Homeಅಂತರಾಷ್ಟ್ರೀಯಇರಾನ್‌ನ ದಾಳಿಗೂ ಮೊದಲು ದೇಶ ತೊರೆದ ಇಸ್ರೇಲ್ ಪ್ರಧಾನಿಯ ಅಧಿಕೃತ ವಿಮಾನ!

ಇರಾನ್‌ನ ದಾಳಿಗೂ ಮೊದಲು ದೇಶ ತೊರೆದ ಇಸ್ರೇಲ್ ಪ್ರಧಾನಿಯ ಅಧಿಕೃತ ವಿಮಾನ!

- Advertisement -
- Advertisement -

ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ ನಂತರ ‘ವಿಂಗ್ ಆಫ್ ಝಿಯಾನ್’ ಎಂದು ಕರೆಯಲ್ಪಡುವ ಪ್ರಧಾನಿ ನೆತನ್ಯಾಹು ಅವರ ಸರ್ಕಾರಿ ವಿಮಾನವು ಶುಕ್ರವಾರ ಮಧ್ಯಾಹ್ನ ಅಥೆನ್ಸ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದೆ ಎಂದು ಟಿಆರ್‌ಟಿ ವಲ್ಡ್‌ ವರದಿ ಮಾಡಿದೆ. ಇಸ್ರೇಲ್ ಮೇಲೆ ಇರಾನ್‌ ಪ್ರತಿಕಾರದ ದಾಳಿ ನಡೆಸಲಿದೆ ಎಂಬ ಸುದ್ದಿಗಳ ನಡುವೆ ‘ವಿಂಗ್ ಆಫ್ ಝಿಯಾನ್’ ದೇಶದಿಂದ ಹೊರಗೆ ಹೋಗಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ದೇಶ ತೊರೆದಿದ್ದಾರೆ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ. ಇರಾನ್‌ನ ದಾಳಿಗೂ ಮೊದಲು

ಅಂತಾರಾಷ್ಟ್ರೀಯ ಭೇಟಿಗಳ ಸಮಯದಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರ ಸರ್ಕಾರಿ ವಿಮಾನವಾಗಿ ಸೇವೆ ಸಲ್ಲಿಸುವ ಈ ವಿಮಾನವು “ಇರಾನಿನ ಪ್ರತೀಕಾರದ ದಾಳಿಯ ಭಯದ ನಡುವೆ” ಶುಕ್ರವಾರ ಬೆಳಿಗ್ಗೆ ಅಥೆನ್ಸ್‌ಗೆ ಹೊರಟಿದೆ ಎಂದು ದಿ ಜೆರುಸಲೆಂ ಪೋಸ್ಟ್ ವರದಿ ಹೇಳಿದೆ. ಏಪ್ರಿಲ್ 2024 ರಲ್ಲಿ ಇಸ್ರೇಲ್ ಮೇಲೆ ಇರಾನ್ ನಡೆಸಿದ ದಾಳಿಯ ಸಮಯದಲ್ಲಿ, ಈ ವಿಮಾನವನ್ನು ಉತ್ತರ ನೆಗೆವ್‌ನಲ್ಲಿರುವ ನೆವಾಟಿಮ್ ವಾಯುನೆಲೆಯಿಂದ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.

ವಿಂಗ್ ಆಫ್ ಝಿಯಾನ್ ಗ್ರೀಸ್‌ಗೆ ತೆರಳಿದ ಸ್ವಲ್ಪ ಸಮಯದ ನಂತರ, ಇಸ್ರೇಲ್ ಸೇನಾ ವಕ್ತಾರ ಬ್ರಿಗೇಡಿಯರ್-ಜನರಲ್ ಎಫೀ ಡೆಫ್ರಿನ್ ಶುಕ್ರವಾರ ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇರಾನ್ ಇಸ್ರೇಲ್ ಕಡೆಗೆ 100ಕ್ಕೂ ಹೆಚ್ಚು ಡ್ರೋನ್‌ಗಳನ್ನು ಹಾರಿಸಿದೆ ಎಂದು ಹೇಳಿದ್ದರು.

