Homeಮುಖಪುಟಭ್ರಷ್ಟಾಚಾರ ತನಿಖೆಗೆ ಅಡ್ಡಿ ಏಕೆ? : ಹೆಚ್.ಕೆ.ಪಾಟೀಲ್‍ರವರ ಸಂದರ್ಶನ

ಭ್ರಷ್ಟಾಚಾರ ತನಿಖೆಗೆ ಅಡ್ಡಿ ಏಕೆ? : ಹೆಚ್.ಕೆ.ಪಾಟೀಲ್‍ರವರ ಸಂದರ್ಶನ

"ಶೆರೆ ಅಂಗಡಿಯೂ ತೆರೆದಿರುವಾಗ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಓಡಾಡಿದರೆ ತೊಂದರೆ ಅನ್ನುತ್ತೆ ಅನ್ನೋದು ಸರಿಯಾ?"

- Advertisement -
- Advertisement -

ಪತ್ರಿಕೆ: ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಪರಿಶೀಲನೆಗೆ ಸ್ಪೀಕರ್ ತಡೆ ನೀಡಬಹುದಾ?

ಎಚ್.ಕೆ.ಪಾಟೀಲ್ : ಅವರು ನೀವು ಇದರ ಪರಿಶೀಲನೆ ಮಾಡಬೇಡಿ ಎಂದು ಹೇಳಕ್ಕೆ ಆಗಲ್ಲ. ಕೊರೊನಾ ಸೋಂಕಿನ ಕಾರಣಕ್ಕೆ ನಿಮ್ಮ ಹಿತದೃಷ್ಟಿಯಿಂದ ಅದಕ್ಕೆ ಅವಕಾಶ ಕೊಡುವುದಿಲ್ಲ ಎನ್ನುವ ಹಾಗೆ ಹೇಳಿದ್ದಾರೆ. ಆದರೆ ಶೆರೆ ಅಂಗಡಿ ಓಪೆನ್ ಮಾಡಿದ್ದಾರೆ. ಬಸ್ಸುಗಳು, ರೈಲುಗಳನ್ನು ಓಡಿಸ್ತಿದಾರೆ. ವ್ಯಾಪಾರ ನಡೀತಿದೆ. ದೇವಸ್ಥಾನಗಳು, ಮಸೀದಿ, ಚರ್ಚ್‍ಗಳಿಗೆ ಅವಕಾಶ ಕೊಡ್ತೀವಿ ಅಂತಿದಾರೆ. ಸಾರ್ವಜನಿಕರಿಗೆ ಚಿಕಿತ್ಸೆ ಹೇಗೆ ನಡೀತಿದೆ, ಎಲ್ಲವೂ ಸರಿಯಾಗಿದೆಯಾ, ಸರ್ಕಾರ ಯಾವ ಅನುಕೂಲಗಳನ್ನ ಕಲ್ಪಿಸಿದೆ ಅಂತ ಶಾಸನಸಭೆಯ ಸದಸ್ಯರು ಇರುವ ಸಮಿತಿಗೆ ಮಾತ್ರ ತೊಂದರೆ ಆಗಿಬಿಡುತ್ತದಾ? ಇದರಿಂದ ನಾವು ಅರ್ಥ ಮಾಡಿಕೊಳ್ಳಬೇಕು.

ಪತ್ರಿಕೆ: ಹಾಗಾದರೆ ನಿಮಗೆ ಬಂದಿರುವ ಭ್ರಷ್ಟಾಚಾರದ ಕುರಿತ ದೂರಿನ ತನಿಖೆ ಮಾಡಲು ಏನೂ ಅಡ್ಡಿಯಿಲ್ಲ ಅಲ್ಲವಾ?

