Homeಅಂಕಣಗಳುಪುಸ್ತಕ ವಿಮರ್ಶೆ; "ಐ ಕಾಂಟ್ ಬ್ರೀದ್" ಉಸಿರುಗಟ್ಟಿಸುವ ವಾತಾವರಣದ ಸಂಕಟಗಳ ಅನಾವರಣ

ಪುಸ್ತಕ ವಿಮರ್ಶೆ; “ಐ ಕಾಂಟ್ ಬ್ರೀದ್” ಉಸಿರುಗಟ್ಟಿಸುವ ವಾತಾವರಣದ ಸಂಕಟಗಳ ಅನಾವರಣ

- Advertisement -
- Advertisement -

ಕೊಪ್ಪಳದ ಯುವಕವಿ ಮಹೇಶ ಬಳ್ಳಾರಿ ಅವರ ಕವನ ಸಂಕಲನ “ಐ ಕಾಂಟ್ ಬ್ರೀದ್”. ಅವರಲ್ಲಿನ ಕವಿ ಪ್ರತಿಭೆಯನ್ನು ಮತ್ತಷ್ಟು ಹುರಿಗೊಳಿಸಿ ಹೊಸೆದ ಕಾವ್ಯಮಾಲೆಯಾಗಿದೆ ಇದು. ವರ್ತಮಾನದ ತಲ್ಲಣಗಳನ್ನು ತಣ್ಣನೆಯ ಬಂಡಾಯದೊಂದಿಗೆ ಬೆಸೆದು, ನಮ್ಮೊಳಗಿನ ಜಡತ್ವವನ್ನು ಬಡಿದೆಬ್ಬಿಸುವ ಎಚ್ಚರಿಕೆಯ ಗಂಟೆಯಾಗಿದೆ. ಆವರಿಸಿರುವ ಅಂಧಕಾರಕ್ಕೆ ಬೆಳದಿಂಗಳ ಕಿರಣವಾಗಿ, ಸಮಕಾಲೀನ ಸಂಗತಿಗಳ ಪ್ರತಿಬಿಂಬವಾಗಿ, ಮನಸಿಗಂಟಿದ ಮಾಲಿನ್ಯಕ್ಕೆ ಸ್ಯಾನಿಟೈಸರ್ ಆಗಿ, ಧರ್ಮದ ಅಮಲು ಇಳಿಸುವ ತಂಪು ಪಾನಕವಾಗಿ, ಬೆಂಕಿ ಆರಿಸಿ, ಹಸಿರು ಸೃಜಿಸುವ ಹನಿಗಳ ಸಿಂಚನವಾಗಿ ಅಲ್ಲಿನ ಎಲ್ಲ ಕವಿತೆಗಳು ಸಹೃದಯರ ಅಂತರಂಗವನ್ನು ಆವರಿಸಿಕೊಳ್ಳುವುದರಲ್ಲಿ ಯಶಸ್ವಿಯಾಗುತ್ತವೆ.

ತೀರ ಎಳೆಯ ತಾರುಣ್ಯದಲ್ಲಿಯೇ ’ಕಗ್ಗತ್ತಲು’ ಕವನ ಸಂಕಲನದ ಮೂಲಕ ಕಾವ್ಯಕ್ಷೇತ್ರಕ್ಕೆ ಕಾಲಿರಿಸಿದವರು ಮಹೇಶ. ನಿರಂತರವಾಗಿ ಉತ್ತಮ ಸಾಹಿತ್ಯದ ಕೃಷಿ ಮಾಡುತ್ತ, ಕನ್ನಡ ಕಾವ್ಯ, ಕಥೆ, ವೈಚಾರಿಕ ಕ್ಷೇತ್ರಕ್ಕೆ ಭರವಸೆಯ ಬೆಳೆ ನೀಡುತ್ತ, ಕವಿತೆಯಿಂದ ಕವಿತೆಗೆ, ಕೃತಿಯಿಂದ ಕೃತಿಗೆ ತಮ್ಮೊಳಗಿನ ಕವಿಯನ್ನು ಎತ್ತರಕ್ಕೆ ಬೆಳೆಸುತ್ತ, ಮಾಗಿಸುತ್ತ ಸಾಗಿರುವುದು ಈಗ ಅಕ್ಷರದ ರೂಪದಲ್ಲಿ ಮೂಡಿ ಕನ್ನಡದ ಓದುಗರ ಮುಂದೆ ಇದೆ.

