Homeಮುಖಪುಟಲೈವ್ ಪ್ರಸಾರದಲ್ಲೆ ‘ಝೀನ್ಯೂಸ್’ ಅನ್ನು ‘ಕೆಟ್ಟ ಚಾನಲ್’ ಎಂದು ಕರೆದ ಭಾರತೀಯ ಕ್ರಿಕೆಟ್ ಅಭಿಮಾನಿ

ಲೈವ್ ಪ್ರಸಾರದಲ್ಲೆ ‘ಝೀನ್ಯೂಸ್’ ಅನ್ನು ‘ಕೆಟ್ಟ ಚಾನಲ್’ ಎಂದು ಕರೆದ ಭಾರತೀಯ ಕ್ರಿಕೆಟ್ ಅಭಿಮಾನಿ

ಝೀ ನ್ಯೂಸ್‌ಗೆ ಅವರ ಚಾನೆಲ್‌ನಲ್ಲೆ ಪಾಠ ಮಾಡಿರುವ ಯುವಕನಿಗೆ ಅಭಿನಂಧನೆಗಳ ಮಹಾಪೂರ ಹರಿದು ಬಂದಿದೆ

- Advertisement -
- Advertisement -

ಲೈವ್‌‌‌ ಇದೆ ಎಂದು ಖಚಿತಪಡಿಸಿ ಭಾರತೀಯ ಕ್ರಿಕೆಟ್ ಅಭಿಮಾನಿಯೊಬ್ಬರು ಝೀ ನ್ಯೂಸ್‌ ಅನ್ನು “ನೀವು ಭಾರತದ ಅತ್ಯಂತ ಕೆಟ್ಟ ಚಾನೆಲ್” ಎಂದು ತರಾಟೆಗೆ ಪಡೆದಿರುವ ಘಟನೆ ಆಸ್ಟ್ರೇಲಿಯಾದಲ್ಲಿ ಭಾರತ-ಇಂಗ್ಲೇಂಡ್‌ ಟಿ20 ವಿಶ್ವಕಪ್‌ ಸಮಿಫೈನಲ್‌‌‌ ಪಂದ್ಯದ ನಡೆದಿದೆ. ಕನಿಷ್ಠ ಪಕ್ಷ ಇಲ್ಲಾದರೂ ಕೋಮುವಾದ ಮಾಡಬೇಡಿ ಎಂದು ಅವರು ಕ್ಯಾಮರಾ ಮುಂದೆ ಹೇಳಿದ್ದು, ಅದು ಝೀ ನ್ಯೂಸ್‌ನಲ್ಲೆ ಲೈ‌ವ್‌ ಪ್ರಸಾರವಾಗಿದೆ.

ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಝೀ ನ್ಯೂಸ್‌ಗೆ ಪಾಠ ಮಾಡಿರುವ ಯುವಕನಿಗೆ ಅಭಿನಂಧನೆಗಳ ಮಹಾಪೂರ ಹರಿದು ಬಂದಿದೆ. ಝೀ ನ್ಯೂಸ್‌ ದೇಶದ ಪ್ರಮುಖ ಸುದ್ದಿ ವಾಹಿನಿಯಾಗಿದ್ದು, ಅದು ತನ್ನ ಕೋಮುವಾದಿ ಕಾರ್ಯಕ್ರಮಗಳಿಗೆ ಪ್ರಸಿದ್ದವಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

2022 ರ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಭಾರತವು ಇಂಗ್ಲೆಂಡ್‌ ವಿರುದ್ಧ ಸೋತ ನಂತರ ಅಡಿಲೇಡ್‌ನಿಂದ ಈ ಲೈವ್‌ ಅನ್ನು ಝೀ ನ್ಯೂಸ್ ‌ಪ್ರಸಾರ ಮಾಡಿತ್ತು. ಪಂದ್ಯದ ಬಗ್ಗೆ ಝೀ ಟಿವಿಯು ಅಲ್ಲಿ ಅಭಿಮಾನಿಗಳ ಜೊತೆಗೆ ಅಭಿಪ್ರಾಯವನ್ನು ಕೇಳುತ್ತಿತ್ತು. ಈ ವೇಳೆ ಘಟನೆ ನಡೆದಿದೆ.

ಇದನ್ನೂ ಓದಿ: ಪತ್ರಕರ್ತರಿಗೆ ಲಂಚ| ಸಿಎಂ ಮಾಧ್ಯಮ ಸಲಹೆಗಾರರ ಸರ್ಕಾರಿ ಕಾರಿನಲ್ಲೇ ತಲುಪಿತ್ತೇ ಲಕ್ಷ, ಲಕ್ಷ ಹಣ?

