Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ; ಬೇಟೆಯಲ್ಲ ಆಟವೆಲ್ಲ: ಗೊಂದಲ ಗೋಜಲುಗಳನ್ನು ಕಾಣಿಸುವ ಕಾದಂಬರಿ

ಪುಸ್ತಕ ಪರಿಚಯ; ಬೇಟೆಯಲ್ಲ ಆಟವೆಲ್ಲ: ಗೊಂದಲ ಗೋಜಲುಗಳನ್ನು ಕಾಣಿಸುವ ಕಾದಂಬರಿ

- Advertisement -
- Advertisement -

ಜಯಂತ್ ಕಾಯ್ಕಿಣಿ, ವಿವೇಕ್ ಶಾನಬಾಗ್ ಮತ್ತು ಎಂ.ಎಸ್. ಶ್ರೀರಾಮ್ ಈ ಮೂವರೂ ಬರಹಗಾರರ ಬಗ್ಗೆ ನನಗೆ ಯಾವಾಗಲೂ ಹೆಚ್ಚಿನ ಕುತೂಹಲ. ಈ ಮೂವರೂ ಹಲವು ಘಟ್ಟಗಳಲ್ಲಿ, ಕರ್ನಾಟಕದಿಂದ ದೂರದಲ್ಲಿ-ದೇಶದ ಹಲವೆಡೆಯಲ್ಲಿ, ದೇಶದಿಂದಾಚೆಗೆ ನೆಲೆಸಿದ್ದು, ಬದಲಾಗುತ್ತಿರುವ ಜಗತ್ತನ್ನು ಕರ್ನಾಟಕದ ಸೊಗಡಿನೊಂದಿಗೆ ಖುದ್ದಾಗಿ ನೋಡಿದವರು. ನನ್ನ ಪ್ರೀತಿಯ ಊರಾದ ಮುಂಬಯಿಯಲ್ಲಿ ಇದ್ದವರು(ಹೀಗೆ ನಾನು ಅಂದುಕೊಂಡಿದ್ದು). ನನ್ನ ಸೀಮಿತ ತಿಳಿವಳಿಕೆಯಲ್ಲಿ ವ್ಯಾಸರಾಯ ಬಲ್ಲಾಳರು ಮತ್ತು ಯಶವಂತ ಚಿತ್ತಾಲರ ನಂತರ ಕಾರ್ಪೋರೆಟ್ ಜಗತ್ತನ್ನು ಖುದ್ದಾಗಿ ನೋಡಿ ಬರೆದವರು ಇವರುಗಳೇ. ಕಾಯ್ಕಿಣಿ ಕಟ್ಟಿಕೊಡುವ ಮುಂಬಯಿಯ ವಿವರ ನನ್ನ ಕಣ್ಣನ್ನು ಅರಳಿಸುತ್ತಿದ್ದವು. ಆದರೆ ನನ್ನ ಮುಂಬಯಿ ಮತ್ತು ಕಾಯ್ಕಿಣಿಯವರ ಮುಂಬಯಿಯಲ್ಲಿ ದೊಡ್ಡ ಅಂತರವಿದೆ. ನಾನು ಮುಂಬಯಿ ಸೇರಿದ ವರ್ಷವೇ ಅವರು ಮುಂಬಯಿ ತೊರೆದಿದ್ದೂ ಅದಕ್ಕೆ ಕಾರಣವಿರಬಹುದು.

