Homeಮುಖಪುಟಗರುಡ ಪುರಾಣವನ್ನು ಹೇಗೆ ಗ್ರಹಿಸಬೇಕು?

ಗರುಡ ಪುರಾಣವನ್ನು ಹೇಗೆ ಗ್ರಹಿಸಬೇಕು?

- Advertisement -
- Advertisement -

ಗರುಡ ಪುರಾಣವನ್ನು ಓದಿದಾಗ ಗ್ರಹಿಕೆಗೆ ಸಿಕ್ಕುವುದು ವೈರಾಗ್ಯದ ಸಾರ. ಪ್ರಾಣವಾಯುವಿನ ಸೂಕ್ಷ್ಮತೆಗಳನ್ನು ಪ್ರತಿಮಾರೂಪದಲ್ಲಿ, ಒಗಟುಗಳಲ್ಲಿ ವಿವರಿಸಿದಂತೆ ತೋರುತ್ತದೆ. ಪ್ರಸ್ತುತ ಜೀವನ ಮತ್ತು ಜೀವನದಾಚೆಯ ಮರ್ಮ – ಇವುಗಳನ್ನು ಅರಿತುಕೊಳ್ಳಲು ಸಾಧ್ಯವಾಗುವಂತಹ ಸೂಕ್ಷ್ಮ ಮಾರ್ಗಗಳನ್ನು, ಸಂವೇದನೆಗಳನ್ನು ಗ್ರಹಿಸಲು ಸಾಧ್ಯವೆಂಬಂತೆ ಭಾಸವಾಗುತ್ತದೆ. ಪ್ರಾಣವು ಚಲಿಸುವಂತದ್ದು ಮತ್ತು ಅದು ಚಲನೆಯಲ್ಲಿರುವುದು. ಹಾಗೆ ಚಲಿಸುವಾಗ ಅದನ್ನು ಮನಸ್ಸೆಂಬುದನ್ನು ಹೇಗೆ ಗ್ರಹಿಸುತ್ತದೆ? ಬುದ್ಧಿ ಹೇಗೆ ವಿಶ್ಲೇಷಿಸಬಹುದು? ಇತ್ಯಾದಿಗಳನ್ನು ಈ ಪ್ರಾಣದ ಪ್ರಯಾಣ ಸೂಚಿಸುವುದರಿಂದಲೇ ಹಾರುವ ಗರುಡನ ಪ್ರತಿಮೆ ಇಲ್ಲಿ ರೂಪಕವಾಗಿದೆ ಎಂದು ಗ್ರಹಿಸಬಹುದು. ಆದರೆ ಇದು ಬರಿಯ ಒಂದು ಮಗ್ಗುಲಿನ ಆಲೋಚನೆಯಾಗುತ್ತದೆ. ಅದರ ಆಳ ಮತ್ತು ವಿಸ್ತಾರದ ಜೊತೆಗೆ ನಂತರ ಸೇರ್ಪಡೆಯಾದ ಹುನ್ನಾರಗಳು ಕೂಡ ಅಧ್ಯಯನ ವ್ಯಾಪ್ತಿಯು ಹಿರಿದಾಗಿಸುತ್ತದೆ.

