Homeಅಂಕಣಗಳುಪುಸ್ತಕ ವಿಮರ್ಶೆ; "ಐ ಕಾಂಟ್ ಬ್ರೀದ್" ಉಸಿರುಗಟ್ಟಿಸುವ ವಾತಾವರಣದ ಸಂಕಟಗಳ ಅನಾವರಣ

ಪುಸ್ತಕ ವಿಮರ್ಶೆ; “ಐ ಕಾಂಟ್ ಬ್ರೀದ್” ಉಸಿರುಗಟ್ಟಿಸುವ ವಾತಾವರಣದ ಸಂಕಟಗಳ ಅನಾವರಣ

- Advertisement -
- Advertisement -

ಕೊಪ್ಪಳದ ಯುವಕವಿ ಮಹೇಶ ಬಳ್ಳಾರಿ ಅವರ ಕವನ ಸಂಕಲನ “ಐ ಕಾಂಟ್ ಬ್ರೀದ್”. ಅವರಲ್ಲಿನ ಕವಿ ಪ್ರತಿಭೆಯನ್ನು ಮತ್ತಷ್ಟು ಹುರಿಗೊಳಿಸಿ ಹೊಸೆದ ಕಾವ್ಯಮಾಲೆಯಾಗಿದೆ ಇದು. ವರ್ತಮಾನದ ತಲ್ಲಣಗಳನ್ನು ತಣ್ಣನೆಯ ಬಂಡಾಯದೊಂದಿಗೆ ಬೆಸೆದು, ನಮ್ಮೊಳಗಿನ ಜಡತ್ವವನ್ನು ಬಡಿದೆಬ್ಬಿಸುವ ಎಚ್ಚರಿಕೆಯ ಗಂಟೆಯಾಗಿದೆ. ಆವರಿಸಿರುವ ಅಂಧಕಾರಕ್ಕೆ ಬೆಳದಿಂಗಳ ಕಿರಣವಾಗಿ, ಸಮಕಾಲೀನ ಸಂಗತಿಗಳ ಪ್ರತಿಬಿಂಬವಾಗಿ, ಮನಸಿಗಂಟಿದ ಮಾಲಿನ್ಯಕ್ಕೆ ಸ್ಯಾನಿಟೈಸರ್ ಆಗಿ, ಧರ್ಮದ ಅಮಲು ಇಳಿಸುವ ತಂಪು ಪಾನಕವಾಗಿ, ಬೆಂಕಿ ಆರಿಸಿ, ಹಸಿರು ಸೃಜಿಸುವ ಹನಿಗಳ ಸಿಂಚನವಾಗಿ ಅಲ್ಲಿನ ಎಲ್ಲ ಕವಿತೆಗಳು ಸಹೃದಯರ ಅಂತರಂಗವನ್ನು ಆವರಿಸಿಕೊಳ್ಳುವುದರಲ್ಲಿ ಯಶಸ್ವಿಯಾಗುತ್ತವೆ.

ತೀರ ಎಳೆಯ ತಾರುಣ್ಯದಲ್ಲಿಯೇ ’ಕಗ್ಗತ್ತಲು’ ಕವನ ಸಂಕಲನದ ಮೂಲಕ ಕಾವ್ಯಕ್ಷೇತ್ರಕ್ಕೆ ಕಾಲಿರಿಸಿದವರು ಮಹೇಶ. ನಿರಂತರವಾಗಿ ಉತ್ತಮ ಸಾಹಿತ್ಯದ ಕೃಷಿ ಮಾಡುತ್ತ, ಕನ್ನಡ ಕಾವ್ಯ, ಕಥೆ, ವೈಚಾರಿಕ ಕ್ಷೇತ್ರಕ್ಕೆ ಭರವಸೆಯ ಬೆಳೆ ನೀಡುತ್ತ, ಕವಿತೆಯಿಂದ ಕವಿತೆಗೆ, ಕೃತಿಯಿಂದ ಕೃತಿಗೆ ತಮ್ಮೊಳಗಿನ ಕವಿಯನ್ನು ಎತ್ತರಕ್ಕೆ ಬೆಳೆಸುತ್ತ, ಮಾಗಿಸುತ್ತ ಸಾಗಿರುವುದು ಈಗ ಅಕ್ಷರದ ರೂಪದಲ್ಲಿ ಮೂಡಿ ಕನ್ನಡದ ಓದುಗರ ಮುಂದೆ ಇದೆ.

