Homeಮುಖಪುಟನಿಮ್ಮ ಸ್ನೇಹಿತರೊಂದಿಗೆ ಹೀಗೆ ನಡೆದುಕೊಂಡಲ್ಲಿ ಅವರಿಗೂ ನಿಮ್ಮ ಮೇಲೆ ಗೌರವ ಮೂಡುತ್ತದೆ

ನಿಮ್ಮ ಸ್ನೇಹಿತರೊಂದಿಗೆ ಹೀಗೆ ನಡೆದುಕೊಂಡಲ್ಲಿ ಅವರಿಗೂ ನಿಮ್ಮ ಮೇಲೆ ಗೌರವ ಮೂಡುತ್ತದೆ

- Advertisement -
- Advertisement -

ಜೀವನ ಕಲೆಗಳು: ಅಂಕಣ -17

ಪರಸ್ಪರ ವೈಯುಕ್ತಿಕ ಸಂಬಂಧಗಳು (ಇಂಟರ್-ಪರ್ಸನಲ್ ರಿಲೇಶನ್ಷಿಪ್ ಅಥವಾ ಟ್ರಾನ್ಸಾಕ್ಷನಲ್ ಎನಾಲಿಸಿಸ್)

ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳ ನಡುವಣ ಗಾಢವಾದ ಸಂಬಂಧವನ್ನು ಪರಸ್ಪರ ವೈಯುಕ್ತಿಕ ಸಂಬಂಧ (ಇಂಟರ್-ಪರ್ಸನಲ್ ರಿಲೇಶನ್ಷಿಪ್) ಎಂದು ಕರೆಯಬಹುದು.

ಈ ವ್ಯಕ್ತಿಗಳು:

·         ಒಂದೇ ಮನೆತನದವರಾಗಿರಬಹುದು (ತಂದೆ-ತಾಯಿ-ಮಕ್ಕಳು, ಚಿಕ್ಕಪ್ಪ-ದೊಡ್ಡಪ್ಪ-ಮಾವ ಇತ್ಯಾದಿ).

·         ಒಂದೇ ಜಾತಿ/ಧರ್ಮಕ್ಕೆ ಸೇರಿದವರಾಗಿರಬಹುದು.

·         ಸಹೋದ್ಯೋಗಿ/ಸಹಪಾಠಿಗಳಾಗಿರಬಹುದು.

·         ಒಂದೇ ಕಾರ್ಯತಂಡಕ್ಕೆ ಸೇರಿದವರು/ಬೆಂಬಲಿಗರಾಗಿರಬಹುದು.

·         ಸ್ನೇಹಿತರಾಗಿರಬಹುದು.

·         ಗುರು-ಶಿಷ್ಯ ಸಂಬಂಧವಾಗಿರಬಹುದು.

·         ಮದುವೆ/ಪ್ರೇಮ ಸಂಬಂಧದವರಾಗಿರಬಹುದು.

ಕಾರಣಾಂತರಗಳಿಂದ, ಕಾಲ ಕ್ರಮೇಣ ಇವರ ಪರಸ್ಪರ ವೈಯುಕ್ತಿಕ ಸಂಬಂಧ ಇನ್ನೂ ಬಲಶಾಲಿಯಾಗುತ್ತ ಹೋಗಬಹುದು ಅಥವಾ ಸಡಿಲವಾಗಬಹುದು. ಆದರೆ ಈ ಸಂಬಂಧ ಗಟ್ಟಿಯಾದ ಬುನಾದಿಯ ಮೇಲೆ ನಿಂತಿದ್ದರೆ ಕಾಲ, ದೇಶ, ದೂರ, ಸಮಯದ ಹೊಡೆತಕ್ಕೆ ಬಗ್ಗದೆ, ಗಟ್ಟಿಯಾಗಿಯೇ ಉಳಿಯುತ್ತದೆ.