ನಮ್ಮ ನಡುವೆ ನಿತ್ಯ ಘಟಿಸಿ ಇಂದು ಸುದ್ದಿಯಾಗಿ, ನಾಳೆ ರದ್ದಿಯಾಗಿ ನಮ್ಮ ಒತ್ತಡ, ಜಂಜಡಗಳ ನಡುವೆ ಮರೆತು ಹೋಗಿಬಿಡುವ ಅನೇಕ ಸಂಗತಿಗಳು ಕಾವ್ಯದ ರೂಪ ಪಡೆದಿವೆ ಇಲ್ಲಿ. ಮನುಷ್ಯನ ಅವಜ್ಞೆಗೆ ಒಳಗಾಗದೆ, ಮನುಕುಲಕ್ಕೆ ಸದಾ ಕಾಲ ಬಿಡದೇ ಕಾಡುವ ಚಿಂತನಾಕ್ರಮಗಳಾಗಬೇಕು ಎನ್ನುವ ರೀತಿಯಲ್ಲಿ, “ಐ ಕಾಂಟ್ ಬ್ರೀದ್ ಕವನ ಸಂಕಲನದ ಎಲ್ಲಾ 38 ಕವಿತೆಗಳು ವರ್ತಮಾನಕ್ಕೆ ಮುಖಾಮುಖಿಯಾಗುತ್ತವೆ. ಪ್ರತಿ ಸಾಲುಗಳಲ್ಲೂ ಮನುಷ್ಯತ್ವವನ್ನು ಸಾರುವ ಚಿಂತನೆಗಳು ಅಡಕವಾಗಿವೆ. ಓದುಗನೊಳಗೆ ಪ್ರೀತಿಯ ತೊರೆಯನ್ನು ತಿಳಿಯಾಗಿ, ಸದ್ದಿಲ್ಲದಂತೆ ಸಲಿಲವಾಗಿ ಹರಿಸಿ, ಮನಸ್ಸುಗಳನ್ನು ತೋಯಿಸುತ್ತವೆ.

ಅಧಿಕಾರದ ಕೇಂದ್ರ ಸ್ಥಾನಗಳ ಸುತ್ತಮುತ್ತಲಿನ ವಾತಾವರಣಕ್ಕಷ್ಟೇ ಸೌಕರ್ಯಗಳು ಸೀಮಿತವಾಗುವ ಪರಿಯನ್ನು ’ಪರುಷಕಟ್ಟೆ’ ಕವನದಲ್ಲಿ ಚಿತ್ರಿಸುತ್ತ, ಗಾಂಧಿಯ ಗ್ರಾಮ ಸ್ವರಾಜ್ಯ ಕಲ್ಪನೆಗೆ ಸಂಪೂರ್ಣ ಇತಿಶ್ರೀ ಹಾಡಿರುವ ಹಳ್ಳಿಗಳ ಸ್ಥಿತಿಯನ್ನು ಯಯಾತಿಗೆ ಹೋಲಿಸಿ, ಸೌಕರ್ಯಗಳ ನಿರೀಕ್ಷೆಯಲ್ಲಿರುವ ಹಳ್ಳಿಗರನ್ನು ಶಬರಿಗೆ ಹೋಲಿಸಿರುವದು ಅರ್ಥಪೂರ್ಣವಾಗಿ ಮೂಡಿಬಂದಿದೆ.

ಕೆಲವು ತಿಂಗಳುಗಳ ಹಿಂದೆ ಉತ್ತರ ಪ್ರದೇಶದ ಹಥರಾಸ್‌ನಲ್ಲಿ ನಡೆದ ಮನೀಷಾ ವಾಲ್ಮೀಕಿ ಎಂಬ ನತದೃಷ್ಟ ಯುವತಿಯ ಬರ್ಬರ ಹತ್ಯೆ ಹಲವರ ಪ್ರಜ್ಞಾಪೂರ್ವಕ ನಿರ್ಲಕ್ಷ್ಯಕ್ಕೆ ಒಳಗಾಯಿತು. ಈ ಹೊತ್ತಿನಲ್ಲಿ, ಕವಿಯಾದವನೊಬ್ಬ ಆ ಘಟನೆಗೆ ಸ್ಪಂದಿಸಬೇಕಾದ ಹೊಣೆಗಾರಿಕೆ ’ನಾನು ಮನೀಷಾ (ಕ್ಷಮಯಾ ಧರಿತ್ರಿ)’ ಕವನದ ಮೂಲಕ ಮಾನವೀಯ ನೆಲೆಗಳ ಸ್ಪಂದನೆ ವ್ಯಕ್ತವಾಗಿದೆ.

“ಬಂದೇ ಬರುತ್ತೇನೆ ಮತ್ತೆ
ಇದೇ ನೆಲದಲ್ಲಿ ನನ್ನ ಸುಟ್ಟವರ
ಮನೆಯಲ್ಲಿಯೇ ಮಗಳಾಗಿ ಹುಟ್ಟಿ
ಅವರ ಮನೆ ಬೆಳಗುವ
ನಂದಾ ದೀಪವಾಗುತ್ತೇನೆ..”

