Homeಮುಖಪುಟಕೊರೊನಾ ವೈರಸ್‌ ಹುಟ್ಟಿದ್ದು ಹೇಗೆ? ಅದರಿಂದ ದೂರವಿರುವುದು ಹೇಗೆ? - ಡಾ.ಕೆ.ಸಿ ರಘು

ಕೊರೊನಾ ವೈರಸ್‌ ಹುಟ್ಟಿದ್ದು ಹೇಗೆ? ಅದರಿಂದ ದೂರವಿರುವುದು ಹೇಗೆ? – ಡಾ.ಕೆ.ಸಿ ರಘು

ಕೇರಳ ಕಳೆದ ಬಾರಿ ಕಂಡು ಬಂದ ನಿಫಾ ವೈರಸ್‌ನ್ನು ಮತ್ತು ಇತ್ತೀಚೆಗೆ ಕರೋನಾ ಕಂಡುಬಂದಾಗ ವ್ಯವಹರಿಸಿದ ರೀತಿ ಇಡೀ ದೇಶಕ್ಕೆ ಮಾದರಿಯಾಗಿದೆ.

- Advertisement -
- Advertisement -

ಕೊರೊನಾ ವೈರಸ್‌ ಇದಾಗಲೇ ಜಾಗತೀಕರಣಗೊಂಡಿದೆ. 76 ದೇಶಗಳಿಗೆ ಹಬ್ಬಿ ಸುಮಾರು 3200 ಜನರನ್ನು ಬಲಿ ತೆಗೆದುಕೊಂಡಿದೆ. ಈ ಸೋಂಕು ತಗುಲಿದ 100 ಜನರಲ್ಲಿ ಸುಮಾರು 4 ಜನ ಮರಣ ಹೊಂದುತ್ತಾರೆಂದು ಅಂದಾಜುಮಾಡಲಾಗಿದೆ. ಅಂದರೆ ಉಳಿದ 96 ಜನ ಗುಣಮುಖರಾಗುತ್ತಾರೆ. 30ಕ್ಕೂ ಹೆಚ್ಚು ವಯಸ್ಸಿನವರಿಗೆ ಸಾಮಾನ್ಯವಾಗಿ ಕಾಯಿಲೆ ಕಂಡುಬರುವುದಾಗಿದೆ. 60 ದಾಟಿದವರಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿರುವುದಾಗಿದೆ. ಅದರಲ್ಲೂ ಸಿಗರೇಟ್ ಸೇವನೆಯಿಂದ ಶ್ವಾಸಕೋಶ ಹಾನಿಯಾಗಿದ್ದರೆ ಅಥವಾ ಅಸ್ತಮಾ ಮತ್ತು ಇತರೆ ಶ್ವಾಸಕೋಶದ ಕಾಯಿಲೆಗಳಿದ್ದರೆ ಸಾವಿಗೀಡಾಗುವ ಸಾಧ್ಯತೆ ಹೆಚ್ಚು.

ಈ ವೈರಾಣು ಒಂದು ಗುಂಪಿಗೆ ಸಂಬಂಧಪಟ್ಟಿದ್ದಾಗಿದ್ದರು ಇದು ಹೊಸತೇ ಆಗಿದೆ. ಗುಂಪು ಹಳೆಯದು ಅದರ ವೈರಾಣು ಇದುವರೆಗೂ ತಿಳಿದಿದ್ದಾಗಿಲ್ಲ. ಮೊನ್ನೆ ತಾನೆ ಇದಕ್ಕೆ ಕೋವಿಡ್-19 ಎಂದು ನಾಮಕರಣ ಮಾಡಲಾಗಿದೆ. ಇದರ ಹುಟ್ಟು ಚೈನಾದ ವೂಹಾನ್ ಪ್ರಾಂತ್ಯದಲ್ಲಿ ಮಾಂಸದ ಮಾರುಕಟ್ಟೆಯಲ್ಲಿ. ಅಲ್ಲಿ ಸಾಕಿದ ಪ್ರಾಣಿಗಳ ಮಾಂಸ, ಕಾಡು ಪ್ರಾಣಿಗಳ ಮಾಂಸ ಎಲ್ಲವನ್ನೂ ಒಂದೇ ಜಾಗದಲ್ಲಿ ಅಕ್ಕಪಕ್ಕದಲ್ಲಿ ಜನಜಂಗುಳಿಯ ನಡುವೆ ಮಾರಾಟ ಮಾಡಲಾಗುತ್ತದೆ. ಕಾಡು ಪ್ರಾಣಿಗಳ ಜೊತೆ ಹೊಂದಿಕೊಂಡು ಯಾವ ಕಾಟವೂ ಕೊಡದೇ ಶತಮಾನಗಳಿಂದ ಬದುಕುವ ವೈರಾಣುಗಳು ಬೇರೆ ಪ್ರಾಣಿಗಳ ಮಾಂಸಕ್ಕೆ ಸೇರಿ ರೋಗಾಣುವಾಗಿ ಪರಿಣಮಿಸುತ್ತವೆ. ಇವುಗಳು ಇಂತಹ ಸ್ಥಳಗಳಲ್ಲಿ ಹೊಸದಾಗಿ ಮಾರ್ಪಾಡಾಗುವ ಸಾಧ್ಯತೆಗಳು ಹೆಚ್ಚು.