ಈ ರೀತಿಯ ಸಂಬಂಧದಲ್ಲಿ ಇರುವವರು:

·         ಯಾವುದಾದರೊಂದು ಸಮಾನ ಗುರಿ ಅಥವಾ ಉದ್ದೇಶ ಹೊಂದಿರಬೇಕು.

·         ಅವರೆಲ್ಲರೂ ಏಕ ಮನಸ್ಕಅಥವಾ ಒಂದೇ ತರಹದ ಯೋಚನೆಯುಳ್ಳವರಾಗಿರಬೇಕು.

·         ಒಂದೇ ತರಹದ ಹಿನ್ನೆಲೆಯಿಂದ ಬಂದವರಾದರೆ ಇನ್ನೂ ಉತ್ತಮ.

·         ಒಬ್ಬರ ವಿಚಾರವನ್ನು ಇನ್ನೊಬ್ಬರು ಗೌರವಿಸುವಂತಹವರಾಗಿ, ನಡುವೆ ನಂಬಿಕೆಯ ಸೇತುವೆ ಇರಬೇಕು.

·         ಇಬ್ಬರ ನಡುವೆ ಆರೋಗ್ಯಕರ ಸಂಬಂಧವಿರಬೇಕು.

·         ಇಬ್ಬರ ನಡುವಿನ ಸಂಬಂಧ ಪಾರದರ್ಶಕ ಮತ್ತು ಪ್ರಾಮಾಣಿಕವಾಗಿರಬೇಕು.

ವ್ಯಕ್ತಿಗಳು ಎಷ್ಟೇ ಸಭ್ಯ/ಸುಶಿಕ್ಷಿತರಾಗಿದ್ದರೂ ಸಹ ಭಿನ್ನಾಭಿಪ್ರಾಯ ಬರುವುದು ಸಹಜ. ಸಂಬಂಧ ನಿರ್ವಹಣೆಯ ಕಲೆ ತಿಳಿದಿದ್ದಲ್ಲಿ ಸಂಬಂಧವನ್ನು ಸುಗಮವಾಗಿ ಮುಂದುವರೆಸಬಹುದು.

ಸಂಬಂಧಗಳ ಸಮರ್ಪಕ ನಿರ್ವಹಣೆಗೆ ಹಲವು ಸರಳ ವಿಧಾನಗಳು:

ಬೇರೆಯವರನ್ನು ದೂರಬೇಡಿ, ಅಲೋಚನೆ ಅಥವಾ ಅವಮಾನಿಸಬೇಡಿ. ಬೇರೆಯವರು ನಿಮ್ಮ ಬಗ್ಗೆ ಅದೇ ರೀತಿ ನಡೆದುಕೊಂಡಲ್ಲಿ ನಿಮಗೆ ಹೇಗೆ ಸರಿಹೊಂದುವುದಿಲ್ಲವೋ, ಅದೇ ರೀತಿ ಅವರಿಗೂ ಬೇಸರ ಆಗುತ್ತದೆ ಎಂಬುದನ್ನು ಅರಿಯಿರಿ. ಬೇರೆಯವರ ಬಗ್ಗೆ ನಿಮ್ಮ ಅನಿಸಿಕೆ/ಪ್ರತ್ಯಾದಾನ (ಫೀಡ್-ಬ್ಯಾಕ್) ನೀಡಲು ಬೇಕಾದಷ್ಟು ಸರಳ ಮಾರ್ಗಗಳಿವೆ.

ಬೇರೆಯವರ ಕೆಲಸ / ವ್ಯಕ್ತಿತ್ವಕ್ಕೆ ಮೆಚ್ಚುಗೆ ತೋರಿಸಿ. ಅವರ ಒಳ್ಳೆಯ ಗುಣ/ಕೆಲಸ ಕಂಡಕೂಡಲೇ ಅವರನ್ನು ಅಭಿನಂದಿಸಿ. ಕೇವಲ ತೋರಿಕೆಗೆ ಮಾಡದೆ ಪ್ರಾಮಾಣಿಕವಾಗಿ ನಿಮ್ಮ ಮೆಚ್ಚುಗೆ ತೋರಿಸಿ.

