Homeಮುಖಪುಟಕೊರೊನಾ ವೈರಸ್‌ ಹುಟ್ಟಿದ್ದು ಹೇಗೆ? ಅದರಿಂದ ದೂರವಿರುವುದು ಹೇಗೆ? - ಡಾ.ಕೆ.ಸಿ ರಘು

ಕೊರೊನಾ ವೈರಸ್‌ ಹುಟ್ಟಿದ್ದು ಹೇಗೆ? ಅದರಿಂದ ದೂರವಿರುವುದು ಹೇಗೆ? – ಡಾ.ಕೆ.ಸಿ ರಘು

ಕೇರಳ ಕಳೆದ ಬಾರಿ ಕಂಡು ಬಂದ ನಿಫಾ ವೈರಸ್‌ನ್ನು ಮತ್ತು ಇತ್ತೀಚೆಗೆ ಕರೋನಾ ಕಂಡುಬಂದಾಗ ವ್ಯವಹರಿಸಿದ ರೀತಿ ಇಡೀ ದೇಶಕ್ಕೆ ಮಾದರಿಯಾಗಿದೆ.

- Advertisement -
- Advertisement -

ಕೊರೊನಾ ವೈರಸ್‌ ಇದಾಗಲೇ ಜಾಗತೀಕರಣಗೊಂಡಿದೆ. 76 ದೇಶಗಳಿಗೆ ಹಬ್ಬಿ ಸುಮಾರು 3200 ಜನರನ್ನು ಬಲಿ ತೆಗೆದುಕೊಂಡಿದೆ. ಈ ಸೋಂಕು ತಗುಲಿದ 100 ಜನರಲ್ಲಿ ಸುಮಾರು 4 ಜನ ಮರಣ ಹೊಂದುತ್ತಾರೆಂದು ಅಂದಾಜುಮಾಡಲಾಗಿದೆ. ಅಂದರೆ ಉಳಿದ 96 ಜನ ಗುಣಮುಖರಾಗುತ್ತಾರೆ. 30ಕ್ಕೂ ಹೆಚ್ಚು ವಯಸ್ಸಿನವರಿಗೆ ಸಾಮಾನ್ಯವಾಗಿ ಕಾಯಿಲೆ ಕಂಡುಬರುವುದಾಗಿದೆ. 60 ದಾಟಿದವರಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿರುವುದಾಗಿದೆ. ಅದರಲ್ಲೂ ಸಿಗರೇಟ್ ಸೇವನೆಯಿಂದ ಶ್ವಾಸಕೋಶ ಹಾನಿಯಾಗಿದ್ದರೆ ಅಥವಾ ಅಸ್ತಮಾ ಮತ್ತು ಇತರೆ ಶ್ವಾಸಕೋಶದ ಕಾಯಿಲೆಗಳಿದ್ದರೆ ಸಾವಿಗೀಡಾಗುವ ಸಾಧ್ಯತೆ ಹೆಚ್ಚು.

ಈ ವೈರಾಣು ಒಂದು ಗುಂಪಿಗೆ ಸಂಬಂಧಪಟ್ಟಿದ್ದಾಗಿದ್ದರು ಇದು ಹೊಸತೇ ಆಗಿದೆ. ಗುಂಪು ಹಳೆಯದು ಅದರ ವೈರಾಣು ಇದುವರೆಗೂ ತಿಳಿದಿದ್ದಾಗಿಲ್ಲ. ಮೊನ್ನೆ ತಾನೆ ಇದಕ್ಕೆ ಕೋವಿಡ್-19 ಎಂದು ನಾಮಕರಣ ಮಾಡಲಾಗಿದೆ. ಇದರ ಹುಟ್ಟು ಚೈನಾದ ವೂಹಾನ್ ಪ್ರಾಂತ್ಯದಲ್ಲಿ ಮಾಂಸದ ಮಾರುಕಟ್ಟೆಯಲ್ಲಿ. ಅಲ್ಲಿ ಸಾಕಿದ ಪ್ರಾಣಿಗಳ ಮಾಂಸ, ಕಾಡು ಪ್ರಾಣಿಗಳ ಮಾಂಸ ಎಲ್ಲವನ್ನೂ ಒಂದೇ ಜಾಗದಲ್ಲಿ ಅಕ್ಕಪಕ್ಕದಲ್ಲಿ ಜನಜಂಗುಳಿಯ ನಡುವೆ ಮಾರಾಟ ಮಾಡಲಾಗುತ್ತದೆ. ಕಾಡು ಪ್ರಾಣಿಗಳ ಜೊತೆ ಹೊಂದಿಕೊಂಡು ಯಾವ ಕಾಟವೂ ಕೊಡದೇ ಶತಮಾನಗಳಿಂದ ಬದುಕುವ ವೈರಾಣುಗಳು ಬೇರೆ ಪ್ರಾಣಿಗಳ ಮಾಂಸಕ್ಕೆ ಸೇರಿ ರೋಗಾಣುವಾಗಿ ಪರಿಣಮಿಸುತ್ತವೆ. ಇವುಗಳು ಇಂತಹ ಸ್ಥಳಗಳಲ್ಲಿ ಹೊಸದಾಗಿ ಮಾರ್ಪಾಡಾಗುವ ಸಾಧ್ಯತೆಗಳು ಹೆಚ್ಚು.