ರೋಗಶಾಸ್ತ್ರದ ಹಳೆಯ ಮಾತಿನಂತೆ ವಿಚ್ಛೇದನ ಪಡೆದ ಗಂಡು ಮತ್ತು ಹೆಂಗಸು ಮರುಮದುವೆಯಾಗಿ ಸಂಸಾರ ಮಾಡುತ್ತಿದ್ದಾಗ ಮನೆಯಲ್ಲೊಂದು ದಿನ ಎಲ್ಲಿಲ್ಲದ ಗಲಾಟೆ ಗದ್ದಲ. ಆಗ ಹೆಂಡತಿ ಗಂಡನಿಗೆ “ನೋಡಿ ಇಲ್ಲಿ ನನ್ನೆರಡು ಮಕ್ಕಳು ನಿಮ್ಮೆರಡು ಮಕ್ಕಳು ನಮ್ಮಿಬ್ಬರ ಮಕ್ಕಳ ಜೊತೆ ಗಲಾಟೆ ಮಾಡುತ್ತಿದ್ದಾರೆ ಎನ್ನುತ್ತಾಳೆ” ಹೀಗೆ ಮಿಶ್ರಣಗೊಂಡ ವೈರಾಣುಗಳು ಹೊಸಜಾಗ, ಹೊಸತಾಣದಲ್ಲಿ ತನ್ನನ್ನು ತಾನು ಉಳುಸಿಕೊಳ್ಳಲು ಹೊಸದಾಗಿ ಮಾರ್ಪಾಟಾಗುತ್ತವೆ.

ಜಗತ್ತಿನಲ್ಲಿ ವೈರಾಣುಗಳೇ ಮೊದಲ ಜೀವಿಗಳೆಂದು ಪರಿಗಣಿಸುತ್ತಾರೆ. ಅವುಗಳು ಜೀವಿಗಳೆಂದು ಹೇಳುವುದು ಸುಲಭವಲ್ಲ. ಆದರೆ ಜೀವಕ್ಕೆ ಬೇಕಾಗಿರುವ ಮೂಲಧಾತು ಅಥವಾ Code ಎನ್ನಲಾಗುವ ಡಿಎನ್‌ಎ ಅಥವಾ ಆರ್‌ಎನ್‌ಎ ಯನ್ನು ಮಾತ್ರ ಒಳಗೊಂಡಿರುತ್ತದೆ. ಆದರೆ ಅದು ಅದರ ಸಂತಾನೋತ್ಪತ್ತಿಗೆ ಇನ್ನೊಂದು ಜೀವಿಯ ಜೀವಕೋಶಕ್ಕೆ ಹೊಕ್ಕು ಅದರ ಜೈವಿಕ ತಂತ್ರಗಾರಿಕೆಯನ್ನು ಅಪಹರಿಸಿ ತನ್ನದಾಗಿಸಿಕೊಂಡು ತನ್ನನ್ನು ತಾನೇ ಮಿಲಿಯನ್‌ ಗಟ್ಟಲೆ ವರ್ಷಗಳಲ್ಲಿ ಮರುಸೃಷ್ಟಿ ಮಾಡಿಕೊಳ್ಳುತ್ತದೆ. ಹಾಗೆ ಮಾಡಿದ ನಂತರ ತನಗೆ ಆಶ್ರಯ ಕೊಟ್ಟ ಜೀವಕೋಶವನ್ನು ಒಡೆದು ಪುಡಿ ಮಾಡುತ್ತದೆ. ಈ ಕರೋನಾ ವೈರಸ್‌ ಶ್ವಾಸಕೋಶಕ್ಕೆ ತಗುಲಿ ಅಲ್ಲಿ ದೇಹದ ರೋಗನಿರೋಧಕ ಶಕ್ತಿಯ ಹೋರಾಟದಿಂದ ದ್ರವಶ್ರಾವ್ಯ ಉಂಟಾಗಿ ಶ್ವಾಸಕೋಶದ ಮೂಲಕೆಲಸವಾದ ರಕ್ತಕ್ಕೆ ಆಮ್ಲಜನಕವನ್ನು ಪ್ರತಿ ಉಸಿರಿನಲ್ಲೂ ಒದಗಿಸುವ ಕಾರ್ಯಕ್ಕೆ ಕುತ್ತು ಬರುತ್ತದೆ. ಹಾಗೆಯೇ ವಿಷ ಅನಿಲ ಇಂಗಾಲದ ಡೈ ಆಕ್ಸೈಡನ್ನು ಹೊರಹಾಕುವ ಪ್ರಕ್ರಿಯೆಗೂ ತೊಂದರೆಯಾಗುತ್ತದೆ.