ಹಸನ್ಮುಖವಿರಲಿ. ಒಂದು ಮುಗುಳ್ನಗೆ ನಿಮ್ಮ ಮೌಲ್ಯವನ್ನು ವೃದ್ಧಿಸುತ್ತದೆ.

ಇತರರು ಹೇಳುತ್ತಿರುವುದರಲ್ಲಿ/ ಅವರ ವ್ಯಕ್ತಿತ್ವದಲ್ಲಿ ಆಸಕ್ತಿ ತೋರಿಸಿ. ಮುಕ್ತವಾಗಿ ಒಪ್ಪಿಕೊಳ್ಳದಿದ್ದರೂ ಸಹ ಎಲ್ಲರೂ ತಮ್ಮ ಬಗ್ಗೆ ಕೊಚ್ಚಿಕೊಳ್ಳಲು ಇಷ್ಟಪಡುತ್ತಾರೆ, ಅಂತಹ ಸನ್ನಿವೇಶದಲ್ಲಿ ಅವರು ಹೇಳುವುದನ್ನು ಆಸಕ್ತಿಯಿಂದ ಸಕ್ರಿಯವಾಗಿ ಕೇಳಿಸಿಕೊಳ್ಳಿ.

ಇತರರನ್ನು “ಮುಖ್ಯ ವ್ಯಕ್ತಿ” ಎಂಬಂತೆ ಗಮನಿಸಿ. ಧನ್ಯವಾದ ತಿಳಿಸಿ.

ಎಲ್ಲ ಸಮಯದಲ್ಲೂ ವಾದಕ್ಕೆ ಇಳಿಯಬೇಡಿ. ನೀವೂ ತಪ್ಪು ಮಾಡಬಹುದು ಎಂಬುದನ್ನು ಮರೆಯಬೇಡಿ. ವಾದಕ್ಕೆ ಇಳಿಯದೆ, ಕೇವಲ ಸುಮ್ಮನಿದ್ದಲ್ಲಿ, ಅವರು ಹೇಳುತ್ತಿರುವುದು ನಿಮಗೆ ಸರಿಯಾಗಿ ಕೇಳುತ್ತದೆ, ತಪ್ಪು ಯಾರದು ಎಂಬುದೂ ಅರ್ಥವಾಗುತ್ತದೆ.

ನೀವು ತಪ್ಪು ಮಾಡಿದ್ದಲ್ಲಿ ಒಪ್ಪಿಕೊಳ್ಳಿ. ತಪ್ಪನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿ ಸಂಬಂಧ ಕೆಡಿಸಿಕೊಳ್ಳಬೇಡಿ.

ಕೋಪವನ್ನು ನಿಯಂತ್ರಿಸಿಕೊಳ್ಳಿ. ಕೋಪದ ಭರದಲ್ಲಿ ತೆಗೆದುಕೊಂಡ ನಿರ್ಧಾರ ಎಂದೂ ಸರಿಯಾಗಿರುವುದಿಲ್ಲ. ಮನಸ್ಸು ಶಾಂತವಾಗುವವರೆಗೆ ನಿಮ್ಮ ನಿರ್ಧಾರ ತಡೆಹಿಡಿಯಿರಿ.

ಆದೇಶದ ಬದಲಿಗೆ ಸಲಹೆ ನೀಡಿ. ಬೇರೆಯವರ ಆದೇಶದಂತೆ ನಡೆದುಕೊಳ್ಳಲು ಎಲ್ಲರಿಗೂ ಸರಿ ಎನಿಸುವುದಿಲ್ಲ ಆದ್ದರಿಂದ ನಿಮ್ಮ ಆದೇಶವನ್ನೂ ಸಲಹೆ ಎಂಬಂತೆ ತಿಳಿಸಿ.