ಈ ಸಾಲುಗಳಲ್ಲಿ, ನ್ಯಾಯ, ಮನುಷ್ಯತ್ವ, ಪ್ರೀತಿಯ ಒರತೆಗಳು ಈಗ ಬತ್ತಿರಬಹುದು ಆದರೆ ಅವುಗಳು ಅಂತರಾಳದಲ್ಲಿ ಸ್ಥಾಯಿಯಾಗಿವೆ, ಮತ್ತೆ ಎಂದಾದರೂ ಅವು ಜೀವಸೆಲೆಯಾಗಿ ಮೈದಳೆಯುತ್ತವೆ ಎಂಬ ಭರವಸೆಯನ್ನು ಕವನದ ಮೂಲಕ ಓದುಗನ ಎದೆಗೆ ಕವಿ ದಾಟಿಸಿದ್ದಾರೆ.

ನಮ್ಮ ದೃಶ್ಯಮಾಧ್ಯಮಗಳ ಅಬ್ಬರ-ಭರಾಟೆಗಳು, ವೈಯಕ್ತಿಕ ಸ್ವಾತಂತ್ರ್ಯಗಳನ್ನೂ ಕೂಡ ಆಪೋಷನ ತೆಗೆದುಕೊಳ್ಳುತ್ತಿರುವ ವಿದ್ಯಮಾನಗಳನ್ನು ’ಆಕಾಶ-ಭೂಮಿ’ ಕವಿತೆಯಲ್ಲಿ ಸೊಗಸಾಗಿ, ತೀಕ್ಷ್ಣವಾಗಿ ದಾಖಲಿಸಿದ್ದಾರೆ. ’ಬಿಂಬ’ ಕವಿತೆಯು ರೂಪಕ, ಪ್ರತಿಮೆಗಳ ಹಂಗಿಲ್ಲದೇ ಮೂಡಿಬಂದಿದೆ. ಮೇಲ್ನೋಟಕ್ಕೆ ವಾಚ್ಯವೆನಿಸಿದರೂ ಕೂಡ, ವಸ್ತುವಿನ ದೃಷ್ಟಿಯಿಂದ ಹಿರಿದಾಗಿದೆ.

ರಾಜ ಬಂದ, ಟ್ರಂಪ್, ಅಹವಾಲುಗಳು, ಅಮಲು ಕವನಗಳು ಸಮಕಾಲೀನ ರಾಜಕಾರಣದ ಹಲವು ಮುಖಗಳನ್ನು ಅರ್ಥಪೂರ್ಣವಾಗಿ ಅನಾವರಣಗೊಳಿಸಿವೆ. ’ಅಲೈನ್‌ಮೆಂಟ್ ಕವಿತೆಯಲ್ಲಿ ಕಂಪ್ಯೂಟರ್ ಪರಿಭಾಷೆಯನ್ನು ಸಮರ್ಥವಾಗಿ ರೂಪಕವಾಗಿ ಬಳಸಿಕೊಂಡಿರುವುದು ಹೊಸಪೀಳಿಗೆಯ ಓದುಗರನ್ನು ಕಾವ್ಯದತ್ತ ಸೆಳೆದು ತರುವ ಸಾಧ್ಯತೆಗಳನ್ನು ತೋರಿದೆ.

“ಮೊದಲೆಲ್ಲ ಲೆಫ್ಟ್ ಅಲೈನ್‌ಮೆಂಟ್ ಸಾಲುಗಳಿರುತ್ತಿದ್ದವು,
ಇದೀಗ ರೈಟ್ ಅಲೈನ್‌ಮೆಂಟ್,
ಇವೆರಡರ ನಡುವೆ ಜಸ್ಟಿಫಿಕೇಷನ್ ಮಾಯವಾಗಿದೆ”

