Homeಮುಖಪುಟನಾನು ಪೌರವಾಣಿ ಪತ್ರಿಕೆಯ ಸಂಪಾದಕನಾಗಿದ್ದು ಹೇಗೆ? ದೊರೆಸ್ವಾಮಿಯವರ ನೆನಪುಗಳು...

ನಾನು ಪೌರವಾಣಿ ಪತ್ರಿಕೆಯ ಸಂಪಾದಕನಾಗಿದ್ದು ಹೇಗೆ? ದೊರೆಸ್ವಾಮಿಯವರ ನೆನಪುಗಳು…

38 ದಿನಗಳ ಕಳಪೆ ಸಂಪಾದಕ ಎಂದು ದೊರೆಸ್ವಾಮಿಯವರನ್ನು ಹಂಗಿಸಿದ್ದಕ್ಕೆ ಅವರು ಕೊಟ್ಟ ಉತ್ತರ ಇಲ್ಲಿದೆ.

- Advertisement -
- Advertisement -

ಬಾಬು ಕೃಷ್ಣಮೂರ್ತಿಯವರು ಪತ್ರಕರ್ತರು, ಬರಹಗಾರರು, ಒಳ್ಳೆಯ ಚಾರಿತ್ರಿಕ ಪುಸ್ತಕಗಳನ್ನು ಬರೆದಿದ್ದಾರೆ. ನನಗೆ ಅವರಲ್ಲಿ ಇಂದಿಗೂ ಪ್ರೀತಿ ಇದೆ. ಬಾಬು ಕೃಷ್ಣಮೂರ್ತಿಯವರನ್ನು ಅವರು ಮಗುವಾಗಿದ್ದಾಗಿನಿಂದಲು ಬಲ್ಲೆ. ಅವರ ತಾಯಿ ಸೀತಮ್ಮ, ತಂದೆ ಶಾಸ್ತ್ರಿ ಆಯುರ್ವೇದ ಪಂಡಿತರು. ಸೀತಮ್ಮನವರು ನಿಧನರಾಗುವುದಕ್ಕೆ­ ಮೊದಲು ನಾನು ಅವರನ್ನು ಭಾರತಿ ನರ್ಸಿಂಗ್ ಹೋಂಗೆ ಹೋಗಿ ಮಾತನಾಡಿಸಿಕೊಂಡು ಬಂದಿದ್ದೆ.

ಬಾಬು ನನ್ನನ್ನು ಮೊದಲ ಬಾರಿಗೆ ಈಗ ತರಾಟೆಗೆ ತೆಗೆದುಕೊಂಡಿದ್ದಾರೆ. ಗೋಡ್ಸೆ ವಿಚಾರದಲ್ಲಿ ಅವರು ನನ್ನ ಮೇಲೆ ಆಗ್ರಹ ಮಾಡಿರುವುದಕ್ಕೆ ನಾನು ಅವರ ಬಗೆಗೆ ಈ ರೀತಿ ಹೇಳುತ್ತಿಲ್ಲ. ಗೋಡ್ಸೆ ಬೆಂಗಳೂರಿಗೆ ಬಂದಿದ್ದ ವಿಚಾರವನ್ನು ನಾನು ಆನಂತರ ಪ್ರಸ್ತಾಪಿಸುತ್ತೇನೆ.

ಬಾಬು ಕೃಷ್ಣಮೂರ್ತಿ ನನ್ನನ್ನು ಕೆಲಸಕ್ಕೆ ಬಾರದ 38 ದಿನಗಳ ಪತ್ರಿಕಾ ಸಂಪಾದಕ ಎಂದು ಕರೆದು ಹಂಗಿಸಿದ್ದಾರೆ. ಈ ಮಾತು ನನ್ನನ್ನು ಇರಿಯಿತು. ಜೂಲಿಯಸ್ ಸೀಸರ್ ತನ್ನ ಪರಮ ಸ್ನೇಹಿತ ಎಂದುಕೊಂಡಿದ್ದ ಬ್ರೂಟಸ್ ತನ್ನನ್ನು ಇರಿದಾಗ `Yours is the  most unkindest cut of all’  ಎಂದು ಜರಿದ.

