Homeಮುಖಪುಟಈ ಬೀದಿಗಳಲ್ಲೆವೂ ಮಹಿಳೆಯರವು, ಹಗಲು ಮತ್ತು ಇರುಳು : ಸ್ತ್ರೀವಾದಿ ಚಿಂತಕಿ ವೋಲ್ಗಾ ಪ್ರತಿಪಾದನೆ

ಈ ಬೀದಿಗಳಲ್ಲೆವೂ ಮಹಿಳೆಯರವು, ಹಗಲು ಮತ್ತು ಇರುಳು : ಸ್ತ್ರೀವಾದಿ ಚಿಂತಕಿ ವೋಲ್ಗಾ ಪ್ರತಿಪಾದನೆ

- Advertisement -
- Advertisement -

ಮಹಿಳೆಯರು ಇಂಥ ಬಟ್ಟೆಗಳನ್ನು ಹಾಕಿಕೊಳ್ಳಬಾರದು, ರಾತ್ರಿವೇಳೆ ಹೆಣ್ಣು ಮಕ್ಕಳು ಹೊರಗೆ ಬರಬಾರದು ಎನ್ನುವ ವಾದಕ್ಕೆ ನಮ್ಮದು ಪ್ರತಿವಾದ ಇದೆ. ಅದೆಂದರೆ ರಾತ್ರಿವೇಳೆ ಪುರುಷರನ್ನೇ ಮನೆಯಲ್ಲಿ ಕೂಡಿಹಾಕಿ ರಾತ್ರಿಗಳನ್ನು, ಬೀದಿಗಳನ್ನು ನಾವು ವಶಪಡಿಸಿಕೊಳ್ಳಬೇಕು. ಏಕೆಂದರೆ ‘ಈ ಬೀದಿಗಳಲ್ಲೆವೂ ನಮ್ಮವು ಹಗಲು ಮತ್ತು ಇರುಳು’ ಎಂದು ಖ್ಯಾತ ಸ್ತ್ರೀವಾದಿ ಚಿಂತಕಿ ವೋಲ್ಗಾರವರು ಪ್ರತಿಪಾದಿಸಿದ್ದಾರೆ.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ವತಿಯಿಂದ ಮಂಡ್ಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿಕ್ಸೂಚಿ ಭಾಷಣದಲ್ಲಿ ಅವರು ಮಾತನಾಡಿದರು.

ಹೈದರಾಬಾದ್ ನ ಪ್ರಖ್ಯಾತ ಸ್ತ್ರೀವಾದಿ ಚಿಂತಕಿ ಮತ್ತು ಹೋರಾಟಗಾರ್ತಿಯಾದ ಅವರು, ‘ಮಹಿಳಾ ಬದುಕಿನ ಪಲ್ಲಟಗಳು’ ವಿಷಯದ ಕುರಿತು ಮಾತನಾಡಿ, ಈ ಶೀರ್ಷಿಕೆ ನಾವು ಬದುಕಿತ್ತಿರುವ ಸನ್ನಿವೇಶದಲ್ಲಿ ಅತ್ಯಂತ ಅಗತ್ಯದ ವಿಷಯವಾಗಿದೆ. ಮಹಿಳೆಯರು ಹೋರಾಟದಲ್ಲಿ ಚಾರಿತ್ರಿಕ ಏಳುಬೀಳುಗಳನ್ನು ಅನುಭವಿಸಿದ್ದಾರೆ. ಆದರೆ ಅದು ನಿರಂತರವಾಗಿ ನಡೆಯುತ್ತಲೇ ಇದೆ ಎಂದರು.

8 ಗಂಟೆಯ ಕೆಲಸಕ್ಕಾಗಿ, ವೋಟಿನ ಹಕ್ಕಿಗಾಗಿ, ಆಹಾರಕ್ಕಾಗಿ ನಡೆದ ದಿಟ್ಟ, ಧೀರೋಧಾತ್ತ ಹೋರಾಟ ನಡೆಸಿದ್ದಕ್ಕಾಗಿ ಅಂತರಾಷ್ಟ್ರೀಯ ಮಹಿಳಾ ದಿನವನ್ನಾಗಿ ಘೋಷಿಸಲಾಯಿತು. ಆಗ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದ ವರ್ಷ. ಮಹಿಳಾ ದೃಷ್ಟಿಯಿಂದ ಇದು ವಿಶೇಷವಾಗಿದ್ದು. ಏಕೆಂದರೆ ಪ್ರಪಂಚ ಮಹಿಳೆಯರನ್ನು ಮನುಷ್ಯರೆಂದು ಗುರುತಿಸಲು ಸಾಧ್ಯವಾಯಿತು. ಇದು ಹೋರಾಟದಿಂದ ಸಾಧ್ಯವಾಗಿದೆ ಎಂದರು.