ಗರುಡ ಪುರಾಣವನ್ನು ಓದಿದರೆ ವೈರಾಗ್ಯವುಂಟಾಗಿ ಸಂಸಾರದ ಮೇಲೆ ಜಿಗುಪ್ಸೆ ಬರಬಹುದೆಂಬ ಕಾರಣದಿಂದ ನಿಷೇಧವನ್ನು ಹೇರಿರಬೇಕು. ಗರುಡ ಪುರಾಣ ಉಂಟು ಮಾಡುವ ವೈರಾಗ್ಯದ ಗಾಢ ಪ್ರಭಾವವನ್ನು ಗಮನಿಸಿರುವವರಿಗೆ ಇದು ನಿಜವೆನಿಸುತ್ತದೆ. ಸಾವು ಸಂಭವಿಸಿದಾಗ ಓದುವುದರಿಂದ ಹದಿನೈದು ದಿನಗಳ ಅಪರ ಕಾರ್ಯದ ವೇಳೆಯಲ್ಲಿ ಸಂಬಂಧಿಕರಲ್ಲಿ ವೈರಾಗ್ಯವು ನೆಲೆಸಿ, ಸಾವು ಎಂಬುದು ಅಂತಹ ಆಘಾತಕಾರಿಯಾದ ಅವಘಡ ಅಲ್ಲ, ಸಹಜವಾದದ್ದು, ನೈಸರ್ಗಿಕವಾದದ್ದು ಎಂಬ ಅರಿವು ಉಂಟಾಗಿ ಮನಸ್ಸಿಗೆ ಶಾಂತಿ ಲಭಿಸಲಿ ಎಂಬ ಉದ್ದೇಶವೇ ಹೊರತು ಬೇರೆ ಏನೂ ಇಲ್ಲ. ಕಾಲಾನಂತರದಲ್ಲಿ ಇದು ವಾಡಿಕೆಯಾಯಿತು.

ವಿಷ್ಣು ತನ್ನ ವಾಹನವಾದ ಗರುಡನಿಗೆ ನೀಡುವ ಉಪದೇಶದ ರೂಪದಲ್ಲಿರುವ ಗರುಡ ಪುರಾಣ ನಾನಾ ಕಾರಣಗಳಿಂದ ಆಕರ್ಷಕ. ಸಾಮಾನ್ಯ ಜನರಿಗೆ ತಿಳಿದಿರುವ ಹಾಗೆ ಅದು ನರಕದ ವರ್ಣನೆ, ಸಾವಿನ ಕುರಿತಾದದ್ದು ಎಂಬ ಭಾವ. ಅದು ನಿಜವಾದರೂ ಅದರ ವಿಚಾರವೇ ಇಡೀ ಗರುಡ ಪುರಾಣವೇನಲ್ಲ. ಪ್ರೇತಕಾಂಡ ಅಥವಾ ಪ್ರೇತಕಲ್ಪವು ಅದರ ಒಂದು ಭಾಗ ಅಷ್ಟೇ. ಎಲ್ಲಾ ಪುರಾಣಗಳನ್ನೂ ಅನಾದಿ, ಪುರಾತನ ಎಂದು ಹೇಗೆ ಕರೆಯಲು ಸಾಧ್ಯವಿಲ್ಲವೋ ಹಾಗೆಯೇ ಗರುಡ ಪುರಾಣವೂ ಕೂಡ ಪೂರ್ಣ ಪುರಾತನವೇನಲ್ಲ. ಕಾಲದಿಂದ ಕಾಲಕ್ಕೆ ಹಲವಾರು ಕರ್ತೃಗಳು ಇದರಲ್ಲಿ ಲೇಖನಿಗಳನ್ನಾಡಿಸುತ್ತಾ ಕೃತಿಯನ್ನು ವಿಸ್ತರಿಸಿದ್ದಾರೆ. ಹಾಗಾಗಿ ಇಡೀ ಗರುಡಪುರಾಣ ಏನನ್ನು ಧ್ವನಿಸಲು ಹೊರಟಿತ್ತು, ಈಗ ಅದರಲ್ಲಿ ಏನೇನೆಲ್ಲಾ ಇದೆ ಎಂದು ಚುಟುಕಾಗಿ ಹೇಳಲು ಕಷ್ಟವಾಗುವುದು.

