ಈ ಬಾರಿಯ ಭಾರತದ ವಿಶ್ವಕಪ್ ತಂಡದ ಸುಮಾರು 13 ಆಟಗಾರರು ಎಲ್ಲರೂ ನಿರೀಕ್ಷಿಸಿದವರೇ ಆಗಿದ್ದರು. ಆದರೆ ಉಳಿದ ಇಬ್ಬರ ಆಯ್ಕೆ ಕೆಲವು ಅಭಿಪ್ರಾಯ ಬೇಧಗಳನ್ನು (ಒಪಿನಿಯನ್ ಡಿಫರೆನ್ಸ್) ಹುಟ್ಟುಹಾಕಿದೆ.
ಭಾರತದ 13 ಜನರು, ಯಾರ ಆಯ್ಕೆಯನ್ನು ಹೆಚ್ಚಾಗಿ ಪ್ರಶ್ನಿಸಲಾಗಿಲ್ಲವೋ – ಅವರು ಹೀಗಿದ್ದಾರೆ. ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ, ಕೇದಾರ್ ಜಾಧವ್, ಕೆಎಲ್ ರಾಹುಲ್, ಎಂ ಎಸ್ ಧೋನಿ, ಯಜುವೇಂದ್ರ ಚಹಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜ.
ವಿಜಯ್ ಶಂಕರ್
ಒಪಿನಿಯನ್ ಡಿಫರೆನ್ಸ್ ಅನ್ನು ಹುಟ್ಟುಹಾಕಿರುವ ಆ ಎರಡು ಹೆಸರುಗಳೆಂದರೆ ವಿಜಯ್ ಶಂಕರ್ ಹಾಗೂ ದಿನೇಶ್ ಕಾರ್ತಿಕ್ರದ್ದು. ಇಬ್ಬರ ಆಯ್ಕೆಗಳೂ ಸಹ ಒಂದು ಮಟ್ಟಿಗೆ ಅಚ್ಚರಿಯೇ ತಂದಿತು. ಅದಕ್ಕಿಂತ ಹೆಚ್ಚಾಗಿ ಆಶ್ಚರ್ಯವಾದ ಸಂಗತಿಯೇನೆಂದರೆ ಮಧ್ಯಮ ಕ್ರಮಾಂಕದ ಆಟಗಾರ ಅಂಬಾಟಿ ರಾಯುಡುರನ್ನು ಕೆಲ ತಿಂಗಳಗಳ ಮುಂಚೆ ವಿರಾಟ್ ಕೊಹ್ಲಿ ವಿಶ್ವಕಪ್ ತಂಡದಲ್ಲಿ ನಂಬರ್ 4 ಸ್ಥಾನದ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದಿದ್ದರು. ಆದರೆ ರಾಯುಡುರವರು ಫಾರ್ಮ್ ಕಳೆದುಕೊಂಡ ನಂತರ ಆ ಸ್ಥಾನಕ್ಕೆ ಅವರು ಇರಬೇಕೋ ಇಲ್ಲವೋ ಎಂಬ ಪ್ರಶ್ನೆ ಉದ್ಭವವಾಯಿತು. ಹಾಗೂ ಕೊನೆಗೂ ಸಹ ಅವರನ್ನು ತಂಡದಿಂದ ತೆಗೆಯಲಾಯಿತು. ಈಗ ಅವರು 15ರ ತಂಡಕ್ಕೆ ಯಾರಾದರೂ ಗಾಯಗೊಂಡರೆ ಅವರ ಬದಲಿಗೆ ಪ್ರವೇಶಿಸುವ 5 ಆಟಗಾರರ ಪಟ್ಟಿಯಲ್ಲಿದ್ದಾರೆ.
