Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಈಶ್ವರಪ್ಪನವರಿಗೆ ನನ್ನ ಮೇಲೆ ಸಿಟ್ಟು ಏಕೆಂದರೆ… : ಎಚ್.ಎಸ್ ದೊರೆಸ್ವಾಮಿ

ಈಶ್ವರಪ್ಪನವರಿಗೆ ನನ್ನ ಮೇಲೆ ಸಿಟ್ಟು ಏಕೆಂದರೆ… : ಎಚ್.ಎಸ್ ದೊರೆಸ್ವಾಮಿ

ಮುಸ್ಲಿಮರೆ ಅಧಿಕ ಸಂಖ್ಯೆಯಲ್ಲಿರುವ ಕಾಶ್ಮೀರದಲ್ಲಿ ಷೇಕ್ ಅಬ್ದುಲ್ಲಾ ಅಲ್ಲಿನ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಂಡ ಗೋಹತ್ಯಾ ನಿಷೇಧ ಕಾಯಿದೆಯಲ್ಲಿ ಗೋಹತ್ಯ ಮಾಡಿದವನಿಗೆ 10 ವರ್ಷ ಸೆರೆವಾಸ ಎಂದು ಹೇಳಿದೆ.

- Advertisement -
- Advertisement -

ನಾನು ಎಡಪಂಥೀಯರ ಜೊತೆ ಗುರುತಿಸುಕೊಳ್ಳುವವನು ಎಂದು ಸಂಘಪರಿವಾರ ಮತ್ತು ಬಿಜೆಪಿ ನನ್ನನ್ನು ಟೀಕಿಸುತ್ತದೆ. ನಾನು ರಾಜಕಾರಣಿ ಎಂದು ಶಾಸಕ ಎಚ್.ಡಿ ರೇವಣ್ಣ ಅಸೆಂಬ್ಲಿಯಲ್ಲಿ ಬಾಯಿತಪ್ಪಿ ಹೇಳಿದ್ದರು. ನಾನು ಎಲ್ಲರ ಜೊಎ ಕೈಜೋಡಿಸುವವನೆಂದು ಹೇಳಿಕೊಳ್ಳಲು ನನಗೆ ಅಳುಕಿಲ್ಲ. ನಾನು ರಾಜಕಾರಣಿಯೂ ಹೌದು. ಆದರೆ ನಾನು ಅಧಿಕಾರ ದಾಹಕ್ಕಾಗಿ ರಾಜಕೀಯ ಮಾಡುವವನ್ನಲ್ಲ. ಪಕ್ಷ ರಾಜಕಾರಣದಲ್ಲಿ ನನಗೆ ನಂಬಿಕೆಯೂ ಇಲ್ಲ.

ನಾನು ಎಲ್ಲರೊಡನೆ ಕೂಡಿಕೊಳ್ಳುವ ಸ್ವಭಾವದವನು. ಅದು ದೇಶದ ಒಳಿತಿಗಾಗಿ, ಭದ್ರತೆಗಾಗಿ, ಪ್ರಜಾಪ್ರಭುತ್ವ ಎತ್ತಿ ಹಿಡಿಯುವುದಕ್ಕಾಗಿ. ಕೋಮು ವಿದ್ವೇಷ, ಸರ್ವಾಧಿಕಾರಿ ಮನೋಭಾವವನ್ನು ಕಿತ್ತೆಸೆಯುವುದಕ್ಕಾಗಿ ನಾನು ರಾಜಕೀಯದವರೊಡನೆ ಕೈಜೋಡಿಸಲು ಸೈ. ಸೇಡಿನ ರಾಜಕೀಯ, ಮತೀಯ, ಧಾರ್ಮಿಕ ರಾಜಕೀಯಗಳನ್ನು ನಾನು ಎಂದೆಂದಿಗೂ ವಿರೋಧಿಸುವವನು. ಎಲ್ಲರೊಡನೆ ನಾನು ಬೆರೆತರೂ ನಾನು ಅವರವನಲ್ಲ. ನಾನು ಸರ್ವೋದಯ ಸಿದ್ಧಾಂತವನ್ನು ನಂಬಿದವನು. ಗಾಂಧೀಜಿಯವರ ಮಾರ್ಗಾನುಯಾಯಿ.

