Homeಮುಖಪುಟಅಂತಾರಾಷ್ಟ್ರೀಯ ಮಹಿಳಾ ದಿನ; ಸ್ತ್ರೀ ಪುರುಷರಲ್ಲಿ ಸಮಾನತೆ ಸಾಧ್ಯವೇ?: ಎಚ್ ಎಸ್ ಶ್ರೀಮತಿ

ಅಂತಾರಾಷ್ಟ್ರೀಯ ಮಹಿಳಾ ದಿನ; ಸ್ತ್ರೀ ಪುರುಷರಲ್ಲಿ ಸಮಾನತೆ ಸಾಧ್ಯವೇ?: ಎಚ್ ಎಸ್ ಶ್ರೀಮತಿ

ಅಧಿಕಾರ ಮತ್ತು ಅಧೀನತೆಯ ಸೂತ್ರವನ್ನು ನಿರಂತರವಾಗಿ ಉಳಿಸುವುದೇ ಪಿತೃಪ್ರಧಾನ ವ್ಯವಸ್ಥೆಯ ಮುಖ್ಯ ತಂತ್ರಗಾರಿಕೆ. ಈ ಸೂತ್ರಕ್ಕೆ ಬದ್ಧವಾಗಿ ಉಳಿಯುವಂತೆ ಜನರನ್ನು ಒತ್ತಾಯಿಸುವ ತರಬೇತಿಯನ್ನು ಅದು ಈ ವ್ಯವಸ್ಥೆಯ ಎಲ್ಲ ಸಾಂಸ್ಥಿಕ ವಲಯಗಳಲ್ಲಿಯೂ ಜಾರಿಯಲ್ಲಿ ಇಟ್ಟಿದೆ. ಹಾಗಾಗಿ ಯಾರಿಗೂ ಈ ತರಬೇತಿಯ ಪಾಠಗಳಿಂದ ಮುಕ್ತಿಯಿಲ್ಲ. ನಿರಂತರ ಪರಿಶ್ರಮದಿಂದ ಮಾತ್ರವೇ ಈ ಪಾಠಗಳನ್ನು ಮರೆಯುವ ಬಗೆಗಳನ್ನು ಶೋಧಿಸಬೇಕಾಗುತ್ತದೆ.

- Advertisement -
- Advertisement -

ಸ್ತ್ರೀವಾದ ಹೋರಾಟ ಪ್ರತಿ ಪುರುಷ ಮತ್ತು ಮಹಿಳೆ ವೈಯಕ್ತಿಕವಾಗಿಯೇ ನಿಭಾಯಿಸಬೇಕಾದ ಹೊಣೆ

ಸ್ತ್ರಿವಾದ ಹೋರಾಟ ಪ್ರತಿ ಪುರುಷ ಮತ್ತು ಮಹಿಳೆ ವೈಯಕ್ತಿಕವಾಗಿಯೇ ನಿಭಾಯಿಸಬೇಕಾದ ಹೊಣೆ
ಮಾನವರು ಸಮುದಾಯಗಳಾಗಿ ಬದುಕಲು ತೊಡಗಿದ ಆರಂಭದಲ್ಲಿ ಗಂಡು ಮತ್ತು ಹೆಣ್ಣುಗಳೆಂಬ ತಾರತಮ್ಯಗಳೇನೂ ಇರಲಿಲ್ಲ. ಮುಂದುವರೆದ ಒಂದು ಹಂತದಲ್ಲಿ ಗಂಡಸರ ಪ್ರಾಬಲ್ಯಕ್ಕೆ ಹೆಚ್ಚಿನ ಅವಕಾಶಗಳು ತೆರೆದುಕೊಂಡವು. ಇದನ್ನೇ ನಿರಂತರವಾಗಿಸುವ ಪ್ರಯತ್ನಗಳಲ್ಲಿ ಗಂಡಸರು ತಮ್ಮ ಜೊತೆಗೇ ಇದ್ದ ಹೆಂಗಸರ ಮೇಲೆ ಅಧಿಕಾರವನ್ನು ಸ್ಥಾಪಿಸುವ ಪ್ರಯತ್ನಗಳಲ್ಲಿ ತೊಡಗಿದರು. ಗಂಡು ಮತ್ತು ಹೆಣ್ಣುಗಳ ಸಂಬಂಧಗಳಲ್ಲಿ ಯಜಮಾನಿಕೆ ಮತ್ತು ಅಧೀನತೆ ಎಂಬ ಶ್ರೇಣೀಕರಣ ಮೊದಲಾಯಿತು.

