Homeಮುಖಪುಟಗರುಡ ಪುರಾಣವನ್ನು ಹೇಗೆ ಗ್ರಹಿಸಬೇಕು?

ಗರುಡ ಪುರಾಣವನ್ನು ಹೇಗೆ ಗ್ರಹಿಸಬೇಕು?

- Advertisement -
- Advertisement -

ಗರುಡ ಪುರಾಣವನ್ನು ಓದಿದಾಗ ಗ್ರಹಿಕೆಗೆ ಸಿಕ್ಕುವುದು ವೈರಾಗ್ಯದ ಸಾರ. ಪ್ರಾಣವಾಯುವಿನ ಸೂಕ್ಷ್ಮತೆಗಳನ್ನು ಪ್ರತಿಮಾರೂಪದಲ್ಲಿ, ಒಗಟುಗಳಲ್ಲಿ ವಿವರಿಸಿದಂತೆ ತೋರುತ್ತದೆ. ಪ್ರಸ್ತುತ ಜೀವನ ಮತ್ತು ಜೀವನದಾಚೆಯ ಮರ್ಮ – ಇವುಗಳನ್ನು ಅರಿತುಕೊಳ್ಳಲು ಸಾಧ್ಯವಾಗುವಂತಹ ಸೂಕ್ಷ್ಮ ಮಾರ್ಗಗಳನ್ನು, ಸಂವೇದನೆಗಳನ್ನು ಗ್ರಹಿಸಲು ಸಾಧ್ಯವೆಂಬಂತೆ ಭಾಸವಾಗುತ್ತದೆ. ಪ್ರಾಣವು ಚಲಿಸುವಂತದ್ದು ಮತ್ತು ಅದು ಚಲನೆಯಲ್ಲಿರುವುದು. ಹಾಗೆ ಚಲಿಸುವಾಗ ಅದನ್ನು ಮನಸ್ಸೆಂಬುದನ್ನು ಹೇಗೆ ಗ್ರಹಿಸುತ್ತದೆ? ಬುದ್ಧಿ ಹೇಗೆ ವಿಶ್ಲೇಷಿಸಬಹುದು? ಇತ್ಯಾದಿಗಳನ್ನು ಈ ಪ್ರಾಣದ ಪ್ರಯಾಣ ಸೂಚಿಸುವುದರಿಂದಲೇ ಹಾರುವ ಗರುಡನ ಪ್ರತಿಮೆ ಇಲ್ಲಿ ರೂಪಕವಾಗಿದೆ ಎಂದು ಗ್ರಹಿಸಬಹುದು. ಆದರೆ ಇದು ಬರಿಯ ಒಂದು ಮಗ್ಗುಲಿನ ಆಲೋಚನೆಯಾಗುತ್ತದೆ. ಅದರ ಆಳ ಮತ್ತು ವಿಸ್ತಾರದ ಜೊತೆಗೆ ನಂತರ ಸೇರ್ಪಡೆಯಾದ ಹುನ್ನಾರಗಳು ಕೂಡ ಅಧ್ಯಯನ ವ್ಯಾಪ್ತಿಯು ಹಿರಿದಾಗಿಸುತ್ತದೆ.