ಕೈಗಾ ಚಳವಳಿಯಲ್ಲಿ, ತುರ್ತು ಪರಿಸ್ಥಿತಿಯಲ್ಲಿ ನಾನು ಸಂಘಪರಿವಾರದವರೊಡನೆಯೂ ಕೂಡಿಕೊಂಡವನು. ಸಭೆ, ಸಮ್ಮೇಳನ, ಚರ್ಚಾಕೂಟ, ವಿಚಾರ ಸಂಕಿರಣ, ಚಳವಳಿಗೆ ಯಾರೇ ಕರೆದರೂ ನಾನು ಹೋಗುವವನು. ಆದರೆ ಅವುಗಳಲ್ಲೆಲ್ಲ ಸರ್ವೋದಯ ಛಾಪನ್ನು ಮೂಡಿಸಲು ಪ್ರಯತ್ನಿಸುತ್ತೇನೆ. ನಾಡಿನ ಹಿತದೃಷ್ಠಿಯಿಂದ ಏನು ಹೇಳಬೇಕೋ ಅದನ್ನು ನಿರ್ಭೀಡತಯಿಂದ ಹೇಳುತ್ತೇನೆ. ನಾನು ಯಾವ Ism ಗೂ ದಾಸನಲ್ಲ. ನಾನು ನಂಬುವುದು Humanisam ನಲ್ಲಿ.

ಅನೇಕ ಮೂಲಭೂತ ವಿಚಾರಗಳಲ್ಲಿ ನನ್ನ ನಿಲುವು, ರಾಜಕೀಯ ಸಂಸ್ಥೆಯ ನಿಲುವುಗಳಿಗಿಂತ ಭಿನ್ನ. ಆದರೂ ನನ್ನನ್ನು ಎಲ್ಲರೂ ಪ್ರೀತಿ ವಿಶ್ವಾಸದಿಂದ ತಮ್ಮ ಕಾರ್ಯಕ್ರಮಗಳಿಗೆ ಕರೆಯುತ್ತಾರೆ.

ಸರ್ವೋದಯ ಸಿದ್ದಾಂತವೇ ಹಾಗೆ. ಗಾಂಧೀಜಿಯವರ ವಿಚಾರಗಳೇ ಹಾಗೆ. ಸರ್ವೋದಯ ಎಲ್ಲರ ಒಳಿತನ್ನು ಬಯಸುತ್ತದೆ. ಸವೇಜನೋ ಸುಖಿನೋಭವಂತು ಎಂದು ದೇವರ ಮುಂದೆ ಕೂತು ಪ್ರತಿದಿನ ಹೇಳಿದರೆ ಸಾಲದು. ಅದನ್ನು ಕಾರ್ಯಗತ ಮಾಡಬೆಕು. ಇದು ಹಿಂದೂ ಧರ್ಮದ ನಿಲುವು. ಭಾಜಪ ಮೊದಲುಗೊಂಡು ಯಾವ ರಾಜಕೀಯ ಪಕ್ಷವೂ ಸರ್ವೋದಯವನ್ನು ತನ್ನ ರಾಜಕೀಯ ಸಿದ್ಧಾಂತವಾಗಿ ಅಂಗೀಕರಿಸಿಲ್ಲ. ಹಿಂದುತ್ವ ಪ್ರತಿಪಾದಕರು ಡೋಂಗಿಗಳು ಎನ್ನುವುದು ಇದೇನಾ?

