Homeಮುಖಪುಟಬೆಳ್ಳಿಚುಕ್ಕಿ: ಕಾಲ್ಪನಿಕ ಗಡಿಯಾರದ ಮೂಲಕ ಆಕಾಶಕಾಯಗಳನ್ನು ಗುರುತಿಸುವ ಬಗೆ!

ಬೆಳ್ಳಿಚುಕ್ಕಿ: ಕಾಲ್ಪನಿಕ ಗಡಿಯಾರದ ಮೂಲಕ ಆಕಾಶಕಾಯಗಳನ್ನು ಗುರುತಿಸುವ ಬಗೆ!

- Advertisement -
- Advertisement -

ಚಳಿಗಾಲದ ಶುಭ್ರ ಆಕಾಶದಲ್ಲಿ ಆಕಾಶ ವೀಕ್ಷಣೆ ಮಾರ್ಗದರ್ಶಿಯ ಸಹಾಯದಿಂದ, ಸೌರ ಮಂಡಲದ ಗ್ರಹಗಳು, ಚಂದ್ರನ ಬಿಂಬಾವಸ್ಥೆಗಳು, ನಕ್ಷತ್ರ ಪುಂಜಗಳು, ನಿಹಾರಿಕೆ ಮತ್ತು ನಕ್ಷತ್ರಗಳ ಗೊಂಚಲುಗಳನ್ನು ನೋಡಿದ ಸವಿ ಇನ್ನೂ ಉಳಿದಿರುವಂತೆಯೇ, ಆಕಾಶ ವೀಕ್ಷಣೆಯ ಆಸಕ್ತಿಗಳನ್ನು ಹಾಗೂ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಇದು ಸಕಾಲ.

ಆಕಾಶ ವೀಕ್ಷಣೆಯ ಹವ್ಯಾಸ ಉನ್ನತಿಯಾದಂತೆ, ಆಗಸದಲ್ಲಿ ಕಾಣುವ ಕಾಯಗಳನ್ನು ಸುಲಭವಾಗಿ ವೀಕ್ಷಿಸಲು ಮತ್ತು ಇತರರಿಗೆ ಸುಲಭವಾಗಿ ತಿಳಿಸಲು ಅನುವಾಗುವಂತೆ ಕೆಲವು ಕಾಲ್ಪನಿಕ ಉಪಕರಣಗಳನ್ನು/ ಮಾರ್ಗಸೂಚಿಯನ್ನು ಖಗೋಳ ವಿಜ್ಞಾನಾಸಕ್ತರು ಜಗತ್ತಿನಾದ್ಯಂತ ಬಳಸುತ್ತಾರೆ. ಅಂತಹ ಒಂದು ಕಾಲ್ಪನಿಕ ಉಪಕರಣದ/ಮಾರ್ಗಸೂಚಿ ಸಹಾಯದಿಂದ ಆಕಾಶ ವೀಕ್ಷಣೆ ಮಾಡುವುದು ಹೇಗೆ ಎಂಬುದನ್ನು ಈ ಸಂಚಿಕೆಯಲ್ಲಿ ತಿಳಿಯೋಣ. ನೆನಪಿರಲಿ, ಇದು ಕಾಲ್ಪನಿಕವಾಗಿ ನಿಮ್ಮ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವ ಉಪಕರಣ! ಬೌತಿಕವಾಗಿ ಖರೀದಿ ಮಾಡುವುದಲ್ಲ.

ಅಂದಹಾಗೆ, ಯಾವುದಪ್ಪಾ ಈ ಉಪಕರಣ ಅಂದರೆ, ದಿನ ನಾವು-ನೀವು ಸಮಯ ನೋಡಲು ಬಳಸುವ ಗಡಿಯಾರವೇ ಆ ಉಪಕರಣ! ಹೌದು ಗಡಿಯಾರವನ್ನು ಆಗಸದಲ್ಲಿ ಕಲ್ಪಿಸಿಕೊಂಡು ಆಕಾಶ ವೀಕ್ಷಣೆ ಮಾಡುವುದು ಹವ್ಯಾಸಿ ಆಕಾಶ ವೀಕ್ಷಕರ ತಂತ್ರಗಾರಿಕೆ. ಆಕಾಶ ವೀಕ್ಷಣೆಯ ಸಂದರ್ಭದಲ್ಲಿ ಅತ್ಯಂತ ಸುಲಭವಾಗಿ ಯಾವ ದಿಕ್ಕಿನಲ್ಲಿ, ಯಾವ ನಕ್ಷತ್ರ ಪುಂಜವಿದೆ, ಗ್ರಹವಿದೆ ಮತ್ತು ನಿಹಾರಿಕೆಗಳಿವೆ ಎಂಬುದನ್ನು ಇತರರಿಗೂ ಸೂಚಿಸಲು ಈ ತಂತ್ರಗಾರಿಕೆಯನ್ನು ಆಕಾಶ ವೀಕ್ಷಕರು ಬಳಸುತ್ತಾರೆ.