ಗರುಡ ಪುರಾಣವನ್ನು ಓದಿದರೆ ವೈರಾಗ್ಯವುಂಟಾಗಿ ಸಂಸಾರದ ಮೇಲೆ ಜಿಗುಪ್ಸೆ ಬರಬಹುದೆಂಬ ಕಾರಣದಿಂದ ನಿಷೇಧವನ್ನು ಹೇರಿರಬೇಕು. ಗರುಡ ಪುರಾಣ ಉಂಟು ಮಾಡುವ ವೈರಾಗ್ಯದ ಗಾಢ ಪ್ರಭಾವವನ್ನು ಗಮನಿಸಿರುವವರಿಗೆ ಇದು ನಿಜವೆನಿಸುತ್ತದೆ. ಸಾವು ಸಂಭವಿಸಿದಾಗ ಓದುವುದರಿಂದ ಹದಿನೈದು ದಿನಗಳ ಅಪರ ಕಾರ್ಯದ ವೇಳೆಯಲ್ಲಿ ಸಂಬಂಧಿಕರಲ್ಲಿ ವೈರಾಗ್ಯವು ನೆಲೆಸಿ, ಸಾವು ಎಂಬುದು ಅಂತಹ ಆಘಾತಕಾರಿಯಾದ ಅವಘಡ ಅಲ್ಲ, ಸಹಜವಾದದ್ದು, ನೈಸರ್ಗಿಕವಾದದ್ದು ಎಂಬ ಅರಿವು ಉಂಟಾಗಿ ಮನಸ್ಸಿಗೆ ಶಾಂತಿ ಲಭಿಸಲಿ ಎಂಬ ಉದ್ದೇಶವೇ ಹೊರತು ಬೇರೆ ಏನೂ ಇಲ್ಲ. ಕಾಲಾನಂತರದಲ್ಲಿ ಇದು ವಾಡಿಕೆಯಾಯಿತು.

ವಿಷ್ಣು ತನ್ನ ವಾಹನವಾದ ಗರುಡನಿಗೆ ನೀಡುವ ಉಪದೇಶದ ರೂಪದಲ್ಲಿರುವ ಗರುಡ ಪುರಾಣ ನಾನಾ ಕಾರಣಗಳಿಂದ ಆಕರ್ಷಕ. ಸಾಮಾನ್ಯ ಜನರಿಗೆ ತಿಳಿದಿರುವ ಹಾಗೆ ಅದು ನರಕದ ವರ್ಣನೆ, ಸಾವಿನ ಕುರಿತಾದದ್ದು ಎಂಬ ಭಾವ. ಅದು ನಿಜವಾದರೂ ಅದರ ವಿಚಾರವೇ ಇಡೀ ಗರುಡ ಪುರಾಣವೇನಲ್ಲ. ಪ್ರೇತಕಾಂಡ ಅಥವಾ ಪ್ರೇತಕಲ್ಪವು ಅದರ ಒಂದು ಭಾಗ ಅಷ್ಟೇ. ಎಲ್ಲಾ ಪುರಾಣಗಳನ್ನೂ ಅನಾದಿ, ಪುರಾತನ ಎಂದು ಹೇಗೆ ಕರೆಯಲು ಸಾಧ್ಯವಿಲ್ಲವೋ ಹಾಗೆಯೇ ಗರುಡ ಪುರಾಣವೂ ಕೂಡ ಪೂರ್ಣ ಪುರಾತನವೇನಲ್ಲ. ಕಾಲದಿಂದ ಕಾಲಕ್ಕೆ ಹಲವಾರು ಕರ್ತೃಗಳು ಇದರಲ್ಲಿ ಲೇಖನಿಗಳನ್ನಾಡಿಸುತ್ತಾ ಕೃತಿಯನ್ನು ವಿಸ್ತರಿಸಿದ್ದಾರೆ. ಹಾಗಾಗಿ ಇಡೀ ಗರುಡಪುರಾಣ ಏನನ್ನು ಧ್ವನಿಸಲು ಹೊರಟಿತ್ತು, ಈಗ ಅದರಲ್ಲಿ ಏನೇನೆಲ್ಲಾ ಇದೆ ಎಂದು ಚುಟುಕಾಗಿ ಹೇಳಲು ಕಷ್ಟವಾಗುವುದು.

