Homeಅಂಕಣಗಳುಗೌರಿ ಕಾರ್ನರ್: ಭಾಷೆಯನ್ನು ವಿಭಜಿಸುವುದು ಹೇಗೆ?

ಗೌರಿ ಕಾರ್ನರ್: ಭಾಷೆಯನ್ನು ವಿಭಜಿಸುವುದು ಹೇಗೆ?

- Advertisement -
- Advertisement -

ಮೊನ್ನೆ ಬೆಂಗಳೂರಿನಲ್ಲಿ ಒಂದು ಅಪರೂಪದ ಸಂಜೆಯನ್ನು ಅರುಂಧತಿ ನಾಗ್‌ರವರು ಏರ್ಪಡಿಸಿದ್ದರು. ಅಂದಿನ ಕಾರ್ಯಕ್ರಮದಲ್ಲಿ, ಅವರ ಕನಸಿನ ’ರಂಗಶಂಕರ’ಕ್ಕಾಗಿ ಕಾರ್ಪೊರೆಟ್ ಕಂಪನಿಗಳಿಂದ ಹಣವನ್ನು ಸಂಗ್ರಹಿಸುವ ಉದ್ದೇಶ ಅವರದ್ದಾಗಿದ್ದರೂ, ಕೆಲವು ಸ್ನೇಹಿತರನ್ನೂ ಆಹ್ವಾನಿಸಿದ್ದರು.

ಕಳೆದ ಹಲವಾರು ವರ್ಷಗಳಿಂದ ಅರು (ಅರುಂಧತಿ ನಾಗ್) ಈ ರಂಗಮಂದಿರಕ್ಕಾಗಿ ಏನೆಲ್ಲಾ ಸರ್ಕಸ್ ನಡೆಸಿದ್ದಾರೆ ಎಂಬುದು ನನಗೆ ಗೊತ್ತು. ಕನಸುಗಾರರಾಗಿದ್ದ ಶಂಕರ್ ನಾಗ್ ಬದುಕಿದ್ದಿದ್ದರೆ ಆತ ತನ್ನ ಆಕಾಂಕ್ಷೆಗಳ ಬೆನ್ನೇರಿ ಇಷ್ಟೊತ್ತಿಗಾಗಲೇ ಪಾಪರ್ ಆಗಿರುತ್ತಿದ್ದರು ಎಂಬುದರ ಬಗ್ಗೆ ನನಗೆ ಸಂಶಯವಿಲ್ಲ. ಆದರೆ ಅರು ಮಾತ್ರ ಈ ’ರಂಗಶಂಕರ’ದ ಕನಸಿನಲ್ಲೇ ತನ್ನನ್ನು ತೊಡಗಿಸಿಕೊಂಡಿರುವ ಮಹಿಳೆ. ಈ ರಂಗಮಂದಿರ ಆಕೆಯ ದಿವಂಗತ ಪತಿ ಶಂಕರ್ ನೆನಪಿಗೆ ಮಾತ್ರವಲ್ಲ, ಅದರಿಂದ ರಂಗಕ್ಷೇತ್ರಕ್ಕೆ ತನ್ನ ಅಲ್ಪಕಾಣಿಕೆಯನ್ನಾದರೂ ಸಲ್ಲಿಸಬೇಕು ಎಂಬ ಆಕಾಂಕ್ಷೆ ಅರು ಅವರದ್ದು.

ಈ ನಿಟ್ಟಿನಲ್ಲಿ ಅರು ಮೊನ್ನೆ ತನ್ನ ಸ್ನೇಹಿತರಾದ ಶಬನಾ ಅಜ್ಮಿ ಮತ್ತು ಜಾವೇದ್ ಆಖ್ತರ್ ಅವರನ್ನು ಆಹ್ವಾನಿಸಿದ್ದರು.