ಚಿತ್ರ-1

ಈಗ ಚಿತ್ರ (1)ನ್ನು ಗಮನಿಸಿ, ಈ ಚಿತ್ರದಲ್ಲಿರುವ ಪ್ರಸಿದ್ಧ ನಕ್ಷತ್ರ ಪುಂಜವನ್ನು ನೀವು ಈಗಾಗಲೇ ಆಗಸದಲ್ಲಿ ಕಂಡಿದ್ದೀರಿ ಅಲ್ಲವೆ? ಹೌದು ಆ ನಕ್ಷತ್ರ ಪುಂಜ ಒರಿಯಾನ್ ನಕ್ಷತ್ರ ಪುಂಜ. ಈ ತಿಂಗಳ ಯಾವುದೇ ದಿನರಾತ್ರಿ 7 ಗಂಟೆಯಿಂದ 7.30 ಗಂಟೆಯ ಸಮಯದಲ್ಲಿ, ಪೂರ್ವಕ್ಕೆ ಮುಖಮಾಡಿ ನೆತ್ತಿಯಿಂದ ಪೂರ್ವ ದಿಕ್ಕಿಗೆ ಕಣ್ಣಾಡಿಸಿದರೆ, ಈ ಚಿತ್ರದಲ್ಲಿರುವ ಒರಿಯಾನ್ ಮತ್ತು ಎಲ್ಲಾ ನಕ್ಷತ್ರಗಳು ಹಾಗೂ ನಕ್ಷತ್ರ ಪುಂಜಗಳನ್ನು ಕಾಣಬಹುದು. ಇಲ್ಲಿರುವ ಎಲ್ಲಾ ಚಿತ್ರಗಳಲ್ಲು ನಕ್ಷತ್ರ ಪುಂಜಗಳನ್ನು ಗುರುತಿಸಲು ಕಾಲ್ಪನಿಕ ರೇಖೆಗಳನ್ನು ತಂತ್ರಾಂಶದಿಂದ ಸೃಜಿಸಲಾಗಿದೆ.

ಈಗ ನಾವು ನಮ್ಮ ಗಡಿಯಾರದ ತಂತ್ರಗಾರಿಕೆಗೆ ಬರೋಣ. ಚಿತ್ರ (2)ರಲ್ಲಿ ಒರಿಯಾನ್ ನಕ್ಷತ್ರ ಪುಂಜದ ಬೀಟಲ್‌ಜೂಸ್/ಬಿಟಲ್‌ಗೀಸ್ ನಕ್ಷತ್ರವನ್ನು ಕೇಂದ್ರವಾಗಿಟ್ಟುಕೊಂಡು ಒಂದು ಕಾಲ್ಪನಿಕ ಗಡಿಯಾರವನ್ನು ಊಹಿಸಿಕೊಳ್ಳಬಹುದಾಗಿದೆ. ಈ ಕಾಲ್ಪನಿಕ ಗಡಿಯಾರದಲ್ಲಿನ ಸಂಖ್ಯೆ 6 ಪೂರ್ವ ದಿಕ್ಕಿಗಿದೆ. ಅಂದರೆ, ನೀವು ಪೂರ್ವ ದಿಕ್ಕಿಗೆ ಮುಖ ಮಾಡಿ ಒರಿಯಾನ್ ನಕ್ಷತ್ರ ಪುಂಜವನ್ನು ನೋಡಿ, ಅದರ ನಕ್ಷತ್ರ ಬಿಟಲ್‌ಗೀಸ್‌ಅನ್ನು ನೋಡಿ, ಗಡಿಯಾರದ ಸಂಖ್ಯೆ 06, ಪೂರ್ವ ದಿಕ್ಕಿಗೆ ಬರುವಂತೆ ಕಾಲ್ಪನಿಕವಾಗಿ ಗಡಿಯಾರವನ್ನು ಊಹಿಸಿಕೊಳ್ಳಬೇಕು ಎಂದರ್ಥ. ಹಾಗೆ ಊಹಿಸಿಕೊಂಡಾಗ, ಕಾಲ್ಪನಿಕ ಗಡಿಯಾರದ ಸಂಖ್ಯೆ 09 ಉತ್ತರ ದಿಕ್ಕನ್ನು, ಸಂಖ್ಯೆ 12 ಪಶ್ಚಿಮ ದಿಕ್ಕನ್ನು ಮತ್ತು ಸಂಖ್ಯೆ 03 ದಕ್ಷಿಣ ದಿಕ್ಕನ್ನು ಸೂಚಿಸುತ್ತಿರುತ್ತದೆ. ಇದು ಮೊದಲನೇ ಹಂತ.

