Homeಫ್ಯಾಕ್ಟ್‌ಚೆಕ್ರಾಮ ಮಂದಿರದ ಜಾಹಿರಾತು ಹಾಕದಂತೆ ಒತ್ತಡ ಹಾಕಿದ್ದು ಮುಸ್ಲಿಂ ಸಂಘಟನೆಗಳು ಮಾತ್ರವೆ?

ರಾಮ ಮಂದಿರದ ಜಾಹಿರಾತು ಹಾಕದಂತೆ ಒತ್ತಡ ಹಾಕಿದ್ದು ಮುಸ್ಲಿಂ ಸಂಘಟನೆಗಳು ಮಾತ್ರವೆ?

- Advertisement -
- Advertisement -

ನ್ಯೂಯಾರ್ಕ್ ಮೂಲದ ಜಾಹೀರಾತು ಸಂಸ್ಥೆಯೊಂದು ರಾಮನ ಚಿತ್ರಗಳನ್ನು ಟೈಮ್ಸ್ ಸ್ಕ್ವೇರ್‌ನಲ್ಲಿ ಜಾಹೀರಾತು ಫಲಕಗಳಲ್ಲಿ ಪ್ರಸಾರ ಮಾಡಲು ನಿರಾಕರಿಸಿದ ನಂತರ, ಹಲವಾರು ಸುದ್ದಿ ವೆಬ್‌ಸೈಟ್‌ಗಳು, ಇದು ಅಮೆರಿಕಾದಲ್ಲಿನ “ಮುಸ್ಲಿಂ ಗುಂಪುಗಳು” ನಡೆಸಿದ ಅಭಿಯಾನದ ಫಲಿತಾಂಶವಾಗಿದೆ ಎಂದು ವರದಿ ಮಾಡಿವೆ.

ಆದರೆ ನಿಜವೇನೆಂದರೆ ಈ ವರದಿಗಳಿಗೆ ವಿರುದ್ದವಾಗಿ ಜಾಹೀರಾತುಗಳನ್ನು ಹಾಕದಂತೆ ಪ್ರತಿಭಟಿಸಿರುವವರಲ್ಲಿ ಹಿಂದೂಗಳು ಸೇರಿದಂತೆ ಎಲ್ಲಾ ಧರ್ಮಗಳ ನಾಗರಿಕ ಹಕ್ಕುಗಳ ಸಂಘಟನೆಯ ಜನರು ಇದ್ದರು ಎಂಬುವುದಾಗಿದೆ.

ಒಪಿಇಂಡಿಯಾ ಮತ್ತು ಇಂಡಿಯಾ.ಕಾಂನಂತಹ ಸುದ್ದಿ ಸಂಸ್ಥೆಗಳು ನಾಸ್ಡಾಕ್ ಬಿಲ್‌ಬೋರ್ಡ್ ಅನ್ನು ನಿರ್ವಹಿಸುವ ಜಾಹೀರಾತು ಕಂಪನಿಯಾದ ಬ್ರಾಂಡೆಡ್ ಸಿಟೀಸ್ ನೆಟ್ವರ್ಕ್ ಮುಸ್ಲಿಂ ಸಂಘಟನೆಗಳು ಇದರ ವಿರುದ್ಧ ಅರ್ಜಿಯನ್ನು ಸಲ್ಲಿಸಿದ ನಂತರ ಬಿಲ್‌ಬೋರ್ಡ್ ನೀಡಲು ನಿರಾಕರಿಸಿದೆ ಎಂದು ವರದಿಗಳನ್ನು ಪ್ರಕಟಿಸಿತು.