ರೋಗಶಾಸ್ತ್ರದ ಹಳೆಯ ಮಾತಿನಂತೆ ವಿಚ್ಛೇದನ ಪಡೆದ ಗಂಡು ಮತ್ತು ಹೆಂಗಸು ಮರುಮದುವೆಯಾಗಿ ಸಂಸಾರ ಮಾಡುತ್ತಿದ್ದಾಗ ಮನೆಯಲ್ಲೊಂದು ದಿನ ಎಲ್ಲಿಲ್ಲದ ಗಲಾಟೆ ಗದ್ದಲ. ಆಗ ಹೆಂಡತಿ ಗಂಡನಿಗೆ “ನೋಡಿ ಇಲ್ಲಿ ನನ್ನೆರಡು ಮಕ್ಕಳು ನಿಮ್ಮೆರಡು ಮಕ್ಕಳು ನಮ್ಮಿಬ್ಬರ ಮಕ್ಕಳ ಜೊತೆ ಗಲಾಟೆ ಮಾಡುತ್ತಿದ್ದಾರೆ ಎನ್ನುತ್ತಾಳೆ” ಹೀಗೆ ಮಿಶ್ರಣಗೊಂಡ ವೈರಾಣುಗಳು ಹೊಸಜಾಗ, ಹೊಸತಾಣದಲ್ಲಿ ತನ್ನನ್ನು ತಾನು ಉಳುಸಿಕೊಳ್ಳಲು ಹೊಸದಾಗಿ ಮಾರ್ಪಾಟಾಗುತ್ತವೆ.

ಜಗತ್ತಿನಲ್ಲಿ ವೈರಾಣುಗಳೇ ಮೊದಲ ಜೀವಿಗಳೆಂದು ಪರಿಗಣಿಸುತ್ತಾರೆ. ಅವುಗಳು ಜೀವಿಗಳೆಂದು ಹೇಳುವುದು ಸುಲಭವಲ್ಲ. ಆದರೆ ಜೀವಕ್ಕೆ ಬೇಕಾಗಿರುವ ಮೂಲಧಾತು ಅಥವಾ Code ಎನ್ನಲಾಗುವ ಡಿಎನ್‌ಎ ಅಥವಾ ಆರ್‌ಎನ್‌ಎ ಯನ್ನು ಮಾತ್ರ ಒಳಗೊಂಡಿರುತ್ತದೆ. ಆದರೆ ಅದು ಅದರ ಸಂತಾನೋತ್ಪತ್ತಿಗೆ ಇನ್ನೊಂದು ಜೀವಿಯ ಜೀವಕೋಶಕ್ಕೆ ಹೊಕ್ಕು ಅದರ ಜೈವಿಕ ತಂತ್ರಗಾರಿಕೆಯನ್ನು ಅಪಹರಿಸಿ ತನ್ನದಾಗಿಸಿಕೊಂಡು ತನ್ನನ್ನು ತಾನೇ ಮಿಲಿಯನ್‌ ಗಟ್ಟಲೆ ವರ್ಷಗಳಲ್ಲಿ ಮರುಸೃಷ್ಟಿ ಮಾಡಿಕೊಳ್ಳುತ್ತದೆ. ಹಾಗೆ ಮಾಡಿದ ನಂತರ ತನಗೆ ಆಶ್ರಯ ಕೊಟ್ಟ ಜೀವಕೋಶವನ್ನು ಒಡೆದು ಪುಡಿ ಮಾಡುತ್ತದೆ. ಈ ಕರೋನಾ ವೈರಸ್‌ ಶ್ವಾಸಕೋಶಕ್ಕೆ ತಗುಲಿ ಅಲ್ಲಿ ದೇಹದ ರೋಗನಿರೋಧಕ ಶಕ್ತಿಯ ಹೋರಾಟದಿಂದ ದ್ರವಶ್ರಾವ್ಯ ಉಂಟಾಗಿ ಶ್ವಾಸಕೋಶದ ಮೂಲಕೆಲಸವಾದ ರಕ್ತಕ್ಕೆ ಆಮ್ಲಜನಕವನ್ನು ಪ್ರತಿ ಉಸಿರಿನಲ್ಲೂ ಒದಗಿಸುವ ಕಾರ್ಯಕ್ಕೆ ಕುತ್ತು ಬರುತ್ತದೆ. ಹಾಗೆಯೇ ವಿಷ ಅನಿಲ ಇಂಗಾಲದ ಡೈ ಆಕ್ಸೈಡನ್ನು ಹೊರಹಾಕುವ ಪ್ರಕ್ರಿಯೆಗೂ ತೊಂದರೆಯಾಗುತ್ತದೆ.