ಪತ್ರಿಕಾ ಸಂಪಾದಕರಾಗಿದ್ದ ಬಾಬು ಕೃಷ್ಣಮೂರ್ತಿ ನನ್ನನ್ನು 38 ದಿನಗಳ ಕಳಪೆ ಸಂಪಾದಕ ಎಂದು ಹೇಳಿರುವುದನ್ನು ಕುರಿತು ನಾನೂ ಕೂಡ Yours is the most unkindest cut of all’ಎಂದು ಹೇಳಬೇಕಿದೆ. ಸೀಸರ್ ಬ್ರೂಟಸ್‍ನ ಈ ಗೆಯ್ಮೆಯನ್ನುSuperlatives ನಲ್ಲಿ Unkindest ಎಂದು ಮಾತ್ರ ಹೇಳದೆ Most ಎಂಬ ಇನ್ನೊಂದು Superlatives ಕೂಡಾ ಬಳಸಿದ್ದಾನೆ. ಬ್ರೂಟಸ್‍ನ ಈ ಕೃತ್ಯ ಸೀಜರ್‌ನನ್ನು ದಿಗ್ಭ್ರಮೆಗೋಳಿಸಿದೆ. ಬಾಬುಕೃಷ್ಣಮೂರ್ತಿಯವರ ಈ ಮಾತು ನನ್ನನ್ನು ಸೀಜರ್‌ನಷ್ಟೇ ದಿಗ್ಭ್ರಮೆಗೊಳಿಸಿದೆ.

ಪೌರವಾಣಿ ಪತ್ರಿಕೆಯನ್ನು ಆರಂಭಿಸಿದ ನಮಗೆ – ಸ್ವಾತಂತ್ರ್ಯ ಹೋರಾಟಗಾರ ಯುವಕರು – ಸ್ವಾತಂತ್ರ್ಯ ಬೇಗ ದೊರಕಿಸಿಕೊಳ್ಳಬೇಕು ಎಂಬ ತವಕವಿತ್ತು. ನಮ್ಮ ನಾಯಕರನ್ನು ಪ್ರತಿ ಎಂಪಿಸಿಸಿ ಸಭೆಯಲ್ಲೂ ಜವಾಬ್ದಾರಿ ಸರ್ಕಾರ ಪಡೆಯಲು ತಡಮಾಡದೆ ಹೋರಾಟ ಆರಂಭಿಸಬೇಕೆಂದು ಒತ್ತಾಯ ತರುತ್ತಿದ್ದೆವು. ಇದಕ್ಕೆ ಪೂರಕವಾಗಿ ಒಂದು ಪತ್ರಿಕೆಯನ್ನು ಆರಂಭಿಸಲೂ ತೀರ್ಮಾನಿಸಿದೆವು. ಪೌರವಾಣಿ ಬೆಂಗಳೂರಿನಲ್ಲಿ ಜನ್ಮ ತಾಳಿತು. ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾಗಿದ್ದ ದೊಡ್ಡಬಳ್ಳಾಪುರದ ರುಮಾಲೆ ಭದ್ರಣ್ಣನವರು ಪೌರವಾಣಿಯ ಮೊದಲ ಸಂಪಾದಕರಾದರು. ಪೌರವಾಣಿ ದಿನಪತ್ರಿಕೆ ಬೆಲೆ 3 ಕಾಸು. ರಾಯಟರ್ಸ್ ಮತ್ತು ಪಿಟಿಐ ಸುದ್ದಿಗಳನ್ನು ತರಿಸಿಕೊಳ್ಳುತ್ತಿದ್ದೆವು.

