Homeಮುಖಪುಟಭ್ರಷ್ಟಾಚಾರ ತನಿಖೆಗೆ ಅಡ್ಡಿ ಏಕೆ? : ಹೆಚ್.ಕೆ.ಪಾಟೀಲ್‍ರವರ ಸಂದರ್ಶನ

ಭ್ರಷ್ಟಾಚಾರ ತನಿಖೆಗೆ ಅಡ್ಡಿ ಏಕೆ? : ಹೆಚ್.ಕೆ.ಪಾಟೀಲ್‍ರವರ ಸಂದರ್ಶನ

"ಶೆರೆ ಅಂಗಡಿಯೂ ತೆರೆದಿರುವಾಗ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಓಡಾಡಿದರೆ ತೊಂದರೆ ಅನ್ನುತ್ತೆ ಅನ್ನೋದು ಸರಿಯಾ?"

- Advertisement -
- Advertisement -

ಪತ್ರಿಕೆ: ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಪರಿಶೀಲನೆಗೆ ಸ್ಪೀಕರ್ ತಡೆ ನೀಡಬಹುದಾ?

ಎಚ್.ಕೆ.ಪಾಟೀಲ್ : ಅವರು ನೀವು ಇದರ ಪರಿಶೀಲನೆ ಮಾಡಬೇಡಿ ಎಂದು ಹೇಳಕ್ಕೆ ಆಗಲ್ಲ. ಕೊರೊನಾ ಸೋಂಕಿನ ಕಾರಣಕ್ಕೆ ನಿಮ್ಮ ಹಿತದೃಷ್ಟಿಯಿಂದ ಅದಕ್ಕೆ ಅವಕಾಶ ಕೊಡುವುದಿಲ್ಲ ಎನ್ನುವ ಹಾಗೆ ಹೇಳಿದ್ದಾರೆ. ಆದರೆ ಶೆರೆ ಅಂಗಡಿ ಓಪೆನ್ ಮಾಡಿದ್ದಾರೆ. ಬಸ್ಸುಗಳು, ರೈಲುಗಳನ್ನು ಓಡಿಸ್ತಿದಾರೆ. ವ್ಯಾಪಾರ ನಡೀತಿದೆ. ದೇವಸ್ಥಾನಗಳು, ಮಸೀದಿ, ಚರ್ಚ್‍ಗಳಿಗೆ ಅವಕಾಶ ಕೊಡ್ತೀವಿ ಅಂತಿದಾರೆ. ಸಾರ್ವಜನಿಕರಿಗೆ ಚಿಕಿತ್ಸೆ ಹೇಗೆ ನಡೀತಿದೆ, ಎಲ್ಲವೂ ಸರಿಯಾಗಿದೆಯಾ, ಸರ್ಕಾರ ಯಾವ ಅನುಕೂಲಗಳನ್ನ ಕಲ್ಪಿಸಿದೆ ಅಂತ ಶಾಸನಸಭೆಯ ಸದಸ್ಯರು ಇರುವ ಸಮಿತಿಗೆ ಮಾತ್ರ ತೊಂದರೆ ಆಗಿಬಿಡುತ್ತದಾ? ಇದರಿಂದ ನಾವು ಅರ್ಥ ಮಾಡಿಕೊಳ್ಳಬೇಕು.

ಪತ್ರಿಕೆ: ಹಾಗಾದರೆ ನಿಮಗೆ ಬಂದಿರುವ ಭ್ರಷ್ಟಾಚಾರದ ಕುರಿತ ದೂರಿನ ತನಿಖೆ ಮಾಡಲು ಏನೂ ಅಡ್ಡಿಯಿಲ್ಲ ಅಲ್ಲವಾ?

