Homeಮುಖಪುಟಲೈವ್ ಪ್ರಸಾರದಲ್ಲೆ ‘ಝೀನ್ಯೂಸ್’ ಅನ್ನು ‘ಕೆಟ್ಟ ಚಾನಲ್’ ಎಂದು ಕರೆದ ಭಾರತೀಯ ಕ್ರಿಕೆಟ್ ಅಭಿಮಾನಿ

ಲೈವ್ ಪ್ರಸಾರದಲ್ಲೆ ‘ಝೀನ್ಯೂಸ್’ ಅನ್ನು ‘ಕೆಟ್ಟ ಚಾನಲ್’ ಎಂದು ಕರೆದ ಭಾರತೀಯ ಕ್ರಿಕೆಟ್ ಅಭಿಮಾನಿ

ಝೀ ನ್ಯೂಸ್‌ಗೆ ಅವರ ಚಾನೆಲ್‌ನಲ್ಲೆ ಪಾಠ ಮಾಡಿರುವ ಯುವಕನಿಗೆ ಅಭಿನಂಧನೆಗಳ ಮಹಾಪೂರ ಹರಿದು ಬಂದಿದೆ

- Advertisement -
- Advertisement -

ಲೈವ್‌‌‌ ಇದೆ ಎಂದು ಖಚಿತಪಡಿಸಿ ಭಾರತೀಯ ಕ್ರಿಕೆಟ್ ಅಭಿಮಾನಿಯೊಬ್ಬರು ಝೀ ನ್ಯೂಸ್‌ ಅನ್ನು “ನೀವು ಭಾರತದ ಅತ್ಯಂತ ಕೆಟ್ಟ ಚಾನೆಲ್” ಎಂದು ತರಾಟೆಗೆ ಪಡೆದಿರುವ ಘಟನೆ ಆಸ್ಟ್ರೇಲಿಯಾದಲ್ಲಿ ಭಾರತ-ಇಂಗ್ಲೇಂಡ್‌ ಟಿ20 ವಿಶ್ವಕಪ್‌ ಸಮಿಫೈನಲ್‌‌‌ ಪಂದ್ಯದ ನಡೆದಿದೆ. ಕನಿಷ್ಠ ಪಕ್ಷ ಇಲ್ಲಾದರೂ ಕೋಮುವಾದ ಮಾಡಬೇಡಿ ಎಂದು ಅವರು ಕ್ಯಾಮರಾ ಮುಂದೆ ಹೇಳಿದ್ದು, ಅದು ಝೀ ನ್ಯೂಸ್‌ನಲ್ಲೆ ಲೈ‌ವ್‌ ಪ್ರಸಾರವಾಗಿದೆ.

ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಝೀ ನ್ಯೂಸ್‌ಗೆ ಪಾಠ ಮಾಡಿರುವ ಯುವಕನಿಗೆ ಅಭಿನಂಧನೆಗಳ ಮಹಾಪೂರ ಹರಿದು ಬಂದಿದೆ. ಝೀ ನ್ಯೂಸ್‌ ದೇಶದ ಪ್ರಮುಖ ಸುದ್ದಿ ವಾಹಿನಿಯಾಗಿದ್ದು, ಅದು ತನ್ನ ಕೋಮುವಾದಿ ಕಾರ್ಯಕ್ರಮಗಳಿಗೆ ಪ್ರಸಿದ್ದವಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

2022 ರ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಭಾರತವು ಇಂಗ್ಲೆಂಡ್‌ ವಿರುದ್ಧ ಸೋತ ನಂತರ ಅಡಿಲೇಡ್‌ನಿಂದ ಈ ಲೈವ್‌ ಅನ್ನು ಝೀ ನ್ಯೂಸ್ ‌ಪ್ರಸಾರ ಮಾಡಿತ್ತು. ಪಂದ್ಯದ ಬಗ್ಗೆ ಝೀ ಟಿವಿಯು ಅಲ್ಲಿ ಅಭಿಮಾನಿಗಳ ಜೊತೆಗೆ ಅಭಿಪ್ರಾಯವನ್ನು ಕೇಳುತ್ತಿತ್ತು. ಈ ವೇಳೆ ಘಟನೆ ನಡೆದಿದೆ.

ಇದನ್ನೂ ಓದಿ: ಪತ್ರಕರ್ತರಿಗೆ ಲಂಚ| ಸಿಎಂ ಮಾಧ್ಯಮ ಸಲಹೆಗಾರರ ಸರ್ಕಾರಿ ಕಾರಿನಲ್ಲೇ ತಲುಪಿತ್ತೇ ಲಕ್ಷ, ಲಕ್ಷ ಹಣ?

