Homeಚಳವಳಿಪ್ರಭುತ್ವದೊಂದಿಗಿನ ಸಮರಕ್ಕೆ ಇನ್ನೊಂದು ಹೆಸರು ಇರೋಮ್ ಶರ್ಮಿಳಾ

ಪ್ರಭುತ್ವದೊಂದಿಗಿನ ಸಮರಕ್ಕೆ ಇನ್ನೊಂದು ಹೆಸರು ಇರೋಮ್ ಶರ್ಮಿಳಾ

ನಿರಂತರ 16 ವರ್ಷಗಳ ಉಪವಾಸ ಸತ್ಯಾಗ್ರಹದ ಮೂಲಕ ಇಡೀ ಪ್ರಪಂಚಕ್ಕೆ ಪರಿಚಿತರಾದವರು ಇರೋಮ್ ಶರ್ಮಿಳಾ.

- Advertisement -
- Advertisement -

| ಮುತ್ತುರಾಜು |

ನವೆಂಬರ್ 02, 2000ನೇ ಇಸವಿ. ಅಸ್ಸಾಂ ರಾಜ್ಯದ ಇಂಫಾಲ ಬಳಿ ಇರುವ ಮಾಲೋಮ್ ನಗರದಲ್ಲಿ 10 ಜನ ಬಸ್ ನಿಲ್ದಾಣದಲ್ಲಿ ಬಸ್‍ಗಾಗಿ ಕಾಯುತ್ತಿರುತ್ತಾರೆ. ಅಲ್ಲಿಗೆ ಏಕಾಏಕಿ ನುಗ್ಗಿದ ಅಸ್ಸಾಂ ರೈಫಲ್ಸ್ ಪೊಲೀಸರು ಗುಂಡಿನ ದಾಳಿ ನಡೆಸಿ 10 ಜನರನ್ನು ಕೊಂದು ಹಾಕುತ್ತಾರೆ. ಈ ಘೋರ ದುರಂತದ ವಿರುದ್ಧ ಅಸ್ಸಾಂ ಜನತೆ ಕಂಬನಿ ಮಿಡಿಯುತ್ತದೆ. ಆದರೆ 28 ವರ್ಷದ ಒಬ್ಬ ಹುಡುಗಿ ದಿಟ್ಟ ತೀರ್ಮಾನ ತೆಗೆದುಕೊಳ್ಳುತ್ತಾಳೆ. ಅದು ಆ ದಾಳಿಗೆ ನ್ಯಾಯಕ್ಕಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ. ಅಲ್ಲಿಂದ ಆರಂಭವಾದ ಆಕೆಯ ಉಪವಾಸ ಸತ್ಯಾಗ್ರಹ ಹೋರಾಟ 2016ರವರೆಗೆ ಅಂದರೆ ಸತತ 16 ವರ್ಷ ಮುಂದುವರೆಯುತ್ತದೆ ಎಂದು ಸ್ವತಃ ಆಕೆಯು ಸಹ ಊಹಿಸಿರಲಿಕ್ಕಿಲ್ಲ.