ಇದೇ ಮಾನವ ಚರಿತ್ರೆಯಲ್ಲಿ ಕಾಣಿಸಿಕೊಂಡ ಮೊತ್ತಮೊದಲ ಶ್ರೇಣೀಕರಣ ಎಂದು ಏಂಗೆಲ್ಸ್ ಗುರುತಿಸುತ್ತಾನೆ. ಮುಂದೆ ಈ ತಂತ್ರಗಾರಿಕೆಯೇ ಪ್ರಯೋಗಗೊಳ್ಳುತ್ತಾ ಜಾತಿ, ಜನಾಂಗ, ಕೋಮು, ವರ್ಗ ಎಂಬ ಲೆಕ್ಕವಿಲ್ಲದಷ್ಟು ಶ್ರೇಣೀಕರಣಗಳು ಜಾರಿಗೊಂಡವು. ಎಲ್ಲ ಬಗೆಯ ಶ್ರೇಣೀಕರಣಗಳೂ ಪ್ರಬಲರಾದವರು ದುರ್ಬಲರಾದವರ ಮೇಲೆ ಅಧಿಕಾರವನ್ನು ಸ್ಥಾಪಿಸುವ ತಂತ್ರಗಾರಿಕೆಗಳೇ ಆಗಿವೆ. ಇಂದಿಗೂ ಸಮಾಜ ವ್ಯವಸ್ಥೆ ಎಂದರೆ ಅಧಿಕಾರ ಮತ್ತು ಅಧೀನತೆಗಳ ಸಂಘರ್ಷ ಮಾತ್ರವೇ ಆಗಿದೆ. ಕಲ್ಪಿತ ಶತ್ರುವಿನೊಂದಿಗೆ ನಡೆಸುತ್ತಿರುವ ಈ ಸಂಘರ್ಷವು ಎಂದಿಗೂ ಮುಗಿಯಲಾರದು. ಈ ಎಲ್ಲ ಸಂಗತಿಗಳನ್ನೂ ಸಾಮಾಜಿಕ ಕಳಕಳಿಯ ಚಿಂತನಶೀಲರೂ, ಸಂವೇದನಾಶೀಲರೂ ಚರ್ಚಿಸುತ್ತಲೇ ಬಂದಿದ್ದಾರೆ.