ಗರುಡನೊಬ್ಬ ಅಪ್ರತಿಮ ವೀರ. ದಾಸ್ಯದ ವಿರುದ್ಧ ದನಿ ಎತ್ತಿದ ಬಂಡಾಯಗಾರ. ಹಾಗೂ ಆರ್ಯರ ಕುಟಿಲತನಕ್ಕೆ ಮೋಸ ಹೋದ ಮತ್ತು ಸೋತ ದುರಂತ ಪ್ರತಿಮೆ ಕೂಡಾ. ನಾಗ ಮತ್ತು ಗರುಡ ಈ ಎರಡೂ ಗಣಗಳು ಅಥವಾ ಕುಲಗಳೂ ಒಂದೇ ಮೂಲದಿಂದ ಬಂದಿರುವವಾದರೂ ತಮ್ಮ ಆಂತರಿಕ ಕಲಹದಿಂದ ಅಥವಾ ದಾಯಾದೀ ಜಗಳದಿಂದ ಆರ್ಯರ ರಾಜಕೀಯ ತಂತ್ರಕ್ಕೆ ಬಲಿಪಶುಗಳಾದರು. ನಾಗಕುಲವಾದರೂ ದೇವತೆಗಳ ವಿರುದ್ಧ ಸೆಣೆಸುತ್ತಲೇ ಬಂತು. ಆದರೆ ಗರುಡ, ದೇವತೆಗಳ ತಂತ್ರಕ್ಕೆ ಬಲಿಯಾಗಿ ತಮ್ಮದೇ ಮೂಲದ ಗಣದವರಿಗೆ ಶತ್ರುಗಳಾದರು. ಗರುಡ ವಿಷ್ಣುವಿನ ವಾಹನವೆಂದರೆ, ಆರ್ಯರ ರೂಪಕವಾದ ವಿಷ್ಣುವು ಬುಡಕಟ್ಟಿನ ಗರುಡನನ್ನು ತನ್ನ ಅಧೀನದಲ್ಲಿಟ್ಟುಕೊಂಡು, ನಂತರ ವಿರೋಧಿಗಳಾದ ನಾಗರ ಮೇಲೆ ತನ್ನ ವೈಷಮ್ಯವನ್ನು ಸಾಧಿಸುವುದರ ಸಂಕೇತ.
ಆರ್ಯ ರಾಜಕೀಯ ಹುಟ್ಟಿಹಾಕಿದ ಮೌಢ್ಯಕ್ಕೆ ನಮ್ಮ ಜನ ಇಂದೂ ಸಹೋದರರಾದ ನಾಗ ಮತ್ತು ಗರುಡರನ್ನು ಶತ್ರುಗಳಂತೆ ನೋಡುತ್ತಿದ್ದಾರೆ. ಜೊತೆಗೆ ಗರುಡ ಮಚ್ಚೆ ಇದ್ದರೆ ಹಾವುಗಳು ಬಾಧಿಸವು, ಸರ್ಪದೋಷ ಬಾರದು ಎಂಬ ಮೌಢ್ಯಗಳು ಬೇರೆ. ಗರುಡನಂತ ಮುಗ್ಧ ಮತ್ತು ವೀರನನ್ನು ತಮ್ಮ ಕಾವಲು ಭಟನಂತೆ ಅಥವಾ ಸಾರಥಿಯಂತೆ ವಾಹಕವನ್ನಾಗಿ ಮಾಡಿಕೊಂಡ ಕತೆಯನ್ನು ಪುರಾಣಗಳು ತಿಳಿಸುತ್ತವೆ.

ಗರುಡನ ಪುರಾಣದ ಕಥೆಯನ್ನು ಗಮನಿಸಿದರೆ ಕದ್ರು ಮತ್ತು ವಿನುತೆಯರಿಬ್ಬರೂ ತಾಯಾಳಿಕೆಯವರಾಗಿದ್ದವರೆಂದು ತೋರುತ್ತದೆ. ಜೊತೆಗೆ ಅವರಿಬ್ಬರೂ ಕೂಡ ಗಣಗಳ ಮತ್ತು ಬಣಗಳ ಒಡತಿಯರೆಂದು ಕೂಡ ಕಾಣುತ್ತದೆ. ಅವರಿಬ್ಬರಲ್ಲಿ ನಡೆಯುವ ಸಂಘರ್ಷದ ಕತೆಯು ಮಕ್ಕಳಿಗೆ ಮುಂದುವರಿದಿತ್ತು. ಪಂಥವು ಅದೇನೇ ಇರಲಿ, ನಾಗರನ್ನು ದ್ವೇಷಿಸಲು ಇಂದ್ರನು, ಆರ್ಯರ ದೇವರಾಜನು ಕುಮ್ಮಕ್ಕು ಕೊಡುತ್ತಾನೆ. ಅವರಿಬ್ಬರನ್ನೂ ಒಂದಾಗಲು ಬಿಡುವುದಿಲ್ಲ. ಒಡೆದು ಆಳುವ ನೀತಿಯನ್ನು ಆರ್ಯರಲ್ಲಿ ಕಾಣುತ್ತೇವೆ. ಆದರೆ ಅದೇ ಇಂದ್ರ ಅಮೃತವನ್ನು ಕದಿಯುತ್ತಾನೆ.