ನಮ್ಮ ನಡುವೆ ನಿತ್ಯ ಘಟಿಸಿ ಇಂದು ಸುದ್ದಿಯಾಗಿ, ನಾಳೆ ರದ್ದಿಯಾಗಿ ನಮ್ಮ ಒತ್ತಡ, ಜಂಜಡಗಳ ನಡುವೆ ಮರೆತು ಹೋಗಿಬಿಡುವ ಅನೇಕ ಸಂಗತಿಗಳು ಕಾವ್ಯದ ರೂಪ ಪಡೆದಿವೆ ಇಲ್ಲಿ. ಮನುಷ್ಯನ ಅವಜ್ಞೆಗೆ ಒಳಗಾಗದೆ, ಮನುಕುಲಕ್ಕೆ ಸದಾ ಕಾಲ ಬಿಡದೇ ಕಾಡುವ ಚಿಂತನಾಕ್ರಮಗಳಾಗಬೇಕು ಎನ್ನುವ ರೀತಿಯಲ್ಲಿ, “ಐ ಕಾಂಟ್ ಬ್ರೀದ್ ಕವನ ಸಂಕಲನದ ಎಲ್ಲಾ 38 ಕವಿತೆಗಳು ವರ್ತಮಾನಕ್ಕೆ ಮುಖಾಮುಖಿಯಾಗುತ್ತವೆ. ಪ್ರತಿ ಸಾಲುಗಳಲ್ಲೂ ಮನುಷ್ಯತ್ವವನ್ನು ಸಾರುವ ಚಿಂತನೆಗಳು ಅಡಕವಾಗಿವೆ. ಓದುಗನೊಳಗೆ ಪ್ರೀತಿಯ ತೊರೆಯನ್ನು ತಿಳಿಯಾಗಿ, ಸದ್ದಿಲ್ಲದಂತೆ ಸಲಿಲವಾಗಿ ಹರಿಸಿ, ಮನಸ್ಸುಗಳನ್ನು ತೋಯಿಸುತ್ತವೆ.

ಅಧಿಕಾರದ ಕೇಂದ್ರ ಸ್ಥಾನಗಳ ಸುತ್ತಮುತ್ತಲಿನ ವಾತಾವರಣಕ್ಕಷ್ಟೇ ಸೌಕರ್ಯಗಳು ಸೀಮಿತವಾಗುವ ಪರಿಯನ್ನು ’ಪರುಷಕಟ್ಟೆ’ ಕವನದಲ್ಲಿ ಚಿತ್ರಿಸುತ್ತ, ಗಾಂಧಿಯ ಗ್ರಾಮ ಸ್ವರಾಜ್ಯ ಕಲ್ಪನೆಗೆ ಸಂಪೂರ್ಣ ಇತಿಶ್ರೀ ಹಾಡಿರುವ ಹಳ್ಳಿಗಳ ಸ್ಥಿತಿಯನ್ನು ಯಯಾತಿಗೆ ಹೋಲಿಸಿ, ಸೌಕರ್ಯಗಳ ನಿರೀಕ್ಷೆಯಲ್ಲಿರುವ ಹಳ್ಳಿಗರನ್ನು ಶಬರಿಗೆ ಹೋಲಿಸಿರುವದು ಅರ್ಥಪೂರ್ಣವಾಗಿ ಮೂಡಿಬಂದಿದೆ.

ಕೆಲವು ತಿಂಗಳುಗಳ ಹಿಂದೆ ಉತ್ತರ ಪ್ರದೇಶದ ಹಥರಾಸ್‌ನಲ್ಲಿ ನಡೆದ ಮನೀಷಾ ವಾಲ್ಮೀಕಿ ಎಂಬ ನತದೃಷ್ಟ ಯುವತಿಯ ಬರ್ಬರ ಹತ್ಯೆ ಹಲವರ ಪ್ರಜ್ಞಾಪೂರ್ವಕ ನಿರ್ಲಕ್ಷ್ಯಕ್ಕೆ ಒಳಗಾಯಿತು. ಈ ಹೊತ್ತಿನಲ್ಲಿ, ಕವಿಯಾದವನೊಬ್ಬ ಆ ಘಟನೆಗೆ ಸ್ಪಂದಿಸಬೇಕಾದ ಹೊಣೆಗಾರಿಕೆ ’ನಾನು ಮನೀಷಾ (ಕ್ಷಮಯಾ ಧರಿತ್ರಿ)’ ಕವನದ ಮೂಲಕ ಮಾನವೀಯ ನೆಲೆಗಳ ಸ್ಪಂದನೆ ವ್ಯಕ್ತವಾಗಿದೆ.

“ಬಂದೇ ಬರುತ್ತೇನೆ ಮತ್ತೆ
ಇದೇ ನೆಲದಲ್ಲಿ ನನ್ನ ಸುಟ್ಟವರ
ಮನೆಯಲ್ಲಿಯೇ ಮಗಳಾಗಿ ಹುಟ್ಟಿ
ಅವರ ಮನೆ ಬೆಳಗುವ
ನಂದಾ ದೀಪವಾಗುತ್ತೇನೆ..”