ಸ್ತ್ರೀವಾದೀ ಚಿಂತನೆಯು ಕೂಡಾ ಪುರುಷರನ್ನು ಶತ್ರುವಾಗಿ ಕಲ್ಪಿಸಿಕೊಂಡೇ ಹುಟ್ಟಿದ್ದು. ಆದರೆ ಇಂದು ಈ ಚಿಂತನೆಯು ಅತ್ಯಂತ ಸೂಕ್ಷ್ಮವಾದ ದಾರ್ಶನಿಕ ಒಳನೋಟಗಳನ್ನು ಕಾಣಿಸಬಲ್ಲ ಪ್ರಬುದ್ಧತೆಯದಾಗಿ ಬೆಳೆದಿದೆ. ಎಲ್ಲ ದುರ್ಬಲ ಸಮುದಾಯಗಳೂ ನಿರಂತರವಾಗಿ ತೊಡಗಿಕೊಂಡೇ ಬರುತ್ತಿರುವ ಹೋರಾಟಗಳಿಗೆ ದಾರಿಗಳನ್ನು ಕಾಣಿಸಬಲ್ಲ ಸಾಮರ್ಥ್ಯ ಈ ಸ್ತ್ರೀವಾದೀ ದಾರ್ಶನಿಕ ನೋಟಕ್ಕೆ ಇದೆ. ಯಾವುದೇ ಹೋರಾಟಗಳು ಹೊಂದಿರಬಹುದಾದ ವೈಚಾರಿಕ ಆಶಯಗಳು, ಸಾಮರ್ಥ್ಯಗಳು ಕೇವಲ ಆರಂಭಿಕ ಬಿಂದುಗಳು ಮಾತ್ರವೇ ಆಗಿರುತ್ತವೆ; ಇವುಗಳ ನಿರ್ಣಾಯಕ ಅಂತ್ಯವಾಗಿ ಅವು ನಮ್ಮ ಜೀವನಕ್ರಮಗಳಲ್ಲಿ ಕ್ರಿಯಾಶೀಲವಾಗಬೇಕು ಎಂಬ ಒಳನೋಟವನ್ನು ಸ್ತ್ರೀವಾದೀ ದಾರ್ಶನಿಕತೆಯು ನೀಡುತ್ತದೆ. ಸಮಾಜವ್ಯವಸ್ಥೆಯಲ್ಲಿ ನಿರ್ಮಾಣಗೊಂಡಿರುವ ಶ್ರೇಣೀಕರಣಗಳೂ, ಆ ಕುರಿತು ನಡೆಯುತ್ತಿರುವ ಸಾಮಾಜಿಕ ಹೋರಾಟಗಳೂ ಈ ಮಾತನ್ನು ಗಮನಿಸುವ ಅಗತ್ಯವಿದೆ.

ಇಂದಿನ ಸ್ತ್ರೀವಾದಿಗಳು ಎಲ್ಲರೂ ಸ್ತ್ರೀವಾದಿಗಳಾಗೋಣ, ಸ್ತ್ರೀವಾದವು ನಮ್ಮೆಲ್ಲರ
ಅಗತ್ಯವೇ ಆಗಿದೆ ಎಂದು ಹೇಳುತ್ತಿದ್ದಾರೆ. ಈವರೆಗೂ ಸ್ತ್ರೀವಾದ ಎಂದರೆ ಪುರುಷರೊಂದಿಗೆ ಸಾಮಾಜಿಕ ಸಮಾನತೆ, ಮಹಿಳಾ ಸ್ವಾತಂತ್ರ್ಯ ಎಂಬ ಮಾತುಗಳೇ ಕೇಳಿಬರುತ್ತಿದ್ದವು. ಈಗ ಇದ್ದಕ್ಕಿದ್ದಂತೆ ಸ್ತ್ರೀವಾದವನ್ನು ಎಲ್ಲರ ಅಗತ್ಯ ಎಂದು ಹೇಳಿದರೆ ಸುಲಭವಾಗಿ ನಂಬಲಾಗದು. ಆದರೆ ಇದು ತುಂಬಾ ಸೂಕ್ಷ್ಮವಾದ ಒಂದು ಚಿಂತನೆ. ಎಲ್ಲ ಬಗೆಯ ಸಾಮಾಜಿಕ ಶ್ರೇಣೀಕರಣಗಳಲ್ಲಿಯೂ ಪುರುಷರು ಮತ್ತು ಮಹಿಳೆಯರು ಹೆಚ್ಚೂಕಡಿಮೆ ಸಮಸಂಖ್ಯೆಯಲ್ಲಿ ಇದ್ದಾರೆ. ಇವರಿಬ್ಬರ ನಡುವೆ ಸಮಾಜ ವ್ಯವಸ್ಥೆ ಎಂಬ ಅಧಿಕಾರ ಕೇಂದ್ರವು ಶತ್ರುತ್ವವನ್ನು ಹುಟ್ಟುಹಾಕಿದೆ.