ಚಿತ್ರ-2

ಇನ್ನು ಎರಡನೇ ಹಂತಕ್ಕೆ ಬರೋಣ. ಚಿತ್ರ (2)ರಲ್ಲಿ ಊಹಿಸಿಕೊಂಡಿರುವ ಗಡಿಯಾರ ಸಮಯ ತಿಳಿಸುವ ಗಡಿಯಾರ ಅಲ್ಲ, ಬದಲಾಗಿ ದಿಕ್ಕುಗಳನ್ನು ಸುಲಭವಾಗಿ ಗುರುತಿಸುವುದಕ್ಕೆ ಕಲ್ಪಿಸಿಕೊಂಡಿರುವ ಗಡಿಯಾರ. ಈಗ ಈ ಗಡಿಯಾರದಲ್ಲಿ ಗಂಟೆಯನ್ನು ಸೂಚಿಸುವ ಮುಳ್ಳನ್ನು ಮಾತ್ರ ಊಹಿಸಿಕೊಳ್ಳೋಣ.

ಈಗ ಒಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ -ಇಲ್ಲಿ ಒಬ್ಬ ಹವ್ಯಾಸಿ ಆಕಾಶ ವೀಕ್ಷಕ, ಹಲವರಿಗೆ ಮಾರ್ಗದರ್ಶನ ನೀಡುತ್ತಿದ್ದಾನೆ..

ಹವ್ಯಾಸಿ ಆಕಾಶ ವೀಕ್ಷಕ: ಎಲ್ಲರೂ ಪೂರ್ವ ದಿಕ್ಕಿಗೆ ತಿರುಗಿ ಒರಿಯಾನ್ ನಕ್ಷತ್ರ ಪುಂಜ ನೋಡಿ, ಒರಿಯಾನ್‌ನ ಬಿಟಲ್‌ಗೀಸ್ ನಕ್ಷತ್ರ ಕೇಂದ್ರದಲ್ಲಿರುವಂತೆ ಒಂದು ಗಡಿಯಾರ ಊಹಿಸಿಕೊಂಡು, ಅದರ 2 ಗಂಟೆಯ ದಿಕ್ಕಿನಲ್ಲಿ ಒಂದು ಕಾಲ್ಪನಿಕ ರೇಖೆ ಎಳೆಯಿರಿ, ಆ ಕಾಲ್ಪನಿಕ ರೇಖೆ ಒಂದು ನಕ್ಷತ್ರದ ಬಳಿ ಬಂದು ತಲುಪುತ್ತದೆ. ಅದೇ, ರೀಗಲ್ ನಕ್ಷತ್ರ!

ವೀಕ್ಷಕರು: [ಸಹಾಯಕ್ಕೆ ಚಿತ್ರ (3)ನ್ನು ಗಮನಿಸಿ] ಮೊದಲು ಪೂರ್ವ ದಿಕ್ಕಿಗೆ ತಿರುಗುತ್ತಾರೆ. ನಂತರ ಒರಿಯಾನ್ ನಕ್ಷತ್ರ ಪುಂಜವನ್ನು ಗುರುತಿಸಿ ಹವ್ಯಾಸಿ ಆಕಾಶ ವೀಕ್ಷಕ ಹೇಳಿದ್ದನ್ನು ಅನುಸರಿಸಿ ರೀಗಲ್ ನಕ್ಷತ್ರವನ್ನು ವೀಕ್ಷಿಸುತ್ತಾರೆ…