ಈ ಸಾಲುಗಳಲ್ಲಿ, ನ್ಯಾಯ, ಮನುಷ್ಯತ್ವ, ಪ್ರೀತಿಯ ಒರತೆಗಳು ಈಗ ಬತ್ತಿರಬಹುದು ಆದರೆ ಅವುಗಳು ಅಂತರಾಳದಲ್ಲಿ ಸ್ಥಾಯಿಯಾಗಿವೆ, ಮತ್ತೆ ಎಂದಾದರೂ ಅವು ಜೀವಸೆಲೆಯಾಗಿ ಮೈದಳೆಯುತ್ತವೆ ಎಂಬ ಭರವಸೆಯನ್ನು ಕವನದ ಮೂಲಕ ಓದುಗನ ಎದೆಗೆ ಕವಿ ದಾಟಿಸಿದ್ದಾರೆ.

ನಮ್ಮ ದೃಶ್ಯಮಾಧ್ಯಮಗಳ ಅಬ್ಬರ-ಭರಾಟೆಗಳು, ವೈಯಕ್ತಿಕ ಸ್ವಾತಂತ್ರ್ಯಗಳನ್ನೂ ಕೂಡ ಆಪೋಷನ ತೆಗೆದುಕೊಳ್ಳುತ್ತಿರುವ ವಿದ್ಯಮಾನಗಳನ್ನು ’ಆಕಾಶ-ಭೂಮಿ’ ಕವಿತೆಯಲ್ಲಿ ಸೊಗಸಾಗಿ, ತೀಕ್ಷ್ಣವಾಗಿ ದಾಖಲಿಸಿದ್ದಾರೆ. ’ಬಿಂಬ’ ಕವಿತೆಯು ರೂಪಕ, ಪ್ರತಿಮೆಗಳ ಹಂಗಿಲ್ಲದೇ ಮೂಡಿಬಂದಿದೆ. ಮೇಲ್ನೋಟಕ್ಕೆ ವಾಚ್ಯವೆನಿಸಿದರೂ ಕೂಡ, ವಸ್ತುವಿನ ದೃಷ್ಟಿಯಿಂದ ಹಿರಿದಾಗಿದೆ.

ರಾಜ ಬಂದ, ಟ್ರಂಪ್, ಅಹವಾಲುಗಳು, ಅಮಲು ಕವನಗಳು ಸಮಕಾಲೀನ ರಾಜಕಾರಣದ ಹಲವು ಮುಖಗಳನ್ನು ಅರ್ಥಪೂರ್ಣವಾಗಿ ಅನಾವರಣಗೊಳಿಸಿವೆ. ’ಅಲೈನ್‌ಮೆಂಟ್ ಕವಿತೆಯಲ್ಲಿ ಕಂಪ್ಯೂಟರ್ ಪರಿಭಾಷೆಯನ್ನು ಸಮರ್ಥವಾಗಿ ರೂಪಕವಾಗಿ ಬಳಸಿಕೊಂಡಿರುವುದು ಹೊಸಪೀಳಿಗೆಯ ಓದುಗರನ್ನು ಕಾವ್ಯದತ್ತ ಸೆಳೆದು ತರುವ ಸಾಧ್ಯತೆಗಳನ್ನು ತೋರಿದೆ.

“ಮೊದಲೆಲ್ಲ ಲೆಫ್ಟ್ ಅಲೈನ್‌ಮೆಂಟ್ ಸಾಲುಗಳಿರುತ್ತಿದ್ದವು,
ಇದೀಗ ರೈಟ್ ಅಲೈನ್‌ಮೆಂಟ್,
ಇವೆರಡರ ನಡುವೆ ಜಸ್ಟಿಫಿಕೇಷನ್ ಮಾಯವಾಗಿದೆ”