ನಮ್ಮಲ್ಲಿ ನಡೆಯುತ್ತಾ ಬಂದಿರುವ ವೈಚಾರಿಕ ಚರ್ಚೆಗಳು ಇವನ್ನೆಲ್ಲಾ ಬಿಡಿಬಿಡಿಯಾಗಿ ಸೂಕ್ಷ್ಮ್ಮಗಳಲ್ಲಿ ವಿವರಿಸುತ್ತಿವೆ. ಇಂಥ ಚರ್ಚೆಗಳ ಕೊನೆಯಲ್ಲಿ, ಸಾಧಾರಣವಾಗಿ, ಸಮಾಜವು ಬದಲಾಗಬೇಕು, ಮುಖ್ಯವಾಗಿ ಪುರುಷರ ಮನಸ್ಥಿತಿಯಲ್ಲಿ ಪರಿವರ್ತನೆಗಳು ಬರಬೇಕು ಎಂಬ ಅಮೂರ್ತವಾದ ಮಾತುಗಳಷ್ಟೇ ಕೇಳಿಸುತ್ತವೆ. ವೈಚಾರಿಕ ಚರ್ಚೆಗಳಲ್ಲಿ ಅಮೂರ್ತವಾಗಿಯೇ ಉಳಿದುಬಿಡುವ ಆಶಯಗಳು ನಮ್ಮೆಲ್ಲರ ಬದುಕುಗಳಲ್ಲಿ, ನಮ್ಮ ಜೀವನ ಕ್ರಮಗಳ ಎಲ್ಲ ಕ್ಷಣಗಳಲ್ಲಿಯೂ ಸಾಕಾರಗೊಳ್ಳುವ ಹಾದಿಗಳನ್ನು ಕುರಿತು ಸ್ತ್ರೀವಾದೀ ದಾರ್ಶನಿಕತೆಯು ಮಾತನಾಡುತ್ತದೆ.

ಆದರೆ ಈ ಯಾವ ಮಾತುಗಳನ್ನೂ ಒಂದು ವೈಚಾರಿಕ ಆಕೃತಿಯಾಗಿ ಕಟ್ಟಿ ನಿರೂಪಿಸಲು ಸಾಧ್ಯವಾಗುವುದಿಲ್ಲ. ಇದೊಂದು ಬಗೆಯ ವಿಶಿಷ್ಟವೂ, ಕ್ರಾಂತಿಕಾರಿಯೂ ಆದ ಹೋರಾಟದ ಬಗೆ. ಇಲ್ಲಿ ಪ್ರತಿಯೊಬ್ಬರೂ ಸಹಭಾಗಿಗಳು. ಇಲ್ಲಿ ನೇತಾರರೆನಿಸಿ, ಮಾರ್ಗದರ್ಶಕರೆನಿಸಿ ಯಾರೂ ನಿಂತಿರುವುದಿಲ್ಲ. ಇಲ್ಲಿ ಯಾರೂ ಹಿಂಬಾಲಕರಲ್ಲ. ಇಲ್ಲಿನ ಹೋರಾಟದ ಒಟ್ಟು ಚಿಂತನೆ ಸಾಮುದಾಯಿಕವಾದದ್ದೇ. ಆದರೆ ಹೋರಾಟವು ಮಾತ್ರ ಪ್ರತಿಯೊಬ್ಬರೂ ವೈಯಕ್ತಿಕವಾಗಿಯೇ ನಿಭಾಯಿಸಬೇಕಾದ ಹೊಣೆ ಎನಿಸಿ ನಿರಂತರವಾಗಿ ನಡೆಯಬೇಕು.

