Homeಕರ್ನಾಟಕಕೊರೋನಾ ಆಹಾರ ಸಹಾಯವಾಣಿ 155214ಕೆಲಸ ಮಾಡುತ್ತಿದೆಯೇ?: ನಾನುಗೌರಿ.ಕಾಂಗೆ ಆಘಾತ ತಂದ ಅನುಭವ

ಕೊರೋನಾ ಆಹಾರ ಸಹಾಯವಾಣಿ 155214ಕೆಲಸ ಮಾಡುತ್ತಿದೆಯೇ?: ನಾನುಗೌರಿ.ಕಾಂಗೆ ಆಘಾತ ತಂದ ಅನುಭವ

ಸ್ವಯಂಪ್ರೇರಣೆಯಿಂದ ಸರ್ಕಾರದ ಸಹಾಯವಾಣಿಯನ್ನು ಪ್ರಚಾರ ಮಾಡಿದ ನಾನುಗೌರಿ.ಕಾಂಗೆ ಆಘಾತ ಕಾದಿತ್ತು.

- Advertisement -
- Advertisement -

ಕೊರೊನಾ ಸಂಕಷ್ಟದ ಈ ಸಂದರ್ಭದಲ್ಲಿ ನಾನುಗೌರಿ.ಕಾಂ ಸರ್ಕಾರವನ್ನು ಪ್ರಶ್ನೆ ಮಾಡುವುದಷ್ಟೇ ಮಾಡಬಾರದು ಎಂದು ಭಾವಿಸಿದೆ. ಇಂತಹ ಹೊತ್ತಿನಲ್ಲಿ ಸರ್ಕಾರದ ಜೊತೆಗೂ ನಿಂತು ಕೆಲಸ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.  ಜನರಿಗೆ ನೆರವು ಒದಗಿಸುತ್ತಿರುವ ಹಲವು ಸಂಸ್ಥೆಗಳಿಗೂ ಮತ್ತು ಸಾಮಾನ್ಯ ಬಡಜನರಿಗೂ ನಡುವೆ ಸೇತುವೆಯಂತೆ ಕೆಲಸ ಮಾಡಲು ಪ್ರಯತ್ನ ನಡೆಸಿದೆ. ಆದರೆ, ಅದೇ ಸಂದರ್ಭದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ದೀರ್ಘ ಕಾಲ ನೆರವು ಸಿಗಬೇಕೆಂದರೆ ಸರ್ಕಾರವೇ ಕೆಲಸ ಮಾಡಬೇಕಾಗುತ್ತದೆ.

ಆ ಹಿನ್ನೆಲೆಯಲ್ಲಿ ನಾನುಗೌರಿ.ಕಾಂನಿಂದ ಸರ್ಕಾರದ ಸಹಾಯವಾಣಿ 155214ಗೆ ಕರೆ ಮಾಡಿ ಅದು ಕೆಲಸ ಮಾಡುತ್ತಿದೆಯೇ  ಎಂದು ಪರಿಶೀಲಿಸಲಾಯಿತು ಮತ್ತು ಫೋನ್‌ ಕರೆ ಸ್ವೀಕರಿಸಿದವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರಿಂದ ಆ ನಂಬರ್‌ ಅನ್ನು ಹಾಕಿ ಪೋಸ್ಟರ್‌ ಮಾಡಿ ಸಾಮಾನ್ಯ ಜನರು ಮತ್ತು ಸ್ವಯಂಸೇವಕರಲ್ಲಿ ಮನವಿ ಮಾಡಿಕೊಳ್ಳಲಾಯಿತು.

ಜೊತೆಗೆ ಉತ್ತರಹಳ್ಳಿಯ ಅಂಬೇಡ್ಕರ್‌ ನಗರದಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಅಗತ್ಯವಿದ್ದ ನೆರವಿಗಾಗಿ ಪ್ರಯತ್ನ ಮಾಡುತ್ತಿದ್ದ ಸ್ಥಳೀಯರಿಗೂ ಈ ಹೆಲ್ಪ್‌ಲೈನ್‌ ನಂಬರ್‌ ನೀಡಿ ಸಂಪರ್ಕಿಸಲು ಹೇಳಲಾಯಿತು. ಅವರ ಅನುಭವವು ನಮ್ಮಲ್ಲಿ ನಿರಾಶೆಯನ್ನು ಮೂಡಿಸಿತು.

ಉತ್ತರಹಳ್ಳಿಯ ಆಸುಪಾಸಿನಲ್ಲೇ ವಾಸಿಸುವ ಬರಹಗಾರ, ಸಾಮಾಜಿಕ ಚಿಂತಕ ಶ್ರೀಪಾದ್‌ ಅವರ ಅನುಭವವು ಕೆಳಕಂಡಂತಿದೆ.

