Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಈಶ್ವರಪ್ಪನವರಿಗೆ ನನ್ನ ಮೇಲೆ ಸಿಟ್ಟು ಏಕೆಂದರೆ… : ಎಚ್.ಎಸ್ ದೊರೆಸ್ವಾಮಿ

ಈಶ್ವರಪ್ಪನವರಿಗೆ ನನ್ನ ಮೇಲೆ ಸಿಟ್ಟು ಏಕೆಂದರೆ… : ಎಚ್.ಎಸ್ ದೊರೆಸ್ವಾಮಿ

ಮುಸ್ಲಿಮರೆ ಅಧಿಕ ಸಂಖ್ಯೆಯಲ್ಲಿರುವ ಕಾಶ್ಮೀರದಲ್ಲಿ ಷೇಕ್ ಅಬ್ದುಲ್ಲಾ ಅಲ್ಲಿನ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಂಡ ಗೋಹತ್ಯಾ ನಿಷೇಧ ಕಾಯಿದೆಯಲ್ಲಿ ಗೋಹತ್ಯ ಮಾಡಿದವನಿಗೆ 10 ವರ್ಷ ಸೆರೆವಾಸ ಎಂದು ಹೇಳಿದೆ.

- Advertisement -
- Advertisement -

ನಾನು ಎಡಪಂಥೀಯರ ಜೊತೆ ಗುರುತಿಸುಕೊಳ್ಳುವವನು ಎಂದು ಸಂಘಪರಿವಾರ ಮತ್ತು ಬಿಜೆಪಿ ನನ್ನನ್ನು ಟೀಕಿಸುತ್ತದೆ. ನಾನು ರಾಜಕಾರಣಿ ಎಂದು ಶಾಸಕ ಎಚ್.ಡಿ ರೇವಣ್ಣ ಅಸೆಂಬ್ಲಿಯಲ್ಲಿ ಬಾಯಿತಪ್ಪಿ ಹೇಳಿದ್ದರು. ನಾನು ಎಲ್ಲರ ಜೊಎ ಕೈಜೋಡಿಸುವವನೆಂದು ಹೇಳಿಕೊಳ್ಳಲು ನನಗೆ ಅಳುಕಿಲ್ಲ. ನಾನು ರಾಜಕಾರಣಿಯೂ ಹೌದು. ಆದರೆ ನಾನು ಅಧಿಕಾರ ದಾಹಕ್ಕಾಗಿ ರಾಜಕೀಯ ಮಾಡುವವನ್ನಲ್ಲ. ಪಕ್ಷ ರಾಜಕಾರಣದಲ್ಲಿ ನನಗೆ ನಂಬಿಕೆಯೂ ಇಲ್ಲ.

ನಾನು ಎಲ್ಲರೊಡನೆ ಕೂಡಿಕೊಳ್ಳುವ ಸ್ವಭಾವದವನು. ಅದು ದೇಶದ ಒಳಿತಿಗಾಗಿ, ಭದ್ರತೆಗಾಗಿ, ಪ್ರಜಾಪ್ರಭುತ್ವ ಎತ್ತಿ ಹಿಡಿಯುವುದಕ್ಕಾಗಿ. ಕೋಮು ವಿದ್ವೇಷ, ಸರ್ವಾಧಿಕಾರಿ ಮನೋಭಾವವನ್ನು ಕಿತ್ತೆಸೆಯುವುದಕ್ಕಾಗಿ ನಾನು ರಾಜಕೀಯದವರೊಡನೆ ಕೈಜೋಡಿಸಲು ಸೈ. ಸೇಡಿನ ರಾಜಕೀಯ, ಮತೀಯ, ಧಾರ್ಮಿಕ ರಾಜಕೀಯಗಳನ್ನು ನಾನು ಎಂದೆಂದಿಗೂ ವಿರೋಧಿಸುವವನು. ಎಲ್ಲರೊಡನೆ ನಾನು ಬೆರೆತರೂ ನಾನು ಅವರವನಲ್ಲ. ನಾನು ಸರ್ವೋದಯ ಸಿದ್ಧಾಂತವನ್ನು ನಂಬಿದವನು. ಗಾಂಧೀಜಿಯವರ ಮಾರ್ಗಾನುಯಾಯಿ.

