Homeಮುಖಪುಟನಿಮ್ಮ ಸ್ನೇಹಿತರೊಂದಿಗೆ ಹೀಗೆ ನಡೆದುಕೊಂಡಲ್ಲಿ ಅವರಿಗೂ ನಿಮ್ಮ ಮೇಲೆ ಗೌರವ ಮೂಡುತ್ತದೆ

ನಿಮ್ಮ ಸ್ನೇಹಿತರೊಂದಿಗೆ ಹೀಗೆ ನಡೆದುಕೊಂಡಲ್ಲಿ ಅವರಿಗೂ ನಿಮ್ಮ ಮೇಲೆ ಗೌರವ ಮೂಡುತ್ತದೆ

- Advertisement -
- Advertisement -

ಜೀವನ ಕಲೆಗಳು: ಅಂಕಣ -17

ಪರಸ್ಪರ ವೈಯುಕ್ತಿಕ ಸಂಬಂಧಗಳು (ಇಂಟರ್-ಪರ್ಸನಲ್ ರಿಲೇಶನ್ಷಿಪ್ ಅಥವಾ ಟ್ರಾನ್ಸಾಕ್ಷನಲ್ ಎನಾಲಿಸಿಸ್)

ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳ ನಡುವಣ ಗಾಢವಾದ ಸಂಬಂಧವನ್ನು ಪರಸ್ಪರ ವೈಯುಕ್ತಿಕ ಸಂಬಂಧ (ಇಂಟರ್-ಪರ್ಸನಲ್ ರಿಲೇಶನ್ಷಿಪ್) ಎಂದು ಕರೆಯಬಹುದು.

ಈ ವ್ಯಕ್ತಿಗಳು:

·         ಒಂದೇ ಮನೆತನದವರಾಗಿರಬಹುದು (ತಂದೆ-ತಾಯಿ-ಮಕ್ಕಳು, ಚಿಕ್ಕಪ್ಪ-ದೊಡ್ಡಪ್ಪ-ಮಾವ ಇತ್ಯಾದಿ).

·         ಒಂದೇ ಜಾತಿ/ಧರ್ಮಕ್ಕೆ ಸೇರಿದವರಾಗಿರಬಹುದು.

·         ಸಹೋದ್ಯೋಗಿ/ಸಹಪಾಠಿಗಳಾಗಿರಬಹುದು.

·         ಒಂದೇ ಕಾರ್ಯತಂಡಕ್ಕೆ ಸೇರಿದವರು/ಬೆಂಬಲಿಗರಾಗಿರಬಹುದು.

·         ಸ್ನೇಹಿತರಾಗಿರಬಹುದು.

·         ಗುರು-ಶಿಷ್ಯ ಸಂಬಂಧವಾಗಿರಬಹುದು.

·         ಮದುವೆ/ಪ್ರೇಮ ಸಂಬಂಧದವರಾಗಿರಬಹುದು.

ಕಾರಣಾಂತರಗಳಿಂದ, ಕಾಲ ಕ್ರಮೇಣ ಇವರ ಪರಸ್ಪರ ವೈಯುಕ್ತಿಕ ಸಂಬಂಧ ಇನ್ನೂ ಬಲಶಾಲಿಯಾಗುತ್ತ ಹೋಗಬಹುದು ಅಥವಾ ಸಡಿಲವಾಗಬಹುದು. ಆದರೆ ಈ ಸಂಬಂಧ ಗಟ್ಟಿಯಾದ ಬುನಾದಿಯ ಮೇಲೆ ನಿಂತಿದ್ದರೆ ಕಾಲ, ದೇಶ, ದೂರ, ಸಮಯದ ಹೊಡೆತಕ್ಕೆ ಬಗ್ಗದೆ, ಗಟ್ಟಿಯಾಗಿಯೇ ಉಳಿಯುತ್ತದೆ.

ಈ ರೀತಿಯ ಸಂಬಂಧದಲ್ಲಿ ಇರುವವರು:

·         ಯಾವುದಾದರೊಂದು ಸಮಾನ ಗುರಿ ಅಥವಾ ಉದ್ದೇಶ ಹೊಂದಿರಬೇಕು.

·         ಅವರೆಲ್ಲರೂ ಏಕ ಮನಸ್ಕಅಥವಾ ಒಂದೇ ತರಹದ ಯೋಚನೆಯುಳ್ಳವರಾಗಿರಬೇಕು.

·         ಒಂದೇ ತರಹದ ಹಿನ್ನೆಲೆಯಿಂದ ಬಂದವರಾದರೆ ಇನ್ನೂ ಉತ್ತಮ.