ಗರುಡನೊಬ್ಬ ಅಪ್ರತಿಮ ವೀರ. ದಾಸ್ಯದ ವಿರುದ್ಧ ದನಿ ಎತ್ತಿದ ಬಂಡಾಯಗಾರ. ಹಾಗೂ ಆರ್ಯರ ಕುಟಿಲತನಕ್ಕೆ ಮೋಸ ಹೋದ ಮತ್ತು ಸೋತ ದುರಂತ ಪ್ರತಿಮೆ ಕೂಡಾ. ನಾಗ ಮತ್ತು ಗರುಡ ಈ ಎರಡೂ ಗಣಗಳು ಅಥವಾ ಕುಲಗಳೂ ಒಂದೇ ಮೂಲದಿಂದ ಬಂದಿರುವವಾದರೂ ತಮ್ಮ ಆಂತರಿಕ ಕಲಹದಿಂದ ಅಥವಾ ದಾಯಾದೀ ಜಗಳದಿಂದ ಆರ್ಯರ ರಾಜಕೀಯ ತಂತ್ರಕ್ಕೆ ಬಲಿಪಶುಗಳಾದರು. ನಾಗಕುಲವಾದರೂ ದೇವತೆಗಳ ವಿರುದ್ಧ ಸೆಣೆಸುತ್ತಲೇ ಬಂತು. ಆದರೆ ಗರುಡ, ದೇವತೆಗಳ ತಂತ್ರಕ್ಕೆ ಬಲಿಯಾಗಿ ತಮ್ಮದೇ ಮೂಲದ ಗಣದವರಿಗೆ ಶತ್ರುಗಳಾದರು. ಗರುಡ ವಿಷ್ಣುವಿನ ವಾಹನವೆಂದರೆ, ಆರ್ಯರ ರೂಪಕವಾದ ವಿಷ್ಣುವು ಬುಡಕಟ್ಟಿನ ಗರುಡನನ್ನು ತನ್ನ ಅಧೀನದಲ್ಲಿಟ್ಟುಕೊಂಡು, ನಂತರ ವಿರೋಧಿಗಳಾದ ನಾಗರ ಮೇಲೆ ತನ್ನ ವೈಷಮ್ಯವನ್ನು ಸಾಧಿಸುವುದರ ಸಂಕೇತ.
ಆರ್ಯ ರಾಜಕೀಯ ಹುಟ್ಟಿಹಾಕಿದ ಮೌಢ್ಯಕ್ಕೆ ನಮ್ಮ ಜನ ಇಂದೂ ಸಹೋದರರಾದ ನಾಗ ಮತ್ತು ಗರುಡರನ್ನು ಶತ್ರುಗಳಂತೆ ನೋಡುತ್ತಿದ್ದಾರೆ. ಜೊತೆಗೆ ಗರುಡ ಮಚ್ಚೆ ಇದ್ದರೆ ಹಾವುಗಳು ಬಾಧಿಸವು, ಸರ್ಪದೋಷ ಬಾರದು ಎಂಬ ಮೌಢ್ಯಗಳು ಬೇರೆ. ಗರುಡನಂತ ಮುಗ್ಧ ಮತ್ತು ವೀರನನ್ನು ತಮ್ಮ ಕಾವಲು ಭಟನಂತೆ ಅಥವಾ ಸಾರಥಿಯಂತೆ ವಾಹಕವನ್ನಾಗಿ ಮಾಡಿಕೊಂಡ ಕತೆಯನ್ನು ಪುರಾಣಗಳು ತಿಳಿಸುತ್ತವೆ.

ಗರುಡನ ಪುರಾಣದ ಕಥೆಯನ್ನು ಗಮನಿಸಿದರೆ ಕದ್ರು ಮತ್ತು ವಿನುತೆಯರಿಬ್ಬರೂ ತಾಯಾಳಿಕೆಯವರಾಗಿದ್ದವರೆಂದು ತೋರುತ್ತದೆ. ಜೊತೆಗೆ ಅವರಿಬ್ಬರೂ ಕೂಡ ಗಣಗಳ ಮತ್ತು ಬಣಗಳ ಒಡತಿಯರೆಂದು ಕೂಡ ಕಾಣುತ್ತದೆ. ಅವರಿಬ್ಬರಲ್ಲಿ ನಡೆಯುವ ಸಂಘರ್ಷದ ಕತೆಯು ಮಕ್ಕಳಿಗೆ ಮುಂದುವರಿದಿತ್ತು. ಪಂಥವು ಅದೇನೇ ಇರಲಿ, ನಾಗರನ್ನು ದ್ವೇಷಿಸಲು ಇಂದ್ರನು, ಆರ್ಯರ ದೇವರಾಜನು ಕುಮ್ಮಕ್ಕು ಕೊಡುತ್ತಾನೆ. ಅವರಿಬ್ಬರನ್ನೂ ಒಂದಾಗಲು ಬಿಡುವುದಿಲ್ಲ. ಒಡೆದು ಆಳುವ ನೀತಿಯನ್ನು ಆರ್ಯರಲ್ಲಿ ಕಾಣುತ್ತೇವೆ. ಆದರೆ ಅದೇ ಇಂದ್ರ ಅಮೃತವನ್ನು ಕದಿಯುತ್ತಾನೆ.

