Homeಮುಖಪುಟಭ್ರಷ್ಟಾಚಾರ ತನಿಖೆಗೆ ಅಡ್ಡಿ ಏಕೆ? : ಹೆಚ್.ಕೆ.ಪಾಟೀಲ್‍ರವರ ಸಂದರ್ಶನ

ಭ್ರಷ್ಟಾಚಾರ ತನಿಖೆಗೆ ಅಡ್ಡಿ ಏಕೆ? : ಹೆಚ್.ಕೆ.ಪಾಟೀಲ್‍ರವರ ಸಂದರ್ಶನ

"ಶೆರೆ ಅಂಗಡಿಯೂ ತೆರೆದಿರುವಾಗ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಓಡಾಡಿದರೆ ತೊಂದರೆ ಅನ್ನುತ್ತೆ ಅನ್ನೋದು ಸರಿಯಾ?"

- Advertisement -
- Advertisement -

ಪತ್ರಿಕೆ: ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಪರಿಶೀಲನೆಗೆ ಸ್ಪೀಕರ್ ತಡೆ ನೀಡಬಹುದಾ?

ಎಚ್.ಕೆ.ಪಾಟೀಲ್ : ಅವರು ನೀವು ಇದರ ಪರಿಶೀಲನೆ ಮಾಡಬೇಡಿ ಎಂದು ಹೇಳಕ್ಕೆ ಆಗಲ್ಲ. ಕೊರೊನಾ ಸೋಂಕಿನ ಕಾರಣಕ್ಕೆ ನಿಮ್ಮ ಹಿತದೃಷ್ಟಿಯಿಂದ ಅದಕ್ಕೆ ಅವಕಾಶ ಕೊಡುವುದಿಲ್ಲ ಎನ್ನುವ ಹಾಗೆ ಹೇಳಿದ್ದಾರೆ. ಆದರೆ ಶೆರೆ ಅಂಗಡಿ ಓಪೆನ್ ಮಾಡಿದ್ದಾರೆ. ಬಸ್ಸುಗಳು, ರೈಲುಗಳನ್ನು ಓಡಿಸ್ತಿದಾರೆ. ವ್ಯಾಪಾರ ನಡೀತಿದೆ. ದೇವಸ್ಥಾನಗಳು, ಮಸೀದಿ, ಚರ್ಚ್‍ಗಳಿಗೆ ಅವಕಾಶ ಕೊಡ್ತೀವಿ ಅಂತಿದಾರೆ. ಸಾರ್ವಜನಿಕರಿಗೆ ಚಿಕಿತ್ಸೆ ಹೇಗೆ ನಡೀತಿದೆ, ಎಲ್ಲವೂ ಸರಿಯಾಗಿದೆಯಾ, ಸರ್ಕಾರ ಯಾವ ಅನುಕೂಲಗಳನ್ನ ಕಲ್ಪಿಸಿದೆ ಅಂತ ಶಾಸನಸಭೆಯ ಸದಸ್ಯರು ಇರುವ ಸಮಿತಿಗೆ ಮಾತ್ರ ತೊಂದರೆ ಆಗಿಬಿಡುತ್ತದಾ? ಇದರಿಂದ ನಾವು ಅರ್ಥ ಮಾಡಿಕೊಳ್ಳಬೇಕು.

ಪತ್ರಿಕೆ: ಹಾಗಾದರೆ ನಿಮಗೆ ಬಂದಿರುವ ಭ್ರಷ್ಟಾಚಾರದ ಕುರಿತ ದೂರಿನ ತನಿಖೆ ಮಾಡಲು ಏನೂ ಅಡ್ಡಿಯಿಲ್ಲ ಅಲ್ಲವಾ?