·         ಒಬ್ಬರ ವಿಚಾರವನ್ನು ಇನ್ನೊಬ್ಬರು ಗೌರವಿಸುವಂತಹವರಾಗಿ, ನಡುವೆ ನಂಬಿಕೆಯ ಸೇತುವೆ ಇರಬೇಕು.

·         ಇಬ್ಬರ ನಡುವೆ ಆರೋಗ್ಯಕರ ಸಂಬಂಧವಿರಬೇಕು.

·         ಇಬ್ಬರ ನಡುವಿನ ಸಂಬಂಧ ಪಾರದರ್ಶಕ ಮತ್ತು ಪ್ರಾಮಾಣಿಕವಾಗಿರಬೇಕು.

ವ್ಯಕ್ತಿಗಳು ಎಷ್ಟೇ ಸಭ್ಯ/ಸುಶಿಕ್ಷಿತರಾಗಿದ್ದರೂ ಸಹ ಭಿನ್ನಾಭಿಪ್ರಾಯ ಬರುವುದು ಸಹಜ. ಸಂಬಂಧ ನಿರ್ವಹಣೆಯ ಕಲೆ ತಿಳಿದಿದ್ದಲ್ಲಿ ಸಂಬಂಧವನ್ನು ಸುಗಮವಾಗಿ ಮುಂದುವರೆಸಬಹುದು.

ಸಂಬಂಧಗಳ ಸಮರ್ಪಕ ನಿರ್ವಹಣೆಗೆ ಹಲವು ಸರಳ ವಿಧಾನಗಳು:

ಬೇರೆಯವರನ್ನು ದೂರಬೇಡಿ, ಅಲೋಚನೆ ಅಥವಾ ಅವಮಾನಿಸಬೇಡಿ. ಬೇರೆಯವರು ನಿಮ್ಮ ಬಗ್ಗೆ ಅದೇ ರೀತಿ ನಡೆದುಕೊಂಡಲ್ಲಿ ನಿಮಗೆ ಹೇಗೆ ಸರಿಹೊಂದುವುದಿಲ್ಲವೋ, ಅದೇ ರೀತಿ ಅವರಿಗೂ ಬೇಸರ ಆಗುತ್ತದೆ ಎಂಬುದನ್ನು ಅರಿಯಿರಿ. ಬೇರೆಯವರ ಬಗ್ಗೆ ನಿಮ್ಮ ಅನಿಸಿಕೆ/ಪ್ರತ್ಯಾದಾನ (ಫೀಡ್-ಬ್ಯಾಕ್) ನೀಡಲು ಬೇಕಾದಷ್ಟು ಸರಳ ಮಾರ್ಗಗಳಿವೆ.

ಬೇರೆಯವರ ಕೆಲಸ / ವ್ಯಕ್ತಿತ್ವಕ್ಕೆ ಮೆಚ್ಚುಗೆ ತೋರಿಸಿ. ಅವರ ಒಳ್ಳೆಯ ಗುಣ/ಕೆಲಸ ಕಂಡಕೂಡಲೇ ಅವರನ್ನು ಅಭಿನಂದಿಸಿ. ಕೇವಲ ತೋರಿಕೆಗೆ ಮಾಡದೆ ಪ್ರಾಮಾಣಿಕವಾಗಿ ನಿಮ್ಮ ಮೆಚ್ಚುಗೆ ತೋರಿಸಿ.

ಹಸನ್ಮುಖವಿರಲಿ. ಒಂದು ಮುಗುಳ್ನಗೆ ನಿಮ್ಮ ಮೌಲ್ಯವನ್ನು ವೃದ್ಧಿಸುತ್ತದೆ.

ಇತರರು ಹೇಳುತ್ತಿರುವುದರಲ್ಲಿ/ ಅವರ ವ್ಯಕ್ತಿತ್ವದಲ್ಲಿ ಆಸಕ್ತಿ ತೋರಿಸಿ. ಮುಕ್ತವಾಗಿ ಒಪ್ಪಿಕೊಳ್ಳದಿದ್ದರೂ ಸಹ ಎಲ್ಲರೂ ತಮ್ಮ ಬಗ್ಗೆ ಕೊಚ್ಚಿಕೊಳ್ಳಲು ಇಷ್ಟಪಡುತ್ತಾರೆ, ಅಂತಹ ಸನ್ನಿವೇಶದಲ್ಲಿ ಅವರು ಹೇಳುವುದನ್ನು ಆಸಕ್ತಿಯಿಂದ ಸಕ್ರಿಯವಾಗಿ ಕೇಳಿಸಿಕೊಳ್ಳಿ.