ಇಂತಹ ಸಂದರ್ಭದಲ್ಲಿ ಕೃತಕ ಉಸಿರಾಟದ ವ್ಯವಸ್ಥೆ ಅತ್ಯಂತ ಅವಶ್ಯಕ. ಭಾರತ ದೇಶದಲ್ಲಿ ಇದು ಹರಡಿದಲ್ಲಿ ಎಷ್ಟರ ಮಟ್ಟಿಗೆ ಆಸ್ಪತ್ರೆಯ ಹಾಸಿಗೆ, ಕೃತಕ ಉಸಿರಾಟದ ವ್ಯವಸ್ಥೆ, ರೋಗಿಗಳನ್ನು ಪ್ರತ್ಯೇಕಿಸಿ ಇಡುವ ವ್ಯವಸ್ಥೆಗೆ ನಾವು ಸಿದ್ಧರಾಗಿದ್ದೇವೆ ಎನ್ನುವುದು ದೊಡ್ಡ ಪ್ರಶ್ನೆಯೇ ಹೌದು. ಕೇರಳ ಕಳೆದ ಬಾರಿ ಕಂಡು ಬಂದ ನಿಫಾ ವೈರಸ್‌ನ್ನು ಮತ್ತು ಇತ್ತೀಚೆಗೆ ಕರೋನಾ ಕಂಡುಬಂದಾಗ ವ್ಯವಹರಿಸಿದ ರೀತಿ ಇಡೀ ದೇಶಕ್ಕೆ ಮಾದರಿಯಾಗಿದೆ.

ಕೃತಕ ಉಸಿರಾಟದ ಪ್ರಾತಿನಿಧಿಕ ಚಿತ್ರ

ಇಂತಹ ಸಂದರ್ಭದಲ್ಲಿ ಜ್ವರ, ಕೆಮ್ಮು, ಶೀತ ಅಥವಾ ಉಸಿರಾಟದ ತೊಂದರೆ ಕಂಡುಬಂದಾಗ ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಳ್ಳುವುದು ಬಹಳ ಮುಖ್ಯ. ಇದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ, ಮೊನ್ನೆ ಹುಟ್ಟಿದ ಕಾಯಿಲೆಗೆ ನಮ್ಮಲ್ಲಿ ಶತಮಾನಗಳಿಂದ ಔಷಧವಿದೆ ಎಂದೂ, ಕ್ರಿಸ್ತ ಪೂರ್ವದಲ್ಲೇ ಇದು ನಮಗೆ ತಿಳಿದಿತ್ತೆಂದು ಹೇಳುವವರಿದ್ದಾರೆ. ಗೋಮೂತ್ರ ಕುಡಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ಇವುಗಳನ್ನಾಗಲಿ ಅಥವಾ ಸಿರಿಧಾನ್ಯಗಳನ್ನು ತಿನ್ನಿ, ಕರೋನಾ ದೂರವಿಡಿ ಎನ್ನುವ ಮಾತುಗಳನ್ನು ನಂಬುವಂತದ್ದಲ್ಲ. ಆಯುರ್ವೇದ, ಹೋಮಿಯೋಪತಿ, ಇಲ್ಲವಾದಲ್ಲಿ ತಿರುಪತಿ ಎನ್ನುವ ಸಲಹೆಗಳೆಲ್ಲ ಉಂಟು.