ಈ ಸರಳ ವಿಧಾನಗಳಿಂದ ಎಲ್ಲಾ ಪರಸ್ಪರ ಸಂಬಂಧಗಳು ಸಾಕಷ್ಟು ಉತ್ತಮಗೊಳ್ಳುತ್ತವೆ. ಆದರೆ ಕೆಲವು ವಿಶೇಷ (ಗುರು-ಶಿಷ್ಯ, ಅಥವಾ ಪ್ರೇಮ) ಸಂಬಂಧಗಳಿಗೆ ಕೆಲವು ವಿಶೇಷ ನಿಯಮಗಳು ಅನ್ವಯಿಸುತ್ತವೆ.

ಗುರು ಶಿಷ್ಯರಿಬ್ಬರಿಗೂ ಇರಬೇಕಾದ ಕಲೆಗಳು: ತಾಳ್ಮೆ, ನಂಬಿಕೆ, ವಿಶ್ವಾಸ, ಮುಂದಿನ ಗುರಿಯ ಸ್ಪಷ್ಟತೆ ಮತ್ತು ಇಂದಿನ ವಾಸ್ತವಾಂಶದ ಅರಿವು.  ಗುರುವಿನಲ್ಲಿ ಇರಬೇಕಾದ ಕಲೆಗಳು: ಕಲಿಸಿ ಕ್ಷಮತೆ ಹೆಚ್ಚಿಸುವುದು, ತಪ್ಪನ್ನು ತಿದ್ದುವುದು, ಅಪಾಯದ ಬಗ್ಗೆ ಎಚ್ಚರಿಸುವುದು ಮತ್ತು ಅವಕಾಶಗಳನ್ನು ಹುಡುಕಿಕೊಡುವುದು. ಶಿಷ್ಯರಲ್ಲಿ  ಇರಬೇಕಾದ ಕಲೆಗಳು: ಗಮನವಿಟ್ಟು ಆದಷ್ಟು ಬೇಗ ಕಲಿಯುವುದು, ಮುಂತೊಡಗು (ಇನಿಷಿಯೇಟಿವ್ -ಮೊದಲ ಹೆಜ್ಜೆ), ಮತ್ತು ಸಂಬಂಧವನ್ನು ನಿಭಾಯಿಸುವುದು. ಗುರು-ಶಿಷ್ಯರಿಬ್ಬರೂ ತಮ್ಮ ಎಲ್ಲೆಗಳನ್ನು ಅರಿತು, ಮೀರದಂತೆ ವರ್ತಿಸಬೇಕು.

ಮದುವೆ ಪ್ರೇಮ ಸಂಬಂಧದಲ್ಲಿ ಪರಸ್ಪರ ಆಕರ್ಷಣೆ, ಸಾಮೀಪ್ಯ ಮತ್ತು ಬದ್ಧತೆ ಇರಬೇಕು. ಮೂರೂ ಅಂಶಗಳು ಹೆಚ್ಚಿದ್ದಷ್ಟು ಸಂಬಂಧವೂ ಬಲಶಾಲಿಯಾಗುತ್ತದೆ ಆದರೆ  ಯಾವುದೇ ಒಂದರಲ್ಲಿ ಕೊರತೆಯಾದರೂ ಸಹ ಸಂಬಂಧ ಕ್ಷೀಣವಾಗುತ್ತದೆ.