ಎಚ್.ಕೆ.ಪಾಟೀಲ್: ನಾವು ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳಿಗೆ ಸಂಬಂಧಪಟ್ಟ ದೂರುಗಳ ಆಧಾರದ ಮೇಲೆ ಪರಿಶೀಲನೆ ಮಾಡಿ ವರದಿ ಕೊಡಿ ಎಂದು ಕೇಳಿದ್ದೇವೆ. ಅವರು ನಮಗೆ ಇದುವರೆಗೂ ಏನನ್ನೂ ಕೊಟ್ಟಿಲ್ಲ. ಇಂದು ನಮ್ಮ ಸಮಿತಿ ಸಭೆ ಇತ್ತು. ಅಲ್ಲಿ ಇದನ್ನ ಗಮನಕ್ಕೆ ತೆಗೆದುಕೊಂಡಿದೀವಿ, ಮುಂದಿನ ಮಂಗಳವಾರದ ಒಳಗೆ ಅವರು ಉತ್ತರ ಕೊಡಲಿಲ್ಲ ಅಂದರೆ ಮುಂದಿನ ಕ್ರಮಕ್ಕೆ ಮುಂದಾಗ್ತೀವಿ.

ಪತ್ರಿಕೆ: ಅಂದರೆ ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡ್ತೀವಿ ಅಂದಿದ್ರಲ್ಲಾ, ಅದಕ್ಕೆ ಮುಂದಾಗ್ತೀರಾ?

ಎಚ್.ಕೆ.ಪಾಟೀಲ್: ಇಲ್ಲಾ, ಇವತ್ತು ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಒಂದು ತೀರ್ಮಾನಕ್ಕೆ ಬಂದಿದೀವಿ. ಈ ಬಗ್ಗೆ ನಾನು ಸಭಾಧ್ಯಕ್ಷರಿಗೆ ಪತ್ರ ಬರೆಯುತ್ತಿದ್ದೀನಿ. ಅವರೂ ನಾನು ಜೊತೆ ಸೇರಿ ಸಭೆ ಮಾಡಿ ಈ ವಿಚಾರದಲ್ಲಿ ಏನೇ ಅಡೆತಡೆಗಳಿದ್ದರೂ ಅದನ್ನ ಬಗೆಹರಿಸಿಕೊಂಡು, ಸಾರ್ವಜನಿಕರ ಹಿತದಿಂದ ಕೆಲಸ ನಿರ್ವಹಿಸಬೇಕು ಅಂತ. ಅದಕ್ಕೆ ಅವರು ಹೇಗೆ ಸ್ಪಂದಿಸ್ತಾರೆ ಅನ್ನೋದನ್ನು ಗಮನಿಸಿ ಮುಂದಕ್ಕೆ ಹೋಗ್ಬೇಕಾಗತ್ತೆ.

ಪತ್ರಿಕೆ: ಲಾಕ್‍ಡೌನ್ ಸಂದರ್ಭ ಇದ್ದುದರಿಂದ ವಿಧಾನಮಂಡಲದ ಇಂತಹ ಸಮಿತಿಗಳೂ ಸಭೆ ಸೇರ್ತಿರ್ಲಿಲ್ಲ ಅಲ್ವಾ? ಇದಕ್ಕಾಗಿಯೇ ಸೇರಿದ್ರಾ?

ಎಚ್.ಕೆ.ಪಾಟೀಲ್: ಕೊರೊನಾ ಬಂದು, ವಿಧಾನಮಂಡಲದ ಅಧಿವೇಶನವೂ ಮುಂದಕ್ಕೆ ಹೋದ ನಂತರ ಸಮಿತಿ ಸಭೆಗಳು ನಡೆಯುತ್ತಿರಲಿಲ್ಲ. ಈಗ 3 ವಾರದ ಹಿಂದಿನವರೆಗೂ ಅದೇ ಪರಿಸ್ಥಿತಿ ಇತ್ತು. ಅದಾದ ನಂತರ ಸಭೆ ಸೇರ್ತಿದೀವಿ. ಎಲ್ಲಾ ಸಮಿತಿಗಳೂ ಸೇರಿರದೇ ಇರಬಹುದು. ಕೆಲವು ಸಮಿತಿಗಳ ಸಭೆಗಳು ನಡೀತಿದಾವೆ.

