ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ತನ್ನ ಬೇಲ್ಔಟ್ ಕಾರ್ಯಕ್ರಮದ ಭಾಗವಾಗಿ ಮುಂದಿನ ನಿಧಿಯ ಕಂತನ್ನು ಬಿಡುಗಡೆ ಮಾಡಲು ಪಾಕಿಸ್ತಾನಕ್ಕೆ 11 ಹೊಸ ಷರತ್ತುಗಳನ್ನು ವಿಧಿಸಿದೆ ಎಂದು ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ಭಾನುವಾರ ವರದಿ ಮಾಡಿದೆ. ಇದರೊಂದಿಗೆ ಷರತ್ತುಗಳ ಸಂಖ್ಯೆ 50 ಕ್ಕೆ ಏರಿಕೆಯಾಗಿದೆ. ಪಾಕಿಸ್ತಾನಕ್ಕೆ ಹೊಸದಾಗಿ
ಶನಿವಾರ ಬಿಡುಗಡೆಯಾದ ಸಿಬ್ಬಂದಿ ಮಟ್ಟದ ವರದಿಯಲ್ಲಿ, ವಿಶ್ವಸಂಸ್ಥೆಯ ಹಣಕಾಸು ಸಂಸ್ಥೆ “ಭಾರತ ಮತ್ತು ಪಾಕಿಸ್ತಾನದ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಗಳು ಮುಂದುವರಿದರೆ ಅಥವಾ ಮತ್ತಷ್ಟು ಹದಗೆಟ್ಟರೆ, ಕಾರ್ಯಕ್ರಮದ ಹಣಕಾಸು, ಬಾಹ್ಯ ಮತ್ತು ಸುಧಾರಣಾ ಗುರಿಗಳಿಗೆ ಅಪಾಯಗಳನ್ನು ಹೆಚ್ಚಾಗಬಹುದು” ಎಂದು ಎಚ್ಚರಿಸಿದೆ.
ಮೇ 9 ರಂದು, ವಿಶ್ವಸಂಸ್ಥೆಯ ಹಣಕಾಸು ಸಂಸ್ಥೆ ತನ್ನ ಬೇಲ್ಔಟ್ ಪ್ಯಾಕೇಜ್ನ ಭಾಗವಾಗಿ ಪಾಕಿಸ್ತಾನಕ್ಕೆ ಹೊಸ $1 ಬಿಲಿಯನ್ ಆರ್ಥಿಕ ನೆರವು ಕಾರ್ಯಕ್ರಮವನ್ನು ಅನುಮೋದಿಸಿತ್ತಿ.
ಶನಿವಾರ ಐಎಂಎಫ್ ವಿಧಿಸಿದ ಷರತ್ತುಗಳಲ್ಲಿ ಪಾಕಿಸ್ತಾನ ಹೊಸ $62.2 ಬಿಲಿಯನ್ ಬಜೆಟ್ಗೆ ಸಂಸತ್ತಿನ ಅನುಮೋದನೆಯನ್ನು ಪಡೆಯುವುದು, ವಿದ್ಯುತ್ ಬಿಲ್ಗಳ ಮೇಲಿನ ಸಾಲ ಸೇವೆ ಸರ್ಚಾರ್ಜ್ನಲ್ಲಿ ಹೆಚ್ಚಳವನ್ನು ಜಾರಿಗೆ ತರುವುದು ಮತ್ತು ಮೂರು ವರ್ಷಗಳಿಗಿಂತ ಹಳೆಯದಾದ ಬಳಸಿದ ಕಾರುಗಳ ಆಮದಿನ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವುದು ಸೇರಿವೆ ಎಂದು ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
$7 ಬಿಲಿಯನ್ ಮೌಲ್ಯದ ಸಾಲಕ್ಕೆ ಸಂಬಂಧಿಸಿದಂತೆ ಐಎಂಎಫ್ ಹೊಸ ಷರತ್ತುಗಳನ್ನು ವಿಧಿಸಿದೆ ಎಂದು ವರದಿ ಹೇಳಿದೆ. 2025-26ರ ಬಜೆಟ್ಗೆ ಸಂಸತ್ತಿನ ಅನುಮೋದನೆಯನ್ನು ಪಡೆಯುವ ಷರತ್ತು “ಜೂನ್ ಅಂತ್ಯದ ವೇಳೆಗೆ ಕಾರ್ಯಕ್ರಮದ ಗುರಿಗಳನ್ನು ತಲುಪಲು ಐಎಂಎಫ್ ಸಿಬ್ಬಂದಿ ಒಪ್ಪಂದಕ್ಕೆ ಅನುಗುಣವಾಗಿತ್ತು” ಎಂದು ಪತ್ರಿಕೆ ವರದಿ ಮಾಡಿದೆ.