ಚಿತ್ರ-3

ಮೇಲಿನ ಸನ್ನಿವೇಶದಲ್ಲಿ, ಗಡಿಯಾರದ ಗಂಟೆ-ಮುಳ್ಳು ತೋರಿಸುವ ದಿಕ್ಕುಗಳಲ್ಲಿ ಕಾಲ್ಪನಿಕ ರೇಖೆಗಳನ್ನು ಉಹಿಸಿಕೊಂಡು, ಆಗಸದಲ್ಲಿ ಒಂದು ನಕ್ಷತ್ರ ಪುಂಜದಿಂದ ಇನ್ನೊಂದು ನಕ್ಷತ್ರ ಪುಂಜಕ್ಕೆ ನೋಟವನ್ನು ಬದಲಿಸಿ, ಆಕಾಶ ಕಾಯಗಳನ್ನು ವೀಕ್ಷಿಸಬೇಕು. ಇಂತಹ ಆಕಾಶ ವೀಕ್ಷಣೆಗೆ ಯಾವುದೇ ಭೌತಿಕ ಉಪಕರಣಗಳು ಬೇಕಿಲ್ಲಾ. ಅಂತೆಯೇ ಈ ಗಡಿಯಾರವನ್ನು ಬಿಟಲ್‌ಗೀಸ್ ನಂತರ ರೀಗಲ್ ನಕ್ಷತ್ರಕ್ಕೂ ಊಹಿಸಿಕೊಂಡು (ಕೇಂದ್ರವಾಗಿಸಿಕೊಂಡು) ಅಲ್ಲಿಂದ ಮುಂದೆ ತೆರಳಬಹುದು.

ಇದು, ಹವ್ಯಾಸಿ ಖಗೋಳ ವಿಜ್ಞಾನಿಗಳು ಯಾವುದೇ ಅನ್ಯ ಉಪಕರಣಗಳಿಲ್ಲದೆ ಆಕಾಶ ವೀಕ್ಷಣೆಯನ್ನು ಮಾಡಲು ಕಂಡುಕೊಂಡ ಮಾರ್ಗ ಮತ್ತು ಇದು ಸುಲಭವಾಗಿ ಆಕಾಶ ವೀಕ್ಷಣೆ ಕಲಿಸುವ ಮಾರ್ಗ. ಇದೊಂದೇ ನಿಯಮ ಅಥವಾ ಅಧಿಕೃತವಾದ ಆಕಾಶ ವೀಕ್ಷಣೆಯ ಮಾರ್ಗವೆಂದೇನಲ್ಲ. ಆಕಾಶ ವೀಕ್ಷಣೆಯು ಅಭ್ಯಾಸವಾದ ಮೇಲೆ, ಎಲ್ಲರೂ ತಮ್ಮತಮ್ಮ ಸೃಜನಶೀಲತೆಯಿಂದ ಇಂತಹ ಇನ್ನೂ ಹತ್ತು ಹಲವು ಮಾರ್ಗಗಳನ್ನು ಕಂಡುಕೊಳ್ಳಬಹುದು.

ಚಿತ್ರ-4

ಚಿತ್ರ (4): ಗಡಿಯಾರದ 11 ಗಂಟೆಯ ಆಸುಪಾಸಿನ ದಿಕ್ಕಿನಲ್ಲಿ, ಒಂದು ಕಾಲ್ಪನಿಕ ರೇಖೆಯನ್ನು ಉಹಿಸಿಕೊಳ್ಳಿ, ಆ ರೇಖೆಯು ಕಿತ್ತಳೆ ಬಣ್ಣದ ನಕ್ಷತ್ರದ ಬಳಿ ಬರುತ್ತದೆ. ಇದೇ ರೋಹಿಣಿ ನಕ್ಷತ್ರ. ಹಿಂದಿನ ಸಂಚಿಕೆಯ ಲೇಖನದಲ್ಲಿ ರೋಹಿಣಿ ನಕ್ಷತ್ರವನ್ನು ಒರಿಯಾನ್ ನಕ್ಷತ್ರ ಪುಂಜದಿಂದ ಹೇಗೆ ಗುರುತಿಸಿದೆವು ಎಂಬುದನ್ನು ನೆನಪಿಸಿಕೊಳ್ಳಿ. ಕಾಲ್ಪನಿಕ ಗಡಿಯಾರದ ಮೂಲಕ ಗುರುತಿಸುವುದು ಸಲಭವೋ ಅಥವಾ ಹಿಂದಿನ ಸಂಚಿಕೆಯ ಮಾರ್ಗಸೂಚಿ ಸುಲಭವೋ ನೀವೇ ಕಂಡುಕೊಳ್ಳಿ. ರೋಹಿಣಿ ನಕ್ಷತ್ರವು ವೃಷಭ ನಕ್ಷತ್ರ ಪುಂಜದಲ್ಲಿದೆ (ಇದು ರಾಶಿಯೂ ಹೌದು). ಈ ರೋಹಿಣಿ ನಕ್ಷತ್ರ ಸೂರ್ಯನಿಗೆ ಹೋಲಿಸಿದರೆ 44 ಪಟ್ಟು ದೊಡ್ಡದಿದೆ ಹಾಗೂ ಸುಮಾರು 65 ಜ್ಯೋತಿರ್ವರ್ಷಗಳ ದೂರವಿದೆ [1 ಜ್ಯೋತಿರ್ವರ್ಷವೆಂದರೆ 9.5 ಟ್ರಿಲಿಯನ್ (1012) ಕಿಲೋಮೀಟರ್]. ನಮ್ಮ ಸೂರ್ಯ 8 ಜ್ಯೋತಿರ್ವರ್ಷಗಳ ದೂರದಲ್ಲಿದ್ದಾನೆ.

