Homeಮುಖಪುಟಭ್ರಷ್ಟಾಚಾರ ತನಿಖೆಗೆ ಅಡ್ಡಿ ಏಕೆ? : ಹೆಚ್.ಕೆ.ಪಾಟೀಲ್‍ರವರ ಸಂದರ್ಶನ

ಭ್ರಷ್ಟಾಚಾರ ತನಿಖೆಗೆ ಅಡ್ಡಿ ಏಕೆ? : ಹೆಚ್.ಕೆ.ಪಾಟೀಲ್‍ರವರ ಸಂದರ್ಶನ

"ಶೆರೆ ಅಂಗಡಿಯೂ ತೆರೆದಿರುವಾಗ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಓಡಾಡಿದರೆ ತೊಂದರೆ ಅನ್ನುತ್ತೆ ಅನ್ನೋದು ಸರಿಯಾ?"

- Advertisement -
- Advertisement -

ಪತ್ರಿಕೆ: ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಪರಿಶೀಲನೆಗೆ ಸ್ಪೀಕರ್ ತಡೆ ನೀಡಬಹುದಾ?

ಎಚ್.ಕೆ.ಪಾಟೀಲ್ : ಅವರು ನೀವು ಇದರ ಪರಿಶೀಲನೆ ಮಾಡಬೇಡಿ ಎಂದು ಹೇಳಕ್ಕೆ ಆಗಲ್ಲ. ಕೊರೊನಾ ಸೋಂಕಿನ ಕಾರಣಕ್ಕೆ ನಿಮ್ಮ ಹಿತದೃಷ್ಟಿಯಿಂದ ಅದಕ್ಕೆ ಅವಕಾಶ ಕೊಡುವುದಿಲ್ಲ ಎನ್ನುವ ಹಾಗೆ ಹೇಳಿದ್ದಾರೆ. ಆದರೆ ಶೆರೆ ಅಂಗಡಿ ಓಪೆನ್ ಮಾಡಿದ್ದಾರೆ. ಬಸ್ಸುಗಳು, ರೈಲುಗಳನ್ನು ಓಡಿಸ್ತಿದಾರೆ. ವ್ಯಾಪಾರ ನಡೀತಿದೆ. ದೇವಸ್ಥಾನಗಳು, ಮಸೀದಿ, ಚರ್ಚ್‍ಗಳಿಗೆ ಅವಕಾಶ ಕೊಡ್ತೀವಿ ಅಂತಿದಾರೆ. ಸಾರ್ವಜನಿಕರಿಗೆ ಚಿಕಿತ್ಸೆ ಹೇಗೆ ನಡೀತಿದೆ, ಎಲ್ಲವೂ ಸರಿಯಾಗಿದೆಯಾ, ಸರ್ಕಾರ ಯಾವ ಅನುಕೂಲಗಳನ್ನ ಕಲ್ಪಿಸಿದೆ ಅಂತ ಶಾಸನಸಭೆಯ ಸದಸ್ಯರು ಇರುವ ಸಮಿತಿಗೆ ಮಾತ್ರ ತೊಂದರೆ ಆಗಿಬಿಡುತ್ತದಾ? ಇದರಿಂದ ನಾವು ಅರ್ಥ ಮಾಡಿಕೊಳ್ಳಬೇಕು.

ಪತ್ರಿಕೆ: ಹಾಗಾದರೆ ನಿಮಗೆ ಬಂದಿರುವ ಭ್ರಷ್ಟಾಚಾರದ ಕುರಿತ ದೂರಿನ ತನಿಖೆ ಮಾಡಲು ಏನೂ ಅಡ್ಡಿಯಿಲ್ಲ ಅಲ್ಲವಾ?