ಸ್ತ್ರೀಯರಿಗೆ ಓದುವ ಅವಕಾಶ ಇತ್ತೀಚೆಗೆ ಮಾತ್ರ ದೊರೆಯಿತು. ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಶಿಕ್ಷಣ ಬೇಕು ಎನ್ನುವ ವಾದದ ಹಿಂದೆ ಒಂದು ಸ್ವಾರ್ಥವಿತ್ತು. ಮಹಿಳೆ ಶಿಕ್ಷಣ ಕಲಿತರೆ ಮನೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ ಮತ್ತು ಮಕ್ಕಳಿಗೆ ಪಾಠ ಹೇಳಿಕೊಡುತ್ತಾಳೆ ಎನ್ನುವುದಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಎಲ್ಲಾ ವಿವಿಗಳಲ್ಲಿ ಮಹಿಳಾ ಅಧ್ಯಯನ ಮತ್ತು ಸ್ತ್ರೀವಾದಿ ವಿಭಾಗಗಳನ್ನು ಹುಟ್ಟಿಹಾಕಬೇಕು. ಆಗ ಮಾತ್ರ ಮಹಿಳಾ ವಿಚಾರಗಳು ಹರಡಲು ಸಾಧ್ಯವಾಗುತ್ತದೆ ಎಂದರು.

ಮಹಿಳೆಯರ ಮೇಲೆ ನಡೆದ ದೌರ್ಜನ್ಯಗಳು ನೂರಾರು. ಆಂಧ್ರ ಪ್ರದೇಶದಲ್ಲಿ ಮಹಿಳೆಯರಿಗೆ ರಾತ್ರಿ ಶಾಲೆಗಳನ್ನು ತೆರೆಯುತ್ತಿದ್ದರು. ಅದರಲ್ಲಿ ಸರಾಯಿ ಅಂಗಡಿಗಳನ್ನು ಮಹಿಳೆಯರು ಮುಚ್ಚಿಸುವ ಪಾಠವೊಂದಿತ್ತು. ಅದನ್ನು ಓದಿಕೊಂಡ ಮಹಿಳೆಯರು ಅದೇ ರೀತಿಯ ದೊಡ್ಡ ಹೋರಾಟ ಮಾಡುತ್ತಾರೆ. ಈ ಹೋರಾಟವನ್ನು ಮಾಡಿದವರು ವಿದ್ಯಾವಂತರಲ್ಲ, ಗ್ರಾಮೀಣ ಹೆಣ್ಣು ಮಕ್ಕಳು. ಅವರು ಪೊಲೀಸರ ಮಧ್ಯೆ ಹೋರಾಟ ನಡೆಸಿದರು. ಸೆರೆಮನೆಯಲಿದ್ದು ಶ್ರಮಿಸಿದ್ದಾರೆ ಮತ್ತು ಕಲಿತಿದ್ದಾರೆ. ಮಹಿಳಾ ಸಂಘಗಳು ಬೆಳೆದರೆ ಸರ್ಕಾರದ ವಿರುದ್ಧ ನಿಲ್ಲುತ್ತಾರೆ ಎಂದು ಸರ್ಕಾರಗಳು ದಬ್ಬಾಳಿಕೆ ಆರಂಭಿಸಿದರೂ ಮಹಿಳೆಯರು ದಿಟ್ಟತೆಯಿಂದ ಹೋರಾಡಿದ್ದಾರೆ ಎಂದರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸಬೀಹಾ ಭೂಮಿಗೌಡರವರು ಉದ್ಘಾಟನಾ ಭಾಷಣದಲ್ಲಿ ಮಹಿಳಾ ಬದುಕು ಪಲ್ಲಟಗಳು ವಿಷಯದ ಕುರಿತ ವಿಚಾರ ಸಂಕಿರಣದ ಉದ್ಘಾಟನೆಯನ್ನು ಮಾಡಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಸಂತೋಷವಾಗಿದೆ, ನನಗೆ ಹೆಮ್ಮೆಯಾಗಿದೆ.
ಇಂದಿಗೆ ಎಂಟು ವರ್ಷಗಳ ಹಿಂದೆ ಮಹಿಳಾ ಬದುಕಿನ ದೌರ್ಜನ್ಯಗಳು, ಆಯಾಮಗಳು ಎಂಬ ವಿಷಯದ ಕುರಿತು ಮಂಗಳೂರಿನಲ್ಲಿ ವಿಚಾರ ಸಂಕಿರಣ ಹಮ್ಮಿಕೊಂಡಿದ್ದೆವು. ಅಲ್ಲಿಂದ ನಮ್ಮ ಈ ವೇದಿಕೆ ಆರಂಭಗೊಂಡಿದೆ ಎಂದರು.

