Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ; ಬೇಟೆಯಲ್ಲ ಆಟವೆಲ್ಲ: ಗೊಂದಲ ಗೋಜಲುಗಳನ್ನು ಕಾಣಿಸುವ ಕಾದಂಬರಿ

ಪುಸ್ತಕ ಪರಿಚಯ; ಬೇಟೆಯಲ್ಲ ಆಟವೆಲ್ಲ: ಗೊಂದಲ ಗೋಜಲುಗಳನ್ನು ಕಾಣಿಸುವ ಕಾದಂಬರಿ

- Advertisement -
- Advertisement -

ಜಯಂತ್ ಕಾಯ್ಕಿಣಿ, ವಿವೇಕ್ ಶಾನಬಾಗ್ ಮತ್ತು ಎಂ.ಎಸ್. ಶ್ರೀರಾಮ್ ಈ ಮೂವರೂ ಬರಹಗಾರರ ಬಗ್ಗೆ ನನಗೆ ಯಾವಾಗಲೂ ಹೆಚ್ಚಿನ ಕುತೂಹಲ. ಈ ಮೂವರೂ ಹಲವು ಘಟ್ಟಗಳಲ್ಲಿ, ಕರ್ನಾಟಕದಿಂದ ದೂರದಲ್ಲಿ-ದೇಶದ ಹಲವೆಡೆಯಲ್ಲಿ, ದೇಶದಿಂದಾಚೆಗೆ ನೆಲೆಸಿದ್ದು, ಬದಲಾಗುತ್ತಿರುವ ಜಗತ್ತನ್ನು ಕರ್ನಾಟಕದ ಸೊಗಡಿನೊಂದಿಗೆ ಖುದ್ದಾಗಿ ನೋಡಿದವರು. ನನ್ನ ಪ್ರೀತಿಯ ಊರಾದ ಮುಂಬಯಿಯಲ್ಲಿ ಇದ್ದವರು(ಹೀಗೆ ನಾನು ಅಂದುಕೊಂಡಿದ್ದು). ನನ್ನ ಸೀಮಿತ ತಿಳಿವಳಿಕೆಯಲ್ಲಿ ವ್ಯಾಸರಾಯ ಬಲ್ಲಾಳರು ಮತ್ತು ಯಶವಂತ ಚಿತ್ತಾಲರ ನಂತರ ಕಾರ್ಪೋರೆಟ್ ಜಗತ್ತನ್ನು ಖುದ್ದಾಗಿ ನೋಡಿ ಬರೆದವರು ಇವರುಗಳೇ. ಕಾಯ್ಕಿಣಿ ಕಟ್ಟಿಕೊಡುವ ಮುಂಬಯಿಯ ವಿವರ ನನ್ನ ಕಣ್ಣನ್ನು ಅರಳಿಸುತ್ತಿದ್ದವು. ಆದರೆ ನನ್ನ ಮುಂಬಯಿ ಮತ್ತು ಕಾಯ್ಕಿಣಿಯವರ ಮುಂಬಯಿಯಲ್ಲಿ ದೊಡ್ಡ ಅಂತರವಿದೆ. ನಾನು ಮುಂಬಯಿ ಸೇರಿದ ವರ್ಷವೇ ಅವರು ಮುಂಬಯಿ ತೊರೆದಿದ್ದೂ ಅದಕ್ಕೆ ಕಾರಣವಿರಬಹುದು.

