Homeಪುಸ್ತಕ ವಿಮರ್ಶೆಪುಸ್ತಕ ವಿಮರ್ಶೆ: ಸ್ತ್ರೀ ಸಂವೇದನೆಯ ಕವಿತೆಗಳ ಹೊಸ ಓದು

ಪುಸ್ತಕ ವಿಮರ್ಶೆ: ಸ್ತ್ರೀ ಸಂವೇದನೆಯ ಕವಿತೆಗಳ ಹೊಸ ಓದು

- Advertisement -
- Advertisement -

ಒಲವಿನ ಹುಡುಕಾಟದ ನಡುವೆಯೇ ಕವಿತೆಗಳು ಹುಟ್ಟುತ್ತವೆ. ಪ್ರಕೃತಿ ಮತ್ತು ಪ್ರೀತಿ ಮನುಷ್ಯನ ಅವಿಭಾಜ್ಯ ಅಂಗ. ತದನಂತರದಲ್ಲಿ ವ್ಯಕ್ತಿನಿಷ್ಠ ಅನುಭವಗಳನ್ನು ಸಮಷ್ಠಿಯತ್ತ ಕೊಂಡೊಯ್ಯುವ ಶಕ್ತಿ ಕವಿಗಿರುತ್ತದೆ. ಅಂತಹ ಕವಿ ಮಾತ್ರ ಕಾಲದಾಚೆಗೂ ನಿಂತುಕೊಳ್ಳುತ್ತಾನೆ ಅನ್ನುವುದನ್ನು ಮರೆಯುವಂತಿಲ್ಲ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಬಹಳಷ್ಟು ಜನರು ಬೇಗುದಿಗಳನ್ನು, ತಲ್ಲಣಗಳನ್ನು, ಆತಂಕಗಳನ್ನೂ ಅನುಭವಿಸಿದರು. ಅದರ ನಡುವೆಯೇ ಬಹಳಷ್ಟು ಸಾಹಿತ್ಯ ಕೃತಿಗಳು ಹೊರಬಂದವು. ಆದರೆ ಅನಾದಿಕಾಲದಿಂದಲೂ, ಅಡುಗೆಮನೆಯ ಬೇಗುದಿ ಬೇರೊಂದು ತೆರನಾದದ್ದು ಎಂದು ಹೇಳಬೇಕಾಗಿಲ್ಲ. ಅದಕ್ಕೊಂದು ಹೊಗೆ ಕೊಳವೆ – ಚಿಮಣಿ ಆಮೇಲೆ ಎಕ್ಸಾಸ್ಟ್ ಫ್ಯಾನ್ ಆಧುನಿಕ ಕಾಲದಲ್ಲಿ ಬಂದರೂ ಹೊಗೆ ಪೂರ್ಣವಾಗಿ ಹೊರಹೋಗಿದ್ದುರ ಖಚಿತತೆ ಇನ್ನೂ ಗೊತ್ತಾಗಿಲ್ಲವೆಂದೇ ಹೇಳಬೇಕಾಗುತ್ತದೆ. ಕೊರೊನಾ ಕಾಲದ 2020ರಲ್ಲಿನ ಎರಡು ಮಹಿಳಾ ಕವನ ಸಂಕಲನಗಳನ್ನು ಉಲ್ಲೇಖಿಸುವ ಸಂದರ್ಭ ಬಂದಾಗ, ಒಂದು ಬಿ. ಆರ್. ಶೃತಿಯವರ ’ಜೀರೋ ಬ್ಯಾಲೆನ್ಸ್’ ಇನ್ನೊಂದು ಮಂಜುಳಾ ಹಿರೇಮಠರವರ ’ಗಾಯಗೊಂಡವರಿಗೆ’ ನೆನಪಾಗುತ್ತದೆ.