“ನೋಡಿ, ಮೊದಲನೆಯದಾಗಿ ಇದು ಒಂದು ಆಟವಾಗಿದೆ. ನಮ್ಮ ಕೈಯಲ್ಲೋ, ಇನ್ನೊಬ್ಬ ಕೈಯ್ಯಲ್ಲೊ…ಎಲ್ಲವೂ ಸರಿ, ಬಿಡಿ” ಭಾರತೀಯ ಅಭಿಮಾನಿ ಝೀ ನ್ಯೂಸ್‌ ಕ್ಯಾಮೆರಾದ ಮುಂದೆ ಹೇಳಿದ್ದಾರೆ. ಮುಂದುವರೆದು ಮಾತನಾಡಿದ ಅವರು, “ಇದು ಲೈವ್ ಆಗುತ್ತಿದೆಯೇ?” ಎಂದು ಅವರು ಕೇಳಿದ್ದು, ವರದಿಗಾರ ಹೌದು ಲೈವ್‌ ಆಗುತ್ತಿದೆ ಎಂದು ಹೇಳಿದ್ದಾರೆ. “ಸರಿ, ಇದು ಝೀ ಟಿವಿ, ಮೊದಲನೆಯದಾಗಿ ನಿಮಗೆ ಹೇಳಲು ಇಚ್ಛಿಸುವುದೇನೆಂದರೆ, ನಿಮಗೆ ಅಭ್ಯಂತರವಿಲ್ಲದಿದ್ದರೆ, ಕನಿಷ್ಠ ಇಲ್ಲಾದರೂ ಹಿಂದೂ-ಮುಸ್ಲಿಂ ಮಾಡಬೇಡಿ” ಎನ್ನುತ್ತಿದ್ದಂತೆ ವರದಿಗಾರ ಕ್ಯಾಮರಾವನ್ನು ತಿರುಗಿಸುತ್ತಾರೆ.

ಈ ವೇಳೆ ಯುವಕ, “ನೀವು ಭಾರತದ ಅತ್ಯಂತ ಕೆಟ್ಟ ಚಾನೆಲ್‌‌” ಎಂದು ಕಿರುಚಿ ಹೇಳಿದ್ದಾರೆ. ಅವರು ಮಾತು ಝೀ ಟಿವಿಯಲ್ಲಿ ಲೈವ್‌ ಪ್ರಸಾರವಾಗಿದೆ.

ಝೀ ನ್ಯೂಸ್ ಆಗಾಗ್ಗೆ ದ್ವೇಷದ ಭಾಷಣವನ್ನು ಪ್ರಸಾರ ಮಾಡುತ್ತಿದೆ ಎಂದು ಆರೋಪಿಸಲಾಗಿದೆ. ಈ ವರ್ಷದ ಆರಂಭದಲ್ಲಿ, ‘ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ’ವು ಝೀ ಟಿವಿಗೆ ಮುಸ್ಲಿಂ ಜನಸಂಖ್ಯೆಯ ಮೇಲಿನ ಕಾರ್ಯಕ್ರಮವನ್ನು ತೆಗೆದುಹಾಕುವಂತೆ ಕೇಳಿಕೊಂಡಿತ್ತು. ಜೊತಗೆ ಚಾನೆಲ್‌ ಅಜೆಂಡಾಕ್ಕಾಗಿ ಇದನ್ನು ಮಾಡುತ್ತಿದೆ ಎಂದು ಅದು ಹೇಳಿದೆ.

ಇದನ್ನೂ ಓದಿ: ದೇಶದ ಯಾವುದೇ ಮುಖ್ಯವಾಹಿನಿ ಮಾಧ್ಯಮದಲ್ಲಿ ದಲಿತ, ಆದಿವಾಸಿ, ಒಬಿಸಿ ಮುಖ್ಯಸ್ಥರಿಲ್ಲ: ವರದಿ

ಘಟನೆ ನಂತರ ನ್ಯೂಸ್ ಲಾಂಡ್ರಿ ಯುವಕನನ್ನು ಮಾತನಾಡಿಸಿದೆ. ವೂಲ್‌ವರ್ತ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಮತ್ತು ಕಳೆದ ಏಳು ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿರುವ ಸಾಹಿಲ್ ಸರೋಯಾ, “ನನ್ನ ದೇಶದ ಮಾಧ್ಯಮಗಳ ಸ್ಥಿತಿ ನನ್ನನ್ನು ಅಸಮಾಧಾನಗೊಳಿಸಿದೆ” ಎಂದು ಹೇಳಿದ್ದಾರೆ.