ಇತರರನ್ನು “ಮುಖ್ಯ ವ್ಯಕ್ತಿ” ಎಂಬಂತೆ ಗಮನಿಸಿ. ಧನ್ಯವಾದ ತಿಳಿಸಿ.

ಎಲ್ಲ ಸಮಯದಲ್ಲೂ ವಾದಕ್ಕೆ ಇಳಿಯಬೇಡಿ. ನೀವೂ ತಪ್ಪು ಮಾಡಬಹುದು ಎಂಬುದನ್ನು ಮರೆಯಬೇಡಿ. ವಾದಕ್ಕೆ ಇಳಿಯದೆ, ಕೇವಲ ಸುಮ್ಮನಿದ್ದಲ್ಲಿ, ಅವರು ಹೇಳುತ್ತಿರುವುದು ನಿಮಗೆ ಸರಿಯಾಗಿ ಕೇಳುತ್ತದೆ, ತಪ್ಪು ಯಾರದು ಎಂಬುದೂ ಅರ್ಥವಾಗುತ್ತದೆ.

ನೀವು ತಪ್ಪು ಮಾಡಿದ್ದಲ್ಲಿ ಒಪ್ಪಿಕೊಳ್ಳಿ. ತಪ್ಪನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿ ಸಂಬಂಧ ಕೆಡಿಸಿಕೊಳ್ಳಬೇಡಿ.

ಕೋಪವನ್ನು ನಿಯಂತ್ರಿಸಿಕೊಳ್ಳಿ. ಕೋಪದ ಭರದಲ್ಲಿ ತೆಗೆದುಕೊಂಡ ನಿರ್ಧಾರ ಎಂದೂ ಸರಿಯಾಗಿರುವುದಿಲ್ಲ. ಮನಸ್ಸು ಶಾಂತವಾಗುವವರೆಗೆ ನಿಮ್ಮ ನಿರ್ಧಾರ ತಡೆಹಿಡಿಯಿರಿ.

ಆದೇಶದ ಬದಲಿಗೆ ಸಲಹೆ ನೀಡಿ. ಬೇರೆಯವರ ಆದೇಶದಂತೆ ನಡೆದುಕೊಳ್ಳಲು ಎಲ್ಲರಿಗೂ ಸರಿ ಎನಿಸುವುದಿಲ್ಲ ಆದ್ದರಿಂದ ನಿಮ್ಮ ಆದೇಶವನ್ನೂ ಸಲಹೆ ಎಂಬಂತೆ ತಿಳಿಸಿ.

ಈ ಸರಳ ವಿಧಾನಗಳಿಂದ ಎಲ್ಲಾ ಪರಸ್ಪರ ಸಂಬಂಧಗಳು ಸಾಕಷ್ಟು ಉತ್ತಮಗೊಳ್ಳುತ್ತವೆ. ಆದರೆ ಕೆಲವು ವಿಶೇಷ (ಗುರು-ಶಿಷ್ಯ, ಅಥವಾ ಪ್ರೇಮ) ಸಂಬಂಧಗಳಿಗೆ ಕೆಲವು ವಿಶೇಷ ನಿಯಮಗಳು ಅನ್ವಯಿಸುತ್ತವೆ.

ಗುರು ಶಿಷ್ಯರಿಬ್ಬರಿಗೂ ಇರಬೇಕಾದ ಕಲೆಗಳು: ತಾಳ್ಮೆ, ನಂಬಿಕೆ, ವಿಶ್ವಾಸ, ಮುಂದಿನ ಗುರಿಯ ಸ್ಪಷ್ಟತೆ ಮತ್ತು ಇಂದಿನ ವಾಸ್ತವಾಂಶದ ಅರಿವು.  ಗುರುವಿನಲ್ಲಿ ಇರಬೇಕಾದ ಕಲೆಗಳು: ಕಲಿಸಿ ಕ್ಷಮತೆ ಹೆಚ್ಚಿಸುವುದು, ತಪ್ಪನ್ನು ತಿದ್ದುವುದು, ಅಪಾಯದ ಬಗ್ಗೆ ಎಚ್ಚರಿಸುವುದು ಮತ್ತು ಅವಕಾಶಗಳನ್ನು ಹುಡುಕಿಕೊಡುವುದು. ಶಿಷ್ಯರಲ್ಲಿ  ಇರಬೇಕಾದ ಕಲೆಗಳು: ಗಮನವಿಟ್ಟು ಆದಷ್ಟು ಬೇಗ ಕಲಿಯುವುದು, ಮುಂತೊಡಗು (ಇನಿಷಿಯೇಟಿವ್ -ಮೊದಲ ಹೆಜ್ಜೆ), ಮತ್ತು ಸಂಬಂಧವನ್ನು ನಿಭಾಯಿಸುವುದು. ಗುರು-ಶಿಷ್ಯರಿಬ್ಬರೂ ತಮ್ಮ ಎಲ್ಲೆಗಳನ್ನು ಅರಿತು, ಮೀರದಂತೆ ವರ್ತಿಸಬೇಕು.