ಮಹಿಳೆಯರು ಮತ್ತು ಪುರುಷರು ತೀರಾ ವೈಯಕ್ತಿಕ ನೆಲೆಗಳಿಂದ ತೊಡಗಿ ಹಲವಾರು ಸಾರ್ವಜನಿಕ ವಲಯಗಳಲ್ಲಿ ಭೇಟಿಯಾಗುತ್ತಿರುತ್ತಾರೆ. ಅವರ ನಡುವೆ ಬರುವ ಹಲವು ಬಗೆಯ ಸಂಬಂಧಗಳಲ್ಲಿ ಅವೆಷ್ಟೋ ಮಾತುಕತೆಗಳು ನಡೆಯುತ್ತವೆ. ಕೊಡುಕೊಳ್ಳುವ ವ್ಯವಹಾರಗಳಲ್ಲಿ ಅವೆಷ್ಟೋ ರೂಢಿಗತ ವರ್ತನಾವಿಧಾನಗಳೂ ಇರುತ್ತವೆ. ಈ ಎಲ್ಲ ಕ್ಷಣಗಳಲ್ಲಿಯೂ ನಮ್ಮ ನಮ್ಮ ಮಾತುಕತೆಗಳನ್ನು, ವರ್ತನಾವಿಧಾನಗಳನ್ನು ಸೂಕ್ಷ್ಮ ಸಂವೇದನೆಗಳಲ್ಲಿ ಗಮನಿಸಿಕೊಳ್ಳಲು ನಮಗೆ ಸಾಧ್ಯವಾಗಲು ತೊಡಗಿದರೆ, ಹೋರಾಟವು ಸರಿದಾರಿಯಲ್ಲಿ ಸಾಗಿದೆ ಎಂದೇ ಅರ್ಥ. ಆದರೆ ಈ ಗಮನಿಸುವಿಕೆ ಮತ್ತು ತಿದ್ದಿಕೊಳ್ಳುವ ಕ್ರಿಯೆ ಎಂದರೆ ಒಮ್ಮೆಗೇ ಮುಗಿಯುತ್ತದೆ ಎಂದಿಲ್ಲ. ನಮಗೇ ತಿಳಿಯದೆಯೂ ನಾವು ಹಳೆಯ ಚಾಳಿಯ ಮಾತುಕತೆಗಳಿಗೆ, ವರ್ತನೆಗಳಿಗೆ ಹೊರಳಿಬಿಟ್ಟಿರುತ್ತೇವೆ. ಈ ಸೂಕ್ಷ್ಮದ ಎಚ್ಚರದಲ್ಲಿ ನಾವು ಸದಾಕಾಲವೂ ಇರಬೇಕಾಗುತ್ತದೆ.

ಅಧಿಕಾರ ಮತ್ತು ಅಧೀನತೆಯ ಸೂತ್ರವನ್ನು ನಿರಂತರವಾಗಿ ಉಳಿಸುವುದೇ ಪಿತೃಪ್ರಧಾನ ವ್ಯವಸ್ಥೆಯ ಮುಖ್ಯ ತಂತ್ರಗಾರಿಕೆ. ಈ ಸೂತ್ರಕ್ಕೆ ಬದ್ಧವಾಗಿ ಉಳಿಯುವಂತೆ ಜನರನ್ನು ಒತ್ತಾಯಿಸುವ ತರಬೇತಿಯನ್ನು ಅದು ಈ ವ್ಯವಸ್ಥೆಯ ಎಲ್ಲ ಸಾಂಸ್ಥಿಕ ವಲಯಗಳಲ್ಲಿಯೂ ಜಾರಿಯಲ್ಲಿ ಇಟ್ಟಿದೆ. ಹಾಗಾಗಿ ಯಾರಿಗೂ ಈ ತರಬೇತಿಯ ಪಾಠಗಳಿಂದ ಮುಕ್ತಿಯಿಲ್ಲ. ನಿರಂತರ ಪರಿಶ್ರಮದಿಂದ ಮಾತ್ರವೇ ಈ ಪಾಠಗಳನ್ನು ಮರೆಯುವ ಬಗೆಗಳನ್ನು ಶೋಧಿಸಬೇಕಾಗುತ್ತದೆ. ಏಕೆಂದರೆ ನಮ್ಮ ಅನುಭವ ಲೋಕದ ಪ್ರೀತಿ, ಗೌರವ, ಸಮಾನತೆ ಎಂಬ ಭಾವನೆಗಳನ್ನು ಮಾತ್ರವೇ ಅಲ್ಲ, ಅವುಗಳನ್ನು ವ್ಯಕ್ತಪಡಿಸುವ ಬಗೆಗಳನ್ನು ಕೂಡಾ ಆ ತರಬೇತಿಯೇ ವ್ಯಾಖ್ಯಾನಿಸಿಬಿಡುತ್ತದೆ.