’ಜೀರೋ ಬ್ಯಾಲೆನ್ಸ್’ ಶೀರ್ಷಿಕೆ ಕ್ಯಾಚಿಯಾಗಿರುವ ಹಾಗೆ ಅದರೊಳಗಿರುವ ಕವಿತೆಗಳು ಸಹ ಓದುಗನ ಮನಸ್ಸನ್ನು ಹಿಡಿದಿಡುವುದರಲ್ಲಿ ಸಫಲವಾಗಿವೆ. ಆರ್ಥಿಕ ಮುಗ್ಗಟ್ಟು, ಜಿಡಿಪಿ ಕುಸಿತಗಳ ನಡುವೆ ’ಜೀರೋ ಬ್ಯಾಲೆನ್ಸ್’ ಅನ್ನುವ ಶೀರ್ಷಿಕೆ ಏನು ಹೇಳಲು ಹೊರಟಿದೆ ಅನ್ನುವ ಕುತೂಹಲ ಮೂಡಿಸುವುದು ಸಹಜವಾಗಿದೆ. ’ಏರುತ್ತಿರುವ ದರಗಳೊಂದಿಗೆ ಸೆಣಿಸಿ ಸೋತು’ ಮಧ್ಯಮ ವರ್ಗದ ಜನರ ಉಳಿತಾಯದ ಖಾತೆಯಲ್ಲಿ ಬ್ಯಾಲೆನ್ಸ್ ಜೀರೋ ಎನ್ನುವುದರ ಸಾಂಕೇತಿಕವಾಗಿದೆ ’ಜೀರೋ ಬ್ಯಾಲೆನ್ಸ್’ ಕವಿತೆ.

ಒಳಗಿನ ಬೇಗುದಿಯ ಹೊರಹಾಕಲು
ಎದೆಗೊಂದು ಎಕ್ಸಾಸ್ಟ್ ಫ್ಯಾನೋ
ಸಣ್ಣ ಕಿಟಕಿಯೋ ಇರಬಹುದಿತ್ತೆನಿಸಿತು

ಎನ್ನುವ ಸಾಲುಗಳಲ್ಲಿ ಮಹಿಳಾ ಬೇಗುದಿಯನ್ನು ಹೊರಹಾಕಲು ಒಂದು ಕವಾಟದ ಅಪೇಕ್ಷೆಯನ್ನಿಡುವ ಶೃತಿಯವರ ಹಲವಾರು ಕವನಗಳು ಮನದ ತೊಳಲಾಟಗಳ ಬ್ಯಾಲೆನ್ಸ್‌ನ್ನು ಜೀರೋ ಮಾಡಿಕೊಳ್ಳುವ ಪ್ರಯತ್ನವಂತೂ ಕವನಸಂಕಲನದಲ್ಲಿ ಕಾಣಸಿಗುತ್ತದೆ. ಆದರೆ ಇನ್ನೊಂದು ಮಗ್ಗುಲಲ್ಲಿ ’ಜೀರೋ’ ಅನ್ನುವುದನ್ನು ಶೂನ್ಯ ಎಂದು ಪರಿಗಣಿಸಿದರೆ ಪೂರ್ಣತೆಯಡೆ ಹೋಗಬೇಕಾಗುತ್ತದೆ. ಒಂದು ಕಾಲಕ್ಕೆ ಇಲ್ಲದಿದ್ದ ಸಮಸ್ಯೆಗಳು ಹಾಗೂ ಇದ್ದ ಸಮಸ್ಯೆಗಳು ಇವತ್ತು ಭಿನ್ನ ಸ್ವರೂಪದೊಡನೆ ಹೊಸ ಸವಾಲುಗಳೊಂದಿಗೆ ಸಮಾಜದ ಮುಂದೆ ನಿಂತಾಗ ಅದನ್ನು ಯಾವ ರೀತಿಯಾಗಿ ತೆಗೆದುಕೊಳ್ಳಬೇಕು ಎನ್ನುವುದು ಅಕೌಂಟ್ ಹೋಲ್ಡರ್‌ನ ಮುಂದಿರುವ ಸವಾಲು ಹೌದು! ಬ್ಯಾಲೆನ್ಸ್ ಜೀರೋ ಆದಾಗ ಅಕೌಂಟ್ ಕ್ಲೋಸ್ ಆಗುವುದಿಲ್ಲ. ಅದರ ಮುಂದೆ ಹಲವಾರು ಆಪ್ಶನ್‌ಗಳು ಇರುತ್ತವೆ ಎಂಬುದು ಸಹ ಸೂಚಿತವಾಗಿದೆ.

ಇನ್ನೇನು ಅಡುಗೆಯೋ ಮನೆಗೆಲಸವೋ ಮಾಡಿರಬೇಕು
ಮತ್ತೆ ಮುಟ್ಟು, ಬಸಿರು, ಚುಚ್ಚುಮಾತು
ಅದು ಹೆಂಗಸರಿಗೇನೆ ಆಗಲೂ-ಈಗಲೂ
ಬಿಡು ಅಪ್ಪನೊ, ಗಂಡನೊ ಹೇಳಿದಂತೆ