ಪತ್ರಿಕೆ ಬಹಳ ಬೇಗ ಜನಾದರಣೆ ಗಳಿಸಿತು. ಭದ್ರಣ್ಣನವರು ನಾಯಿ ಕಚ್ಚಿ ಹೈಡ್ರೋಫೋಬಿಯಾ ಎಂಬ ರೋಗಕ್ಕೆ ಬಲಿಯಾದರು. ಅವರು ಸಾಯುವ ಮೊದಲು ನಮ್ಮ ಯುವಬಳಗವೆಲ್ಲ ಆಸ್ಪತ್ರೆಗೆ ಹೋಗಿ ಅವರನ್ನು ಕಂಡೆವು. ಅವರು ನಮ್ಮೆಲ್ಲರನ್ನು ಕುರಿತು “ಭಾರತಕ್ಕೆ ಸ್ವಾತಂತ್ರ್ಯ ಬಂತು. ಆದರೆ ಮೈಸೂರಿನ ಪ್ರಜೆಗಳಿಗೆ ಸ್ವಾತಂತ್ರ್ಯ ಬಂದಿಲ್ಲ. ಮಹಾರಾಜರು Accession  ಒಪ್ಪುತ್ತಿಲ್ಲ. ಅವರನ್ನು ಒಪ್ಪಿಸುವುದಕ್ಕಾಗಿ ಹೋರಾಟ ಮಾಡಬೇಕಾಗಿದೆ. ಪೌರವಾಣಿ ಪತ್ರಿಕೆ ಈ ಹೋರಾಟಕ್ಕೆ ಹೊಯ್‍ಕೈಯಾಗಿಸಿಲ್ಲ ಬೆಂಬಲಿಸಿದೆ. ಪೌರವಾಣಿ ಪತ್ರಿಕೆ ಈಗ ಜನಪ್ರಿಯವಾಗಿದೆ ನೀವು ಈ ಪತ್ರಿಕೆಯನ್ನು ಅಂತಿಮ ಗುರಿ ಮುಟ್ಟುವವರೆಗೂ ನಡೆಸಿಕೊಂಡು ಹೋಗಬೇಕು” ಎಂದು ಕೈಮುಗಿದು ಕೇಳಿಕೊಂಡರು.

ಕೆಲಹೊತ್ತಿನಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಯಿತು. ಭದ್ರಣ್ಣನವರ ನೆಂಟರು, ನಾವೂ ಸೇರಿ ಅವರ ಅಂತ್ಯಕ್ರಿಯೆ ಮುಗಿಸಿದೆವು. ರಾತ್ರಿ ಪೌರವಾಣಿ ಕಚೇರಿಯಲ್ಲಿ ಸೇರಿದ್ದ ನಾವೆಲ್ಲ ಮುಂದೆ ಯಾರು ಸಂಪಾದಕರಾಗಬೇಕೆಂದು ಚರ್ಚಿಸಿದೆವು. ಕೊನೆಗೆ ನನ್ನನ್ನು ಸಂಪಾದಕನಾಗುವಂತೆ ಒತ್ತಾಯಿಸಿದರು. ನಾನು ಆಗ ಮೈಸೂರಿನಲ್ಲಿ ಸಾಹಿತ್ಯ ಮಂದಿರ ಎಂಬ ಪುಸ್ತಕದಂಗಡಿ ಮತ್ತು ಪ್ರಕಾಶನ ಸಂಸ್ಥೆ ನಡೆಸುತ್ತಿದ್ದೆ. ನಾನು ಪುಸ್ತಕದಂಗಡಿ ಮುಚ್ಚಿ ಇದ್ದ ಪುಸ್ತಕದ ದಾಸ್ತಾನನೆಲ್ಲ ಕಾಂಗ್ರೆಸ್ ಮುಖಂಡ ಎಂ.ಎನ್.ಜೋಯಿಸರ ಮನೆಯಲ್ಲಿಟ್ಟು, ಬೆಂಗಳೂರಿಗೆ ಬಂದು ಪೌರವಾಣಿ ಪತ್ರಿಕೆ ಸಂಪಾದಕನಾಗಿ ನೋಂದಾಯಿಸಿಕೊಂಡೆ. ಮೈಸೂರು ಕಾಂಗ್ರೆಸ್ ಕಮಿಟಿ ಆಗ `ಮೈಸೂರ್ ಚಲೋ’ ಕೊನೆಯ ಚಳವಳಿಯನ್ನು ಆರಂಭಿಸುವ ವಿಚಾರ ಮಾಡುತ್ತಿತ್ತು.

