Homeಅಂಕಣಗಳುಪುಸ್ತಕ ವಿಮರ್ಶೆ; "ಐ ಕಾಂಟ್ ಬ್ರೀದ್" ಉಸಿರುಗಟ್ಟಿಸುವ ವಾತಾವರಣದ ಸಂಕಟಗಳ ಅನಾವರಣ

ಪುಸ್ತಕ ವಿಮರ್ಶೆ; “ಐ ಕಾಂಟ್ ಬ್ರೀದ್” ಉಸಿರುಗಟ್ಟಿಸುವ ವಾತಾವರಣದ ಸಂಕಟಗಳ ಅನಾವರಣ

- Advertisement -
- Advertisement -

ಕೊಪ್ಪಳದ ಯುವಕವಿ ಮಹೇಶ ಬಳ್ಳಾರಿ ಅವರ ಕವನ ಸಂಕಲನ “ಐ ಕಾಂಟ್ ಬ್ರೀದ್”. ಅವರಲ್ಲಿನ ಕವಿ ಪ್ರತಿಭೆಯನ್ನು ಮತ್ತಷ್ಟು ಹುರಿಗೊಳಿಸಿ ಹೊಸೆದ ಕಾವ್ಯಮಾಲೆಯಾಗಿದೆ ಇದು. ವರ್ತಮಾನದ ತಲ್ಲಣಗಳನ್ನು ತಣ್ಣನೆಯ ಬಂಡಾಯದೊಂದಿಗೆ ಬೆಸೆದು, ನಮ್ಮೊಳಗಿನ ಜಡತ್ವವನ್ನು ಬಡಿದೆಬ್ಬಿಸುವ ಎಚ್ಚರಿಕೆಯ ಗಂಟೆಯಾಗಿದೆ. ಆವರಿಸಿರುವ ಅಂಧಕಾರಕ್ಕೆ ಬೆಳದಿಂಗಳ ಕಿರಣವಾಗಿ, ಸಮಕಾಲೀನ ಸಂಗತಿಗಳ ಪ್ರತಿಬಿಂಬವಾಗಿ, ಮನಸಿಗಂಟಿದ ಮಾಲಿನ್ಯಕ್ಕೆ ಸ್ಯಾನಿಟೈಸರ್ ಆಗಿ, ಧರ್ಮದ ಅಮಲು ಇಳಿಸುವ ತಂಪು ಪಾನಕವಾಗಿ, ಬೆಂಕಿ ಆರಿಸಿ, ಹಸಿರು ಸೃಜಿಸುವ ಹನಿಗಳ ಸಿಂಚನವಾಗಿ ಅಲ್ಲಿನ ಎಲ್ಲ ಕವಿತೆಗಳು ಸಹೃದಯರ ಅಂತರಂಗವನ್ನು ಆವರಿಸಿಕೊಳ್ಳುವುದರಲ್ಲಿ ಯಶಸ್ವಿಯಾಗುತ್ತವೆ.

ತೀರ ಎಳೆಯ ತಾರುಣ್ಯದಲ್ಲಿಯೇ ’ಕಗ್ಗತ್ತಲು’ ಕವನ ಸಂಕಲನದ ಮೂಲಕ ಕಾವ್ಯಕ್ಷೇತ್ರಕ್ಕೆ ಕಾಲಿರಿಸಿದವರು ಮಹೇಶ. ನಿರಂತರವಾಗಿ ಉತ್ತಮ ಸಾಹಿತ್ಯದ ಕೃಷಿ ಮಾಡುತ್ತ, ಕನ್ನಡ ಕಾವ್ಯ, ಕಥೆ, ವೈಚಾರಿಕ ಕ್ಷೇತ್ರಕ್ಕೆ ಭರವಸೆಯ ಬೆಳೆ ನೀಡುತ್ತ, ಕವಿತೆಯಿಂದ ಕವಿತೆಗೆ, ಕೃತಿಯಿಂದ ಕೃತಿಗೆ ತಮ್ಮೊಳಗಿನ ಕವಿಯನ್ನು ಎತ್ತರಕ್ಕೆ ಬೆಳೆಸುತ್ತ, ಮಾಗಿಸುತ್ತ ಸಾಗಿರುವುದು ಈಗ ಅಕ್ಷರದ ರೂಪದಲ್ಲಿ ಮೂಡಿ ಕನ್ನಡದ ಓದುಗರ ಮುಂದೆ ಇದೆ.