ಕೇಳಿಕೊಂಡು, ಆ ಒಡವೆಗಳೆಲ್ಲ ಹೇರಿಕೊಂಡು
ಮನೆಯಲ್ಲಿ ಬಿದ್ದಿದ್ದಾಳು ಅವಳೂ ಸಹ…

ಅದೆಲ್ಲಾ ಇಲ್ಲಕ್ಕ ಪುಸ್ತಕದಲ್ಲಿ ಎನ್ನುತ್ತಾ
ಅಕ್ಕನ ನಿಟ್ಟುಸಿರು ಅರ್ಥವಾಗದ ತಂಗಿ
ಪಿಳಿ ಪಿಳಿ ಕಣ್ಣುಬಿಟ್ಟಳು…

ಹೆಣ್ಣಿನ ಸ್ಥಿತಿಯನ್ನು ನಿಧಾನವಾಗಿ, ಸರಳವಾಗಿ ತೆರೆದಿಡುತ್ತಲೇ ಪ್ರತಿರೋಧವನ್ನು ವ್ಯಕ್ತಪಡಿಸುವ ಕವನ ’ಅಕ್ಕನ ಮೊಹೆಂಜೊದಾರೋ’. ತುಳಿಯುವ ಪ್ರಯತ್ನ ಅನಾದಿಯಿಂದಲೂ ನಡೆದುಕೊಂಡೇ ಬಂದಿರುವ ವ್ಯವಸ್ಥೆಯಲ್ಲಿ ಟೀಕಿಸಲು ಹಕ್ಕಿಲ್ಲ ಅಥವಾ ತನ್ನ ಹತಾಶೆಯನ್ನು ತೋರ್ಪಡಿಸಲು ದಾರಿಗಳೆಲ್ಲಿವೆ ಎಂಬ ಪ್ರಶ್ನೆಯನ್ನು ತಲತಲಾಂತರಗಳಿಂದ ಪ್ರಶ್ನಿಸಿಕೊಳ್ಳದ ಅಥವಾ ಪ್ರಶ್ನಿಸಿಕೊಳ್ಳುತ್ತಲೇ ಸುಮ್ಮನಿದ್ದುಬಿಡುವ ಸ್ತ್ರೀ ಸಂಕುಲಕ್ಕೆ ಬಿಡುಗಡೆಯ ದಾರಿಗಳು ಎಲ್ಲಿವೆ ಹಾಗಾದರೆ.. ಎನ್ನುತ್ತಲೇ ಸೂಕ್ಷ್ಮವಾಗಿ ಪ್ರಶ್ನಿಸುವ ಕವನಗಳನ್ನು ಸ್ತ್ರೀ ಸಂವೇದನೆಯ ಹಿನ್ನೆಲೆಯಲ್ಲಿ ಓದಬೇಕಾಗುತ್ತದೆ.

ಮಂಜುಳಾ ಹಿರೇಮಠರವರ ’ಗಾಯಗೊಂಡವರಿಗೆ’ ಕವನ ಸಂಕಲನ ಆತ್ಮ ನಿವೇದನೆಯ ರೂಪವನ್ನು ಹೊತ್ತುಬಂದಿರುವುದರ ಜೊತೆಗೆ ಖಾಸಗಿತನವನ್ನು ಎಳೆಯಾಗಿ ಅನಾವರಣಗೊಳಿಸುವ ಜಾಡುಹಿಡಿದು, ಹೊಸದಾದ ಧಾಟಿಯನ್ನು ಕಂಡುಕೊಳ್ಳುವಲ್ಲಿ ಸಫಲವಾಗಿದೆ. ಮೃದುವಾದ, ಸಹಜವಾದ ರೀತಿಯಲ್ಲಿ ಕಾವ್ಯವನ್ನು ಮಂಜುಳಾ ಕಟ್ಟಿಕೊಡುವ ರೀತಿ ’ಗಾಯಗೊಂಡವರಿಗೆ’ ಹೊಸದಾದ ಬ್ಯಾಂಡೇಜ್ ಹಾಕಿದಂತಿದೆ.