ನಮ್ಮ(ಭಾರತದ) ಜಗತ್ತು ಒಂದು ಟ್ರಾನ್ಸಿಷನಲ್ ಅವಧಿಯಲ್ಲಿ ಸಾಗುತ್ತಿದೆ, ಸಂಬಂಧಗಳು ಬದಲಾಗುತ್ತಿವೆ. ಹಿಂದೆ ನೋಡಿದ ಭಾರತವೇನೂ ಕಾಣೆಯಾಗಿಲ್ಲ, (ನಮ್ಮಂಥ ’ಆಧುನಿಕ’ ಜಗತ್ತಿನಲ್ಲಿ ಪ್ರವೇಶಿಸುವವರಿಗೆ ಕಣ್ಮರೆಯಾಗಿದ್ದು ನಿಜ.) ಅದರೊಂದಿಗೆ ಹೊಸ ಜಗತ್ತೊಂದು ಸೃಷ್ಟಿಯಾಗಿದ್ದು, ಅದು ಹಲವರಿಗೆ ಮುಚ್ಚಿದ ಬಾಗಿಲ ಜಗತ್ತಿನಂತೆ ಇದೆ. ಪ್ರವೇಶಾವಕಾಶ ಎಲ್ಲರಿಗೂ ಇದೆ ಎಂದು ಮೇಲ್ನೋಟಕ್ಕೆ ಕಾಣಿಸಿದರೂ, ಹೆಚ್ಚಿನವರಿಗೆ ಅದರ ಬಾಗಿಲು ಮುಚ್ಚಿಯೇ ಇದೆ. ಆ ಜಗತ್ತಿನ ಭಾಷೆ ಇಂಗ್ಲಿಷು. ಭಾಷೆಯೊಂದಿಗೆ ಸಂಸ್ಕೃತಿ ಹೇಗೆ ತಗಲುಹಾಕಿಕೊಂಡಿದೆ ಎಂಬುದು ನಮಗೆಲ್ಲ ತಿಳಿದ ವಿಷಯ. ಈ ’ಸೌತ್ ಬಾಂಬೆ’(ಸೊಬೊ)ಯ ಜಗತ್ತನ್ನು ಭೇದಿಸುವುದು ಕಷ್ಟವಿದ್ದರೂ, ಭೇದಿಸಿದವರೂ ಅನೇಕರಿದ್ದಾರೆ. ಈ ಎರಡೂ ಜಗತ್ತುಗಳಲ್ಲಿ ವಿಹರಿಸಿದ ಇವರ ಸಾಹಿತ್ಯ ಓದಲು ಎಂದಿಗೂ ಕುತೂಹಲಕಾರಿಯಾದದ್ದೇ.

ಬೇಟೆಯಲ್ಲ ಆಟವೆಲ್ಲ ಎಂಬ ಎಂ ಎಸ್ ಶ್ರೀರಾಮ್ ಅವರ ಕಥೆಯೂ ಈ ಜಗತ್ತನ್ನು ಭೇದಿಸಿದವರ ಕಥೆ. ಕಾರ್ಪೋರೇಟ್ ಜಗತ್ತಿನ ಹೆಚ್ಚಿನ ಕಥೆಗಳಂತೆ ಈ ಕಥೆಯೂ ಹೊಸ ಜಗತ್ತಿನಲ್ಲಿ ’ಯಶಸ್ವಿ’ಯಾದವರ ಕಥೆ. ಹೊರಗಿನಿಂದ ಕಾಣುವ ನಮ್ಮಂತವರಿಗೆ, ಮೈಸೂರಿನ ಮೂಲದ ಪಾತ್ರಗಳಿಗೆ ತಮ್ಮ ಬೇರುಗಳನ್ನು ಸಂಪೂರ್ಣವಾಗಿ ಕಳಚಿ, ಪೂರ್ಣಪ್ರಮಾಣದಲ್ಲಿ ’ಸೊಬೊ’ ಆಗಬಹುದಲ್ಲ ಎಂದೆನಿಸುತ್ತಾದರೂ, ಇವರ್‍ಯಾರೂ ಬೇರುಗಳನ್ನು ಕಳಚಿಕೊಳ್ಳುವುದಿಲ್ಲ. ಬಹುಶಃ ಆ ಮಟ್ಟದ ಯಶಸ್ವಿಗಳಾಗಿಲ್ಲವೇನೋ, ಅಥವಾ ಎಷ್ಟೇ ಯಶಸ್ಸು ಕಂಡರೂ ಸಂಪೂರ್ಣವಾಗಿ ಬೇರುಗಳನ್ನು ಕಳಚಿಕೊಳ್ಳಲು ಸಾಧ್ಯವಿಲ್ಲವೇನೋ.