ಎಚ್.ಕೆ.ಪಾಟೀಲ್: ನಾವು ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳಿಗೆ ಸಂಬಂಧಪಟ್ಟ ದೂರುಗಳ ಆಧಾರದ ಮೇಲೆ ಪರಿಶೀಲನೆ ಮಾಡಿ ವರದಿ ಕೊಡಿ ಎಂದು ಕೇಳಿದ್ದೇವೆ. ಅವರು ನಮಗೆ ಇದುವರೆಗೂ ಏನನ್ನೂ ಕೊಟ್ಟಿಲ್ಲ. ಇಂದು ನಮ್ಮ ಸಮಿತಿ ಸಭೆ ಇತ್ತು. ಅಲ್ಲಿ ಇದನ್ನ ಗಮನಕ್ಕೆ ತೆಗೆದುಕೊಂಡಿದೀವಿ, ಮುಂದಿನ ಮಂಗಳವಾರದ ಒಳಗೆ ಅವರು ಉತ್ತರ ಕೊಡಲಿಲ್ಲ ಅಂದರೆ ಮುಂದಿನ ಕ್ರಮಕ್ಕೆ ಮುಂದಾಗ್ತೀವಿ.

ಪತ್ರಿಕೆ: ಅಂದರೆ ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡ್ತೀವಿ ಅಂದಿದ್ರಲ್ಲಾ, ಅದಕ್ಕೆ ಮುಂದಾಗ್ತೀರಾ?

ಎಚ್.ಕೆ.ಪಾಟೀಲ್: ಇಲ್ಲಾ, ಇವತ್ತು ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಒಂದು ತೀರ್ಮಾನಕ್ಕೆ ಬಂದಿದೀವಿ. ಈ ಬಗ್ಗೆ ನಾನು ಸಭಾಧ್ಯಕ್ಷರಿಗೆ ಪತ್ರ ಬರೆಯುತ್ತಿದ್ದೀನಿ. ಅವರೂ ನಾನು ಜೊತೆ ಸೇರಿ ಸಭೆ ಮಾಡಿ ಈ ವಿಚಾರದಲ್ಲಿ ಏನೇ ಅಡೆತಡೆಗಳಿದ್ದರೂ ಅದನ್ನ ಬಗೆಹರಿಸಿಕೊಂಡು, ಸಾರ್ವಜನಿಕರ ಹಿತದಿಂದ ಕೆಲಸ ನಿರ್ವಹಿಸಬೇಕು ಅಂತ. ಅದಕ್ಕೆ ಅವರು ಹೇಗೆ ಸ್ಪಂದಿಸ್ತಾರೆ ಅನ್ನೋದನ್ನು ಗಮನಿಸಿ ಮುಂದಕ್ಕೆ ಹೋಗ್ಬೇಕಾಗತ್ತೆ.

ಪತ್ರಿಕೆ: ಲಾಕ್‍ಡೌನ್ ಸಂದರ್ಭ ಇದ್ದುದರಿಂದ ವಿಧಾನಮಂಡಲದ ಇಂತಹ ಸಮಿತಿಗಳೂ ಸಭೆ ಸೇರ್ತಿರ್ಲಿಲ್ಲ ಅಲ್ವಾ? ಇದಕ್ಕಾಗಿಯೇ ಸೇರಿದ್ರಾ?

ಎಚ್.ಕೆ.ಪಾಟೀಲ್: ಕೊರೊನಾ ಬಂದು, ವಿಧಾನಮಂಡಲದ ಅಧಿವೇಶನವೂ ಮುಂದಕ್ಕೆ ಹೋದ ನಂತರ ಸಮಿತಿ ಸಭೆಗಳು ನಡೆಯುತ್ತಿರಲಿಲ್ಲ. ಈಗ 3 ವಾರದ ಹಿಂದಿನವರೆಗೂ ಅದೇ ಪರಿಸ್ಥಿತಿ ಇತ್ತು. ಅದಾದ ನಂತರ ಸಭೆ ಸೇರ್ತಿದೀವಿ. ಎಲ್ಲಾ ಸಮಿತಿಗಳೂ ಸೇರಿರದೇ ಇರಬಹುದು. ಕೆಲವು ಸಮಿತಿಗಳ ಸಭೆಗಳು ನಡೀತಿದಾವೆ.