ಮದುವೆ ಪ್ರೇಮ ಸಂಬಂಧದಲ್ಲಿ ಪರಸ್ಪರ ಆಕರ್ಷಣೆ, ಸಾಮೀಪ್ಯ ಮತ್ತು ಬದ್ಧತೆ ಇರಬೇಕು. ಮೂರೂ ಅಂಶಗಳು ಹೆಚ್ಚಿದ್ದಷ್ಟು ಸಂಬಂಧವೂ ಬಲಶಾಲಿಯಾಗುತ್ತದೆ ಆದರೆ  ಯಾವುದೇ ಒಂದರಲ್ಲಿ ಕೊರತೆಯಾದರೂ ಸಹ ಸಂಬಂಧ ಕ್ಷೀಣವಾಗುತ್ತದೆ.

1967ರಲ್ಲಿ ಥಾಮಸ್ ಆಂಥೊನಿ ಹ್ಯಾರಿಸ್ ಬರೆದ ಸ್ವ-ಸಹಾಯ ಪುಸ್ತಕ “ಐ ಎಮ್ ಒಕೆ, ಯೂ ಆರ್ ಒಕೆ” (ನಾನೂ ಸರಿ, ನೀನೂ ಸರಿ) ಇದುವರೆಗೂ ಒಂದೂವರೆ ಕೋಟಿಗೂ ಹೆಚ್ಚು ಪ್ರತಿ ಮಾರಾಟವಾಗಿದ್ದು, ಎರಡು ವರ್ಷಗಳ ಕಾಲ ಅಮೇರಿಕದ ಬೆಸ್ಟ್-ಸೆಲ್ಲರ್ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಹ್ಯಾರಿಸ್ ಪರಸ್ಪರ ವೈಯುಕ್ತಿಕ ಸಂಬಂಧ ವ್ಯವಹಾರವನ್ನು ವಿಶ್ಲೇಷಿಸಿ, ವ್ಯಕ್ತಿಯ ಅಹಂ, ಸಂದರ್ಭಾನುಸಾರ, ಪೋಷಕ, ವಯಸ್ಕ ಮತ್ತು ಮಗುವಿನ (ಪೇರೆಂಟ್, ಅಡಲ್ಟ್ ಚೈಲ್ಡ್) ನಡತೆಯ ರೂಪಕ್ಕೆ ಮಾರ್ಪಾಡಾಗುತ್ತದೆ ಎನ್ನುತ್ತಾರೆ. ಹ್ಯಾರಿಸ್ ಅವರ ತತ್ವವಾದ ಡಾ. ಎರಿಕ್ ಬೆರ್ನ್ ಅವರ “ಟ್ರಾನ್ಸಾಕ್ಷನಲ್ ಎನಾಲಿಸಿಸ್” ನಿಂದ ಪ್ರಭಾವಿತಗೊಂಡಿದೆ. ಇದರ ಆಧಾರದ ಮೇಲೆ ಅವರು ನಾಲ್ಕು ಜೀವನದ ಸನ್ನಿವೇಶಗಳನ್ನು ವರ್ಣಿಸುತ್ತಾರೆ.ಈ ನಾಲ್ಕು ಸನ್ನಿವೇಶದ ಅರ್ಥವನ್ನು ವಿವಿಧ ಶ್ರಾಸ್ತಜÕರು ಬೇರೆಬೇರೆ ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ.

·         ನಾನು ಸರಿಯಿಲ್ಲ, ನೀನು ಸರಿ.

·         ನಾನು ಸರಿ, ನೀನು ಸರಿಯಿಲ್ಲ.

·         ನಾನೂ ಸರಿ, ನೀನೂ ಸರಿ.

·         ನಾನೂ ಸರಿಯಿಲ್ಲ, ನೀನೂ ಸರಿಯಿಲ್ಲ.