“ನೋಡಿ, ಮೊದಲನೆಯದಾಗಿ ಇದು ಒಂದು ಆಟವಾಗಿದೆ. ನಮ್ಮ ಕೈಯಲ್ಲೋ, ಇನ್ನೊಬ್ಬ ಕೈಯ್ಯಲ್ಲೊ…ಎಲ್ಲವೂ ಸರಿ, ಬಿಡಿ” ಭಾರತೀಯ ಅಭಿಮಾನಿ ಝೀ ನ್ಯೂಸ್‌ ಕ್ಯಾಮೆರಾದ ಮುಂದೆ ಹೇಳಿದ್ದಾರೆ. ಮುಂದುವರೆದು ಮಾತನಾಡಿದ ಅವರು, “ಇದು ಲೈವ್ ಆಗುತ್ತಿದೆಯೇ?” ಎಂದು ಅವರು ಕೇಳಿದ್ದು, ವರದಿಗಾರ ಹೌದು ಲೈವ್‌ ಆಗುತ್ತಿದೆ ಎಂದು ಹೇಳಿದ್ದಾರೆ. “ಸರಿ, ಇದು ಝೀ ಟಿವಿ, ಮೊದಲನೆಯದಾಗಿ ನಿಮಗೆ ಹೇಳಲು ಇಚ್ಛಿಸುವುದೇನೆಂದರೆ, ನಿಮಗೆ ಅಭ್ಯಂತರವಿಲ್ಲದಿದ್ದರೆ, ಕನಿಷ್ಠ ಇಲ್ಲಾದರೂ ಹಿಂದೂ-ಮುಸ್ಲಿಂ ಮಾಡಬೇಡಿ” ಎನ್ನುತ್ತಿದ್ದಂತೆ ವರದಿಗಾರ ಕ್ಯಾಮರಾವನ್ನು ತಿರುಗಿಸುತ್ತಾರೆ.

ಈ ವೇಳೆ ಯುವಕ, “ನೀವು ಭಾರತದ ಅತ್ಯಂತ ಕೆಟ್ಟ ಚಾನೆಲ್‌‌” ಎಂದು ಕಿರುಚಿ ಹೇಳಿದ್ದಾರೆ. ಅವರು ಮಾತು ಝೀ ಟಿವಿಯಲ್ಲಿ ಲೈವ್‌ ಪ್ರಸಾರವಾಗಿದೆ.

ಝೀ ನ್ಯೂಸ್ ಆಗಾಗ್ಗೆ ದ್ವೇಷದ ಭಾಷಣವನ್ನು ಪ್ರಸಾರ ಮಾಡುತ್ತಿದೆ ಎಂದು ಆರೋಪಿಸಲಾಗಿದೆ. ಈ ವರ್ಷದ ಆರಂಭದಲ್ಲಿ, ‘ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ’ವು ಝೀ ಟಿವಿಗೆ ಮುಸ್ಲಿಂ ಜನಸಂಖ್ಯೆಯ ಮೇಲಿನ ಕಾರ್ಯಕ್ರಮವನ್ನು ತೆಗೆದುಹಾಕುವಂತೆ ಕೇಳಿಕೊಂಡಿತ್ತು. ಜೊತಗೆ ಚಾನೆಲ್‌ ಅಜೆಂಡಾಕ್ಕಾಗಿ ಇದನ್ನು ಮಾಡುತ್ತಿದೆ ಎಂದು ಅದು ಹೇಳಿದೆ.

ಇದನ್ನೂ ಓದಿ: ದೇಶದ ಯಾವುದೇ ಮುಖ್ಯವಾಹಿನಿ ಮಾಧ್ಯಮದಲ್ಲಿ ದಲಿತ, ಆದಿವಾಸಿ, ಒಬಿಸಿ ಮುಖ್ಯಸ್ಥರಿಲ್ಲ: ವರದಿ

ಘಟನೆ ನಂತರ ನ್ಯೂಸ್ ಲಾಂಡ್ರಿ ಯುವಕನನ್ನು ಮಾತನಾಡಿಸಿದೆ. ವೂಲ್‌ವರ್ತ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಮತ್ತು ಕಳೆದ ಏಳು ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿರುವ ಸಾಹಿಲ್ ಸರೋಯಾ, “ನನ್ನ ದೇಶದ ಮಾಧ್ಯಮಗಳ ಸ್ಥಿತಿ ನನ್ನನ್ನು ಅಸಮಾಧಾನಗೊಳಿಸಿದೆ” ಎಂದು ಹೇಳಿದ್ದಾರೆ.

