ಮೇ ತಿಂಗಳಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆಯ ಪ್ರತಿಕ್ರಿಯೆಯಾದ ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತವು ಬರಾಕ್ -8 ಕ್ಷಿಪಣಿ ವ್ಯವಸ್ಥೆ ಮತ್ತು ಹಾರ್ಪಿ ಡ್ರೋನ್ಗಳು ಸೇರಿದಂತೆ ಇಸ್ರೇಲ್ ನಿರ್ಮಿತ ಶಸ್ತ್ರಾಸ್ತ್ರಗಳನ್ನು ನಿಯೋಜಿಸಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
“ನಾವು ಮೊದಲು ಒದಗಿಸಿದ ವಸ್ತುಗಳು ಚೆನ್ನಾಗಿ ಕೆಲಸ ಮಾಡಿದ್ದವು… ನಾವು ನಮ್ಮ ಶಸ್ತ್ರಾಸ್ತ್ರಗಳನ್ನು ಯುದ್ಧಭೂಮಿಯಲ್ಲೇ ಅಭಿವೃದ್ಧಿಪಡಿಸುತ್ತೇವೆ. ಅವು ಯುದ್ಧ-ಪರೀಕ್ಷಿತವಾಗಿವೆ” ಎಂದು ನೆತನ್ಯಾಹು ಗುರುವಾರ, ಆಗಸ್ಟ್ 7 ರಂದು ಹಮಾಸ್ ಅನ್ನು ನಿರ್ಮೂಲನೆ ಮಾಡಲು ಗಾಜಾದ ಮೇಲೆ ದಾಳಿಗಳನ್ನು ತೀವ್ರಗೊಳಿಸುವ ಯೋಜನೆಗಳನ್ನು ಅನಾವರಣಗೊಳಿಸುತ್ತಾ ಹೇಳಿದರು.
ಮೇ 7 ಮತ್ತು ಮೇ 11 ರ ನಡುವೆ ಪಾಕಿಸ್ತಾನದ ಕ್ಷಿಪಣಿ ದಾಳಿಗಳನ್ನು ಹಿಮ್ಮೆಟ್ಟಿಸಲು ಭಾರತವು ಇಸ್ರೇಲ್ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಜಂಟಿಯಾಗಿ ಅಭಿವೃದ್ಧಿಪಡಿಸಿದ ಬರಾಕ್-8 ಕ್ಷಿಪಣಿಗಳನ್ನು ಮತ್ತು ಎಚ್ಎಆರ್ಪಿವೈ ಡ್ರೋನ್ಗಳನ್ನು ಬಳಸಿದೆ ಎಂದು ವರದಿ ಹೇಳಿದೆ.
ಆಗಸ್ಟ್ 7 ರ ಗುರುವಾರ, ನೆತನ್ಯಾಹು ಇಸ್ರೇಲ್ನಲ್ಲಿನ ಭಾರತದ ರಾಯಭಾರಿ ಜೆಪಿ ಸಿಂಗ್ ಅವರನ್ನು ಭೇಟಿಯಾಗಿ, ಎರಡೂ ದೇಶಗಳ ನಡುವೆ, ವಿಶೇಷವಾಗಿ ಭದ್ರತೆ ಮತ್ತು ಆರ್ಥಿಕತೆಯ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸುವ ಮತ್ತು ವಿಸ್ತರಿಸುವ ಮಾರ್ಗಗಳ ಕುರಿತು ಚರ್ಚಿಸಿದರು.
ಪಾಲುದಾರಿಕೆಯನ್ನು ಮುಖ್ಯ ಮತ್ತು ಹಂಚಿಕೆಯ ಹಾಗೂಮತ್ತು ಆಸಕ್ತಿಗಳ ಆಧಾರದ ಮೇಲೆ ನಡೆಯಬೇಕು ಎಂದು ಕರೆದ ನೆತನ್ಯಾಹು, ಮಾತುಕತೆಗಳು ಪ್ರಮುಖ ವಲಯಗಳಲ್ಲಿ ಸಹಯೋಗವನ್ನು ಗಾಢವಾಗಿಸುವತ್ತ ಗಮನಹರಿಸಿದವು ಎಂದು ಹೇಳಿದರು.
ಸಭೆಯ ನಂತರ, ಇಸ್ರೇಲಿ ಪ್ರಧಾನಿ ಭಾರತದ ಹಿರಿಯ ಮಾಧ್ಯಮ ವೃತ್ತಿಪರರ ಗುಂಪಿನೊಂದಿಗೆ ಸಂವಹನ ನಡೆಸಿದರು.
ಎಚ್ಎಆರ್ಪಿವೈ ಶತ್ರು ವಾಯು ರಕ್ಷಣಾ (ಎಸ್ಇಎಡಿ) ನಿಗ್ರಹಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಅವುಗಳ ವಿದ್ಯುತ್ಕಾಂತೀಯ ಹೊರಸೂಸುವಿಕೆಗಳ ಮೇಲೆ ನೆಲೆಗೊಳ್ಳುವ ಮೂಲಕ ರಾಡಾರ್ ವ್ಯವಸ್ಥೆಗಳನ್ನು ಗುರಿಯಾಗಿಸುತ್ತದೆ. ಒಂಬತ್ತು ಗಂಟೆಗಳವರೆಗೆ ನಡೆಯುವ ಆಳವಾದ ದಾಳಿ ಕಾರ್ಯಾಚರಣೆಗಳ ಸಾಮರ್ಥ್ಯವನ್ನು ಹೊಂದಿರುವ ಇದು ಬಹು ವಿಧಾನ ಕೋನಗಳಿಂದ ಹೆಚ್ಚಿನ ಮೌಲ್ಯದ ಗುರಿಗಳನ್ನು ಸ್ವಂತಂತ್ರವಾಗಿ ಹುಡುಕಿ ನಾಶಪಡಿಸಬಹುದು.
ಈ ದೀರ್ಘ-ಶ್ರೇಣಿಯ ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಯು 360-ಡಿಗ್ರಿ ವ್ಯಾಪ್ತಿಯನ್ನು ಒದಗಿಸುತ್ತದೆ. ಏಕಕಾಲದಲ್ಲಿ ಬಹು ವಾಯುಗಾಮಿ ಬೆದರಿಕೆಗಳನ್ನು ಎದುರಿಸಬಲ್ಲದು. ಇದು ಸಕ್ರಿಯ ರಾಡಾರ್ ಮಾರ್ಗದರ್ಶನವನ್ನು ಬಳಸುತ್ತದೆ. ಜೊತೆಗೆ, 100 ಕಿಮೀ ವರೆಗೆ ಕಾರ್ಯಾಚರಣೆಯ ವ್ಯಾಪ್ತಿಯನ್ನು ಹೊಂದಿದೆ, ಭೂ ಮತ್ತು ನೌಕಾ ವೇದಿಕೆಗಳಲ್ಲಿ ಇದನ್ನು ನಿಯೋಜನೆ ಸಾಧ್ಯ.
ದ್ವಿಭಾಷಾ ವ್ಯವಸ್ಥೆಯೊಂದಿಗೆ ರಾಜ್ಯ ಶಿಕ್ಷಣ ನೀತಿ ಅನಾವರಣಗೊಳಿಸಿದ ತಮಿಳುನಾಡು