ವಿಜಯ್ ಶಂಕರ್ರನ್ನು ಅಂಬಾಟಿ ರಾಯುಡುರವರ ಬದಲಿಗೆ ಆಯ್ಕೆ ಮಾಡಿದ್ದು ಸಮಂಜಸವಲ್ಲ ಎನ್ನುವುದು ಹಲವರ ಅಭಿಪ್ರಾಯ. ಯಾಕೆಂದರೆ ಅಂಬಾಟಿ ರಾಯುಡು ಒಬ್ಬ ಸ್ಪೆಷಲಿಸ್ಟ್ ಬ್ಯಾಟ್ಸ್ಮನ್. ಏಕದಿನ ಕ್ರಿಕೆಟ್ನಲ್ಲಿ 47ರ ಸರಾಸರಿಯನ್ನು ಹೊಂದಿರುವ ರಾಯುಡು ಭಾರತದ ಪರ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸರಾಸರಿಯನ್ನು ಹೊಂದಿರುವ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಎಲ್ಲ ಬ್ಯಾಟ್ಸ್ಮನ್ಗಳ ಕೆರಿಯರ್ನಲ್ಲಿ ಕೆಲವೊಮ್ಮೆ ಫಾರ್ಮ್ ಇಲ್ಲದಿರುವುದು ಸಹಜ, ಆದರೆ ವಿಶ್ವಕಪ್ನಲ್ಲಿ ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ ಆಗಿ ಇಂಗ್ಲೆಂಡ್ನಲ್ಲಿ ಉತ್ತಮ ದಾಖಲೆ ಸಹ ಹೊಂದಿರುವ ಅಂಬಾಟಿ ರಾಯುಡುರನ್ನು ಆಡಿಸಬೇಕಿತ್ತು ಎಂಬುದು ಕೆಲವರ ಅಭಿಪ್ರಾಯ.
ಅಂಬಾಟಿ ರಾಯುಡು
ಆದರೆ ಆಯ್ಕೆಗಾರ ಎಂ.ಎಸ್.ಕೆ ಪ್ರಸಾದ್ ಹೇಳಿರುವ ಹಾಗೆ ವಿಜಯ್ ಶಂಕರ್ ಮೂರು ದೃಷ್ಟಿಕೋನಗಳಲ್ಲಿ (ಬ್ಯಾಟಿಂಗ್, ಫೀಲ್ಡಿಂಗ್ ಹಾಗೂ ಬೌಲಿಂಗ್) ತಂಡಕ್ಕೆ ಸಹಾಯ ಮಾಡುವುದರಿಂದ ಅವರನ್ನು ಅಂಬಾಟಿ ರಾಯುಡುರವರ ಬದಲಿಗೆ ಆಯ್ಕೆ ಮಾಡಲಾಯಿತು ಎಂಬುದು ಕೆಲವರ ಅಭಿಪ್ರಾಯ.
ನನ್ನ ಅಭಿಪ್ರಾಯದಲ್ಲಿ ಇವರಿಬ್ಬರ ಮಧ್ಯೆ ಅಂಬಾಟಿ ರಾಯುಡುರನ್ನು ಆಡಿಸಬೇಕಾಗಿತ್ತು. ಯಾಕೆಂದರೆ ವಿಜಯ್ರವರು ಮೂರು ವಿಭಾಗಗಳಲ್ಲಿ ತಂಡಕ್ಕೆ ಸಹಾಯ ಮಾಡಿದರೂ ಸಹ ಅಂಬಾಟಿರವರು ಒಬ್ಬ ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ ಆಗಿ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಫ್ಲೋಟರ್ ಆಗಿ ಕಾರ್ಯನಿರ್ವಹಿಸಬಲ್ಲರು. ಆದುದರಿಂದ ನನ್ನ ಪ್ರಕಾರ ಅಂಬಾಟಿ ರಾಯುಡುರವರು ಈ ಟೂರ್ನಿಯಲ್ಲಿ ಆಡಬೇಕಿತ್ತು.