ಎಚ್.ಕೆ.ಪಾಟೀಲ್: ನಾವು ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳಿಗೆ ಸಂಬಂಧಪಟ್ಟ ದೂರುಗಳ ಆಧಾರದ ಮೇಲೆ ಪರಿಶೀಲನೆ ಮಾಡಿ ವರದಿ ಕೊಡಿ ಎಂದು ಕೇಳಿದ್ದೇವೆ. ಅವರು ನಮಗೆ ಇದುವರೆಗೂ ಏನನ್ನೂ ಕೊಟ್ಟಿಲ್ಲ. ಇಂದು ನಮ್ಮ ಸಮಿತಿ ಸಭೆ ಇತ್ತು. ಅಲ್ಲಿ ಇದನ್ನ ಗಮನಕ್ಕೆ ತೆಗೆದುಕೊಂಡಿದೀವಿ, ಮುಂದಿನ ಮಂಗಳವಾರದ ಒಳಗೆ ಅವರು ಉತ್ತರ ಕೊಡಲಿಲ್ಲ ಅಂದರೆ ಮುಂದಿನ ಕ್ರಮಕ್ಕೆ ಮುಂದಾಗ್ತೀವಿ.

ಪತ್ರಿಕೆ: ಅಂದರೆ ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡ್ತೀವಿ ಅಂದಿದ್ರಲ್ಲಾ, ಅದಕ್ಕೆ ಮುಂದಾಗ್ತೀರಾ?

ಎಚ್.ಕೆ.ಪಾಟೀಲ್: ಇಲ್ಲಾ, ಇವತ್ತು ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಒಂದು ತೀರ್ಮಾನಕ್ಕೆ ಬಂದಿದೀವಿ. ಈ ಬಗ್ಗೆ ನಾನು ಸಭಾಧ್ಯಕ್ಷರಿಗೆ ಪತ್ರ ಬರೆಯುತ್ತಿದ್ದೀನಿ. ಅವರೂ ನಾನು ಜೊತೆ ಸೇರಿ ಸಭೆ ಮಾಡಿ ಈ ವಿಚಾರದಲ್ಲಿ ಏನೇ ಅಡೆತಡೆಗಳಿದ್ದರೂ ಅದನ್ನ ಬಗೆಹರಿಸಿಕೊಂಡು, ಸಾರ್ವಜನಿಕರ ಹಿತದಿಂದ ಕೆಲಸ ನಿರ್ವಹಿಸಬೇಕು ಅಂತ. ಅದಕ್ಕೆ ಅವರು ಹೇಗೆ ಸ್ಪಂದಿಸ್ತಾರೆ ಅನ್ನೋದನ್ನು ಗಮನಿಸಿ ಮುಂದಕ್ಕೆ ಹೋಗ್ಬೇಕಾಗತ್ತೆ.

ಪತ್ರಿಕೆ: ಲಾಕ್‍ಡೌನ್ ಸಂದರ್ಭ ಇದ್ದುದರಿಂದ ವಿಧಾನಮಂಡಲದ ಇಂತಹ ಸಮಿತಿಗಳೂ ಸಭೆ ಸೇರ್ತಿರ್ಲಿಲ್ಲ ಅಲ್ವಾ? ಇದಕ್ಕಾಗಿಯೇ ಸೇರಿದ್ರಾ?

ಎಚ್.ಕೆ.ಪಾಟೀಲ್: ಕೊರೊನಾ ಬಂದು, ವಿಧಾನಮಂಡಲದ ಅಧಿವೇಶನವೂ ಮುಂದಕ್ಕೆ ಹೋದ ನಂತರ ಸಮಿತಿ ಸಭೆಗಳು ನಡೆಯುತ್ತಿರಲಿಲ್ಲ. ಈಗ 3 ವಾರದ ಹಿಂದಿನವರೆಗೂ ಅದೇ ಪರಿಸ್ಥಿತಿ ಇತ್ತು. ಅದಾದ ನಂತರ ಸಭೆ ಸೇರ್ತಿದೀವಿ. ಎಲ್ಲಾ ಸಮಿತಿಗಳೂ ಸೇರಿರದೇ ಇರಬಹುದು. ಕೆಲವು ಸಮಿತಿಗಳ ಸಭೆಗಳು ನಡೀತಿದಾವೆ.