“ನಾನು ಪ್ರತಿ ತಿಂಗಳು ಭಾರತಕ್ಕೆ ಹೋಗಲು ಸಾಧ್ಯವಿಲ್ಲ… ನಾನು ಮಾಡಬಹುದಾದ ಎಲ್ಲವು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚು ತಲುಪುವುದಿಲ್ಲ. ಹಾಗಾಗಿ ನಿನ್ನೆ ನಾನು ಅಲ್ಲಿ ಝೀ ನ್ಯೂಸ್ ಮೈಕ್ ಅನ್ನು ನೋಡಿದೆ, ಆ ವೇಳೆ ಅವರು ಲೈವ್ ಆಗಿದ್ದರು. ಝೀಟಿವಿ ಏನು ಮಾಡುತ್ತಿದೆ ಮತ್ತು ಹೇಗೆ ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ವೀಕ್ಷಕರಿಗೆ ಬಹಿರಂಗಪಡಿಸುವುದು ಅಥವಾ ಹೇಳುವುದು ನನ್ನ ಏಕೈಕ ಉದ್ದೇಶವಾಗಿತ್ತು.” ಎಂದು ಸಾಹಿಲ್ ಹೇಳಿದ್ದಾರೆ.

“ನಾನು ಅನೇಕ ವಿಷಯಗಳನ್ನು ಸಭ್ಯ ರೀತಿಯಲ್ಲಿ ಹೇಳಲು ಬಯಸಿದ್ದೆ. ಆದರೆ ವರದಿಗಾರ ನನ್ನನ್ನು ತಳ್ಳಿದ್ದರಿಂದ ನನಗೆ ಕೆಟ್ಟದು ಅನಿಸಿತು, ಹಾಗಾಗಿ ನಾನು ಅಲ್ಲಿಂದ ಹೊರಟೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜನಮತಗಣನೆಯಲ್ಲಿ ಚಿಲಿಯ ಹೊಸ ಸಂವಿಧಾನ ಸೋತದ್ದೇಕೆ? ಮಾಧ್ಯಮಗಳ ಪಾತ್ರವೇನು?

ಭಾರತದ ಮಾಧ್ಯಮದ ಸ್ಥಿತಿಯ ಬಗ್ಗೆ ಮಾತನಾಡಿದ ಅವರು, ಆಸ್ಟ್ರೇಲಿಯಾದ ಮಾಧ್ಯಮಕ್ಕೆ ಭಾರತದ ಮಾಧ್ಯಮಗಳನ್ನು ಹೋಲಿಸುವುದಿಲ್ಲ. ಆದರೆ ನಮ್ಮ ಮಾಧ್ಯಮಗಳು ಅತ್ಯಂತ ಕೆಳಮಟ್ಟಕ್ಕೆ ಹೋಗಿವೆ ಮತ್ತು ಇಲ್ಲಿನ ಜನರು ಟಿವಿಯಲ್ಲಿ ಸರ್ಕಸ್ ಆಡುವ ಆಂಕರ್‌ಗಳನ್ನು ಗೇಲಿ ಮಾಡುತ್ತಾರೆ ಎಂದು ಹೇಳಿದ್ದಾರೆ.

“ಭಾರತದ ಮಾಧ್ಯಮಗಳು ಧರ್ಮ, ಜಾತಿಯ ಹೆಸರಿನಲ್ಲಿ ಜನರನ್ನು ವಿಭಜಿಸುತ್ತಿದೆ. ನನ್ನ ಬಾಲ್ಯದಲ್ಲಿ ಜನರು ಈ ವಿಷಯಗಳ ಬಗ್ಗೆ ಎಂದಿಗೂ ಜಗಳವಾಡಿಲ್ಲ. ಆದರೆ ಈಗ ಎಲ್ಲೆಡೆ, ಹಿಂದೂ-ಮುಸ್ಲಿಂ, ಹಿಂದೂ-ಮುಸ್ಲಿಂ ಎಂದು ಜಗಳಗಳಾಗುತ್ತಿವೆ. ಇದಕ್ಕೆಲ್ಲಾ ಕಾರಣ ಈ ಪ್ರೊಪಗಾಂಡ ವಾಹಿನಿಗಳು” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಭಾರತೀಯರು ಈಗಲೂ ಧರ್ಮದ ಆಧಾರದಲ್ಲಿ ಸ್ನೇಹಿತರನ್ನು ಹೊಂದುವುದಿಲ್ಲ ಮತ್ತು ವ್ಯವಹಾರ ಗಳನ್ನೂ ಮಾಡುವುದಿಲ್ಲ
    ಜಾತಿ ಧರ್ಮಗಳ ಆಧಾರದಲ್ಲಿ ವಿಭಜನೆ ಆಗುತ್ತಿರುವುದು ರಾಜಕಾರಣಿ ಮತ್ತು ಮಾಧ್ಯಮಗಳಿಂದ ಮಾತ್ರ.
    ನಿರ್ಲಕ್ಷವೇ ಪರಿಹಾರ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...