ಕೈಗಾ ಚಳವಳಿಯಲ್ಲಿ, ತುರ್ತು ಪರಿಸ್ಥಿತಿಯಲ್ಲಿ ನಾನು ಸಂಘಪರಿವಾರದವರೊಡನೆಯೂ ಕೂಡಿಕೊಂಡವನು. ಸಭೆ, ಸಮ್ಮೇಳನ, ಚರ್ಚಾಕೂಟ, ವಿಚಾರ ಸಂಕಿರಣ, ಚಳವಳಿಗೆ ಯಾರೇ ಕರೆದರೂ ನಾನು ಹೋಗುವವನು. ಆದರೆ ಅವುಗಳಲ್ಲೆಲ್ಲ ಸರ್ವೋದಯ ಛಾಪನ್ನು ಮೂಡಿಸಲು ಪ್ರಯತ್ನಿಸುತ್ತೇನೆ. ನಾಡಿನ ಹಿತದೃಷ್ಠಿಯಿಂದ ಏನು ಹೇಳಬೇಕೋ ಅದನ್ನು ನಿರ್ಭೀಡತಯಿಂದ ಹೇಳುತ್ತೇನೆ. ನಾನು ಯಾವ Ism ಗೂ ದಾಸನಲ್ಲ. ನಾನು ನಂಬುವುದು Humanisam ನಲ್ಲಿ.

ಅನೇಕ ಮೂಲಭೂತ ವಿಚಾರಗಳಲ್ಲಿ ನನ್ನ ನಿಲುವು, ರಾಜಕೀಯ ಸಂಸ್ಥೆಯ ನಿಲುವುಗಳಿಗಿಂತ ಭಿನ್ನ. ಆದರೂ ನನ್ನನ್ನು ಎಲ್ಲರೂ ಪ್ರೀತಿ ವಿಶ್ವಾಸದಿಂದ ತಮ್ಮ ಕಾರ್ಯಕ್ರಮಗಳಿಗೆ ಕರೆಯುತ್ತಾರೆ.

ಸರ್ವೋದಯ ಸಿದ್ದಾಂತವೇ ಹಾಗೆ. ಗಾಂಧೀಜಿಯವರ ವಿಚಾರಗಳೇ ಹಾಗೆ. ಸರ್ವೋದಯ ಎಲ್ಲರ ಒಳಿತನ್ನು ಬಯಸುತ್ತದೆ. ಸವೇಜನೋ ಸುಖಿನೋಭವಂತು ಎಂದು ದೇವರ ಮುಂದೆ ಕೂತು ಪ್ರತಿದಿನ ಹೇಳಿದರೆ ಸಾಲದು. ಅದನ್ನು ಕಾರ್ಯಗತ ಮಾಡಬೆಕು. ಇದು ಹಿಂದೂ ಧರ್ಮದ ನಿಲುವು. ಭಾಜಪ ಮೊದಲುಗೊಂಡು ಯಾವ ರಾಜಕೀಯ ಪಕ್ಷವೂ ಸರ್ವೋದಯವನ್ನು ತನ್ನ ರಾಜಕೀಯ ಸಿದ್ಧಾಂತವಾಗಿ ಅಂಗೀಕರಿಸಿಲ್ಲ. ಹಿಂದುತ್ವ ಪ್ರತಿಪಾದಕರು ಡೋಂಗಿಗಳು ಎನ್ನುವುದು ಇದೇನಾ?

