Homeಸಿನಿಮಾಕ್ರೀಡೆವಿಶ್ವಕಪ್ : ವಿಜಯ್ ಶಂಕರ್ ಸೇರಿಸಿದ್ಯಾಕೆ? ಅಂಬಾಟಿ ರಾಯುಡು ಬಿಟ್ಟಿದ್ಯಾಕೆ?

ವಿಶ್ವಕಪ್ : ವಿಜಯ್ ಶಂಕರ್ ಸೇರಿಸಿದ್ಯಾಕೆ? ಅಂಬಾಟಿ ರಾಯುಡು ಬಿಟ್ಟಿದ್ಯಾಕೆ?

- Advertisement -
| ಅಂತಃಕರಣ |
ಈ ಬಾರಿಯ ಭಾರತದ ವಿಶ್ವಕಪ್ ತಂಡದ ಸುಮಾರು 13 ಆಟಗಾರರು ಎಲ್ಲರೂ ನಿರೀಕ್ಷಿಸಿದವರೇ ಆಗಿದ್ದರು. ಆದರೆ ಉಳಿದ ಇಬ್ಬರ ಆಯ್ಕೆ ಕೆಲವು ಅಭಿಪ್ರಾಯ ಬೇಧಗಳನ್ನು (ಒಪಿನಿಯನ್ ಡಿಫರೆನ್ಸ್) ಹುಟ್ಟುಹಾಕಿದೆ.
ಭಾರತದ 13 ಜನರು, ಯಾರ ಆಯ್ಕೆಯನ್ನು ಹೆಚ್ಚಾಗಿ ಪ್ರಶ್ನಿಸಲಾಗಿಲ್ಲವೋ – ಅವರು ಹೀಗಿದ್ದಾರೆ. ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ, ಕೇದಾರ್ ಜಾಧವ್, ಕೆಎಲ್ ರಾಹುಲ್, ಎಂ ಎಸ್ ಧೋನಿ, ಯಜುವೇಂದ್ರ ಚಹಲ್, ಕುಲದೀಪ್ ಯಾದವ್, ಜಸ್‍ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜ.

ವಿಜಯ್ ಶಂಕರ್
ಒಪಿನಿಯನ್ ಡಿಫರೆನ್ಸ್ ಅನ್ನು ಹುಟ್ಟುಹಾಕಿರುವ ಆ ಎರಡು ಹೆಸರುಗಳೆಂದರೆ ವಿಜಯ್ ಶಂಕರ್ ಹಾಗೂ ದಿನೇಶ್ ಕಾರ್ತಿಕ್‍ರದ್ದು. ಇಬ್ಬರ ಆಯ್ಕೆಗಳೂ ಸಹ ಒಂದು ಮಟ್ಟಿಗೆ ಅಚ್ಚರಿಯೇ ತಂದಿತು. ಅದಕ್ಕಿಂತ ಹೆಚ್ಚಾಗಿ ಆಶ್ಚರ್ಯವಾದ ಸಂಗತಿಯೇನೆಂದರೆ ಮಧ್ಯಮ ಕ್ರಮಾಂಕದ ಆಟಗಾರ ಅಂಬಾಟಿ ರಾಯುಡುರನ್ನು ಕೆಲ ತಿಂಗಳಗಳ ಮುಂಚೆ ವಿರಾಟ್ ಕೊಹ್ಲಿ ವಿಶ್ವಕಪ್ ತಂಡದಲ್ಲಿ ನಂಬರ್ 4 ಸ್ಥಾನದ ರೇಸ್‍ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದಿದ್ದರು. ಆದರೆ ರಾಯುಡುರವರು ಫಾರ್ಮ್ ಕಳೆದುಕೊಂಡ ನಂತರ ಆ ಸ್ಥಾನಕ್ಕೆ ಅವರು ಇರಬೇಕೋ ಇಲ್ಲವೋ ಎಂಬ ಪ್ರಶ್ನೆ ಉದ್ಭವವಾಯಿತು. ಹಾಗೂ ಕೊನೆಗೂ ಸಹ ಅವರನ್ನು ತಂಡದಿಂದ ತೆಗೆಯಲಾಯಿತು. ಈಗ ಅವರು 15ರ ತಂಡಕ್ಕೆ ಯಾರಾದರೂ ಗಾಯಗೊಂಡರೆ ಅವರ ಬದಲಿಗೆ ಪ್ರವೇಶಿಸುವ 5 ಆಟಗಾರರ ಪಟ್ಟಿಯಲ್ಲಿದ್ದಾರೆ.