ಉದಾಹರಣೆಗೆ, ಪುರುಷರು ಮಹಿಳೆಯರಿಗೆ ಪ್ರೀತಿ ಗೌರವಗಳನ್ನು, ವಸ್ತುಗಳನ್ನು ಕೊಡುವ ಮೂಲಕ ತೋರಿಸಬೇಕು, ಮತ್ತು ಮಹಿಳೆಯರು ಆ ಭಾವಗಳನ್ನು ಸೇವೆಯ ಮೂಲಕ ತೋರಿಸಬೇಕು ಎಂಬ ಪಾಠವನ್ನು ನಾವೆಲ್ಲರೂ ಕಲಿತಿದ್ದೇವೆ ಮತ್ತು ಹಾಗೆಯೇ ವರ್ತಿಸುತ್ತೇವೆ. ನಮ್ಮೆಲ್ಲರ ಬದುಕುಗಳ ಎಲ್ಲ ಕ್ಷಣಗಳೂ ಈ ಮಾದರಿಯವೇ ಆಗಿವೆ ಎಂಬುದಕ್ಕೆ ಉದಾಹರಣೆಗಳನ್ನು ಕೊನೆಯಿಲ್ಲದೆ ಜೋಡಿಸುತ್ತಲೇ ಹೋಗಬಹುದು. ಗಂಡಸರಾಗಲೀ, ಹೆಂಗಸರಾಗಲೀ ಇಷ್ಟೆಲ್ಲವನ್ನೂ ಚಿಂತಿಸಿ ಸಂಬಂಧಗಳನ್ನು ನಿಭಾಯಿಸುತ್ತಾರೆ ಎಂದೇನಲ್ಲ. ನಮಗೆ ದೊರೆಯುವ ತರಬೇತಿಗಳು ಅಷ್ಟು ಗಾಢವಾದವು ಎಂಬುದನ್ನು ನಾವು ತಿಳಿಯಬೇಕು.

ಅಧಿಕಾರ ಮತ್ತು ಅಧೀನತೆಯ ಸಮೀಕರಣವು ಮಾತ್ರ ಎಲ್ಲಿಯೂ ಸಡಿಲುಗೊಳ್ಳದಂತೆ ಕಾಯುವ ತರಬೇತಿಯ ರಾಜಕಾರಣವನ್ನು ಸುಲಭದಲ್ಲಿ ಅರ್ಥಮಾಡಿಕೊಳ್ಳುವುದು ಆಗದ ಮಾತು. ಆದರೂ ಈ ರಾಜಕಾರಣವನ್ನು ಭೇದಿಸದ ಹೊರತು ಯಾವ ಹೋರಾಟಗಳಿಗೂ ಅರ್ಥವೇ ಉಳಿಯುವುದಿಲ್ಲ. ಸ್ತ್ರೀವಾದೀ ದಾರ್ಶನಿಕತೆಯು ಈ ಹಾದಿಯಲ್ಲಿ ಬೆಳಕನ್ನು ತೋರುವ ಸಾಮರ್ಥ್ಯದ್ದಾಗಿದೆ. ಮಹಿಳೆಯರೂ, ಪುರುಷರೂ ಕೂಡಿಯೇ ಸ್ತ್ರೀವಾದಿಗಳಾಗಬೇಕು ಎಂದರೆ ಈ ಹಾದಿಯಲ್ಲಿ ನಡೆಯೋಣ ಎಂದಷ್ಟೇ ಅರ್ಥ. ವ್ಯವಸ್ಥೆಯ ತರಬೇತಿಯ ಪಾಠಗಳನ್ನು ನಾವೆಲ್ಲರೂ ಮರೆಯಬೇಕು.