ಸಹಜವಾಗಿಯೇ ಎಲ್ಲಾ ಪಾತ್ರಗಳು ಒಂದು ಟ್ರಾನ್ಸ್‌ಫಾರ್ಮೇಷನ್‌ಗೆ ಒಳಗಾಗಿದ್ದಾರೆ. ಅನಿರುದ್ಧ ಒಬ್ಬ ಆರ್ಥಾಡಾಕ್ಸ್ ವ್ಯಕ್ತಿಯಿಂದ ಅಷ್ಟೇನೂ ಆರ್ಥಾಡಾಕ್ಸ್ ಆಗಿರದ ವ್ಯಕ್ತಿಯಾಗಿ ಬದಲಾದರೆ, ಅವನು ಗೆಳೆಯ ಅಖ್ತರ್ ಹುಸೇನ್‌ನ ರೂಪಾಂತರ ಮೇಲ್ನೋಟಕ್ಕೆ ಅವನ ವಿರುದ್ಧದ ದಿಕ್ಕಿನಲ್ಲಿದೆ. ಸುಜಾತಳ ಟ್ರಾನ್ಸ್‌ಫಾರ್ಮೇಷನ್ ಅತ್ಯಂತ ಡ್ರಾಸ್ಟಿಕ್ ಆಗಿದೆ ಮತ್ತು ಆಕೆ ಎಲ್ಲರಿಗಿಂತ ಯಶಸ್ವಿಯಾಗಿದ್ದಾಗಿದೆ. ಅವರ ಆಳದ ಭಾವಗಳು, ದ್ವಂದ್ವಗಳು, ತೋರಿಕೆಗಳೆಲ್ಲವೂ ಸಹಜವಾಗಿ ಒಂದೊಂದಾಗಿ ತೆರೆದುಕೊಳ್ಳುತ್ತವೆ. ಸಹಜವಾಗಿ ತೆರೆದುಕೊಳ್ಳದೇ ಇರುವುದು ಈಗಾಗಲೇ ಆ ಸೊಬೊ ಜಗತ್ತಿನಲ್ಲಿರುವವರ ದ್ವಂದ್ವಗಳು. ಅವರನ್ನು ನೋಡಿದಾಗ ಅನಿಸುವುದು ಹಾಗೆಯೇ, ಎಷ್ಟು ಸಾರ್ಟೆಡ್ ಇದಾರಪ್ಪ, ದ್ವಂದ್ವಗಳೇ ಇಲ್ಲ ಎಂದು. ಶಿವಾನಿ ಆ ಲೋಕವನ್ನು ಪ್ರತಿನಿಧಿಸುತ್ತಾಳೆ. ಅವಳು ನನಗೆ ತಿಳಿಯಲಿಲ್ಲ. ಅವಳ ಬಾಯ್‌ಫ್ರೆಂಡ್ ಚಿನ್ಮಯನಿಗೆ ಅನಿಸಿದಂತೆ ಓದುಗನಿಗೂ ಅವಳು ಕ್ರೂರಿ ಎನಿಸುತ್ತಾಳೆ. ವ್ಯವಹಾರದಲ್ಲಿ ಅವಳು ಕ್ರುಎಲ್ ಆಗಿಯೇ ಮುಂದುವರೆಯಬೇಕಾದ ಅವಶ್ಯಕತೆ ಅವಳಿಗಿರಬಹುದು ಆದರೆ ವೈಯಕ್ತಿಕ ಜೀವನದಲ್ಲಿ? ಹೌದು, ಇರಬಹುದು. ಆದರೂ ಅವಳನ್ನು ಅರಿಯುವ, ಅವಳ ಒಳಜಗತ್ತಿನೊಳಗೆ ಇಣುಕುವ ತವಕವನ್ನು ತಣಿಸುವುದಿಲ್ಲ. ಚಿನ್ಮಯ ಮತ್ತು ಶಿವಾನಿ ನಡುವೆ ಇರಬಹುದಾಗಿದ್ದ ಪ್ಯಾಷನ್ ಓದುಗನಿಗೆ ಕಾಣಿಸುವುದಿಲ್ಲ. ಪ್ಯಾಷನ್ ಇಲ್ಲದೇ ಇರುವ ಸಂಬಂಧವಾಗಿದ್ದರೆ, ಪ್ಯಾಷನ್ ಇಲ್ಲದ, ತಣ್ಣನೆಯ ಸಂಬಂಧದ ಬಗ್ಗೆ ಇರುವ ಕುತೂಹಲವೂ ತಣಿಯುವುದಿಲ್ಲ.