ಅದಾಗ್ಯೂ, ವಿಂಗ್ ಆಫ್ ಜಿಯಾನ್ ವಿಮಾನದಲ್ಲಿ ಶುಕ್ರವಾರ ಗ್ರೀಸ್‌ನ ಇಸ್ರೇಲಿ ರಾಯಭಾರಿ ನೋಮ್ ಕಾಟ್ಜ್ ಅವರನ್ನು ಕರೆದೊಯ್ಯಲಾಗಿದ್ದು, ನಂತರ ಅಥೆನ್ಸ್‌ನಲ್ಲಿರುವ ವಿಮಾನ ಮಾಹಿತಿ ಪ್ರದೇಶದಲ್ಲಿ (ಎಫ್‌ಐಆರ್) ಇರಿಸಲಾಗಿದೆ ಎಂದು ಸುದ್ದಿ ಏಜನ್ಸಿ ಅನಡೋಲು ಹೇಳಿದೆ. ಈ ರಾಯಭಾರಿ ವಿಮಾನದಲ್ಲಿದ್ದ ಏಕೈಕ ಪ್ರಯಾಣಿಕ ಎಂದು ವರದಿ ಹೇಳಿದೆ.

ಇರಾನ್ ಮೇಲೆ ನಡೆಸಿದ ಬೃಹತ್ ದಾಳಿಯ ನಂತರ ಇಸ್ರೇಲ್ ತನ್ನ ವಿಮಾನ ನಿಲ್ದಾಣಕ್ಕೆ ಮತ್ತು ಅಲ್ಲಿಂದ ವಾಣಿಜ್ಯ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿತ್ತು. ಇದರ ನಂತರ ಝಿಯಾನ್ ವಿಮಾನವು ನೋಮ್ ಕಾಟ್ಜ್ ಅವರನ್ನು ಅಥೆನ್ಸ್‌ಗೆ ಕರೆತಂದಿತು ಎಂದು ವಿದೇಶಾಂಗ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ಸಿಎನ್‌ಎನ್ ಗ್ರೀಸ್ ವರದಿ ಮಾಡಿದೆ.

ಗ್ರೀಸ್-ಇಸ್ರೇಲ್ ಮಿಲಿಟರಿ ಸಹಕಾರ ಒಪ್ಪಂದದ ಪ್ರಕಾರ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಎರಡೂ ದೇಶಗಳ ವಿಮಾನಗಳನ್ನು ಆಯಾ ಮಿಲಿಟರಿ ವಿಮಾನ ನಿಲ್ದಾಣಗಳಲ್ಲಿ ಅಗತ್ಯವಿರುವಷ್ಟು ಕಾಲ ಸ್ಥಳಾಂತರಿಸಲು ಮತ್ತು ಉಳಿಯಲು ಅನುಮತಿಸುತ್ತದೆ ಎಂದು ವರದಿ ಹೇಳಿದೆ.

ಅದಾಗ್ಯೂ, ಇರಾನಿನ ಪ್ರದೇಶದೊಳಗೆ ಇಸ್ರೇಲ್ ಮಿಲಿಟರಿ ದಾಳಿಗಳನ್ನು ಪ್ರಾರಂಭಿಸಿದ ಕೆಲವೇ ಗಂಟೆಗಳ ನಂತರ ‘ವಿಂಗ್ ಆಫ್ ಝಿಯಾನ್’ ಬಗ್ಗೆ ಊಹಾಪೋಹಗಳು ಹರಡಿದವು. ಎಕ್ಸ್‌ನಲ್ಲಿರುವ ಬಳಕೆದಾರರು ವಿಮಾನಯಾನ ಮೇಲ್ವಿಚಾರಣಾ ಸೇವೆ FlightRadar24 ನಿಂದ ಸಾರ್ವಜನಿಕವಾಗಿ ಲಭ್ಯವಿರುವ ಡೇಟಾವನ್ನು ಬಳಸಿಕೊಂಡು ಗ್ರೀಸ್‌ನಲ್ಲಿ ವಿಮಾನದ ಮಾರ್ಗ, ಸಮಯ ಮತ್ತು ಅಂತಿಮವಾಗಿ ಇಳಿದ ಮಾರ್ಗಗಳನ್ನು ಟ್ರ್ಯಾಕ್ ಮಾಡಿದ್ದಾರೆ.