ಇಂತಹ ಸಂದರ್ಭದಲ್ಲಿ ಕೃತಕ ಉಸಿರಾಟದ ವ್ಯವಸ್ಥೆ ಅತ್ಯಂತ ಅವಶ್ಯಕ. ಭಾರತ ದೇಶದಲ್ಲಿ ಇದು ಹರಡಿದಲ್ಲಿ ಎಷ್ಟರ ಮಟ್ಟಿಗೆ ಆಸ್ಪತ್ರೆಯ ಹಾಸಿಗೆ, ಕೃತಕ ಉಸಿರಾಟದ ವ್ಯವಸ್ಥೆ, ರೋಗಿಗಳನ್ನು ಪ್ರತ್ಯೇಕಿಸಿ ಇಡುವ ವ್ಯವಸ್ಥೆಗೆ ನಾವು ಸಿದ್ಧರಾಗಿದ್ದೇವೆ ಎನ್ನುವುದು ದೊಡ್ಡ ಪ್ರಶ್ನೆಯೇ ಹೌದು. ಕೇರಳ ಕಳೆದ ಬಾರಿ ಕಂಡು ಬಂದ ನಿಫಾ ವೈರಸ್‌ನ್ನು ಮತ್ತು ಇತ್ತೀಚೆಗೆ ಕರೋನಾ ಕಂಡುಬಂದಾಗ ವ್ಯವಹರಿಸಿದ ರೀತಿ ಇಡೀ ದೇಶಕ್ಕೆ ಮಾದರಿಯಾಗಿದೆ.

ಕೃತಕ ಉಸಿರಾಟದ ಪ್ರಾತಿನಿಧಿಕ ಚಿತ್ರ

ಇಂತಹ ಸಂದರ್ಭದಲ್ಲಿ ಜ್ವರ, ಕೆಮ್ಮು, ಶೀತ ಅಥವಾ ಉಸಿರಾಟದ ತೊಂದರೆ ಕಂಡುಬಂದಾಗ ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಳ್ಳುವುದು ಬಹಳ ಮುಖ್ಯ. ಇದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ, ಮೊನ್ನೆ ಹುಟ್ಟಿದ ಕಾಯಿಲೆಗೆ ನಮ್ಮಲ್ಲಿ ಶತಮಾನಗಳಿಂದ ಔಷಧವಿದೆ ಎಂದೂ, ಕ್ರಿಸ್ತ ಪೂರ್ವದಲ್ಲೇ ಇದು ನಮಗೆ ತಿಳಿದಿತ್ತೆಂದು ಹೇಳುವವರಿದ್ದಾರೆ. ಗೋಮೂತ್ರ ಕುಡಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ಇವುಗಳನ್ನಾಗಲಿ ಅಥವಾ ಸಿರಿಧಾನ್ಯಗಳನ್ನು ತಿನ್ನಿ, ಕರೋನಾ ದೂರವಿಡಿ ಎನ್ನುವ ಮಾತುಗಳನ್ನು ನಂಬುವಂತದ್ದಲ್ಲ. ಆಯುರ್ವೇದ, ಹೋಮಿಯೋಪತಿ, ಇಲ್ಲವಾದಲ್ಲಿ ತಿರುಪತಿ ಎನ್ನುವ ಸಲಹೆಗಳೆಲ್ಲ ಉಂಟು.