ದಕ್ಷಿಣ ಏಷ್ಯಾದ ನಾಗರಿಕ ಹಕ್ಕುಗಳ ಗುಂಪುಗಳ ಒಕ್ಕೂಟದ ಪ್ರತಿಭಟನೆಯಿಂದಾಗಿ ಜಾಹೀರಾತುಗಳನ್ನು ಹಾಕಲು ಕಂಪನಿ ನಿರಾಕರಿಸಿದ ನಂತರ ಸುಳ್ಳು ಹೇಳಿಕೆಗಳನ್ನು ಒಳಗೊಂಡ ಸುದ್ದಿಗಳನ್ನು ಈ ವೆಬ್‌ಸೈಟ್‌ಗಳು ವರದಿ ಮಾಡುತ್ತುದೆ.

ನಡೆದದ್ದೇನು ಅಥವಾ ಧ್ವೇಷ ಅಭಿಯಾನ ನಡೆಸುವ ವೆಬ್‌ಸೈಟ್ ಹೇಳಿದ್ದೇನು?

ಬಲಪಂಥೀಯ ವೆಬ್‌ಸೈಟ್‌ಗಳಾದ ಒಪಿಂಡಿಯಾ ಮತ್ತು ಇಂಡಿಯಾ.ಕಾಮ್ ತಮ್ಮ ವರದಿಗಳಲ್ಲಿ ಹೀಗೆ ಬರೆದಿದೆ “ಭಾರತೀಯ ಅಲ್ಪಸಂಖ್ಯಾತರ ವಕೀಲರ ನೆಟ್‌ವರ್ಕ್- (ಇಮಾನ್‌ನೆಟ್), ಜಸ್ಟಿಸ್ ಫಾರ್ ಆಲ್, ಕೊಯಿಲಿಷನ್ ಆಫ್ ಅಮೆರಿಕನ್ ಫಾರ್‌ ಪ್ಲೂರಲಿಸಂ ಇನ್ ಇಂಡಿಯಾ (ಸಿಎಪಿಐ), ಉತ್ತರ ಅಮೆರಿಕಾದ ಭಾರತೀಯ ಮುಸ್ಲಿಂ ಸಂಘ (ನೈಮಾ), ಇಸ್ಲಾಮಿಕ್ ಸರ್ಕಲ್ ಆಫ್ ನಾರ್ಥ್ ಅಮೆರಿಕಾ-ಸೋಷಿಯಲ್ ಜಸ್ಟಿಸ್ (ಐಸಿಎನ್‌ಎಎಸ್‌ಜೆ) ಮತ್ತು ದಿ ಇಂಟರ್‌ನ್ಯಾಷನಲ್ ಸೊಸೈಟಿ ಫಾರ್ ಪೀಸ್ ಅಂಡ್ ಜಸ್ಟೀಸ್ ಈ ಅರ್ಜಿಯನ್ನು ಸಲ್ಲಿಸಿ ಜಾಹೀರಾತು ಫಲಕಗಳಲ್ಲಿ ರಾಮನ ಚಿತ್ರ ಬಾರದಂತೆ ತಡೆ ಹಿಡಿದಿದ್ದಾರೆ”.

ಆದರೆ ಈ ಕ್ರಮವನ್ನು ವಿರೋಧಿಸುವ ಇತರ ಸಂಘಟನೆಗಳ ಬಗ್ಗೆ ವರದಿಯು ಮೌನವಾಗಿದೆ. ಆ ಮೂಲಕ ಕೇವಲ ಮುಸ್ಲಿಂ ಸಂಘಟನೆಗಳನ್ನು ಮಾತ್ರ ತನ್ನ ದ್ವೇಷ ಪ್ರಚಾರದ ಗುರಿಯಾಗಿಸಿಕೊಂಡಿದೆ.

ಕಂಪನಿಯು ಜಾಹಿರಾತು ಹಾಕುವುದನ್ನು ನಿರಾಕರಿಸಿರುವುದು “ಜಿಹಾದಿ ಪಡೆಗಳಿಗೆ” ತಲೆಬಾಗುವುದನ್ನು ಸಂಕೇತಿಸುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಈ ವರದಿಯನ್ನು ಉಲ್ಲೇಖಿಸಿ ಹೇಳಲಾಗುತ್ತಿದೆ.