ಆದಾಗ್ಯೂ, ಈ ವಿಮಾನದಲ್ಲಿ ನೆತನ್ಯಾಹು ಅಥವಾ ಅವರ ಕುಟುಂಬದ ಯಾರಾದರೂ ಇದ್ದರೊ, ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ ಎಂದು ಟಿಆರ್‌ಟಿ ವರದಿ ಹೇಳಿದೆ. ಭದ್ರತಾ ಪ್ರೋಟೋಕಾಲ್‌ಗಳು ಮತ್ತು ಸಂಭಾವ್ಯ ರಾಜತಾಂತ್ರಿಕ ಅಥವಾ ಮಿಲಿಟರಿ ಯೋಜನೆ ಸೇರಿದಂತೆ ಕ್ರಮದ ಹಿಂದಿನ ಹಲವಾರು ಸಂಭಾವ್ಯ ಕಾರ್ಯತಂತ್ರದ ಉದ್ದೇಶಗಳು ಇದರಲ್ಲಿ ಇರಬಹುದು ಎಂದು ಕೂಡಾ ವಿಶ್ಲೇಷಿಸಲಾಗುತ್ತಿದೆ.

ಜೊತೆಗೆ ಪೂರ್ವಭಾವಿ ಸುರಕ್ಷತಾ ಕ್ರಮವಾಗಿ ಹೀಗೆ ಮಾಡಲಾಗಿದೆ ಎಂದೂ ಕೂಡಾ ಹೇಳಲಾಗುತ್ತಿದ್ದು, ಇರಾನಿನ ಪ್ರತೀಕಾರದ ಅಪಾಯ ಹೆಚ್ಚಾದ ಕಾರಣ, ಇಸ್ರೇಲಿ ಅಧಿಕಾರಿಗಳು ಹಿರಿಯ ನಾಯಕತ್ವವನ್ನು ರಕ್ಷಿಸಲು ಈ ಭದ್ರತಾ ಪ್ರೋಟೋಕಾಲ್‌ಗಳನ್ನು ಜಾರಿಗೆ ತರುತ್ತಿರಬಹುದು ಎಂದೂ ಕೂಡಾ ಹೇಳಲಾಗಿದೆ.

ಅಥೆನ್ಸ್‌ನಲ್ಲಿ ನೆತನ್ಯಾಹು ಅವರ ವಿಮಾನವನ್ನು ಇರಿಸುವುದು ಇಸ್ರೇಲ್‌ನ ವಾಯು ಕೇಂದ್ರಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗುವ ಸಂಭಾವ್ಯ ಕ್ಷಿಪಣಿ ಅಥವಾ ಡ್ರೋನ್ ದಾಳಿ ವಲಯಗಳಿಂದ ಅದನ್ನು ತೆಗೆದುಹಾಕುವ ಲೆಕ್ಕಾಚಾರದ ಭಾಗವಾಗಿ ಇದನ್ನು ಮಾಡಿರಬಹುದು ಎಂದೂ ಕೂಡಾ ಹೇಳಲಾಗುತ್ತಿದೆ.

ಜೊತೆಗೆ, ಮುನ್ನೆಚ್ಚರಿಕೆ ಕ್ರಮವಾಗಿ ನೆತನ್ಯಾಹು ಅವರ ಕುಟುಂಬದ ಸದಸ್ಯರೊಂದಿಗೆ ಅಥೆನ್ಸ್‌ಗೆ ಪ್ರಯಾಣಿಸಿರಬಹುದು ಎಂಬ ಊಹಾಪೋಹವೂ ಇದೆ. ಪ್ರತೀಕಾರದ ಬೆದರಿಕೆ ಇರುವ ಸಂದರ್ಭಗಳಲ್ಲಿ, ರಾಷ್ಟ್ರೀಯ ನಾಯಕರು ಪ್ರಮುಖ ವ್ಯಕ್ತಿಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸುವುದು ಇದು ಮೊದಲೇನಲ್ಲ, ವಿಶೇಷವಾಗಿ ಗುಪ್ತಚರವು ಅಪಾಯವನ್ನು ಗುರುತಿಸಿದ್ದರೆ ಇದನ್ನು ಮಾಡಲಾಗುತ್ತದೆ ಎಂದು ಟಿಅರ್‌ಟಿ ವಲ್ಡ್‌ ಹೇಳಿದೆ.