ಹೌದು ನಾವು ಮಾತಾನಾಡುತ್ತಿರುವುದು ಮೊನ್ನೆ ತಾನೇ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿಗೆ ಜನ್ಮ ನೀಡಿರುವ ಮಣಿಪುರದ ಉಕ್ಕಿನ ಮಹಿಳೆ ಎಂದು ಪ್ರಖ್ಯಾತವಾದ ಚಾನು ಇರೋಮ್ ಶರ್ಮಿಳಾರವರ ಬಗ್ಗೆ. ಸದ್ಯ ಬೆಂಗಳೂರಿನ ಮಲ್ಲೇಶ್ವರಂನ ಕ್ಲೌಡ್‍ನೈನ್ ಆಸ್ಪತ್ರೆಯಲ್ಲಿರುವ 46 ವರ್ಷದ ನಾಗರಿಕ ಹಕ್ಕುಗಳ ಕಾರ್ಯಕರ್ತೆ ಶರ್ಮಿಳಾರವರು, ಮೇ 12ರ ವಿಶ್ವ ತಾಯಂದಿರ ದಿನವೇ ಅವಳಿ ಮಕ್ಕಳಿಗೆ ಜನ್ಮನೀಡಿರುವುದು ಮತ್ತೊಂದು ವಿಶೇಷವಾಗಿದೆ. ಈ ಕುರಿತು ಎಲ್ಲಾ ಮಾಧ್ಯಮಗಳು ಸುಕೋಮಲವಾಗಿ ವರದಿ ಮಾಡುತ್ತಿವೆ. ಆದರೆ ಆಕೆಯ ಹೋರಾಟದ ಇತಿಹಾಸದತ್ತ ಕಣ್ಣು ಹಾಯಿಸಿದರೆ ಅಸಾಮಾನ್ಯ ತ್ಯಾಗ, ದಿಟ್ಟತನ, ನೋವು, ಕೆಚ್ಚು, ಹತಾಶೆ ಎಲ್ಲವೂ ದಿಗ್ಗನೇ ಎದ್ದು ನಿಲ್ಲುತ್ತವೆ.  ಶಶಸ್ತ್ರಪಡೆಗಳ ವಿಶೇಷಾಧಿಕಾರ ಕಾಯ್ದೆಯ ವಿರುದ್ಧ ನಿರಂತರ 16 ವರ್ಷಗಳ ಉಪವಾಸ ಸತ್ಯಾಗ್ರಹದ ಮೂಲಕ ಇಡೀ ಪ್ರಪಂಚಕ್ಕೆ ಪರಿಚಿತರಾದವರು ಇರೋಮ್ ಶರ್ಮಿಳಾ. ಭಾರತದ 7 ಈಶಾನ್ಯ ರಾಜ್ಯಗಳು ಮತ್ತು ಜಮ್ಮು ಕಾಶ್ಮಿರ ರಾಜ್ಯದಲ್ಲಿ ಜಾರಿಯಲ್ಲಿರುವ 1958ರ ಶಶಸ್ತ್ರಪಡೆಗಳ ವಿಶೇಷಾಧಿಕಾರ ಕಾಯ್ದೆಯು ಅಲ್ಲಿನ ಜನರ ಸ್ವಾತಂತ್ರ್ಯವನ್ನು ಸಂಪೂರ್ಣ ಕಿತ್ತುಕೊಂಡಿದೆ. ಇಲ್ಲಿ ಸೇನಾಪಡೆಗಳಿಗೆ ಅನುಮತಿಯಿಲ್ಲದೇ ಯಾರನ್ನಾದರೂ ವಿಚಾರಣೆ ಮಾಡುವು, ಬಂಧಿಸುವ ಅಧಿಕಾರವಿರುತ್ತದೆ. ಈ ವಿಚಾರವಾಗಿ ಸೇನಾಪಡೆಗಳ ವಿರುದ್ಧ ದೂರು ನೀಡುವ ಹಕ್ಕು ನಾಗರಿಕರಿಗಿರುವುದಿಲ್ಲ.

ಈ ಕಾಯ್ದೆಯು ದುರ್ಬಳಕೆಯಗುತ್ತಿದ್ದು ಇದರಿಂದ ಮುಗ್ಧಜನರ ಜೀವಹಾನಿಯಾಗುತ್ತಿದೆ ಎಂಬುದು ಶರ್ಮಿಳಾರವರ ಆರೋಪ. ಈ ಆರೋಪಕ್ಕೆ ಸಾವಿರಾರು ಸಾಕ್ಷಿಗಳು ಸಹ ಅವರ ಬಳಿ ಇವೆ. ಈ ಕಾಯ್ದೆಯ ವಿರುದ್ಧದ ಬಂಡಾಯದಲ್ಲಿ ಹಲವು ದಶಕಗಳಿಂದ 5000ಕ್ಕೂ ಹೆಚ್ಚು ಮಣಿಪುರದ ಜನ ಸಾವನಪ್ಪಿದ್ದಾರೆ. ಸೇನಾಪಡೆಗಳ ಮಿತಿಮೀರದ ದೌರ್ಜನ್ಯದಿಂದಾಗಿ ನೂರಾರು ಹೆಣ್ಣು ಮಕ್ಕಳು ಅತ್ಯಚಾರಕ್ಕೊಳಗಾಗಿದ್ದಾರೆ. ಹಾಗಾಗಿ ಆ ಕಾಯ್ದೆಯನ್ನು ವಾಪಸ್ ಪಡೆಯಬೇಕೆಂಬ ಏಕೈಕ ಬೇಡಿಕೆಯನ್ನಿಟ್ಟುಕೊಂಡು ಧೀರೋದಾತ್ತ ಹೋರಾಟ ನಡೆಸಿದವರು ಇರೋಮ್ ಶರ್ಮಿಳಾ.