ಗೋರಕ್ಷಣೆಯ ವಿಷಯಕ್ಕೆ ನನ್ನ ಪೂರ್ಣ ಸಹಮತವಿದೆ. ಆದರೆ ಮತೀಯ ದ್ವೇಷ ಬೆಳೆಸುವ ದೃಷ್ಠಿಯಿಂದ ಗೋಸಂರಕ್ಷಣೆಯ ವಿಷಯ ಕೈಗೆತ್ತಿಕೊಳ್ಳುವುದಕ್ಕೆ ನನ್ನ ಸಹಮತವಿಲ್ಲ. ಗೋವು ಒಂದು ವಿಶೇಷ ಪ್ರಾಣಿ. ಅದನ್ನು ಕೊಲ್ಲದೆ ಅದರ ಹಾಲನ್ನು ಆಹಾರವಾಗಿ ಬಳಸಲುಬರುವ ಏಕೈಕ ಪ್ರಾಣಿ ಗೋವು. ರೈತ ಗೋವನ್ನು ತನ್ನ ಪರಿವಾರದ ಸದಸ್ಯನನ್ನಾಗಿ ಭಾವಿಸುತ್ತಾನೆ. ಆಕಳ ಹಾಲು ಅತ್ಯುತ್ಕ್ರಷ್ಟ ಆಹಾರ. ಹಸುವಿನ ಹಾಲಿನಲ್ಲಿ ದೇಹಪೋಷಣೆಗೆ ಬೇಕಾದ ಎಲ್ಲ ಅಂಸಗಳು ಸಮತೋಲನದಲ್ಲಿರುತ್ತವೆ. ಮಕ್ಕಳಿಗೆ ಅದು ಅಮೃತಸಮಾನ. ಇದಕ್ಕಾಗಿ ಸರ್ವೋದಯದಲ್ಲಿ ಗೋವಿಗೆ ವಿಶಿಷ್ಠ ಸ್ಥಾನಮಾನ ನೀಡಿದೆ. ಗೋವನ್ನು ಕೊಲ್ಲುವುದು ಅನೀತಿ.

ಸ್ವಾತಂತ್ರ್ಯ ಪ್ರಾಪ್ತವಾದ ನಂತರ ಗೋವಧೆ ನಿಷೇಧ ಕಾಯಿದೆ ಅನೇಕ ರಾಜ್ಯಗಳಲ್ಲಿ ಜಾರಿಗೆ ಬಂದಿದೆ. ಯಾವುದೇ ಕಾರಣಕ್ಕೂ ಗೋವನ್ನು, ಅದರ ಕರುವನ್ನು, ಎತ್ತನ್ನು, ಗೂಳಿಯನ್ನು ಕೊಲ್ಲಬಾರದು ಎಂದು ಆ ಕಾನೂನು ಹೇಳುತ್ತದೆ. ಗೋವಧೆ ಮಾಡಿದರೆ 3 ವರ್ಷಗಳ ಸೆರವಾಸ ಎಂದು ಕರ್ನಾಟಕದಲ್ಲಿ ಶಾಸನವಿದೆ.

ಮುಸ್ಲಿಮರೆ ಅಧಿಕ ಸಂಖ್ಯೆಯಲ್ಲಿರುವ ಕಾಶ್ಮೀರದಲ್ಲಿ ಷೇಕ್ ಅಬ್ದುಲ್ಲಾ ಅಲ್ಲಿನ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಂಡ ಗೋಹತ್ಯಾ ನಿಷೇಧ ಕಾಯಿದೆಯಲ್ಲಿ ಗೋಹತ್ಯ ಮಾಡಿದವನಿಗೆ 10 ವರ್ಷ ಸೆರೆವಾಸ ಎಂದು ಹೇಳಿದೆ. ಆದ್ದರಿಂದ ಗೋಹತ್ಯೆ ನಿಷೇಧ ಹಿಂದುಗಳಿಗೆ ಮಾತ್ರ ಬೇಕಿದೆ ಎಂಬುದೇನೂ ಇಲ್ಲ. ಇದನ್ನು ಷೇಕ್ ಅಬ್ದುಲ್ಲಾ ಶಾಸನ ತರುವ ಮೂಲಕ ಸಾಬೀತು ಮಾಡಿದ್ದಾರೆ.