“ನಾನು ಪ್ರತಿ ತಿಂಗಳು ಭಾರತಕ್ಕೆ ಹೋಗಲು ಸಾಧ್ಯವಿಲ್ಲ… ನಾನು ಮಾಡಬಹುದಾದ ಎಲ್ಲವು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚು ತಲುಪುವುದಿಲ್ಲ. ಹಾಗಾಗಿ ನಿನ್ನೆ ನಾನು ಅಲ್ಲಿ ಝೀ ನ್ಯೂಸ್ ಮೈಕ್ ಅನ್ನು ನೋಡಿದೆ, ಆ ವೇಳೆ ಅವರು ಲೈವ್ ಆಗಿದ್ದರು. ಝೀಟಿವಿ ಏನು ಮಾಡುತ್ತಿದೆ ಮತ್ತು ಹೇಗೆ ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ವೀಕ್ಷಕರಿಗೆ ಬಹಿರಂಗಪಡಿಸುವುದು ಅಥವಾ ಹೇಳುವುದು ನನ್ನ ಏಕೈಕ ಉದ್ದೇಶವಾಗಿತ್ತು.” ಎಂದು ಸಾಹಿಲ್ ಹೇಳಿದ್ದಾರೆ.

“ನಾನು ಅನೇಕ ವಿಷಯಗಳನ್ನು ಸಭ್ಯ ರೀತಿಯಲ್ಲಿ ಹೇಳಲು ಬಯಸಿದ್ದೆ. ಆದರೆ ವರದಿಗಾರ ನನ್ನನ್ನು ತಳ್ಳಿದ್ದರಿಂದ ನನಗೆ ಕೆಟ್ಟದು ಅನಿಸಿತು, ಹಾಗಾಗಿ ನಾನು ಅಲ್ಲಿಂದ ಹೊರಟೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜನಮತಗಣನೆಯಲ್ಲಿ ಚಿಲಿಯ ಹೊಸ ಸಂವಿಧಾನ ಸೋತದ್ದೇಕೆ? ಮಾಧ್ಯಮಗಳ ಪಾತ್ರವೇನು?

ಭಾರತದ ಮಾಧ್ಯಮದ ಸ್ಥಿತಿಯ ಬಗ್ಗೆ ಮಾತನಾಡಿದ ಅವರು, ಆಸ್ಟ್ರೇಲಿಯಾದ ಮಾಧ್ಯಮಕ್ಕೆ ಭಾರತದ ಮಾಧ್ಯಮಗಳನ್ನು ಹೋಲಿಸುವುದಿಲ್ಲ. ಆದರೆ ನಮ್ಮ ಮಾಧ್ಯಮಗಳು ಅತ್ಯಂತ ಕೆಳಮಟ್ಟಕ್ಕೆ ಹೋಗಿವೆ ಮತ್ತು ಇಲ್ಲಿನ ಜನರು ಟಿವಿಯಲ್ಲಿ ಸರ್ಕಸ್ ಆಡುವ ಆಂಕರ್‌ಗಳನ್ನು ಗೇಲಿ ಮಾಡುತ್ತಾರೆ ಎಂದು ಹೇಳಿದ್ದಾರೆ.

“ಭಾರತದ ಮಾಧ್ಯಮಗಳು ಧರ್ಮ, ಜಾತಿಯ ಹೆಸರಿನಲ್ಲಿ ಜನರನ್ನು ವಿಭಜಿಸುತ್ತಿದೆ. ನನ್ನ ಬಾಲ್ಯದಲ್ಲಿ ಜನರು ಈ ವಿಷಯಗಳ ಬಗ್ಗೆ ಎಂದಿಗೂ ಜಗಳವಾಡಿಲ್ಲ. ಆದರೆ ಈಗ ಎಲ್ಲೆಡೆ, ಹಿಂದೂ-ಮುಸ್ಲಿಂ, ಹಿಂದೂ-ಮುಸ್ಲಿಂ ಎಂದು ಜಗಳಗಳಾಗುತ್ತಿವೆ. ಇದಕ್ಕೆಲ್ಲಾ ಕಾರಣ ಈ ಪ್ರೊಪಗಾಂಡ ವಾಹಿನಿಗಳು” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಭಾರತೀಯರು ಈಗಲೂ ಧರ್ಮದ ಆಧಾರದಲ್ಲಿ ಸ್ನೇಹಿತರನ್ನು ಹೊಂದುವುದಿಲ್ಲ ಮತ್ತು ವ್ಯವಹಾರ ಗಳನ್ನೂ ಮಾಡುವುದಿಲ್ಲ
    ಜಾತಿ ಧರ್ಮಗಳ ಆಧಾರದಲ್ಲಿ ವಿಭಜನೆ ಆಗುತ್ತಿರುವುದು ರಾಜಕಾರಣಿ ಮತ್ತು ಮಾಧ್ಯಮಗಳಿಂದ ಮಾತ್ರ.
    ನಿರ್ಲಕ್ಷವೇ ಪರಿಹಾರ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...