ರೋಗ ನಿರೋಧಕ ಶಕ್ತಿಯನ್ನು ವೃದ್ಧಿಪಡಿಸಿಕೊಳ್ಳಲು ಉತ್ತಮ ಆಹಾರ, ಗಾಳಿ, ಬೆಳಕು, ಶುದ್ಧ ನೀರು ಅವಶ್ಯಕ. ಈ ಕಾಯಿಲೆ ಹರಡುವುದಕ್ಕೆ ಮುಖ್ಯ ಕಾರಣ: ಕೈ ತೊಳೆಯದೇ, ಬಾಯಿ, ಮೂಗು ಮತ್ತು ಕಣ್ಣನ್ನು ಸವರಿಕೊಳ್ಳುವುದರಿಂದ ದೇಹಕ್ಕೆ ರೋಗಾಣು ಸೇರಿಕೊಳ್ಳುವುದು. ಮಾಸ್ಕ್ ಹಾಕಿಕೊಳ್ಳುವುದು ಮುಖ್ಯವಾದರು ಕಣ್ಣಿಗೆ ಮಾಸ್ಕ್ ಹಾಕಿಕೊಳ್ಳಲಾಗುವುದಿಲ್ಲ. ಕಣ್ಣನ್ನು ಉಜ್ಜಿಕೊಂಡರು ಕಾಯಿಲೆ ತಗುಲಬಹುದು. ರೋಗ ಲಕ್ಷಣ ಚಿಹ್ನೆ ಇರುವವರು ಮಾಸ್ಕ್‌ ಹಾಕಿಕೊಳ್ಳುವುದು ಉತ್ತಮ. ಆಗಾಗ ಕೈ ತೊಳೆದುಕೊಳ್ಳುವುದು, ಹ್ಯಾಂಡ್‌ ಸ್ಯಾನಿಟೈಜರ್‌ಗಳನ್ನು ಬಳಸುವುದು ಇಲ್ಲವಾದಲ್ಲಿ ಶುದ್ಧ ನೀರಿನಲ್ಲಿ ಕೈ ತೊಳೆದರು ಸಾಕು. ಏಡ್ಸ್ ವೈರಾಣುವನ್ನು ಕಂಡು ಹಿಡಿದ ಜಾನ್‌ ಲೂಕ್ “ಇಂತಹ ವೈರಾಣು ಎಷ್ಟೇ ಭಯಾನಕವಾದರೂ ಶುದ್ಧ ನೀರಿನಲ್ಲಿ ತೊಳೆದರೆ ನಾಶವಾಗುತ್ತದೆ ಎನ್ನುತ್ತಿದ್ದ”.

ಈ ಕಾಯಿಲೆಯ ಬಗ್ಗೆ ನಾವು ನಮ್ಮ ವೈಯುಕ್ತಿಕ ಆಯ್ಕೆ, ಆಸಕ್ತಿಯನ್ನು ಮೀರಿ ಸಾಮಾಜಿಕ ಜವಬ್ದಾರಿಯಿಂದ ವರ್ತಿಸಿದಲ್ಲಿ ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಬಹುದು ಎನ್ನುವುದರಲ್ಲಿ ಸಂಶಯವಿಲ್ಲ. ಇಂತಹ ಅನೇಕ ವೈರಾಣುಗಳು ಇಡೀ ಜಗತ್ತನ್ನೇ ನಡುಗಿಸಿ ನಾವು ಲಸಿಕೆ ಹುಡುಕಿಕೊಳ್ಳುವುದರೊಳಗೆ ಮಾಯವಾಗಿರುವುದು ಉಂಟು. Better be safe then sorry.

(ಲೇಖಕರು ವಿಜ್ಞಾನಿ, ಉದ್ಯಮಿ ಮತ್ತು ಚಿಂತಕರು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...