ಪತ್ರಿಕೆ: ನೀವು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದವರು. ಇದೀಗ ವಲಸೆ ಕಾರ್ಮಿಕರ ಸಮಸ್ಯೆಯನ್ನು ನೋಡಿದ್ದೀರಿ. ದೇಶದಲ್ಲಿ ಗ್ರಾಮೀಣಾಭಿವೃದ್ಧಿಯಲ್ಲಿ ಆದ ಸಮಸ್ಯೆಗಳ ಕಾರಣದಿಂದ ಈ ವಲಸೆ ಸಮಸ್ಯೆ ಸೃಷ್ಟಿಯಾಯಿತು ಅಲ್ವಾ?

ಎಚ್.ಕೆ.ಪಾಟೀಲ್: ಗುಳೆ ಹೋದ ಕಾರ್ಮಿಕರಿಗಾಗಿ ನಾವೆಲ್ಲರೂ ಏನು ಮಾಡಿದ್ದೇವೆ ಅಂತ ನೋಡಬೇಕು. ಇದರಲ್ಲಿ ಆ ಪಕ್ಷ, ಈ ಪಕ್ಷ ಅಂತ ನೋಡದೇ ಇಂತಹ ಜನರೇ ದೇಶ ಕಟ್ಟಿದವರು ಅನ್ನೋದನ್ನ ಮರೀಬಾರದು. ಅವರಲ್ಲಿ ಹೆಚ್ಚಿನವರು ಕಟ್ಟಡ ಕಾರ್ಮಿಕರಿದ್ದಾರೆ. ಅವರ ಹೆಸರಿನಲ್ಲೇ ಸಾವಿರಾರು ಕೋಟಿ ರೂ. ಹಣ ಕಲ್ಯಾಣನಿಧಿಯಲ್ಲಿದೆ. ಅವರದ್ದೇ ಹಣವನ್ನು ಅವರಿಗೆ ಖರ್ಚು ಮಾಡೋಕೆ ಏನು ಸಮಸ್ಯೆ? ಕರ್ನಾಟಕದಲ್ಲೇ 9,000 ಕೋಟಿ ರೂ ಇದೆ. ಇದನ್ನು ಬಳಸಿಕೊಂಡು ಅವರಿಗೆ ಸೂಕ್ತ ಸೌಲಭ್ಯ ಕಲ್ಪಿಸುವುದನ್ನು ಬಿಟ್ಟು ಅವರುಗಳು ತಮ್ಮೂರಿಗೆ ಹೊರಡ್ತಾರೆ ಅಂತ ಅದನ್ನ ತಡೆಯೋಕೆ ಹೋಗೋದು ಮಾನವೀಯತೆಯಾ? ಆ ಕೆಲಸವನ್ನು ಈ ಸರ್ಕಾರ ಮಾಡಿತು.

ಪತ್ರಿಕೆ: ಆದರೆ ವಿರೋಧ ಪಕ್ಷವಾಗಿ ನಿಮ್ಮ ಪಕ್ಷ ಈ ಕಾರ್ಮಿಕರ ಪರವಾಗಿ ಇಷ್ಟೇನಾ ಮಾಡೋಕೆ ಸಾಧ್ಯವಿದ್ದದ್ದು? ವಿರೋಧ ಪಕ್ಷಗಳು ಇನ್ನೂ ಕ್ರಿಯಾಶೀಲರಾಗಿ ಇರಬೇಕಿತ್ತು ಅಲ್ವಾ?