ಬಿಲ್‌ಬೋರ್ಡ್ ವಿರುದ್ದ ಪ್ರತಿಭಟಿಸಿದ ನಾಗರಿಕ ಹಕ್ಕುಗಳ ಸಂಘಟನೆ

ಜುಲೈ 31 ರಂದು ಅಮೆರಿಕಾದ ಹಲವಾರು ನಾಗರಿಕ ಹಕ್ಕುಗಳ ಸಂಘಟನೆಗಳಾದ ಅಮೆರಿಕನ್ ಇಂಡಿಯನ್ ಪಬ್ಲಿಕ್ ಅಫೇರ್ಸ್ ಕಮಿಟಿ (ಎಐಪಿಎಸಿ) ನ್ಯೂಯಾರ್ಕ್ ನಗರದ ಮೇಯರ್‌ಗೆ ಆಗಸ್ಟ್ 5 ರಂದು ಟೈಮ್ಸ್ ಸ್ಕ್ವೇರ್‌ನಲ್ಲಿ “ಇಸ್ಲಾಮೋಫೋಬಿಕ್” ಬಿಲ್‌ಬೋರ್ಡ್ ಅನ್ನು ಪ್ರದರ್ಶಿಸುವುದನ್ನು ತಡೆಯುವಂತೆ ಕೇಳಿಕೊಂಡಿದ್ದವು.

ಟೈಮ್ಸ್ ಸ್ಕ್ವೇರ್ನಲ್ಲಿ ಹಾಕಲಾಗುವ ಜಾಹೀರಾತುಗಳ ಪ್ರದರ್ಶನವು “ನಂಬಿಕೆಯ ಆಚರಣೆಯಲ್ಲ ಆದರೆ ದ್ವೇಷದ ಆಚರಣೆಯಾಗಿದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಇವುಗಳಲ್ಲಿ ಕೊಯಿಲಿಷನ್ ಅಗೈನ್ಸ್ಟ್‌ ಫ್ಯಾಸಿಸಂ ಇನ್ ಇಂಡಿಯಾ (ಸಿಎಎಫ್‌ಐ), ಹಿಂದೂಸ್ ಫಾರ್‌ ಹ್ಯೂಮನ್ ರೈಟ್ (ಎಚ್‌ಎಫ್‌ಹೆಚ್ಆರ್), ಗ್ಲೋಬಲ್ ಇಂಡಿಯನ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಜಿಪಿಎ), ಅಸೋಸಿಯೇಷನ್ ಆಫ್ ಇಂಡಿಯನ್ ಮುಸ್ಲಿಸ್, ಸಾಧನಾ: ಕೊಲಿಷನ್ ಆಫ್ ಪ್ರೋಗ್ರೆಸಿವ್‌ ಹಿಂದೂಸ್ ಮತ್ತು ಇತರವು ಸೇರಿವೆ.

ಹಿಂದೂಸ್ ಫಾರ್‌ ಹ್ಯೂಮನ್ ರೈಟ್ (ಎಚ್‌ಎಫ್‌ಹೆಚ್‌ಆರ್) ಸಂಘಟನೆಯ ಸಹ-ಸಂಸ್ಥಾಪಕಿ ಮತ್ತು ಮಂಡಳಿಯ ಸದಸ್ಯೆ ಸುನೀತಾ ವಿಶ್ವನಾಥ್ ಅವರು “ಕೆಲವನ್ನು ಹೊರತುಪಡಿಸಿ ಎಲ್ಲಾ ಸಂಘಟನೆಗಳು ಮುಸ್ಲಿಮರದ್ದಲ್ಲ. ನಾವೆಲ್ಲರೂ ನ್ಯೂಯಾರ್ಕ್ ಚುನಾಯಿತ ಅಧಿಕಾರಿಗಳಿಗೆ ಜಾಹೀರಾತು ಫಲಕಗಳ ಮಾಲೀಕರ ಮೇಲೆ ಒತ್ತಡ ಹೇರಿದ್ದೇವೆ ಮತ್ತು ನಮ್ಮ ಧ್ವನಿಯನ್ನು ಗಟ್ಟಿಯಾದ ರೀತಿಯಲ್ಲಿ ಎತ್ತಿದ್ದೇವೆ” ಎಂದಿದ್ದಾರೆ