ನಮ್ಮ ನಡುವೆ ನಿತ್ಯ ಘಟಿಸಿ ಇಂದು ಸುದ್ದಿಯಾಗಿ, ನಾಳೆ ರದ್ದಿಯಾಗಿ ನಮ್ಮ ಒತ್ತಡ, ಜಂಜಡಗಳ ನಡುವೆ ಮರೆತು ಹೋಗಿಬಿಡುವ ಅನೇಕ ಸಂಗತಿಗಳು ಕಾವ್ಯದ ರೂಪ ಪಡೆದಿವೆ ಇಲ್ಲಿ. ಮನುಷ್ಯನ ಅವಜ್ಞೆಗೆ ಒಳಗಾಗದೆ, ಮನುಕುಲಕ್ಕೆ ಸದಾ ಕಾಲ ಬಿಡದೇ ಕಾಡುವ ಚಿಂತನಾಕ್ರಮಗಳಾಗಬೇಕು ಎನ್ನುವ ರೀತಿಯಲ್ಲಿ, “ಐ ಕಾಂಟ್ ಬ್ರೀದ್ ಕವನ ಸಂಕಲನದ ಎಲ್ಲಾ 38 ಕವಿತೆಗಳು ವರ್ತಮಾನಕ್ಕೆ ಮುಖಾಮುಖಿಯಾಗುತ್ತವೆ. ಪ್ರತಿ ಸಾಲುಗಳಲ್ಲೂ ಮನುಷ್ಯತ್ವವನ್ನು ಸಾರುವ ಚಿಂತನೆಗಳು ಅಡಕವಾಗಿವೆ. ಓದುಗನೊಳಗೆ ಪ್ರೀತಿಯ ತೊರೆಯನ್ನು ತಿಳಿಯಾಗಿ, ಸದ್ದಿಲ್ಲದಂತೆ ಸಲಿಲವಾಗಿ ಹರಿಸಿ, ಮನಸ್ಸುಗಳನ್ನು ತೋಯಿಸುತ್ತವೆ.

ಅಧಿಕಾರದ ಕೇಂದ್ರ ಸ್ಥಾನಗಳ ಸುತ್ತಮುತ್ತಲಿನ ವಾತಾವರಣಕ್ಕಷ್ಟೇ ಸೌಕರ್ಯಗಳು ಸೀಮಿತವಾಗುವ ಪರಿಯನ್ನು ’ಪರುಷಕಟ್ಟೆ’ ಕವನದಲ್ಲಿ ಚಿತ್ರಿಸುತ್ತ, ಗಾಂಧಿಯ ಗ್ರಾಮ ಸ್ವರಾಜ್ಯ ಕಲ್ಪನೆಗೆ ಸಂಪೂರ್ಣ ಇತಿಶ್ರೀ ಹಾಡಿರುವ ಹಳ್ಳಿಗಳ ಸ್ಥಿತಿಯನ್ನು ಯಯಾತಿಗೆ ಹೋಲಿಸಿ, ಸೌಕರ್ಯಗಳ ನಿರೀಕ್ಷೆಯಲ್ಲಿರುವ ಹಳ್ಳಿಗರನ್ನು ಶಬರಿಗೆ ಹೋಲಿಸಿರುವದು ಅರ್ಥಪೂರ್ಣವಾಗಿ ಮೂಡಿಬಂದಿದೆ.

ಕೆಲವು ತಿಂಗಳುಗಳ ಹಿಂದೆ ಉತ್ತರ ಪ್ರದೇಶದ ಹಥರಾಸ್‌ನಲ್ಲಿ ನಡೆದ ಮನೀಷಾ ವಾಲ್ಮೀಕಿ ಎಂಬ ನತದೃಷ್ಟ ಯುವತಿಯ ಬರ್ಬರ ಹತ್ಯೆ ಹಲವರ ಪ್ರಜ್ಞಾಪೂರ್ವಕ ನಿರ್ಲಕ್ಷ್ಯಕ್ಕೆ ಒಳಗಾಯಿತು. ಈ ಹೊತ್ತಿನಲ್ಲಿ, ಕವಿಯಾದವನೊಬ್ಬ ಆ ಘಟನೆಗೆ ಸ್ಪಂದಿಸಬೇಕಾದ ಹೊಣೆಗಾರಿಕೆ ’ನಾನು ಮನೀಷಾ (ಕ್ಷಮಯಾ ಧರಿತ್ರಿ)’ ಕವನದ ಮೂಲಕ ಮಾನವೀಯ ನೆಲೆಗಳ ಸ್ಪಂದನೆ ವ್ಯಕ್ತವಾಗಿದೆ.

“ಬಂದೇ ಬರುತ್ತೇನೆ ಮತ್ತೆ
ಇದೇ ನೆಲದಲ್ಲಿ ನನ್ನ ಸುಟ್ಟವರ
ಮನೆಯಲ್ಲಿಯೇ ಮಗಳಾಗಿ ಹುಟ್ಟಿ
ಅವರ ಮನೆ ಬೆಳಗುವ
ನಂದಾ ದೀಪವಾಗುತ್ತೇನೆ..”