ಜಾವೇದ್ ಅಖ್ತರ್‌ರವರ ಜಾತ್ಯತೀತ ನಿಲುವುಗಳ ಬಗ್ಗೆಯಾಗಲೀ, ಅವರ ಸಾಹಿತ್ಯಕ ಸಾಧನೆಗಳ ಬಗ್ಗೆಯಾಗಲೀ ಇಲ್ಲಿ ಮತ್ತೆ ಹೇಳುವ ಅವಶ್ಯಕತೆ ಇಲ್ಲ. ಹಿಂದೂ ಮೂಲಭೂತವಾದ ಹೆಚ್ಚಾಗುತ್ತಿರುವ ಈಗಿನ ಸೂಕ್ಷ್ಮ ಸಂದರ್ಭದಲ್ಲಿ ಮುಸ್ಲಿಮ್ ಬುದ್ಧಿಜೀವಿಗಳು ಕೂಡಾ ಇಸ್ಲಾಂನ ಮೂಲಭೂತವಾದಿಗಳನ್ನು ಟೀಕಿಸಲು ಹಿಂಜರಿಯುತ್ತಿದ್ದಾರೆ. ಆದರೆ ಜಾವೇದ್ ಅಖ್ತರ್ ಮತ್ತು ಶಬನಾ ಅಜ್ಮಿ ತಾವು ನಿಷ್ಟಾವಂತ ಭಾರತೀಯ ಜಾತ್ಯತೀತವಾದಿಗಳು ಎಂಬುದನ್ನು ಮತ್ತೆ ಮತ್ತೆ ಹೇಳುವ ಧೈರ್ಯ ತೋರುತ್ತಿದ್ದಾರೆ. ಶಬನಾ ಅಜ್ಮಿ ಅವರು “ಇಮಾಮ್ ಭುಕಾರಿಯವರು ಆಫ್ಘಾನಿಸ್ತಾನದ ತಾಲಿಬಾನ್‌ಗೆ ಬೆಂಬಲ ನೀಡುವುದಿದ್ದರೆ ಭಾರತದ ಸರ್ಕಾರ ಅವರನ್ನು ಆಫ್ಘಾನಿಸ್ತಾನಕ್ಕೆ ಎತ್ತಿಹಾಕುವುದೇ ಒಳ್ಳೆಯದು” ಎಂದು ಹೇಳಿದ್ದಾರೆ, ಜಾವೇದ್ ಅಖ್ತರ್ ಅವರನ್ನು ಪಾಕಿಸ್ತಾನದ ಬರಹಗಾರರೊಬ್ಬರು “ನಿಮಗೆ ಭಾರತದಲ್ಲಿ ಮುಸ್ಲಿಂ ಲೇಖಕನಾಗಿ ಕಷ್ಟವಾಗಿಲ್ಲವೇ?” ಎಂದು ಕೇಳಿದಾಗ, “ನಾನು ಪಾಕಿಸ್ತಾನಿಯಾದ ನಿನ್ನನ್ನು ಮಾತನಾಡಿಸುವಾಗ ಭಾರತೀಯನಾಗಿ ಮಾತನಾಡುವೆ. ಆದರೆ ನನ್ನ ದೇಶದಲ್ಲಿ ಶಿವಸೇನೆಯ ಬಾಳಠಾಕ್ರೆಯೊಂದಿಗೆ ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಚರ್ಚಿಸುವಾಗ ಭಾರತೀಯ ಮುಸ್ಲಿಂನಾಗಿ ಮಾತನಾಡುವೆ. ನನ್ನಿಂದ ಭಾರತದ ವಿರುದ್ಧ ಯಾವುದೇ ಹೇಳಿಕೆ ನಿನಗೆ ಲಭಿಸುವುದಿಲ್ಲ.” ಎಂದೇ ಗುಡುಗಿದ್ದರು.