ಇಸ್ರೇಲಿ ಅಧಿಕಾರಿಗಳು ವಿಮಾನದಲ್ಲಿ ಪ್ರಧಾನಿ ಮತ್ತು ಅವರ ಆಂತರಿಕ ವಲಯದ ಅವರ ಇರುವಿಕೆಯನ್ನು ದೃಢೀಕರಿಸದಿದ್ದರೂ, ಹಾರಾಟದ ಸಮಯ ಮತ್ತು ಈಗ ವಿಮಾನ ಇರುವ ಸ್ಥಳವು ಪ್ರಧಾನ ಮಂತ್ರಿ ಮತ್ತು ಅವರ ಆಂತರಿಕ ವಲಯವನ್ನು ರಕ್ಷಿಸುವ ಭದ್ರತಾ ಕಾರ್ಯತಂತ್ರದ ಭಾಗವಾಗಿ ಇದನ್ನು ಮಾಡಲಾಗಿದೆ ಎಂಬ ಊಹಾಪೋಹಗಳು ಹರಡಿವೆ.

ಇಸ್ರೇಲ್ ಮೇಲೆ ಇರಾನ್‌ನ ಪ್ರತಿದಾಳಿ ನಡೆಯಲಿದೆ ಎಂದು ಖಚಿತವಾದ್ದರಿಂದ ಪ್ರಧಾನಿ ನೆತನ್ಯಾಹು ಮತ್ತು ಅಮೇರಿಕನ್ ಮಿಲಿಟರಿ ಅಥವಾ ಗುಪ್ತಚರ ಅಧಿಕಾರಿಗಳ ನಡುವೆ ಉನ್ನತ ಮಟ್ಟದ, ವೈಯಕ್ತಿಕ ಸಮನ್ವಯಕ್ಕಾಗಿ ಅಥೆನ್ಸ್ ಅನ್ನು ತಟಸ್ಥ ಮತ್ತು ಸುರಕ್ಷಿತ ಸ್ಥಳವಾಗಿ ಆಯ್ಕೆ ಮಾಡಿರಬಹುದು ಎಂಬ ಊಹಾಪೋಹಗಳೂ ಹರಡಿವೆ. ಪ್ರಧಾನಿ ನೆತನ್ಯಾಹು ಅವರ ಸ್ಥಳ ಅಥವಾ ಹಾರಾಟದ ಉದ್ದೇಶವನ್ನು ದೃಢೀಕರಿಸುವ ಯಾವುದೇ ಅಧಿಕೃತ ಹೇಳಿಕೆಯಿಲ್ಲದೆ, ಅಥೆನ್ಸ್‌ನಲ್ಲಿ ಪ್ರಧಾನಿಯ ವಿಮಾನ ನಿಲುಗಡೆಯಾಗಿದ್ದರ ಹಿಂದಿನ ನಿಜವಾದ ಉದ್ದೇಶದ ಬಗ್ಗೆ ಪ್ರಶ್ನೆಗಳು ಮುಂದುವರೆದಿವೆ. ಇರಾನ್‌ನ ದಾಳಿಗೂ ಮೊದಲು

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ಗಾಝಾ ಸಂಘರ್ಷದಲ್ಲಿ ಭಾರತ ಒಂಟಿಯಾಗಿ ನಿಂತಿದೆ: ಮಲ್ಲಿಕಾರ್ಜುನ ಖರ್ಗೆ

ಗಾಝಾ ಸಂಘರ್ಷದಲ್ಲಿ ಭಾರತ ಒಂಟಿಯಾಗಿ ನಿಂತಿದೆ: ಮಲ್ಲಿಕಾರ್ಜುನ ಖರ್ಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...