ಇನ್ನೊಬ್ಬ ದಿನೇಶ್ ಕಾರ್ತಿಕ್ ಅವರ ಆಯ್ಕೆ ನನಗೆ ಚೂರೂ ಸಹ ಸಮಂಜಸವೆನಿಸಲಿಲ್ಲ. ಯಾಕೆಂದರೆ ತಂಡದಲ್ಲಿ ಧೋನಿಯವರು ವಿಕೆಟ್ ಕೀಪರ್ ಆಗಿದ್ದರು ಹಾಗೂ ಅವರಿಗೆ ಗಾಯವಾದರೆ ರಿಪ್ಲೇಸ್ಮೆಂಟ್ ಆಗಿ ಬೇರೆಯವರನ್ನು ಆಗ ಕಳಿಸಬಹುದಿತ್ತು ಅಥವಾ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಮಾಡಬಹುದಿತ್ತು. ಯಾಕೆಂದರೆ ಧೋನಿಯವರು ನೀಡುವ ಮಾರ್ಗದರ್ಶನವನ್ನು ಯಾವ ಕೀಪರ್ ಸಹ ನೀಡಲಾಗುವುದಿಲ್ಲ. ಕಾರ್ತಿಕ್ರವರು ರಾಹುಲ್ಗಿಂತ ಸ್ವಲ್ಪ ಮಟ್ಟಿಗೆ ಮಾತ್ರ ಅತ್ಯುತ್ತಮ ಕೀಪರ್ ಎನ್ನುವುದು ನನ್ನ ಅಭಿಪ್ರಾಯ. ಇಬ್ಬರನ್ನೂ ಹೋಲಿಸಿದರೆ ರಾಹುಲ್ ಪ್ರಬುದ್ಧ ಬ್ಯಾಟ್ಸ್ಮನ್ ಸಹ. ಹಾಗಾಗಿ ನನಗೆ ದಿನೇಶ್ ಕಾರ್ತಿಕ್ರಿಗೆ ಯಾಕೆ ಸ್ಥಾನ ಸಿಕ್ಕಿತು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಕಾರ್ತಿಕ್ರ ಬದಲಿಗೆ ಅಂಬಾಟಿ ರಾಯುಡುರನ್ನು ಆಡಿಸಬಹುದಿತ್ತು. ಅಥವಾ ನಾನು ಹಿಂದೊಮ್ಮೆ ನನ್ನ ಲೇಖನದಲ್ಲಿ ಹೇಳಿದ ಹಾಗೆ ಆಜಿಂಕ್ಯ ರಹಾನೆಯವರನ್ನು ಆಡಿಸಬಹುದಾಗಿತ್ತು. ರಹಾನೆ, ರಾಯುಡು ಹಾಗೂ ಇನ್ನೊಬ್ಬ ಆಟಗಾರ ರೈನಾ, ಮೂವರೂ ಸಹ ಇಂಗ್ಲೆಂಡ್ನಲ್ಲಿ ಅನುಭವ ಹೊಂದಿದ್ದಾರೆ. ಆದುದರಿಂದ ದಿನೇಶ್ರ ಆಯ್ಕೆ ನನಗೆ ಗೊಂದಲವಾಗಿಯೇ ಉಳಿದಿದೆ.
ದಿನೇಶ್ ಕಾರ್ತಿಕ್
ತಂಡದ ಹೆಚ್ಚುವರಿ ಆಟಗಾರರಲ್ಲಿ ಅಕ್ಷರ್ ಪಟೇಲ್ರನ್ನು ಆಯ್ಕೆ ಮಾಡಿದ್ದು ನನಗಷ್ಟು ಸಮಂಜಸವೆನಿಸಲಿಲ್ಲ. ಯಾಕೆಂದರೆ ಅಕ್ಷರ್ ಇತ್ತೀಚಿಗೆ ಭಾರತ ತಂಡದಲ್ಲಿ ಆಡಿಲ್ಲ ಹಾಗೂ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅವರೇನೂ ಅತ್ಯುತ್ತಮ ಫಾರ್ಮ್ನಲ್ಲಿಲ್ಲ. ಅವರ ಬದಲಿಗೆ ಈಗ ಇನ್ನಷ್ಟು ಪ್ರಬುದ್ಧರಾಗಿರುವ ರವಿಚಂದ್ರನ್ ಅಶ್ವಿನ್ರನ್ನು ಆಯ್ಕೆ ಮಾಡಬಹುದಾಗಿತ್ತು.
