Homeಕರ್ನಾಟಕಪತ್ರಕರ್ತರಿಗೆ ಲಂಚ| ಸಿಎಂ ಮಾಧ್ಯಮ ಸಲಹೆಗಾರರ ಸರ್ಕಾರಿ ಕಾರಿನಲ್ಲೇ ತಲುಪಿತ್ತೇ ಲಕ್ಷ, ಲಕ್ಷ ಹಣ?

ಪತ್ರಕರ್ತರಿಗೆ ಲಂಚ| ಸಿಎಂ ಮಾಧ್ಯಮ ಸಲಹೆಗಾರರ ಸರ್ಕಾರಿ ಕಾರಿನಲ್ಲೇ ತಲುಪಿತ್ತೇ ಲಕ್ಷ, ಲಕ್ಷ ಹಣ?

- Advertisement -
- Advertisement -

ದೀಪಾವಳಿ ಉಡುಗೊರೆಯ ನೆಪದಲ್ಲಿ ಪತ್ರಕರ್ತರಿಗೆ ಲಂಚ ನೀಡಲು ಸರ್ಕಾರಿ ವಾಹನವನ್ನೇ ಬಳಸಲಾಗಿದೆ ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ. ಸರ್ಕಾರಿ ವಾಹನದಲ್ಲೇ ಲಂಚದ ಹಣವನ್ನು ಸಾಗಿಸಲಾಗಿದೆ ಎಂಬ ಅನುಮಾನಗಳಿಗೆ ಪುಷ್ಟಿನೀಡುವಂತಹ ಬೆಳವಣಿಗೆಗಳಾಗಿವೆ.

ಸರ್ಕಾರಿ ರಜೆ ದಿನದಂದು (ಅ.24) ದೀಪಾವಳಿ ಉಡುಗೊರೆಯನ್ನು ಪತ್ರಕರ್ತರಿಗೆ ತಲುಪಿಸಲು ಬಳಸಲಾದ ವಾಹನವು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮೋಹನ್ ಕೃಷ್ಣ ಅವರಿಗೆ ಅಧಿಕೃತವಾಗಿ ಹಂಚಿಕೆಯಾಗಿತ್ತು ಎಂದು ‘ದಿ ಫೈಲ್’ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಈ ಕೃತ್ಯಕ್ಕೆ ತಮ್ಮ ವಾಹನವನ್ನು (ಕೆಎ-01-ಜಿ-5898) ಕಳುಹಿಸಲಾಗಿಲ್ಲ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮೋಹನ್ ಕೃಷ್ಣ ಅವರು ಹೇಳಿಕೊಂಡಿದ್ದರು. ಆದರೆ ದೀಪಾವಳಿ ಉಡುಗೊರೆ ತಲುಪಿಸಲು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಪೈಪ್‌ಲೈನ್ ರಸ್ತೆಯಲ್ಲಿ (ಅಕ್ಟೋಬರ್ 24ರಂದು) ಜಿ-5898 ಸಂಖ್ಯೆಯ ವಾಹನವು ಬಳಕೆಯಾಗಿತ್ತು ಎಂಬ ಸಂಗತಿಯು ಪ್ರಕರಣಕ್ಕೆ ಹೊಸ ತಿರುವುಗಳನ್ನು ನೀಡುತ್ತಿದೆ.

ಸರ್ಕಾರಿ ರಜೆ ದಿನವಾಗಿದ್ದ ಅಕ್ಟೋಬರ್ 24ರಂದು ಕುಮಾರಸ್ವಾಮಿ ಲೇಔಟ್‌ನ ಪೈಪ್‌ಲೈನ್‌ ರಸ್ತೆಯಲ್ಲಿ ನಿಂತಿದ್ದ ಕೆಎ-01 ಜಿ-5898 ಸಂಖ್ಯೆಯ ಸರ್ಕಾರಿ ವಾಹನದ ಚಾಲಕನನ್ನು ಕರ್ನಾಟಕ ರಾಷ್ಟ್ರಸಮಿತಿಯ ಕಾರ್ಯಕರ್ತರೊಬ್ಬರು ಪ್ರಶ್ನಿಸಿದ್ದರು. ಸರ್ಕಾರಿ ವಾಹನದ ದುರುಪಯೋಗ ನಡೆಯುತ್ತಿದೆ ಎಂದು ವಿಡಿಯೊ ಮಾಡಿಕೊಂಡು ಅನುಮಾನಗೊಂಡು ಪ್ರಶ್ನಿಸಿದಾಗ, “ಮುಖ್ಯಮಂತ್ರಿಯ ಕಾರ್ಯಾಲಯದಿಂದ ಕಳಿಸಲಾಗಿದೆ, ದೀಪಾವಳಿ ಗಿಫ್ಟ್ ಕೊಡಲು ಬಂದಿದ್ದೇನೆ” ಎಂದು ಉತ್ತರಿಸಿದ್ದರು.