ವಿಜಯ್ ಶಂಕರ್‍ರನ್ನು ಅಂಬಾಟಿ ರಾಯುಡುರವರ ಬದಲಿಗೆ ಆಯ್ಕೆ ಮಾಡಿದ್ದು ಸಮಂಜಸವಲ್ಲ ಎನ್ನುವುದು ಹಲವರ ಅಭಿಪ್ರಾಯ. ಯಾಕೆಂದರೆ ಅಂಬಾಟಿ ರಾಯುಡು ಒಬ್ಬ ಸ್ಪೆಷಲಿಸ್ಟ್ ಬ್ಯಾಟ್ಸ್‍ಮನ್. ಏಕದಿನ ಕ್ರಿಕೆಟ್‍ನಲ್ಲಿ 47ರ ಸರಾಸರಿಯನ್ನು ಹೊಂದಿರುವ ರಾಯುಡು ಭಾರತದ ಪರ ಏಕದಿನ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಸರಾಸರಿಯನ್ನು ಹೊಂದಿರುವ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಎಲ್ಲ ಬ್ಯಾಟ್ಸ್‍ಮನ್‍ಗಳ ಕೆರಿಯರ್‍ನಲ್ಲಿ ಕೆಲವೊಮ್ಮೆ ಫಾರ್ಮ್ ಇಲ್ಲದಿರುವುದು ಸಹಜ, ಆದರೆ ವಿಶ್ವಕಪ್‍ನಲ್ಲಿ ಸ್ಪೆಷಲಿಸ್ಟ್ ಬ್ಯಾಟ್ಸ್‍ಮನ್ ಆಗಿ ಇಂಗ್ಲೆಂಡ್‍ನಲ್ಲಿ ಉತ್ತಮ ದಾಖಲೆ ಸಹ ಹೊಂದಿರುವ ಅಂಬಾಟಿ ರಾಯುಡುರನ್ನು ಆಡಿಸಬೇಕಿತ್ತು ಎಂಬುದು ಕೆಲವರ ಅಭಿಪ್ರಾಯ.

ಅಂಬಾಟಿ ರಾಯುಡು
ಆದರೆ ಆಯ್ಕೆಗಾರ ಎಂ.ಎಸ್.ಕೆ ಪ್ರಸಾದ್ ಹೇಳಿರುವ ಹಾಗೆ ವಿಜಯ್ ಶಂಕರ್ ಮೂರು ದೃಷ್ಟಿಕೋನಗಳಲ್ಲಿ (ಬ್ಯಾಟಿಂಗ್, ಫೀಲ್ಡಿಂಗ್ ಹಾಗೂ ಬೌಲಿಂಗ್) ತಂಡಕ್ಕೆ ಸಹಾಯ ಮಾಡುವುದರಿಂದ ಅವರನ್ನು ಅಂಬಾಟಿ ರಾಯುಡುರವರ ಬದಲಿಗೆ ಆಯ್ಕೆ ಮಾಡಲಾಯಿತು ಎಂಬುದು ಕೆಲವರ ಅಭಿಪ್ರಾಯ.