ಗೋರಕ್ಷಣೆಯ ವಿಷಯಕ್ಕೆ ನನ್ನ ಪೂರ್ಣ ಸಹಮತವಿದೆ. ಆದರೆ ಮತೀಯ ದ್ವೇಷ ಬೆಳೆಸುವ ದೃಷ್ಠಿಯಿಂದ ಗೋಸಂರಕ್ಷಣೆಯ ವಿಷಯ ಕೈಗೆತ್ತಿಕೊಳ್ಳುವುದಕ್ಕೆ ನನ್ನ ಸಹಮತವಿಲ್ಲ. ಗೋವು ಒಂದು ವಿಶೇಷ ಪ್ರಾಣಿ. ಅದನ್ನು ಕೊಲ್ಲದೆ ಅದರ ಹಾಲನ್ನು ಆಹಾರವಾಗಿ ಬಳಸಲುಬರುವ ಏಕೈಕ ಪ್ರಾಣಿ ಗೋವು. ರೈತ ಗೋವನ್ನು ತನ್ನ ಪರಿವಾರದ ಸದಸ್ಯನನ್ನಾಗಿ ಭಾವಿಸುತ್ತಾನೆ. ಆಕಳ ಹಾಲು ಅತ್ಯುತ್ಕ್ರಷ್ಟ ಆಹಾರ. ಹಸುವಿನ ಹಾಲಿನಲ್ಲಿ ದೇಹಪೋಷಣೆಗೆ ಬೇಕಾದ ಎಲ್ಲ ಅಂಸಗಳು ಸಮತೋಲನದಲ್ಲಿರುತ್ತವೆ. ಮಕ್ಕಳಿಗೆ ಅದು ಅಮೃತಸಮಾನ. ಇದಕ್ಕಾಗಿ ಸರ್ವೋದಯದಲ್ಲಿ ಗೋವಿಗೆ ವಿಶಿಷ್ಠ ಸ್ಥಾನಮಾನ ನೀಡಿದೆ. ಗೋವನ್ನು ಕೊಲ್ಲುವುದು ಅನೀತಿ.

ಸ್ವಾತಂತ್ರ್ಯ ಪ್ರಾಪ್ತವಾದ ನಂತರ ಗೋವಧೆ ನಿಷೇಧ ಕಾಯಿದೆ ಅನೇಕ ರಾಜ್ಯಗಳಲ್ಲಿ ಜಾರಿಗೆ ಬಂದಿದೆ. ಯಾವುದೇ ಕಾರಣಕ್ಕೂ ಗೋವನ್ನು, ಅದರ ಕರುವನ್ನು, ಎತ್ತನ್ನು, ಗೂಳಿಯನ್ನು ಕೊಲ್ಲಬಾರದು ಎಂದು ಆ ಕಾನೂನು ಹೇಳುತ್ತದೆ. ಗೋವಧೆ ಮಾಡಿದರೆ 3 ವರ್ಷಗಳ ಸೆರವಾಸ ಎಂದು ಕರ್ನಾಟಕದಲ್ಲಿ ಶಾಸನವಿದೆ.

ಮುಸ್ಲಿಮರೆ ಅಧಿಕ ಸಂಖ್ಯೆಯಲ್ಲಿರುವ ಕಾಶ್ಮೀರದಲ್ಲಿ ಷೇಕ್ ಅಬ್ದುಲ್ಲಾ ಅಲ್ಲಿನ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಂಡ ಗೋಹತ್ಯಾ ನಿಷೇಧ ಕಾಯಿದೆಯಲ್ಲಿ ಗೋಹತ್ಯ ಮಾಡಿದವನಿಗೆ 10 ವರ್ಷ ಸೆರೆವಾಸ ಎಂದು ಹೇಳಿದೆ. ಆದ್ದರಿಂದ ಗೋಹತ್ಯೆ ನಿಷೇಧ ಹಿಂದುಗಳಿಗೆ ಮಾತ್ರ ಬೇಕಿದೆ ಎಂಬುದೇನೂ ಇಲ್ಲ. ಇದನ್ನು ಷೇಕ್ ಅಬ್ದುಲ್ಲಾ ಶಾಸನ ತರುವ ಮೂಲಕ ಸಾಬೀತು ಮಾಡಿದ್ದಾರೆ.