ಈ ಸಾಲುಗಳಲ್ಲಿ, ನ್ಯಾಯ, ಮನುಷ್ಯತ್ವ, ಪ್ರೀತಿಯ ಒರತೆಗಳು ಈಗ ಬತ್ತಿರಬಹುದು ಆದರೆ ಅವುಗಳು ಅಂತರಾಳದಲ್ಲಿ ಸ್ಥಾಯಿಯಾಗಿವೆ, ಮತ್ತೆ ಎಂದಾದರೂ ಅವು ಜೀವಸೆಲೆಯಾಗಿ ಮೈದಳೆಯುತ್ತವೆ ಎಂಬ ಭರವಸೆಯನ್ನು ಕವನದ ಮೂಲಕ ಓದುಗನ ಎದೆಗೆ ಕವಿ ದಾಟಿಸಿದ್ದಾರೆ.

ನಮ್ಮ ದೃಶ್ಯಮಾಧ್ಯಮಗಳ ಅಬ್ಬರ-ಭರಾಟೆಗಳು, ವೈಯಕ್ತಿಕ ಸ್ವಾತಂತ್ರ್ಯಗಳನ್ನೂ ಕೂಡ ಆಪೋಷನ ತೆಗೆದುಕೊಳ್ಳುತ್ತಿರುವ ವಿದ್ಯಮಾನಗಳನ್ನು ’ಆಕಾಶ-ಭೂಮಿ’ ಕವಿತೆಯಲ್ಲಿ ಸೊಗಸಾಗಿ, ತೀಕ್ಷ್ಣವಾಗಿ ದಾಖಲಿಸಿದ್ದಾರೆ. ’ಬಿಂಬ’ ಕವಿತೆಯು ರೂಪಕ, ಪ್ರತಿಮೆಗಳ ಹಂಗಿಲ್ಲದೇ ಮೂಡಿಬಂದಿದೆ. ಮೇಲ್ನೋಟಕ್ಕೆ ವಾಚ್ಯವೆನಿಸಿದರೂ ಕೂಡ, ವಸ್ತುವಿನ ದೃಷ್ಟಿಯಿಂದ ಹಿರಿದಾಗಿದೆ.

ರಾಜ ಬಂದ, ಟ್ರಂಪ್, ಅಹವಾಲುಗಳು, ಅಮಲು ಕವನಗಳು ಸಮಕಾಲೀನ ರಾಜಕಾರಣದ ಹಲವು ಮುಖಗಳನ್ನು ಅರ್ಥಪೂರ್ಣವಾಗಿ ಅನಾವರಣಗೊಳಿಸಿವೆ. ’ಅಲೈನ್‌ಮೆಂಟ್ ಕವಿತೆಯಲ್ಲಿ ಕಂಪ್ಯೂಟರ್ ಪರಿಭಾಷೆಯನ್ನು ಸಮರ್ಥವಾಗಿ ರೂಪಕವಾಗಿ ಬಳಸಿಕೊಂಡಿರುವುದು ಹೊಸಪೀಳಿಗೆಯ ಓದುಗರನ್ನು ಕಾವ್ಯದತ್ತ ಸೆಳೆದು ತರುವ ಸಾಧ್ಯತೆಗಳನ್ನು ತೋರಿದೆ.

“ಮೊದಲೆಲ್ಲ ಲೆಫ್ಟ್ ಅಲೈನ್‌ಮೆಂಟ್ ಸಾಲುಗಳಿರುತ್ತಿದ್ದವು,
ಇದೀಗ ರೈಟ್ ಅಲೈನ್‌ಮೆಂಟ್,
ಇವೆರಡರ ನಡುವೆ ಜಸ್ಟಿಫಿಕೇಷನ್ ಮಾಯವಾಗಿದೆ”