ಅದೇನೇ ಇರಲಿ, ಕರ್ನಾಟಕದಲ್ಲಿಯೂ ಸ್ವಾಮಿನಿಷ್ಠ ಸಾಹಸಿಗಳನ್ನು, ಪ್ರಾಣವನ್ನೇ ಮುಡಿಪಿಟ್ಟು ತಮ್ಮ ದಣಿಯನ್ನು ಕಾಪಾಡುತ್ತಿದ್ದ ನಿಷ್ಠರನ್ನು ಗರುಡ ಎಂದು ಕರೆಯುವುದು ಕಾಕತಾಳೀಯವೇನಲ್ಲ. ಪೌರಾಣಿಕ ಗರುಡನ ಸ್ವಾಮಿನಿಷ್ಠತೆಯು ಇಲ್ಲಿಯವರೆಗೂ ಧ್ವನಿಸಿದೆ.
ಇಂಥಾ ಗರುಡನಿಗೆ ಯಮಮಾರ್ಗದ ಬಗ್ಗೆ ವಿಷ್ಣುವು ಹೇಳುತ್ತಾನೆ.

ಇಂತೆಲ್ಲಾ ಮಾಹಿತಿಗಳಿಂದ ಗರುಡ ಪುರಾಣವು ಪರಿಷ್ಕೃತಗೊಂಡಿರುವುದು ಮಹಾಭಾರತದ ನಂತರದ ಕಾಲದಲ್ಲಿ ಎಂದು ಅವಲೋಕಿಸಬಹುದು. ಅದೂ ಚಾರ್ವಾಕರ ನಂತರ. ಚಾರ್ವಾಕರ ಪ್ರಭಾವ ದಟ್ಟವಾಗುತ್ತಿದ್ದ ಸಮಯದಲ್ಲಿ ಜನಗಳಲ್ಲಿ ತಾವು ಮಾಡುವ ಕರ್ಮಗಳ ಭಯ ಹುಟ್ಟಿಸುವ ಅಗತ್ಯ ವೈದಿಕರಿಗಿತ್ತು. ಹಾಗಾಗಿ ಗರುಡಪುರಾಣದಲ್ಲಿ ನರಕದ ಬಾಧೆ ಸೇರಿಸಲಾಯಿತು.

ಸಾವಿನ ಭಯವನ್ನು ಗೆಲ್ಲಲು ಮತ್ತು ಬದುಕಿರುವಾಗ ನೈತಿಕತೆಯನ್ನು ಮೀರದಿರುವ ಆಶಯ ಗರುಡ ಪುರಾಣ ಕೃತಿಯಲ್ಲಿ ಅಡಗಿದೆ. ವಿಪರೀತದ ಪ್ರತಿಮಾ ರೂಪಕಗಳನ್ನು ನೇರವಾಗಿ ಗ್ರಹಿಸಿದರೆ ಗರುಡ ಪುರಾಣದ ಓದು ಮೌಢ್ಯತೆಯ ಪಾಲಾಗುತ್ತದೆ.‌

  • ಯೋಗೇಶ್‌ ಮಾಸ್ಟರ್

ಇದನ್ನೂ ಓದಿ: ತಾನೊಂದು ಹೆಣ್ಣಾಗಿದ್ದು ಶಾಪ, ಕಪ್ಪು ಹೆಣ್ಣಾಗಿದ್ದು ಮಹಾಶಾಪ : ಮೇರಿ ಪ್ರಿನ್ಸ್ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...