ನನ್ನ ಅಭಿಪ್ರಾಯದಲ್ಲಿ ಇವರಿಬ್ಬರ ಮಧ್ಯೆ ಅಂಬಾಟಿ ರಾಯುಡುರನ್ನು ಆಡಿಸಬೇಕಾಗಿತ್ತು. ಯಾಕೆಂದರೆ ವಿಜಯ್‍ರವರು ಮೂರು ವಿಭಾಗಗಳಲ್ಲಿ ತಂಡಕ್ಕೆ ಸಹಾಯ ಮಾಡಿದರೂ ಸಹ ಅಂಬಾಟಿರವರು ಒಬ್ಬ ಸ್ಪೆಷಲಿಸ್ಟ್ ಬ್ಯಾಟ್ಸ್‍ಮನ್ ಆಗಿ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಫ್ಲೋಟರ್ ಆಗಿ ಕಾರ್ಯನಿರ್ವಹಿಸಬಲ್ಲರು. ಆದುದರಿಂದ ನನ್ನ ಪ್ರಕಾರ ಅಂಬಾಟಿ ರಾಯುಡುರವರು ಈ ಟೂರ್ನಿಯಲ್ಲಿ ಆಡಬೇಕಿತ್ತು.
ಇನ್ನೊಬ್ಬ ದಿನೇಶ್ ಕಾರ್ತಿಕ್ ಅವರ ಆಯ್ಕೆ ನನಗೆ ಚೂರೂ ಸಹ ಸಮಂಜಸವೆನಿಸಲಿಲ್ಲ. ಯಾಕೆಂದರೆ ತಂಡದಲ್ಲಿ ಧೋನಿಯವರು ವಿಕೆಟ್ ಕೀಪರ್ ಆಗಿದ್ದರು ಹಾಗೂ ಅವರಿಗೆ ಗಾಯವಾದರೆ ರಿಪ್ಲೇಸ್‍ಮೆಂಟ್ ಆಗಿ ಬೇರೆಯವರನ್ನು ಆಗ ಕಳಿಸಬಹುದಿತ್ತು ಅಥವಾ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಮಾಡಬಹುದಿತ್ತು. ಯಾಕೆಂದರೆ ಧೋನಿಯವರು ನೀಡುವ ಮಾರ್ಗದರ್ಶನವನ್ನು ಯಾವ ಕೀಪರ್ ಸಹ ನೀಡಲಾಗುವುದಿಲ್ಲ. ಕಾರ್ತಿಕ್‍ರವರು ರಾಹುಲ್‍ಗಿಂತ ಸ್ವಲ್ಪ ಮಟ್ಟಿಗೆ ಮಾತ್ರ ಅತ್ಯುತ್ತಮ ಕೀಪರ್ ಎನ್ನುವುದು ನನ್ನ ಅಭಿಪ್ರಾಯ. ಇಬ್ಬರನ್ನೂ ಹೋಲಿಸಿದರೆ ರಾಹುಲ್ ಪ್ರಬುದ್ಧ ಬ್ಯಾಟ್ಸ್‍ಮನ್ ಸಹ. ಹಾಗಾಗಿ ನನಗೆ ದಿನೇಶ್ ಕಾರ್ತಿಕ್‍ರಿಗೆ ಯಾಕೆ ಸ್ಥಾನ ಸಿಕ್ಕಿತು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಕಾರ್ತಿಕ್‍ರ ಬದಲಿಗೆ ಅಂಬಾಟಿ ರಾಯುಡುರನ್ನು ಆಡಿಸಬಹುದಿತ್ತು. ಅಥವಾ ನಾನು ಹಿಂದೊಮ್ಮೆ ನನ್ನ ಲೇಖನದಲ್ಲಿ ಹೇಳಿದ ಹಾಗೆ ಆಜಿಂಕ್ಯ ರಹಾನೆಯವರನ್ನು ಆಡಿಸಬಹುದಾಗಿತ್ತು. ರಹಾನೆ, ರಾಯುಡು ಹಾಗೂ ಇನ್ನೊಬ್ಬ ಆಟಗಾರ ರೈನಾ, ಮೂವರೂ ಸಹ ಇಂಗ್ಲೆಂಡ್‍ನಲ್ಲಿ ಅನುಭವ ಹೊಂದಿದ್ದಾರೆ. ಆದುದರಿಂದ ದಿನೇಶ್‍ರ ಆಯ್ಕೆ ನನಗೆ ಗೊಂದಲವಾಗಿಯೇ ಉಳಿದಿದೆ.