ಪೌರವಾಣಿ ಪತ್ರಿಕೆಯಲ್ಲಿ ಮೈಸೂರು ಮಹಾರಾಜರ ಆಡಳಿತ ವೈಖರಿ ಕುರಿತು ವಿಶ್ವ ಕರ್ನಾಟಕ ಸಂಪಾದಕರಾಗಿದ್ದ ತಿರುಮಲ ತಾತಾಚಾರ್ಯ ಶರ್ಮರು 8 ಲೇಖನಗಳನ್ನು ಬರೆದುಕೊಟ್ಟರು. ಆರು ಲೇಖನಗಳನ್ನು ಪ್ರಕಟಿಸಿ ಆಗಿತ್ತು. ಆಗ ಚೀಫ್ ಸೆಕ್ರೆಟರಿಯವರು ನಮಗೊಂದು ನೋಟಿಸ್ ನೀಡಿ ಇನ್ನು ಮೇಲೆ ಯಾವುದೇ ಲೇಖನಗಳನ್ನು ಮತ್ತು ಅಗ್ರ ಲೇಖನಗಳನ್ನು ಪ್ರಕಟಿಸುವ ಮುನ್ನ ನಮಗೆ ಅದನ್ನು ಕಳುಹಿಸಿ, ಸರ್ಕಾರಕ್ಕೆ ಒಪ್ಪಿಗೆಯಾಗುವ ಲೇಖನಗಳನ್ನು ಮಾತ್ರ ಪ್ರಕಟಿಸತಕ್ಕದ್ದು. ಈ ಆಜ್ಞೆಯನ್ನು ಮಿರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.

ಸರ್ಕಾರಕ್ಕೆ ಉಳಿದ ಲೇಖನಗಳನ್ನು ಕಳಿಸದೆಯೇ 7 ಮತ್ತು 8ನೇ ಕಂತಿನ ಲೇಖನಗಳನ್ನು ಅಚ್ಚುಮಾಡಿ ಅದರ ಜೊತೆಗೆ ಒಂದು Box news ಅನ್ನು ಹಾಕಿದೆವು. ಸರ್ಕಾರ ನಮ್ಮ ಮೇಲೆ ಪ್ರತಿಬಂಧಕಗಳನ್ನು ಹೇರಲು ತೊಡಗಿದೆ. ಸರ್ಕಾರದ ಈ ಬೆದರಿಕೆಗೆ ಸೊಪ್ಪು ಹಾಕದೆ 7 ಮತ್ತು 8ನೇ ಕಂತಿನ ಲೇಖನಗಳನ್ನು ಸರ್ಕಾರಕ್ಕೆ ಕಳಿಸದೆ ಪ್ರಕಟಿಸುತ್ತಿದ್ದೇವೆ. ಸರ್ಕಾರದ ಧೋರಣೆಯನ್ನು ಒಪ್ಪದೆ ಪ್ರತಿಭಟನಾರ್ಥವಾಗಿ ನಾಳೆಯಿಂದ ಪತ್ರಿಕೆಯನ್ನು ನಿಲ್ಲಿಸಿದ್ದೇವೆ ಎಂದು ಅಚ್ಚು ಮಾಡಲಾಯಿತು. ಮೂರು ದಿನದ ನಂತರ ಪೊಲೀಸರು ಬಂದು ಪತ್ರಿಕಾಲಯಕ್ಕೆ ಬೀಗ ಹಾಕಿದರು.