ಅಕ್ಟೋಬರ್‌ 24ರ ಸಂಜೆ 6.34ರ ವೇಳೆಗೆ ‘ಕೆ.ಆರ್‌.ಎಸ್‌. ಪಕ್ಷ ಬೆಂಗಳೂರು’ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೊ ಅಪ್‌ಲೋಡ್ ಮಾಡಲಾಗಿದೆ. “ಸರ್ಕಾರಿ ವಾಹನ ದುರುಪಯೋಗ: ಇಂದು (ದಿನಾಂಕ 24 ಅಕ್ಟೋಬರ್) ಸರ್ಕಾರಿ ರಜಾ ದಿನವಾಗಿದ್ದು ಸಂಜೆ ಸುಮಾರು ಗಂಟೆ 5ಯಲ್ಲಿ ಕುಮಾರಸ್ವಾಮಿ ಬಡಾವಣೆಯ ಪೈಪ್ ಲೈನ್ ರಸ್ತೆಯ ಬಳಿ ಕಂಡುಬಂದ ಸರ್ಕಾರಿ ವಾಹನ ಸಂಖ್ಯೆ ಕೆಎ 01ಜಿ 5898, ಇನ್ನೋವಾ. ಅದರ ಚಾಲಕನನ್ನು ಪ್ರಶ್ನೆ ಮಾಡಲಾಗಿ ಅವರು ಆ ವಾಹನವು ಮುಖ್ಯಮಂತ್ರಿ ಕಚೇರಿಯ ವಾಹನವಾಗಿದ್ದು ದೀಪಾವಳಿಯ ಸಿಹಿ ಹಂಚಿಕೆಗೆ ಓಡಾಡುತ್ತಿರುವುದಾಗಿ ಹೇಳಿದ್ದಾರೆ. ಈ ರೀತಿಯಲ್ಲಿ ಸರ್ಕಾರಿ ವಾಹನದ ದುರುಪಯೋಗ ಎಷ್ಟು ಸರಿ?” ಎಂದು ಪೋಸ್ಟ್ ಕೆಆರ್‌ಎಸ್‌ ಪೋಸ್ಟ್ ಮಾಡಿದೆ.

ಆ ಕಾರಿನ ಸಂಖ್ಯೆಯೂ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮೋಹನ್ ಕೃಷ್ಣ ಅವರಿಗೆ ಅಧಿಕೃತವಾಗಿ ಹಂಚಿಕೆಯಾದ ಇನ್ನೋವಾ ವಾಹನದ ಸಂಖ್ಯೆಯೂ ಒಂದೇ ಆಗಿದೆ. ಪತ್ರಕರ್ತರಿಗೆ ಲಕ್ಷಗಟ್ಟಲೇ ನಗದು ಮತ್ತು ಉಡುಗೊರೆ ನೀಡಲು ಇದೇ ವಾಹನವನ್ನು ಬಳಕೆ ಮಾಡಲಾಗಿತ್ತೇ ಎಂಬ ಅನುಮಾನಗಳು ಬಲಗೊಳ್ಳಲು ಕೆಆರ್‌ಎಸ್ ಪಕ್ಷದ ಪೋಸ್ಟ್‌ ಅವಕಾಶ ಒದಗಿಸಿದೆ.