ಪತ್ರಿಕೆ: ನೀವು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದವರು. ಇದೀಗ ವಲಸೆ ಕಾರ್ಮಿಕರ ಸಮಸ್ಯೆಯನ್ನು ನೋಡಿದ್ದೀರಿ. ದೇಶದಲ್ಲಿ ಗ್ರಾಮೀಣಾಭಿವೃದ್ಧಿಯಲ್ಲಿ ಆದ ಸಮಸ್ಯೆಗಳ ಕಾರಣದಿಂದ ಈ ವಲಸೆ ಸಮಸ್ಯೆ ಸೃಷ್ಟಿಯಾಯಿತು ಅಲ್ವಾ?

ಎಚ್.ಕೆ.ಪಾಟೀಲ್: ಗುಳೆ ಹೋದ ಕಾರ್ಮಿಕರಿಗಾಗಿ ನಾವೆಲ್ಲರೂ ಏನು ಮಾಡಿದ್ದೇವೆ ಅಂತ ನೋಡಬೇಕು. ಇದರಲ್ಲಿ ಆ ಪಕ್ಷ, ಈ ಪಕ್ಷ ಅಂತ ನೋಡದೇ ಇಂತಹ ಜನರೇ ದೇಶ ಕಟ್ಟಿದವರು ಅನ್ನೋದನ್ನ ಮರೀಬಾರದು. ಅವರಲ್ಲಿ ಹೆಚ್ಚಿನವರು ಕಟ್ಟಡ ಕಾರ್ಮಿಕರಿದ್ದಾರೆ. ಅವರ ಹೆಸರಿನಲ್ಲೇ ಸಾವಿರಾರು ಕೋಟಿ ರೂ. ಹಣ ಕಲ್ಯಾಣನಿಧಿಯಲ್ಲಿದೆ. ಅವರದ್ದೇ ಹಣವನ್ನು ಅವರಿಗೆ ಖರ್ಚು ಮಾಡೋಕೆ ಏನು ಸಮಸ್ಯೆ? ಕರ್ನಾಟಕದಲ್ಲೇ 9,000 ಕೋಟಿ ರೂ ಇದೆ. ಇದನ್ನು ಬಳಸಿಕೊಂಡು ಅವರಿಗೆ ಸೂಕ್ತ ಸೌಲಭ್ಯ ಕಲ್ಪಿಸುವುದನ್ನು ಬಿಟ್ಟು ಅವರುಗಳು ತಮ್ಮೂರಿಗೆ ಹೊರಡ್ತಾರೆ ಅಂತ ಅದನ್ನ ತಡೆಯೋಕೆ ಹೋಗೋದು ಮಾನವೀಯತೆಯಾ? ಆ ಕೆಲಸವನ್ನು ಈ ಸರ್ಕಾರ ಮಾಡಿತು.

ಪತ್ರಿಕೆ: ಆದರೆ ವಿರೋಧ ಪಕ್ಷವಾಗಿ ನಿಮ್ಮ ಪಕ್ಷ ಈ ಕಾರ್ಮಿಕರ ಪರವಾಗಿ ಇಷ್ಟೇನಾ ಮಾಡೋಕೆ ಸಾಧ್ಯವಿದ್ದದ್ದು? ವಿರೋಧ ಪಕ್ಷಗಳು ಇನ್ನೂ ಕ್ರಿಯಾಶೀಲರಾಗಿ ಇರಬೇಕಿತ್ತು ಅಲ್ವಾ?