ಎಚ್.ಕೆ.ಪಾಟೀಲ್: ನಾವು ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳಿಗೆ ಸಂಬಂಧಪಟ್ಟ ದೂರುಗಳ ಆಧಾರದ ಮೇಲೆ ಪರಿಶೀಲನೆ ಮಾಡಿ ವರದಿ ಕೊಡಿ ಎಂದು ಕೇಳಿದ್ದೇವೆ. ಅವರು ನಮಗೆ ಇದುವರೆಗೂ ಏನನ್ನೂ ಕೊಟ್ಟಿಲ್ಲ. ಇಂದು ನಮ್ಮ ಸಮಿತಿ ಸಭೆ ಇತ್ತು. ಅಲ್ಲಿ ಇದನ್ನ ಗಮನಕ್ಕೆ ತೆಗೆದುಕೊಂಡಿದೀವಿ, ಮುಂದಿನ ಮಂಗಳವಾರದ ಒಳಗೆ ಅವರು ಉತ್ತರ ಕೊಡಲಿಲ್ಲ ಅಂದರೆ ಮುಂದಿನ ಕ್ರಮಕ್ಕೆ ಮುಂದಾಗ್ತೀವಿ.

ಪತ್ರಿಕೆ: ಅಂದರೆ ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡ್ತೀವಿ ಅಂದಿದ್ರಲ್ಲಾ, ಅದಕ್ಕೆ ಮುಂದಾಗ್ತೀರಾ?

ಎಚ್.ಕೆ.ಪಾಟೀಲ್: ಇಲ್ಲಾ, ಇವತ್ತು ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಒಂದು ತೀರ್ಮಾನಕ್ಕೆ ಬಂದಿದೀವಿ. ಈ ಬಗ್ಗೆ ನಾನು ಸಭಾಧ್ಯಕ್ಷರಿಗೆ ಪತ್ರ ಬರೆಯುತ್ತಿದ್ದೀನಿ. ಅವರೂ ನಾನು ಜೊತೆ ಸೇರಿ ಸಭೆ ಮಾಡಿ ಈ ವಿಚಾರದಲ್ಲಿ ಏನೇ ಅಡೆತಡೆಗಳಿದ್ದರೂ ಅದನ್ನ ಬಗೆಹರಿಸಿಕೊಂಡು, ಸಾರ್ವಜನಿಕರ ಹಿತದಿಂದ ಕೆಲಸ ನಿರ್ವಹಿಸಬೇಕು ಅಂತ. ಅದಕ್ಕೆ ಅವರು ಹೇಗೆ ಸ್ಪಂದಿಸ್ತಾರೆ ಅನ್ನೋದನ್ನು ಗಮನಿಸಿ ಮುಂದಕ್ಕೆ ಹೋಗ್ಬೇಕಾಗತ್ತೆ.

ಪತ್ರಿಕೆ: ಲಾಕ್‍ಡೌನ್ ಸಂದರ್ಭ ಇದ್ದುದರಿಂದ ವಿಧಾನಮಂಡಲದ ಇಂತಹ ಸಮಿತಿಗಳೂ ಸಭೆ ಸೇರ್ತಿರ್ಲಿಲ್ಲ ಅಲ್ವಾ? ಇದಕ್ಕಾಗಿಯೇ ಸೇರಿದ್ರಾ?

ಎಚ್.ಕೆ.ಪಾಟೀಲ್: ಕೊರೊನಾ ಬಂದು, ವಿಧಾನಮಂಡಲದ ಅಧಿವೇಶನವೂ ಮುಂದಕ್ಕೆ ಹೋದ ನಂತರ ಸಮಿತಿ ಸಭೆಗಳು ನಡೆಯುತ್ತಿರಲಿಲ್ಲ. ಈಗ 3 ವಾರದ ಹಿಂದಿನವರೆಗೂ ಅದೇ ಪರಿಸ್ಥಿತಿ ಇತ್ತು. ಅದಾದ ನಂತರ ಸಭೆ ಸೇರ್ತಿದೀವಿ. ಎಲ್ಲಾ ಸಮಿತಿಗಳೂ ಸೇರಿರದೇ ಇರಬಹುದು. ಕೆಲವು ಸಮಿತಿಗಳ ಸಭೆಗಳು ನಡೀತಿದಾವೆ.

