Homeಮುಖಪುಟಬೆಳ್ಳಿಚುಕ್ಕಿ: ಕಾಲ್ಪನಿಕ ಗಡಿಯಾರದ ಮೂಲಕ ಆಕಾಶಕಾಯಗಳನ್ನು ಗುರುತಿಸುವ ಬಗೆ!

ಬೆಳ್ಳಿಚುಕ್ಕಿ: ಕಾಲ್ಪನಿಕ ಗಡಿಯಾರದ ಮೂಲಕ ಆಕಾಶಕಾಯಗಳನ್ನು ಗುರುತಿಸುವ ಬಗೆ!

- Advertisement -
- Advertisement -

ಚಳಿಗಾಲದ ಶುಭ್ರ ಆಕಾಶದಲ್ಲಿ ಆಕಾಶ ವೀಕ್ಷಣೆ ಮಾರ್ಗದರ್ಶಿಯ ಸಹಾಯದಿಂದ, ಸೌರ ಮಂಡಲದ ಗ್ರಹಗಳು, ಚಂದ್ರನ ಬಿಂಬಾವಸ್ಥೆಗಳು, ನಕ್ಷತ್ರ ಪುಂಜಗಳು, ನಿಹಾರಿಕೆ ಮತ್ತು ನಕ್ಷತ್ರಗಳ ಗೊಂಚಲುಗಳನ್ನು ನೋಡಿದ ಸವಿ ಇನ್ನೂ ಉಳಿದಿರುವಂತೆಯೇ, ಆಕಾಶ ವೀಕ್ಷಣೆಯ ಆಸಕ್ತಿಗಳನ್ನು ಹಾಗೂ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಇದು ಸಕಾಲ.

ಆಕಾಶ ವೀಕ್ಷಣೆಯ ಹವ್ಯಾಸ ಉನ್ನತಿಯಾದಂತೆ, ಆಗಸದಲ್ಲಿ ಕಾಣುವ ಕಾಯಗಳನ್ನು ಸುಲಭವಾಗಿ ವೀಕ್ಷಿಸಲು ಮತ್ತು ಇತರರಿಗೆ ಸುಲಭವಾಗಿ ತಿಳಿಸಲು ಅನುವಾಗುವಂತೆ ಕೆಲವು ಕಾಲ್ಪನಿಕ ಉಪಕರಣಗಳನ್ನು/ ಮಾರ್ಗಸೂಚಿಯನ್ನು ಖಗೋಳ ವಿಜ್ಞಾನಾಸಕ್ತರು ಜಗತ್ತಿನಾದ್ಯಂತ ಬಳಸುತ್ತಾರೆ. ಅಂತಹ ಒಂದು ಕಾಲ್ಪನಿಕ ಉಪಕರಣದ/ಮಾರ್ಗಸೂಚಿ ಸಹಾಯದಿಂದ ಆಕಾಶ ವೀಕ್ಷಣೆ ಮಾಡುವುದು ಹೇಗೆ ಎಂಬುದನ್ನು ಈ ಸಂಚಿಕೆಯಲ್ಲಿ ತಿಳಿಯೋಣ. ನೆನಪಿರಲಿ, ಇದು ಕಾಲ್ಪನಿಕವಾಗಿ ನಿಮ್ಮ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವ ಉಪಕರಣ! ಬೌತಿಕವಾಗಿ ಖರೀದಿ ಮಾಡುವುದಲ್ಲ.

ಅಂದಹಾಗೆ, ಯಾವುದಪ್ಪಾ ಈ ಉಪಕರಣ ಅಂದರೆ, ದಿನ ನಾವು-ನೀವು ಸಮಯ ನೋಡಲು ಬಳಸುವ ಗಡಿಯಾರವೇ ಆ ಉಪಕರಣ! ಹೌದು ಗಡಿಯಾರವನ್ನು ಆಗಸದಲ್ಲಿ ಕಲ್ಪಿಸಿಕೊಂಡು ಆಕಾಶ ವೀಕ್ಷಣೆ ಮಾಡುವುದು ಹವ್ಯಾಸಿ ಆಕಾಶ ವೀಕ್ಷಕರ ತಂತ್ರಗಾರಿಕೆ. ಆಕಾಶ ವೀಕ್ಷಣೆಯ ಸಂದರ್ಭದಲ್ಲಿ ಅತ್ಯಂತ ಸುಲಭವಾಗಿ ಯಾವ ದಿಕ್ಕಿನಲ್ಲಿ, ಯಾವ ನಕ್ಷತ್ರ ಪುಂಜವಿದೆ, ಗ್ರಹವಿದೆ ಮತ್ತು ನಿಹಾರಿಕೆಗಳಿವೆ ಎಂಬುದನ್ನು ಇತರರಿಗೂ ಸೂಚಿಸಲು ಈ ತಂತ್ರಗಾರಿಕೆಯನ್ನು ಆಕಾಶ ವೀಕ್ಷಕರು ಬಳಸುತ್ತಾರೆ.

