಷ್ಟು ತೊಂದರೆಗೊಳಗಾಗಿಲ್ಲ. ಹೀಗಾಗಿ ಮನುಷ್ಯರ ಲೋಭ, ಮೋಹ, ತೀರದ ದಾಹಗಳ ಕುರಿತಾಗಿ ಇವು ಪ್ರಶ್ನೆಗಳನ್ನೆತ್ತಬಹುದು; ವಿಶ್ವಮಾನವ ಪ್ರಜ್ಞೆಯೊಂದಿಗೆ ಸ್ಥಳೀಯವಾಗಿಯೇ ಬದುಕುವ ಉತ್ತರಗಳನ್ನೂ ಈಯಬಹುದು ಎಂದು ಭಾವಿಸುವ ರೀತಿಯಲ್ಲಿ ವಿಶ್ವವ್ಯಾಪಕವಾದ ಕೊರೊನಾ ಸೋಂಕು ಮೆದುಳಿಗೆ ಕೈ ಹಾಕಿತ್ತು.

ಆದರೆ, ನೋಡನೋಡುತ್ತಿದ್ದಂತೆ ಕೊರೋನಾ ಪೂರ್ವದಲ್ಲಿ ನಮ್ಮೊಳಗಿದ್ದ ಎಲ್ಲಾ ಹುಳುಕು-ಕೆಡುಕುಗಳು ಭುಗಿಲೆದ್ದವು. ಚೀನಾ ವಿರೋಧಕ್ಕೆ ಬಳಸಿಕೊಂಡಿದ್ದು, ಮುಸ್ಲಿಂ ದೂಷಣೆ ಮಾಡಿದ್ದು, ಬಡವರ ಬದುಕನ್ನು ನಿಕೃಷ್ಟವಾಗಿಸಿದ್ದು, ಮನೆಯಲ್ಲಿ ದುಡಿವ ಹೆಣ್ಣುಮಕ್ಕಳ ಬದುಕನ್ನು ಮತ್ತಷ್ಟು ಕಟುವಾಗಿಸಿದ್ದು, ಹಿಂದುಳಿದ ಪ್ರದೇಶಗಳು, ರಾಜ್ಯಗಳು ನಿರ್ಲಕ್ಷ್ಯಕ್ಕೊಳಗಾಗಿದ್ದು, ಹಳ್ಳಿಯಿಂದ ರೈಲು ಹತ್ತಿ ನಗರಮುಖಿಗಳಾಗಿದ್ದ ಶೋಷಿತ ಸಮುದಾಯಗಳು ಕಾಲ್ನಡಿಗೆಯಲ್ಲಿ ದಾರಿ ಸವೆಸಬೇಕಾಗಿದ್ದು ಎಲ್ಲವೂ ಕೊರೋನಾ ಪೂರ್ವದ ಸಮಾಜದ ನೀತಿಗನುಗುಣವಾಗಿಯೇ ಇದೆ. ಸೂಪರ್ ಪವರ್‍ಗಳು ಮತ್ತು ಸೂಪರ್ ಪವರ್‍ಗಳಾಗಬಯಸುವವರು ತಮ್ಮ ತಮ್ಮ ದಾಳಗಳನ್ನು ಉರುಳಿಸಿಯೇ ಬಿಟ್ಟರು; ತನ್ನ ಜನರನ್ನು ಸರ್ವಾಧಿಕಾರದ ಬಿಗಿಮುಷ್ಟಿಯಲ್ಲಿಟ್ಟಿರುವ ಚೀನಾ ಈಗಲೂ ಪ್ರಪಂಚದೆಲ್ಲೆಡೆ ತನ್ನ ಪಾರಮ್ಯ ಮೆರೆಯಲು ಪ್ರಯತ್ನಿಸುತ್ತಿದ್ದಂತಿದೆ; ಕಾಲ್ನಡಿಗೆಯಲ್ಲಿ ನೂರಾರು ಕಿ.ಮೀ. ನಡೆಯುತ್ತಿರುವವರ ಅಣ್ಣ ತಮ್ಮಂದಿರೇ ಮೋದಿಯೇ ವಿಶ್ವಗುರು ಎಂದು ಅಬ್ಬರಿಸುತ್ತಿದ್ದಾರೆ.

