Homeಮುಖಪುಟ2020ರಿಂದ ಮಾದಕ ದ್ರವ್ಯ ಸೇವನೆ, ಕಳ್ಳಸಾಗಣೆ ಹೆಚ್ಚಳ: ಎನ್‌ಸಿಬಿ ಕಳವಳ

2020ರಿಂದ ಮಾದಕ ದ್ರವ್ಯ ಸೇವನೆ, ಕಳ್ಳಸಾಗಣೆ ಹೆಚ್ಚಳ: ಎನ್‌ಸಿಬಿ ಕಳವಳ

- Advertisement -
- Advertisement -

ಶನಿವಾರ ಮಾದಕದ್ರವ್ಯ ರಹಿತ ದಿನ  ಆಚರಿಸಲಾಗಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಮಾದಕದ್ರವ್ಯ ನಿಯಂತ್ರಂಣ ಮಂಡಳಿ (ಎನ್‍ಸಿಬಿ) ನೀಡಿದ ವರದಿ ಪ್ರಕಾರ, 2020ರಿಂದ ಮಾದಕ ದ್ರವ್ಯ ಸೇವನೆ, ಕಳ್ಳಸಾಗಣೆ ಅನೇಕ ಪಟ್ಟು ಹೆಚ್ಚಾಗಿದೆ ಎಂದು ಹಿಂದೂಸ್ತಾನ್‍ ಟೈಮ್ಸ್  ವರದಿ ಮಾಡಿತ್ತು.

ಅರೆ, ಕೋವಿಡ್‍ ಸಂದರ್ಭಕ್ಕೂ ಇದಕ್ಕೂ ಲಿಂಕ್‍ ಇರಬಹುದಾ? ಎಲ್ಲ ಸ್ಥಗಿತವಾಗಿರುವಾಗ ಇದೆಲ್ಲ ಹೇಗೆ ಸಾಧ್ಯವಾಗಿತು? ಕಳೆದ ವರ್ಷ ಭಾರಿ ಸುದ್ದಿ ಮಾಡಿದ ಬಾಲಿವುಡ್‍ ಮತ್ತು ನಮ್ಮ ಕನ್ನಡ ಚಿತ್ರರಂಗದ ಕೆಲವರ ಡ್ರಗ್ಸ್ ಸುದ್ದಿಗಳು ಇದಕ್ಕೆ ಪೂರಕವಾಗಿವೆಯೇ? ಅದಕ್ಕೂ ಮುಖ್ಯವಾಗಿ ಈ ಎನ್‍ಸಿಬಿ, ಆಗೆಲ್ಲ ದೊಡ್ಡ ಹವಾ ಮಾಡಿ ಈಗೇಕೆ ತಣ್ಣಗಾಗಿದೆ?- ಈ ಎಲ್ಲ ಪ್ರಶ್ನೆಗಳಿಗೆ ಸುಲಭ ಉತ್ತರವಿಲ್ಲ ಅನಿಸುತ್ತದೆ.

ಅದಿರಲಿ, 2020-21ನೆ ಸಾಲಿನಲ್ಲಿ ಕರ್ನಾಟಕದಲ್ಲಿ 50 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡು ನಾಶ ಮಾಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಶನಿವಾರ ತಿಳಿಸಿದ್ದಾರೆ. ಪೊಲೀಸರಿಗೆ ಸಿಕ್ಕಿದ್ದು 50 ಕೋಟಿ ರೂ. ಮೌಲ್ಯದ ಡ್ರಗ್ಸ್ ಎಂದಾದರೆ, ಸಿಗದೇ ಇರುವುದು ಎಷ್ಟು ಪಟ್ಟು ಇರಬಹುದು?

ಶನಿವಾರ ಮಾದಕದ್ರವ್ಯ ರಹಿತ ದಿನದ ಅಂಗವಾಗಿ ಎಲ್ಲ ಜಿಲ್ಲೆಯ ಪೊಲೀಸರು ಎಸ್‍ಪಿ ನೇತೃತ್ವದಲ್ಲಿ, ಸೀಜ್‍ ಮಾಡಿದ ಮಾದಕ ದ್ರವ್ಯಗಳನ್ನು ಸುಟ್ಟು ಹಾಕಿದರು.

ಪುಟ್ಟ ಗದಗ ಜಿಲ್ಲೆಯಲ್ಲಿ 7.18 ಲಕ್ಷ ರೂ ಮೊತ್ತದ ಗಾಂಜಾವನ್ನು ಸುಟ್ಟು ನಾಶ ಪಡಿಸಿದರು. ಇದು ಒಂದು ವರ್ಷದ ಸಾಮಾಗ್ರಿ ಅಥವಾ ಜನೆವರಿಯಿಂದ ಸೀಜ್‍ ಮಾಡಿದ ಸಾಮಾಗ್ರಿ ಎಂಬುದು ಸ್ಪಷ್ಟವಿಲ್ಲ.

ಕಳೆದ ವರ್ಷ ಕನ್ನಡ ಚಿತ್ರರಂಗದ ಕೆಲವರು ಡ್ರಗ್ಸ್ ಜಾಲದಲ್ಲಿ ಸಿಕ್ಕಿ ಬಿದ್ದಾಗ, ಗೃಹ ಸಚಿವ ಬೊಮ್ಮಾಯಿ ಎಲ್ಲ ಎಸ್‍ಪಿಗಳಿಗೆ ಈ ಜಾಲ ಮೆಟ್ಟಿ ಹಾಕಲು ನಿರ್ದೇಶನ ನೀಡಿದರು.