ಅಧಿಕಾರ ಮತ್ತು ಅಧೀನತೆಯ ಸಮೀಕರಣವನ್ನು ನಿರಾಕರಿಸಿ ನಿಲ್ಲಬೇಕು. ಇದು ಮಾತ್ರವೇ ಸಮಸಮಾಜದ ಕನಸುಗಳನ್ನು ಸಾಕಾರಗೊಳಿಸಬಲ್ಲುದು. ಈ ಹೋರಾಟದ ಕ್ರಮವು ಸ್ಪಷ್ಟವಾಗಿದೆ. ವ್ಯವಸ್ಥೆಯು ನೀಡಿದ ತರಬೇತಿಯ ಪಾಠಗಳನ್ನು ಮರೆಯುವುದು ಎಂದರೆ ನಮ್ಮನಮ್ಮ ಮಾತುಕತೆಗಳನ್ನು, ವರ್ತನೆಗಳನ್ನು ಅನುಕ್ಷಣವೂ ಗಮನಿಸಿಕೊಳ್ಳುವ ವಿವೇಚನೆಯನ್ನು ಬೆಳೆಸಿಕೊಳ್ಳುವುದು; ಮತ್ತು ಇದನ್ನೇ ಉಸಿರಾಡುವ, ಜೀವಿಸುವ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು. ಈ ಪ್ರಯತ್ನವು ನಮ್ಮ ಜೀವನ ಕ್ರಮಗಳಲ್ಲಿ ಹಾಸುಹೊಕ್ಕಾಗಿ ನೆಲೆಗೊಳ್ಳಬೇಕು.

ಎಚ್ ಎಸ್ ಶ್ರೀಮತಿ

ಎಚ್ ಎಸ್ ಶ್ರೀಮತಿ
ಕನ್ನಡದ ಸ್ತ್ರೀವಾದಿ ಚಿಂತಕಿ ಮತ್ತು ಲೇಖಕಿ. ಮಹಾಶ್ವೇತಾ ದೇವಿಯವರ ’ರುಡಾಲಿ’, ’ಹಜಾರ್ ಚೌರಾಶೀರ ಮಾ’, ಸಿಮೋನ್ ದ ಬೋವ ಅವರ ‘ದ ಸೆಕಂಡ್ ಸೆಕ್ಸ್’, ಬೆಟ್ಟಿ ಫ್ರೀಡನ್ ಅವರ ’ದ ಫೆಮಿನಿಸ್ಟ್ ಮಿಸ್ಟಿಕ್’, ಬೆಲ್ ಹುಕ್ಸ್ ಅವರ ’ಎಲ್ಲರಿಗಾಗಿ ಸ್ತ್ರೀವಾದ’ ಸೇರಿದಂತೆ ಹಲವು ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಲವು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿರುವ ಶ್ರೀಮತಿ ಅವರು ’ಸ್ತ್ರೀವಾದ’, ’ಸ್ತ್ರೀವಾದ : ಪಾರಿಭಾಷಿಕ ಪದಕೋಶ’, ’ಗೌರಿ ದುಃಖ’ ಸೇರಿದಂತೆ ಇನ್ನು ಹಲವಾರು ಪುಸ್ತಕಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ.


ಇದನ್ನೂ ಓದಿ: ದೌರ್ಜನ್ಯವನ್ನು ಕೊನೆಗಾಣಿಸಲು ಸ್ತ್ರೀವಾದೀ ಚಳುವಳಿ “ಸ್ತ್ರೀವಾದ: ಅಂಚಿನಿಂದ ಕೇಂದ್ರದೆಡೆಗೆ” ಪುಸ್ತಕದ ಅಧ್ಯಾಯವೊಂದರ ಆಯ್ದ ಭಾಗ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...