ಸುಳ್ಳು-ಅಪಪ್ರಚಾರಗಳು, ಸರ್ಕಾರದ ಸಾಂಕೇತಿಕ ಹೊಂದಾಣಿಕೆಗಳು, ದುಷ್ಟವಾಹಿನಿ ಮಾಧ್ಯಮಗಳ ಹಸೀ ಅವಾಂತರಗಳೆಲ್ಲವೂ ಇನ್ನಷ್ಟು ಬಲಪಡೆದುಕೊಂಡಿವೆ.

ಇದರ ಮಧ್ಯೆಯೇ ಅದೆಷ್ಟೋ ಜನರು ನೊಂದವರಿಗೆ ಸಹಾಯ ಮಾಡಲೂ ಮುಂದಾಗುತ್ತಿದ್ದಾರೆ. ಈ ಹೊತ್ತು ಯಾವ ರೀತಿ ಆಂದೋಲನ ಕಟ್ಟಬಹುದು ಗೊತ್ತಾಗದೇ ಎಲ್ಲಾ ಹೋರಾಟಗಾರರು ಸಾಂಕೇತಿಕ ಕಾರ್ಯಕ್ರಮಗಳನ್ನು ಆನ್‍ಲೈನ್‍ನಲ್ಲಿ ಮಾಡಿಕೊಂಡು ಬಹಳ ಬ್ಯುಸಿಯಾಗಿದ್ದಂತಿದೆ.

ಇವೆಲ್ಲದರ ಮಧ್ಯೆ ಹೊಸತನ, ಹೊಸ ನೀತಿ, ಹೊಸ ಮೌಲ್ಯಗಳು ಚಿಗುರಬಹುದೇ? ಕೊರೋನೋತ್ತರ ಜಗತ್ತಿನಲ್ಲಿ ಏನೇ ಪರಿಮಾಣಾತ್ಮಕ ಬದಲಾವಣೆ ಬಂದರೂ ಹಳೆಯ ಜೀವ ವಿರೋಧಿ ಮೌಲ್ಯಗಳು ಕೊಳೆತು ನಾಶವಾಗಬಲ್ಲುದೇ? ಇಲ್ಲಿಯವರೆಗಿನ ಬೆಳವಣಿಗೆಗಳು ಅಂತಹ ಭರವಸೆಯನ್ನೇನೂ ಮೂಡಿಸುತ್ತಿಲ್ಲ. ಹೊಸದೇ ಆದ ಶಕ್ತಿಯೊಂದು ಇದರ ಮಧ್ಯೆಯೇ ಉದ್ಭವಿಸಿ, ತಲ್ಲಣ ತರದ ಹೊರತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Demonetisation ಆದಾಗ, ಕೆಲಸ ಕಳೆದುಕೊಂಡ ಹೆಚ್ಚಿನ ಮಂದಿ ಇಂದು ನಡೆದು ತಮ್ಮೂರತ್ತ ತೆರಳುತ್ತಿದ್ದಾರೆ.ಇದಕ್ಕೆ ಎಡೆಮಾಡಿದ ಮೋದಿ ವಿ.ಗುರು!
    ಹಿಂದೆ ಆಳ್ವಿಕೆ ಮಾಡಿದವರು ಹೇಗೆ ಮಂದಿಯನ್ನು ಕಂಗೆಡಿಸಿರಬಹುದು‌.
    ಇದಕ್ಕೆಲ್ಲಾ ಮೀಡಿಯಾಗಳನ್ನು ಗುರಿಮಾಡಬೇಕಾ!!!

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...