2012ರ ನಿರ್ಭಯ ಪ್ರಕರಣ ಮತ್ತು ಅದಕ್ಕೂ ಮುಂಚೆ ಮಂಗಳೂರಿನ ಹೋಮ್‌ಸ್ಟೇ ಮೇಲೆ ಅಮಾನುಷ ದಾಳಿಗೆ ವಿರುದ್ಧವಾಗಿ ನಾವು ಮಾರ್ಚ್ 2013ರಲ್ಲಿ ಈ ವೇದಿಕೆಯನ್ನು ಹುಟ್ಟುಹಾಕಿದೆವು. ಮಂಗಳೂರು, ಮೈಸೂರು, ಬೆಂಗಳೂರು, ವಿಜಯಪುರ, ಕೊಪ್ಪಳ, ಶಿವಮೊಗ್ಗ ಮತ್ತು ಧಾರವಾಡದಲ್ಲಿ ಇದುವರೆಗೂ ವೇದಿಕೆಯು ಪ್ರತಿ ವರ್ಷ ಮಹಿಳಾ ದಿನ ಆಚರಿಸಿದೆ. ಅಲ್ಲಿಂದ ಇಲ್ಲಿಯವರೆಗೂ ನಡದು ಬಂದಿದ್ದೇವೆ ಎಂದರು.

ನಿರ್ಭಯಾ ಅತ್ಯಚಾರದ ಅಪರಾಧಿಗಳು ಇಂದು ಜೈಲಿನಲ್ಲಿದ್ದಾರೆ. ಗಲ್ಲಿಗೆ ಹೋಗುತ್ತಿದ್ದಾರೆ. ಆದರೆ ತಮ್ಮ ಕೃತ್ಯದ ಬಗ್ಗೆ ಅವರಿಗೆ ಪಶ್ಚಾತಾಪವಿಲ್ಲ ಎನ್ನುವುದು ದುಃಖದ ಸಂಗತಿ ಎಂದರು.

ಮಹಿಳೆಯರನ್ನು ಭೋಗದ ಸರಕನ್ನಾಗಿ ನೋಡುವುದು, ಅವರ ಮೇಲೆ ದೌರ್ಜನ್ಯ ಹೆಚ್ಚುತ್ತಿರುವುದು ಚಿಂತೆಯ ಸಂಗತಿಯಾಗಿದೆ. ಇದಕ್ಕೆ ಸಮಾಜ, ನ್ಯಾಯಾಲಯ ಮತ್ತು ಮಹಿಯರು ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಹುಡುಕಾಟ, ನಿರಂತರ ಶೋಧ ನಮ್ಮದಾಗಿದೆ.
ನಮ್ಮ ಈ ಪ್ರಯತ್ನದೊಂದಿಗೆ ಈ ಸಮಾಜದ ಯುವ ಪೀಳಿಗೆ ಅಧಿಕ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಆಶಾದಾಯಕ ಸಂಗತಿ. ದುಡಿಯುವ ವರ್ಗದ ಮಹಿಳೆಯರಿಂದ ಹಿಡಿದು ಬೌಧ್ಧಿಕ ವರ್ಗದವರೆಗೂ ಎಲ್ಲಾ ಸ್ಥರದ ಜನತೆ ಈ ಒಕ್ಕೂಟಕ್ಕೆ ಬೆಂಬಲ ನೀಡುತ್ತಿರುವುದು ನಮ್ಮ ಶಕ್ತಿಯನು ಹಿಮ್ಮಡಿಗೊಳಿಸಿದೆ ಎಂದರು.

2013ರಿಂದ 2020ಕ್ಕೆ ಬರುವಷ್ಟರಲ್ಲಿ ಕಾಲದ ಚಕ್ರ ಸ್ವಲ್ಪ ನಮ್ಮ ಕಡೆ ತಿರುಗಿದೆ. ಆರಂಭದ ವರ್ಷಗಳಲ್ಲಿ ಇದ್ದ ಬಿಕ್ಕಟ್ಟು ಸ್ವಲ್ಪ ಮಟ್ಟಿಗೆ ತಿಳಿವಾಗಿದೆ. ಹಿಂದೆ ಮಹಿಳೆಯರ ಪರವಾಗಿ ಒಂದು ಕಾರ್ಯಕ್ರಮ ಮಾಡಲು ವಿ.ವಿಯ ಕುಲಪತಿಗಳನ್ನು ಮನವೊಲಿಸಬೇಕಿತ್ತು, ಅವರ ಬಳಿ ಬೇಡಿಕೊಳ್ಳಬೇಕಿತ್ತು. ಆದರೆ ಈಗ ಅಷ್ಟು ಕಷ್ಟವಾಗುತ್ತಿಲ್ಲ. ನಿರ್ಧಾರ ತೆಗೆದುಕೊಳ್ಳುವ ಹಲವು ಜಾಗಗಳಲ್ಲಿ ಮಹಿಳೆಯರೇ ಬಂದಿರುವುದು ಪರಿಸ್ಥಿತಿಯನ್ನು ಅಲ್ಪ ಸುಧಾರಿಸಿದೆ ಎಂದು ತಿಳಿಸಿದರು.