ನಮ್ಮ(ಭಾರತದ) ಜಗತ್ತು ಒಂದು ಟ್ರಾನ್ಸಿಷನಲ್ ಅವಧಿಯಲ್ಲಿ ಸಾಗುತ್ತಿದೆ, ಸಂಬಂಧಗಳು ಬದಲಾಗುತ್ತಿವೆ. ಹಿಂದೆ ನೋಡಿದ ಭಾರತವೇನೂ ಕಾಣೆಯಾಗಿಲ್ಲ, (ನಮ್ಮಂಥ ’ಆಧುನಿಕ’ ಜಗತ್ತಿನಲ್ಲಿ ಪ್ರವೇಶಿಸುವವರಿಗೆ ಕಣ್ಮರೆಯಾಗಿದ್ದು ನಿಜ.) ಅದರೊಂದಿಗೆ ಹೊಸ ಜಗತ್ತೊಂದು ಸೃಷ್ಟಿಯಾಗಿದ್ದು, ಅದು ಹಲವರಿಗೆ ಮುಚ್ಚಿದ ಬಾಗಿಲ ಜಗತ್ತಿನಂತೆ ಇದೆ. ಪ್ರವೇಶಾವಕಾಶ ಎಲ್ಲರಿಗೂ ಇದೆ ಎಂದು ಮೇಲ್ನೋಟಕ್ಕೆ ಕಾಣಿಸಿದರೂ, ಹೆಚ್ಚಿನವರಿಗೆ ಅದರ ಬಾಗಿಲು ಮುಚ್ಚಿಯೇ ಇದೆ. ಆ ಜಗತ್ತಿನ ಭಾಷೆ ಇಂಗ್ಲಿಷು. ಭಾಷೆಯೊಂದಿಗೆ ಸಂಸ್ಕೃತಿ ಹೇಗೆ ತಗಲುಹಾಕಿಕೊಂಡಿದೆ ಎಂಬುದು ನಮಗೆಲ್ಲ ತಿಳಿದ ವಿಷಯ. ಈ ’ಸೌತ್ ಬಾಂಬೆ’(ಸೊಬೊ)ಯ ಜಗತ್ತನ್ನು ಭೇದಿಸುವುದು ಕಷ್ಟವಿದ್ದರೂ, ಭೇದಿಸಿದವರೂ ಅನೇಕರಿದ್ದಾರೆ. ಈ ಎರಡೂ ಜಗತ್ತುಗಳಲ್ಲಿ ವಿಹರಿಸಿದ ಇವರ ಸಾಹಿತ್ಯ ಓದಲು ಎಂದಿಗೂ ಕುತೂಹಲಕಾರಿಯಾದದ್ದೇ.

ಬೇಟೆಯಲ್ಲ ಆಟವೆಲ್ಲ ಎಂಬ ಎಂ ಎಸ್ ಶ್ರೀರಾಮ್ ಅವರ ಕಥೆಯೂ ಈ ಜಗತ್ತನ್ನು ಭೇದಿಸಿದವರ ಕಥೆ. ಕಾರ್ಪೋರೇಟ್ ಜಗತ್ತಿನ ಹೆಚ್ಚಿನ ಕಥೆಗಳಂತೆ ಈ ಕಥೆಯೂ ಹೊಸ ಜಗತ್ತಿನಲ್ಲಿ ’ಯಶಸ್ವಿ’ಯಾದವರ ಕಥೆ. ಹೊರಗಿನಿಂದ ಕಾಣುವ ನಮ್ಮಂತವರಿಗೆ, ಮೈಸೂರಿನ ಮೂಲದ ಪಾತ್ರಗಳಿಗೆ ತಮ್ಮ ಬೇರುಗಳನ್ನು ಸಂಪೂರ್ಣವಾಗಿ ಕಳಚಿ, ಪೂರ್ಣಪ್ರಮಾಣದಲ್ಲಿ ’ಸೊಬೊ’ ಆಗಬಹುದಲ್ಲ ಎಂದೆನಿಸುತ್ತಾದರೂ, ಇವರ್‍ಯಾರೂ ಬೇರುಗಳನ್ನು ಕಳಚಿಕೊಳ್ಳುವುದಿಲ್ಲ. ಬಹುಶಃ ಆ ಮಟ್ಟದ ಯಶಸ್ವಿಗಳಾಗಿಲ್ಲವೇನೋ, ಅಥವಾ ಎಷ್ಟೇ ಯಶಸ್ಸು ಕಂಡರೂ ಸಂಪೂರ್ಣವಾಗಿ ಬೇರುಗಳನ್ನು ಕಳಚಿಕೊಳ್ಳಲು ಸಾಧ್ಯವಿಲ್ಲವೇನೋ.