ಅದರಂತೆ ಬಡತನ ನೀಗುವ ಕೆಲಸದಲ್ಲಿಯಾವ Ismಗೂ ಅವಕಾಶವಿಲ್ಲ. ಸ್ವತಂತ್ರ ಭಾರತದಲ್ಲಿ ಬಡತನ, ಅಸಮಾನತೆ ಇರಲೇಬಾರದು. ಸರ್ಕಾರಗಳ ಬಂದು ಹೋದವು. 72 ವರ್ಷಗಳು ಕಳೆದರೂ ಬಡತನ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆಯೇ ಹೊರತು, ಕಡಿಮೆಯಾಗುತ್ತಿಲ್ಲ. ಬಡವ ಬಲ್ಲಿದ ಅಂತರ ಹೆಚ್ಚುತ್ತಲೇ ಇದೆ. ಇದರ ವಿರುದ್ಧ ಎಲ್ಲರೂ ಕೂಡಿಕೊಂಡು ಹೋರಾಡಬೇಕಾಗಿದೆ.

ವಿನೋಬಾ ಭಾವೆ ಹಳ್ಳಿಯಲ್ಲಿ ದುಡಿಯುತ್ತಾ ಎಲ್ಲರಿಗೂ 5 ಎಕರೆ ಭೂಮಿ ಹಂಚುತ್ತಾ, ಭೂದಾನ ಯಜ್ಞ ಕಾರ್ಯಕ್ರಮವನ್ನು ಕೈಗೆತ್ತಿಕೊಂಡರು. ಭಾರತದಲ್ಲಿ ಸರ್ವೋದಯ ಪಾದಯಾತ್ರೆ ಕೈಗೊಂಡರು. ಭೂಹೀನರಿಗೆ ತಮ್ಮಲ್ಲಿರುವ ಜಮೀನಿನಲ್ಲಿ ಸ್ವಲ್ಪ ದಾನ ಮಾಡಿ ಎಂದು ಜಮೀನು ಇರುವವರ ಬಳಿ ಬೇಡಿಕೆ ಇಟ್ಟರು. ನಾನು ಭೂಮಿಯ ಭಿಕ್ಷೆ ಬೇಡಲು ಬಂದಿಲ್ಲ, ಬಡವರ ಬದುಕುವ ಹಕ್ಕಿಗಾಗಿ ಭೂದಾನ ಕೇಳಲು ಬಂದಿದ್ದೇನೆ ಎಂದರು. ಅವರಿಗೆ ಉಳ್ಳ ಜನ ಸ್ಪಂದಿಸಿದರು. ಭಾರತದಲ್ಲಿ ಹೊಡೆಯದೆ, ಬಡಿಯದೆ, ಕಾನೂನಿನ ಕತ್ತೆಗೆ ಕಾಯದೆ ಉಳ್ಳವರ ಮನಪರಿವರ್ತನೆ ಮಾಡುವ ಮೂಲಕ 42 ಲಕ್ಷ ಎಕರೆ ಜಮೀನನ್ನು ದಾನವಾಗಿ ಪಡೆದರು. ಭಾರತದಲ್ಲಿ ಗ್ರಾಮೀಣ ಜನರ ಬಡತನ ನೀಗಲು 5 ಕೋಟಿ ಎಕರೆ ಜಮೀನು ಬೇಕು. ಸರ್ಕಾರ ಬಡವರ ಆಶಯವನ್ನು ಪೂರೈಸುವುದು ತಮ್ಮ ಆದ್ಯ ಕರ್ತವ್ಯವೆಂದು ಭಾವಿಸಬೇಕು. ಅದಕ್ಕಾಗಿ ಭೂ ಸುಧಾರಣೆ ಕಾಯ್ದೆಯನ್ನು ಪರಿಶೀಲಿಸಿ ಸರ್ಕಾರ ಭಾರತದ ಎಲ್ಲ ಭೂಹೀನರಿಗೆ ತಲಾ 5 ಎಕರೆ ಜಮೀನು ಹಂಚಬೇಕು.