ಚಿತ್ರ-5

ಚಿತ್ರ (5): ಈಗ, ಗಡಿಯಾರದ ಒಂಬತ್ತುವರೆ ಗಂಟೆಯ ದಿಕ್ಕನ್ನು ಉಹಿಸಿಕೊಳ್ಳಿ, ಬಿಟಲ್‌ಗೀಸ್ ನಕ್ಷತ್ರದಿಂದ ನೇರವಾಗಿ ಆ ದಿಕ್ಕು ಮತ್ತೊಂದು ಪ್ರಕಾಶಮಾನವಾದ ನಕ್ಷತ್ರಕ್ಕೆ ಬಡಿಯುತ್ತದೆ. ಇದು ಪೆಲ್ಲಾ ನಕ್ಷತ್ರ. ಆರಿಗಾ ನಕ್ಷತ್ರ ಪುಂಜದ ಅತೀ ಹೆಚ್ಚು ಪ್ರಕಾಶಮಾನವಾದ ನಕ್ಷತ್ರ. ಈ ನಕ್ಷತ್ರವನ್ನು ಬ್ರಹ್ಮ ಹೃದಯ ಎಂದೂಕರೆಯುತ್ತಾರೆ. ಈ ನಕ್ಷತ್ರ 42 ಜ್ಯೋತಿರ್ವರ್ಷಗಳ ದೂರವಿದ್ದು, ಸೂರ್ಯನಿಗಿಂತ 12 ಪಟ್ಟು ದೊಡ್ಡದಿದೆ. ಹಾಗೆಯೇ ಚಿತ್ರ (5)ರಲ್ಲಿ ಗುರುತಿಸಿರುವ ಆರಿಗಾ ನಕ್ಷತ್ರ ಪುಂಜದ ಪೆಂಟಗನ್‌ನಲ್ಲಿರುವ ನಕ್ಷತ್ರಗಳನ್ನು ವೀಕ್ಷಿಸಲು ಪ್ರಯತ್ನಿಸಿ.

ಚಿತ್ರ-6

ಚಿತ್ರ (6): ಇದೇ ರೀತಿ, ಗಡಿಯಾರದ 07.30 ದಿಕ್ಕಿನಲ್ಲಿ ನೋಡಿ, ಈ ದಿಕ್ಕಿನಲ್ಲಿ ಕಾಣುವ ಪ್ರಕಾಶಮಾನವಾದ ನಕ್ಷತ್ರ ಪೊಲಾಕ್ಸ್. ಅದರ ಪಕ್ಕದಲ್ಲಿರುವ ಇನ್ನೊಂದು ಪ್ರಕಾಶಮಾನವಾದ ನಕ್ಷತ್ರ ಕ್ಯಾಸ್ಟರ್ ಎಂದು. ಈ ಕ್ಯಾಸ್ಟ್‌ರ್ ಮತ್ತು ಪೊಲಾಕ್ಸ್ ಮಿಥುನ ನಕ್ಷತ್ರ ಪುಂಜದಲ್ಲಿದೆ. ಮಿಥುನ ನಕ್ಷತ್ರ ಪುಂಜ ರಾಶಿಯು ಹೌದು. ನೀವು ಮಿಥುನ ರಾಶಿಯ ಪುನರ್ವಸು ನಕ್ಷತ್ರ ಎಂದು ಕೇಳಿರಬಹುದು. ಈ ಪುನರ್ವಸು ನಕ್ಷತ್ರವೇ ಪೊಲಾಕ್ಸ್ ನಕ್ಷತ್ರ. ಇದು 33 ಜ್ಯೋತಿರ್ವರ್ಷಗಳ ದೂರವಿದ್ದು, ಸೂರ್ಯನಿಗಿಂತ 8 ಪಟ್ಟು ದೊಡ್ಡದಿದೆ.