ದಿನೇಶ್ ಕಾರ್ತಿಕ್
ತಂಡದ ಹೆಚ್ಚುವರಿ ಆಟಗಾರರಲ್ಲಿ ಅಕ್ಷರ್ ಪಟೇಲ್‍ರನ್ನು ಆಯ್ಕೆ ಮಾಡಿದ್ದು ನನಗಷ್ಟು ಸಮಂಜಸವೆನಿಸಲಿಲ್ಲ. ಯಾಕೆಂದರೆ ಅಕ್ಷರ್ ಇತ್ತೀಚಿಗೆ ಭಾರತ ತಂಡದಲ್ಲಿ ಆಡಿಲ್ಲ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಅವರೇನೂ ಅತ್ಯುತ್ತಮ ಫಾರ್ಮ್‍ನಲ್ಲಿಲ್ಲ. ಅವರ ಬದಲಿಗೆ ಈಗ ಇನ್ನಷ್ಟು ಪ್ರಬುದ್ಧರಾಗಿರುವ ರವಿಚಂದ್ರನ್ ಅಶ್ವಿನ್‍ರನ್ನು ಆಯ್ಕೆ ಮಾಡಬಹುದಾಗಿತ್ತು.
ಇನ್ನು ಇದೇ ಹೆಚ್ಚುವರಿ ಆಟಗಾರರಲ್ಲಿ ಆಯ್ಕೆಯಾಗಿರುವ ನವದೀಪ್ ಸೈನಿಯವರ ಬದಲಿಗೆ ದೀಪಕ್ ಚಹಾರ್ ಅಥವಾ ಅವರದ್ದೇ ರೀತಿಯ ಒಬ್ಬ ಸ್ವಿಂಗ್ ಬೌಲರ್‍ನ್ನು ಆಯ್ಕೆ ಮಾಡಬೇಕಾಗಿತ್ತು. ಯಾಕೆಂದರೆ ನವದೀಪ್ ವೇಗವಾಗಿ ಮಾತ್ರ ಬೌಲ್ ಮಾಡಬಲ್ಲರು. ಇಂಗ್ಲೆಂಡ್ ಕಂಡೀಷನ್‍ಗಳು ಹೆಚ್ಚಾಗಿ ಬೆಂಬಲ ನೀಡುವುದು ಸ್ವಿಂಗ್‍ಗೆ. ಹೀಗಾಗಿ ಭುವನೇಶ್ವರ್ ಕುಮಾರ್‍ಗೆ ತಕ್ಕ ಸಾಥ್ ಕೊಡಬಲ್ಲ ಒಬ್ಬ ಸ್ವಿಂಗ್ ವೇಗಿಯನ್ನು ಆಯ್ಕೆ ಮಾಡಬಹುದಾಗಿತ್ತು ಎಂಬುದು ನನ್ನ ಅಭಿಪ್ರಾಯ.
ಒಟ್ಟಾರೆಯಾಗಿ ಇಲ್ಲಿಯ ತನಕ ಘೋಷಣೆಯಾಗಿರುವ ತಂಡಗಳಲ್ಲಿ ಭಾರತ ಒಂದು ಮಟ್ಟಿಗೆ ಅತ್ಯುತ್ತಮ ಬ್ಯಾಲೆನ್ಸ್ ಹೊಂದಿರುವ ತಂಡವಾಗಿದೆ. ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಅತ್ಯಂತ ಉತ್ತಮ ಬೌಲಿಂಗ್ ಲೈನಪ್‍ಗಳನ್ನು ಕಟ್ಟಿಕೊಂಡಿವೆ ಹಾಗೂ ಇವೆರಡೂ ಲೈನಪ್‍ಗಳನ್ನು ಎದುರಿಸುವುದು ಇತರ ತಂಡಗಳಿಗೆ ದೊಡ್ಡ ಸವಾಲಾಗುವುದಂತೂ ಸರಿ. ಭಾರತ ವಿಶ್ವಕಪ್ ಗೆಲ್ಲಲಿ ಎಂಬುದು ನನ್ನ ಆಶಯ. ಈ ಆಶಯ ನಿಜವಾಗುತ್ತದಾ ಇಲ್ಲವಾ ಎಂಬುದು ನಾವು ನೋಡಬೇಕು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...