ಮೊನ್ನೆ ಜಾವೇದ್ ತಮ್ಮ ಉರ್ದು ಪದ್ಯಗಳ ಸಂಕಲನವಾದ ’ತರ್ಕಶ್‌’ನಿಂದ ಆಯ್ದ ಕವನಗಳನ್ನು ಓದಿದಾಗ, ಅವರ ಮಡದಿ ಶಬನಾ ಆ ಪದ್ಯಗಳ ಇಂಗ್ಲಿಷ್ ಅನುವಾದಗಳನ್ನು ಓದಿದರು. ಅವುಗಳಲ್ಲಿ ನನಗೆ ಬಹಳ ಇಷ್ಟವಾದ ಎರಡು ಪದ್ಯಗಳು ’ದಂಗೆಯ ಬಳಿಕ’ ಮತ್ತು ’ಪ್ರಾರ್ಥನೆ’. ಇವುಗಳನ್ನು ನಾನೇ ಅನುವಾದ ಮಾಡುವುದಕ್ಕಿಂತ, ಈ ಪದ್ಯಗಳನ್ನು ಈಗಾಗಲೇ ಕನ್ನಡಕ್ಕೆ ಅನುವಾದಿಸಿರುವ ಖ್ಯಾತ ಕವಿಯತ್ರಿ ಹಾ.ಮ.ಕನಕರವರನ್ನು ಮಾತನಾಡಿಸಿದೆ. ತಕ್ಷಣವೇ ಕನಕ ಆ ಎರಡು ಪದ್ಯಗಳ ಅನುವಾದಗಳನ್ನು ಈಮೇಲ್ ಮೂಲಕ ಕಳುಹಿಸಿದರು. ಅವುಗಳಲ್ಲಿ ಮೊದಲನೆಯದು ’ದಂಗೆಯ ಬಳಿಕ’.

ಗಾಢ ನೀರವತೆ
ಸದ್ದಿಲ್ಲದೇ ಮನೆಗಳಿಂದ
ದಟ್ಟ ಹೊಗೆ ಕಪ್ಪಗೆ
ಮಲಿನ ಎದೆಯಿಂದ
ದೂರದೂರಕ್ಕೆ ಹರಡುತ್ತಾ
ಗಾಢ ನೀರವತೆ

ಶವದಂತೆ ಮಲಗಿರುವ ರಸ್ತೆ
ಮುಂದೆ ಗಾಡಿ
ಅಡಿಮೇಲಾಗಿ
ಗಾಲಿಗಳನ್ನು ಗಾಳಿಗೆ ಎತ್ತಿ
ನೋಡುತ್ತಿದೆ ಆಕಾಶದತ್ತ ಬೆಕ್ಕಸ ಬೆರಗಾಗಿ
ಆಗಿದ್ದನ್ನೆಲ್ಲ ನಂಬಲೇ ಆಗದಂತೆ
ಗಾಢ ನೀರವತೆ

ಧೂಳೀಪಟವಾದ ಅಂಗಡಿ
ಚೀತ್ಕಾರದ ನಂತರ
ತೆರೆದಂತೇ ಇರುವ ಬಾಯಿ
ಮುರಿದ ಕಿಟಕಿ ಸಂದಿನಿಂದ
ಚದುರಿರುವ
ಬಳೆಯ ಚೂರುಗಳನ್ನು
ದುಗುಡ ತುಂಬ ಆಸೆಯಿಂದ ನಿರುಕಿಸುತ್ತಿದೆ

ನಿನ್ನೆಯವರೆಗೆ ಈ ಚೂರುಗಳೇ ಆ ಬೊಚ್ಚು ಬಾಯ
ನೂರು ವರ್ಣದ ಹಲ್ಲುಗಳಾಗಿದ್ದವು
ಗಾಢ ನೀರವತೆ
ಗಾಢ ನೀರವತೆಯು ಹೀಗಂದಿತು
ಕೇಳು ಧೂಳಿಪಟವಾದ ಅಂಗಡಿಯೇ
ಹೊಗೆಯಾಡುತ್ತಿರುವ ಮನೆಯೇ
ಮುರಿದ ಗಾಡಿಯೇ
ನೀವೊಂದೇ ಅಲ್ಲ
ಇಲ್ಲಿ ಇನ್ನೂ ಇವೆ
ಮುರಿದುಹೋದಂತವು
ದುಃಖಿಸೋಣ ಅವುಗಳಿಗೆ