ಆಗ ಏನಾಯಿತು? ದಿನವೂ ಗಾಂಜಾ ಮಾರುತ್ತಿದ್ದವನ ಬಂಧನ ಎಂಬ ಸುದ್ದಿಗಳು ಹರಿದಾಡಿದವು. ಒಬ್ಬ ವ್ಯಕ್ತಿಯಿಂದ 70 ಗ್ರಾಂ ಗಾಂಜಾ ವಶ ಮಾಡಿಕೊಂಡು, ಆತನಿಂದ 1,147 ರೂ. ವಶಪಡಿಸಿಕೊಳ್ಳಲಾಗಿದೆ’ ಎಂಬ ಎಫ್‍ಐಆರ್‌ಗಳು ಬಿಡುಗಡೆ ಆಗುತ್ತಿದ್ದವು.

ಆದರೆ ಇದರ ಮೂಲಗಳು ಪೊಲೀಸರಿಗೆ ಗೊತ್ತೇ ಇಲ್ಲವೇ? ಗುಡಿ ಹತ್ತಿರ ನಿಂತು ಮಾರಲು ಆತನೇನು ಮೂರ್ಖನೇ? ಯಾವುದೋ ಮನೆ ಅಥವಾ ಅಂಗಡಿಯಲ್ಲಿ ಕುಳಿತೇ ಮಾರಿರುತ್ತಾನೆ ಅಲ್ಲವೇ? ಆತನ ಗಿರಾಕಿಗಳು ಕೂಡ ದಾರಿ ಮಧ್ಯೆ ಗುಡಿ ಪಕ್ಕ ಗಾಂಜಾ ಖರೀದಿಸುತ್ತಾರೆಯೇ? ಈ ಪ್ರಶ್ನೆಗಳು ಆಗ ಜನರನ್ನು ಕಾಡಿಸುತ್ತಿದ್ದವು.

ಯಾವಾಗ ಜಾರಕಿಹೊಳಿ ಕೇಸು ಮುನ್ನೆಲೆಗೆ ಬಂದಿತೋ ಆಗ ಡ್ರಗ್ಸ್ ವಿಷಯ ಹಿನ್ನಲೆಗೆ ಸರಿಯಿತು. ಹಾಗೆಯೇ ಬಿಹಾರ ಚುನಾವಣೆ ಮುಗಿದ ನಂತರ ಬಾಲಿವುಡ್‍ ನಟ ಸುಶಾಂತ್‍  ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದಿದ್ದ ಡ್ರಗ್ಸ್ ತನಿಖೆಯೂ ಹಿನ್ನೆಲೆಗೆ ಸರಿಯಿತು.

ಆ ನಂತರ ‘ಗುಡಿ ಹತ್ತಿರವೋ ಅಥವಾ ರಸ್ತೆಯಲ್ಲೋ ನಿಂತು’ ಗಾಂಜಾ ಮಾರುವವರ ಎಫ್‍ಐಆರ್‌ಗಳು ಕಾಣದಾದವು!

ದೇಶದ ಸ್ಥಿತಿ ಏನು?

ಈ ವರ್ಷ ಇನ್ನೂ ಆರು ತಿಂಗಳುಗಳು ಬಾಕಿ ಇರುವಾಗ, ಎನ್‌ಸಿಬಿ ಈಗಾಗಲೇ 4.82 ಟನ್ ಗಾಂಜಾ, 5.25 ಕೆಜಿ ಅಫೀಮು, 48.8 ಕೆಜಿ ಚರಸ್‍ಗಳನ್ನು ವಶಪಡಿಸಿಕೊಂಡಿದೆ.

ಕೋವಿಡ್‍ ಸಾಂಕ್ರಾಮಿಕದ ಸಂದರ್ಭದಲ್ಲೂ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ 2020ರಿಂದ ಅನೇಕ ಪಟ್ಟು ಹೆಚ್ಚಾಗಿದೆ ಮತ್ತು ಇದು ವಿವಿಧ ಮಾದಕವಸ್ತು ನಿಯಂತ್ರಣ ಜಾರಿ ಸಂಸ್ಥೆಗಳ ಚಟುವಟಿಕೆಗಳಿಂದ ಸ್ಪಷ್ಟವಾಗಿದೆ ಎನ್ನಲಾಗಿದೆ.

ಈ ವರ್ಷದ ದಿನಾಚರಣೆಯ ಸಂದರ್ಭದಲ್ಲಿ ‘ಮಾದಕವಸ್ತುಗಳ ಬಗ್ಗೆ ಸತ್ಯಗಳನ್ನು ಹಂಚಿಕೊಳ್ಳಿ, ಜೀವಗಳನ್ನು ಉಳಿಸಿ’ ಎಂದು ವಿಶ್ವಸಂಸ್ಥೆಯು ತಿಳಿಸಿದೆ.

ಆದರೆ, ಪೊಲೀಸರು ಮತ್ತು ಮಾದಕದ್ರವ್ಯಗಳ ತಡೆಗೆ ಸಂಬಂಧಪಟ್ಟ ಇಲಾಖೆಗಳು ಸತ್ಯವನ್ನು ಹಂಚಿಕೊಳ್ಳುತ್ತವಾ? ಜನರಿಗೆ ನಂಬಿಕೆಯಿಲ್ಲ!

  • ಪಿ.ಕೆ ಮಲ್ಲನಗೌಡರ್

ಇದನ್ನೂ ಓದಿ: ಹರಿದ ಜೀನ್ಸ್ ಧರಿಸುವುದು ಮಾದಕ ವಸ್ತು ಸೇವನೆಗೂ ಕಾರಣವಾಗುತ್ತದೆ- ಉತ್ತರಾಖಂಡ ಸಿಎಂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...