ಇವರ ಹೋರಾಟವನ್ನು ಪ್ರಭುತ್ವ ಕ್ರೂರವಾಗಿ ಹತ್ತಿಕ್ಕಲು ಪ್ರಯತ್ನಿಸಿತು. ಉಪವಾಸ ಆರಂಭಿಸಿದ ಮೂರೇ ದಿವಸಕ್ಕೆ ಇವರ ಮೇಲೆ ಆತ್ಮಹತ್ಯೆಗೆ ಪ್ರಯತ್ನ ಎಂಬ ಕೇಸ್ ಜಡಿಯಿತು. ಶರ್ಮಿಳಾ ಜಗ್ಗಲಿಲ್ಲ. ನಂತರ ನ್ಯಾಯಾಂಗ ಬಂಧನ, ಜೈಲಿನಲ್ಲಿದ್ದಾಗಲೂ ಉಪವಾಸ ಮುಂದುವರೆಸಿದರು. ಕೊನೆಗೆ ಆಸ್ಪತ್ರೆಯಲ್ಲಿಟ್ಟು ಮೂಗಿನ ನಳಿಕೆ ಮೂಳಕ ಬಲವಂತವಾಗಿ ಆಹಾರ ನೀಡುವ ಪದ್ದತಿಯನ್ನು ಪೊಲೀಸರು ಅನುಸರಿಸಿದರು.

ಜಗತ್ತಿನಾದ್ಯಂತ ಇರೋಮ್ ಶರ್ಮಿಳಾರವರ ಹೋರಾಟಕ್ಕೆ ಬೆಂಬಲದ ಮಹಾಪೂರವೇ ಹರಿದುಬಂತು. ಇವರ ಹೋರಾಟಕ್ಕೆ ಸಹಮತ ಸೂಚಿಸಿ ದೇಶಾದ್ಯಂತ ಹೋರಾಟಗಳು ನಡೆದವು. ಆದರೆ ಕಿವುಡು, ಕುರುಡು ಸರ್ಕಾರ ಬಗ್ಗಲಿಲ್ಲ. ದಾಖಲೆಯ 16 ವರ್ಷಗಳ ಉಪವಾಸದ ನಂತರ ತಮ್ಮ ಹೋರಾಟದ ಮಾರ್ಗ ಬದಲಿಸಲು ಶರ್ಮಿಳಾ ನಿರ್ಧರಿಸಿದರು. ಅದರಂತೆ 2016ರ ಆಗಸ್ಟ್ 09 ರಂದು ಉಪವಾಸ ಸತ್ಯಾಗ್ರಹ ಕೊನೆಗೊಳಿಸಿ ಚುನಾವಣಾ ರಾಜಕೀಯದ ಮೂಲಕ ಹೋರಾಟ ಮುಂದುವರೆಸಲು ನಿರ್ಧರಿಸಿದರು.