1967ರಲ್ಲಿ ಥಾಮಸ್ ಆಂಥೊನಿ ಹ್ಯಾರಿಸ್ ಬರೆದ ಸ್ವ-ಸಹಾಯ ಪುಸ್ತಕ “ಐ ಎಮ್ ಒಕೆ, ಯೂ ಆರ್ ಒಕೆ” (ನಾನೂ ಸರಿ, ನೀನೂ ಸರಿ) ಇದುವರೆಗೂ ಒಂದೂವರೆ ಕೋಟಿಗೂ ಹೆಚ್ಚು ಪ್ರತಿ ಮಾರಾಟವಾಗಿದ್ದು, ಎರಡು ವರ್ಷಗಳ ಕಾಲ ಅಮೇರಿಕದ ಬೆಸ್ಟ್-ಸೆಲ್ಲರ್ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಹ್ಯಾರಿಸ್ ಪರಸ್ಪರ ವೈಯುಕ್ತಿಕ ಸಂಬಂಧ ವ್ಯವಹಾರವನ್ನು ವಿಶ್ಲೇಷಿಸಿ, ವ್ಯಕ್ತಿಯ ಅಹಂ, ಸಂದರ್ಭಾನುಸಾರ, ಪೋಷಕ, ವಯಸ್ಕ ಮತ್ತು ಮಗುವಿನ (ಪೇರೆಂಟ್, ಅಡಲ್ಟ್ ಚೈಲ್ಡ್) ನಡತೆಯ ರೂಪಕ್ಕೆ ಮಾರ್ಪಾಡಾಗುತ್ತದೆ ಎನ್ನುತ್ತಾರೆ. ಹ್ಯಾರಿಸ್ ಅವರ ತತ್ವವಾದ ಡಾ. ಎರಿಕ್ ಬೆರ್ನ್ ಅವರ “ಟ್ರಾನ್ಸಾಕ್ಷನಲ್ ಎನಾಲಿಸಿಸ್” ನಿಂದ ಪ್ರಭಾವಿತಗೊಂಡಿದೆ. ಇದರ ಆಧಾರದ ಮೇಲೆ ಅವರು ನಾಲ್ಕು ಜೀವನದ ಸನ್ನಿವೇಶಗಳನ್ನು ವರ್ಣಿಸುತ್ತಾರೆ.ಈ ನಾಲ್ಕು ಸನ್ನಿವೇಶದ ಅರ್ಥವನ್ನು ವಿವಿಧ ಶ್ರಾಸ್ತಜÕರು ಬೇರೆಬೇರೆ ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ.

·         ನಾನು ಸರಿಯಿಲ್ಲ, ನೀನು ಸರಿ.

·         ನಾನು ಸರಿ, ನೀನು ಸರಿಯಿಲ್ಲ.

·         ನಾನೂ ಸರಿ, ನೀನೂ ಸರಿ.

·         ನಾನೂ ಸರಿಯಿಲ್ಲ, ನೀನೂ ಸರಿಯಿಲ್ಲ.

ಮೊದಲನೆಯದು, “ನಾನು ಸರಿಯಿಲ್ಲ, ನೀನು ಸರಿ” ಎನ್ನುವುದು ಮಕ್ಕಳ ಮನೋಭಾವ. ಇದರಲ್ಲಿ ತಮ್ಮನ್ನು ತಾವು ಕೀಳಾಗಿಯೂ, ಮಿಕ್ಕವರನ್ನು ಹೆಚ್ಚಾಗಿಯೂ ಕಾಣುತ್ತಾರೆ. ಚಿಕ್ಕಂದಿನಿಂದ ಬೆಳೆಯುವ ಸಮಯದಲ್ಲಿ ತಮ್ಮ ಪೋಷಕರಿಂದ, ಶಿಕ್ಷಕರಿಂದ, ಸಹಪಾಠಿಗಳಿಂದ ಅಥವಾ ಬೇರೆಯವರಿಂದ ಅವಮಾನಿತ/ಭಯಬೀತರಾಗಿರುವ ಅನುಭವಗಳು ಇದಕ್ಕೆ ಕಾರಣವಾಗಿರಬಹುದು. ಇವರು ಮಿಕ್ಕವರನ್ನು ಸಂತೋಷಪಡಿಸಲು ಪ್ರಯತ್ನಿಸುತ್ತಾರೆ.