ಎಚ್.ಕೆ.ಪಾಟೀಲ್: ನಮ್ಮ ಪಕ್ಷದ ವತಿಯಿಂದ ನಮ್ಮ ಕೆಲಸ ಮಾಡಿದ್ದೇವೆ. ನಾನು ಹಲವಾರು ಪತ್ರಗಳನ್ನು ಸರ್ಕಾರಕ್ಕೆ ಬರೆದಿದ್ದೇನೆ. ವಲಸೆ ಕಾರ್ಮಿಕರಿಗೆ ಮೂರು ಪಟ್ಟು ಟಿಕೆಟ್ ಹಣ ತೆಗೆದುಕೊಂಡು ಬಸ್ಸುಗಳನ್ನು ಓಡಿಸ್ತಿದ್ದಾರೆ ಅಂತ ಗೊತ್ತಾದಾಗ ಕೆಪಿಸಿಸಿ ಅಧ್ಯಕ್ಷರು ಒಂದು ಕೋಟಿ ರೂ. ಚೆಕ್ ಬರೆದು ಖುದ್ದಾಗಿ ಬಸ್‍ಸ್ಟಾಂಡಿಗೆ ಹೋದರು. ನಾವೆಲ್ಲರೂ ಜೊತೆಗಿದ್ದೆವು. ಆ ನಂತರವೇ ಸರ್ಕಾರ ಉಚಿತವಾಗಿ ಬಸ್ಸು ಬಿಡ್ತೀನಿ ಅಂತ ಹೇಳಿದ್ದು.

ಪತ್ರಿಕೆ: ಇದನ್ನೇ ಅನುಸರಿಸಿ ಕೇಂದ್ರದ ಮೇಲೂ ಒತ್ತಡ ತಂದು ಉಚಿತ ರೈಲು ಬರುವ ಹಾಗೆ ಮಾಡಿದ್ವಿ ಅಂತ ಕಾಂಗ್ರೆಸ್‍ನವರು ಹೇಳಿಕೊಂಡಿರಿ. ಆದರೆ ಆ ಭರವಸೆ ನೀಡಿದ ಕೇಂದ್ರ ಸರ್ಕಾರವು ಉಚಿತ ರೈಲನ್ನು ಬಹಳ ಕಾಲ ಓಡಿಸಲೇ ಇಲ್ಲ. ವಿಚಾರ ಕೋರ್ಟಿಗೆ ಹೋಗುವತನಕ ಎಚ್ಚೆತ್ತುಕೊಳ್ಳಲಿಲ್ಲ. ಕಾಂಗ್ರೆಸ್‍ನವರೂ ಫಾಲೋಅಪ್ ಮಾಡಲಿಲ್ಲ.

ಎಚ್.ಕೆ.ಪಾಟೀಲ್: ನೋಡಿ, ಒಂದು ಆಡಳಿತ ಪಕ್ಷಕ್ಕೆ ನೀವು ಇಂತಹ ಸಂದರ್ಭದಲ್ಲಿ ಉಚಿತವಾಗಿ ಬಸ್ಸು, ರೈಲು ಓಡಿಸಬೇಕು ಅಂತ ವಿರೋಧ ಪಕ್ಷ ಹೇಳುವ ಸಂದರ್ಭವೇ ಬರಬಾರದು. ಒಂದು ವೇಳೆ ವಿರೋಧಪಕ್ಷ ಹೇಳಿದರೆ ಅದನ್ನು ತಿದ್ದುಕೊಂಡು ಮುಂದುವರೆಯಬೇಕು. ಆದರೆ ಈ ಸರ್ಕಾರವು ಹಾಗೆ ಮಾಡಲಿಲ್ಲ.


ಇದನ್ನು ಓದಿ: ರಾಜ್ಯದಲ್ಲಿ ಅಸಂವಿಧಾನಾತ್ಮಕವಾಗಿ ಇನ್ನೊಬ್ಬ ಮುಖ್ಯಮಂತ್ರಿಯಿದ್ದಾರೆ: ಸಿದ್ದರಾಮಯ್ಯ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...