ಇನ್ನು ಇಲ್ಲಿದ್ದರೆ ಬಂಧಿಸಲಿದ್ದಾರೆ, ಬೇರೆ ಪ್ರಾಂತಕ್ಕೆ ಹೋಗಿ ಪೌರವಾಣಿಯನ್ನು ಅಲ್ಲಿ ಅಚ್ಚು ಮಾಡಿಸಿ, ಮೈಸೂರು ಸಂಸ್ಥಾನದ ಊರುಗಳಿಗೆ ಏಕೆ ಕಳುಹಿಸಬಾರದು ಎಂದು ಆಲೋಚಿಸಿದೆ. ನಾನು ಮತ್ತು ನನ್ನ ಸ್ನೇಹಿತ ಶ್ರೀಧರಮೂರ್ತಿ ಪಕ್ಕದ ಹಿಂದೂಪುರಕ್ಕೆ ಹೋದೆವು ಸುದರ್ಶನ ಪ್ರೆಸ್‍ನಲ್ಲಿ ಪತ್ರಿಕೆಯನ್ನು ಅಚ್ಚುಮಾಡಿ ಕೊಡಲು ಮಾಲಿಕರಲ್ಲೊಬ್ಬರಾದ ಆದಯ್ಯ ಶೆಟ್ಟರು ಒಪ್ಪಿಕೊಂಡರು. ನಾನು ಪೌರವಾಣಿ, ಪೌರವೀರ ಪೌರಮಾರ್ತಾಂಡ, ಪೌರಭಾಸ್ಕರ ಈ ಹೆಸರುಗಳಲ್ಲಿ ಪತ್ರಿಕೆಯನ್ನು ನೋಂದಾಯಿಸಿಕೊಂಡೆ. ಮೈಸೂರು ಸಂಸ್ಥಾನದೊಳಕ್ಕೆ ಹೋಗುವ ಪೌರವಾಣಿ ಪತ್ರಿಕೆಯನ್ನು ಸರ್ಕಾರ ತಡೆಹಿಡಿದರೆ ಮತ್ತೊಂದು ಹೆಸರಿನಲ್ಲಿ ಪತ್ರಿಕೆಯನ್ನು ಕಳುಹಿಸಬಹುದಲ್ಲಾ ಎಂಬ ದೂರದೃಷ್ಟಿಯಿಂದ 5 ಹೆಸರಿನ ಪತ್ರಿಕೆಗಳನ್ನು ನೋಂದಾಯಿಸಿಕೊಂಡಿದ್ದೆ. ಕೆಲದಿನಗಳ ಮೇಲೆ ನಮ್ಮ ನಿರೀಕ್ಷೆಯಂತೆಯೇ ಪೌರವಾಣಿ ಪತ್ರಿಕೆ ಮೈಸೂರು ಸಂಸ್ಥಾನದೊಳಕ್ಕೆ ಬರದಂತೆ ತಡೆದರು. ನಾವು ಪೌರವೀರ ಹೆಸರಿನಲ್ಲಿ ಪತ್ರಿಕೆಯನ್ನು ಅಲ್ಲಿಂದಾಚೆಗೆ ಕಳುಹಿಸಿದೆವು.

ಮೈಸೂರು ಚಲೋ ಸತ್ಯಾಗ್ರಹ ನಡೆದ 38 ದಿನಗಳೂ ಪತ್ರಿಕೆ ಮೈಸೂರಿನ ಎಲ್ಲ ಕಡೆಗೆ ತಲುಪಿತು. ಬೆಂಗಳೂರಿಗೆ ದಿನಕ್ಕೊಬ್ಬ ಸತ್ಯಾಗ್ರಹಿಯ ಕೈಯಲ್ಲಿ ಪತ್ರಿಕೆಯನ್ನು ಕಳುಹಿಸುತ್ತಿದ್ದರು. ಪತ್ರಿಕೆ ಹೊರತರುವುದಕ್ಕೆ ಸಹಾಯಕರಾಗಿರುವ ರುಮಾಲೆ ಚನ್ನಬಸವಣ್ಣ, ಮೈಸೂರಿನ ಸುಬ್ಬರಾಯರು, ತಿರುಮಲ ಶ್ರೀರಂಗಾಚಾರ್ ಮುಂತಾದವರಿದ್ದರು.