ಪತ್ರಿಕೆ: ನೀವು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದವರು. ಇದೀಗ ವಲಸೆ ಕಾರ್ಮಿಕರ ಸಮಸ್ಯೆಯನ್ನು ನೋಡಿದ್ದೀರಿ. ದೇಶದಲ್ಲಿ ಗ್ರಾಮೀಣಾಭಿವೃದ್ಧಿಯಲ್ಲಿ ಆದ ಸಮಸ್ಯೆಗಳ ಕಾರಣದಿಂದ ಈ ವಲಸೆ ಸಮಸ್ಯೆ ಸೃಷ್ಟಿಯಾಯಿತು ಅಲ್ವಾ?

ಎಚ್.ಕೆ.ಪಾಟೀಲ್: ಗುಳೆ ಹೋದ ಕಾರ್ಮಿಕರಿಗಾಗಿ ನಾವೆಲ್ಲರೂ ಏನು ಮಾಡಿದ್ದೇವೆ ಅಂತ ನೋಡಬೇಕು. ಇದರಲ್ಲಿ ಆ ಪಕ್ಷ, ಈ ಪಕ್ಷ ಅಂತ ನೋಡದೇ ಇಂತಹ ಜನರೇ ದೇಶ ಕಟ್ಟಿದವರು ಅನ್ನೋದನ್ನ ಮರೀಬಾರದು. ಅವರಲ್ಲಿ ಹೆಚ್ಚಿನವರು ಕಟ್ಟಡ ಕಾರ್ಮಿಕರಿದ್ದಾರೆ. ಅವರ ಹೆಸರಿನಲ್ಲೇ ಸಾವಿರಾರು ಕೋಟಿ ರೂ. ಹಣ ಕಲ್ಯಾಣನಿಧಿಯಲ್ಲಿದೆ. ಅವರದ್ದೇ ಹಣವನ್ನು ಅವರಿಗೆ ಖರ್ಚು ಮಾಡೋಕೆ ಏನು ಸಮಸ್ಯೆ? ಕರ್ನಾಟಕದಲ್ಲೇ 9,000 ಕೋಟಿ ರೂ ಇದೆ. ಇದನ್ನು ಬಳಸಿಕೊಂಡು ಅವರಿಗೆ ಸೂಕ್ತ ಸೌಲಭ್ಯ ಕಲ್ಪಿಸುವುದನ್ನು ಬಿಟ್ಟು ಅವರುಗಳು ತಮ್ಮೂರಿಗೆ ಹೊರಡ್ತಾರೆ ಅಂತ ಅದನ್ನ ತಡೆಯೋಕೆ ಹೋಗೋದು ಮಾನವೀಯತೆಯಾ? ಆ ಕೆಲಸವನ್ನು ಈ ಸರ್ಕಾರ ಮಾಡಿತು.

ಪತ್ರಿಕೆ: ಆದರೆ ವಿರೋಧ ಪಕ್ಷವಾಗಿ ನಿಮ್ಮ ಪಕ್ಷ ಈ ಕಾರ್ಮಿಕರ ಪರವಾಗಿ ಇಷ್ಟೇನಾ ಮಾಡೋಕೆ ಸಾಧ್ಯವಿದ್ದದ್ದು? ವಿರೋಧ ಪಕ್ಷಗಳು ಇನ್ನೂ ಕ್ರಿಯಾಶೀಲರಾಗಿ ಇರಬೇಕಿತ್ತು ಅಲ್ವಾ?