ಎಚ್.ಕೆ.ಪಾಟೀಲ್: ನಮ್ಮ ಪಕ್ಷದ ವತಿಯಿಂದ ನಮ್ಮ ಕೆಲಸ ಮಾಡಿದ್ದೇವೆ. ನಾನು ಹಲವಾರು ಪತ್ರಗಳನ್ನು ಸರ್ಕಾರಕ್ಕೆ ಬರೆದಿದ್ದೇನೆ. ವಲಸೆ ಕಾರ್ಮಿಕರಿಗೆ ಮೂರು ಪಟ್ಟು ಟಿಕೆಟ್ ಹಣ ತೆಗೆದುಕೊಂಡು ಬಸ್ಸುಗಳನ್ನು ಓಡಿಸ್ತಿದ್ದಾರೆ ಅಂತ ಗೊತ್ತಾದಾಗ ಕೆಪಿಸಿಸಿ ಅಧ್ಯಕ್ಷರು ಒಂದು ಕೋಟಿ ರೂ. ಚೆಕ್ ಬರೆದು ಖುದ್ದಾಗಿ ಬಸ್‍ಸ್ಟಾಂಡಿಗೆ ಹೋದರು. ನಾವೆಲ್ಲರೂ ಜೊತೆಗಿದ್ದೆವು. ಆ ನಂತರವೇ ಸರ್ಕಾರ ಉಚಿತವಾಗಿ ಬಸ್ಸು ಬಿಡ್ತೀನಿ ಅಂತ ಹೇಳಿದ್ದು.

ಪತ್ರಿಕೆ: ಇದನ್ನೇ ಅನುಸರಿಸಿ ಕೇಂದ್ರದ ಮೇಲೂ ಒತ್ತಡ ತಂದು ಉಚಿತ ರೈಲು ಬರುವ ಹಾಗೆ ಮಾಡಿದ್ವಿ ಅಂತ ಕಾಂಗ್ರೆಸ್‍ನವರು ಹೇಳಿಕೊಂಡಿರಿ. ಆದರೆ ಆ ಭರವಸೆ ನೀಡಿದ ಕೇಂದ್ರ ಸರ್ಕಾರವು ಉಚಿತ ರೈಲನ್ನು ಬಹಳ ಕಾಲ ಓಡಿಸಲೇ ಇಲ್ಲ. ವಿಚಾರ ಕೋರ್ಟಿಗೆ ಹೋಗುವತನಕ ಎಚ್ಚೆತ್ತುಕೊಳ್ಳಲಿಲ್ಲ. ಕಾಂಗ್ರೆಸ್‍ನವರೂ ಫಾಲೋಅಪ್ ಮಾಡಲಿಲ್ಲ.

ಎಚ್.ಕೆ.ಪಾಟೀಲ್: ನೋಡಿ, ಒಂದು ಆಡಳಿತ ಪಕ್ಷಕ್ಕೆ ನೀವು ಇಂತಹ ಸಂದರ್ಭದಲ್ಲಿ ಉಚಿತವಾಗಿ ಬಸ್ಸು, ರೈಲು ಓಡಿಸಬೇಕು ಅಂತ ವಿರೋಧ ಪಕ್ಷ ಹೇಳುವ ಸಂದರ್ಭವೇ ಬರಬಾರದು. ಒಂದು ವೇಳೆ ವಿರೋಧಪಕ್ಷ ಹೇಳಿದರೆ ಅದನ್ನು ತಿದ್ದುಕೊಂಡು ಮುಂದುವರೆಯಬೇಕು. ಆದರೆ ಈ ಸರ್ಕಾರವು ಹಾಗೆ ಮಾಡಲಿಲ್ಲ.


ಇದನ್ನು ಓದಿ: ರಾಜ್ಯದಲ್ಲಿ ಅಸಂವಿಧಾನಾತ್ಮಕವಾಗಿ ಇನ್ನೊಬ್ಬ ಮುಖ್ಯಮಂತ್ರಿಯಿದ್ದಾರೆ: ಸಿದ್ದರಾಮಯ್ಯ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...