ಮತ್ತೊಂದು ಷರತ್ತು ಎಂದರೆ ಪಾಕಿಸ್ತಾನ ಸರ್ಕಾರವು ಐಎಮ್ಎಫ್ನ ಆಡಳಿತದ ಮೌಲ್ಯಮಾಪನದ ಶಿಫಾರಸುಗಳ ಆಧಾರದ ಮೇಲೆ ಆಡಳಿತ ಕ್ರಿಯಾ ಯೋಜನೆಯನ್ನು ಪ್ರಕಟಿಸಬೇಕು ಎಂದು ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಮುಂದಿನ ಹಣಕಾಸು ವರ್ಷಕ್ಕೆ ದೇಶದ ರಕ್ಷಣಾ ಬಜೆಟ್ $8.5 ಬಿಲಿಯನ್ ಎಂದು ಐಎಮ್ಎಫ್ ವರದಿ ಅಂದಾಜಿಸಿದೆ ಎಂದು ಪತ್ರಿಕೆ ವರದಿ ಮಾಡಿದೆ. ಆದಾಗ್ಯೂ, ಈ ತಿಂಗಳ ಆರಂಭದಲ್ಲಿ ಭಾರತದೊಂಗಿನ ಮಿಲಿಟರಿ ಉದ್ವಿಗ್ನತೆ ಹೆಚ್ಚಾದ ನಂತರ ಪಾಕಿಸ್ತಾನ ರಕ್ಷಣೆಗೆ 18% ಹೆಚ್ಚಿನ ಹಂಚಿಕೆಯನ್ನು ಸೂಚಿಸಿದೆ ಎಂದು ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಮೇ 7 ರಂದು ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದಾಗ ಉದ್ವಿಗ್ನತೆ ಹೆಚ್ಚಾಯಿತು. ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಈ ದಾಳಿಗಳು ನಡೆದವು. ಇದಕ್ಕೆ ಪ್ರತಿಕಾರವಾಗಿ ಪಾಕಿಸ್ತಾನ ಸೇನೆಯು ಜಮ್ಮು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತೀಯ ಹಳ್ಳಿಗಳ ಮೇಲೆ ಪದೇ ಪದೇ ಶೆಲ್ ದಾಳಿ ಮಾಡಿತ್ತು. ಈ ವೇಳೆ ಕನಿಷ್ಠ 22 ಭಾರತೀಯ ನಾಗರಿಕರು ಮತ್ತು ಏಳು ರಕ್ಷಣಾ ಸಿಬ್ಬಂದಿ ಸಾವನ್ನಪ್ಪಿದರು.
ಮೇ 10 ರಂದು, ನಾಲ್ಕು ದಿನಗಳ ಸಂಘರ್ಷದ ನಂತರ ಗುಂಡಿನ ದಾಳಿಯನ್ನು ನಿಲ್ಲಿಸಲು ಭಾರತ ಮತ್ತು ಪಾಕಿಸ್ತಾನ “ಒಪ್ಪಂದ” ಮಾಡಿಕೊಂಡವು.
ಕಳೆದ ಎರಡು ವಾರಗಳಲ್ಲಿ ಎರಡು ನೆರೆಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಹೆಚ್ಚಿರುವುದನ್ನು ಐಎಂಎಫ್ ಗಮನಿಸಿದೆ. ಆದಾಗ್ಯೂ, ಮಾರುಕಟ್ಟೆಯ ಪ್ರತಿಕ್ರಿಯೆ ಸಾಧಾರಣವಾಗಿತ್ತು, ಪಾಕಿಸ್ತಾನದ ಷೇರು ಮಾರುಕಟ್ಟೆಯು ಅದರ ಇತ್ತೀಚಿನ ಲಾಭಗಳಲ್ಲಿ ಹೆಚ್ಚಿನದನ್ನು ಉಳಿಸಿಕೊಂಡಿದೆ ಎಂದು ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಮೇ 9 ರಂದು, ಪಾಕಿಸ್ತಾನಕ್ಕೆ ಐಎಂಎಫ್ನ ಕಾರ್ಯಕ್ರಮಗಳ ಪರಿಣಾಮಕಾರಿತ್ವದ ಬಗ್ಗೆ ಭಾರತವು ಕಳವಳ ವ್ಯಕ್ತಪಡಿಸಿತು. ಸಾಲದ ಕಳಪೆ ದಾಖಲೆಯನ್ನು ಪರಿಗಣಿಸಿ ಮತ್ತು ಸರ್ಕಾರಿ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆಗೆ ಸಾಲವಾಗಿ ಪಡೆದ ಹಣಕಾಸು ನಿಧಿಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಕೂಡಾ ಭಾರತ ಎಚ್ಚರಿಸಿತ್ತು.
ಶುಕ್ರವಾರದಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಾಕಿಸ್ತಾನಕ್ಕೆ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ನೀಡುವ ಯಾವುದೇ ಹಣಕಾಸಿನ ನೆರವು “ಭಯೋತ್ಪಾದನಾ ನಿಧಿಗಿಂತ ಕಡಿಮೆಯಿಲ್ಲ” ಮತ್ತು ಅದನ್ನು ಮರುಪರಿಶೀಲಿಸಬೇಕು ಎಂದು ಹೇಳಿದ್ದರು. ಪಾಕಿಸ್ತಾನಕ್ಕೆ ಹೊಸದಾಗಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಭದ್ರತಾ ಉಲ್ಲಂಘನೆ | ಪಶ್ಚಿಮ ಬಂಗಾಳದ ಮತದಾರರು ಪಟ್ಟಿಯಿಂದ ಡಿಲೀಟ್!