ಎನ್ನುವ ಸಾಲುಗಳು ರಾಜಕಾರಣದ ಸೈದ್ಧಾಂತಿಕ ಒಲವು, ನಿಲುವುಗಳಿಗೆ ಕನ್ನಡಿ ಹಿಡಿದಿವೆ.
ಜಾರ್ಜ್ ಫ್ಲಾಯ್ಡ್ ಎಂಬ ಆಫ್ರಿಕನ್ ಅಮೆರಿಕನ್ ಕಪ್ಪುವರ್ಣೀಯ ವ್ಯಕ್ತಿಯೊಬ್ಬನನ್ನು, ಅಮೆರಿಕಾದಲ್ಲಿ, ವರ್ಣಭೇದದ ಪೂರ್ವಾಗ್ರಹದ ಕಾರಣಕ್ಕೆ ಅಲ್ಲಿನ ಪೊಲೀಸರು ಅಮಾನವೀಯವಾಗಿ ಇದೇ 2020ರ ಮೇ 25ರಂದು ಕೊಲ್ಲುವಾಗ, ಆತನ ’ಐ ಕಾಂಟ್ ಬ್ರೀದ್’ ಎಂಬ ಆತ್ರರೋದನವನ್ನೇ, ಈ ಕವನ ಸಂಕಲನದ ಶೀರ್ಷಿಕೆಯಾಗಿಸಿರುವುದು ಮನುಷ್ಯತ್ವವನ್ನೇ ಉಸಿರುಗಟ್ಟಿಸಿರುವ ನಮ್ಮ ಸಮಕಾಲೀನ ವಾತಾವರಣದ ಚಿತ್ರಣ ನೀಡಿದೆ.

ಕನ್ನಡನಾಡಿನ ಹನ್ನೆರಡನೇ ಶತಮಾನದ ಹರಳಯ್ಯನಿಂದ ಹಿಡಿದು ಇಂತಹ ಹತ್ಯೆಗಳು ಇಂದಿಗೂ ಆಗಾಗ ಮರುಕಳಿಸುತ್ತಿರುವುದನ್ನು ಆರ್ದ್ರವಾಗಿ ಹಾಡಿದೆ.

’ತರಕಾರಿ ಹುಡುಗಿ’, ’ಕಳ್ಳ’ ಕವಿತೆಗಳು ನಮ್ಮ ವ್ಯವಸ್ಥೆಯಲ್ಲಿ ಬಡಜೀವಗಳು ತುತ್ತು ಅನ್ನಕ್ಕೆ, ಹಸಿವಿನ ಚೀಲ ತುಂಬಿಸಲಿಕ್ಕೆ ಪಡುವ ಪಡಿಪಾಟಲುಗಳು, ಭ್ರಷ್ಟಾಚಾರದ ಸಾಗರದಲ್ಲಿ ತಿಮಿಂಗಿಲಗಳನ್ನು ಹಿಡಿಯದೇ ಹಸಿವಿಗಾಗಿ ತುಂಡುರೊಟ್ಟಿ ಕದ್ದವನನ್ನು ಹಿಡಿವ ಭ್ರಷ್ಟಾಚಾರ ನಿಗ್ರಹದ ನಾಟಕಗಳನ್ನು ಓದುಗರ ಕಣ್ಣ ಮುಂದೆ ತರುತ್ತವೆ.

ಅಲಾಯಿ (ಮೊಹರಂ) ನಮ್ಮ ಸೌಹಾರ್ದದ ಸಿಹಿ ಚೊಂಗೆಯಂತಿದ್ದರೆ, ದೂರು, ಗಡಿಪಾರು ಶೀರ್ಷಿಕೆಯ ಮೂರುಸಾಲಿನ ಹನಿಗಳು ಕಿರಿದರಲ್ಲಿ ಹಿರಿದರ್ಥ ಹೇಳುವ, ಸಮ ಸಮಾಜ ಸಂದೇಶಗಳನ್ನು ಸಮರ್ಥವಾಗಿ ಸಾರಿವೆ.

ನಮ್ಮ ಕೊಪ್ಪಳದ ನಾಡಕವಿ ಎಂದೇ ಹೆಸರಾದ ಗವಿಸಿದ್ಧ ಎನ್ ಬಳ್ಳಾರಿಯವರ ಮಗನೆಂಬ ವಿಶೇಷ ರಿಯಾಯಿತಿ, ಆದ್ಯತೆ ಬಯಸದೆಯೂ ಕಾವ್ಯಕ್ಷೇತ್ರದಲ್ಲಿ ಸ್ಪಷ್ಟವಾಗಿ ಸ್ವಸಾಮರ್ಥ್ಯದಿಂದಲೇ ಮಹೇಶ ಬಳ್ಳಾರಿ ಮುನ್ನಡೆಯುತ್ತಿದ್ದಾರೆ.

ಮಂಜುನಾಥ ಡೊಳ್ಳಿನ

ಹಿರಿಯ ಸಹಾಯಕ ನಿರ್ದೇಶಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಧಾರವಾಡ


ಇದನ್ನೂ ಓದಿ: ಪುಸ್ತಕ ವಿಮರ್ಶೆ: ಬುದ್ಧನೆಡೆಗೆ ಮರಳಿ ಹಾರುವ ಮೂಡ್ನಾಕೂಡು ಚಿನ್ನಸ್ವಾಮಿಯವರ ನೆನಪಿನ ಹಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...