ರೋಗ ನಿರೋಧಕ ಶಕ್ತಿಯನ್ನು ವೃದ್ಧಿಪಡಿಸಿಕೊಳ್ಳಲು ಉತ್ತಮ ಆಹಾರ, ಗಾಳಿ, ಬೆಳಕು, ಶುದ್ಧ ನೀರು ಅವಶ್ಯಕ. ಈ ಕಾಯಿಲೆ ಹರಡುವುದಕ್ಕೆ ಮುಖ್ಯ ಕಾರಣ: ಕೈ ತೊಳೆಯದೇ, ಬಾಯಿ, ಮೂಗು ಮತ್ತು ಕಣ್ಣನ್ನು ಸವರಿಕೊಳ್ಳುವುದರಿಂದ ದೇಹಕ್ಕೆ ರೋಗಾಣು ಸೇರಿಕೊಳ್ಳುವುದು. ಮಾಸ್ಕ್ ಹಾಕಿಕೊಳ್ಳುವುದು ಮುಖ್ಯವಾದರು ಕಣ್ಣಿಗೆ ಮಾಸ್ಕ್ ಹಾಕಿಕೊಳ್ಳಲಾಗುವುದಿಲ್ಲ. ಕಣ್ಣನ್ನು ಉಜ್ಜಿಕೊಂಡರು ಕಾಯಿಲೆ ತಗುಲಬಹುದು. ರೋಗ ಲಕ್ಷಣ ಚಿಹ್ನೆ ಇರುವವರು ಮಾಸ್ಕ್‌ ಹಾಕಿಕೊಳ್ಳುವುದು ಉತ್ತಮ. ಆಗಾಗ ಕೈ ತೊಳೆದುಕೊಳ್ಳುವುದು, ಹ್ಯಾಂಡ್‌ ಸ್ಯಾನಿಟೈಜರ್‌ಗಳನ್ನು ಬಳಸುವುದು ಇಲ್ಲವಾದಲ್ಲಿ ಶುದ್ಧ ನೀರಿನಲ್ಲಿ ಕೈ ತೊಳೆದರು ಸಾಕು. ಏಡ್ಸ್ ವೈರಾಣುವನ್ನು ಕಂಡು ಹಿಡಿದ ಜಾನ್‌ ಲೂಕ್ “ಇಂತಹ ವೈರಾಣು ಎಷ್ಟೇ ಭಯಾನಕವಾದರೂ ಶುದ್ಧ ನೀರಿನಲ್ಲಿ ತೊಳೆದರೆ ನಾಶವಾಗುತ್ತದೆ ಎನ್ನುತ್ತಿದ್ದ”.

ಈ ಕಾಯಿಲೆಯ ಬಗ್ಗೆ ನಾವು ನಮ್ಮ ವೈಯುಕ್ತಿಕ ಆಯ್ಕೆ, ಆಸಕ್ತಿಯನ್ನು ಮೀರಿ ಸಾಮಾಜಿಕ ಜವಬ್ದಾರಿಯಿಂದ ವರ್ತಿಸಿದಲ್ಲಿ ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಬಹುದು ಎನ್ನುವುದರಲ್ಲಿ ಸಂಶಯವಿಲ್ಲ. ಇಂತಹ ಅನೇಕ ವೈರಾಣುಗಳು ಇಡೀ ಜಗತ್ತನ್ನೇ ನಡುಗಿಸಿ ನಾವು ಲಸಿಕೆ ಹುಡುಕಿಕೊಳ್ಳುವುದರೊಳಗೆ ಮಾಯವಾಗಿರುವುದು ಉಂಟು. Better be safe then sorry.

(ಲೇಖಕರು ವಿಜ್ಞಾನಿ, ಉದ್ಯಮಿ ಮತ್ತು ಚಿಂತಕರು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...