ಇನ್ನು ಇದೇ ಹೆಚ್ಚುವರಿ ಆಟಗಾರರಲ್ಲಿ ಆಯ್ಕೆಯಾಗಿರುವ ನವದೀಪ್ ಸೈನಿಯವರ ಬದಲಿಗೆ ದೀಪಕ್ ಚಹಾರ್ ಅಥವಾ ಅವರದ್ದೇ ರೀತಿಯ ಒಬ್ಬ ಸ್ವಿಂಗ್ ಬೌಲರ್ನ್ನು ಆಯ್ಕೆ ಮಾಡಬೇಕಾಗಿತ್ತು. ಯಾಕೆಂದರೆ ನವದೀಪ್ ವೇಗವಾಗಿ ಮಾತ್ರ ಬೌಲ್ ಮಾಡಬಲ್ಲರು. ಇಂಗ್ಲೆಂಡ್ ಕಂಡೀಷನ್ಗಳು ಹೆಚ್ಚಾಗಿ ಬೆಂಬಲ ನೀಡುವುದು ಸ್ವಿಂಗ್ಗೆ. ಹೀಗಾಗಿ ಭುವನೇಶ್ವರ್ ಕುಮಾರ್ಗೆ ತಕ್ಕ ಸಾಥ್ ಕೊಡಬಲ್ಲ ಒಬ್ಬ ಸ್ವಿಂಗ್ ವೇಗಿಯನ್ನು ಆಯ್ಕೆ ಮಾಡಬಹುದಾಗಿತ್ತು ಎಂಬುದು ನನ್ನ ಅಭಿಪ್ರಾಯ.
ಒಟ್ಟಾರೆಯಾಗಿ ಇಲ್ಲಿಯ ತನಕ ಘೋಷಣೆಯಾಗಿರುವ ತಂಡಗಳಲ್ಲಿ ಭಾರತ ಒಂದು ಮಟ್ಟಿಗೆ ಅತ್ಯುತ್ತಮ ಬ್ಯಾಲೆನ್ಸ್ ಹೊಂದಿರುವ ತಂಡವಾಗಿದೆ. ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಅತ್ಯಂತ ಉತ್ತಮ ಬೌಲಿಂಗ್ ಲೈನಪ್ಗಳನ್ನು ಕಟ್ಟಿಕೊಂಡಿವೆ ಹಾಗೂ ಇವೆರಡೂ ಲೈನಪ್ಗಳನ್ನು ಎದುರಿಸುವುದು ಇತರ ತಂಡಗಳಿಗೆ ದೊಡ್ಡ ಸವಾಲಾಗುವುದಂತೂ ಸರಿ. ಭಾರತ ವಿಶ್ವಕಪ್ ಗೆಲ್ಲಲಿ ಎಂಬುದು ನನ್ನ ಆಶಯ. ಈ ಆಶಯ ನಿಜವಾಗುತ್ತದಾ ಇಲ್ಲವಾ ಎಂಬುದು ನಾವು ನೋಡಬೇಕು.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್ಐಆರ್ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...
ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್ಟಿ ಸಮುದಾಯದ ಕೋಲಂಗಿಂತ...
ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್ನಲ್ಲಿ ಸ್ಲೆಡ್ಜ್ ಹ್ಯಾಮರ್ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಎಕ್ಸ್ ನಲ್ಲಿ 6.8...
ಮಹಾರಾಷ್ಟ್ರದ ನಾಸಿಕ್ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...
ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...
ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...
ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...
ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ...
2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...
ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್ಜಿ ಕರ್ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...