ಚಿತ್ರ (7): ಗಡಿಯಾರದ ನಾಲ್ಕು ಗಂಟೆಯ ದಿಕ್ಕು. ಈ ದಿಕ್ಕಿನಲ್ಲಿ ಯಾವ ನಕ್ಷತ್ರ ಇದೆ? ಸಿರಿಯಸ್ ನಕ್ಷತ್ರ. ಈ ಸಿರಿಯಸ್ ನಕ್ಷತ್ರ ಆಕಾಶದ ಅತ್ಯಂತ ಪ್ರಕಾಶಮಾನವಾದ ನಕ್ಷತ್ರ. ಇದನ್ನು ಲುಬ್ದಕ ನಕ್ಷತ್ರ ಎಂದೂ ಕರೆಯುತ್ತಾರೆ. ಇದು ಕ್ಯಾನಿಸ್ ಮೇಜರ್ ಎನ್ನುವ ನಕ್ಷತ್ರ ಪುಂಜದಲ್ಲಿದೆ. ಈ ನಕ್ಷತ್ರದ ವಿಶೇಷವೆಂದರೆ, ಸಿರಿಯಸ್ ಮೂರು ನಕ್ಷತ್ರಗಳುಳ್ಳ ಒಂದು ವ್ಯವಸ್ಥೆ ಎಂದು ಗ್ರಹಿಸಿರುವುದು. ಅಂದರೆ, ಮೂರು ನಕ್ಷತ್ರಗಳು ಒಟ್ಟಾಗಿ ತಿರುಗುತ್ತಿರುವಂತೆ. ಬರಿಗಣ್ಣಿಗೆ ಸಿರಿಯಸ್ ಒಂದೇ ನಕ್ಷತ್ರವಾಗಿ ಕಾಣಿಸಿದರೂ, ದೊಡ್ಡ ದೂರದರ್ಶಕದಲ್ಲಿ ಸಿರಿಯಸ್‌ನ ಇತರೆ ನಕ್ಷತ್ರಗಳನ್ನು ಕಾಣಬಹುದಾಗಿದೆ. ಈ ನಕ್ಷತ್ರ ಸುಮಾರು 8.5 ಜ್ಯೋತಿರ್ವರ್ಷಗಳ ದೂರವಿದ್ದು, ಸೂರ್ಯನಿಗಿಂತಲೂ 1.7 ರಷ್ಟು ದೊಡ್ಡದಾಗಿದೆ.

ಚಿತ್ರ-7

ಇಂತಹ ಕಾಲ್ಪನಿಕ ಗಡಿಯಾರವನ್ನು ಊಹಿಸಿಕೊಂಡು ಆಕಾಶ ವೀಕ್ಷಣೆಯು ಅಭ್ಯಾಸವಾದರೆ, ಆಗಸದ ವಿವಿಧ ಭಾಗಗಳಲ್ಲಿರುವ ನಕ್ಷತ್ರ, ನಕ್ಷತ್ರ ಪುಂಜಗಳು ಮತ್ತು ನಿಹಾರಿಕೆಗಳ ಪರಿಚಯ ಬಹಳ ವೇಗವಾಗಿ ಮತ್ತು ಸುಲಭವಾಗಿ ಲಭಿಸುತ್ತದೆ.

ಈ ಕಾಲ್ಪನಿಕ ಗಡಿಯಾರದ ಆಕಾಶ ವೀಕ್ಷಣೆ ಕ್ರಮವನ್ನು ಇನ್ನಷ್ಟು ಅನ್ವೇಷಿಸಿ. ಏನಾದರೂ ಪ್ರಶ್ನೆಗಳಿದ್ದರೆ ಇಲ್ಲಿ ಹಂಚಿಕೊಳ್ಳಿ- [email protected]


ಇದನ್ನೂ ಓದಿ: ಬೆಳ್ಳಿ ಚುಕ್ಕಿ: ರಾತ್ರಿ ಆಕಾಶದಲ್ಲಿ ಒರಿಯಾನ್ ನಿಹಾರಿಕೆ ಮತ್ತು ಕೃತಿಕಾ ನಕ್ಷತ್ರ ಪುಂಜ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...