ದಿನಾಂಕ : 29.3.2020 ರಂದು 155214 ಸಹಾಯವಾಣಿಗೆ ಕರೆ ಮಾಡಿ ಉತ್ತರಹಳ್ಳಿಯ ಅಂಬೇಡ್ಕರ್ ನಗರದ ಸಾವಿತ್ರಿ ಬಾ ಫುಲೆ ಕಾಲನಿ ಸ್ಲಂಗಳಲ್ಲಿ ವಾಸಿಸುತ್ತಿರುವ ಕುಟುಂಬಗಳು ಅನಾಥರಾಗಿವೆ ಮತ್ತು ಅವರಿಗೆ ತುರ್ತಾಗಿ ಆಹಾರದ ಪೂರೈಕೆ ಮಾಡಬೇಕು ಎಂದು ಮನವಿ ಸಲ್ಲಿಸಿಲಾಯಿತು. ಆ ಸಹಾಯವಾಣಿಯವರೂ ನಮ್ಮ ಕೋರಿಕೆಗೆ ಪ್ರತಿಕ್ರಿಯಿಸಿ ಸಂಜೆಯ ಒಳಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದರು. ಆದರೆ ರಾತ್ರಿಯವರೆಗೂ ಯಾವುದೇ ಸಹಾಯ ದೊರಕಲಿಲ್ಲ.

ನಂತರ ಪರಿಚಯದ ಸರಕಾರಿ ಅಧಿಕಾರಿಯೊಬ್ಬರಿಗೆ ಈ ಕುರಿತು ಗಮನ ಸೆಳೆಯಲಾಯಿತು. ಅವರೂ ಸಹ ಭರವಸೆ ನೀಡಿದರು.

ಇದನ್ನೂ ಓದಿ: ಊರಿಗೆ ಬಂದ ವಲಸೆ ಕಾರ್ಮಿಕರಿಗೆ ಅಲ್ಲೂ ಅವಮಾನ

ದಿನಾಂಕ 30.3.2020ರಂದು ಮರಳಿ ವಿಚಾರಿಸಲಾಗಿ ಇಲ್ಲಿಯವರೆಗೂ (ಸಂಜೆ 6.30) ಯಾವುದೇ ಬಗೆಯ ಪರಿಹಾರ ದೊರಕಿಲ್ಲ. ಅಲ್ಲಿನ ಕುಟುಂಬಗಳು ಆಹಾರ ಪೂರೈಕೆ ಇಲ್ಲದೆ ಕಂಗಾಲಾಗಿದ್ದಾರೆ. ದಾನಿಗಳ ಮೂಲಕ ತಾತ್ಕಾಲಿಕವಾಗಿ ಸಣ್ಣ ಪ್ರಮಾಣದ ದಿನಸಿ ವಸ್ತುಗಳನ್ನು ಕೊಡಲಾಗಿದೆ. ಆದರೆ ಅದು ಸಾಕಾಗುವುದಿಲ್ಲ.

155214 ಸಹಾಯವಾಣಿ ಹೊಣೆ ಹೊತ್ತ ಬಿಬಿಎಂಪಿ ತುರ್ತು ಪರಿಸ್ಥಿತಿಯಂತಹ ಈ ದಿನಗಳಲ್ಲಿ ಕ್ಷಿಪ್ರವಾಗಿ ಕಾರ್ಯನಿರ್ವಹಿಸಬೇಕು. ಆದರೆ ಆ ರೀತಿ ಮಾಡುತ್ತಿಲ್ಲ. ಇವರನ್ನು ಫಾಲೋ ಅಪ್ ಅಪ್ ಮಾಡುವುದೆ ಒಂದು ಕೆಲಸವಾದರೆ ಅದು ಕಷ್ಟದ ಕೆಲಸ.

ಸಾರ್ವಜನಿಕವಾಗಿ ಹೊಣೆಗಾರಿಕೆಯನ್ನು ನಿಭಾಯಿಸಲು ಕರಾರುವಕ್ಕಾದ ಕಾರ್ಯಯೋಜನೆ ಮತ್ತು ಪ್ರತಿಕ್ರಿಯೆ ತುಂಬಾ ಅವಶ್ಯಕ. ಆದರೆ ಈ ಉತ್ತರ ಹಳ್ಳಿ ಸ್ಲಂ ಗಳ ವಿಷಯದಲ್ಲಿ ಮೇಲೆ ತಿಳಿಸಿದ ಸಹಾಯವಾಣಿಯಿಂದ ತುರ್ತು ಸಹಾಯ ದೊರಕಿಲ್ಲ.