ಚಿತ್ರ-1

ಈಗ ಚಿತ್ರ (1)ನ್ನು ಗಮನಿಸಿ, ಈ ಚಿತ್ರದಲ್ಲಿರುವ ಪ್ರಸಿದ್ಧ ನಕ್ಷತ್ರ ಪುಂಜವನ್ನು ನೀವು ಈಗಾಗಲೇ ಆಗಸದಲ್ಲಿ ಕಂಡಿದ್ದೀರಿ ಅಲ್ಲವೆ? ಹೌದು ಆ ನಕ್ಷತ್ರ ಪುಂಜ ಒರಿಯಾನ್ ನಕ್ಷತ್ರ ಪುಂಜ. ಈ ತಿಂಗಳ ಯಾವುದೇ ದಿನರಾತ್ರಿ 7 ಗಂಟೆಯಿಂದ 7.30 ಗಂಟೆಯ ಸಮಯದಲ್ಲಿ, ಪೂರ್ವಕ್ಕೆ ಮುಖಮಾಡಿ ನೆತ್ತಿಯಿಂದ ಪೂರ್ವ ದಿಕ್ಕಿಗೆ ಕಣ್ಣಾಡಿಸಿದರೆ, ಈ ಚಿತ್ರದಲ್ಲಿರುವ ಒರಿಯಾನ್ ಮತ್ತು ಎಲ್ಲಾ ನಕ್ಷತ್ರಗಳು ಹಾಗೂ ನಕ್ಷತ್ರ ಪುಂಜಗಳನ್ನು ಕಾಣಬಹುದು. ಇಲ್ಲಿರುವ ಎಲ್ಲಾ ಚಿತ್ರಗಳಲ್ಲು ನಕ್ಷತ್ರ ಪುಂಜಗಳನ್ನು ಗುರುತಿಸಲು ಕಾಲ್ಪನಿಕ ರೇಖೆಗಳನ್ನು ತಂತ್ರಾಂಶದಿಂದ ಸೃಜಿಸಲಾಗಿದೆ.

ಈಗ ನಾವು ನಮ್ಮ ಗಡಿಯಾರದ ತಂತ್ರಗಾರಿಕೆಗೆ ಬರೋಣ. ಚಿತ್ರ (2)ರಲ್ಲಿ ಒರಿಯಾನ್ ನಕ್ಷತ್ರ ಪುಂಜದ ಬೀಟಲ್‌ಜೂಸ್/ಬಿಟಲ್‌ಗೀಸ್ ನಕ್ಷತ್ರವನ್ನು ಕೇಂದ್ರವಾಗಿಟ್ಟುಕೊಂಡು ಒಂದು ಕಾಲ್ಪನಿಕ ಗಡಿಯಾರವನ್ನು ಊಹಿಸಿಕೊಳ್ಳಬಹುದಾಗಿದೆ. ಈ ಕಾಲ್ಪನಿಕ ಗಡಿಯಾರದಲ್ಲಿನ ಸಂಖ್ಯೆ 6 ಪೂರ್ವ ದಿಕ್ಕಿಗಿದೆ. ಅಂದರೆ, ನೀವು ಪೂರ್ವ ದಿಕ್ಕಿಗೆ ಮುಖ ಮಾಡಿ ಒರಿಯಾನ್ ನಕ್ಷತ್ರ ಪುಂಜವನ್ನು ನೋಡಿ, ಅದರ ನಕ್ಷತ್ರ ಬಿಟಲ್‌ಗೀಸ್‌ಅನ್ನು ನೋಡಿ, ಗಡಿಯಾರದ ಸಂಖ್ಯೆ 06, ಪೂರ್ವ ದಿಕ್ಕಿಗೆ ಬರುವಂತೆ ಕಾಲ್ಪನಿಕವಾಗಿ ಗಡಿಯಾರವನ್ನು ಊಹಿಸಿಕೊಳ್ಳಬೇಕು ಎಂದರ್ಥ. ಹಾಗೆ ಊಹಿಸಿಕೊಂಡಾಗ, ಕಾಲ್ಪನಿಕ ಗಡಿಯಾರದ ಸಂಖ್ಯೆ 09 ಉತ್ತರ ದಿಕ್ಕನ್ನು, ಸಂಖ್ಯೆ 12 ಪಶ್ಚಿಮ ದಿಕ್ಕನ್ನು ಮತ್ತು ಸಂಖ್ಯೆ 03 ದಕ್ಷಿಣ ದಿಕ್ಕನ್ನು ಸೂಚಿಸುತ್ತಿರುತ್ತದೆ. ಇದು ಮೊದಲನೇ ಹಂತ.