ಎರಡನೆಯದು, “ನಾನು ಸರಿ, ನೀನು ಸರಿಯಿಲ್ಲ” ಎನ್ನುವ ಪೋಷಕರ ವಾದ. ಅದರಲ್ಲಿ ತಮ್ಮನ್ನು ತಾವು ಹೆಚ್ಚು, ಮಿಕ್ಕವರು ಕೀಳು ಎನ್ನುವ ಅಹಂಭಾವ. ಕೋಪದ ಸ್ವಭಾವ, ತಮ್ಮನ್ನು ತಾವು ಹೊಗಳಿಕೊಳ್ಳುವುದು, ಇತರರನ್ನು ದೂಷಿಸುವುದು ಮತ್ತು ಎಲ್ಲವೂ ತಮ್ಮಿಂದಲೇ ಸಾಧ್ಯ ಎನ್ನುವ ಮನೋಭಾವ. ಬಹಳಷ್ಟು ಕಂಪನಿಯ ಉನ್ನತ ವ್ಯವಸ್ಥಾಪಕರು ಈ ಜಾಲದಲ್ಲಿ ಸಿಲುಕಿ ಒದ್ದಾಡುತ್ತಾರೆ.

ಮೂರನೆಯದು, “ನಾನೂ ಸರಿ, ನೀನೂ ಸರಿ” ಎಂಬುದು ವಯಸ್ಕರ ನಿಲುವು. ತಮ್ಮನ್ನು ತಾವು ಸರಿ ಎಂದುಕೊಂಡರೂ ಇನ್ನೊಬ್ಬರನ್ನು ಕೀಳು/ಮೇಲು ಎಂದು ಪರಿಗಣಿಸದೆ ಜೀವನವನ್ನು ಆತ್ಮಸ್ಥೈರ್ಯದೊಂದಿಗೆ ಮುನ್ನಡೆಸುವ ವ್ಯಕ್ತಿಗಳು. ಭಿನ್ನಾಭಿಪ್ರಾಯ ಬಂದರೂ ಸಹ ಅದನ್ನು ಪರಿಹರಿಸಿಕೊಂಡು ಸಂತೋಷವಾಗಿರುವ ಜನ.

ನಾಲ್ಕನೆಯದಾದ “ನಾನೂ ಸರಿಯಿಲ್ಲ ನೀನೂ ಸರಿಯಿಲ್ಲ” ಎಂಬ ನಿಲುವು ಸ್ವಲ್ಪ ಅಪರೂಪ ಆದರೆ ಜನರು ತಮ್ಮ ತಪ್ಪುಗಳನ್ನು ಇತರರ ಮೇಲೆ ಹೊರೆಸಲು ಪ್ರಯತ್ನಿಸಿ, ವಿಫಲರಾದಾಗ ತೆಗೆದುಕೊಳ್ಳುವಂತಹ ನಿಲುವು. ದ್ರೋಹ, ಸೇಡು ಮುಂತಾದ ಕಾರಣಗಳಿಂದ ವ್ಯಕ್ತವಾಗಬಹುದಾದ ವಿಪರೀತ ಭಾವನೆ. ಇದನ್ನು ಯಾವ ಕಾರಣಕ್ಕೂ ಬೆಳೆಯಗೊಡಬಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್: ನೇಮಕಗೊಂಡ ತಿಂಗಳಲ್ಲೇ ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ, ಅತ್ಯಂತ ನಿರ್ಣಾಯಕವಾದ ಸಾಂಸ್ಥಿಕ ಜವಾಬ್ದಾರಿಗೆ ನೇಮಕಗೊಂಡ ಕೇವಲ ಒಂದು ತಿಂಗಳ ಒಳಗಾಗಿಯೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಚಂದ್ರಿಮಾ...