ಅದೇನೇ ಇರಲಿ, ಕರ್ನಾಟಕದಲ್ಲಿಯೂ ಸ್ವಾಮಿನಿಷ್ಠ ಸಾಹಸಿಗಳನ್ನು, ಪ್ರಾಣವನ್ನೇ ಮುಡಿಪಿಟ್ಟು ತಮ್ಮ ದಣಿಯನ್ನು ಕಾಪಾಡುತ್ತಿದ್ದ ನಿಷ್ಠರನ್ನು ಗರುಡ ಎಂದು ಕರೆಯುವುದು ಕಾಕತಾಳೀಯವೇನಲ್ಲ. ಪೌರಾಣಿಕ ಗರುಡನ ಸ್ವಾಮಿನಿಷ್ಠತೆಯು ಇಲ್ಲಿಯವರೆಗೂ ಧ್ವನಿಸಿದೆ.
ಇಂಥಾ ಗರುಡನಿಗೆ ಯಮಮಾರ್ಗದ ಬಗ್ಗೆ ವಿಷ್ಣುವು ಹೇಳುತ್ತಾನೆ.

ಇಂತೆಲ್ಲಾ ಮಾಹಿತಿಗಳಿಂದ ಗರುಡ ಪುರಾಣವು ಪರಿಷ್ಕೃತಗೊಂಡಿರುವುದು ಮಹಾಭಾರತದ ನಂತರದ ಕಾಲದಲ್ಲಿ ಎಂದು ಅವಲೋಕಿಸಬಹುದು. ಅದೂ ಚಾರ್ವಾಕರ ನಂತರ. ಚಾರ್ವಾಕರ ಪ್ರಭಾವ ದಟ್ಟವಾಗುತ್ತಿದ್ದ ಸಮಯದಲ್ಲಿ ಜನಗಳಲ್ಲಿ ತಾವು ಮಾಡುವ ಕರ್ಮಗಳ ಭಯ ಹುಟ್ಟಿಸುವ ಅಗತ್ಯ ವೈದಿಕರಿಗಿತ್ತು. ಹಾಗಾಗಿ ಗರುಡಪುರಾಣದಲ್ಲಿ ನರಕದ ಬಾಧೆ ಸೇರಿಸಲಾಯಿತು.

ಸಾವಿನ ಭಯವನ್ನು ಗೆಲ್ಲಲು ಮತ್ತು ಬದುಕಿರುವಾಗ ನೈತಿಕತೆಯನ್ನು ಮೀರದಿರುವ ಆಶಯ ಗರುಡ ಪುರಾಣ ಕೃತಿಯಲ್ಲಿ ಅಡಗಿದೆ. ವಿಪರೀತದ ಪ್ರತಿಮಾ ರೂಪಕಗಳನ್ನು ನೇರವಾಗಿ ಗ್ರಹಿಸಿದರೆ ಗರುಡ ಪುರಾಣದ ಓದು ಮೌಢ್ಯತೆಯ ಪಾಲಾಗುತ್ತದೆ.‌

  • ಯೋಗೇಶ್‌ ಮಾಸ್ಟರ್

ಇದನ್ನೂ ಓದಿ: ತಾನೊಂದು ಹೆಣ್ಣಾಗಿದ್ದು ಶಾಪ, ಕಪ್ಪು ಹೆಣ್ಣಾಗಿದ್ದು ಮಹಾಶಾಪ : ಮೇರಿ ಪ್ರಿನ್ಸ್ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...