ಪಕ್ಷ ಸೇರುವಂತೆ ಆಪ್ ಸೇರಿದಂತೆ ಹಲವು ಪಕ್ಷಗಳು ಆಹ್ವಾನಿಸಿದರು ಒಪ್ಪದೇ ಪೀಪಲ್ಸ್ ರೆಸೆರ್ಜೆನ್ಸ್ ಅಂಡ್ ಜಸ್ಟೀಸ್ ಅಲೆಯನ್ಸ್ ಎನ್ನುವ ಪಕ್ಷ ಸ್ಥಾಪಿಸಿದರು. 2017ರಲ್ಲಿ ಮಣಿಪುರದ ಸಿಎಂ ಆಗಿ ಅಲ್ಫಾ ಕಾಯ್ದೆಯನ್ನು ಕಿತ್ತೊಗೆಯುವ ಕನಸು ಕಂಡರು. ಅದರಂತೆ ಹಾಲಿ ಮುಖ್ಯಮಂತ್ರಿ ಒಕ್ರಮ್ ಇಬೋಬಿ ಸಿಂಗ್ ವಿರುದ್ಧ ತೋಬಲ್ ಕ್ಷೇತ್ರದಿಂದ ಕಣಕ್ಕಿಳಿದರು. ಆದರೆ ಚುನಾವಣಾ ಫಲಿತಾಂಶ ಮಾತ್ರ ಆಘಾತಕಾರಿಯಾಗಿತ್ತು. ಲಕ್ಷಾಂತರ ಜನ ಇರೋಮ್ ಶರ್ಮಿಳಾರವರ ಹೋರಾಟವನ್ನು ಬೆಂಬಲಿಸಿದ್ದರೂ ಅವರಿಗೆ ಬಿದ್ದಿದ್ದ ಓಟುಗಳು ಮಾತ್ರ ಕೇವಲ 90. ಇದು ಅವರಲ್ಲಿ ತೀವ್ರ ನಿರಾಶೆಯನ್ನುಂಟುಮಾಡಿತು. 

ಸೋತರು ಅವರು ಜನರನ್ನು ದೂಷಿಸಲಿಲ್ಲ. ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡರು. ನನ್ನ ಮನೋಭಾವ ಮತ್ತು ನನ್ನ ಅಂತರಂಗದ ಮಧ್ಯೆ ಎಲ್ಲೋ ಸಂಪರ್ಕ ತಪ್ಪಿಹೋಗಿದೆ. ರಾಜಕೀಯ ಕ್ಷೇತ್ರ ನನಗಾಗದು. ಆದ್ದರಿಂದ ರಾಜಕೀಯ ಕ್ಷೇತ್ರಕ್ಕೆ ವಿದಾಯ ಹೇಳುತ್ತೇನೆ ಎಂದರು. ಆದರೆ ಅವರೊಳಗಿದ್ದ ಕ್ರಾಂತಿಯ ಜ್ವಾಲೆ ಮಾತ್ರ ತಣ್ಣಗಾಯಿತು. ಚುನಾವಣಾ ರಾಜಕಾರಣದ ಮಿತಿಯು ಇದಕ್ಕೆ ಕಾರಣವಿರಬಹುದು. ಈ 16 ವರ್ಷಗಳ ಹೋರಾಟ ಯಾರಿಗಾಗಿ? ತನಗಾಗಿ ಮಾಡಿದ್ದು ಏನು ಎಂಬ ಪ್ರಶ್ನೆಗಳು ಬಹುಶಃ ಅವರ ಮನಸ್ಸಿನಲ್ಲಿ ಬಂದಿರಬೇಕು. 2017ರಲ್ಲಿ ತನ್ನ ಹೋರಾಟದ ಸಂಗಾತಿ, ಗೆಳೆಯ ಗೋವಾ ಮೂಲದ ಬ್ರಿಟಿಷ್ ಪ್ರಜೆ ಡೆಸ್ಮೆಂಡ್ ಕುಟಿನ್ಹೊರನ್ನು ವಿವಾಹವಾಗಿ ಕೊಡೈಕೆನೈಲ್‍ನಲ್ಲಿ ನೆಲೆಸಿದರು. ಈಗ ಆರೋಗ್ಯದ ಕಾರಣಕ್ಕೆ ಒಂದು ವರ್ಷದಿಂದ ಬೆಂಗಳೂರಿನಲ್ಲಿದ್ದ ಅವರು 2019ಕ್ಕೆ ಎರಡು ಮಕ್ಕಳ ಚೊಚ್ಚಲ ತಾಯಿಯಾಗಿದ್ದಾರೆ.