ಇಲ್ಲಿಯ ಗಂಡು ಹೆಣ್ಣಿನ ಸಂಬಂಧಗಳಲ್ಲಿ ಆ ಒಂದು ತೀವ್ರವಾದ ಪ್ಯಾಷನ್ ಕಾಣಿಸುವುದಿಲ್ಲ. ಅನಿರುದ್ಧ ಕವಿತಾಳ ಸಂಬಂಧದಲ್ಲೂ ಅದು ಉಳಿದಿಲ್ಲ. ಸುಜಾತಾ ಮುಕುಂದನ ಸಂಬಂಧದಲ್ಲಿ ಅದು ಕಾಣಿಸದಿದ್ದರೂ, ಮುಕುಂದ ಮತ್ತು ಶಿವಾನಿಯ ಸಂಬಂಧವನ್ನು ಕೆದಕದೇ ಹೋಗಿದ್ದು ಆಶ್ಚರ್ಯ.

ಸಂಬಂಧಗಳು ಬದಲಾಗುತ್ತಿರುವ ಸಮಯದಲ್ಲಿ ಬದಲಾಗುತ್ತಿರುವ ರಾಜಕೀಯವನ್ನು ಎಲ್ಲೂ ತುರುಕುವ ಪ್ರಯತ್ನ ಮಾಡದೇ, ಈ ಪಾತ್ರಗಳು ಸವೆಸುವ ಪಯಣದಲ್ಲಿಯೇ ರಾಜಕೀಯದಲ್ಲಾದ ಸೂಕ್ಷ್ಮ ಬದಲಾವಣೆಗಳನ್ನು, ಅವುಗಳು ಬೀರುತ್ತಿರುವ ಪರಿಣಾಮಗಳನ್ನೂ ಅಷ್ಟೇ ಆಳವಾಗಿ ಸೂಕ್ಷ್ಮವಾಗಿ ಕಂಡಿದ್ದಾರೆ. ಈ ಟ್ರಾನ್ಸಿಷನ್‌ನ ಪರ್ವ ಎಂದರೆ ಅದರ ಪ್ರಮುಖ ಅಂಶ ಗೊಂದಲ. ಈ ಗೊಂದಲಗೋಜಲುಗಳನ್ನು ಲೀಲಾಜಾಲವಾಗಿ ಹಿಡಿದಿಟ್ಟು, ಕಥೆಯೂ ಒಂದಿಷ್ಟು ಗೊಂದಲಗಳನ್ನು ಸೃಷ್ಟಿಸಿ ನಮ್ಮ ಕಾಲದ ಒಂದು ಅತ್ಯಂತ ಪ್ರಮುಖ ಕೃತಿಯನ್ನು ಶ್ರೀರಾಮ್ ರಚಿಸಿದ್ದಾರೆ. ನಮ್ಮೆಲ್ಲರನ್ನು ಆವರಿಸುವ ಈ ಸುಂದರ ಗೊಂದಲಗೋಜಲುಗಳನ್ನು ಅನಾವರಣಗೊಳಿಸುವ-ಬಿಡಿಸುವ ಸಾಹಿತ್ಯ ಕೃತಿಗಳು ಕನ್ನಡದಲ್ಲಿ ಹೆಚ್ಚೆಚ್ಚು ಮೂಡಲಿ.

ರಾಜಶೇಖರ ಅಕ್ಕಿ
ಸಾಮಾಜಿಕ ಕಾರ್ಯಕರ್ತರಾಗಿರುವ ಅಕ್ಕಿ ಅಭಿನಯ, ಚಿತ್ರಕಥೆ ಬರಹ ಕಲಿಸಿಕೊಡುತ್ತಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಬಿಳಿಮಲೆಯವರ ’ಕಾಗೆ ಮುಟ್ಟಿದ ನೀರು’ ಮೌಢ್ಯ ಕಾನನಕೆ ಬೆಂಕಿ ಹಚ್ಚಿ …

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...