ಯುಗಯುಗಗಳಿಂದ
ಆಕೆಯನ್ನು ಕತ್ತಲ
ಕೋಣೆಯೊಳಗೆ
ಕೂಡಿ ಹಾಕಿ
ಬಳಿಕ ಆ ಕೋಣೆಗೆ
ಬೆಳಕನ್ನು ಹಾಯಿಸಬೇಡಿ

ಎನ್ನುವ ಸಾಲುಗಳು ’ಅವಳ’ ಕುರಿತು ಮಾತನಾಡುತ್ತವೆ. ಮಂಜುಳಾ ಹಿರೇಮಠರವರ ಕವಿತೆಗಳಲ್ಲಿಯೂ ಸ್ತ್ರೀ ಸಂವೇದನೆಯು ’ಕತ್ತಲ ಕೋಣೆಯಲ್ಲಿ’ನ ಬೆಳಕಿನ ಕಿಂಡಿಯ ಹಾಗೆ ಇಣುಕುತ್ತವೆ. ’ಪ್ರತಿಮೆಯಾಗೋಣ ಬಾ’ ಕವಿತೆ ಕ್ಷಮಿಸುವ ಔದಾರ್ಯತೆ ಇದೆ ಎನ್ನುವುದನ್ನು ಕವಯತ್ರಿಯ ಭಾವಲಹರಿಯಲ್ಲಿ ತಿಳಿಯುವಂತದ್ದು. ನನ್ನದೇ ಪದಗಳನ್ನು, ಅನುಭವಗಳನ್ನು ಈ ಕವಯತ್ರಿಯರಿಬ್ಬರೂ ನಿನ್ನೆ ರಾತ್ರಿ ಕಡ ತೆಗೆದುಕೊಂಡು ಹೋಗಿರುವವರೇ ಎನ್ನುವ ಭಾವನೆ ಪ್ರತಿಯೊಬ್ಬಳಿಗೂ ಈ ಕವನದಲ್ಲಿ ಝಳಪಿಸುತ್ತದೆ.

ಯಾರಿಗೂ ಕಾಣದಂಥ
ಆದರೆ ನಿಮಗೆ ಮಾತ್ರ ಕಾಣಬಹುದಾದ
ಗಾಯಗಳಿಗೆ ಮದ್ದು ಹಚ್ಚಿ ಕಟ್ಟಬಾರದು
ಬೀಸುಗಾಳಿಗೆ ಒಡ್ಡಿ ಒಣಗಿಸಬಾರದು
ಕಂಡಕಂಡವರಲ್ಲಿ ಅರುಹಿಕೊಂಡು
ಸ್ವತಃ ಸಾಂತ್ವನಗೊಳ್ಳಬಾರದು

ಗಾಯಗೊಂಡವರಿಗೆ ಕವನದಲ್ಲಿ ನೋವಿದೆ. ಆದರೆ ನೋವಿನಿಂದ ಬಿಡುಗಡೆ ಬಯಸುವ ನಿರೀಕ್ಷೆ ಇದೆಯಲ್ಲ ಅದೇ ಜೀವನ ಪ್ರಿತಿ. ಹಾಗಾದರೆ ಗಾಯ ಮಾಡಿದವರ ಕುರಿತು ಒಂದು ಕವಿತೆಯಂತೂ ಬರಬೇಕಲ್ಲವೇ?
ಜೀವನೋತ್ಸಾಹವಿದ್ದಾಗ ಮಾತ್ರವೇ ಅದೆಷ್ಟು ದಾಳಿಗಳಾದರೂ ಮತ್ತೆ ಮತ್ತೆ ಚಿಗುರುವ ಬದುಕುವ ಹಂಬಲವಿದ್ದೇ ಇರುತ್ತದೆ. ಇದೇ ಪ್ರಕೃತಿಯ ಗುಟ್ಟು. ಹೆಣ್ಣು ಸಹ ಪ್ರಕೃತಿಯಂತೆ; ಹೊರತಾಗಿಲ್ಲ. ಮನುಷ್ಯ ಸಾವಿಗೆ ಮೊರೆ ಹೋಗುವ ಅಗತ್ಯವಿಲ್ಲ. ಬದುಕಲು ನೂರಾರು ದಾರಿಗಳಿವೆ. ಗಾಯಗಳು ಎಲ್ಲರಿಗೂ ಕಾಣುವಂತಾದರೂ ಕಷ್ಟ! ಈ ಜಗದ ತುಂಬಾ ಮುಲಾಮು ಹಚ್ಚುವ ಕಾವಲುಗಾರರಿದ್ದಾರೆ. ಆದರೆ ಬೇಲಿಯೇ ಎದ್ದು ಹೊಲ ಮೇಯುವ ಸಾಧ್ಯತೆಗಳು ಹೆಚ್ಚಿವೆ. ಹಾಗಾಗಿ