ಚಿತ್ರ-2

ಇನ್ನು ಎರಡನೇ ಹಂತಕ್ಕೆ ಬರೋಣ. ಚಿತ್ರ (2)ರಲ್ಲಿ ಊಹಿಸಿಕೊಂಡಿರುವ ಗಡಿಯಾರ ಸಮಯ ತಿಳಿಸುವ ಗಡಿಯಾರ ಅಲ್ಲ, ಬದಲಾಗಿ ದಿಕ್ಕುಗಳನ್ನು ಸುಲಭವಾಗಿ ಗುರುತಿಸುವುದಕ್ಕೆ ಕಲ್ಪಿಸಿಕೊಂಡಿರುವ ಗಡಿಯಾರ. ಈಗ ಈ ಗಡಿಯಾರದಲ್ಲಿ ಗಂಟೆಯನ್ನು ಸೂಚಿಸುವ ಮುಳ್ಳನ್ನು ಮಾತ್ರ ಊಹಿಸಿಕೊಳ್ಳೋಣ.

ಈಗ ಒಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ -ಇಲ್ಲಿ ಒಬ್ಬ ಹವ್ಯಾಸಿ ಆಕಾಶ ವೀಕ್ಷಕ, ಹಲವರಿಗೆ ಮಾರ್ಗದರ್ಶನ ನೀಡುತ್ತಿದ್ದಾನೆ..

ಹವ್ಯಾಸಿ ಆಕಾಶ ವೀಕ್ಷಕ: ಎಲ್ಲರೂ ಪೂರ್ವ ದಿಕ್ಕಿಗೆ ತಿರುಗಿ ಒರಿಯಾನ್ ನಕ್ಷತ್ರ ಪುಂಜ ನೋಡಿ, ಒರಿಯಾನ್‌ನ ಬಿಟಲ್‌ಗೀಸ್ ನಕ್ಷತ್ರ ಕೇಂದ್ರದಲ್ಲಿರುವಂತೆ ಒಂದು ಗಡಿಯಾರ ಊಹಿಸಿಕೊಂಡು, ಅದರ 2 ಗಂಟೆಯ ದಿಕ್ಕಿನಲ್ಲಿ ಒಂದು ಕಾಲ್ಪನಿಕ ರೇಖೆ ಎಳೆಯಿರಿ, ಆ ಕಾಲ್ಪನಿಕ ರೇಖೆ ಒಂದು ನಕ್ಷತ್ರದ ಬಳಿ ಬಂದು ತಲುಪುತ್ತದೆ. ಅದೇ, ರೀಗಲ್ ನಕ್ಷತ್ರ!

ವೀಕ್ಷಕರು: [ಸಹಾಯಕ್ಕೆ ಚಿತ್ರ (3)ನ್ನು ಗಮನಿಸಿ] ಮೊದಲು ಪೂರ್ವ ದಿಕ್ಕಿಗೆ ತಿರುಗುತ್ತಾರೆ. ನಂತರ ಒರಿಯಾನ್ ನಕ್ಷತ್ರ ಪುಂಜವನ್ನು ಗುರುತಿಸಿ ಹವ್ಯಾಸಿ ಆಕಾಶ ವೀಕ್ಷಕ ಹೇಳಿದ್ದನ್ನು ಅನುಸರಿಸಿ ರೀಗಲ್ ನಕ್ಷತ್ರವನ್ನು ವೀಕ್ಷಿಸುತ್ತಾರೆ…