ಎಳೆಯ ತಲೆಮಾರು, ಯುವಜನತೆ ನಮಗೆ ತುಂಬಾ ಪೂರಕವಾಗಿ ಸ್ಪಂದಿಸಿದ್ದಾರೆ. ಈ ವಿಚಾರಗಳು ತರಗತಿಯ ಒಳಗೆ ನಮಗೆ ಏಕೆ ಸಿಗುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ನಮ್ಮ ಒಕ್ಕೂಟದ ಹೆಸರು ಈಗ ಸ್ವಲ್ಪ ನಮ್ಮ ಬದುಕಿನ ಭಾಗ ಅನ್ನುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಎಂದರು.

ಸಮಾವೇಶ ನಡೆಯುವ ಜಿಲ್ಲೆಯ ಸ್ಥಳೀಯ ಸಮಸ್ಯೆಯನ್ನು ಕೇಂದ್ರವಾಗಿಟ್ಟುಕೊಂಡು ವೇದಿಕೆ ಪ್ರತಿ ವರ್ಷ ಕಾರ್ಯಕ್ರಮ ರೂಪಿಸುತ್ತಿದೆ. ಮಂಡ್ಯ ಜಿಲ್ಲೆಯು ಕೈಗಾರೀಕರಣದ ಹೊಡೆತಕ್ಕೆ ಸಿಲುಕಿದೆ. ಕೃಷಿ ಬಿಕ್ಕಟ್ಟು ಎದುರಾಗಿದೆ. ಇದೆಲ್ಲದರಿಂದ ಮಹಿಳೆಯರು ನಲುಗಿದ್ದಾರೆ. ಪುರುಷ ಪ್ರಧಾನ ಮತ್ತು ಊಳಿಗಮಾನ್ಯ ಮನಸ್ಥಿತಿ ಇನ್ನೂ ಇಲ್ಲಿ ಜೀವಂತವಾಗಿದೆ. ಇವುಗಳನ್ನು ಎದರಿಸುವ ಬಗೆ ಕುರಿತು ಇಂದು ವಿಚಾರ ಸಂಕಿರಣ ನಡೆಯಲಿದೆ ಎಂದರು.

ಜನರನ್ನು ಗಾಢವಾಗಿ ಪ್ರಭಾವಿಸಿದ ಮಹಿಳೆಯರ ಪಡಿಯಚ್ಚು ನಿರ್ಮಾಣದಲ್ಲಿ, ಮಹಿಳೆಯರು ಗೌರವಿಸುವ ಆದರೆ ಅವರದಲ್ಲದ ಪುರಾಣಗಳನ್ನು ಒದುವುದು, ಅರ್ಥಮಾಡಿಕೊಳ್ಳುವುದು, ಅದನ್ನು ಒಡೆದು ಪುನರ್‌ರಚಿಸುವುದಕ್ಕೆ ಭಾರತೀಯ ಎಲ್ಲಾ ಭಾಷೆಯ ಮಹಿಳಾ ಲೇಖಕರು ಶ್ರಮಿಸಿದ್ದಾರೆ. ದೇಹಮೂಲದಿಂದ ಮಾತ್ರ ಪ್ರಕಟಗೊಳ್ಳುತ್ತಿದ್ದ ಮಹಿಳೆಯ ವ್ಯಕ್ತಿತ್ವವನ್ನು ಮನೋಮೂಲದಿಂದ ಅರ್ಥ ಮಾಡಿಕೊಳ್ಳುವಂತೆ ಶ್ರಮಿಸುತ್ತಿದ್ದಾರೆ. ಆ ಆಶಯಕ್ಕೆ ಜಯ ಸಿಗಲಿ ಎಂದರು.

ರೈತನಾಯಕಿ ಸುನಂದಾ ಜಯರಾಂ ಸಂವಿಧಾನದ ಪೀಠಿಕೆ ಓದಿ ಚಾಲನೆ ನೀಡಿದರು. ಹೆಣ್ಣೋಟದ ಹೆಗ್ಗಳಿಕೆ ಪುಸ್ತಕ ಬಿಡುಗಡೆಯಾಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...