ನಿಮಗೆ ಮಾತ್ರ ಕಾಣಬಹುದಾದ ಕಡೆಯಲ್ಲಿ
ತಣ್ಣಗೆ ಕೂತು ಅದನ್ನು ಬಿಡಿಸಿಡಿ

’ಗಾಯಗೊಂಡವರಿಗೆ’ ಕವನಸಂಕಲದಲ್ಲಿನ ಪ್ರತಿರೋಧ ತಣ್ಣನೆಯ ಮಂಜುಗಡ್ಡೆಯನ್ನು ಅಂಗಿಯೊಳಗೆ ಹಾಕಿದಂತಹ ಅನುಭವ ನೀಡುವಂತದ್ದು. ಪ್ರತಿರೋಧದ ಅಲೆ ಪ್ರತಿ ಹೆಣ್ಣಿನ ಆಳದಲ್ಲಿ ಇದ್ದೇ ಇರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ ಆದರೆ ಅದರ ಸ್ವರೂಪ ಹಾಗೂ ಸ್ಫೋಟಗೊಳ್ಳುವ ಪರಿಗಾಗಿ ಕಾಯಬೇಕಾಗುತ್ತದೆ ಹಾಗೂ ಸಿದ್ಧಗೊಳ್ಳಬೇಕಾಗುತ್ತದೆ.

ಶತಮಾನಗಳಿಂದ ವಿದ್ಯೆಯಿಂದ ವಂಚಿತಳಾಗಿ, ಲಿಂಗ ತಾರತಮ್ಯಕ್ಕೆ ಒಳಗಾಗಿದುದರ ಫಲವಾಗಿ ಮುಖ್ಯವಾಹಿನಿಗೆ ಬರುವಲ್ಲಿ ವಿಳಂಬವಾದ ಕಾರಣವೂ ಸೇರಿದಂತೆ, ಮಹಿಳೆ ಅಭಿವ್ಯಕ್ತಿಯಲ್ಲಿ ಇನ್ನೂ ಮುಂದೆ ಬರಬೇಕಾಗಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತಲೇ; ನೆರೆಯ ಮರಾಠಿ ಹಾಗೂ ಮಲಯಾಳ ಸಾಹಿತ್ಯವನ್ನು ಅವಲೋಕಿಸಿದಾಗ ಕಂಡುಬರುವ ಮುಕ್ತತೆ, ಸ್ವಾತಂತ್ರ್ಯ ಇನ್ನೂ ದಕ್ಕಿಸಿಕೊಳ್ಳಬೇಕಾಗಿದೆ.

ಬಿ. ಆರ್. ಶೃತಿ ಮತ್ತು ಮಂಜುಳಾ ಹಿರೇಮಠರವರ ಕವನ ಸಂಕಲನಗಳ ಹೆಸರು ’ಜೀರೋ ಬ್ಯಾಲೆನ್ಸ್’ ಹಾಗೂ ’ಗಾಯಗೊಂಡವರಿಗೆ’ ತತ್‌ಕ್ಷಣಕ್ಕೆ ನೆಗೆಟಿವ್ ಶೀರ್ಷಿಕೆಗಳೆಂದೆನಿಸಿದರೂ ಕವನಗಳ ಓದು ಆಶಾವಾದದ ಸಂದೇಶಗಳನ್ನು ನೀಡುತ್ತವೆ ಎನ್ನುವುದರಲ್ಲಿ ಸಂದೇಹವಿಲ್ಲ. ಇಲ್ಲಿನ ಕವಯತ್ರಿಯರ ಭಾವಗಳನ್ನು ಓದುಗ ತನ್ನದೇ ಎನ್ನುವಷ್ಟರಮಟ್ಟಿಗೆ ಆವಾಹಿಸಿಕೊಂಡು ಆಪ್ತತೆಯನ್ನು ಪಡೆಯುವಷ್ಟು ಸಶಕ್ತವಾಗಿವೆ. ವಿಶೇಷ ಏನೆಂದರೆ ಶತಮಾನಗಳಿಂದ ’ಗಾಯಗೊಂಡವರಿಗೆ’ಲ್ಲ ಅಂತರಂಗದ ನೋವನ್ನು ’ಜೀರೋ ಬ್ಯಾಲೆನ್ಸ್’ ಮಾಡುವ ಸಂದರ್ಭ ಬರುತ್ತಿದೆ ಎನ್ನುತ್ತಿವೆ ಪ್ರಸ್ತುತ ಕವನ ಸಂಕಲನಗಳು.

ಶೋಭಾ ನಾಯಕ್

ಶೋಭಾ ನಾಯಕ್
ಶೋಭಾ ನಾಯಕ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. 6 ಸುವರ್ಣ ಪದಕಗಳೊಂದಿಗೆ ಕರ್ನಾಟಕ ವಿ.ವಿ ಸ್ನಾತಕೋತ್ತರ ಪದವಿ ಪಡೆದರು. ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; “ಐ ಕಾಂಟ್ ಬ್ರೀದ್” ಉಸಿರುಗಟ್ಟಿಸುವ ವಾತಾವರಣದ ಸಂಕಟಗಳ ಅನಾವರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...