ಸಹಜವಾಗಿಯೇ ಎಲ್ಲಾ ಪಾತ್ರಗಳು ಒಂದು ಟ್ರಾನ್ಸ್‌ಫಾರ್ಮೇಷನ್‌ಗೆ ಒಳಗಾಗಿದ್ದಾರೆ. ಅನಿರುದ್ಧ ಒಬ್ಬ ಆರ್ಥಾಡಾಕ್ಸ್ ವ್ಯಕ್ತಿಯಿಂದ ಅಷ್ಟೇನೂ ಆರ್ಥಾಡಾಕ್ಸ್ ಆಗಿರದ ವ್ಯಕ್ತಿಯಾಗಿ ಬದಲಾದರೆ, ಅವನು ಗೆಳೆಯ ಅಖ್ತರ್ ಹುಸೇನ್‌ನ ರೂಪಾಂತರ ಮೇಲ್ನೋಟಕ್ಕೆ ಅವನ ವಿರುದ್ಧದ ದಿಕ್ಕಿನಲ್ಲಿದೆ. ಸುಜಾತಳ ಟ್ರಾನ್ಸ್‌ಫಾರ್ಮೇಷನ್ ಅತ್ಯಂತ ಡ್ರಾಸ್ಟಿಕ್ ಆಗಿದೆ ಮತ್ತು ಆಕೆ ಎಲ್ಲರಿಗಿಂತ ಯಶಸ್ವಿಯಾಗಿದ್ದಾಗಿದೆ. ಅವರ ಆಳದ ಭಾವಗಳು, ದ್ವಂದ್ವಗಳು, ತೋರಿಕೆಗಳೆಲ್ಲವೂ ಸಹಜವಾಗಿ ಒಂದೊಂದಾಗಿ ತೆರೆದುಕೊಳ್ಳುತ್ತವೆ. ಸಹಜವಾಗಿ ತೆರೆದುಕೊಳ್ಳದೇ ಇರುವುದು ಈಗಾಗಲೇ ಆ ಸೊಬೊ ಜಗತ್ತಿನಲ್ಲಿರುವವರ ದ್ವಂದ್ವಗಳು. ಅವರನ್ನು ನೋಡಿದಾಗ ಅನಿಸುವುದು ಹಾಗೆಯೇ, ಎಷ್ಟು ಸಾರ್ಟೆಡ್ ಇದಾರಪ್ಪ, ದ್ವಂದ್ವಗಳೇ ಇಲ್ಲ ಎಂದು. ಶಿವಾನಿ ಆ ಲೋಕವನ್ನು ಪ್ರತಿನಿಧಿಸುತ್ತಾಳೆ. ಅವಳು ನನಗೆ ತಿಳಿಯಲಿಲ್ಲ. ಅವಳ ಬಾಯ್‌ಫ್ರೆಂಡ್ ಚಿನ್ಮಯನಿಗೆ ಅನಿಸಿದಂತೆ ಓದುಗನಿಗೂ ಅವಳು ಕ್ರೂರಿ ಎನಿಸುತ್ತಾಳೆ. ವ್ಯವಹಾರದಲ್ಲಿ ಅವಳು ಕ್ರುಎಲ್ ಆಗಿಯೇ ಮುಂದುವರೆಯಬೇಕಾದ ಅವಶ್ಯಕತೆ ಅವಳಿಗಿರಬಹುದು ಆದರೆ ವೈಯಕ್ತಿಕ ಜೀವನದಲ್ಲಿ? ಹೌದು, ಇರಬಹುದು. ಆದರೂ ಅವಳನ್ನು ಅರಿಯುವ, ಅವಳ ಒಳಜಗತ್ತಿನೊಳಗೆ ಇಣುಕುವ ತವಕವನ್ನು ತಣಿಸುವುದಿಲ್ಲ. ಚಿನ್ಮಯ ಮತ್ತು ಶಿವಾನಿ ನಡುವೆ ಇರಬಹುದಾಗಿದ್ದ ಪ್ಯಾಷನ್ ಓದುಗನಿಗೆ ಕಾಣಿಸುವುದಿಲ್ಲ. ಪ್ಯಾಷನ್ ಇಲ್ಲದೇ ಇರುವ ಸಂಬಂಧವಾಗಿದ್ದರೆ, ಪ್ಯಾಷನ್ ಇಲ್ಲದ, ತಣ್ಣನೆಯ ಸಂಬಂಧದ ಬಗ್ಗೆ ಇರುವ ಕುತೂಹಲವೂ ತಣಿಯುವುದಿಲ್ಲ.