ಚಿತ್ರ-3

ಮೇಲಿನ ಸನ್ನಿವೇಶದಲ್ಲಿ, ಗಡಿಯಾರದ ಗಂಟೆ-ಮುಳ್ಳು ತೋರಿಸುವ ದಿಕ್ಕುಗಳಲ್ಲಿ ಕಾಲ್ಪನಿಕ ರೇಖೆಗಳನ್ನು ಉಹಿಸಿಕೊಂಡು, ಆಗಸದಲ್ಲಿ ಒಂದು ನಕ್ಷತ್ರ ಪುಂಜದಿಂದ ಇನ್ನೊಂದು ನಕ್ಷತ್ರ ಪುಂಜಕ್ಕೆ ನೋಟವನ್ನು ಬದಲಿಸಿ, ಆಕಾಶ ಕಾಯಗಳನ್ನು ವೀಕ್ಷಿಸಬೇಕು. ಇಂತಹ ಆಕಾಶ ವೀಕ್ಷಣೆಗೆ ಯಾವುದೇ ಭೌತಿಕ ಉಪಕರಣಗಳು ಬೇಕಿಲ್ಲಾ. ಅಂತೆಯೇ ಈ ಗಡಿಯಾರವನ್ನು ಬಿಟಲ್‌ಗೀಸ್ ನಂತರ ರೀಗಲ್ ನಕ್ಷತ್ರಕ್ಕೂ ಊಹಿಸಿಕೊಂಡು (ಕೇಂದ್ರವಾಗಿಸಿಕೊಂಡು) ಅಲ್ಲಿಂದ ಮುಂದೆ ತೆರಳಬಹುದು.

ಇದು, ಹವ್ಯಾಸಿ ಖಗೋಳ ವಿಜ್ಞಾನಿಗಳು ಯಾವುದೇ ಅನ್ಯ ಉಪಕರಣಗಳಿಲ್ಲದೆ ಆಕಾಶ ವೀಕ್ಷಣೆಯನ್ನು ಮಾಡಲು ಕಂಡುಕೊಂಡ ಮಾರ್ಗ ಮತ್ತು ಇದು ಸುಲಭವಾಗಿ ಆಕಾಶ ವೀಕ್ಷಣೆ ಕಲಿಸುವ ಮಾರ್ಗ. ಇದೊಂದೇ ನಿಯಮ ಅಥವಾ ಅಧಿಕೃತವಾದ ಆಕಾಶ ವೀಕ್ಷಣೆಯ ಮಾರ್ಗವೆಂದೇನಲ್ಲ. ಆಕಾಶ ವೀಕ್ಷಣೆಯು ಅಭ್ಯಾಸವಾದ ಮೇಲೆ, ಎಲ್ಲರೂ ತಮ್ಮತಮ್ಮ ಸೃಜನಶೀಲತೆಯಿಂದ ಇಂತಹ ಇನ್ನೂ ಹತ್ತು ಹಲವು ಮಾರ್ಗಗಳನ್ನು ಕಂಡುಕೊಳ್ಳಬಹುದು.

ಚಿತ್ರ-4

ಚಿತ್ರ (4): ಗಡಿಯಾರದ 11 ಗಂಟೆಯ ಆಸುಪಾಸಿನ ದಿಕ್ಕಿನಲ್ಲಿ, ಒಂದು ಕಾಲ್ಪನಿಕ ರೇಖೆಯನ್ನು ಉಹಿಸಿಕೊಳ್ಳಿ, ಆ ರೇಖೆಯು ಕಿತ್ತಳೆ ಬಣ್ಣದ ನಕ್ಷತ್ರದ ಬಳಿ ಬರುತ್ತದೆ. ಇದೇ ರೋಹಿಣಿ ನಕ್ಷತ್ರ. ಹಿಂದಿನ ಸಂಚಿಕೆಯ ಲೇಖನದಲ್ಲಿ ರೋಹಿಣಿ ನಕ್ಷತ್ರವನ್ನು ಒರಿಯಾನ್ ನಕ್ಷತ್ರ ಪುಂಜದಿಂದ ಹೇಗೆ ಗುರುತಿಸಿದೆವು ಎಂಬುದನ್ನು ನೆನಪಿಸಿಕೊಳ್ಳಿ. ಕಾಲ್ಪನಿಕ ಗಡಿಯಾರದ ಮೂಲಕ ಗುರುತಿಸುವುದು ಸಲಭವೋ ಅಥವಾ ಹಿಂದಿನ ಸಂಚಿಕೆಯ ಮಾರ್ಗಸೂಚಿ ಸುಲಭವೋ ನೀವೇ ಕಂಡುಕೊಳ್ಳಿ. ರೋಹಿಣಿ ನಕ್ಷತ್ರವು ವೃಷಭ ನಕ್ಷತ್ರ ಪುಂಜದಲ್ಲಿದೆ (ಇದು ರಾಶಿಯೂ ಹೌದು). ಈ ರೋಹಿಣಿ ನಕ್ಷತ್ರ ಸೂರ್ಯನಿಗೆ ಹೋಲಿಸಿದರೆ 44 ಪಟ್ಟು ದೊಡ್ಡದಿದೆ ಹಾಗೂ ಸುಮಾರು 65 ಜ್ಯೋತಿರ್ವರ್ಷಗಳ ದೂರವಿದೆ [1 ಜ್ಯೋತಿರ್ವರ್ಷವೆಂದರೆ 9.5 ಟ್ರಿಲಿಯನ್ (1012) ಕಿಲೋಮೀಟರ್]. ನಮ್ಮ ಸೂರ್ಯ 8 ಜ್ಯೋತಿರ್ವರ್ಷಗಳ ದೂರದಲ್ಲಿದ್ದಾನೆ.