ಯಾವಾಗ ಜಾಗತೀಕರಣ ವಿಜೃಂಭಿಸಲು ಆರಂಭಿಸಿತ್ತೊ, ಯಾವಾಗ ಚಳವಳಿಗಳು ತನ್ನ ಶಕ್ತಿ ಕಳೆದುಕೊಳ್ಳುತ್ತಿದ್ದವೊ ಆಗ ಹೋರಾಟದ ಕಣಕ್ಕೆ ಧುಮುಕಿದ ಇರೋಮ್ ಶರ್ಮಿಳಾರವರ ಹೋರಾಟದ ಜೀವನ ಸಾಮಾಜಿಕ ಬದಲಾವಣೆ ಬಯಸುವ ಪ್ರತಿಯೊಬ್ಬ ವ್ಯಕ್ತಿಗಳು ಅಧ್ಯಯನ ಮಾಡಬೇಕಾದ ಸಂಗತಿಯಾಗಿದೆ. ಹೌದು ಇದು ಚಳವಳಿಗಳಿಗೆ ಸೂಕ್ತ ಕಾಲವಲ್ಲ. ಆದರೆ ಕಾಲ ಹೀಗೆಯೇ ಇರುವುದಿಲ್ಲವಲ್ಲ? ಮಣಿಪುರದ ಜನರ ಸಮಸ್ಯೆ ಬೆಂಗಳೂರಿನ ಬಹುಪಾಲು ಜನಕ್ಕೆ ಸಮಸ್ಯೆ ಅನ್ನಿಸಲೇ ಇಲ್ಲ. ಕಾಶ್ಮಿರದ ಜನರ ಸಮಸ್ಯೆ ಉತ್ತರ ಪ್ರದೇಶದ ಜನರಿಗೆ ಭಯೋತ್ಪಾದನೆಯಾಗಿಯೇ ಕಾಣಬಹುದು. ಹಾಗಾಗಿ ಇರೋಮ್ ಶರ್ಮಿಳಾರವರು ಚಳವಳಿ ಬಿಟ್ಟು ಸೆಟ್ಲ್ ಆದರು ಎಂಬ ಅಭಿಪ್ರಾಯಕ್ಕೆ ನಾವು ಬರುವುದು ಬೇಡ.

ಆಶಾವಾದದಿಂದ ಭವಿಷ್ಯವನ್ನು ಎದುರಿಸೋಣ. ಎಲ್ಲಾ ಚಳವಳಿಗಳಿಗೂ ತಕ್ಷಣದ ಪರಿಹಾರ ಸಿಗದಿದ್ದರೂ ಧೀರ್ಘಕಾಲೀನ ಶಾಶ್ವತ ಪರಿಹಾರಕ್ಕಾಗಿ ವಿನೂತನವಾಗಿ ಹೋರಾಟಕ್ಕಿಳಿಯೋಣ. ಸದ್ಯಕ್ಕೆ ಇರೋಮ್ ಶರ್ಮಿಳಾರವರಿಗೆ ಜನಿಸಿರುವ ಮೊದಲ ಮಗುವಿನ ಹೆಸರು ನಿಕ್ಸ್ ಶಾಕಿ (ಶರ್ಮಿಳಾರ ತಾಯಿ ಇರೋಮ್ ಶಾಕಿಯ ನೆನಪಿನಲ್ಲಿ) ಮತ್ತು ಎರಡನೇ ಮಗುವಿನ ಹೆಸರು ಅತುಮನ್ ತಾರ (ಬೌದ್ಧ ದೇವರ ನೆನಪಿನಲ್ಲಿ) ರಂತಹ ಮಕ್ಕಳ ಪೀಳಿಗೆಗೆಗಾದರು ಹಿಂಸೆ, ಅನ್ಯಾಯ, ಶೋಷಣೆಗಳು ಇಳಿಮುಖವಾಗುವ, ಶಾಂತಿ, ಪ್ರೀತಿ, ಸಾಮರಸ್ಯ, ಸಹೋದರತ್ವ, ಸಮಾನತೆ ಹೆಚ್ಚಾಗುವ ಸಮಾಜ ನಿರ್ಮಾಣವಾಗಲಿ ಎಂದು ಆಶಿಸೋಣ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...