ಜಿಲ್ಲಾ ನ್ಯಾಯಾಧೀಶೆ ತಬಸ್ಸುಮ್ ಖಾನ್‌ಗೆ ಬಲಪಂಥೀಯರಿಂದ ಬೆದರಿಕೆ : ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್

ನರ್ಮದಾಪುರಂ ಜಿಲ್ಲಾ ನ್ಯಾಯಾಧೀಶರಾದ ತಬಸ್ಸುಮ್ ಖಾನ್ ಅವರು ತಮ್ಮ ಕರ್ತವ್ಯ ನಿರ್ವಹಣೆಯ ಕಾರಣಕ್ಕಾಗಿ ಬೆದರಿಕೆ ಮತ್ತು ನಿಂದನೆಗೆ ಒಳಗಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮಧ್ಯಪ್ರದೇಶ ಹೈಕೋರ್ಟ್, ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಮತ್ತು ಅಪರಾಧಿಗಳನ್ನು ಪತ್ತೆಹಚ್ಚಲು ಕೈಗೊಂಡಿರುವ...

ಎಸ್ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಪಕ್ಷಪಾತದ ಬಗ್ಗೆ ಸಿಜೆಐಗೆ ಪ್ರತಿಪಕ್ಷಗಳಿಂದ ಪತ್ರ: ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದು ಆರೋಪ

ದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರತೀಯ ಚುನಾವಣಾ ಆಯೋಗವು (ECI) ಪಕ್ಷಪಾತ ಧೋರಣೆ ತಳೆದಿದೆ ಎಂದು ಆರೋಪಿಸಿ, 24 ವಿರೋಧ ಪಕ್ಷಗಳ ನಾಯಕರು ಹಾಗೂ ಒಬ್ಬರು ಸ್ವತಂತ್ರ...

ಬೆಂಗಳೂರು| ಕೆ.ಆರ್. ವೃತ್ತದ ಬಳಿ ಬಿಎಂಟಿಸಿ ಬಸ್‌ಗಳ ನಡುವೆ ಅಪಘಾತ; ಹಲವರಿಗೆ ಗಾಯ

ಇಂದು ಬೆಳಿಗ್ಗೆ ವಿಧಾನಸೌಧದಿಂದ ಸ್ವಲ್ಪ ದೂರದಲ್ಲಿರುವ ಜನನಿಬಿಡ ಕೆ.ಆರ್. ವೃತ್ತ ಜಂಕ್ಷನ್ ಬಳಿ ಎರಡು ಬಿಎಂಟಿಸಿ ಬಸ್‌ಗಳು ಡಿಕ್ಕಿ ಹೊಡೆದ ಪರಿಣಾಮ ಹಲವಾರು ಪ್ರಯಾಣಿಕರು ಗಾಯಗೊಂಡರು. ಡಿಕ್ಕಿಯ ಪರಿಣಾಮ ಬಸ್ಸಿನೊಳಗೆ ಹಲವಾರು ಪ್ರಯಾಣಿಕರು...

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪ ಆರೋಪ; ಕೋಲಾರ-ಮೈಸೂರಿನ ಅಧಿಕಾರಿಗಳಿಗೆ ನೋಟಿಸ್ ಜಾರಿ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಗೆ ಸಂಬಂಧಿಸಿದಂತೆ, ಕೋಲಾರ ಮತ್ತು ಮೈಸೂರಿನಲ್ಲಿ ನಡೆದ ಕಾರ್ಯವಿಧಾನದಲ್ಲಿ ನಿಯಮ ಉಲ್ಲಂಘನೆ ಆರೋಪ ಕೇಳಿಬಂದೆ. ಕೋಲಾರದಲ್ಲಿ, ಪರಿಷ್ಕರಣಾ ಕಾರ್ಯದ ಸಮಯದಲ್ಲಿ ಕರ್ತವ್ಯ...