ಮಾಧ್ಯಮ ಸಲಹೆಗಾರರಿಗೆ ಹಂಚಿಕೆಯಾಗಿರುವ ಕಾರಿನ ಕುರಿತು ಸರ್ಕಾರ ನೀಡಿರುವ ನಿರ್ದೇಶನದ ಪ್ರತಿಯನ್ನು ‘ಫೈಲ್‌’ ವರದಿ ಮಾಡಿದೆ. “ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮೋಹನ್ ಕೃಷ್ಣ ಅವರಿಗೆ ಈ ಹಿಂದೆ ಮುಖ್ಯಮಂತ್ರಿಯವರ ಮಾಧ್ಯಮ ಸಂಯೋಜಕರಿಗೆ ಒದಗಿಸಲಾದ ವಾಹನ ಸಂಖ್ಯೆ ಕೆಎ-01-ಜಿ-5898 ವಾಹನವನ್ನು ಒದಗಿಸಬೇಕು ಎಂದು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ (ರಾಜ್ಯ ಶಿಷ್ಟಾಚಾರ) ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಕುಮಾರಕೃಪಾ ಅತಿಥಿ ಗೃಹದ ವಿಶೇಷಾಧಿಕಾರಿಗಳಿಗೆ 2022ರ ಸೆ.29ರಂದು ನಿರ್ದೇಶಿಸಿದ್ದರು. ಅದರಂತೆ ಮೋಹನ್ ಕೃಷ್ಣ ಅವರಿಗೆ ಕೆಎ-01 ಜಿ-5898 ಸಂಖ್ಯೆಯ ವಾಹನವನ್ನು ಕುಮಾರಕೃಪಾ ಅತಿಥಿ ಗೃಹದ ವಿಶೇಷಾಧಿಕಾರಿಯವರು ಹಂಚಿಕೆ ಮಾಡಿದ್ದರು” ಎಂದು ಪತ್ರವನ್ನು ಉಲ್ಲೇಖಿಸಲಾಗಿದೆ. ವಾಟ್ಸ್‌ಅಪ್‌ ಮೂಲಕ ಮೋಹನ್‌ ಕೃಷ್ಣ ಅವರಿಗೆ ಹಲವು ಪ್ರಶ್ನೆಗಳನ್ನು ಕಳುಹಿಸಲಾಗಿದ್ದು, ‘No it hasn’t been sent For that’ ಎಂಬ ಪ್ರತಿಕ್ರಿಯೆಯನ್ನು ಬಿಟ್ಟರೆ ಮತ್ಯಾವುದೇ ಉತ್ತರ ಬಂದಿಲ್ಲ ಎಂದು ವರದಿಯಲ್ಲಿ ಬರೆಯಲಾಗಿದೆ.

ಇದನ್ನೂ ಓದಿರಿ: ಪತ್ರಕರ್ತರಿಗೆ ಲಂಚ ಪ್ರಕರಣ: ಬೊಮ್ಮಾಯಿ ವಿರುದ್ಧ ಲೋಕಾಯುಕ್ತಕ್ಕೆ ದೂರು

‘ನಾನುಗೌರಿ.ಕಾಂ’ ತಂಡದೊಂದಿಗೆ ಮಾತನಾಡಿದ ಮೋಹನ್‌ ಕೃಷ್ಣ ಅವರು, “ನನಗೆ ಆರೋಗ್ಯ ಸರಿ ಇಲ್ಲದೆ ಮನೆಯಲ್ಲಿದ್ದೇನೆ. ರಜೆ ದಿನದಂದು ಸರ್ಕಾರಿ ವಾಹನದಲ್ಲಿ ಸ್ವೀಟ್ ತೆಗೆದುಕೊಂಡು ಹೋಗಿದ್ದು ನಿಜ. ಆದರೆ ನನ್ನ ಸ್ನೇಹಿತನ ಮನೆಗೆ ಸ್ವೀಟ್ ಕಳುಹಿಸಿದ್ದೆನೇ ಹೊರತು ಪತ್ರಕರ್ತರಿಗಲ್ಲ. ಕುಮಾರಸ್ವಾಮಿ ಬಡಾವಣೆಯಲ್ಲಿ ಸುಮಾರು ನಲವತ್ತು ವರ್ಷಗಳ ಹಳೆಯ ಸ್ನೇಹಿತ ವಾಸವಿದ್ದಾನೆ” ಎಂದು ತಿಳಿಸಿದರು.

“‘ದಿ ಫೈಲ್‌ಗೆ ಪ್ರತಿಕ್ರಿಯೆ ನೀಡಲು ಕರೆ ಮಾಡಿದ್ದೆ. ಅವರು ಕರೆ ಸ್ವೀಕರಿಸಲಿಲ್ಲ” ಎಂದು ಸ್ಪಷ್ಟಪಡಿಸಿದರು.

‘ದಿ ಫೈಲ್‌’ ಸಂಪಾದಕರಾದ ಮಹಾಂತೇಶ್ ಅವರು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯಿಸಿ, “ವಾಟ್ಸ್‌ಆಪ್‌ ಮೂಲಕ ಕಳುಹಿಸಿದ ಪ್ರಶ್ನೆಗೆ ಲಿಖಿತ ಉತ್ತರವನ್ನು ನಿರೀಕ್ಷಿಸಿದ್ದೇನೆ. ನಿಮಗೆ ಕೊಟ್ಟ ಉತ್ತರವನ್ನು ಲಿಖಿತವಾಗಿ ನೀಡಿದರೆ ಮುಗಿಯಿತು. ಇಲ್ಲಿ ರಜಾ ದಿನದಂದು ಸರ್ಕಾರಿ ವಾಹನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಸರ್ಕಾರಿ ವಾಹನವನ್ನು ವೈಯಕ್ತಿಕ ಕೆಲಸಗಳಿಗೆ ಉಪಯೋಗಿಸುವುದು ಸರಿಯೇ?” ಎಂದು ಪ್ರಶ್ನಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...