ಅದರಂತೆ ಬಡತನ ನೀಗುವ ಕೆಲಸದಲ್ಲಿಯಾವ Ismಗೂ ಅವಕಾಶವಿಲ್ಲ. ಸ್ವತಂತ್ರ ಭಾರತದಲ್ಲಿ ಬಡತನ, ಅಸಮಾನತೆ ಇರಲೇಬಾರದು. ಸರ್ಕಾರಗಳ ಬಂದು ಹೋದವು. 72 ವರ್ಷಗಳು ಕಳೆದರೂ ಬಡತನ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆಯೇ ಹೊರತು, ಕಡಿಮೆಯಾಗುತ್ತಿಲ್ಲ. ಬಡವ ಬಲ್ಲಿದ ಅಂತರ ಹೆಚ್ಚುತ್ತಲೇ ಇದೆ. ಇದರ ವಿರುದ್ಧ ಎಲ್ಲರೂ ಕೂಡಿಕೊಂಡು ಹೋರಾಡಬೇಕಾಗಿದೆ.

ವಿನೋಬಾ ಭಾವೆ ಹಳ್ಳಿಯಲ್ಲಿ ದುಡಿಯುತ್ತಾ ಎಲ್ಲರಿಗೂ 5 ಎಕರೆ ಭೂಮಿ ಹಂಚುತ್ತಾ, ಭೂದಾನ ಯಜ್ಞ ಕಾರ್ಯಕ್ರಮವನ್ನು ಕೈಗೆತ್ತಿಕೊಂಡರು. ಭಾರತದಲ್ಲಿ ಸರ್ವೋದಯ ಪಾದಯಾತ್ರೆ ಕೈಗೊಂಡರು. ಭೂಹೀನರಿಗೆ ತಮ್ಮಲ್ಲಿರುವ ಜಮೀನಿನಲ್ಲಿ ಸ್ವಲ್ಪ ದಾನ ಮಾಡಿ ಎಂದು ಜಮೀನು ಇರುವವರ ಬಳಿ ಬೇಡಿಕೆ ಇಟ್ಟರು. ನಾನು ಭೂಮಿಯ ಭಿಕ್ಷೆ ಬೇಡಲು ಬಂದಿಲ್ಲ, ಬಡವರ ಬದುಕುವ ಹಕ್ಕಿಗಾಗಿ ಭೂದಾನ ಕೇಳಲು ಬಂದಿದ್ದೇನೆ ಎಂದರು. ಅವರಿಗೆ ಉಳ್ಳ ಜನ ಸ್ಪಂದಿಸಿದರು. ಭಾರತದಲ್ಲಿ ಹೊಡೆಯದೆ, ಬಡಿಯದೆ, ಕಾನೂನಿನ ಕತ್ತೆಗೆ ಕಾಯದೆ ಉಳ್ಳವರ ಮನಪರಿವರ್ತನೆ ಮಾಡುವ ಮೂಲಕ 42 ಲಕ್ಷ ಎಕರೆ ಜಮೀನನ್ನು ದಾನವಾಗಿ ಪಡೆದರು. ಭಾರತದಲ್ಲಿ ಗ್ರಾಮೀಣ ಜನರ ಬಡತನ ನೀಗಲು 5 ಕೋಟಿ ಎಕರೆ ಜಮೀನು ಬೇಕು. ಸರ್ಕಾರ ಬಡವರ ಆಶಯವನ್ನು ಪೂರೈಸುವುದು ತಮ್ಮ ಆದ್ಯ ಕರ್ತವ್ಯವೆಂದು ಭಾವಿಸಬೇಕು. ಅದಕ್ಕಾಗಿ ಭೂ ಸುಧಾರಣೆ ಕಾಯ್ದೆಯನ್ನು ಪರಿಶೀಲಿಸಿ ಸರ್ಕಾರ ಭಾರತದ ಎಲ್ಲ ಭೂಹೀನರಿಗೆ ತಲಾ 5 ಎಕರೆ ಜಮೀನು ಹಂಚಬೇಕು.