ಆದರೆ ಮೊದಲು ಇವರಿಗಾಗಿ ಅಳೋಣ
ಲೂಟಿ ಮಾಡಲು ಬಂದು
ತಾವೇ ಲೂಟಿಯಾದರಲ್ಲ
ಏನು ಲೂಟಿಯಾಯಿತು
ಎಂಬ ಅರಿವೂ ಇಲ್ಲ
ಅವರಿಗೆ
ಮಂದದೃಷ್ಟಿ
ಶತಶತಮಾನದ ಸಂಸ್ಕೃತಿ
ಆ ಬಡಪಾಯಿಗಳಿಗೆ ಕಾಣಲೇ ಇಲ್ಲ.

ಜಾವೇದ್ ಅವರು ಈ ಪದ್ಯವನ್ನು ಓದಿದ ನಂತರ, ಪ್ರೇಕ್ಷಕರಲ್ಲಿದ್ದ ಓರ್ವ ಮಹಿಳೆ “ಈ ಪದ್ಯವನ್ನು ನೀವು ಗುಜರಾತ್‌ನ ಕೋಮುಗಲಭೆಯ ನಂತರ ಬರದಿರಾ?” ಎಂದು ಕೇಳಿದರು. ವಿಷಾದ ತುಂಬಿದ್ದ ಜಾವೇದ್ ಅಖ್ತರ್‌ರವರ ಉತ್ತರ: “ಇಲ್ಲ, ಈ ಪದ್ಯವನ್ನು ನಾನು ಬರೆದದ್ದು 1992ರಲ್ಲಿ. ಆದರೇನಂತೆ, ನಮ್ಮ ದೇಶದಲ್ಲಿನ ಕೋಮುವಾದಿಗಳು ಈ ಪದ್ಯವನ್ನು ಇವತ್ತಿಗೂ ಪ್ರಸ್ತುತವಾಗಿರಿಸಿದ್ದಾರೆ.”

ನನಗೆ ಮೆಚ್ಚುಗೆಯಾದ ಜಾವೇದ್ ಅಖ್ತರ್‌ರವರ ಇನ್ನೊಂದು ಪದ್ಯ ’ಪಾರ್ಥನೆ’ಯ ಅನುವಾದ ಹೀಗಿದೆ:

ಆನಂತ ಆಕಾಶದ ಆಳ ಸಮುದ್ರಗಳಲ್ಲಿ
ದ್ವೀಪವೊಂದೆಲ್ಲಾದರೂ ಇದೆಯೆಂದಾದರೆ
ಉಸಿರಾಡುತ್ತಿದ್ದಾರೆಂದಾದರೆ ಯಾರಾದರೂ
ಯಾವುದೋ ಎದೆಬಡಿತ ಇದೆಯೆಂದಾದರೆ
ಎಲ್ಲಿ ಬುದ್ಧಿವಂತಿಕೆಯು ಅರಿವಿನ ಬಟ್ಟಲ ತುಟಿಗಿಟ್ಟಿರುವುದೋ
ಅಲ್ಲಿಯ ಮಂದಿ
ಆನಂತ ಆಕಾಶದ ಆಳ ಸಾಗರದಲ್ಲಿ
ಇಳಿಸಲಿದ್ದಾರೆ ತಮ್ಮಯ ನೌಕೆ
ದ್ವೀಪವೊಂದರ ಶೋಧದಲ್ಲಿ
ಯಾರೋ ಉಸಿರಾಡುತ್ತಿರುವಲ್ಲಿ
ಎದೆಬಡಿತವಿರುವಲ್ಲಿ
ನನ್ನ ಪ್ರಾರ್ಥನೆ ಇದು
ಆ ದ್ವೀಪದ ಜನರ ಮೈ ಬಣ್ಣ
ಭಿನ್ನವಿರಲಿ
ಈ ದ್ವೀಪದವರ ಎಲ್ಲಾ ಬಣ್ಣಗಳಿಗಿಂತ
ಮೈಮಾಟವೂ
ಮುಖ ಮೋರೆಯೂ ಭಿನ್ನವಿರಲಿ
ನನ್ನ ಪ್ರಾರ್ಥನೆ
ಇದ್ದರೆ ಅಲ್ಲಿಯೂ ಜಾತಿ
ಈ ದ್ವೀಪಕ್ಕಿಂತ ಭಿನ್ನವಿರಲಿ