ಚಿತ್ರ-5

ಚಿತ್ರ (5): ಈಗ, ಗಡಿಯಾರದ ಒಂಬತ್ತುವರೆ ಗಂಟೆಯ ದಿಕ್ಕನ್ನು ಉಹಿಸಿಕೊಳ್ಳಿ, ಬಿಟಲ್‌ಗೀಸ್ ನಕ್ಷತ್ರದಿಂದ ನೇರವಾಗಿ ಆ ದಿಕ್ಕು ಮತ್ತೊಂದು ಪ್ರಕಾಶಮಾನವಾದ ನಕ್ಷತ್ರಕ್ಕೆ ಬಡಿಯುತ್ತದೆ. ಇದು ಪೆಲ್ಲಾ ನಕ್ಷತ್ರ. ಆರಿಗಾ ನಕ್ಷತ್ರ ಪುಂಜದ ಅತೀ ಹೆಚ್ಚು ಪ್ರಕಾಶಮಾನವಾದ ನಕ್ಷತ್ರ. ಈ ನಕ್ಷತ್ರವನ್ನು ಬ್ರಹ್ಮ ಹೃದಯ ಎಂದೂಕರೆಯುತ್ತಾರೆ. ಈ ನಕ್ಷತ್ರ 42 ಜ್ಯೋತಿರ್ವರ್ಷಗಳ ದೂರವಿದ್ದು, ಸೂರ್ಯನಿಗಿಂತ 12 ಪಟ್ಟು ದೊಡ್ಡದಿದೆ. ಹಾಗೆಯೇ ಚಿತ್ರ (5)ರಲ್ಲಿ ಗುರುತಿಸಿರುವ ಆರಿಗಾ ನಕ್ಷತ್ರ ಪುಂಜದ ಪೆಂಟಗನ್‌ನಲ್ಲಿರುವ ನಕ್ಷತ್ರಗಳನ್ನು ವೀಕ್ಷಿಸಲು ಪ್ರಯತ್ನಿಸಿ.

ಚಿತ್ರ-6

ಚಿತ್ರ (6): ಇದೇ ರೀತಿ, ಗಡಿಯಾರದ 07.30 ದಿಕ್ಕಿನಲ್ಲಿ ನೋಡಿ, ಈ ದಿಕ್ಕಿನಲ್ಲಿ ಕಾಣುವ ಪ್ರಕಾಶಮಾನವಾದ ನಕ್ಷತ್ರ ಪೊಲಾಕ್ಸ್. ಅದರ ಪಕ್ಕದಲ್ಲಿರುವ ಇನ್ನೊಂದು ಪ್ರಕಾಶಮಾನವಾದ ನಕ್ಷತ್ರ ಕ್ಯಾಸ್ಟರ್ ಎಂದು. ಈ ಕ್ಯಾಸ್ಟ್‌ರ್ ಮತ್ತು ಪೊಲಾಕ್ಸ್ ಮಿಥುನ ನಕ್ಷತ್ರ ಪುಂಜದಲ್ಲಿದೆ. ಮಿಥುನ ನಕ್ಷತ್ರ ಪುಂಜ ರಾಶಿಯು ಹೌದು. ನೀವು ಮಿಥುನ ರಾಶಿಯ ಪುನರ್ವಸು ನಕ್ಷತ್ರ ಎಂದು ಕೇಳಿರಬಹುದು. ಈ ಪುನರ್ವಸು ನಕ್ಷತ್ರವೇ ಪೊಲಾಕ್ಸ್ ನಕ್ಷತ್ರ. ಇದು 33 ಜ್ಯೋತಿರ್ವರ್ಷಗಳ ದೂರವಿದ್ದು, ಸೂರ್ಯನಿಗಿಂತ 8 ಪಟ್ಟು ದೊಡ್ಡದಿದೆ.