ಇನ್ನೊಂದು ವಿಷಯ. ಕೊಪ್ಪದಲ್ಲಿ ಹತ್ತಾರು ವರ್ಷಗಳಿಂದ ಗುಡಿಸಲುಗಳಲಿದ್ದವರ ಗುಡಿಸಲು ಕೆಡವುವು ಪ್ರಯತ್ನ ತಹಶೀಲ್ದಾರರಿಂದ ನಡೆದಿತ್ತು. ರವಿಕೃಷ್ಣರೆಡ್ಡಿ ನೇತೃತ್ವದಲ್ಲಿ ಗುಡಿಸಲುವಾಸಿಗಳು, ಹೋರಾಟಗಾರರು ಸೇರಿ ತಹಶೀಲ್ದಾರರ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ಮಾಡಿದೆವು. ತಹಶೀಲ್ದಾರರನ್ನು ಕರೆಸಿ ‘ಜನರ ಗುಡಿಸಲುಗಳನ್ನು ತರೆವು ಮಾಡುವ ಮೊದಲು ಅವರಿಗೆ ಬೇರೆಡೆ ಗುಡಿಸಲುಗಳನ್ನು ಹಾಕಿಸಿಕೊಟ್ಟು ಮರ್ಯಾದೆಯಿಂದ ಅವರನ್ನು ನಡೆಸಿಕೊಳ್ಳಿ. ಭಾರತೀಯ ಪ್ರಜೆಗಳನ್ನು ನೆಲೆ ಇಲ್ಲದಂತೆ ಮಾಡಿ, ಬಿಸಿಲಿನಲ್ಲಿ ನಿಲ್ಲಿಸಲು ನಿಮಗೆ ಅಧಿಕಾರ ಕೊಟ್ಟವರು ಯಾರು ಎಂದು ನಾನು ಛೇಡಿಸಿದೆ.

ಅಂದು ರಾತ್ರಿ ಉಳಿದುಕೊಳ್ಳಲು ಒಬ್ಬರ ಮನೆಗೆ ಆಹ್ವಾನಿಸಿದರು. ನಾನು ಹೋಗಿ ಉಳಿದಿದ್ದೆ. ಬೆಳಿಗ್ಗೆ ವಾಪಸ್ ಬರುವಾಗ ಅವರು ನನ್ನೊಡನೆ ಫೋಟೊ ತೆಗೆಸಿಕೊಂಡರು. ನಾನು ಯಾವ ಸಭೆಗೆ ಭಾಗವಹಿಸಲು ಹೋದರೂ, ಸಭೆ ಮುಗಿದ ಮೇಲೆ ಹುಡುಗರು, ಊರಿನಪ್ರಮುಖರು, ಸಭೆಗೆ ಬಂದಿದ್ದವರು, ಹೆಣ್ಣು ಮಕ್ಕಳು ನನ್ನ ಜೊತೆ ಫೋಟೊ ತೆಗಿಸಿಕೊಳ್ಳುವುದು ವಾಡಿಕೆ. ಇಂತಹ ಫೋಟೊಗಳು ಸಾವಿರಾರಿರಬಹುದು.