ಇನ್ನೊಂದು ವಿಷಯ. ಕೊಪ್ಪದಲ್ಲಿ ಹತ್ತಾರು ವರ್ಷಗಳಿಂದ ಗುಡಿಸಲುಗಳಲಿದ್ದವರ ಗುಡಿಸಲು ಕೆಡವುವು ಪ್ರಯತ್ನ ತಹಶೀಲ್ದಾರರಿಂದ ನಡೆದಿತ್ತು. ರವಿಕೃಷ್ಣರೆಡ್ಡಿ ನೇತೃತ್ವದಲ್ಲಿ ಗುಡಿಸಲುವಾಸಿಗಳು, ಹೋರಾಟಗಾರರು ಸೇರಿ ತಹಶೀಲ್ದಾರರ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ಮಾಡಿದೆವು. ತಹಶೀಲ್ದಾರರನ್ನು ಕರೆಸಿ ‘ಜನರ ಗುಡಿಸಲುಗಳನ್ನು ತರೆವು ಮಾಡುವ ಮೊದಲು ಅವರಿಗೆ ಬೇರೆಡೆ ಗುಡಿಸಲುಗಳನ್ನು ಹಾಕಿಸಿಕೊಟ್ಟು ಮರ್ಯಾದೆಯಿಂದ ಅವರನ್ನು ನಡೆಸಿಕೊಳ್ಳಿ. ಭಾರತೀಯ ಪ್ರಜೆಗಳನ್ನು ನೆಲೆ ಇಲ್ಲದಂತೆ ಮಾಡಿ, ಬಿಸಿಲಿನಲ್ಲಿ ನಿಲ್ಲಿಸಲು ನಿಮಗೆ ಅಧಿಕಾರ ಕೊಟ್ಟವರು ಯಾರು ಎಂದು ನಾನು ಛೇಡಿಸಿದೆ.

ಅಂದು ರಾತ್ರಿ ಉಳಿದುಕೊಳ್ಳಲು ಒಬ್ಬರ ಮನೆಗೆ ಆಹ್ವಾನಿಸಿದರು. ನಾನು ಹೋಗಿ ಉಳಿದಿದ್ದೆ. ಬೆಳಿಗ್ಗೆ ವಾಪಸ್ ಬರುವಾಗ ಅವರು ನನ್ನೊಡನೆ ಫೋಟೊ ತೆಗೆಸಿಕೊಂಡರು. ನಾನು ಯಾವ ಸಭೆಗೆ ಭಾಗವಹಿಸಲು ಹೋದರೂ, ಸಭೆ ಮುಗಿದ ಮೇಲೆ ಹುಡುಗರು, ಊರಿನಪ್ರಮುಖರು, ಸಭೆಗೆ ಬಂದಿದ್ದವರು, ಹೆಣ್ಣು ಮಕ್ಕಳು ನನ್ನ ಜೊತೆ ಫೋಟೊ ತೆಗಿಸಿಕೊಳ್ಳುವುದು ವಾಡಿಕೆ. ಇಂತಹ ಫೋಟೊಗಳು ಸಾವಿರಾರಿರಬಹುದು.