ಮೊದಲನೆಯದು, “ನಾನು ಸರಿಯಿಲ್ಲ, ನೀನು ಸರಿ” ಎನ್ನುವುದು ಮಕ್ಕಳ ಮನೋಭಾವ. ಇದರಲ್ಲಿ ತಮ್ಮನ್ನು ತಾವು ಕೀಳಾಗಿಯೂ, ಮಿಕ್ಕವರನ್ನು ಹೆಚ್ಚಾಗಿಯೂ ಕಾಣುತ್ತಾರೆ. ಚಿಕ್ಕಂದಿನಿಂದ ಬೆಳೆಯುವ ಸಮಯದಲ್ಲಿ ತಮ್ಮ ಪೋಷಕರಿಂದ, ಶಿಕ್ಷಕರಿಂದ, ಸಹಪಾಠಿಗಳಿಂದ ಅಥವಾ ಬೇರೆಯವರಿಂದ ಅವಮಾನಿತ/ಭಯಬೀತರಾಗಿರುವ ಅನುಭವಗಳು ಇದಕ್ಕೆ ಕಾರಣವಾಗಿರಬಹುದು. ಇವರು ಮಿಕ್ಕವರನ್ನು ಸಂತೋಷಪಡಿಸಲು ಪ್ರಯತ್ನಿಸುತ್ತಾರೆ.

ಎರಡನೆಯದು, “ನಾನು ಸರಿ, ನೀನು ಸರಿಯಿಲ್ಲ” ಎನ್ನುವ ಪೋಷಕರ ವಾದ. ಅದರಲ್ಲಿ ತಮ್ಮನ್ನು ತಾವು ಹೆಚ್ಚು, ಮಿಕ್ಕವರು ಕೀಳು ಎನ್ನುವ ಅಹಂಭಾವ. ಕೋಪದ ಸ್ವಭಾವ, ತಮ್ಮನ್ನು ತಾವು ಹೊಗಳಿಕೊಳ್ಳುವುದು, ಇತರರನ್ನು ದೂಷಿಸುವುದು ಮತ್ತು ಎಲ್ಲವೂ ತಮ್ಮಿಂದಲೇ ಸಾಧ್ಯ ಎನ್ನುವ ಮನೋಭಾವ. ಬಹಳಷ್ಟು ಕಂಪನಿಯ ಉನ್ನತ ವ್ಯವಸ್ಥಾಪಕರು ಈ ಜಾಲದಲ್ಲಿ ಸಿಲುಕಿ ಒದ್ದಾಡುತ್ತಾರೆ.

ಮೂರನೆಯದು, “ನಾನೂ ಸರಿ, ನೀನೂ ಸರಿ” ಎಂಬುದು ವಯಸ್ಕರ ನಿಲುವು. ತಮ್ಮನ್ನು ತಾವು ಸರಿ ಎಂದುಕೊಂಡರೂ ಇನ್ನೊಬ್ಬರನ್ನು ಕೀಳು/ಮೇಲು ಎಂದು ಪರಿಗಣಿಸದೆ ಜೀವನವನ್ನು ಆತ್ಮಸ್ಥೈರ್ಯದೊಂದಿಗೆ ಮುನ್ನಡೆಸುವ ವ್ಯಕ್ತಿಗಳು. ಭಿನ್ನಾಭಿಪ್ರಾಯ ಬಂದರೂ ಸಹ ಅದನ್ನು ಪರಿಹರಿಸಿಕೊಂಡು ಸಂತೋಷವಾಗಿರುವ ಜನ.

ನಾಲ್ಕನೆಯದಾದ “ನಾನೂ ಸರಿಯಿಲ್ಲ ನೀನೂ ಸರಿಯಿಲ್ಲ” ಎಂಬ ನಿಲುವು ಸ್ವಲ್ಪ ಅಪರೂಪ ಆದರೆ ಜನರು ತಮ್ಮ ತಪ್ಪುಗಳನ್ನು ಇತರರ ಮೇಲೆ ಹೊರೆಸಲು ಪ್ರಯತ್ನಿಸಿ, ವಿಫಲರಾದಾಗ ತೆಗೆದುಕೊಳ್ಳುವಂತಹ ನಿಲುವು. ದ್ರೋಹ, ಸೇಡು ಮುಂತಾದ ಕಾರಣಗಳಿಂದ ವ್ಯಕ್ತವಾಗಬಹುದಾದ ವಿಪರೀತ ಭಾವನೆ. ಇದನ್ನು ಯಾವ ಕಾರಣಕ್ಕೂ ಬೆಳೆಯಗೊಡಬಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...