ಅದರಂತೆಯೇ ಅಮೂಲ್ಯ ಎನ್ನುವ ಈ ಹುಡುಗಿಯೂ ನನ್ನ ಜೊತೆ ಫೋಟೊ ತೆಗಿಸಿಕೊಂಡಳು ಎಂದು ನಾನು ಭಾವಿಸುತ್ತೇನೆ. ಅವಳು ನಾಲ್ಕು ವರ್ಷಗಳ ಹಿಂದೆ ಚಿಕ್ಕ ವಯಸ್ಸಿನಲ್ಲಿ ನನ್ನೊಡನೆ ತೆಗಿಸಿಕೊಂಡ ಆ ಫೋಟೊವನ್ನು ಎಲ್ಲಿಂದಲೋ ತಂದು ವಿಧಾನಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಶಾಸನ ಸಭೆಯಲ್ಲಿ ತೋರಿಸಿ ನನ್ನನ್ನು Anti National ಎಂದು ಬಿಂಬಿಸಲು ಹೊರಟರು. ಒಟ್ಟಿನಲ್ಲಿ ನನ್ನ ಚಾರಿತ್ರ್ಯವಧೆ ಮಾಡುವುದು ಅವರ ಉದ್ದೇಶವಾಗಿತ್ತು. ನನ್ನ ಮೇಲೆ ಅವರಿಗಿರಬಹುದಾದ ಸಿಟ್ಟೆಂದರೆ ಜ್ವಾಲಾಮುಖಿ ಪತ್ರಿಕೆಯ ಅಂಕಣಕಾರನಾಗಿ ‘ನಮ್ಮಲ್ಲಿ ಒಬ್ಬ ಹಿರಣ್ಯಾಕ್ಷ ಎಂಬ ಶೀರ್ಷಿಕೆಯ ಒಂದು ಲೇಖನ ಬರೆದಿದ್ದೆ. ಅದರಲ್ಲಿ ಈಶ್ವರಪ್ಪನವರು ಶಿವಮೊಗ್ಗದ ಮೂಲೆ ಮೂಲೆಯಲ್ಲಿ ಸೈಟುಗಳನ್ನು , ಮನೆಗಳನ್ನು ಅವರ ಹೆಂಡತಿ, ಮಗ, ಸೋಸೆ, ಮಗಳು, ಅಳಿಯ ಎಲ್ಲರ ಹೆಸರಿನಲ್ಲಿಯೂ ಕೊಂಡಿರುವುದನ್ನು ಬಡಾವಣೆಗಳ ಹೆಸರು, ಕೊಂಡಿರತಕ್ಕ ಮನೆಯ ಅಥವಾ ಸೈಟಿನ ಸರ್ವೇ ನಂಬರ್, ವಿಸ್ತೀರ್ಣಗಳನ್ನೊಳಗೊಂಡ ವಿವರಗಳನ್ನು ದಾಖಲೆ ಸಮೇತ ನಮೂದಿಸಿ ಬರೆದಿದ್ದೆ. ಹಿಂದೆ ಹಿರಣ್ಯಾಕ್ಷ ಎಂಬ ರಾಕ್ಷಸ ಇದ್ದು, ಭೂಮಂಡಲವನ್ನು ತನ್ನದಾಗಿ ಮಾಡಿಕೊಳ್ಳಲು ಭೂಮಿಯನ್ನು ಚಾಪೆಯಂತೆ ಸುತ್ತಿ ತೆಗೆದುಕೊಂಡುಹೋಗಿ ಸಮುದ್ರದ ಒಳಗಡೆ ಬಚ್ಚಿಟ್ಟಿದ್ದ. ವಿಷ್ಣು ಕೂರ್ಮಾವತಾರದಲ್ಲಿ ಬಂದು ಸಮುದ್ರದಾಳದಲ್ಲಿ ಬಚ್ಚಿಟ್ಟಿದ್ದ ಭೂಮಿಯನ್ನು ತೆಗೆದುಕೊಂಡು ಹೋಗಿ ಹರಡಿ ಭೂಮಂಡಲಕ್ಎಕ ಮರುಜೀವ ಕೊಟ್ಟ.

ಅದರಂತೆ ಈಶ್ವರಪ್ಪನವರು ಶಿವಮೊಗ್ಗದ ಭೂಮಿಯನ್ನೆಲ್ಲ ಕೊಂಡುಕೊಂಡು ತಮ್ಮದಾಗಿಸಿಕೊಳ್ಳುತ್ತಾರೋ ಎಂಬ ಭಯ ನನ್ನದು. ಅದಕ್ಕಾಗಿ ಆ ಲೇಖನ ಬರೆದೆ. ಆ ಕಾರಣದಿಂದ ಈಶ್ವರಪ್ಪನವರಿಗೆ ನನ್ನ ಮೇಲೆ ಸಿಟ್ಟಿರಬಹುದು. ಆ ಸಿಟ್ಟನ್ನು ಅಸೆಂಬ್ಲಿಯಲ್ಲಿ ಈ ಫೋಟೊ ತೋರಿಸುವ ಮೂಲಕ ವ್ಯಕ್ತಪಡಿಸಿರಬಹುದೆಂಬುದು ನನ್ನ ಅನಿಸಿಕೆ.


ಇದನ್ನು ಓದಿ: ತಮಿಳುನಾಡು ಲಾಕಪ್‌ ಡೆತ್: ಪೊಲೀಸ್ ದೌರ್ಜನ್ಯಕ್ಕೆ ಕೊನೆಯೆಂದು? ಮಾತು ಸೋತ ಭಾರತ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....