ಎನ್ನುವ ಸಾಲುಗಳು ರಾಜಕಾರಣದ ಸೈದ್ಧಾಂತಿಕ ಒಲವು, ನಿಲುವುಗಳಿಗೆ ಕನ್ನಡಿ ಹಿಡಿದಿವೆ.
ಜಾರ್ಜ್ ಫ್ಲಾಯ್ಡ್ ಎಂಬ ಆಫ್ರಿಕನ್ ಅಮೆರಿಕನ್ ಕಪ್ಪುವರ್ಣೀಯ ವ್ಯಕ್ತಿಯೊಬ್ಬನನ್ನು, ಅಮೆರಿಕಾದಲ್ಲಿ, ವರ್ಣಭೇದದ ಪೂರ್ವಾಗ್ರಹದ ಕಾರಣಕ್ಕೆ ಅಲ್ಲಿನ ಪೊಲೀಸರು ಅಮಾನವೀಯವಾಗಿ ಇದೇ 2020ರ ಮೇ 25ರಂದು ಕೊಲ್ಲುವಾಗ, ಆತನ ’ಐ ಕಾಂಟ್ ಬ್ರೀದ್’ ಎಂಬ ಆತ್ರರೋದನವನ್ನೇ, ಈ ಕವನ ಸಂಕಲನದ ಶೀರ್ಷಿಕೆಯಾಗಿಸಿರುವುದು ಮನುಷ್ಯತ್ವವನ್ನೇ ಉಸಿರುಗಟ್ಟಿಸಿರುವ ನಮ್ಮ ಸಮಕಾಲೀನ ವಾತಾವರಣದ ಚಿತ್ರಣ ನೀಡಿದೆ.

ಕನ್ನಡನಾಡಿನ ಹನ್ನೆರಡನೇ ಶತಮಾನದ ಹರಳಯ್ಯನಿಂದ ಹಿಡಿದು ಇಂತಹ ಹತ್ಯೆಗಳು ಇಂದಿಗೂ ಆಗಾಗ ಮರುಕಳಿಸುತ್ತಿರುವುದನ್ನು ಆರ್ದ್ರವಾಗಿ ಹಾಡಿದೆ.

’ತರಕಾರಿ ಹುಡುಗಿ’, ’ಕಳ್ಳ’ ಕವಿತೆಗಳು ನಮ್ಮ ವ್ಯವಸ್ಥೆಯಲ್ಲಿ ಬಡಜೀವಗಳು ತುತ್ತು ಅನ್ನಕ್ಕೆ, ಹಸಿವಿನ ಚೀಲ ತುಂಬಿಸಲಿಕ್ಕೆ ಪಡುವ ಪಡಿಪಾಟಲುಗಳು, ಭ್ರಷ್ಟಾಚಾರದ ಸಾಗರದಲ್ಲಿ ತಿಮಿಂಗಿಲಗಳನ್ನು ಹಿಡಿಯದೇ ಹಸಿವಿಗಾಗಿ ತುಂಡುರೊಟ್ಟಿ ಕದ್ದವನನ್ನು ಹಿಡಿವ ಭ್ರಷ್ಟಾಚಾರ ನಿಗ್ರಹದ ನಾಟಕಗಳನ್ನು ಓದುಗರ ಕಣ್ಣ ಮುಂದೆ ತರುತ್ತವೆ.

ಅಲಾಯಿ (ಮೊಹರಂ) ನಮ್ಮ ಸೌಹಾರ್ದದ ಸಿಹಿ ಚೊಂಗೆಯಂತಿದ್ದರೆ, ದೂರು, ಗಡಿಪಾರು ಶೀರ್ಷಿಕೆಯ ಮೂರುಸಾಲಿನ ಹನಿಗಳು ಕಿರಿದರಲ್ಲಿ ಹಿರಿದರ್ಥ ಹೇಳುವ, ಸಮ ಸಮಾಜ ಸಂದೇಶಗಳನ್ನು ಸಮರ್ಥವಾಗಿ ಸಾರಿವೆ.

ನಮ್ಮ ಕೊಪ್ಪಳದ ನಾಡಕವಿ ಎಂದೇ ಹೆಸರಾದ ಗವಿಸಿದ್ಧ ಎನ್ ಬಳ್ಳಾರಿಯವರ ಮಗನೆಂಬ ವಿಶೇಷ ರಿಯಾಯಿತಿ, ಆದ್ಯತೆ ಬಯಸದೆಯೂ ಕಾವ್ಯಕ್ಷೇತ್ರದಲ್ಲಿ ಸ್ಪಷ್ಟವಾಗಿ ಸ್ವಸಾಮರ್ಥ್ಯದಿಂದಲೇ ಮಹೇಶ ಬಳ್ಳಾರಿ ಮುನ್ನಡೆಯುತ್ತಿದ್ದಾರೆ.

ಮಂಜುನಾಥ ಡೊಳ್ಳಿನ

ಹಿರಿಯ ಸಹಾಯಕ ನಿರ್ದೇಶಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಧಾರವಾಡ


ಇದನ್ನೂ ಓದಿ: ಪುಸ್ತಕ ವಿಮರ್ಶೆ: ಬುದ್ಧನೆಡೆಗೆ ಮರಳಿ ಹಾರುವ ಮೂಡ್ನಾಕೂಡು ಚಿನ್ನಸ್ವಾಮಿಯವರ ನೆನಪಿನ ಹಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...