ಎನ್ನುವ ಸಾಲುಗಳು ರಾಜಕಾರಣದ ಸೈದ್ಧಾಂತಿಕ ಒಲವು, ನಿಲುವುಗಳಿಗೆ ಕನ್ನಡಿ ಹಿಡಿದಿವೆ.
ಜಾರ್ಜ್ ಫ್ಲಾಯ್ಡ್ ಎಂಬ ಆಫ್ರಿಕನ್ ಅಮೆರಿಕನ್ ಕಪ್ಪುವರ್ಣೀಯ ವ್ಯಕ್ತಿಯೊಬ್ಬನನ್ನು, ಅಮೆರಿಕಾದಲ್ಲಿ, ವರ್ಣಭೇದದ ಪೂರ್ವಾಗ್ರಹದ ಕಾರಣಕ್ಕೆ ಅಲ್ಲಿನ ಪೊಲೀಸರು ಅಮಾನವೀಯವಾಗಿ ಇದೇ 2020ರ ಮೇ 25ರಂದು ಕೊಲ್ಲುವಾಗ, ಆತನ ’ಐ ಕಾಂಟ್ ಬ್ರೀದ್’ ಎಂಬ ಆತ್ರರೋದನವನ್ನೇ, ಈ ಕವನ ಸಂಕಲನದ ಶೀರ್ಷಿಕೆಯಾಗಿಸಿರುವುದು ಮನುಷ್ಯತ್ವವನ್ನೇ ಉಸಿರುಗಟ್ಟಿಸಿರುವ ನಮ್ಮ ಸಮಕಾಲೀನ ವಾತಾವರಣದ ಚಿತ್ರಣ ನೀಡಿದೆ.

ಕನ್ನಡನಾಡಿನ ಹನ್ನೆರಡನೇ ಶತಮಾನದ ಹರಳಯ್ಯನಿಂದ ಹಿಡಿದು ಇಂತಹ ಹತ್ಯೆಗಳು ಇಂದಿಗೂ ಆಗಾಗ ಮರುಕಳಿಸುತ್ತಿರುವುದನ್ನು ಆರ್ದ್ರವಾಗಿ ಹಾಡಿದೆ.

’ತರಕಾರಿ ಹುಡುಗಿ’, ’ಕಳ್ಳ’ ಕವಿತೆಗಳು ನಮ್ಮ ವ್ಯವಸ್ಥೆಯಲ್ಲಿ ಬಡಜೀವಗಳು ತುತ್ತು ಅನ್ನಕ್ಕೆ, ಹಸಿವಿನ ಚೀಲ ತುಂಬಿಸಲಿಕ್ಕೆ ಪಡುವ ಪಡಿಪಾಟಲುಗಳು, ಭ್ರಷ್ಟಾಚಾರದ ಸಾಗರದಲ್ಲಿ ತಿಮಿಂಗಿಲಗಳನ್ನು ಹಿಡಿಯದೇ ಹಸಿವಿಗಾಗಿ ತುಂಡುರೊಟ್ಟಿ ಕದ್ದವನನ್ನು ಹಿಡಿವ ಭ್ರಷ್ಟಾಚಾರ ನಿಗ್ರಹದ ನಾಟಕಗಳನ್ನು ಓದುಗರ ಕಣ್ಣ ಮುಂದೆ ತರುತ್ತವೆ.

ಅಲಾಯಿ (ಮೊಹರಂ) ನಮ್ಮ ಸೌಹಾರ್ದದ ಸಿಹಿ ಚೊಂಗೆಯಂತಿದ್ದರೆ, ದೂರು, ಗಡಿಪಾರು ಶೀರ್ಷಿಕೆಯ ಮೂರುಸಾಲಿನ ಹನಿಗಳು ಕಿರಿದರಲ್ಲಿ ಹಿರಿದರ್ಥ ಹೇಳುವ, ಸಮ ಸಮಾಜ ಸಂದೇಶಗಳನ್ನು ಸಮರ್ಥವಾಗಿ ಸಾರಿವೆ.

ನಮ್ಮ ಕೊಪ್ಪಳದ ನಾಡಕವಿ ಎಂದೇ ಹೆಸರಾದ ಗವಿಸಿದ್ಧ ಎನ್ ಬಳ್ಳಾರಿಯವರ ಮಗನೆಂಬ ವಿಶೇಷ ರಿಯಾಯಿತಿ, ಆದ್ಯತೆ ಬಯಸದೆಯೂ ಕಾವ್ಯಕ್ಷೇತ್ರದಲ್ಲಿ ಸ್ಪಷ್ಟವಾಗಿ ಸ್ವಸಾಮರ್ಥ್ಯದಿಂದಲೇ ಮಹೇಶ ಬಳ್ಳಾರಿ ಮುನ್ನಡೆಯುತ್ತಿದ್ದಾರೆ.

ಮಂಜುನಾಥ ಡೊಳ್ಳಿನ

ಹಿರಿಯ ಸಹಾಯಕ ನಿರ್ದೇಶಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಧಾರವಾಡ


ಇದನ್ನೂ ಓದಿ: ಪುಸ್ತಕ ವಿಮರ್ಶೆ: ಬುದ್ಧನೆಡೆಗೆ ಮರಳಿ ಹಾರುವ ಮೂಡ್ನಾಕೂಡು ಚಿನ್ನಸ್ವಾಮಿಯವರ ನೆನಪಿನ ಹಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...