ನನ್ನ ಪ್ರಾರ್ಥನೆ ಇದು
ಅನಂತ ಆಕಾಶದ ಆಳ ಸಮುದ್ರವನ್ನು ದಾಟಿ
ಒಂದು ದಿನ
ಆ ಅಪರಿಚಿತ ಕುಲದ
ಅಂತರಿಕ್ಷ ನೌಕೆಯಲ್ಲಿ
ಈ ದ್ವೀಪದವರೆಗೆ ಬಂದು
ಸತ್ಕರಿಸಿ ಅವರನ್ನು ನಾವು
ಬೆರಗಿನಿಂದ ನೋಡುವೆವು
ಅವರು ಬಳಿ ಬಂದು
ನಮಗೆ ಸನ್ನೆಯಲ್ಲಿ ತಿಳಿಸಲಿ
ಅವರಿಗಿಂತ ನಾವು ಎಷ್ಟು ಭಿನ್ನವೆಂದು
ಎಲ್ಲರೂ ನಾವು
ಒಂದೇ ಥರವೆಂದು

ನನ್ನ ಪ್ರಾರ್ಥನೆ
ಈ ದ್ವೀಪದಲ್ಲಿ ವಾಸಿಸುವವರೆಲ್ಲ
ಆ ಅಪರಿಚಿತ ಕುಲದವರು ಹೇಳಿದ್ದನ್ನು ಆಗ ನಂಬಲಿ

ಜಾವೇದ್ ಅಖ್ತರ್‌ರವರ ದುಃಖ ಯಾವುದರ ಬಗ್ಗೆ ಎಂದರೆ: ಇವತ್ತು ಉರ್ದು ಭಾಷೆಗೆ ಧರ್ಮದ ಲೇಪವನ್ನು ಹೆಚ್ಚಿರುವುದು. ಅವರದ್ದೇ ಮಾತುಗಳಲ್ಲಿ ಹೇಳುವುದಾದರೆ: “ಜಗತ್ತಿನ ಯಾವುದೇ ಭಾಷೆಗೆ ಧರ್ಮದ ನಂಟಿಲ್ಲ. ಆದರೆ, ಈ ಎರಡು ರಾಷ್ಟ್ರ ಎಂಬ ಪೆದ್ದ ಸಿದ್ಧಾಂತದಿಂದಾಗಿ ಉರ್ದು ಎಂದರೆ ಅದು ಮುಸ್ಲಿಂರ ಭಾಷೆ ಎಂದೇ ಪರಿಗಣಿಸಲಟ್ಟಿತು. ಯಾವುದೇ ಪ್ರದೇಶವನ್ನು ನೀವು ಎರಡು ದೇಶಗಳಾಗಿ ವಿಭಜಿಸಬಹುದು. ಆದರೆ ಭಾಷೆಯೊಂದನ್ನು ಹೇಗೆ ವಿಭಜಿಸುತ್ತೀರಿ?