ಎಚ್.ಕೆ.ಪಾಟೀಲ್: ನಮ್ಮ ಪಕ್ಷದ ವತಿಯಿಂದ ನಮ್ಮ ಕೆಲಸ ಮಾಡಿದ್ದೇವೆ. ನಾನು ಹಲವಾರು ಪತ್ರಗಳನ್ನು ಸರ್ಕಾರಕ್ಕೆ ಬರೆದಿದ್ದೇನೆ. ವಲಸೆ ಕಾರ್ಮಿಕರಿಗೆ ಮೂರು ಪಟ್ಟು ಟಿಕೆಟ್ ಹಣ ತೆಗೆದುಕೊಂಡು ಬಸ್ಸುಗಳನ್ನು ಓಡಿಸ್ತಿದ್ದಾರೆ ಅಂತ ಗೊತ್ತಾದಾಗ ಕೆಪಿಸಿಸಿ ಅಧ್ಯಕ್ಷರು ಒಂದು ಕೋಟಿ ರೂ. ಚೆಕ್ ಬರೆದು ಖುದ್ದಾಗಿ ಬಸ್‍ಸ್ಟಾಂಡಿಗೆ ಹೋದರು. ನಾವೆಲ್ಲರೂ ಜೊತೆಗಿದ್ದೆವು. ಆ ನಂತರವೇ ಸರ್ಕಾರ ಉಚಿತವಾಗಿ ಬಸ್ಸು ಬಿಡ್ತೀನಿ ಅಂತ ಹೇಳಿದ್ದು.

ಪತ್ರಿಕೆ: ಇದನ್ನೇ ಅನುಸರಿಸಿ ಕೇಂದ್ರದ ಮೇಲೂ ಒತ್ತಡ ತಂದು ಉಚಿತ ರೈಲು ಬರುವ ಹಾಗೆ ಮಾಡಿದ್ವಿ ಅಂತ ಕಾಂಗ್ರೆಸ್‍ನವರು ಹೇಳಿಕೊಂಡಿರಿ. ಆದರೆ ಆ ಭರವಸೆ ನೀಡಿದ ಕೇಂದ್ರ ಸರ್ಕಾರವು ಉಚಿತ ರೈಲನ್ನು ಬಹಳ ಕಾಲ ಓಡಿಸಲೇ ಇಲ್ಲ. ವಿಚಾರ ಕೋರ್ಟಿಗೆ ಹೋಗುವತನಕ ಎಚ್ಚೆತ್ತುಕೊಳ್ಳಲಿಲ್ಲ. ಕಾಂಗ್ರೆಸ್‍ನವರೂ ಫಾಲೋಅಪ್ ಮಾಡಲಿಲ್ಲ.

ಎಚ್.ಕೆ.ಪಾಟೀಲ್: ನೋಡಿ, ಒಂದು ಆಡಳಿತ ಪಕ್ಷಕ್ಕೆ ನೀವು ಇಂತಹ ಸಂದರ್ಭದಲ್ಲಿ ಉಚಿತವಾಗಿ ಬಸ್ಸು, ರೈಲು ಓಡಿಸಬೇಕು ಅಂತ ವಿರೋಧ ಪಕ್ಷ ಹೇಳುವ ಸಂದರ್ಭವೇ ಬರಬಾರದು. ಒಂದು ವೇಳೆ ವಿರೋಧಪಕ್ಷ ಹೇಳಿದರೆ ಅದನ್ನು ತಿದ್ದುಕೊಂಡು ಮುಂದುವರೆಯಬೇಕು. ಆದರೆ ಈ ಸರ್ಕಾರವು ಹಾಗೆ ಮಾಡಲಿಲ್ಲ.


ಇದನ್ನು ಓದಿ: ರಾಜ್ಯದಲ್ಲಿ ಅಸಂವಿಧಾನಾತ್ಮಕವಾಗಿ ಇನ್ನೊಬ್ಬ ಮುಖ್ಯಮಂತ್ರಿಯಿದ್ದಾರೆ: ಸಿದ್ದರಾಮಯ್ಯ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...