38 ದಿನಗಳು ಪೌರವಾಣಿ ನಡೆದದ್ದು ಬೆಂಗಳೂರಿನಲ್ಲಲ್ಲ. ಪೌರವಾಣಿ ಪತ್ರಿಕೆಯನ್ನು ಮೈಸೂರು ಸಂಸ್ಥಾನದಲ್ಲಿ ಮುಟ್ಟುಗೋಲು ಹಾಕಿಕೊಂಡ ನಂತರ ನಾವು ಮಾಡಿದ ಈ ಸಾಹಸದ ನಮ್ಮ ಕೆಲಸವನ್ನು ಅರಿಯದ ಬಾಬು ಕೃಷ್ಣಮೂರ್ತಿ ನನ್ನನ್ನು ಮೂರು ಕಾಸಿಗೆ ಹರಾಜು ಹಾಕಿದ್ದಾರೆ.

ಬಾಬು ಕೃಷ್ಣಮೂರ್ತಿಯವರ ಮೂದಲಿಕೆ ಮಾತನ್ನ ಕೇಳಿದಮೇಲೆ ಈ ಸುಳ್ಳನ್ನು, ಉತ್ಪ್ರೇಕ್ಷೆಯ ಮಾತನಾಡಲು ಯಾರು ಇವರಿಗೆ ಪ್ರೇರಣೆ ನೀಡಿರಬಹುದೆಂದು ಯೋಚನೆ ಮಾಡಿದೆ. ಆರ್‌ಎಸ್‍ಎಸ್‍ನಲ್ಲಿ ಇದ್ದುಹೋದ ಕೃಷ್ಣಮೂರ್ತಿಗೆ ಬಹುಕಾಲ ಧರ್ಮಾಂಧತೆಯ ವಿಷವುಣಿಸಲಾಗಿದೆ. ಅದು ಈ ರೀತಿ ನನ್ನ ಮೇಲೆ ಎಂದೂ ಇಲ್ಲದಷ್ಟು ಹರಿಹಾಯಲು ಪ್ರೇರಣೆ ನೀಡಿರಬಹುದು ಅಥವಾ ಆರ್‌ಎಸ್‍ಎಸ್ ಮುಖ್ಯರ ಆಜ್ಞಾನುಸಾರ ಕೃಷ್ಣಮೂರ್ತಿ ನಡೆದುಕೊಂಡಿರಬಹುದು.

ನನಗೆ ಪತ್ರಿಕೆ ಅಕಾಡೆಮಿ ಅವಾರ್ಡ್ ಬಂದಿದೆ. ನಾನು 5 ವರ್ಷಕಾಲ ಪೌರವಾಣಿಯ ಸಂಪಾದಕನಾಗಿದ್ದೆ, 38 ದಿನಗಳಲ್ಲ. Freelance Journalist ಆಗಿ ಪತ್ರಿಕೆಗಳಿಗೆ ಲೇಖನಗಳನ್ನೂ ಬರೆಯುತ್ತೇನೆ. ಮೈಸೂರು ಸಂಸ್ಥಾನದ ಪತ್ರಿಕಾಸಂಘ ನನ್ನ ಸಕ್ರಿಯ ಪತ್ರಿಕೋದ್ಯಮವನ್ನು ಗುರುತಿಸಿ ನನಗೆ ಆ ಸಂಘದ ಅಧ್ಯಕ್ಷತೆಯನ್ನು ನೀಡಿ ಗೌರವಿಸಿದೆ ಎಂಬುದನ್ನು ಬಾಬುಕೃಷ್ಣಮೂರ್ತಿ ತಿಳಿಯಬೇಕು.

ಬಾಬುಕೃಷ್ಣಮೂರ್ತಿಯವರು ಗೋಡ್ಸೆ ಬೆಂಗಳೂರಿಗೆ ಬಂದಿದ್ದ ವಿಚಾರ ಪ್ರಸ್ತಾಪಿಸಿದ್ದಾರೆ. ಅದರ ಪ್ರಸ್ತಾಪ ಮುಂದಿನ ಸಂಚಿಕೆಯಲ್ಲಿ…..

– ಎಚ್.ಎಸ್.ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...