ಇಲ್ಲಿಯ ಗಂಡು ಹೆಣ್ಣಿನ ಸಂಬಂಧಗಳಲ್ಲಿ ಆ ಒಂದು ತೀವ್ರವಾದ ಪ್ಯಾಷನ್ ಕಾಣಿಸುವುದಿಲ್ಲ. ಅನಿರುದ್ಧ ಕವಿತಾಳ ಸಂಬಂಧದಲ್ಲೂ ಅದು ಉಳಿದಿಲ್ಲ. ಸುಜಾತಾ ಮುಕುಂದನ ಸಂಬಂಧದಲ್ಲಿ ಅದು ಕಾಣಿಸದಿದ್ದರೂ, ಮುಕುಂದ ಮತ್ತು ಶಿವಾನಿಯ ಸಂಬಂಧವನ್ನು ಕೆದಕದೇ ಹೋಗಿದ್ದು ಆಶ್ಚರ್ಯ.

ಸಂಬಂಧಗಳು ಬದಲಾಗುತ್ತಿರುವ ಸಮಯದಲ್ಲಿ ಬದಲಾಗುತ್ತಿರುವ ರಾಜಕೀಯವನ್ನು ಎಲ್ಲೂ ತುರುಕುವ ಪ್ರಯತ್ನ ಮಾಡದೇ, ಈ ಪಾತ್ರಗಳು ಸವೆಸುವ ಪಯಣದಲ್ಲಿಯೇ ರಾಜಕೀಯದಲ್ಲಾದ ಸೂಕ್ಷ್ಮ ಬದಲಾವಣೆಗಳನ್ನು, ಅವುಗಳು ಬೀರುತ್ತಿರುವ ಪರಿಣಾಮಗಳನ್ನೂ ಅಷ್ಟೇ ಆಳವಾಗಿ ಸೂಕ್ಷ್ಮವಾಗಿ ಕಂಡಿದ್ದಾರೆ. ಈ ಟ್ರಾನ್ಸಿಷನ್‌ನ ಪರ್ವ ಎಂದರೆ ಅದರ ಪ್ರಮುಖ ಅಂಶ ಗೊಂದಲ. ಈ ಗೊಂದಲಗೋಜಲುಗಳನ್ನು ಲೀಲಾಜಾಲವಾಗಿ ಹಿಡಿದಿಟ್ಟು, ಕಥೆಯೂ ಒಂದಿಷ್ಟು ಗೊಂದಲಗಳನ್ನು ಸೃಷ್ಟಿಸಿ ನಮ್ಮ ಕಾಲದ ಒಂದು ಅತ್ಯಂತ ಪ್ರಮುಖ ಕೃತಿಯನ್ನು ಶ್ರೀರಾಮ್ ರಚಿಸಿದ್ದಾರೆ. ನಮ್ಮೆಲ್ಲರನ್ನು ಆವರಿಸುವ ಈ ಸುಂದರ ಗೊಂದಲಗೋಜಲುಗಳನ್ನು ಅನಾವರಣಗೊಳಿಸುವ-ಬಿಡಿಸುವ ಸಾಹಿತ್ಯ ಕೃತಿಗಳು ಕನ್ನಡದಲ್ಲಿ ಹೆಚ್ಚೆಚ್ಚು ಮೂಡಲಿ.

ರಾಜಶೇಖರ ಅಕ್ಕಿ
ಸಾಮಾಜಿಕ ಕಾರ್ಯಕರ್ತರಾಗಿರುವ ಅಕ್ಕಿ ಅಭಿನಯ, ಚಿತ್ರಕಥೆ ಬರಹ ಕಲಿಸಿಕೊಡುತ್ತಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಬಿಳಿಮಲೆಯವರ ’ಕಾಗೆ ಮುಟ್ಟಿದ ನೀರು’ ಮೌಢ್ಯ ಕಾನನಕೆ ಬೆಂಕಿ ಹಚ್ಚಿ …

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...