ಪತ್ರಿಕೆ: ನೀವು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದವರು. ಇದೀಗ ವಲಸೆ ಕಾರ್ಮಿಕರ ಸಮಸ್ಯೆಯನ್ನು ನೋಡಿದ್ದೀರಿ. ದೇಶದಲ್ಲಿ ಗ್ರಾಮೀಣಾಭಿವೃದ್ಧಿಯಲ್ಲಿ ಆದ ಸಮಸ್ಯೆಗಳ ಕಾರಣದಿಂದ ಈ ವಲಸೆ ಸಮಸ್ಯೆ ಸೃಷ್ಟಿಯಾಯಿತು ಅಲ್ವಾ?

ಎಚ್.ಕೆ.ಪಾಟೀಲ್: ಗುಳೆ ಹೋದ ಕಾರ್ಮಿಕರಿಗಾಗಿ ನಾವೆಲ್ಲರೂ ಏನು ಮಾಡಿದ್ದೇವೆ ಅಂತ ನೋಡಬೇಕು. ಇದರಲ್ಲಿ ಆ ಪಕ್ಷ, ಈ ಪಕ್ಷ ಅಂತ ನೋಡದೇ ಇಂತಹ ಜನರೇ ದೇಶ ಕಟ್ಟಿದವರು ಅನ್ನೋದನ್ನ ಮರೀಬಾರದು. ಅವರಲ್ಲಿ ಹೆಚ್ಚಿನವರು ಕಟ್ಟಡ ಕಾರ್ಮಿಕರಿದ್ದಾರೆ. ಅವರ ಹೆಸರಿನಲ್ಲೇ ಸಾವಿರಾರು ಕೋಟಿ ರೂ. ಹಣ ಕಲ್ಯಾಣನಿಧಿಯಲ್ಲಿದೆ. ಅವರದ್ದೇ ಹಣವನ್ನು ಅವರಿಗೆ ಖರ್ಚು ಮಾಡೋಕೆ ಏನು ಸಮಸ್ಯೆ? ಕರ್ನಾಟಕದಲ್ಲೇ 9,000 ಕೋಟಿ ರೂ ಇದೆ. ಇದನ್ನು ಬಳಸಿಕೊಂಡು ಅವರಿಗೆ ಸೂಕ್ತ ಸೌಲಭ್ಯ ಕಲ್ಪಿಸುವುದನ್ನು ಬಿಟ್ಟು ಅವರುಗಳು ತಮ್ಮೂರಿಗೆ ಹೊರಡ್ತಾರೆ ಅಂತ ಅದನ್ನ ತಡೆಯೋಕೆ ಹೋಗೋದು ಮಾನವೀಯತೆಯಾ? ಆ ಕೆಲಸವನ್ನು ಈ ಸರ್ಕಾರ ಮಾಡಿತು.

ಪತ್ರಿಕೆ: ಆದರೆ ವಿರೋಧ ಪಕ್ಷವಾಗಿ ನಿಮ್ಮ ಪಕ್ಷ ಈ ಕಾರ್ಮಿಕರ ಪರವಾಗಿ ಇಷ್ಟೇನಾ ಮಾಡೋಕೆ ಸಾಧ್ಯವಿದ್ದದ್ದು? ವಿರೋಧ ಪಕ್ಷಗಳು ಇನ್ನೂ ಕ್ರಿಯಾಶೀಲರಾಗಿ ಇರಬೇಕಿತ್ತು ಅಲ್ವಾ?