ಇದನ್ನೂ ಓದಿ: ಕೊರೊನಾ ವೈರಸ್‌ ವಿರುದ್ಧ ಭಾರತ ಮೊದಲೇ ಸಜ್ಜಾಗಿತ್ತು: ಕೇಂದ್ರ ಸರ್ಕಾರ

ಇನ್ನೊಂದು ಉದಾಹರಣೆ ಈ ರೀತಿ ಇದೆ. ಕೆ.ಆರ್‌.ಪುರದಾಚೆಗಿನ ನಲ್ಲಿ ಸುಮಾರು 150ರಿಂದ 200 ಜನ ವಲಸೆ ಕಾರ್ಮಿಕರಿದ್ದು ನಾಳೆ ಅವರಲ್ಲಿರುವ ಆಹಾರ ಪದಾರ್ಥಗಳು ಕೊನೆಯಾಗಲಿದ್ದು ಮುಂದೇನು ಎಂದು ಚಿಂತಾಕ್ರಾಂತರಾಗಿದ್ದರು. ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರ ಮೂಲಕ ಅವರು ನಾನುಗೌರಿ.ಕಾಂಅನ್ನು ಸಂಪರ್ಕಿಸಿದರು. ಅವರಿಗೆ ಸದರಿ ಹೆಲ್ಪ್‌ಲೈನ್‌ ನಂಬರ್‌ಅನ್ನು ಸಂಪರ್ಕಿಸಲು ತಿಳಿಸಲಾಯಿತು. ಸುಮಾರು 20 ಸಾರಿ ಕರೆ ಮಾಡಿದರೂ ಆ ನಂಬರ್‌ಅನ್ನು ಯಾರೂ ಸ್ವೀಕರಿಸಲಿಲ್ಲವೆಂದು ಆ ವಲಸೆ ಕಾರ್ಮಿಕರಲ್ಲೊಬ್ಬರಾದ ಕಿಶನ್‌ (ಹೆಸರು ಬದಲಿಸಲಾಗಿದೆ) ತಿಳಿಸಿದರು.

ನಾನುಗೌರಿ.ಕಾಂ ಕಳಿಸಿದ ಪೋಸ್ಟರ್‌ಅನ್ನು ಷೇರ್‌ ಮಾಡಿದ ವಿಜಯ್‌ಕುಮಾರ್‌ ಸೀತಪ್ಪ ಅವರ ಸ್ನೇಹಿತರೊಬ್ಬರು ಸದರಿ ನಂಬರ್‌ಗೆ ಕರೆ ಮಾಡಿದರೆ ಅವರಿಂದ ನಕಾರಾತ್ಮಕ ಪ್ರತಿಕ್ರಿಯೆ ಬಂತೆಂದು ತಿಳಿಸಿದ್ದಾರೆ.

ಹೀಗಾದಲ್ಲಿ ವಲಸೆ ಕಾರ್ಮಿಕರ ಗತಿಯೇನು? ನೂರಾರು ಕಿ.ಮೀ ನಡೆದಾದರೂ ಸರಿ, ನಮ್ಮೂರಿನಲ್ಲಿ ಇದ್ದರೆ ಕ್ಷೇಮ ಎಂದು ಅವರು ಹೊರಡುವುದು ಸಹಜ ತಾನೇ? ಈ ಪ್ರಶ್ನೆಗಳಿಗೆ ಸಂಬಂಧಿಸಿದವರು ಉತ್ತರ ನೀಡಬೇಕು. ಅಧಿಕಾರಿಗಳು ನೆರವು ನೀಡುವುದಾದಲ್ಲಿ ಮೇಲಿನ ಎಲ್ಲಾ ವಿವರಗಳನ್ನೂ (ಹೆಸರುಗಳು, ಫೋನ್‌ ನಂಬರ್‌ ಸಮೇತ) ನೀಡುತ್ತೇವೆ ಮತ್ತು ಸರ್ಕಾರದ ಸಕಾರಾತ್ಮಕ ಕೆಲಸವನ್ನು ಮತ್ತಷ್ಟು ಜನರಿಗೆ ತಿಳಿಸುವ ಕೆಲಸವನ್ನು ಮಾಡುತ್ತೇವೆ.

ಸಂಬಂಧಿಸಿದ ಅಧಿಕಾರಿಯನ್ನು ಉತ್ತರಹಳ್ಳಿಯಲ್ಲಿ ಸಂಪರ್ಕ ಮಾಡಿದರೂ ಪರಿಹಾರ ಸಿಗದೇ ಇದ್ದುದರಿಂದ ಇದನ್ನು ವರದಿ ಮಾಡುವ ಅಗತ್ಯವಿದೆಯೆಂದು ಭಾವಿಸಿ ಈ ವರದಿ ಬರೆಯಲಾಗಿದೆ.

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ನೆರವು ನೀಡುವ ಉದ್ದೇಶದಿಂದ ಈ ವರದಿಯನ್ನು ಷೇರ್‌ ಮಾಡಬೇಕೆಂದು ಕೋರುತ್ತೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....