ಚಿತ್ರ (7): ಗಡಿಯಾರದ ನಾಲ್ಕು ಗಂಟೆಯ ದಿಕ್ಕು. ಈ ದಿಕ್ಕಿನಲ್ಲಿ ಯಾವ ನಕ್ಷತ್ರ ಇದೆ? ಸಿರಿಯಸ್ ನಕ್ಷತ್ರ. ಈ ಸಿರಿಯಸ್ ನಕ್ಷತ್ರ ಆಕಾಶದ ಅತ್ಯಂತ ಪ್ರಕಾಶಮಾನವಾದ ನಕ್ಷತ್ರ. ಇದನ್ನು ಲುಬ್ದಕ ನಕ್ಷತ್ರ ಎಂದೂ ಕರೆಯುತ್ತಾರೆ. ಇದು ಕ್ಯಾನಿಸ್ ಮೇಜರ್ ಎನ್ನುವ ನಕ್ಷತ್ರ ಪುಂಜದಲ್ಲಿದೆ. ಈ ನಕ್ಷತ್ರದ ವಿಶೇಷವೆಂದರೆ, ಸಿರಿಯಸ್ ಮೂರು ನಕ್ಷತ್ರಗಳುಳ್ಳ ಒಂದು ವ್ಯವಸ್ಥೆ ಎಂದು ಗ್ರಹಿಸಿರುವುದು. ಅಂದರೆ, ಮೂರು ನಕ್ಷತ್ರಗಳು ಒಟ್ಟಾಗಿ ತಿರುಗುತ್ತಿರುವಂತೆ. ಬರಿಗಣ್ಣಿಗೆ ಸಿರಿಯಸ್ ಒಂದೇ ನಕ್ಷತ್ರವಾಗಿ ಕಾಣಿಸಿದರೂ, ದೊಡ್ಡ ದೂರದರ್ಶಕದಲ್ಲಿ ಸಿರಿಯಸ್‌ನ ಇತರೆ ನಕ್ಷತ್ರಗಳನ್ನು ಕಾಣಬಹುದಾಗಿದೆ. ಈ ನಕ್ಷತ್ರ ಸುಮಾರು 8.5 ಜ್ಯೋತಿರ್ವರ್ಷಗಳ ದೂರವಿದ್ದು, ಸೂರ್ಯನಿಗಿಂತಲೂ 1.7 ರಷ್ಟು ದೊಡ್ಡದಾಗಿದೆ.

ಚಿತ್ರ-7

ಇಂತಹ ಕಾಲ್ಪನಿಕ ಗಡಿಯಾರವನ್ನು ಊಹಿಸಿಕೊಂಡು ಆಕಾಶ ವೀಕ್ಷಣೆಯು ಅಭ್ಯಾಸವಾದರೆ, ಆಗಸದ ವಿವಿಧ ಭಾಗಗಳಲ್ಲಿರುವ ನಕ್ಷತ್ರ, ನಕ್ಷತ್ರ ಪುಂಜಗಳು ಮತ್ತು ನಿಹಾರಿಕೆಗಳ ಪರಿಚಯ ಬಹಳ ವೇಗವಾಗಿ ಮತ್ತು ಸುಲಭವಾಗಿ ಲಭಿಸುತ್ತದೆ.

ಈ ಕಾಲ್ಪನಿಕ ಗಡಿಯಾರದ ಆಕಾಶ ವೀಕ್ಷಣೆ ಕ್ರಮವನ್ನು ಇನ್ನಷ್ಟು ಅನ್ವೇಷಿಸಿ. ಏನಾದರೂ ಪ್ರಶ್ನೆಗಳಿದ್ದರೆ ಇಲ್ಲಿ ಹಂಚಿಕೊಳ್ಳಿ- [email protected]


ಇದನ್ನೂ ಓದಿ: ಬೆಳ್ಳಿ ಚುಕ್ಕಿ: ರಾತ್ರಿ ಆಕಾಶದಲ್ಲಿ ಒರಿಯಾನ್ ನಿಹಾರಿಕೆ ಮತ್ತು ಕೃತಿಕಾ ನಕ್ಷತ್ರ ಪುಂಜ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...