ಎಚ್.ಕೆ.ಪಾಟೀಲ್: ನಮ್ಮ ಪಕ್ಷದ ವತಿಯಿಂದ ನಮ್ಮ ಕೆಲಸ ಮಾಡಿದ್ದೇವೆ. ನಾನು ಹಲವಾರು ಪತ್ರಗಳನ್ನು ಸರ್ಕಾರಕ್ಕೆ ಬರೆದಿದ್ದೇನೆ. ವಲಸೆ ಕಾರ್ಮಿಕರಿಗೆ ಮೂರು ಪಟ್ಟು ಟಿಕೆಟ್ ಹಣ ತೆಗೆದುಕೊಂಡು ಬಸ್ಸುಗಳನ್ನು ಓಡಿಸ್ತಿದ್ದಾರೆ ಅಂತ ಗೊತ್ತಾದಾಗ ಕೆಪಿಸಿಸಿ ಅಧ್ಯಕ್ಷರು ಒಂದು ಕೋಟಿ ರೂ. ಚೆಕ್ ಬರೆದು ಖುದ್ದಾಗಿ ಬಸ್‍ಸ್ಟಾಂಡಿಗೆ ಹೋದರು. ನಾವೆಲ್ಲರೂ ಜೊತೆಗಿದ್ದೆವು. ಆ ನಂತರವೇ ಸರ್ಕಾರ ಉಚಿತವಾಗಿ ಬಸ್ಸು ಬಿಡ್ತೀನಿ ಅಂತ ಹೇಳಿದ್ದು.

ಪತ್ರಿಕೆ: ಇದನ್ನೇ ಅನುಸರಿಸಿ ಕೇಂದ್ರದ ಮೇಲೂ ಒತ್ತಡ ತಂದು ಉಚಿತ ರೈಲು ಬರುವ ಹಾಗೆ ಮಾಡಿದ್ವಿ ಅಂತ ಕಾಂಗ್ರೆಸ್‍ನವರು ಹೇಳಿಕೊಂಡಿರಿ. ಆದರೆ ಆ ಭರವಸೆ ನೀಡಿದ ಕೇಂದ್ರ ಸರ್ಕಾರವು ಉಚಿತ ರೈಲನ್ನು ಬಹಳ ಕಾಲ ಓಡಿಸಲೇ ಇಲ್ಲ. ವಿಚಾರ ಕೋರ್ಟಿಗೆ ಹೋಗುವತನಕ ಎಚ್ಚೆತ್ತುಕೊಳ್ಳಲಿಲ್ಲ. ಕಾಂಗ್ರೆಸ್‍ನವರೂ ಫಾಲೋಅಪ್ ಮಾಡಲಿಲ್ಲ.

ಎಚ್.ಕೆ.ಪಾಟೀಲ್: ನೋಡಿ, ಒಂದು ಆಡಳಿತ ಪಕ್ಷಕ್ಕೆ ನೀವು ಇಂತಹ ಸಂದರ್ಭದಲ್ಲಿ ಉಚಿತವಾಗಿ ಬಸ್ಸು, ರೈಲು ಓಡಿಸಬೇಕು ಅಂತ ವಿರೋಧ ಪಕ್ಷ ಹೇಳುವ ಸಂದರ್ಭವೇ ಬರಬಾರದು. ಒಂದು ವೇಳೆ ವಿರೋಧಪಕ್ಷ ಹೇಳಿದರೆ ಅದನ್ನು ತಿದ್ದುಕೊಂಡು ಮುಂದುವರೆಯಬೇಕು. ಆದರೆ ಈ ಸರ್ಕಾರವು ಹಾಗೆ ಮಾಡಲಿಲ್ಲ.


ಇದನ್ನು ಓದಿ: ರಾಜ್ಯದಲ್ಲಿ ಅಸಂವಿಧಾನಾತ್ಮಕವಾಗಿ ಇನ್ನೊಬ್ಬ ಮುಖ್ಯಮಂತ್ರಿಯಿದ್ದಾರೆ: ಸಿದ್ದರಾಮಯ್ಯ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...