ಸೂರತ್ ಧ್ವಂಸ ಕಾರ್ಯಾಚರಣೆ ಸಂಪೂರ್ಣ ‘ಕಾನೂನುಬಾಹಿರ’: 100 ನಿರಾಶ್ರಿತ ಕುಟುಂಬಗಳ ಪುನರ್ವಸತಿಗೆ ಗುಜರಾತ್ ಹೈಕೋರ್ಟ್ ಆದೇಶ

ಅಹಮದಾಬಾದ್: ಗುಜರಾತ್‌ನ ಸೂರತ್‌ನ ನಾಸಿರ್ ನಗರದಲ್ಲಿ ನಡೆದ ಮನೆಗಳ ಧ್ವಂಸ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸಿರುವ ಗುಜರಾತ್ ಹೈಕೋರ್ಟ್, ಇದನ್ನು "ಸಂಪೂರ್ಣ ಕಾನೂನುಬಾಹಿರ" ಎಂದು ಕರೆದಿದೆ. ಮೇ 30 ರಂದು ನಡೆದ ಈ "ಅನಧಿಕೃತ"...

ವಿದ್ಯುತ್ ಖಾಸಗೀಕರಣ ವಿರುದ್ದದ ಹೋರಾಟಕ್ಕೆ ಗೆಲುವು: ಅರ್ಜಿ ಹಿಂಪಡೆದ ಟಾಟಾ ಪವರ್ ಕಂಪನಿ

ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣದ ಹೆಜ್ಜೆ ಇಡಲು ಮುಂದಾಗಿದ್ದ ಟಾಟಾ ಪವರ್ ಕಂಪನಿಗೆ ಭಾರಿ ಹಿನ್ನಡೆಯಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಮುಂದೆ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ತಾನು...

SIR: ಮತದಾರರ ಮನೆಗೆ ಹೋಗದೆ ಕಚೇರಿಯಲ್ಲೇ ಕುಳಿತು ಫಾರ್ಮ್ ವಿತರಣೆ ಆರೋಪ, BLO ಗಳಿಗೆ ಎಚ್ಚರಿಕೆ ನೀಡಿದ ಆಯೋಗ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ, ರಾಜ್ಯ ಚುನಾವಣಾ ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮತದಾರರ ಮನೆ-ಮನೆಗೆ ಭೇಟಿ...

ಅಳುವ ಕಂದಮ್ಮಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಕೂಡಿಹಾಕ್ತಿದ್ದ ಇಬ್ಬರು ಕೇರ್‌ಟೇಕರ್ ಅರೆಸ್ಟ್

ಸಿಲಿಕಾನ್ ಸಿಟಿಯ ಬ್ರೂಕ್‌ಫೀಲ್ಡ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ 'ಕ್ಯಾಪ್‌ಜೆಮಿನಿ' ಕ್ಯಾಂಪಸ್‌ನ ಡೇ-ಕೇರ್ ಸೆಂಟರ್‌ನಲ್ಲಿ ಪುಟ್ಟ ಕಂದಮ್ಮಗಳನ್ನು ಬಾತ್‌ರೂಮ್ ಹಾಗೂ ವಾಷಿಂಗ್ ಮೆಷಿನ್‌ಗಳಲ್ಲಿ ಕೂಡಿಹಾಕಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರಕರಣದ...

“ನಾಗರಿಕರು ಸರ್ಕಾರದ ಗುಲಾಮರಲ್ಲ”: ಸಿಎಎ, ಜ್ಞಾನವಾಪಿ ವಿರೋಧಿ ಪ್ರತಿಭಟನೆ ಸಂಬಂಧ ಎಸ್‌ಡಿಪಿಐ ನಾಯಕನ ಗಡಿಪಾರು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

“ದೇಶದ ನಾಗರಿಕರು ಸರ್ಕಾರದ ಗುಲಾಮರಲ್ಲ. ಕೇವಲ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುವುದು ಅಥವಾ ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುವುದು ಒಬ್ಬ ನಾಗರಿಕನನ್ನು ಗಡಿಪಾರು ಮಾಡಲು ಕಾನೂನಾತ್ಮಕ ಕಾರಣವಾಗಲಾರದು,” ಎಂದು ಬಾಂಬೆ ಹೈಕೋರ್ಟ್‌ ಐತಿಹಾಸಿಕ...