“ವಿವಿಧ ರೀತಿಯ ಭಾರತೀಯ ವಲಸೆಗಾರರು ಭಾರತೀಯ ಪ್ರಜಾಪ್ರಭುತ್ವಕ್ಕಾಗಿ ಮಾತನಾಡಲು ಒಂದಾಗಬೇಕು ಮತ್ತು ಸಂಘಪರಿವಾರವನ್ನು ಸೋಲಿಸಲು ಸಹಾಯ ಮಾಡಬೇಕು. ಪ್ರತಿರೋಧ ಚಳವಳಿಯು ಹಿಂದೂ ಎಂದು ಗುರುತಿಸುವವರು ಸೇರಿದಂತೆ ಎಲ್ಲರನ್ನೂ ಸೇರಿಸುವ ಅಗತ್ಯವಿದೆ” ಎಂದು ಸುನಿತಾ ವಿಶ್ವನಾಥ್ ಹೇಳಿದ್ದಾರೆ.

ಒಕ್ಕೂಟದ ಭಾಗವಾಗಿದ್ದ ಗ್ಲೋಬಲ್ ಇಂಡಿಯಾ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಜಿಐಪಿಎ) ಯ ಪ್ರತಿನಿಧಿ ಪ್ರತಿಭಟನೆಗಳು ಭಾರತೀಯ-ಅಮೇರಿಕನ್ ವಲಸೆಗಾರರಿಂದಲೇ ಹೊರತು ಯಾವುದೇ ಒಂದು ನಿರ್ದಿಷ್ಟ ನಂಬಿಕೆ ಅಥವಾ ಧರ್ಮದ ಜನರಿಂದ ಅಲ್ಲ ಎಂದು ಹೇಳಿದರು.

ಆಗಸ್ಟ್ 5 ರಂದು ನ್ಯೂಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ನಲ್ಲಿ ರಾಮ ಮಂದಿರದ ಜಾಹಿರಾತು ಹಾಕದಿರುವಂತೆ ನಾಗರಿಕ ಹಕ್ಕುಗಳ ಗುಂಪು ಒತ್ತಡ ಹಾಕಿದ್ದರಿಂದ ಜಾಹೀರಾತು ಸಂಸ್ಥೆ ಜಾಹಿರಾತು ಪ್ರಸಾರ ಮಾಡಲು ನಿರಾಕರಿಸಿತು. ಆದರೆ ಈ ಪ್ರತಿಭಟನೆಯು ವಿವಿಧ ನಾಗರಿಕ ಹಕ್ಕುಗಳ ಗುಂಪುಗಳ ಸಾಮೂಹಿಕ ಪ್ರಯತ್ನವಾಗಿತ್ತು ಹಾಗೂ ಅದು ಕೇವಲ ಮುಸ್ಲಿಮರ ಗುಂಪುಗಳದ್ದು ಮಾತ್ರವಾಗಿರಲಿಲ್ಲ.

ಕೃಪೆ: ದಿ ಕ್ವಿಂಟ್


ಓದಿ: ಫ್ಯಾಕ್ಟ್‌ಚೆಕ್: ನ್ಯೂಯಾರ್ಕ್‌ನ ’ಟೈಮ್ಸ್‌ ‌ಸ್ಕ್ವೇರ್’ನಲ್ಲಿ ರಾಮನ ಚಿತ್ರ ಬಿತ್ತರಿಸಲಾಗಿದೆಯೆ?


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...