ಒಬ್ಬರಿಗೆ ಕ್ರಿಯಾಪದಗಳನ್ನು, ಮತ್ತೊಬ್ಬರಿಗೆ ನಾಮಪದಗಳನ್ನು ಕೊಡುತ್ತೀರೇನು? ಅದಕ್ಕಿಂತ ಮುಖ್ಯವಾದ ಅಂಶ ಯಾವುದೆಂದರೆ, ಉರ್ದು ನಿಜವಾಗಲೂ ಜಾತ್ಯತೀತ ಭಾಷೆ. ಉರ್ದು ಸಾಹಿತ್ಯದ ಎಲ್ಲ ಮಹಾನ್ ಸಾಹಿತಿಗಳು ನಾಸ್ತಿಕರು ಮತ್ತು ಜಾತ್ಯತೀತವಾಗಿದ್ದವರು. ಕುರಾನ್ ಪ್ರಥಮವಾಗಿ ಉರ್ದುಗೆ ಅನುವಾದವಾಗಿದ್ದು ಕೇವಲ 1791ರಲ್ಲಿ. ಆಗ ಉರ್ದುವನ್ನು ಅಸಂಸ್ಕೃತರ (heathen) ಭಾಷೆ ಎಂದೇ ಮುಲ್ಲಾಗಳು ಅಭಿಪ್ರಾಯಪಟ್ಟಿದ್ದರು. ಕುರಾನ್‌ನನ್ನು ಅಸಂಸ್ಕೃತರ ಭಾಷೆಗೆ ಅನುವಾದಿಸಿದ್ದವನ ಬಗ್ಗೆ ಮುಲ್ಲಾಗಳಿಗೆ ಎಷ್ಟು ಆಕ್ರೋಶವಿತ್ತೆಂದರೆ, ಆತನ ವಿರುದ್ಧ ಫತ್ವಾವನ್ನೇ ಹೊರಡಿಸಿದ್ದರು. ಆದರೂ, ಸ್ವತಂತ್ರ ಭಾರತದಲ್ಲಿ ಉರ್ದು ಭಾಷೆಯನ್ನು ಕೋಮುವಾದಿಗಳ ಬಲಿಪೀಠದ ಮೇಲೆ ತ್ಯಾಗ ಮಾಡಲಾಯಿತು. ಇವತ್ತು ನಿಜವಾಗಲೂ ಹಿಂದೂಸ್ತಾನಿಯಾದವನು ಕೋಮುವಾದಿ ಆಗಿರಲು ಸಾಧ್ಯವಿಲ್ಲ. ಏಕೆಂದರೆ ಈ ಭೂಮಿ ಕೋಮುವಾದಿ ಅಲ್ಲ. ಆದರೂ ಉರ್ದು ಹೆಸರಲ್ಲಿ, ಮುಸ್ಲಿಂ ಧರ್ಮದ ಹೆಸರಲ್ಲಿ ಅಲ್ಪಸಂಖ್ಯಾತರ ಮೇಲೆ ಗುಜರಾತ್‌ನ ನರೇಂದ್ರ ಮೋದಿ ಸರ್ಕಾರ ದ್ವೇಷ ಸಾಧಿಸುತ್ತಿದೆ. ಆದರೆ ಅವರು ನಿಜವಾಗಲೂ ವಿರೋಧಿಸುವುದು ಕೇವಲ ಅಲ್ಪಸಂಖ್ಯಾತರನ್ನಲ್ಲ. ಬದಲಾಗಿ ಪ್ರಜಾಪ್ರಭುತ್ವವನ್ನು. ಅವರ ಆಕಾಂಕ್ಷೆ ಏನಿದ್ದರೂ ಸರ್ವಾಧಿಕಾರಿ ಸರ್ಕಾರವನ್ನು ಸ್ಥಾಪಿಸುವುದಾಗಿದೆ. ಆದರೆ ಭಾರತೀಯರು ಅದಕ್ಕೆ ಎಂದೂ ಅವಕಾಶ ಮಾಡಿಕೊಡುವುದಿಲ್ಲ ಎಂಬ ನಂಬಿಕೆ ನನಗಿದೆ” ಎಂದರು.

(ಇದು ಗೌರಿಯವ ಕಂಡಹಾಗೆ ಅಂಕಣವೊಂದರ ಮರುಪ್ರಕಟಣೆ)


ಇದನ್ನೂ ಓದಿ: ಗೌರಿ ಕಾರ್ನರ್: ಪಿ. ಸಾಯಿನಾಥ್‌ರೊಂದಿಗೆ ಮಾತುಕತೆ; ಸರ್ಕಾರ ತನ್ನ ಕರ್ತವ್ಯವನ್ನು ಪಾಲಿಸುತ್ತಿಲ್ಲ ಎಂದು ಜನರಿಗೆ ಮನವರಿಕೆ ಮಾಡಿಕೊಡಬೇಕು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...