ಅದರಂತೆಯೇ ಅಮೂಲ್ಯ ಎನ್ನುವ ಈ ಹುಡುಗಿಯೂ ನನ್ನ ಜೊತೆ ಫೋಟೊ ತೆಗಿಸಿಕೊಂಡಳು ಎಂದು ನಾನು ಭಾವಿಸುತ್ತೇನೆ. ಅವಳು ನಾಲ್ಕು ವರ್ಷಗಳ ಹಿಂದೆ ಚಿಕ್ಕ ವಯಸ್ಸಿನಲ್ಲಿ ನನ್ನೊಡನೆ ತೆಗಿಸಿಕೊಂಡ ಆ ಫೋಟೊವನ್ನು ಎಲ್ಲಿಂದಲೋ ತಂದು ವಿಧಾನಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಶಾಸನ ಸಭೆಯಲ್ಲಿ ತೋರಿಸಿ ನನ್ನನ್ನು Anti National ಎಂದು ಬಿಂಬಿಸಲು ಹೊರಟರು. ಒಟ್ಟಿನಲ್ಲಿ ನನ್ನ ಚಾರಿತ್ರ್ಯವಧೆ ಮಾಡುವುದು ಅವರ ಉದ್ದೇಶವಾಗಿತ್ತು. ನನ್ನ ಮೇಲೆ ಅವರಿಗಿರಬಹುದಾದ ಸಿಟ್ಟೆಂದರೆ ಜ್ವಾಲಾಮುಖಿ ಪತ್ರಿಕೆಯ ಅಂಕಣಕಾರನಾಗಿ ‘ನಮ್ಮಲ್ಲಿ ಒಬ್ಬ ಹಿರಣ್ಯಾಕ್ಷ ಎಂಬ ಶೀರ್ಷಿಕೆಯ ಒಂದು ಲೇಖನ ಬರೆದಿದ್ದೆ. ಅದರಲ್ಲಿ ಈಶ್ವರಪ್ಪನವರು ಶಿವಮೊಗ್ಗದ ಮೂಲೆ ಮೂಲೆಯಲ್ಲಿ ಸೈಟುಗಳನ್ನು , ಮನೆಗಳನ್ನು ಅವರ ಹೆಂಡತಿ, ಮಗ, ಸೋಸೆ, ಮಗಳು, ಅಳಿಯ ಎಲ್ಲರ ಹೆಸರಿನಲ್ಲಿಯೂ ಕೊಂಡಿರುವುದನ್ನು ಬಡಾವಣೆಗಳ ಹೆಸರು, ಕೊಂಡಿರತಕ್ಕ ಮನೆಯ ಅಥವಾ ಸೈಟಿನ ಸರ್ವೇ ನಂಬರ್, ವಿಸ್ತೀರ್ಣಗಳನ್ನೊಳಗೊಂಡ ವಿವರಗಳನ್ನು ದಾಖಲೆ ಸಮೇತ ನಮೂದಿಸಿ ಬರೆದಿದ್ದೆ. ಹಿಂದೆ ಹಿರಣ್ಯಾಕ್ಷ ಎಂಬ ರಾಕ್ಷಸ ಇದ್ದು, ಭೂಮಂಡಲವನ್ನು ತನ್ನದಾಗಿ ಮಾಡಿಕೊಳ್ಳಲು ಭೂಮಿಯನ್ನು ಚಾಪೆಯಂತೆ ಸುತ್ತಿ ತೆಗೆದುಕೊಂಡುಹೋಗಿ ಸಮುದ್ರದ ಒಳಗಡೆ ಬಚ್ಚಿಟ್ಟಿದ್ದ. ವಿಷ್ಣು ಕೂರ್ಮಾವತಾರದಲ್ಲಿ ಬಂದು ಸಮುದ್ರದಾಳದಲ್ಲಿ ಬಚ್ಚಿಟ್ಟಿದ್ದ ಭೂಮಿಯನ್ನು ತೆಗೆದುಕೊಂಡು ಹೋಗಿ ಹರಡಿ ಭೂಮಂಡಲಕ್ಎಕ ಮರುಜೀವ ಕೊಟ್ಟ.

ಅದರಂತೆ ಈಶ್ವರಪ್ಪನವರು ಶಿವಮೊಗ್ಗದ ಭೂಮಿಯನ್ನೆಲ್ಲ ಕೊಂಡುಕೊಂಡು ತಮ್ಮದಾಗಿಸಿಕೊಳ್ಳುತ್ತಾರೋ ಎಂಬ ಭಯ ನನ್ನದು. ಅದಕ್ಕಾಗಿ ಆ ಲೇಖನ ಬರೆದೆ. ಆ ಕಾರಣದಿಂದ ಈಶ್ವರಪ್ಪನವರಿಗೆ ನನ್ನ ಮೇಲೆ ಸಿಟ್ಟಿರಬಹುದು. ಆ ಸಿಟ್ಟನ್ನು ಅಸೆಂಬ್ಲಿಯಲ್ಲಿ ಈ ಫೋಟೊ ತೋರಿಸುವ ಮೂಲಕ ವ್ಯಕ್ತಪಡಿಸಿರಬಹುದೆಂಬುದು ನನ್ನ ಅನಿಸಿಕೆ.


ಇದನ್ನು ಓದಿ: ತಮಿಳುನಾಡು ಲಾಕಪ್‌ ಡೆತ್: ಪೊಲೀಸ್ ದೌರ್ಜನ್ಯಕ್ಕೆ ಕೊನೆಯೆಂದು? ಮಾತು ಸೋತ ಭಾರತ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...